Tuesday, April 12, 2011

ಭ್ರಷ್ಟಚಾರದ ವಿರುದ್ಧ ಪ್ರಕಾಶಣ್ಣನ ಪಂಚ್


ಜನಲೋಕಪಾಲ್ ವಿಧೇಯಕ್ಕಾಗಿ ಸಿರೀಯಸ್ ಆಗಿ ದುಡಿಯುತ್ತಿರುವ ‘ಅಣ್ಣಾ ಹಜಾರೆ ’ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಹಳ ಗೊಂದಲ ಮೂಡಿಸಿದ್ದು ಮಾತ್ರ ನಿಜ. ‘ಗಾಂಜಿ ಬದುಕಿದ್ದಾರೆ ಅವರು ಕೂಡ ಭ್ರಷ್ಟಚಾರಕ್ಕೆ ಗುರಿಯಾಗುತ್ತಿದ್ದರು’ ಎನ್ನುವ ಹೇಳಿಕೆ ನೀಡಿದ ಕುಮಾರಸ್ವಾಮಿ ಅಣ್ಣಾ ಹಜಾರೆಗೆ ಗೇಲಿ ಮಾಡಿದ್ದಾರೆ ಎಂದು ಸಿರೀಯಸ್ ಆಗಿ ಯೋಚಿಸಿದ ಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ಕಾರ್ಟೂನ್‌ವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಕುಮಾರಣ್ಣ ಹೇಳಿಕೆ ತೀವ್ರತೆ ಹಾಗೂ ಅಣ್ಣಾ ಹಜಾರೆ ಅವರ ವ್ಯಕ್ತಿತ್ವ ಎರಡು ಈ ವ್ಯಂಗ್ಯಚಿತ್ರದಲ್ಲಿ ಮೂಡಿ ಬಂದಿದೆ. ಕಾರ್ಟೂನ್ ನೋಡಿ ನಗುವ ಬದಲು ಒಂದ್ ಸಾರಿ ಭ್ರಷ್ಟಚಾರದ ವಿರುದ್ಧ ಕೈ ಎತ್ತಿ ಎಂದು ಪ್ರಕಾಶಣ್ಣ ತಮ್ಮ ಕಾರ್ಟೂನ್ ಮೂಲಕ ಜಾಗೃತಿ ಮಾಡುತ್ತಿದ್ದಾರೆ.

ಸ್ಟೀವನ್ ರೇಗೊ, ದಾರಂದಕುಕ್ಕು

No comments:

Post a Comment