Tuesday, April 5, 2011

ವರ್ಲ್ಡ್ ಫೇಮಸ್ ಕಪ್‌ನಲ್ಲಿ ಕಲ್ಲಡ್ಕ ಟೀ



ಕಲ್ಲಡ್ಕದ ಸಣ್ಣ ಊರಿನ ಸಣ್ಣ ಹೋಟೆಲ್‌ನಲ್ಲಿ ತಯಾರಾಗುವ ಕೆ.ಟಿ ಈಗ ವಿಶ್ವದ ಮೂಲೆ ಮೂಲೆಯಲ್ಲೂ ಫೇಮಸ್. ಯಾಕೆ ಅಂತೀರಾ ಪುಟ್ಟ ಊರಿನ ಈ ಕೆ.ಟಿ. ಗೂಗಲ್ ಸರ್ಚ್‌ನಲ್ಲಿ ಅತೀ ಹೆಚ್ಚು ಜನರು ವೀಕ್ಷಿಸುತ್ತಿದ್ದಾರೆ. ಏನಪ್ಪಾ ಅಂತ ಕೆ.ಟಿಯ ಸ್ಟೈಲ್.

‘ವ್ಹಾವ್ ಕ್ಯಾ ಭಾತ್ ಹೈ...ಕೆ.ಟೀ.ಕಾ ಸ್ಟೈಲ್ ಯೀ ಬಹುತೀ ಅಲಗ್ ಹೈ’ ಎಂದು ಬಾಯಿ ಚಪ್ಪರಿಸಿಕೊಂಡು ಎನ್‌ಡಿಟಿವಿ ಗುಡ್ ಟೈಮ್ಸ್‌ನ“ಹೈವೇ ಆನ್ ಮೈ ಪ್ಲೇಟ್’ಕಾರ್‍ಯಕ್ರಮ ನಿರೂಪಕರಾದ ರಾಕಿ ಸಿಂಗ್ ಆಂಡ್ ಮಯೂರ್ ಶರ್ಮ ಹೇಳುತ್ತಿದ್ದಾಗ ನಿಜಕ್ಕೂ ಅವರು ಹೇಳಿದ್ದು ನೂರಕ್ಕೆ ನೂರರಷ್ಟು ಮಾತು ನಿಜ ಅನ್ನಿಸಿಬಿಡ್ತು. ಅರ್ಧ ಟೀ ಅರ್ಧ ಹಾಲು ಇದು ಕೆ.ಟೀ. ಸ್ಪೆಶಲ್ಲೂ... ಕೆ.ಟೀ.ಯ ಕುರಿತು ಬರೀ ಕರಾವಳಿ ಯಾಕೆ ಇಡೀ ದೇಶವೇ ಮಾತನಾಡುತ್ತದೆ. ವಿಶ್ವದ ಮಾಹಿತಿಯ ಕಣಜ ಎಂದೇ ಬಿಂಬಿತ ಗೂಗಲ್ ಸರ್ಚ್‌ನಲ್ಲಿ ಕೆ.ಟೀ.ಯ ಕುರಿತು ಹುಡುಕಾಡಿ ನೋಡಿ. ಕೆ.ಟೀಯ ಮೇಲಿನ ಹತ್ತಾರು ಪುಟಗಳು ಏಕ್‌ದಂ ತೆರೆದು ಕೂರುತ್ತೆ. ಬ್ಲಾಗ್‌ಗಳ ಮೇಲೆ ಹತ್ತಾರು ಬರಹಗಳು ಓಡಾಡುತ್ತಿರುತ್ತದೆ. ಅದೇ ಕೆ.ಟೀಗೆ ಇರುವ ಗತ್ತು, ಗಮ್ಮತ್ತು ..!!
ಅಂದಹಾಗೆ ಕೆ.ಟೀ ಬಗ್ಗೆ ಇನ್ನೂ ಕಪ್‌ಗೆ ಇಳಿದು ಮಾತನಾಡೋಣ. ಮಂಗಳೂರು ಟು ಮಾಣಿಯ ರಸ್ತೆಯಲ್ಲಿ ಟ್ರಾವೆಲ್ ಮಾಡುತ್ತಿರುವಾಗ ಕಲ್ಲಡ್ಕ ಎಂಬ ಪುಟ್ಟ ಊರೊಂದು ಥಟ್ ಅಂತಾ ಕಾಣಿಸಿಕೊಳ್ಳುತ್ತದೆ. ಇದೇ ಊರಿನಲ್ಲಿ ಶ್ರೀ ಲಕ್ಷ್ಮಿ ನಿವಾಸ್ ಹೋಟೆಲ್ ನಾಮ ಫಲಕ ಎದುರುಗೊಳ್ಳುತ್ತದೆ. ೬೦ರ ದಶಕದಲ್ಲಿ ಲಕ್ಷ್ಮಿ ನಾರಾಯಣ ಹೊಳ್ಳ ಹಾಗೂ ಅವರ ಪುತ್ರ ನರಸಿಂಹ ಹೊಳ್ಳ ಈ ಕೆ.ಟೀಯ ಜನ್ಮದಾತರು. ಅಂದಿನಿಂದ ಈ ಕೆ.ಟೀಗೆ ಅದೇ ಟೇಸ್ಟ್... ಅದೇ ಸ್ಟೈಲ್,ಲುಕ್ ಇದೆ ಎಂದರೆ ಎಲ್ಲರೂ ನಂಬಬೇಕು. ಹೊಳ್ಳರ ಇಡೀ ಕುಟುಂಬ ಈ ಕೆ.ಟೀಯಲ್ಲಿ ಮುಳುಗಿ ಎದ್ದೇಳುತ್ತಿದೆ. ನರಸಿಂಹ ಹೊಳ್ಳರ ಹಿರಿಯ ಪುತ್ರ ರಾಜೇಂದ್ರ ಹೊಳ್ಳ, ಶಿವರಾಮ ಹೊಳ್ಳ, ಶ್ರೀನಿವಾಸ ಹೊಳ್ಳ ಎಲ್ಲರೂ ಇದೇ ಕೆ.ಟೀಯ ಕಿಚನ್‌ನಲ್ಲಿದ್ದಾರೆ.
ಹೆಸರು ಹೇಗೆ ಬಂತು:
ಕಲ್ಲಡ್ಕದಲ್ಲಿ ತಯಾರಾಗುವ ಟೀಯನ್ನು ಕೆ.ಟೀ ಅಂತ ಕರೆಯುವುದು ಟು ಕಾಮನ್ ಬಿಡಿ. ಆದರೆ ಈ ಹೆಸರಿನ ಹಿಂದೆ ಬಹಳ ದೊಡ್ಡ ರಹಸ್ಯ ಇದೆ. ಲಕ್ಷ್ಮಿನಾರಾಯಣ ಹೊಳ್ಳರು ೬೦ರ ದಶಕದಲ್ಲಿ ಶ್ರೀ ಲಕ್ಷ್ಮಿ ನಿವಾಸ್ ಹೋಟೆಲ್ ತೆರೆದಾಗ ಅಲ್ಲಿ ಕೆ.ಟೀ ಇರಲಿಲ್ಲ. ಆದರೆ ಇದೇ ಸಮಯದಲ್ಲಿ ಕೊಡಗಿನಿಂದ ಬರುತ್ತಿದ್ದ ಕೆಳಗೂರು ಟೀಯನ್ನು ಬಳಸುತ್ತಿದ್ದಾಗ ಅಲ್ಲಿಗೆ ಬಂದ ಹಿರಿಯ ಗ್ರಾಹಕರೊಬ್ಬರು ‘ಕಲ್ಲಡ್ಕ ಸ್ಪೆಶಲ್ ಟೀ’ ಅಂತಾ ಹೆಸರು ಕೊಟ್ಟರಂತೆ. ಅದೇ ಮುಂದೆ ಕೆ.ಟೀ ಅಂತಾ ಬದಲಾವಣೆಗೊಂಡಿತು. ಕೆಳಗೂರು ಟೀಗೂ ಕೆ.ಟಿಗೂ ಬಹಳ ಹತ್ತಿರದ ನಂಟಿತ್ತು.
ಆದರೆ ಮಂಗಳೂರಿನ ಟೀ ಏಜೆಂಟ್‌ರೊಬ್ಬರು ಕೆಳಗೂರು ಟೀಯ ಏಜೆಂಟ್‌ಶಿಫ್‌ನ್ನು ಬಿಟ್ಟು ಹೋದ ನಂತರ ಅಲ್ಲಿಗೆ ದೇವಗಿರಿ ಟೀ ಬಂತು. ಆದರೂ ಕೆ.ಟೀಯಲ್ಲಿ ಯಾವುದೇ ಚೇಂಜ್ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಶ್ರೀಲಕ್ಷ್ಮಿ ನಿವಾಸ್‌ನ ಮಾಲೀಕ ಶಿವರಾಮ ಹೊಳ್ಳ. ಕೆ.ಟೀಯ ಜತೆಯಲ್ಲಿ ರಿಮ್‌ಜಿಮ್ ಕಾಫಿ ಕೂಡ ಅಷ್ಟೇ ಫೇಮಸ್. ಕಲ್ಲಡ್ಕದಲ್ಲಿ ಮಾಡುವ ಡಿಫರೆಂಟ್ ಕಾಫಿಯನ್ನು ಕುಡಿದ ನಂತರ ಗ್ರಾಹಕನೊಬ್ಬ ‘ಜುಮ್’ ಆಯಿತು ಎಂದನಂತೆ. ಅಲ್ಲಿಂದ ಕಲ್ಲಡ್ಕದ ಕಾಫಿ ‘ರಿಮ್‌ಜಿಮ್ ಕಾಫಿ’ ಆಯಿತು ಎನ್ನುತ್ತದೆ ಶ್ರೀಲಕ್ಷ್ಮಿ ನಿವಾಸ್‌ನ ಹಿಸ್ಟರಿ ಬುಕ್.
ಕೆ.ಟೀಯ ಹಿಂದಿನ ಕೈ:
ಕರಾವಳಿಯ ಕೆ.ಟೀಯ ಕುರಿತು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ಮಾತನಾಡುತ್ತಾರೆ ಬಿಡಿ. ‘ಅದರ ಟೇಸ್ಟ್‌ಯೇ ಬೇರೆ... ಅದನ್ನು ಕುಡಿಯುವ ಸ್ಟೈಲೇ ಬೇರೆ ಕಣ್ರಿ ’ಎಂದು ರೆಬೆಲ್‌ಸ್ಟಾರ್ ಅಂಬರೀಷ್ ಕಲ್ಲಡ್ಕಕ್ಕೆ ಬಂದಿದ್ದಾಗ ಕೆ.ಟೀ ಕುಡಿದು ಮಾತನಾಡಿದರಂತೆ. ಕನ್ನಡ ಚಿತ್ರರಂಗದ ನಟ ದರ್ಶನ್, ನಟಿ ರಾಕಾ ಎಲ್ಲರೂ ಕೆ.ಟೀಯ ಟೇಸ್ಟ್‌ನ್ನು ಚೆಕ್ ಮಾಡಿ ಹೊಗಳಿ ಹೋದವರು ಎನ್ನುತ್ತಾರೆ ಶಿವರಾಮ ಹೊಳ್ಳರು. ನಟಿ ರಾಕಾವಂತೂ ಕರಾವಳಿಗೆ ಭೇಟಿ ನೀಡಿದಾಗ ಇಲ್ಲಿಗೆ ಬಂದೇ ಹೋಗುತ್ತಾರೆ.ರಾಜಕಾರಣಿಗಳಾದ ಆಸ್ಕರ್ ಫೆರ್ನಾಂಡೀಸ್, ಡಾ.ವಿ.ಎಸ್. ಆಚಾರ್ಯ, ರಮಾನಾಥ ರೈ ಎಲ್ಲರೂ ಶ್ರೀ ಲಕ್ಷ್ಮಿ ನಿವಾಸ್‌ನ ಬೇಜುಗಳಲ್ಲಿ ಕೂತು ಕೆ..ಟೀ ವಿದ್ ಗೋಳಿಬಜ್ಜೆ ತಿಂದು ಹೋಗುತ್ತಾರೆಯಂತೆ.
ಕೆ.ಟೀಯ ಫೇಮಸ್‌ಗಿರಿಯನ್ನು ನೋಡಿ ಇದರ ನಕಲಿ ಟೀ, ಕಾಫಿ ಶಾಪ್‌ಗಳು ಕರಾವಳಿ ಹಾಗೂ ಇತರ ಭಾಗದಲ್ಲಿ ತಲೆ ಎತ್ತಿದೆ. ಆದರೆ ಇಲ್ಲಿನ ಒರಿಜಿನಾಲಿಟಿ ಮಾತ್ರ ಎಲ್ಲೂ ಸಿಗುವುದಿಲ್ಲ . ಇಲ್ಲಿನ ಭೌಗೋಳಿಕ ಲಕ್ಷಣ ಹಾಗೂ ದೇವಿಯ ಮಹಿಮೆ ಕೆ.ಟೀ.ಯ ಒರಿಜಿನಾಲಿಟಿ ಉಳಿದುಕೊಳ್ಳಲು ಕಾರಣ ಎನ್ನೋದು ಶಿವರಾಮ ಹೊಳ್ಳರು ನೀಡುವ ಸಾಬೂಬು. ಕಳೆದ ೨೦ ವರ್ಷಗಳಿಂದ ಶ್ರೀಲಕ್ಷ್ಮಿ ನಿವಾಸ್‌ನಲ್ಲಿ ದುಡಿಯುತ್ತಿರುವ ವಿಠಲ್ ಈಗ ಕೆ.ಟೀಯ ಕಿಚನ್ ಉಸ್ತುವಾರಿ ನೋಡುವವರು. ಇದಕ್ಕಿಂತ ಮೊದಲು ಲಕ್ಷ್ಮಿ ನಾರಾಯಣ ಹೊಳ್ಳರ ಕಾಲದಲ್ಲಿ ಸುಬ್ರಾಯ ಪ್ರಭುಗಳಿದ್ದರೂ ನಂತರ ನರಸಿಂಹ ಹೊಳ್ಳರ ಕಾಲದಲ್ಲಿ ರಾಮಚಂದ್ರ ಆಚಾರ್ ಇಲ್ಲಿ ಕೆ.ಟೀ ಮಾಡಿಕೊಡುತ್ತಿದ್ದರು. ಎಲ್ಲರೂ ಕಲ್ಲಡ್ಕದವರು ಹಾಗೂ ಸುದೀರ್ಘ ಕಾಲದವರೆಗೂ ಇಲ್ಲಿ ದುಡಿದವರು.
ತಯಾರು ಮಾಡೋದು ಹೇಗೆ:
ಕೆ.ಟೀ ಕುಡಿಯೋದು ಗೊತ್ತಾ ಆದರೆ ಮಾಡೋದು ಹೆಂಗೆ ಮಾರಾಯ್ರೆ ಅಂತಾ ಕೇಳಬಹುದು. ಅದಕ್ಕೆ ಬೇಕಾಗಿರುವ ಸಾಮಗ್ರಿಗಳು ಹೀಗಿವೆ. ದಪ್ಪ ಹಾಲು ಅದು ಊರಿನ ಹಾಲಿರಬಹುದು ಅಥವಾ ನಂದಿನಿಯ ಹಾಲು ಕೂಡ ಉತ್ತಮ. ಆದರೆ ಅದಕ್ಕೆ ಹಾಕುವ ನೀರಿನ ಪ್ರಮಾಣ ಕಡಿಮೆ ಇರಬೇಕು. ದಪ್ಪ ಡಿಕ್ಕಷನ್ ಹಾಗೂ ಸಕ್ಕರೆ ಇದ್ದಾರೆ ಸಾಕು ಬಿಡಿ. ಬುರುಬುರು ನೊರೆಯ ಅರ್ಧ ಹಾಲಿನ ಅರ್ಧ ಟೀಯ ಸಖತ್ ಕೆ.ಟೀ ರೆಡಿಯಾಗುತ್ತದೆ. ಬರೀ ಒಂದು ಲೋಟಕ್ಕೆ ೮ ರೂ. ಮಾತ್ರ. ಅದು ರಿಮ್‌ಜಿಮ್‌ಗೂ ಕೂಡಾ ಸೇಮ್ ರೇಟ್ ಬಿಡಿ. ಅಂದಹಾಗೆ ಕಲ್ಲಡ್ಕಕ್ಕೆ ಬಂದಾಗ ಕೆ.ಟೀ ಕುಡಿಯೋದನ್ನು ಮರೆಯಬೇಡಿ. ಶ್ರೀಲಕ್ಷ್ಮಿನಿವಾಸ್ ಬೆಳಗ್ಗೆ ೫.೩೦ರಿಂದ ೮ರವರೆಗೆ ನಿಮಗಾಗಿ ಬಾಗಿಲು ತೆರೆದು ಕೂತಿರುತ್ತದೆ. ಕಾಲ್ ಮಾಡಿ: ೦೮೨೫೫-೨೭೫೩೫೯

5 comments:

  1. ಬರಹ ಮತ್ತು ಬರೆದ ಶೈಲಿ ಬಹಳ ಸೊಗಸಾಗಿದೆ ಸ್ಟೀವನ್. ಶಿರಸಿಯಲ್ಲೊಮ್ಮೆ ಕೆ.ಟಿ. ಕುಡಿದಿದ್ದೆ. ಕೆ.ಟಿ. ಎಂದರೇನೆಂಬುದು ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅದಕ್ಕೆ ಆ ಹೆಸರು ಬಂದಿದ್ದೇಕೆ, ಮೂಲ ಎಲ್ಲಿ ಎಂಬುದು ನಿಮ್ಮ ಬರಹ ಓದಿದ ಮೇಲೇ ನನಗೂ ಗೊತ್ತಾಗಿದ್ದು. ತುಂಬಾ ಥ್ಯಾಂಕ್ಸ್!.... ಸುರೇಶ್ ಕೆ., ರೂಪತಾರಾ, ಬೆಂಗಳೂರು.

    ReplyDelete
  2. ...KUKKE SUBRAMANYA DEVARA DARSHANAKKENDU HORATAAGA K.T YANNU SAVIYUVA AASHEYINDA NAAVU MADYANHA 4GANTEGE LAKSHMI VILASAKKE HAADUHODAAGA ANDU HOTEL BANDH ITTU....!
    PHONE MAADI HOGABAHUDITTU.
    REGO OLEEYA MAAHITI NEEDIDIRI...THANKS

    HARINI
    FREELANCE CARTOONIST.GURUVAARA ANDU NAMMA DURADRASTA..!

    ReplyDelete
  3. ಬಹಳಷ್ಟು ಜನ ಕೆಟಿ ಕುಡಿಯಲು ಕಾಯುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಮುಂಜಾನೆ ಹೊತ್ತು ಕಲ್ಲಡ್ಕ ಸರ್ಕಲ್‌ಗೆ ಒಂದ್ ಸಾರಿ ರೌಂಡ್ ಹಾಕಿ. ಕ್ಯೂನಲ್ಲಿ ಗಾಡಿಗಳು ನಿಂತಿರೋದು ಕಾಣಿಸುತ್ತೆ. ಆನಿವೇ ಥ್ಯಾಂಕ್ಸ್ ಹರಿಣಿ ಸಾರ್.

    ReplyDelete
  4. KT andare adu Kadak Tea endu naanu thilkondidde.

    ReplyDelete