Thursday, April 7, 2011

ಸ್ಯಾಂಡಲ್‌ವುಡ್‌ನಲ್ಲಿ ಕುಸಲ್

ತುಳು ರಂಗಭೂಮಿಯಲ್ಲಿ ಹೊರಳಾಡಿಕೊಂಡಿದ್ದ ಕುಸಲ್ದರಸೆ ನವೀನ್ ಡಿ ಪಡೀಲ್ ಈಗ ಸ್ಯಾಂಡಲ್‌ವುಡ್ ಪಡಸಾಲೆಯಲ್ಲಿ ಬಂದು ನಿಂತಿದ್ದಾರೆ. ಇತ್ತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಂತರ ಸ್ಯಾಂಡಲ್‌ವುಡ್‌ನಲ್ಲಿ ನವೀನ್ ಬಣ್ಣ ಹಾಕುತ್ತಿದ್ದಾರೆ. ಕರಾವಳಿಗೆ ಸೀಮಿತವಾಗಿದ್ದ ಇಬ್ಬರ ಜುಗಲ್ ಬಂ... ಇನ್ನೂ ಮುಂದೆ ಸ್ಯಾಂಡಲ್‌ವುಡ್‌ನಲ್ಲೂ ಕಾಣಬಹುದು.

ತುಳು ರಂಗಭೂಮಿ ಈಗ ಮತ್ತೆ ಸುದ್ದಿಯಲ್ಲಿದೆ. ತುಳು ರಂಗಭೂಮಿಯಲ್ಲಿ ಹೊರಳಾಡಿಕೊಂಡಿದ್ದ ಕುಸಲ್ದರಸೆ ನವೀನ್ ಡಿ ಪಡೀಲ್ ಈಗ ಸ್ಯಾಂಡಲ್‌ವುಡ್ ಪಡಸಾಲೆಯಲ್ಲಿ ಬಂದು ನಿಂತಿದ್ದಾರೆ. ರಂಗವೇದಿಕೆಯ ಮೇಲೆ ನಿಂತು ತನ್ನದೇ ಕಾಮಿಡಿ ಟ್ರೆಂಡಿನಿಂದ ಲಕ್ಷಾಂತರ ಪ್ರೇಕ್ಷಕರ ಮನಸ್ಸು ಗೆದ್ದ ಚೋರ ನವೀನ್ ಈಗ ಕನ್ನಡದ ಮೂರು ಚಿತ್ರಗಳಿಗೆ ಸೆಲೆಕ್ಟ್ ಆಗಿದ್ದಾರೆ. ನಿರ್ದೇಶಕ ಅಭಯ ಸಿಂಹರ ‘ಶಿಕಾರಿ’ ಶಶಾಂಕ್ ನಿರ್ದೇಶನದ ಜರಾಸಂಧ ಹಾಗೂ ಹಿಮಾಯತ್ ಖಾನ್ ನಿರ್ದೇಶನದ ಅಚ್ಚುಮೆಚ್ಚು ಚಿತ್ರಗಳಲ್ಲಿ ನವೀನ್ ಹಾಸ್ಯ ನಟನಾಗಿ ಕಂಗೊಳಿಸಲಿದ್ದಾರೆ. ಈ ಮೂರು ಚಿತ್ರಗಳ ಚಿತ್ರೀಕರಣ ಭಾಗ ಪೂರ್ಣಗೊಂಡಿದ್ದು ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಉಳಿದಿದೆ. ಈ ಮೂಲಕ ಕರಾವಳಿಯ ಪ್ರತಿಭೆಗಳನ್ನು ಬದಿಗೊತ್ತಿ ಮೆರೆಯುತ್ತಿದ್ದ ಗಾಂನಗರದಲ್ಲಿ ಕರಾವಳಿಯ ಪ್ರತಿಭೆಗಳು ಇಣುಕಾಡಲು ಆರಂಭ ಮಾಡಿದ್ದಂತಾಗಿದೆ.
ಇತ್ತೀಚೆಗಷ್ಟೇ ತುಳು ರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ನಂತರ ನವೀನ್ ಡಿ ಪಡೀಲ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದುಕೊಂಡಿರೋದು ಮಾತ್ರ ವಿಶೇಷ ಆಸಕ್ತಿ ಮೂಡಿಸಿದೆ. ಈ ಹಿಂದೆ ನವೀನ್ ಡಿ ಪಡೀಲ್ ತುಳು ರಂಗಭೂಮಿಯ ನಿರ್ದೇಶಕ ದೇವದಾಸ್ ಕಾಪಿಕಾಡ್‌ರ ‘ಚಾಪರ್ಕ’ ಟೀಮ್‌ನ ಸದಸ್ಯರಾಗಿದ್ದವರು. ದೇವ್ ಪ್ಲಸ್ ನವೀನ್ ಕಾಂಬೀನೇಷನ್‌ನಲ್ಲಿ ಮೂಡಿ ಬಂದ ನಾಟಕಗಳು ಸೂಪರ್ ಹಿಟ್ ಅನ್ನಿಸಿಕೊಂಡಿತ್ತು. ಇಬ್ಬರ ನಟನೆಯ ಜುಗಲ್‌ಬಂ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿಬಿಟ್ಟಿತ್ತು. ನವೀನ್ ಚಾಪರ್ಕ ತಂಡದಲ್ಲಿ ಬೆಳೆಯುತ್ತಾ ಹೋದಂತೆ ಇತ್ತ ತಂಡದಲ್ಲಿ ಬಿರುಕು ಮೂಡಲಾರಂಭಿಸಿತು. ನವೀನ್ ತಂಡದಿಂದ ಹೊರಬಿದ್ದರು. ದೇವದಾಸ್‌ಗೆ ಪೈಪೋಟಿ ನೀಡಲು ನವೀನ್ ಮತ್ತೊಂದು ನಾಟಕ ತಂಡಕ್ಕೆ ಭರ್ತಿಯಾದರು. ನಂತರ ಇಬ್ಬರ ನಡುವೆ ಮುಸುಕಿನ ಗುದ್ದಾಟಕ್ಕೆ ಕಹಳೆ ಮೊಳಗಿತ್ತು.
ನವೀನ್ ನಾಟಕಗಳ ಜತೆಗೆ ಕೋಸ್ಟಲ್‌ವುಡ್‌ನಲ್ಲಿ ‘ಬಿರ್ಸೆ’ ತುಳು ಸಿನಿಮಾ, ತುಳು ಸಿರೀಯಲ್‌ನಲ್ಲಿ ಬ್ಯುಸಿಯಾಗಿದ್ದಾಗ ಇತ್ತ ದೇವದಾಸ್ ಕಾಪಿಕಾಡ್ ನಿರ್ದೇಶಕ ರಮೇಶ್ ಅರವಿಂದ್‌ರ ‘ವೆಂಕಟ ಇನ್ ಸಂಕಟ’ದ ಹಾಸ್ಯ ಪಾತ್ರಕ್ಕೆ ಸೆಲೆಕ್ಟ್ ಆಗಿ ಹೋದರು. ಇತ್ತೀಚೆಗೆ ಬಂದು ಹೋದ ‘ಕಾರ್ತಿಕ್’ ಹಾಗೂ ಇನ್ನೂ ಬಿಡುಗಡೆಯಾಗದ ಸ್ಮೈಲ್ ಸೀನು ನಿರ್ದೇಶನದ ‘ತೂಫಾನ್’ನಲ್ಲೂ ದೇವದಾಸ್ ಇಣುಕಾಡಿದ್ದಾರೆ. ಆದರೆ ಕರಾವಳಿಯ ನಾಟಕಗಳಲ್ಲಿ ಮಿಂಚಿದ ದೇವದಾಸ್ ಕನ್ನಡದ ಪ್ರೇಕ್ಷಕರ ಎದುರು ಮಾತ್ರ ಬೋರಲಾಗಿ ಬಿದ್ದಿದ್ದಾರೆ ಎನ್ನುವ ಮಾತಿದೆ. ಸ್ಯಾಂಡಲ್‌ವುಡ್ ಸಿನ್ಮಾ ಜಗತ್ತಿನಲ್ಲಿ ತನ್ನ ನಿಜವಾದ ಒರಿಜಿನಾಲಿಟಿಯನ್ನು ಬಿಚ್ಚಿಡುವಲ್ಲಿ ದೇವದಾಸ್ ಸೋತು ಹೋಗಿದ್ದಾರೆ ಎನ್ನುವ ಮಾತು ಕೂಡ ಕರಾವಳಿ ತುಂಬಾ ಹರಡಿ ಬಿಟ್ಟಿದೆ. ಮೂರು ಚಿತ್ರಗಳ ನಂತರ ದೇವದಾಸ್ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿ ಮಲಗುತ್ತಿಲ್ಲ. ಸಿನ್ಮಾ ಬೇಡ ರಂಗಭೂಮಿಯೇ ಸಾಕು ಬಿಡಿ ಎಂದು ದೇವದಾಸ್ ನಗುತ್ತಾ ಹೇಳುತ್ತಿದ್ದಾರೆ. ಇತ್ತ ಕಡೆ ಕುಸಲ್ದರಸೆ ನವೀನ್ ಡಿ ಪಡೀಲ್ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ದೇವು ಕಳೆದು ಹೋದ ಹಾಗೇ ನವೀನ್ ಕಳೆದು ಹೋಗುತ್ತಾರಾ ಕಾಲವೇ ನಿಂತು ಉತ್ತರ ಹೇಳಬೇಕು. ಟೋಟಲಿ ಇಬ್ಬರು ಘಟಾನುಘಟಿ ರಂಗಭೂಮಿ ನಟರ ನಡುವೆ ಕೋಲ್ಡ್ ವಾರ್ ಮತ್ತೆ ಆರಂಭವಾಗುವ ಸೂಚನೆಯಂತೂ ಬಂದಿದೆ ಗ್ಯಾರಂಟಿ.

No comments:

Post a Comment