Monday, December 10, 2012
ಮುಗಿಯುವ ಮುನ್ನ ನೇತ್ರಾವತಿ.....
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ನದಿಯ ಮೇಲೆ ಆಸೆ ಬುರುಕರ ಕಣ್ಣು ಬಿದ್ದುಬಿಟ್ಟಿದೆ. ಇಂಥ ನೇತ್ರಾವತಿಯನ್ನು ತಿರುಗಿಸುವ ಕಡೆ ರಾಜಕಾರಣಿಗಳು ಕಣ್ಣು ಹಾಕಿದ್ದಾರೆ. ನೇತ್ರಾವತಿ ತಿರುಗಿಸಿದರೆ ಇಡೀ ಜಿಲ್ಲೆ ಸೊರಗುತ್ತದೆ. ಈಗಾಗಲೇ ಇದಕ್ಕೆ ಪರಿವಿಡಿ ಬರೆಯಲಾಗಿದೆ.
ಕರ್ನಾಟಕ ಪಶ್ಚಿಮವಾಹಿನಿಯ ನದಿ ನಾಲ್ಕೇ ತಾಲ್ಲೂಕುಗಳಲ್ಲಿ ಹರಿದರೂ ದಕ್ಷಿಣ ಕನ್ನಡ ಮಟ್ಟಿಗೆ ನೇತ್ರಾವತಿ ಜೀವನದಿ. ಧರ್ಮಸ್ಥಳದ ಪವಿತ್ರ ಸ್ನಾನದಿಂದ ತೊಡಗಿ ಮಂಗಳೂರು ಮಹಾನಗರ ಜನರ ಜೀವಾಮೃತವಾಗುವ ತನಕ ಎಲ್ಲರಿಗೂ ಬೇಕಾದ ನದಿ. ತೊಂಬತ್ತಾರು ಕಿ.ಮೀ. ಉದ್ದದ ನೇತ್ರಾವತಿಗೆ ಮಳೆಗಾಲದಲ್ಲಿ ಮೈತುಂಬ ಸೊಕ್ಕು. ಬೇಸಗೆಯಲ್ಲಿ ಮಂದಗಮನೆ. ಆಷಾಢದಲ್ಲಿ ಅಹಂಕಾರಿ. ಶಿಶಿರದಲ್ಲಿ ನಾಚಿ ಮುದ್ದೆಯಾಗುವ ಮುಗುದೆಯಾಗುತ್ತಾಳೆ. ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ನದಿಯ ಮೇಲೆ ಆಸೆ ಬುರುಕರ ಕಣ್ಣು ಬಿದ್ದುಬಿಟ್ಟಿದೆ. ಇಂಥ ನೇತ್ರಾವತಿಯನ್ನು ತಿರುಗಿಸುವ ಕಡೆ ರಾಜಕಾರಣಿಗಳು ಕಣ್ಣು ಹಾಕಿದ್ದಾರೆ. ನೇತ್ರಾವತಿ ತಿರುಗಿಸಿದರೆ ಇಡೀ ಜಿಲ್ಲೆ ಸೊರಗುತ್ತದೆ. ಈಗಾಗಲೇ ಇದಕ್ಕೆ ಪರಿವಿಡಿ ಬರೆಯಲಾಗಿದೆ.
ಉಪ್ಪಿನಂಗಡಿ ಎಂಬ ಸಂಗಮ ತಾಣದಲ್ಲಿ ಪದೇ ಪದೇ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ತುಂಬಿ ನೆರೆ ಬಾಧೆಯಾಗುತ್ತಿತ್ತು. ಬಂಟ್ವಾಳದ ಹಳೆಪೇಟೆಯಲ್ಲಿ ವರ್ತಕ ಮಂಡಿಗಳಿಗೆ ಪ್ರತಿ ವರ್ಷವೂ ನೀರು ನುಗ್ಗುತ್ತಿತ್ತು. ಬ್ರಹ್ಮರಕೂಟ್ಲುವಿನಲ್ಲಿ ನೀರು ಮೈಚಾಚಿ ವಾರಗಟ್ಟಲೆ ರಸ್ತೆ ಮುಳುಗುತ್ತಿತ್ತು. ಉಳ್ಳಾಲದ ಕಬ್ಬಿನ ಗದ್ದೆಗಳಿಗಂತೂ ಮಳೆಯ ನೀರಿನ ಆಕ್ರಮಣ ತಪ್ಪುತ್ತಿರಲಿಲ್ಲ. ಇದು ಮಳೆಗಾಲದ ನೇತ್ರಾವತಿಯ ಚಿತ್ರಣ.
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ವಿಸ್ತಾರದ ಶೇ.೪೦ರಷ್ಟು ಪ್ರದೇಶ ನೇತ್ರಾವತಿಯದ್ದೇ. ಅಂದರೆ ೩೩೫೭ ಚದರ ಕಿಲೋ ಮೀಟರ್ ವಿಸ್ತಾರದ ಈ ನದಿಯ ಜಲಾನಯನ ಪ್ರದೇಶದಲ್ಲಿ ವರ್ಷಕ್ಕೆ ೪೩೦೬ ಮೀ.ಮೀ. ಮಳೆ ಬೀಳುತ್ತ ದೆ. ನದಿಯ ಹರಿವಿನ ವಾರ್ಷಿಕ ಪ್ರಮಾಣ ಸರಾಸರಿ ೧೨೪೩೪ ಮಿಲಿಯನ್ ಘನ ಮೀಟರ್ ಗಳು ನೀರಾವರಿ ತಜ್ಞರ ಲೆಕ್ಕಾಚಾರದ ಪ್ರಕಾರ ೪೪೬ ಟಿಎಂಸಿ ನೀರು ಈ ನದಿಯಲ್ಲಿ ಹರಿದು ಹೋಗುತ್ತಿದೆ.
ಜೀವನದಿ ಎಲ್ಲಕ್ಕೂ ಅಗತ್ಯ:
ಜೀವನದಿ ನೇತ್ರಾವತಿ ಎಲ್ಲಕ್ಕೂ ಬೇಕು. ಮಂಗಳೂರಿಗೆ ನೇತ್ರಾವತಿ ಏಕೈಕ ಮೂಲ ಮಂಗಳೂರಿಗೆ ಬೇಕಾಗುವ ನೀರಿನಲ್ಲಿ ಶೇ.೭೦ರಷ್ಟು ಪಾಲು ಈ ನದಿಯದ್ದು. ಮಂಗಳೂರಿಗೆ ನೇತ್ರಾವತಿ ನದಿಯಿಂದ ದಿನಕ್ಕೆ ೨೦ ಎಂಜಿಡಿ ಪೂರೈಕೆಯಾಗುತ್ತಿದೆ. ಇದು ಮಂಗಳೂರಿನ ಕನಿಷ್ಠ ಅಗತ್ಯ.
ಮಂಗಳೂರಿನ ವಿಶೇಷ ಆರ್ಥಿಕ ವಲಯಕ್ಕೆ ಅಂದಾಜಿನ ಪ್ರಕಾರ ದಿನಕ್ಕೆ ೫೦೦ ಎಂಜಿಡಿ ನೀರು ಅಗತ್ಯ. ವಿಶೇಷ ಆರ್ಥಿಕ ವಲಯದಿಂದ ಜನಸಂಖ್ಯೆಯೂ ಹೆಚ್ಚುತ್ತದೆ. ಆದ್ದರಿಂದ ನೀರಿನ ಬೇಡಿಕೆ ನಾವು ಊಹಿಸದೇ ಇರುವ ಮಟ್ಟದಲ್ಲಿ ಏರುತ್ತದೆ. ನೇತ್ರಾವತಿ ನದಿಯ ಮೇಲೆ ವಿದ್ಯುತ್ ಉತ್ಪಾದನೆಯ ಕಂಪನಿಗಳು ಕಣ್ಣಿಟ್ಟಿವೆ. ಸರಕಾರದ ಸಬ್ಸಿಡಿಯ ಮೇಲೆ ಉದ್ಯಮದ ಮಂದಿ ಹಾತೊರೆದಿದ್ದಾರೆ. ಪಶ್ಚಿಮ ಘಟ್ಟದ ನೆತ್ತಿಯಲ್ಲಿ ಇನ್ನೂ ನೇತ್ರಾವತಿ ಧುಮುಕಿಲ್ಲ, ಅಲ್ಲಿಗೆ ಒಡ್ಡು ಹಾಕಿ ನೀರೆತ್ತಿ ಅದನ್ನು ಧುಮುಕಿಸಿ ಕರೆಂಟು ತಯಾರಿಸುವ ಉತ್ಸಾಹ ಯೋಜನಾ ಕರ್ತಗಳದ್ದು.
ಬೆಟ್ಟದ ಬುಡದಿಂದ ತೊಡಗಿ ಬಂಟ್ವಾಳದ ತನಕ ನೇತ್ರಾವತಿಯಲ್ಲಿ ೪೨ ಸಣ್ಣಪುಟ್ಟ, ಮಧ್ಯಮ, ದೊಡ್ಡ ಎಂಬ ವೆರೈಟಿಯಲ್ಲಿ ವಿದ್ಯುತ್ ಯೋಜನೆಗಳನ್ನು ಯೋಜನಾ ಕರ್ತಗಳು ರೂಪಿಸಿದ್ದಾರೆ. ಕೇವಲ ಬೆಳ್ತಂಗಡಿ ಎಂಬ ಸಣ್ಣ ತಾಲೂಕೊಂದರಲ್ಲೇ ನೇತ್ರಾವತಿಗೆ ಹದಿನಾರು ಸ್ಥಳದಲ್ಲಿ ಸಣ್ಣ ಸಣ್ಣ ಅಣೆಕಟ್ಟು ಹಾಕಿ ವಿದ್ಯುತ್ ಉತ್ಪಾದಿಸುವ ಯೋಜನೆ ಇದೆ. ದೊಂಡೊಳೆ, ಪಾರ್ಪಿಕಲ್, ನೀರಕಟ್ಟೆ, ನಿಡ್ಲೆ, ಶಂಬೂರು ಹೀಗೆ ಅನೇಕ ಸ್ಥಳಗಳಲ್ಲಿ ವಿದ್ಯುತ್ ಯೋಜನೆಗಳು ಆರಂಭವಾಗಿವೆ. ಇನ್ನೂ ೧೩ ಮಿನಿ ಜಲ ವಿದ್ಯುತ್ ಯೋಜನೆಗಳು ನೇತ್ರಾವತಿಯ ಅಥವಾ ಅದರ ಉಪನದಿಯಲ್ಲೋ ಆರಂಭ ಗೊಳ್ಳಲು ಸಿದ್ಧತೆ ನಡೆದಿವೆ. ಹೆಚ್ಚು ಕಡಿಮೆ ೧೧೦ ಮೆಗಾವಾಟ್ ವಿದ್ಯುತ್ ಅನ್ನು ಈ ಅಣೆಕಟ್ಟುಗಳಿಂದ ಉತ್ಪಾದಿಸುವ ಲೆಕ್ಕ ಮಾಡಲಾಗಿದೆ.
ಹರಿಯುವ ನೇತ್ರಾವತಿಯ ಲೆಕ್ಕಚಾರ:
ನೇತ್ರಾವತಿ ಮತ್ತು ಅದರ ಮುಖ್ಯ ಉಪನದಿ ಕುಮಾರಧಾರಾ ಸಹಿತ ರಾಜ್ಯದ ೩೬ ನದಿಗಳಿಂದ ನೀರಾವರಿಗಾಗಿ ನೀರೆತ್ತಲು ಫೆಬ್ರವರಿಯಿಂದ ಜೂನ್ ತನಕ ಕೆಲವು ನಿರ್ಬಂಧಗಳಿವೆ. ಪೇಟೆ ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ ಎಂದು ಆಯಾ ಜಿಲ್ಲಾಡಳಿತಕ್ಕೆ ಕಂಡು ಬಂದರೆ ತಕ್ಷಣವೇ ನದಿ ನೀರಾವರಿ ನಿಷೇಧಿಸಿ ಆದೇಶ ನೀಡಬಹುದು. ಈ ಸಂಬಂಧ ನೀರಾವರಿ ಕಾಯ್ದೆಗಳಲ್ಲಿ ಸರಳ ಮಾರ್ಗದರ್ಶಿ ಸೂತ್ರಗಳಿವೆ. ನದಿ ಪಾತ್ರದ ರೈತರಿಗೆ ಫೆಬ್ರವರಿ ತನಕ ಮಾತ್ರ ನೀರೆತ್ತುವ ಪರವಾನಗಿ ನೀಡಲಾಗುತ್ತದೆ. ಪರವಾನಗಿ ನವೀಕರಣಗೊಳಿಸದಿದ್ದರೆ ನಿಷೇಧ ಜಾರಿಗೊಂಡಿದೆ ಎಂದೇ ಅರ್ಥ. ಅನಂತರ ನೀರೆತ್ತಿದ್ದರೆ ಅದು ಅಕ್ರಮ.
ನೇತ್ರಾವತಿಯ ತಟದಲ್ಲಿ ಇಂಥ ಪರವಾನಗಿ ನೀಡಿರುವುದು ಭತ್ತದ ಕೃಷಿಗೆ ನೀರು ಹಾಯಿಸಲೆಂದು ಮಾತ್ರ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಯೇ ಬತ್ತಿ ಹೋಗಿದೆ. ಅಡಕೆ ತೋಟಗಳು ಮೈ ಎತ್ತಿವೆ. ಎಲ್ಲೆಂದರಲ್ಲಿ ತೋಟಗಳ ಸಾಮ್ರಾಜ್ಯ. ಭತ್ತದ ಗದ್ದೆಗಳು ಮಾತ್ರವಲ್ಲ, ಗುಡ್ಡಕಾಡುಗಳೂ ಅಡಕೆ ತೋಟಗಳಾಗಿವೆ. ಆದರೆ ನೀರಿನ ಪರವಾನಗಿ ಮಾತ್ರ ಭತ್ತದ ಹೆಸರಲ್ಲೇ ಇದೆ. ಒಂದು ಅಂದಾಜಿನ ಪ್ರಕಾರ ನೇತ್ರಾವತಿ-ಕುಮಾರಾಧಾರ ಪ್ರದೇಶದಲ್ಲಿ ಸಾವಿರಾರು ಪಂಪ್ ಸೆಟ್ ಗಳು ನೇತ್ರಾವತಿಯನ್ನು ಹೀರಿ ತೋಟಗಳಿಗೆ ಉಣಿಸುತ್ತಿವೆ. ತೆಂಗು-ಬಾಳೆ ಕೃಷಿಗಳಿಗೆ ನೀರು ಬೇಕಾಗಿರುವುದು ಫೆಬ್ರವರಿಯಿಂದ ಮೇ ತನಕ. ಈ ಹೊತ್ತಿನಲ್ಲಿ ನಿರ್ಬಂಧ ಹೇರಿದರೆ ಈ ಸಾವಿರಾರು ಎಕರೆ ತೋಟ ಕರಟಿ ನಾಶವಾಗುತ್ತದೆ. ಸಾವಿರಾರು ಕೃಷಿ ಕುಟುಂಬಗಳೂ ಬೆಂದು ಹೋಗುತ್ತವೆ.
ನದಿಯ ವಾಣಿಜ್ಯದ ಮಗ್ಗಲು:
ಕೈಗಾರಿಕೆ ಅಭಿವೃದ್ಧಿ, ಕೃಷಿಕ್ರಾಂತಿ, ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಯಾಗುತ್ತಿದ್ದಂತೆ ನಮ್ಮ ಸೌಂದರ್ಯ ಸಾಕ್ಷಿಯಾಗಿದ್ದ ಈ ಕರಾವಳಿ ಅರೆ ಮಲೆನಾಡು ಪ್ರದೇಶದ ಜೀವ ಲಹರಿಯಾಗಿದ್ದ ನೇತ್ರಾವತಿ ಕೂಡ ವಾಣಿಜ್ಯೀಕರಣಗೊಂಡಿತು. ನೇತ್ರಾವತಿ ನಿಧಾನವಾಗಿ ಸೊರಗುತ್ತಾ ಸೊರಗುತ್ತಾ ಕಣ್ಮುಚ್ಚಬಹುದೇ ಎಂಬ ಆತಂಕ ಯಾರೂ ಗಣಿಸಿದಂತಿಲ್ಲ. ಈಗಾಗಲೇ ಜೀವನದಿ ಕಾವೇರಿಯ ಬಗ್ಗೆ ಅಧ್ಯಯನಗಳು, ಚಿಂತನೆಗಳು ಆರಂಭವಾಗಿದೆ.
ನಾವೆಲ್ಲಾ ಈ ತನಕ ಹರಿಯುವ ನದಿಯನ್ನು ಕಟ್ಟುವ ಕುರಿತು ಯೋಚಿಸಿದ್ದೇವೆಯೇ ವಿನಾ ನದಿಯ ಹರಿವು ಉಳಿಸುವ ಹೆಚ್ಚಿಸುವ ಕುರಿತು ಎಂದೂ ಯೋಚಿಸಿಲ್ಲ ಎಂದು ಹೇಳುತ್ತಾರೆ ಪರಿಸರವಾದಿ ಹಾಗೂ ಜಲ ಕೊಯ್ಲು ತಜ್ಞ ಶ್ರೀ ಪಡ್ರೆ. ಸಂಪತ್ತಿನ ಬಳಕೆ ಕುರಿತು ಮಾತನಾಡುವುದಕ್ಕೂ ಮುಖ್ಯವಾದದ್ದು ಸಂಪತ್ತಿನ ಉಳಿಕೆಯ ಚಿಂತನೆ ಎಂದು ನೇತ್ರಾವತಿ ಕುರಿತು ಅವರು ಮಾರ್ಮಿಕವಾಗಿ ಉತ್ತರಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿಯೊಂದು ಯೋಜನೆ ಮಂಜೂರಾದಾಗಲೂ ಪರಿಸರದ ಬಗ್ಗೆ ಕಾಳಜಿ ಇರುವವರು ದಕ್ಷಿಣ ಕನ್ನಡ ಜಿಲ್ಲೆಯ ಧಾರಣಾ ಶಕ್ತಿಯ ಅಧ್ಯಯನ ಆಗಬೇಕೆಂದು ಎದ್ದು ನಿಲ್ಲುತ್ತಾರೆ. ಇಷ್ಟರವರೆಗೆ ಸರಕಾರವಾಗಲಿ, ಸ್ಥಳೀಯಾಡಳಿತ ಸಂಸ್ಥೆಗಳಾಗಲಿ ಇತ್ತ ಆಸಕ್ತಿ ತೋರಿಲ್ಲ. ಗಂಗಾ ಕ್ರಿಯಾ ಯೋಜನೆ ಮಾದರಿಯಲ್ಲಿ ನೇತ್ರಾವತಿಗೂ ಕ್ರಿಯಾ ಯೋಜನೆಯ ಅಗತ್ಯವಿದೆ. ಇನ್ನು ಹತ್ತು ವರ್ಷಗಳಲ್ಲಿ ನೇತ್ರಾವತಿಯನ್ನು ನಾವು ಮುಂಚಿನಂತೆ ಆಗಿಸಲು ಸಾಧ್ಯವಾಗದಿದ್ದರೆ ಎಕರೆಗೆ ೧.೬೦ ಕೋಟಿ ಲೀಟರ್ ಮಳೆ ಬೀಳುವ ಈ ಪರಶುರಾಮನ ಸೃಷ್ಟಿಯ ಕರಾವಳಿಯಲ್ಲಿ ಬರಗಾಲದ ಸೆಖೆ ನಿಶ್ಚಿತ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯೋದಿಲ್ಲ.
ಎರಡು ನದಿಗಳಿಗೆ ಎಂಟು ಉಪನದಿಗಳು:
ಈ ಎಲ್ಲ ಉಪನದಿಗಳಿಗೆ ಅಲ್ಲಲ್ಲಿ ಕೆಲವು ಹಳ್ಳ, ತೊರೆಗಳು ಬಂದು ಸೇರುತ್ತವೆ. ಕೆಲವು ತೊರೆಗಳು ಪ್ರಪಾತಗಳಲ್ಲಿ ಧುಮುಕಿ ಜಲಪಾತಗಳಾಗಿ ಭೋರ್ಗರೆಯುತ್ತಿದ್ದರೆ ಮತ್ತೆ ಕೆಲವು ಕೇವಲ ಜುಳು ಜುಳು ನಿನಾದದೊಂದಿಗೆ ಪ್ರಾಕೃತಿಕ ಸೊಬಗನ್ನು ಅಭಿವ್ಯಕ್ತಗೊಳಿಸುತ್ತಿವೆ.
೧. ಕುದುರೆಮುಖದ ಎಳನೀರು ಘಾಟಿಯಿಂದ ಬರುವ ಎಳನೀರು ಹೊಳೆಯು ಕುದುರೆಮುಖ, ಹಿರಿಮರಿಗುಪ್ಪೆ ಮತ್ತು ಕೃಷ್ಣಗಿರಿಯ ಶೋಲಾ ಕಾಡುಗಳಿಂದ ಹರಿದುಬರುತ್ತಿದೆ.
೨. ನೇತ್ರಾವತಿಯ ಎರಡನೇ ಉಪನದಿಯಾದ ಬಂಡಾಜೆ ಹೊಳೆಯು ದುರ್ಗದಬೆಟ್ಟದಿಂದ ೩೬೨ ಅಡಿ ಎತ್ತರದಿಂದ ಜಲಪಾತವಾಗಿ ಧುಮುಕಿ ಮಲವಂತಿಗೆಯತ್ತ ಹರಿದುಬರುವುದು.
೩. ಮೂರನೇ ಉಪನದಿ ಕೊಟ್ಟಿಗೆಹಾರ ಸಮೀಪದ ಮಧುಗುಂಡಿಯಿಂದ ಹರಿದುಬರುವ ಮೃತ್ಯುಂಜಯ ಹೊಳೆಯು ಬಾರೆಕಲ್ಲು, ದೊಡ್ಡೇರಿಬೆಟ್ಟದ ಒಂದು ಮಗ್ಗುಲಿನಲ್ಲಿ ಸಾಗುತ್ತಾ ಚಾರ್ಮಾಡಿಯತ್ತ ಹರಿದುಬರುತ್ತದೆ.
೪. ನಾಲ್ಕನೇ ಉಪನದಿ ಅಣಿಯೂರು ಹೊಳೆಯು ಚಾರ್ಮಾಡಿ ಘಾಟಿಯ ಹೊರಟ್ಟಿಯಲ್ಲಿ ಉಗಮಿಸಿ ಬಾರಿಮಲೆ ಮತ್ತು ದೇವಗಿರಿ ಕಣಿವೆಗಳಲ್ಲಿ ಹರಿದುಬರುತ್ತದೆ.
೫. ಐದನೇ ಉಪನದಿ ಸುನಾಲ ಹೊಳೆಯು ಮಿಂಚುಕಲ್ಲು, ಅಂಬಟ್ಟಿಮಲೆಯಿಂದ ಉಗಮಿಸಿ ಸೋಮನಕಾಡು ಕಣಿವೆಯಲ್ಲಿ ಹರಿಯುತ್ತದೆ.
೬. ಆರನೇ ಉಪನದಿ ನೆರಿಯ ಹೊಳೆಯು ಬಾಂಜಾರು ಕಣಿವೆಯಲ್ಲಿ ಉಗಮಿಸುತ್ತದೆ.
೭. ಏಳನೇ ಉಪನದಿ ಕಪಿಲಾ ಹೊಳೆಯು ಭೈರಾಪುರ ಘಾಟಿಯಲ್ಲಿ ಉಗಮಿಸಿ ಎತ್ತಿನಭುಜ ಕಣಿವೆಯಲ್ಲಿ ಹರಿದುಬರುತ್ತದೆ.
೮. ಎಂಟನೇ ಉಪನದಿ ಕೆಂಪುಹೊಳೆಯು ಶಿರಾಡಿ ಘಾಟಿಯ ಓಂಗ್ರಾಲ ಕಣಿವೆಯಲ್ಲಿ ಉಗಮಿಸಿ ಕೊಂಬರಮಲೆ, ವೆಂಕಟಗಿರಿ ಕಣಿವೆಯಲ್ಲಿ ಹರಿಯುತ್ತದೆ.
೯. ಒಂಬತ್ತನೇ ಪ್ರಮುಖ ಉಪನದಿ ಕುಮಾರಧಾರ ಹೊಳೆಯು ಕುಮಾರಪರ್ವತದಲ್ಲಿ ಉಗಮವಾಗಿ ಏಣಿಕಲ್ಲು, ಪಟ್ಲಬೆಟ್ಟ ಕಣಿವೆಯಲ್ಲಿ ಹರಿದುಬರುತ್ತದೆ.
ಈ ಒಂಬತ್ತು ಉಪನದಿಗಳಿಗೆ ಮತ್ತೊಂದಷ್ಟು ಕಿರುಹಳ್ಳ, ಝರಿತೊರೆಗಳು ಅಲ್ಲಲ್ಲಿ ಸೇರುತ್ತವೆ. ಶಿರ್ಲಾಲು ಹಳ್ಳ, ಶಿವನಾಳ ಹಳ್ಳ, ಮಾವಿನಸಸಿ ಹಳ್ಳ, ಬಡಮನೆ ಹಳ್ಳ, ಹಳೆಮನೆ ಹಳ್ಳ, ಬಟ್ಟಿ ಹಳ್ಳ, ಕಿಲ್ಲೂರು ಹಳ್ಳ, ಬಂಗ್ರಬಲಿಗೆ ಹಳ್ಳ, ಆನಡ್ಕ ಹಳ್ಳ, ನಂದಿತ್ತಾಟು ಹಳ್ಳ, ಮಲ್ಲ ಹಳ್ಳ, ಏಳೂವರೆ ಹಳ್ಳ, ಕೂಡುಬೆಟ್ಟು ಹಳ್ಳ, ಮುಂಡಾಜೆ ಹಳ್ಳ, ನೆಲ್ಲಿತ್ತಾಟು ಹಳ್ಳ, ಬಿರುಮಲೆ ಹಳ್ಳ, ಹಕ್ಕಿಕಲ್ಲು ಹಳ್ಳ, ನಾಗರ ಹಳ್ಳ, ಕಬ್ಬಿನ್ಸಂಕ ಹಳ್ಳ, ಕಲ್ಲರ್ಬಿ ಹಳ್ಳ, ದೊಂಡೋಲೆ ಹಳ್ಳ, ಕಲ್ಲಗುಂಡಿ ಹಳ್ಳ, ಏಮೆಪಾರೆ ಹಳ್ಳ, ಕನ್ನಿಕಾಯ ಗುಂಡಿ, ಕಬ್ಬಿನಾಲೆ, ಅಡ್ಡ ಹೊಳೆ, ಕೇರಿ ಹೊಳೆ, ಹೊಂಗದ ಹೊಳೆ, ಮಾರುತಿ ಹೊಳೆ, ಅಬ್ಲುಬುಡಿ ಹಳ್ಳ, ಕಾಗೆನೀರು, ಅವಂತಿಗೆ ಹೊಳೆ, ಸಿಂಗ್ಸಾರ್ ಹೊಳೆ, ಗಿರಿಹೊಳೆ, ಪೇರಿಕೆ, ಮೀನಗಂಡಿ, ಅಜ್ಜಿಗುಂಡಿ, ಬಣಾಲ್ ಹೊಳೆ, ಜೇಡಿಗುಲು, ಮತ್ತಿಕೋಲು ಮುಂತಾದ ಅನೇಕ ಹಳ್ಳಗಳು ಉಪನದಿಗಳಿಗೆ ಸೇರುತ್ತವೆ.
ಈ ಉಪನದಿಗಳು, ಹಳ್ಳಗಳು ಹರಿದು ಬರುವಲ್ಲೆಲ್ಲಾ ಗಿರಿ, ಕಂದರ, ಕಣಿವೆ, ಪ್ರಪಾತ, ಜಲಪಾತಗಳಿವೆ. ಮಳೆಯನ್ನು ಹೀರಿ ಹೊಳೆಯನ್ನು ಜೀವಂತವಾಗಿಟ್ಟುಕೊಳ್ಳುವ ಹುಲ್ಲುಗಾವಲುಗಳಿವೆ. ಆಕಾಶದೆತ್ತರಕ್ಕೆ ನಿಂತಿರುವ ಮರಗಳಿವೆ. ಔಷಧೀಯ ಸಸ್ಯ ಪ್ರಬೇಧಗಳಿವೆ. ಕಾಡನ್ನೇ ಆಶ್ರಯಿಸಿದ ವನ್ಯ ಮೃಗ ಪಕ್ಷಿ ಸಂಕುಲಗಳಿವೆ. ಕಗ್ಗತ್ತಲ ಮಲೆಗಳಿವೆ. ಮಲೆಗಳನ್ನೇ ನಂಬಿ ಬದುಕು ಸಾಗಿಸುವ ಮಲೆಕುಡಿಯರಿದ್ದಾರೆ. ಪರ್ವತಗಳ ಕಣಿವೆಗಳಲ್ಲಿ ಮಳೆಗೆ ಮೂಲಾಧಾರವಾದ ಶೋಲಾ ಕಾಡುಗಳಿವೆ.
ನದಿ ತಿರುವು ಮೂರ್ಖತನದ ಹೆಜ್ಜೆ:
ರೈಲ್ವೆ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಗಣಿಗಾರಿಕೆ, ವಿದ್ಯುತ್ ಲೈನ್, ಪೈಪ್ ಲೈನ್, ಜಲಾಶಯ ನಿರ್ಮಾಣಗಳಂತಹ ವನವಿನಾಶಕ ಯೋಜನೆಗಳಿಂದ ಈಗಾಗಲೇ ಪಶ್ಚಿಮ ಘಟ್ಟದ ಪರ್ವತ ಮತ್ತು ಅಡವಿ ಭಾಗಕ್ಕೆ ಅಗಾಧ ಹಾನಿಯಾಗಿದೆ. ಈ ನದಿ ತಿರುವು ಯೋಜನೆಯಿಂದಂತೂ ಪಶ್ಚಿಮ ಘಟ್ಟದ ಗಿರಿ, ವನ, ಝರಿ, ಜಲದೊಡಲಿಗೆ ಮಾರಣಾಂತಿಕ ಏಟು ಬೀಳುವುದರಲ್ಲಿ ಸಂಶಯವೇ ಇಲ್ಲ. ಕಾಳಿ, ಶರಾವತಿ, ಚಕ್ರಾ, ವಾರಾಹಿ, ಭದ್ರಾ, ಕಾವೇರಿ ನದಿಗಳಿಗೂ ಮತ್ತು ನದಿ ಸಮೀಪದ ಅಡವಿಗಳಿಗೂ ದುರ್ಗತಿ ಒದಗಿಸಿದ್ದಾಗಿದೆ. ವಿಧಾನಸೌಧ ಬಿದ್ದರೆ ಅಂತಹ ೧೦೦ ವಿಧಾನಸೌಧಗಳನ್ನು ಕಟ್ಟಬಹುದು. ನದಿಯನ್ನು ಕಳೆದುಕೊಂಡರೆ ಮತ್ತೆ ಅಂತಹ ನದಿಯನ್ನು ಸೃಷ್ಟಿಸಲು ನಮ್ಮಿಂದ ಸಾಧ್ಯವೇ ಇಲ್ಲ.
ನದಿ ತಿರುವು ಯೋಜನೆಯ ರೂವಾರಿ ಪರಮಶಿವಯ್ಯನವರ ಪ್ರಕಾರ ನೇತ್ರಾವತಿ ನದಿಯಲ್ಲಿ ಪ್ರತಿ ವರ್ಷ ೪೬೪.೬೨ ಟಿ.ಎಂ.ಸಿ ನೀರು ಸಮುದ್ರದ ಪಾಲಾಗುತ್ತಿದೆ. ಇದರಲ್ಲಿ ೧೪೨.೪೬ ಟಿ.ಎಂ.ಸಿ ನೀರನ್ನು ಕಾಲುವೆ ಮುಖಾಂತರ ಬಯಲುಸೀಮೆಯ ೫೭ ತಾಲೂಕುಗಳಿಗೆ ಸರಬರಾಜು ಮಾಡಬಹುದೆಂದು ಲೆಕ್ಕಾಚಾರ. ಉಪನದಿಗಳ ಉಗಮಸ್ಥಾನದ ಸಮೀಪ ಅಲ್ಲಲ್ಲಿ ನೀರನ್ನು ತಡೆದು ಜಲಾಶಯಗಳನ್ನು ನಿರ್ಮಿಸಿ ಕಾಲುವೆ ಮುಖಾಂತರ ಸಾಗಿಸುವುದೆಂದು ಅಂದಾಜು. ಈ ಯೋಜನೆಗೆ ಎರಡು ಪ್ರಮುಖ ಕಾಲುವೆಗಳ ಮೂಲಕ ಹರಿವು ಸಾಗಲಿದೆ.
ಈ ಎರಡೂ ಕಾಲುವೆಗಳಿಗೆ ಬೇಕಾದಲ್ಲಿ ಜಲಾಶಯ ನಿರ್ಮಿಸುವಲ್ಲಿ ರಕ್ಷಿತಾರಣ್ಯವಿದೆ. ಕುದುರೆಮುಖ, ಕೃಷ್ಣಗಿರಿ, ಹಿರಿಮರಿಗುಪ್ಪೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ, ಹೊಸ್ಮನೆ ಗುಡ್ಡ, ಬಾಳೆಗುಡ್ಡ, ದೊಡ್ಡೇರಿ ಬೆಟ್ಟ, ಏರಿಕಲ್ಲು, ಕುಂಭಕಲ್ಲು, ಮಿಂಚುಕಲ್ಲು, ಸೋಮನಕಾಡು, ಬಾರಿಮಲೆ, ಬಾಂಜಾರುಮಲೆ, ಇಳಿಮಲೆ, ಅಂಬಟಿಮಲೆ, ಅಮೇದಿಕಲ್ಲು, ಎತ್ತಿನಭುಜ, ದೇವರಮಲೆ, ಉಳಿಯಮಲೆ, ಮುಗಿಲಗಿರಿ, ಅರಮನೆ ಬೆಟ್ಟ, ಬೆಂಗಲಾರ್ ಬೆಟ್ಟ, ವೆಂಕಟಗಿರಿ, ಅರೆಬೆಟ್ಟ, ಕನ್ನಡಿಕಲ್ಲು, ಏಣಿಕಲ್ಲು ಬೆಟ್ಟ, ಪಟ್ಲ ಬೆಟ್ಟ, ಕುಮಾರಪರ್ವತ ಇಂತಹ ಪಶ್ಚಿಮ ಘಟ್ಟದ ಪ್ರಮುಖ ಬೆಟ್ಟಗಳೆಲ್ಲ ಹಾನಿಗೊಳಗಾಗುವ ಸಂಭವಗಳಿವೆ.
ಘಾಟಿಗಳುದ್ದಕ್ಕೂ ಪರ್ವತಗಳನ್ನು ಕೊರೆದು ಅರಣ್ಯ ಪ್ರದೇಶವನ್ನು ಸಿಗಿದು ನೀರನ್ನು ಸಂಗ್ರಹಿಸುವುದೆಂದರೆ ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು ಚಿಕ್ಕಮಗಳೂರು ರಾಜ್ಯ ಹೆದ್ದಾರಿಗೂ, ಶಿರಾಡಿ ಘಾಟಿಯಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೂ, ರೈಲ್ವೇ ರಸ್ತೆಗೂ ಹಾನಿಯಾಗಬಹುದು. ಈ ಯೋಜನೆಯಿಂದ ೫,೫೫೦ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ.
ಈ ಕಾಲುವೆ, ಜಲಾಶಯ ನಿರ್ಮಾಣ, ಪೈಪ್ ಲೈನ್ ಗಳಿಗೆ ಪರ್ವತಗಳನ್ನು ಸೀಳಲು ಬೃಹತ್ ಯಂತ್ರಗಳು ಕಾಡಿನೊಳಗೆ ಹೋಗಬೇಕಾದರೆ ಅರಣ್ಯದುದ್ದಕ್ಕೂ ರಸ್ತೆ ನಿರ್ಮಾಣವಾಗಬೇಕು. ಯಾವುದೇ ಅರಣ್ಯ ಪರ್ವತಗಳಿಗೆ ರಸ್ತೆ ನಿರ್ಮಾಣವಾಯಿತೆಂದರೆ ಅಲ್ಲಿನ ಜೀವವೈವಿಧ್ಯಗಳು, ವನ್ಯಜೀವಿಗಳು, ಮರಗಿಡಗಳು ನಾಶವಾದವೆಂದೇ ಅರ್ಥ. ಕಾಮಗಾರಿ ನಡೆಯುತ್ತಿರುವಾಗ ಪರ್ವತಗಳ ಕಲ್ಲು, ಮಣ್ಣನ್ನು ರಾಶಿ ಹಾಕಿದಾಗ ಅಗಾಧ ಪ್ರಮಾಣದ ಮಳೆಕಾಡು ನಾಶವಾಗುತ್ತದೆ. ಈ ಮಣ್ಣಿನ ರಾಶಿ ಕೆಲವು ಚಿಕ್ಕ ತೊರೆ ಹಳ್ಳಗಳ ಮೇಲೆ ಬಿದ್ದು ಆ ಹಳ್ಳಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ. ಮಣ್ಣಿನ ರಾಶಿ ನದಿಯನ್ನು ಸೇರಿ ಹೂಳು ತುಂಬಿ ನದಿಯ ಆಳ ಕಡಿಮೆಯಾಗಬಹುದು. ಕಾಡಿನೊಳಗೆ ಇರುವ ಚಿಕ್ಕ ಚಿಕ್ಕ ಹಳ್ಳಗಳು ನದಿಯ ಮಟ್ಟಿಗೆ ತುಂಬಾ ಮಹತ್ವದಾಗಿದೆ. ಮಳೆನೀರನ್ನು ನೆಲದಲ್ಲಿ ಇಂಗಿಸಿಕೊಂಡಿರುವಂತಹ ಶೋಲಾಕಾಡುಗಳ ಈ ಹಳ್ಳಗಳು ಮಳೆಗೆ ಮೂಲಾಧಾರವಾಗಿರುತ್ತದೆ.
ನದಿಯನ್ನು ತಡೆದಾಗ ನದಿನೀರಿನ ಖನಿಜಾಂಶಗಳು, ಲವಣಾಂಶಗಳು ಸಮುದ್ರವನ್ನು ಸೇರದಿದ್ದರೆ ಜಲಚರ ಜೀವಿಗಳಿಗೆ ಬೇಕಾದ ಪೋಷಕಾಂಶಗಳು ಕಡಿಮೆಯಾಗಿ ಅಸಂಖ್ಯಾತ ಮೀನುಗಳ ನಾಶವಾದರೆ ಬೆಸ್ತರ ಬದುಕು ದುಸ ರವಾದೀತು. ಕಾಡೊಳಗೆ ಹಾಯಾಗಿ ಓಡಾಡುತ್ತಿರುವ ವನ್ಯ ಜೀವಿಗಳು ಬದುಕಲು ನೆಲೆಯಿಲ್ಲದೆ ಕಾಡಿನಿಂದ ನಾಡಿಗೆ ದಾಳಿ ಇಡಬಲ್ಲವು. ಪರ್ವತಗಳ ಅಂಚುಗಳಲ್ಲಿ ನೀರಿನ ಕಾಲುವೆಗಳನ್ನು ನಿರ್ಮಿಸಿದಾಗ ಭೂಕುಸಿತ ಸಂಭ ವಿಸಲೂಬಹುದು. ಈ ಭೂಕುಸಿತದಿಂದ ಕಾಲುವೆಯ ನೀರು ರಭಸವಾಗಿ ಹರಿದು ಹತ್ತಿರದ ಹಳ್ಳಿಗಳ ಗದ್ದೆ, ತೋಟ, ಮನೆಗಳಿಗೆ ಹಾನಿಯಾಗಬಹುದು.
ಕರಾವಳಿಯ ಬದುಕಿಗೊಂದು ರೂಪುರೇಷೆ ಕೊಟ್ಟಂತಹ ನೇತ್ರಾವತಿಯ ದಿಕ್ಕನ್ನೇ ಬದಲಿಸಿ ಅಡವಿಯನ್ನು ಕೆಡವಿ ಬಲಿ ಕೊಡುವುದರಿಂದ ಬರವಿಲ್ಲದ ಕರಾವಳಿ ಜಿಲ್ಲೆಗೆ ಬರಗಾಲದ ಆಮಂತ್ರಣ ನೀಡಲಾಗುತ್ತಿದೆ. ಅದರಲ್ಲೂ ಈ ಬಾರಿ ಕರಾವಳಿಯಲ್ಲಿ ಮಳೆಯ ಪ್ರಮಾಣ ಕೂಡ ಕಡಿಮೆ ಇವುಗಳ ನಡುವೆ ನೇತ್ರಾವತಿಯ ಒಡಲು ಬರಿದಾಗುತ್ತಿದೆ. ಒಂದು ಲೆಕ್ಕಚಾರದ ಪ್ರಕಾರ ನೇತ್ರಾವತಿ ಅಧ್ಯಾಯ ಮುಕ್ತಾಯ ಹಂತಕ್ಕೆ ತಲುಪುತ್ತಿದೆಯಾ ಎನ್ನುವ ಗುಮಾನಿ ನೇತ್ರಾವತಿಯನ್ನು ನೋಡುವ ಪ್ರತಿಯೊಬ್ಬನ ಕಣ್ಣಿಗೆ ಅನ್ನಿಸದೇ ಇರಲಾರದು.
....
ಚಿತ್ರ: ಕಿಶೋರ್ ಪೆರಾಜೆ
.............
Sunday, December 9, 2012
Monday, December 3, 2012
ಮಂಗಳಮುಖಿಯರ ಮಂಗಳವಾಗದ ಬದುಕು !
ಮಂಗಳಮುಖಿಯರು ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾ ಗುವುದಿಲ್ಲ. ಇತರರಿಗೆ ಕಾಣಿಸುವುದು ಅವರು ಧರಿಸುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್ಸ್ಟಿಕ್ ಮಾತ್ರ. ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ.
ಸೀರೆಯುಟ್ಟುಕೊಂಡು ನಮ್ಮ ಸುತ್ತಮುತ್ತ ಓಡಾಡುವ ಅವರನ್ನು ನೋಡಿದ್ದೇವೆ. ಅಂಗಡಿ ಮಳಿಗೆಗಳಲ್ಲಿ ಕಾದು ಬೇಡುತ್ತಾರೆ. ದುಡ್ಡು ಕೊಡದಿದ್ದರೆ ಕೆಲವರು ವಿಲಕ್ಷಣ ವರ್ತನೆಯಿಂದ ಕಾಡುತ್ತಾರೆ. ಏನಪ್ಪಾ ಹುಚ್ಚು ಹಿಡಿದಿದೆಯಾ..? ಎನ್ನುವ ಪ್ರಶ್ನೆ ಎದುರುಗೊಳ್ಳುತ್ತದೆ.
ವ್ಯಕ್ತಿಯೊಬ್ಬ ಅಂಧನಾಗಿದ್ದರೆ ಗೊತ್ತಾಗುತ್ತದೆ. ಕುಂಟನಾಗಿದ್ದರೆ ಕೂಡ ಸುಲಭವಾಗಿ ಗುರುತಿಸಬಹುದು. ಅವರಿಗೆ ಕೈಲಾದ ನೆರವು ನೀಡುತ್ತಾರೆ. ಆದರೆ ಒಬ್ಬ ಮಂಗಳಮುಖಿ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಇತರರಿಗೆ ಕಾಣಿಸುವುದು ಧರಿಸಿರುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್ಸ್ಟಿಕ್ ಮಾತ್ರ . ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ.
ನಮ್ಮಲ್ಲಿ ಹಾವು, ಬೆಕ್ಕು, ನಾಯಿಗಳು ಎಷ್ಟಿವೆ ಎಂದು ಗಣತಿ ಮಾಡಲಾಗುತ್ತದೆ. ಆದರೆ ಮಂಗಳಮುಖಿಯರಿಗೆ ಇಂತಹ ಲೆಕ್ಕವೇ ಇಲ್ಲ. ಭಾರತದಲ್ಲಿ ೫೦ ಸಾವಿರದಿಂದ ೫ ಲಕ್ಷ ಮಂಗಳಮುಖಿಯರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ೫ ಸಾವಿರಕ್ಕೂ ಅಧಿಕ ಮಂಗಳಮುಖಿಯರನ್ನು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಈಗ ಇರುವ ಮಂಗಳಮುಖಿಯರ ಸಂಖ್ಯೆ ೫೦೦ಕ್ಕಿಂತ ಜಾಸ್ತಿ.
ಮಂಗಳಮುಖಿಯರಾಗಲು ಕಾರಣ ಏನೂ?
ಮಂಗಳಮುಖಿಗಳು ಹುಟ್ಟಿದಾಗ ಪುರುಷ ಎಂದೇ ಗುರುತಿಸಿಕೊಳ್ಳುತ್ತಾರೆ. ದೈಹಿಕ ಸ್ವರೂಪ ಕೂಡ ಹಾಗಿರುತ್ತದೆ. ಆದರೆ ಅಂದಾಜು ಹನ್ನೆರಡು-ಹದಿಮೂರರ ಹರೆಯದ ನಂತರ ಭಾವನೆಗಳಲ್ಲಿ ಪಲ್ಲಟ ಆರಂಭವಾಗಿ ಬಿಡುತ್ತದೆ. ಶಾಲೆಯಲ್ಲಿ ಬಾಲಕ ಸಹಪಾಠಿಯತ್ತ ಲೈಂಗಿಕ ಆಕರ್ಷಣೆಗೆ ಒಳಗಾಗಬಹುದು. ಶಾಲಾ ವಾರ್ಷಿಕೋತ್ಸವದ ನಾಟಕಗಳಲ್ಲಿ ಸ್ತ್ರೀ ಪಾತ್ರವೇ ಬೇಕು ಎಂದು ರಚ್ಚೆ ಹಿಡಿಯಬಹುದು. ತನ್ನಲ್ಲೇಕೆ ಇಂಥ ಭಾವನೆಗಳು ಬರುತ್ತಿವೆ ? ಅಥವಾ ಇತರ ಬಾಲಕರಲ್ಲಿ ಕೂಡ ಇಂತಹುದೇ ಸ್ವಭಾವ ಇದೆಯಾ ಅಂತ ಆತ ಹುಡುಕಬಹುದು. ಉತ್ತರ ಸಿಗದೆ ತಲ್ಲಣಗೊಳ್ಳಬಹುದು.
ಹದಿನೆಂಟು-ಇಪ್ಪತ್ತರ ಹೊತ್ತಿಗೆ ತಾನು ದೈಹಿಕವಾಗಿ ಪುರುಷನಾಗಿದ್ದರೂ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಹೆಣ್ಣು ಎಂಬುದು ಖಚಿತವಾಗುತ್ತದೆ. ಸಮಸ್ಯೆಗಳ ಪರಂಪರೆಯ ಮುಂದಿನ ಘಟ್ಟ ಅಮಾನುಷ. ಪೋಷಕರು, ಸೋದರ, ಸೋದರಿಯರಿಂದ ಅಪಹಾಸ್ಯ, ನಿಂದನೆ ಗುರಿಯಾಗಿ ಮನೆಯಲ್ಲಿ ನಿಲ್ಲಲಾಗದೆ ಹೊರಬೀಳುತ್ತಾರೆ. ತಮ್ಮ ಸಮುದಾಯವೇ ವಾಸಿ ಎಂದು ಮಂಗಳಮುಖಿಗಳ ಗುಂಪಿಗೆ ಸೇರುತ್ತಾರೆ. ಅಲ್ಲಿ ಅವರಿಗೆ ಬೇಕಾದ ಸಕಲ ಸ್ವಾತಂತ್ರ್ಯ ಸಿಗುತ್ತದೆ. ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿರುತ್ತಾರೆ. ಆದರೆ ಸಮಸ್ಯೆಗಳ ಸರಪಳಿ ಬದುಕನ್ನು ಕೊನೆಯತನಕ ಕಟ್ಟಿ ಹಾಕುತ್ತದೆ ಎನ್ನುವುದು ಮಂಗಳಮುಖಿಯರ ಕುರಿತು ಅಧ್ಯಯನ ಮಾಡುತ್ತಿರುವ ಮುಂಬಯಿಯ ಮೇರಿ ವೇಲು ಅವರ ಅಭಿಪ್ರಾಯ.
ಮಂಗಳಮುಖಿಯರು ಅಂಗಡಿ, ಮಳಿಗೆಗಳಿಗೆ ಹೋಗಿ ಬೇಡುತ್ತಾರೆ. ಎಷ್ಟೋ ಮಂದಿ ಹಣ ಕೊಡದಿದ್ದರೆ ಗದರಿಸುತ್ತಾರೆ. ವಿಚಿತ್ರ ವರ್ತನೆಗಳಿಂದ ಪೀಡಿಸುತ್ತಾರೆ ಎಂಬ ಆಪಾದನೆ ಇದೆ. ಈ ಪ್ರಶ್ನೆಗೆ ಮಂಗಳೂರಿನಲ್ಲಿರುವ ಬಳ್ಳಾರಿಯ ಮೂಲದ ಯಶೋಧಾ ಈ ರೀತಿ ಉತ್ತರಿಸುತ್ತಾರೆ.
‘ನನ್ನಲ್ಲೂ ಬಹಳಷ್ಟು ಜನ ಇದೇ ಪ್ರಶ್ನೆ ಕೇಳುತ್ತಾರೆ. ಅಂಗಡಿಗಳಲ್ಲಿ ಹಣ ಕೇಳುವ ಪದ್ಧತಿ ಮುಂಬಯಿನಲ್ಲಿ ಆರಂಭ ವಾಯಿತು. ಈಗ ಮುಂಬಯಿನಿಂದ ಕರ್ನಾಟಕಕ್ಕೆ ಅನೇಕ ಮಂದಿ ವಲಸೆ ಬಂದಿದ್ದಾರೆ. ಇಲ್ಲಿ ಕೂಡ ಅದೇ ಪದ್ಧತಿ ಹರಡಿದೆ. ಹಣಕ್ಕಾಗಿ ಒತ್ತಾಯಪಡಿಸುವುದು ಸರಿಯಲ್ಲ. ಮಂಗಳಮುಖಿ ಪರ ಸಂಘಟನೆಗಳು ಕೂಡ ಭಿಕ್ಷಾಟನೆಯನ್ನು ಒಪ್ಪುವುದಿಲ್ಲ’ ಎನ್ನುವುದು ಅವರ ಮಾತು.
ಕರಾವಳಿಯಲ್ಲಿ ಮಂಗಳಮುಖಿರ ಆಗಮನ:
ಮೂರು ವರ್ಷಗಳ ಹಿಂದೆ ಮಂಗಳೂರು ಪೇಟೆಯಲ್ಲಿ ಹತ್ತಾರು ಮಂಗಳಮುಖಿಯರು ಕಾಣ ಸಿಗುತ್ತಿದ್ದ ಪ್ರಸಂಗ ಇತ್ತು. ಆದರೆ ಈಗೀನ ಪರಿಸ್ಥಿತಿಯೇ ಸಂಪೂರ್ಣ ಭಿನ್ನ. ಮಂಗಳೂರು ನಗರ ಮಾತ್ರವಲ್ಲ ಕರಾವಳಿಯ ತಾಲೂಕು ಕೇಂದ್ರಗಳಲ್ಲಿಯೂ ಇವರ ಸಂಖ್ಯೆ ಏರಿಕೆ ಕಾಣಿಸಿಕೊಂಡಿದೆ.
ಮಂಗಳೂರಿನ ಪಣಂಬೂರು ಬಂದರು ಪ್ರದೇಶವೊಂದರಲ್ಲಿಯೇ ಸರಿಸುಮಾರು ೩೦೦ಕ್ಕಿಂತ ಜಾಸ್ತಿ ಸಂಖ್ಯೆಯ ಮಂಗಳಮುಖಿಯರನ್ನು ವೀಕೆಂಡ್ ದಿನಗಳಲ್ಲಿ ಕಾಣಬಹುದು. ಪಣಂಬೂರು ಬಂದರು ಪ್ರದೇಶಕ್ಕೆ ನಾನಾ ಕಡೆಯಿಂದ ಬರುವ ಲಾರಿಗಳ ಚಾಲಕರು ಇವರನ್ನು ಇಲ್ಲಿಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ.
ಅದಕ್ಕೂ ಮುಖ್ಯವಾಗಿ ಮುಂಬಯಿಯಿಂದಲೂ ಇಲ್ಲಿಗೆ ಬಂದು ನೆಲೆ ನಿಂತ ಮಂಗಳಮುಖಿಯರು ಇದ್ದಾರೆ. ನಗರದ ಹೊರವಲಯದಲ್ಲಿ ಠಿಕಾಣಿ ಹೂಡುವ ಮಂಗಳಮುಖಿಯರು ತಮ್ಮದೇ ತಂಡ ರಚಿಸಿಕೊಂಡು ಬೇಡುವ ಕೆಲಸದ ಜತೆಯಲ್ಲಿ ಲೈಂಗಿಕ ಕ್ರಿಯೆಯಲ್ಲೂ ತೊಡಗಿಕೊಂಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಮಾತ್ರ ಹೆಚ್ಚು ಗಳಿಕೆ ಮಾಡುವ ಇವರು ಉಳಿದ ದಿನಗಳಲ್ಲಿ ಪೇಟೆ ಪಟ್ಟಣಗಳಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುವುದಿಲ್ಲ.
ಮಂಗಳಮುಖಿಯರಲ್ಲೂ ನಕಲಿತನ:
ಒರಿಜಿನಾಲಿಟಿ ಎನ್ನುವ ಪದಗಳ ಜತೆಗೆ ಹುಟ್ಟಿಕೊಂಡ ನಕಲಿತನ ಎನ್ನುವ ಪದ ಪ್ರಯೋಗ ಈಗ ಮಂಗಳಮುಖಿಯರಲ್ಲೂ ಕಾಣಿಸಿಕೊಂಡಿದೆ. ಮೈಮುರಿದುಕೊಂಡು ದುಡಿಯಲು ಬಯಸದ ಸೋಮಾರಿ ಯುವಕರು ಮಂಗಳಮುಖಿರಾಗುತ್ತಿದ್ದಾರೆ. ಅದರಲ್ಲೂ ಹಣ ಸುಳಿಗೆ ಮಾಡುವ ಕಾಯಕದಲ್ಲಿ ಭರ್ಜರಿಯಾಗಿ ನಿರತರಾಗಿದ್ದಾರೆ. ಮಹಿಳೆಯರಂತೆ ವೇಷಭೂಷಣ ಮಾಡಿಕೊಂಡು ಅವರ ಹಾವಭಾವಗಳನ್ನೇ ಕಾಫಿ ಮಾಡುವ ಈ ಯುವಕರು ಮಂಗಳಮುಖಿಯರಿಗೆ ಪೈಪೋಟಿ ನೀಡುವಂತೆ ಬೆಳೆದಿರುತ್ತಾರೆ.
ಇದು ಬರೀ ಕರಾವಳಿಯ ಮಾತಲ್ಲ. ಇಡೀ ದೇಶದಲ್ಲಿ ಮಂಗಳಮುಖಿಯರು ಎಲ್ಲಿದ್ದರೋ ಅಲ್ಲಿ ಎಲ್ಲ ಈ ನಕಲಿ ಮಂಗಳಮುಖಿಯ ಕೆಲಸ ಕೂಡ ನಡೆಯುತ್ತದೆ. ಇಂತಹ ನಕಲಿ ಮಂಗಳಮುಖಿಯರನ್ನು ಹಿಡಿಯಲು ಪೊಲೀಸ್ ಇಲಾಖೆ ಕೂಡ ಸೋತು ಬಿಟ್ಟಿದೆ. ಮತ್ತೊಂದು ಕಡೆ ನಕಲಿ ಮಂಗಳಮುಖಿಯರ ಪತ್ತೆಗಾಗಿ ಮಂಗಳಮುಖಿಯರು ತಮ್ಮದೇ ತಂಡ ಕಟ್ಟಿಕೊಂಡು ಹುಡುಕಾಟ ಆರಂಭಿಸಿದ್ದಾರೆ ಎನ್ನುತ್ತಾರೆ ಮಂಗಳೂರಿನ ಮಂಗಳಮುಖಿಯರ ಮುಖ್ಯಸ್ಥೆ ರಾಣಿ ಅವರ ಮಾತು.
ಕುಡ್ಲಕ್ಕೆ ಜಿಂದಾಲ್ ರಾಣಿ:
ಎಲ್ಲರಂತೆ ನಾವು ಕೂಡ ಮನುಷ್ಯರು. ನಿಮ್ಮಲ್ಲಿ ಓಡುವ ರಕ್ತವೇ ನಮ್ಮಲ್ಲೂ ಓಡುತ್ತಿದೆ. ಇದೇ ಗಾಳಿ, ಬೆಳಕಿನ ಜತೆಯಲ್ಲಿಯೇ ಬದುಕು ಕಟ್ಟುತ್ತೇವೆ. ನಮ್ಮನ್ನು ಕೂಡ ನಿಮ್ಮಂತೆ ಕಾಣಿ ಎಂದು ಕಣ್ಣಲ್ಲಿ ನೀರು ತಂದುಕೊಂಡರು ಮಂಗಳಮುಖಿ ರಾಣಿ.
ಇವರು ಮೂಲತಃ ಆಂಧ್ರ ಪ್ರದೇಶದವರು. ಜಿಂದಾಲ್ ರಾಣಿ ಎಂದೇ ಅಡ್ಡಾ ಹೆಸರು ಇದೆ. ಅಂದಹಾಗೆ ಇವರ ಮೂಲ ಹೆಸರು ರಾಘವೇಂದ್ರ. ರಾಘು ಎಂದೇ ಅಕ್ಕರೆಯಿಂದ ಕರೆಯುತ್ತಿದ್ದರು. ಐದನೇ ತರಗತಿ ತನಕ ಓದಿದ್ದಾರೆ. ಶಾಲೆಗೆ ಹೋಗುತ್ತಿದ್ದಂತೆಯೇ ರಾಘು ರಾಣಿಯಾಗಿ ಬದಲಾವಣೆಗೊಳ್ಳಲು ಆರಂಭವಾದರು. ಶಾಲೆಯಲ್ಲಿ ಎಲ್ಲರಿಂದಲೂ ತಿರಸ್ಕಾರ. ಮನೆಯಲ್ಲೂ ಅಸಡ್ಡೆ. ಮನೆ ಬಿಡುವುದು ಅನಿವಾರ್ಯ ಎಂಬಂತಹ ಸ್ಥಿತಿ. ನಂತರ ಮುಂಬಯಿಗೆ ಪಯಣ.
ಅಲ್ಲಿ ಮಂಗಳ ಮುಖಿಯರೊಂದಿಗೆ ಜೀವನ. ಮಂಗಳ ಮುಖಿಯರ ವಿಧಿ ವಿಧಾನಗಳಿಗೆ ಹೊಂದಿಕೊಂಡು ಜೀವನ ನಡೆಸತೊಡಗಿದರು. ಸಮಾಜವನ್ನು ನೋಡುತ್ತಿದ್ದಂತೆಯೇ ತನಗೂ ಮನೆಗೆ ಹೋಗಬೇಕು ಎನ್ನುವ ಹಂಬಲ. ಈಗಿನ ಸ್ಥಿತಿಯಲ್ಲಿ ನೋಡಿದರೆ ಅದು ಅವರಿಗೆ ಅಸಾಧ್ಯದ ಮಾತು. ಮನೆಯವರಿಗೆ ತಾನು ಗಂಡಾಗಿ ಬಂದರೆ ಬೇಕು. ಈ ಮಂಗಳ ಮುಖಿಯಾಗಿರುವುದಕ್ಕೆ ವಿರೋಧ. ಒಟ್ಟಿನಲ್ಲಿ ಈ ಸ್ಥಿತಿ ಯಾರಿಗೂ ಬರಬಾರದು ಎಂಬ ವೇದನೆಯ ಮಾತು.
ಇದು ಬರೀ ರಾಣಿ ಎನ್ನುವ ಮಂಗಳ ಮುಖಿಯ ಕತೆಯಲ್ಲ. ದೇಶದಲ್ಲಿ ಲಕ್ಷ ಗಟ್ಟಳೆ ಮಂಗಳಮುಖಿಯರ ಕತೆ ಕೂಡ ಇಲ್ಲಿಂದಲೇ ಅರಂಭವಾಗಿ ಬಿಡುತ್ತದೆ. ಮನೆಯವರಿಗೂ ಬೇಡ, ಸಮಾಜಕ್ಕೂ ತಾತ್ಸಾರ, ಸರಕಾರಕ್ಕೂ ಮತ ಇಲ್ಲ ಎನ್ನುವ ಕಾರಣಕ್ಕೆ ಅವರಿಂದಲೂ ತಿರಸ್ಕಾರ. ಟೋಟಲಿ ಮಂಗಳವಾಗದ ಮಂಗಳಮುಖಿಯರ ಜೀವನ ದೇವರಿಗೆಯೇ ಪ್ರೀತಿ ಎನ್ನಲು ಯಾವುದೇ ಅಡ್ಡಿಪಡಿಸುವ ಮಾತುಗಳಿಲ್ಲ. ಕೊನೆಯಲ್ಲಿ ಉತ್ತರ ಇಲ್ಲದ ಪ್ರಶ್ನೆಯೊಂದು ಕಾಡುತ್ತದೆ. ಅದೇ ಮಂಗಳಮುಖಿಯರು ಜೀವ ಇರುವ ಪ್ರಾಣಿ- ಪಕ್ಷಿಗಳಿಗಿಂತ ಕೀಳಾಗಿ ಹೋದ್ರಾ....
ತುಂಬಿದ ಕೊಡ ತುಳುಕಿದೆ ಗೋವಾದಲ್ಲಿ ಡಿಜೆ ಪ್ಯಾರೀಸ್ ರಾಕ್ಸ್ !
ತಣ್ಣನೆಯ ಗಾಳಿಗೆ ಮೈಯೊಡ್ಡಿಕೊಂಡು ಪ್ಯಾರಿಸ್ ಹಿಲ್ಟನ್ ಡಿಜೆಯಾಗಿ ಕುಣಿಯುವ ಸಖತ್ ದೃಶ್ಯಗಳನ್ನು ಅವಳ ಅಭಿಮಾನಿಗಳು ಕಣ್ಣು ತುಂಬಿಸಿಕೊಳ್ಳಲಿ ಎಂದು ಹಿಲ್ಟನ್ ಪ್ರಿಯಕರ ರಿವರ್ ವೀಪಿರಿ ಟ್ಟಿಟ್ಟರ್ನಲ್ಲಿ ಹಾಕಿ ಮಜಾ ನೋಡಿದ್ದಾನೆ. ಅದರಲ್ಲೂ ಹಿಲ್ಟನ್ ಗೋವಾವನ್ನು ತುಂಬಾ ಪ್ರೀತಿಯಿಂದ ‘ಬ್ಲೇಸ್ಡ್ ಆಂಡ್ ಮ್ಯಾಜಿಕಲ್’ ಸ್ಟೇಟ್ ಎಂದು ಕರೆದು ಭಾರತವನ್ನು ಸಿಕ್ಕಾಪಟ್ಟೆ ಹೊಗಳಿದ್ದಾಳೆ.
ಅಗಾಧ ಪ್ರತಿಭೆಯ ಮತ್ತು ಅದರಷ್ಟೇ ವಿವಾದಗಳನ್ನು ಮೈಮೇಲೆ ಹೊದ್ದುಕೊಂಡಿರುವ ಸೂಪರ್ ಹಾಟ್ ನಟಿ, ಹಾಡುಗಾರ್ತಿ, ಮಾಡೆಲ್, ಲೇಖಕಿ, ಫ್ಯಾಶನ್ ಡಿಸೈನರ್, ಉದ್ಯಮಿ, ಕೋಟ್ಯಾನುಕೋಟಿ ಆಸ್ತಿಯ ಒಡತಿ, ದಾನಿ, ಬಾರ್ಬಿ ಡಾಲ್ ಈ ಎಲ್ಲ ಟ್ಯಾಗ್ಲೈನ್ ನಲ್ಲಿರುವ ಪ್ಯಾರಿಸ್ ಹಿಲ್ಟನ್ ಈಗ ಗೋವಾದಲ್ಲಿ ಕಾಣಿಸಿಕೊಂಡಿದ್ದಾರೆ. ಮದಿರೆಯ ನಾಡು ಗೋವಾದಲ್ಲಿ ಪ್ಯಾರಿಸ್ ಹಿಲ್ಟನ್ಗೆ ಏನೂ ಕೆಲಸ ಅಂತಾ ತಲೆ ಕೆಡಿಸಿಕೊಂಡಿದ್ದಾರಾ..? ಹಾಗಾದರೆ ಪ್ಯಾರಿಸ್ ಗೋವಾದ ಕ್ಯಾಂಡೋಲಿಮ್ ಬೀಚ್ ನಲ್ಲಿ ನಡೆದ ಇಂಡಿಯನ್ ರೆಸಾರ್ಟ್ -ಶನ್ ವೀಕ್ವೊಂದರ ಕಾರ್ಯಕ್ರಮದಲ್ಲಿ ಡಿಜೆಯಾಗಿ ಕಾಣಿಸಿಕೊಂಡಿದ್ದಾರೆ.
ತಣ್ಣನೆಯ ಗಾಳಿಗೆ ಮೈಯೊಡ್ಡಿಕೊಂಡು ಪ್ಯಾರಿಸ್ ಹಿಲ್ಟನ್ ಡಿಜೆಯಾಗಿ ಕುಣಿಯುವ ಸಖತ್ ದೃಶ್ಯಗಳನ್ನು ಅವಳ ಅಭಿಮಾನಿಗಳು ಕಣ್ಣು ತುಂಬಿಸಿಕೊಳ್ಳಲಿ ಎಂದು ಹಿಲ್ಟನ್ ಪ್ರಿಯಕರ ರಿವರ್ ವೀಪಿರಿ ಟ್ಟಿಟ್ಟರ್ನಲ್ಲಿ ಹಾಕಿ ಮಜಾ ನೋಡಿದ್ದಾನೆ. ಅದರಲ್ಲೂ ಹಿಲ್ಟನ್ ಗೋವಾವನ್ನು ತುಂಬಾ ಪ್ರೀತಿಯಿಂದ ‘ಬ್ಲೇಸ್ಡ್ ಆಂಡ್ ಮ್ಯಾಜಿಕಲ್’ ಸ್ಟೇಟ್ ಎಂದು ಕರೆದು ಭಾರತವನ್ನು ಸಿಕ್ಕಾಪಟ್ಟೆ ಹೊಗಳಿದ್ದಾಳೆ.
‘ನಾನು ಬಹಳ ಸಂತೋಷವಾಗಿದ್ದೇನೆ. ನೀರಿನ ಮೇಲೆ ತೂಗುವ ಮನೆಯಲ್ಲಿ ನಾನು ಹಾಗೂ ರಿವರ್ ವೀಪಿರಿ ಬಹಳ ಖುಷಿಪಟ್ಟೆವು. ನಿಜಕ್ಕೂ ಬದುಕಿನ ಶಾಂತಿಯ ದಿನಗಳು ನಾನು ಇಲ್ಲಿ ಕಳೆದಿದ್ದೇನೆ. ಒಂದು ರೀತಿಯ ಮ್ಯಾಜಿಕ್ ಹಾಗೂ ಇದು ನನಗೆ ದೇವರು ಕೊಟ್ಟ ಆಶೀರ್ವಾದ ಎಂದು ಕೊಂಡಿದ್ದೇನೆ ’ ಎಂದು ಪ್ರಿಯಕರನ ಜತೆಯಲ್ಲಿ ಹಿಲ್ಟನ್ ಟ್ವಿಟ್ಟ್ ಮಾಡಿದ್ದಾಳೆ.
ರೆಸಾರ್ಟ್ -ಶನ್ ವೀಕ್
ಪ್ರತಿ ವರ್ಷನೂ ಗೋವಾದ ಬೀಚ್ನಲ್ಲಿ ನಡೆಯುವ ರೆಸಾರ್ಟ್ -ಶನ್ವೀಕ್ನಲ್ಲಿ ಹಾಲಿವುಡ್-ಬಾಲಿವುಡ್ ನಟ, ನಟಿಯರು ಇಲ್ಲಿ ಅತಿಥಿಯಾಗಿ ಬಂದು ಡಿಜೆಯಾಗಿ ಬದಲಾವಣೆಗೊಳ್ಳುತ್ತಾರೆ. ಈ ಬಾರಿ ಪ್ಯಾರಿಸ್ ಹಿಲ್ಟನ್ ಸರದಿ ಬಂದಿತ್ತು. ನೀಲಿ ಬಣ್ಣ ದ ಬಿಕಿನಿ ತೊಟ್ಟು ಕಪ್ಪುಕನ್ನಡ ಹಾಕಿಕೊಂಡು ಪ್ಯಾರಿಸ್ ಕೈಬೀಸುತ್ತಿದ್ದರೆ ನೆರೆದವರು ನಾಚಿನೀರಾಗಿದ್ದರು.
ಈ ಬಾರಿಯ ರೆಸಾರ್ಟ್ -ಶನ್ ವೀಕ್ನಲ್ಲಿ ಖ್ಯಾತ ಡಿಸೈನರ್ಗಳಾದ ಡ್ಯೂ ಶ್ಯಾನೇ ಹಾಗೂ ಪಲ್ಗುಣಿ ಪಿಕಾಕ್ ಅವರಿಂದ ಡಿಸೈನ್ ಮಾಡಲಾದ ಡಿಸೈನ್ ಬಟ್ಟೆಗಳನ್ನು ರೂಪದರ್ಶಿಗಳು ತೊಟ್ಟು ರ್ಯಾಂಪ್ನಲ್ಲಿ ನಡೆದು ಪ್ರದರ್ಶನ ನೀಡಿದರು. ಡಿಜೆಯಾಗಿ ಹಿಲ್ಟನ್ ಕೊರಿಯಾ ಮೂಲದ ಖ್ಯಾತ ಹಾಡು ಗಂಗ್ನಮ್ಗೆ ಡಿಜೆ ಮಿಕ್ಸಿಂಗ್ನಲ್ಲಿ ಅರೆದು ಕೊಟ್ಟ ಹಾಡು ಅಭಿಮಾನಿಗಳನ್ನು ಮೋಡಿ ಮಾಡಿತ್ತು. ಮುಂಬಯಿ, ದಿಲ್ಲಿ, ಹೈದರಾಬಾದ್ , ಚೆನ್ನೈ ಹಾಗೂ ಐರ್ಲ್ಯಾಂಡ್, ನ್ಯೂಯಾರ್ಕ್, ಲಂಡನ್ನಿಂದ ಬಂದ ಪ್ರೇಕ್ಷಕರು ರೆಸಾರ್ಟ್ -ಶನ್ ವೀಕ್ನಲ್ಲಿ ಭಾಗವಹಿಸಿದ್ದರು.
ಹಿಲ್ಟನ್ ಭಾರತಕ್ಕೆ ಸೆಕೆಂಡ್ ಶಿಪ್ಟ್:
ಅಂದಹಾಗೆ ಬಹಳಷ್ಟು ಮಂದಿಗೆ ಪ್ಯಾರಿಸ್ ಹಿಲ್ಟನ್ ಭಾರತಕ್ಕೆ ಇದು ಎರಡನೇಯ ಭೇಟಿ ಎನ್ನುವ ವಿಚಾರ ಗೊತ್ತಿರಲು ಸಾಧ್ಯವಿಲ್ಲ. ಕಳೆದ ವರ್ಷ ಹಿಲ್ಟನ್ ಮುಂಬಯಿಗೆ ಬಂದಿದ್ದರು. ತಮ್ಮದೇ ಬ್ರ್ಯಾಂಡ್ನ ಚಪ್ಪಲಿ, ಹ್ಯಾಂಡ್ ಬ್ಯಾಗ್, ಟಿ-ಶರ್ಟ್, ಸ್ಯಾನಿಟಿ ಬಬಲ್ ಟಾಪ್ ಗಳನ್ನು ಮಾರಾಟ ಮಾಡಲು ಪ್ಯಾರಿಸ್ ಭಾರತಕ್ಕೆ ಬಂದಿದ್ದರು. ಈಗಾಗಲೇ ಈಕೆಯ ಉತ್ಪನ್ನಗಳು ೩೫ ದೇಶಗಳಲ್ಲಿ ಭರ್ಜರಿ ಮಾರಾಟ ಕಾಣುತ್ತಿವೆ. ಈಗ ಭಾರತವೂ ಈ ಪಟ್ಟಿಗೆ ಸೇರಿದೆ. ಭಾರತದ ಬ್ರ್ಯಾಂಡ್ ಕಾನ್ಸೆಪ್ಟ್ಸ್ ಎಂಬ ಕಂಪನಿ ಜತೆಗೆ ಕೈಜೋಡಿಸಿ ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲು ಪ್ಯಾರಿಸ್ ಒಪ್ಪಂದ ಮಾಡಿಕೊಂಡಿದ್ದರು.
ತುಂಬಿದ ಕೊಡ ತುಳುಕಿತ್ತು:
ತಮ್ಮದೇ ಹೆಸರಿನ ರಿಯಾಲಿಟಿ ಶೋಗಳಿಂದ ಮತ್ತು ಸಣ್ಣಪುಟ್ಟ ಪಾತ್ರಗಳಿಂದ ದೊಡ್ಡ ಹೆಸರು ಗಿಟ್ಟಿಸಿಕೊಂಡಿರುವ ಹಿಲ್ಟನ್ ಮರಿವಾನಾ ಮಾದಕ ದ್ರವ್ಯದೊಂದಿಗೆ ಫ್ರಾನ್ಸ್ ನಲ್ಲಿ ಸಿಕ್ಕಿಬಿದ್ದದ್ದು ತೀರಾ ಹಳೆಯ ಸುದ್ದಿ . ನಂತರ ಯೂರೋಪ್ ಪ್ರವಾಸದಲ್ಲಿದ್ದಾಗ ಈಜಾಟದಲ್ಲಿ ಮೈಮರೆತ ಆಕೆ ಪರಿವೆ ಇಲ್ಲದಂತೆ ಅರಿವೆ ಕಳಚಿಕೊಂಡಿದ್ದರು. ಆ ರೋಮಾಂಚಕ ದೃಶ್ಯಗಳು ಕ್ಯಾಮೆರಾದಲ್ಲಿ ಬಂಧಿಯಾಗಿತ್ತು.
ಪ್ಯಾರಿಸ್ ಹಿಲ್ಟನ್ ಕುಂಭ ದರ್ಶನದ ಚಿತ್ರಗಳನ್ನು ಯಥಾವತ್ತಾಗಿ ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿತ್ತು. ಸನ್ ಗ್ಲಾಸ್ ತೊಟ್ಟು ಬಿಕಿನಿಯೊಂದಿಗೆ ಹಾಯಿ ದೋಣಿಯಲ್ಲಿ ವಿಹರಿಸುತ್ತಾ ಕೆಲವು ಫೋಟೋಗಳು, ಬಳಿಕ ಟಾಪ್ ಲೆಸ್ ನಲ್ಲಿ ತಂಗಾಳಿಗೆ ಎದೆಯೊಡ್ಡಿದ ಕೆಲವು ಫೋಟೋಗಳನ್ನು ಸ್ವತಃ ಆಕೆಯ ತಂಗಿ ನಿಕಿ ಹಿಲ್ಟನ್ ಸೆರೆಹಿಡಿದಿದ್ದರು.
ಎಲ್ಲವೂ ಕೊಟ್ಟರೆ ಮತ್ತೆ ಬರೋದಿಲ್ಲ:
ನಾನು ಕೆಲವೇ ಕೆಲವು ವ್ಯಕ್ತಿಗಳ ಜತೆ ಮಾತ್ರ ಹಾಸಿಗೆ ಹಂಚಿಕೊಂಡಿದ್ದೇನೆ. ಜನ ಏನು ಬೇಕಾದರೂ ಮಾತಾಡಿಕೊಳ್ಳಬಹುದು. ಆದರೆ ನಾನು ಹೆಚ್ಚಿನ ಸಂದರ್ಭಗಳಲ್ಲಿ ಕಿಸ್ ಮಾತ್ರ ಕೊಡುತ್ತಿದ್ದೆ. ನಮಗೆ ಬೇಕಾದುದನ್ನು ಪಡೆದುಕೊಳ್ಳಲು ಸಿದ್ಧರಾಗಿರಬೇಕಾಗುತ್ತದೆ ಎಂಬುದು ನನ್ನ ಅನಿಸಿಕೆ ಎಂದು ನಟಿ ಪ್ಯಾರಿಸ್ ಹಿಲ್ಟನ್ ಸೆಕ್ಸ್ ಜೀವನದ ಬಗ್ಗೆ ಹೇಳಿಕೊಂಡಿದ್ದರು.
ನೀವು ಒಮ್ಮೆಲೇ ಎಲ್ಲವನ್ನೂ ಗೆಳೆಯನಿಗೆ ಕೊಟ್ಟು ಬಿಟ್ಟರೆ ನಿಮ್ಮನ್ನು ಗೌರವಿಸುವುದೇ ಇಲ್ಲ. ಹಾಗಾಗಿ ನಿಧಾನಗತಿಯಿಂದ ಮುಂದುವರಿಯಬೇಕು. ನಾನು ಯಾವ ಪುರುಷನನ್ನೂ ಅವಲಂಭಿಸಿಲ್ಲ. ನಾನೊಬ್ಬ ಶಕ್ತಿಯುತ ಮಹಿಳೆಯಾಗಿದ್ದು ಬೇಕಾದದ್ದನ್ನು ಪಡೆದುಕೊಳ್ಳಲು ಅರ್ಹಳಿದ್ದೇನೆ ಎನ್ನುವುದು ಆಕೆಯ ಅಭಿಮತ. ಯಾರಿಗೂ ಹರಿದು ಹೋದ ಬ್ಯಾಗ್ಗಳು ಬೇಕಾಗಿರುವುದಿಲ್ಲ. ಎಲ್ಲರೂ ಹೊಸತು ಮತ್ತು ಯಾರಿಗೂ ಸಿಕ್ಕಿರದ ಬ್ಯಾಗ್ಗಳ ಹುಡುಕಾಟದಲ್ಲಿರುತ್ತಾರೆ. ಹಾಗಾಗಿ ಅದು ಅಮೂಲ್ಯವೆನಿಸುತ್ತದೆ ಎನ್ನುವ ಮಾತುಗಳ ಮೂಕ ಹಿಲ್ಟನ್ ದಂಗು ಮೂಡಿಸಿದ್ದಳು.
ನಾಯಿಮರಿಗಳೆಂದರೆ ಬಲು ಇಷ್ಟ:
ಹಿಲ್ಟನ್ ಸಣ್ಣ ನಾಯಿ ಮರಿಗಳನ್ನು ಬಹಳ ಪ್ರೀತಿಸುತ್ತಿದ್ದರು. ಪೊದೆಗೂದಲಿನ ಸಣ್ಣ ನಾಯಿ ಮತ್ತು ನುಣುಪು ಕೂದಲಿನ ಜಾತಿಯ ಹೆಣ್ಣು ನಾಯಿಯನ್ನು ಸಾಕಿದ್ದರು. ಇದಕ್ಕೆ ‘ಟಿಂಕರ್ ಬೆಲ್’ ಎಂದು ಹೆಸರಿಟ್ಟಿದ್ದರು. ಪ್ಯಾರೀಸ್ ಹಿಲ್ಟನ್ ಸತತವಾಗಿ ‘ಟಿಂಕರ್ಬೇಲ್’ ತಮ್ಮೊಂದಿಗೆ ಎಲ್ಲ ಸಾಮಾಜಿಕ ಸಭೆಗಳಿಗೆ ಮತ್ತು ಸಮಾರಂಭಗಳಿಗೆ ಹಾಗೂ ಸಿಂಪಲ್ ಲೈಫ್ ಎನ್ನುವ ಜನಪ್ರಿಯ ಟಿ.ವಿ ರಿಯಾಲಿಟಿ ಶೋನಲ್ಲಿ ಕರೆತರುತ್ತಿದ್ದರು.
೨೦೦೪ರಲ್ಲಿ ‘ಟಿಂಕರ್ಬೆಲ್ ನಾಯಿ’ಯೊಂದಿಗೆ ಘಟನಾವಳಿಗಳ ಕುರಿತು ‘ದಿ ಟಿಂಕರ್ಬೆಲ್ ಹಿಲ್ಟನ್ ಡೈರೀಸ್’ ಎಂಬ ಪುಸ್ತಕವನ್ನು ಬರೆಯಲಾಗಿತ್ತು. ಹಿಲ್ಟನ್ರವರ ಮನೆಯಲ್ಲಿ ಕಳ್ಳತನವಾದ ನಂತರ ‘ಟಿಂಕರ್ಬೆಲ್’ ನಾಪತ್ತೆ ಆಗಿತ್ತು. ಅದನ್ನು ಸುರಕ್ಷಿತವಾಗಿ ಹುಡುಕಿ ತಂದುಕೊಟ್ಟವರಿಗೆ ೫ ಸಾವಿರ ಡಾಲರ್ ನಷ್ಟು ಹಣವನ್ನು ಬಹುಮಾನವಾಗಿ ನೀಡಲಾಗುವುದೆಂದು ಹೇಳಿದ್ದರು. ಆರು ದಿನಗಳ ನಂತರ ಅವರ ಮುದ್ದಿನ ‘ಟಿಂಕರ್ಬೆಲ್’ ನಾಯಿ ಅವರಿಗೆ ಸಿಕ್ಕಿತ್ತು. ಮತ್ತೆ ಹಿಲ್ಟನ್ರೊಂದಿಗೆ ನಾನಾ ಸಮಾರಂಭಗಳಲ್ಲಿ ಕಾಣಿಸಿಕೊಂಡಿತ್ತು.
ಮಾನವರ ಉತ್ತಮ ಸ್ನೇಹಿತನಾದ ನಾಯಿ ಮೇಲಿರುವ ಪ್ರೀತಿಯಿಂದ ಹಿಲ್ಟನ್ರವರು ನಾಯಿಗಳಿಗಾಗಿ ಲಿಟಿಲ್ ಲಿಲ್ಲಿ ಎನ್ನುವ ನಾಯಿ ವಸ್ತ್ರಗಳನ್ನು ಸಜ್ಜುಗೊಳಿಸಿದರು. ಇಂತಹ ಕೆಲಸಗಳಿಂದ ಪ್ರಾಣಿಗಳನ್ನು ಅಪಾಯದಿಂದ ಪಾರುಮಾಡಬಹುದು ಎಂಬ ಆಶಯ ಅವರದು. ಹಿಲ್ಟನ್ ಸುಪರ್ ಬೌಲ್ ಉತ್ಸವಗಳ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ನನ್ನ ಬಳಿ ಹದಿನೇಳು ನಾಯಿಗಳಿವೆ ಮತ್ತು ನಾನು ಅವುಗಳಿಗೆ ಉಡುಗೆ ತೊಡಿಸಲು ಇಷ್ಟಪಡುತ್ತೆ ನೆ ಎಂದಿದ್ದರು.
.....
Saturday, October 13, 2012
ಕಾಲಿವುಡ್ ಗಲ್ಲಿಯಲ್ಲಿ ಐಶ್ವರ್ಯಾ
* ಸ್ಟೀವನ್ ರೇಗೊ, ದಾರಂದಕುಕ್ಕು
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೀರೋಯಿನ್ ಆಗಿದ್ದಾಯ್ತು. ರಜನಿಕಾಂತ್ ಪುತ್ರಿಯರಾದ ಸೌಂದರ್ಯಾ ಮತ್ತು ಐಶ್ವರ್ಯಾ ಡೈರೆಕ್ಟರುಗಳಾದ್ರು. ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ನಾಯಕಿಯಾದ್ರು. ಈಗ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿಯ ಸರದಿಯಲ್ಲಿ ನಿಂತು ಕಾಯುತ್ತಿದ್ದಾರೆ. ಇತ್ತ ಕಡೆ ಬಲಗಾಲಿಟ್ಟು ಬಾ ಎನ್ನುತ್ತಿದೆ ಕಾಲಿವುಡ್.. ಟೋಟಲ್ ಫ್ರೆಶ್ ಫೇಸ್ ನ ಹುಡುಕಾಟದಲ್ಲಿರುವ ಪ್ರೇಕ್ಷಕನಿಗೆ ಭರ್ಜರಿ ಸುದ್ದಿ ಕಾದಿದೆ.
ಕಾಲಿವುಡ್ ರಂಗೀನ್ ಗಲ್ಲಿಯಲ್ಲಿ ಐಶ್ ಹೆಸರು ಕಾಣಿಸಿಕೊಂಡಿದೆ. ಅರೇ ಬಾಲಿವುಡ್ ಚಿತ್ರ ನಿರ್ದೇಶಕರೆಲ್ಲರೂ ಐಶ್ ಮುಂದೆ ಹಿಂದೆ ಜೋತು ಬೀಳುವಾಗ ಯಾಕಪ್ಪಾ ಐಶ್ ಕಾಲಿವುಡ್ ದುನಿಯಾಕ್ಕೆ ಬಂದಳು ಅಂತಾ ಕೇಳ್ತೀರಾ.. ಹಾಗಾದರೆ ನಿಮ್ಮ ಊಹೆ ಟೋಟಲಿ ತಪ್ಪು. ಇದು ಬಾಲಿವುಡ್ ಐಶ್ ಮಾತಲ್ಲ. ಕನ್ನಡ ಅದರಲ್ಲೂ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕುರಿತಾದ ಮಾತು. ಅಂದಹಾಗೆ ಈ ಐಶ್ ಬೇರೆ ಯಾರು ಅಲ್ಲ... ಅರ್ಜುನ್ ಸರ್ಜಾ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಜತೆಯಲ್ಲಿ ರಥಸಪ್ತಮಿಯಲ್ಲಿ ಕಾಣಿಸಿಕೊಂಡ ನಿವೇದಿತಾ ಅವರ ಪುತ್ರಿ. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೀರೋಯಿನ್ ಆಗಿದ್ದಾಯ್ತು. ರಜನಿಕಾಂತ್ ಪುತ್ರಿಯರಾದ ಸೌಂದರ್ಯಾ ಮತ್ತು ಐಶ್ವರ್ಯಾ ಡೈರೆಕ್ಟರುಗಳಾದ್ರು. ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ನಾಯಕಿಯಾದ್ರು. ಈಗ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿಯ ಸರದಿ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ತೇಲಿ ಬರುತ್ತಿರುವ ಸುದ್ದಿ.
ತಂದೆಯಂತೆ ಕಣ್ಣುಗಳು, ತಾಯಿಯಂತೆ ದೇಹಸಿರಿಯಲ್ಲಿ ಬಳುಕುತ್ತಿರುವ ಹುಡುಗಿ ಐಶ್ವರ್ಯಾ ತಂದೆಯ ಜತೆಯಲ್ಲಿ ಆಗಾಗ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನೋಡಲು ಮುದ್ದಾಗಿರುವ ಐಶ್ವರ್ಯಾ ಅವರದು ಫೋಟೋಜನಿಕ್ ಫೇಸ್. ಚಿತ್ರರಂಗಕ್ಕೆ ಹೇಳಿ ಮಾಡಿಸಿದ ಮುಖ ಎಂಬ ಮಾತುಗಳು ಈ ಹಿಂದೆನೇ ಕೇಳಿಬರುತ್ತಿತ್ತು. ಸಿನಿಮಾ ನಿರ್ದೇಶಕರು ಕೂಡ ಅರ್ಜುನ್ ಮುಂದೆ ಬಹಳಷ್ಟು ಸಲ ಈ ವಿಚಾರವನ್ನೇ ಪ್ರಸ್ತಾಪ ಮಾಡಿದ್ದರು. ಆದರೆ ಅರ್ಜುನ್ ಮಾತ್ರ ಐಶ್ ಆಗಮನಕ್ಕೆ ಇನ್ನೂ ಕೂಡ ಸಮಯವಿದೆ ಎಂದು ಸುಮ್ಮನೆ ಇದ್ದು ಬಿಡುತ್ತಿದ್ದರು. ಆದರೆ ಕಲಾವಿದನ ಮನೆಯಲ್ಲಿ ಇರುವ ಮಂದಿನೂ ಕಲೆಗೆ ಮಾರು ಹೋಗುತ್ತಾರೆ ಎನ್ನುವ ವಿಚಾರ ಅರ್ಜುನ್ ಪಾಲಿಗೆ ಅರಿವಾಗಿದೆ. ಇದೇ ಕಾರಣದಿಂದ ಐಶ್ ಈಗ ಸಿನಿಮಾ ಕ್ಷೇತ್ರಕ್ಕೆ ಬರಲು ಪಕ್ಕಾ ಟೈಮ್ ಎಂದುಕೊಂಡು ಐಶ್ ಗೆ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ದೊಡ್ಡ ನಾಯಕನ ಜತೆಯಲ್ಲಿಯೇ ಮಗಳನ್ನು ನಾಯಕಿಯಾಗಿ ಇಳಿಸಬೇಕು ಎನ್ನೋದು ಕೂಡ ಅರ್ಜುನ್ ಗೆ ಇದ್ದ ಬಹು ದೊಡ್ಡ ಕನಸ್ಸು ಎಂದು ಮಾಧ್ಯಮವೊಂದರಲ್ಲಿ ಈ ಹಿಂದೆ ಅವರೇ ಹೇಳಿಕೊಂಡಿದ್ದರು.
ವಿಶಾಲ್ ಪಾಲಿಗೆ ಸಿಕ್ಕಿದ ಐಶ್:
ಕಾಲಿವುಡ್ ಸಿನಿಮಾ ನಗರಿಯಲ್ಲಿ ನಿರ್ದೇಶಕ ಭೂಪತಿ ಪಾಂಡ್ಯನ್ ಗೆ ತನ್ನದೇ ಆದ ಹೆಸರಿದೆ. ಕಾರಣ ಮಾಸ್ ಚಿತ್ರಗಳನ್ನು ಕೊಟ್ಟು ಪ್ರೇಕ್ಷಕರನ್ನು ತನ್ನ ಜೇಬಿನಲ್ಲಿ ತುಂಬಿಸಿಕೊಳ್ಳುವ ಸಾಮರ್ಥ್ಯ ಗೊತ್ತಿರುವ ನಿರ್ದೇಶಕ ಎಂದೇ ಕಾಲಿವುಡ್ ಪಡಸಾಲೆಯಲ್ಲಿ ಅವರ ಬಗ್ಗೆ ಕೇಳಿ ಬಂದ ಮಾತು. ಇದೇ ಭೂಪತಿ ಪಾಂಡ್ಯನ್ ವಿಶಾಲ್ ಜತೆಯಲ್ಲಿ "ವೇಲ್ ಕೋಟೈ" ಎನ್ನುವ ಚಿತ್ರ ಮಾಡಿ ಇಬ್ಬರಿಗೂ ಬೇಕಾಗುವಷ್ಟು ಹೆಸರು ಸಂಪಾದಿಸಿಕೊಂಡಿದ್ದರು. ಇದೇ ಭೂಪತಿ ಕಾಲಿವುಡ್ ನ ಚಿಯನ್ ವಿಕ್ರಂ ಅವರಿಗೆ ಚಿತ್ರದ ಕತೆಯನ್ನು ಹೇಳಿದ್ದರು. ಆದರೆ ಹಾಸ್ಯ ಜತೆಗೆ ಸಖತ್ ಸಾಹಸ ದೃಶ್ಯಗಳಿರುವ ಚಿತ್ರಗಳನ್ನೇ ಮಾಡುತ್ತಾ ಸುಸ್ತಾದ ಚಿಯನ್ ಈ ಕತೆಯನ್ನು ಮಾಡಲು ಒಲ್ಲೆ ಎಂದಿದ್ದರು.
ಭೂಪತಿ ಕಳೆದ ಎರಡು ವರ್ಷಗಳಿಂದ ಈ ಚಿತ್ರದ ಕತೆಯನ್ನು ಇಟ್ಟುಕೊಂಡು ಕಾಲಿವುಡ್ ಅಂಗಳದಲ್ಲಿ ಬಹಳಷ್ಟು ನಟರನ್ನು ಸಂಪರ್ಕಿಸಿದ್ದರು. ಆದರೆ ಭೂಪತಿ ಪಾಲಿಗೆ ಕಾಣ ಸಿಕ್ಕ ನಟ ವಿಶಾಲ್. ಅಂದಹಾಗೆ ಚಿತ್ರಕ್ಕೆ 'ಪಟ್ಟಾತು ಯಾನೈ' ಎಂದು ಹೆಸರಿಡಲಾಗಿದೆ. ಚಿತ್ರದ ನಿರ್ದೇಶಕ ಭೂಪತಿ ಪಾಂಡಿಯೇನ್ ಹೇಳುವಂತೆ: ಹೌದು. ನಾವು ನಮ್ಮ ಹೊಸ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗಾಗಲೇ ಚಿತ್ರಕ್ಕೆ ಐಶ್ ಸಹಿ ಕೂಡ ಮಾಡಿದ್ದಾರೆ. ಬರುವ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣವನ್ನು ಮಾಡಲು ಅಣಿಯಾಗುತ್ತಿದ್ದೇವೆ. ಐಶ್ ಕೂಡ ನಮ್ಮ ಜತೆ ಕೆಲಸ ಮಾಡಲು ತುಂಬಾ ಉತ್ಸಾಹ ತೋರಿಸಿದ್ದಾರೆ. ಚಿತ್ರದ ಕತೆ ಕುರಿತು ಐಶ್ ಗೆ ಬರೀ ನಿರೀಕ್ಷೆ ಇದೆ. ಚಿತ್ರ ಸಾಹಸದ ಜತೆಯಲ್ಲಿ ಕಾಮಿಡಿಯನ್ನು ಒಳಗೊಂಡಿದೆ ಎನ್ನುತ್ತಾರೆ ಅವರು.
ತಿರುನಲ್ ವೇಲಿ, ಕಾರಿಕಾಡು ಹಾಗೂ ತಿರುಚಿಯಲ್ಲಿ ಚಿತ್ರದ ಶೂಟಿಂಗ್ ಕೆಲಸ ನಡೆಯಲಿದೆ. ಚಿತ್ರದಲ್ಲಿ ಸಂತಾನಂ ಕೂಡ ಒಂದು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮನ್ ಚಿತ್ರದ ಸಂಗೀತ ಹೊಣೆ ಹೊತ್ತಿದ್ದಾರೆ. ಐಶ್ ಪಾಲಿಗೆ ಇದೊಂದು ಚೊಚ್ಚಲ ಚಿತ್ರವಾಗಲಿದೆ. ಕನ್ನಡದ ನಟ ಅರ್ಜುನ್ ಸರ್ಜಾ ಕನ್ನಡ ಚಿತ್ರಗಳ ಮೂಲಕ ತಮಿಳಿಗೆ ಹೋಗಿ ದೊಡ್ಡ ಹೆಸರು ಸಂಪಾದಿಸಿಕೊಂಡು ಬಂದಿದ್ದರು. ಆದರೆ ಐಶ್ ಕಾಲಿವುಡ್ ಚಿತ್ರಕ್ಕೆ ಎಂಟ್ರಿಯಾಗುವ ಮೂಲಕ ಕನ್ನಡಕ್ಕೆ ಬರುತ್ತಾರಾ ಕಾದು ನೋಡಬೇಕು ಎನ್ನುತ್ತಿದೆ ಮೂಲಗಳು.
ಐಶ್ ಎನ್ನುವ ಕಾಲಿವುಡ್ ಸ್ಟುಡೆಂಟ್:
ಅರ್ಜುನ್ ಸರ್ಜಾ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿಯೇ ಐಶ್ವರ್ಯಾ. ಕಿರಿಯ ಪುತ್ರಿಯ ಹೆಸರು ಅಂಜನಾ. ಅರ್ಜುನ್ ಸರ್ಜಾ ಅವರ ಕೈಹಿಡಿದ ಬಳಿಕ ನಿವೇದಿತಾ ಅವರು ಚಿತ್ರರಂಗದಿಂದ ದೂರ ಉಳಿದು ಹೋದರು. ವಿಶ್ಯುವಲ್ ಕಮ್ಯುನಿಕೇಶನ್ಸ್ ಓದುತ್ತಿರುವ ಐಶ್ವರ್ಯಾಳಿಗೆ ಚಿತ್ರದಲ್ಲಿ ದ್ವಿತೀಯ ಪಿಯು ಹುಡುಗಿಯ ಪಾತ್ರವಂತೆ. ಇತ್ತ ಕಡೆ ತನ್ನ ಸೋದರಳಿಯರಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾರನ್ನು ಅಂಕೆಯಿಂದ ಹೊರಗೆ ಹೋಗದಂತೆ ನೋಡಿಕೊಂಡವರು ಅರ್ಜುನ್ ಸರ್ಜಾ. ಹೀಗಿರುವಾಗ ತಂದೆಯಿಂದ ಈಗಾಗಲೇ ನಟನೆಯ ಪಾಠ ಕಲಿತಿರುವ ಐಶ್ವರ್ಯಾ, ಕ್ಯಾಮರಾ ಎದುರಿಸಲು ಸಾಕಷ್ಟು ತಯಾರಿ ಮಾಡಿರಬಹುದು. ಒಟ್ಟಿನಲ್ಲಿ ಸರ್ಜಾ ಕುಟುಂಬದ ಮತ್ತೊಂದು ಕುಡಿ ಬೆಳ್ಳಿತೆರೆ ಬೆಳಗಲು ಸಜ್ಜಾಗಿರುವುದು ಚಿತ್ರೋದ್ಯಮದ ಗಮನಸೆಳೆದಿದೆ. ಬಾಲಿವುಡ್ನಲ್ಲಿ ಖ್ಯಾತನಾಮರ ಪುತ್ರಿಯರು ದೊಡ್ಡ ಹೆಸರು ಮಾಡಿರುವಂತೆ ನಮ್ಮ ಕನ್ನಡ ಮೂಲದ ಹುಡುಗಿಯೂ ಸಿನಿಮಾ ಜಗತ್ತಿನಲ್ಲಿ ಮಿರಮಿರಮಿಂಚಲಿ ಎನ್ನೋದು ಪ್ರೇಕ್ಷಕ ಮಹಾಪ್ರಭುವಿನ ಆಶಯ.
Monday, October 8, 2012
ಬಾಲಿವುಡ್ ಸೆಲ್ಲಿಗಳ ಅಡ್ಡಾ ಹೆಸರು
ರಂಗು ರಂಗಿನ ಬಾಲಿವುಡ್ ಅಡ್ಡಾ ಅಂದರೆ ಹಾಗೆ ಇಲ್ಲಿ ಸೆಲೆಬಿಟ್ರಿಗಳು ಕಿಕ್ ಸ್ಟಾರ್ ಗಳು. ತಮ್ಮ ಅಭಿಮಾನಿಗಳ ಪಾಲಿಗಂತೂ ಇವರು ನಿಲುಕದ ನಕ್ಷತ್ರ ಜತೆಗೆ ಬರೀ ಸಿನಿಮಾ, ಯಾವುದಾದರೂ ಶೋ ಅದನ್ನು ಬಿಟ್ಟರೆ ಸಾಮಾಜಿಕ ತಾಣಗಳಲ್ಲಿ ಜೋತು ಬಿದ್ದವರಿಗೆ ಮಾತ್ರ ಅವರ ದರ್ಶನ ಭಾಗ್ಯ ಲಭ್ಯ. ಉಳಿದಂತೆ ತಮ್ಮ ನೆಚ್ಚಿನ ಸ್ಟಾರ್ ಗಳ ಗುಸುಗುಸು ಸುದ್ದಿ ಮಾಧ್ಯಮದಲ್ಲಿ ತಿಳಿದುಕೊಂಡರೆ ಸಾಕು ಅದೇ ಅಭಿಮಾನಿಗಳ ಪಾಲಿಗೆ ಒಂದು ಸಕ್ಕರೆ ಬೆಲ್ಲ. * ಸ್ಟೀವನ್ ರೇಗೊ, ದಾರಂದಕುಕ್ಕು
ರಂಗು ರಂಗಿನ ಬಾಲಿವುಡ್ ಅಡ್ಡಾ ಅಂದರೆ ಹಾಗೆ ಇಲ್ಲಿ ಸೆಲೆಬಿಟ್ರಿಗಳು ಕಿಕ್ ಸ್ಟಾರ್ ಗಳು. ತಮ್ಮ ಅಭಿಮಾನಿಗಳ ಪಾಲಿಗಂತೂ ಇವರು ನಿಲುಕದ
ನಕ್ಷತ್ರ ಜತೆಗೆ ಬರೀ ಸಿನಿಮಾ, ಯಾವುದಾದರೂ ಶೋ ಅದನ್ನು ಬಿಟ್ಟರೆ ಸಾಮಾಜಿಕ ತಾಣಗಳಲ್ಲಿ ಜೋತು ಬಿದ್ದವರಿಗೆ ಮಾತ್ರ ಅವರ ದರ್ಶನ ಭಾಗ್ಯ ಲಭ್ಯ. ಉಳಿದಂತೆ ತಮ್ಮ ನೆಚ್ಚಿನ ಸ್ಟಾರ್ ಗಳ ಗುಸುಗುಸು ಸುದ್ದಿ ಮಾಧ್ಯಮದಲ್ಲಿ ತಿಳಿದುಕೊಂಡರೆ ಸಾಕು ಅದೇ ಅಭಿಮಾನಿಗಳ ಪಾಲಿಗೆ ಒಂದು ಸಕ್ಕರೆ ಬೆಲ್ಲ.
ಆದರೆ ಬಾಲಿವುಡ್ ನ ಬಹಳಷ್ಟು ಸೆಲೆಬ್ರಿಟಿ ಗಳು ತಮ್ಮ ಒರಿಜಿನಾಲಿಟಿಯನ್ನು ಮುಚ್ಚಿಡುವ ಸಾಧ್ಯತೆಗಳೇ ಜಾಸ್ತಿ. ಅವರ ಸುಖ- ದುಃಖಗಳು, ಏನಾದರೂ ಮಾಡಬೇಕು ಎಂದುಕೊಂಡಾಗ ತಮ್ಮ ಅಭಿಮಾನಿಗಳಿಗೆ ಹೇಗೆ ಅನ್ನಿಸುತ್ತದೆ ಎನ್ನುವ ಅಭಿಪ್ರಾಯಗಳು ಅವರಿಗೂ ಬೇಕಾಗುತ್ತದೆ. ಇದೇ ಒಂದು ಕಾರಣದಿಂದ ಮಾಧ್ಯಮಗಳಿಗಿಂತ ಹೆಚ್ಚಾಗಿ ಸಾಮಾಜಿಕ ತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಬ್ಯುಸಿಯಾಗಿರುವ ಸ್ಟಾರ್ ಸೆಲೆಬ್ರಿಟಿಗಳು ತಮ್ಮ ವಾಸ್ತವ ವಿಚಾರಗಳನ್ನು ಅಭಿಮಾನಿಗಳ ಜತೆಯಲ್ಲಿ ಹಂಚಿಕೊಂಡ ಉದಾಹರಣೆಗಳು ಬಹಳಷ್ಟಿದೆ.
ಅದು ಕೂಡ ತಮ್ಮ ಒರಿಜಿನಾಲಿಟಿ ಬದಲಾಗಿ ತಮ್ಮ ಪೆಟ್ ನೇಮ್( ನಿಕ್ ನೇಮ್) ಗಳ ಮೂಲಕ ಅಭಿಮಾನಿಗಳ ಜತೆ ಕೂತು ಹರಟುತ್ತಾರೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲು ಸಾಧ್ಯವಿಲ್ಲ. ಇಂತಹ ನಿಕ್ ನೇಮ್ ಗಳು ನೋಡುವಾಗ ಕೆಲವೊಂದು ಸಲ ತಮಾಷೆಯಾಗಿ ಕಂಡರೂ ಇನ್ನೂ ಕೆಲವು ಸಲ ವಿಚಿತ್ರವಾಗಿ ಕಾಣುವ ಚಾನ್ಸ್ ಯೇ ಜಾಸ್ತಿ. ಆದರೆ ಸೆಲೆಬ್ರಿಟಿಗಳಿಗಂತೂ ಇದರ ಪರಿವೇ ಇಲ್ಲದೇ ತಮ್ಮಷ್ಟಕ್ಕೆ ಬಾಲಿವುಡ್ ಅಡ್ಡಾದಲ್ಲಿ ಮಸ್ತಾಗಿ ಬದುಕು ಕಟ್ಟುತ್ತಾರೆ. ಇದೇ ನಿಕ್ ನೇಮ್ ಗಳ ಮೂಲಕ ಮುಂಬಯಿ ಸಿನಿಮಾ ಅಂಗಳದಲ್ಲಿ ಒಬ್ಬರು ಮತ್ತೊಬ್ಬ ಸೆಲೆಬ್ರಿಟಿಗಳ ಕಾಲು ಎಳೆದು ಮಜಾ ಕೂಡ ನೋಡುತ್ತಾರೆ.
ಸೆಲೆಬ್ರಿಟಿಗಳ ಮಸ್ತ್ ನಿಕ್:
ಬಾಲಿವುಡ್ ಅಂಗಳದಲ್ಲಿರುವ ಎಲ್ಲ ನಾಯಕ - ನಾಯಕಿಯರು ತಮ್ಮನೈಜ ಹೆಸರಿನ ಬದಲಾಗಿ ತಮ್ಮ ನಿಕ್ ನೇಮ್ ಗಳ ಮೂಲಕವೇ ಗುರುತಿಸಿಕೊಳ್ಳುತ್ತಾರೆ. ಆದರೆ ಅವರ ನೈಜ ಹೆಸರು ಅಭಿಮಾನಿಗಳ ಪಾಲಿಗೆ ಪಠಿಸಲು ಲಭ್ಯ. ಅಂದಹಾಗೆ ಬಾಲಿವುಡ್ ನಟ ಗೋವಿಂದ ಅವರ ನಿಕ್ ನೇಮ್( ಅಡ್ಡಾ ಹೆಸರು) "ಚೀ ಚೀ 'ಎನ್ನೋದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ. ಆದರೆ ಮುಂಬಯಿ ಸಿನಿಮಾ ಗಲ್ಲಿಯಲ್ಲಿ ಇದು ಕಾಮನ್ ಹೆಸರು. ಮತ್ತೊಬ್ಬ ನಟ ಸಲ್ಮಾನ್ ಖಾನ್ ಅವರನ್ನು ಕರೆಯವುದು "ಸಲ್ಲು ಭಾಯಿ '. ಇಂತಹ ನಿಕ್ ನೇಮ್ ಗಳು ಹೇಗೆ ಬಂತು ಅಂತಾ ಖುದ್ಧು ಸೆಲೆಬ್ರಿಟಿಗಳಿಗೂ ಗೊತ್ತಿಲ್ಲ. ಕಾರಣ ಯಾವುದೇ ಘಟನೆ ಅಥವಾ ಇತರ ಸಂಬಂಧದ ಆಧಾರದಲ್ಲಿ ಈ ಅಡ್ಡಾ ಹೆಸರು ಬಿದ್ದಿರುತ್ತದೆ. ಆದರೆ ಒಂದು ಮೂಲದ ಪ್ರಕಾರ ಗೋವಿಂದ ಅವರಿಗೆ ಈ ಹೆಸರು ಕೊಟ್ಟಿದ್ದು ಮಾತ್ರ ನಟ ಸಲ್ಮಾನ್ ಖಾನ್. ಬಾಲಿವುಡ್ ಚಿತ್ರ "ಪಾರ್ಟನರ್' ನಲ್ಲಿ ಗೋವಿಂದ ಅವರ ಸಂಬಂಧಿತ ದೃಶ್ಯವೊಂದರ ಆಧಾರದಲ್ಲಿ ಈ ಹೆಸರು ಬಿತ್ತು. ಅದೇ ಸಲ್ಮಾನ್ ಗೂ ಕೂಡ ಈ ಹೆಸರು ಕೊಟ್ಟದ್ದು ಗೋವಿಂದ ಇಬ್ಬರು ಒಳ್ಳೆಯ ಗೆಳೆಯರು.
ಅಂದಹಾಗೆ ಬಾಲಿವುಡ್ ನಟ ರಿಷಿ ಕಪೂರ್ ಅವರನ್ನು "ಚಿಂಟು' ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಅವರ ಮನೆಯಲ್ಲಿದ್ದ ರಿಷಿಯ ಪ್ರೀತಿಯ ನಾಯಿ ಹೆಸರು "ಚಿಂಟು 'ಎಂದಾಗಿತ್ತು. ಅದೇ ರೀತಿ ರಿಷಿ ಕಪೂರ್ ತಮ್ಮ ಮಕ್ಕಳಾದ ರೀದಿಮಾ ಹಾಗೂ ರಣ್ ಬೀರ್ ಅವರನ್ನು ಕೂಡ ಒಂದು ನಾಯಿಯ ಹೆಸರನ್ನು ಕೊಡಲು ಪ್ರಯತ್ನ ಪಟ್ಟಿದ್ದಾರಂತೆ. ಆದರೆ ಮನೆಯಲ್ಲಿದ್ದವರ ವಿರೋಧದ ಆಧಾರದಲ್ಲಿ ಈಗೀನ ಹೆಸರು ಮಕ್ಕಳಿಗೆ ಬಂತು. ಅದೇ ಬಾಲಿವುಡ್ ನಟ ಹೃತಿಕ್ ರೋಷನ್ ಅಡ್ಡಾ ಹೆಸರು "ಡುಗ್ಗು'. ಈ ಹೆಸರು ಯಾಕೆ ಬಂತು ಅಂದರೆ ಹೃತಿಕ್ ಗೆ ನಾಯಿ ಮೇಲೆ ವಿಶೇಷ ಪ್ರೀತಿ. ಅವರ ಮನೆಯಲ್ಲಿ ಸಾಕಿಕೊಂಡಿದ್ದ ನಾಯಿಯೊಂದು ಮೃತಪಟ್ಟಿತ್ತು. ಅದರ ಹೆಸರು "ಡುಗ್ಗು' ಎಂದೇ ಮನೆಯವರು ಕರೆಯುತ್ತಿದ್ದರು. ಈ ನಾಯಿ ಹೋದ ನಂತರ ಅದರ ಹೆಸರನ್ನು ಹೃತಿಕ್ ರೋಷನ್ ಅವರ ಅಡ್ಡಾ ಹೆಸರಿನಿಂದ ಕರೆಯಲು ಮನೆಯವರು ಆರಂಭ ಮಾಡಿದ್ದರು.
ರಣ್ ಬೀರ್ ಕಪೂರ್ ಅವರನ್ನು ಅವರ ತಾಯಿ ನೀತೂ ಸಿಂಗ್ ಕಪೂರ್ ಕರೆಯುವುದು "ರೈಮಂಡ್' ಎಂದೇ ಯಾಕ್ ಹೀಗೆ ಅಂತಾ ಕೇಳ್ತೀರಾ..? ನೀತು ಹೇಳುವಂತೆ ರಣ್ ಬೀರ್ ಒಬ್ಬ ಪರ್ಫೆಕ್ಟ್ ಮ್ಯಾನ್. ದೇವರು ತನ್ನ ಶಕ್ತಿಯನ್ನು ಧಾರೆ ಎರೆದು ಕೊಟ್ಟ ಪುತ್ರನೇ ರಣ್ ಬೀರ್ ಎನ್ನೋದು ನೀತೂ ಸಿಂಗ್ ಕಪೂರ್ ಅವರ ಬಲವಾದ ನಂಬಿಕೆ. ಇತ್ತ ಕಡೆ ಸೋನಂ ಕಪೂರ್ ಕೂಡ ತನ್ನ ಅಡ್ಡಾ ಹೆಸರು "ಗ್ರೀಪ್ಪಿ' ಎಂದು ಕರೆಯಲು ಇಷ್ಟಪಡುತ್ತಾರೆ. ಯಾಕ್ ಅಂದರೆ ತಂದೆ ನಟ ಅನಿಲ್ ಕಪೂರ್ ಬಹಳ ಉದ್ದವಾಗಿರೋದು ಇದಕ್ಕೆ ಕಾರಣ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ನಿಕ್ ನೇಮ್ "ಮಾನ್ಯ' ಎನ್ನುತ್ತಾರೆ. ಆದರೆ ಶಿಲ್ಪಾ ತಾಯಿ ಅವರನ್ನು ಕರೆಯುವುದು "ಬಂಬೂಚಾ ಅರ್ಥಾತ್ ಹನೀಬಂಚ್'. ಕರೀಷ್ಮಾ ಕಪೂರ್ "ಗೀನಾ' ಎನ್ನುವ ನಿಕ್ ನೇಮ್ ಅವರ ತಂದೆಯಿಂದ ಬಂತು. ಇತ್ತ ಕಡೆ ಅಜೇಯ್ ದೇವಗನ್ ಅವರನ್ನು ಹೆತ್ತವರು ಕರೆಯುವುದು "ರಾಜು' ಎಂದು ಆದರೆ ಪ್ರೀತಿಯ ಮಡದಿ ಕಾಜೋಲ್ ಕರೆಯುವುದು "ಜೇ' ಎಂಬುದಾಗಿ ಇಂತಹ ಸಾಕಷ್ಟು ರೋಚಕ ನಿಕ್ ನೇಮ್ ಗಳ ಹುಡುಕಾಟ ಮಾಡುವಾಗ ಕಾಲ ಬುಡದಲ್ಲಿ ಸಿಕ್ಕಿ ಬೀಳುತ್ತದೆ. ತಮ್ಮ ಸ್ಟಾರ್ ಗಳ ಜತೆಗೆ ಅವರ ನಿಕ್ ನೇಮ್ ಗಳು ಕೂಡ ಬಹಳ ಮಸ್ತ್ ಆಗಿರುವುದು ಮಾತ್ರ ದಿಟಿ ಅಲ್ವಾ..?
ಬಿಪಾಷ ಬದಲು "ಬೊನ್ನಿ' ಆಗಬೇಕಿತ್ತು:
ಬಾಲಿವುಡ್ ಪಾಲಿನ ಕೃಷ್ಣ ಸುಂದರಿ ಎಂದೇ ಕರೆಯಲಾಗುವ ಬಿಪಾಷ ಬಸು ಅವರಿಗೆ ನಾಯಿಗಳ ಮೇಲೆ ವಿಶೇಷ ಆಸಕ್ತಿ. ತಮ್ಮ ಮುದ್ದಿನ ನಾಯಿ ಹೆಸರು ಬೊನ್ನಿ. ನಾನು ಯಾವಾಗಲೂ ಬೊನ್ನಿಯ ಪುತ್ರಿ ಎಂದೇ ಕರೆಯಲು ಇಷ್ಟಪಡುತ್ತೇನೆ. ಅದಕ್ಕೂ ಮುಖ್ಯವಾಗಿ "ಬೊನ್ನಿ' ಎಂದೇ ನನ್ನ ಹೆಸರು ಇರಬೇಕಿತ್ತು ಎಂದು ಬಿಪಾಷ ಒಂದು ಕಡೆ ಹೇಳಿಕೊಂಡಿದ್ದರು. ಆದರೆ ಮಾಧ್ಯಮದವರು ಮಾತ್ರ "ಬಿಪ್ಸ್' ಎಂದು ಕರೆಯಲು ಆರಂಭ ಮಾಡಿದರು ಎಂದು ಬಿಪಾಷ ಬಹಳಷ್ಟು ಸಲ ಹೇಳಿಕೊಳ್ಳುತ್ತಿದ್ದರು. ಒಂದು ಲೆಕ್ಕಚಾರದ ಪ್ರಕಾರ ಬಿಪಾಷ ಬಸು ಗೆ ಇರುವಷ್ಟು ನಿಕ್ ನೇಮ್ ಯಾರಿಗೂ ಇರಲು ಸಾಧ್ಯವಿಲ್ಲ. ಬಿಪ್ಪಿ, ಬಿಪ್ಸ್, ಬಿ, ಬೀಪಿ,ಬಿಬಿ, ಬಿಪ್ ಶೋ, ಬೋಪ್, ಬಸು, ಬೇಬಿ ಬಸು, ಬೋನಾ, ಬೀಪ್ಸ್ ಎಂದು ಬಾಲಿವುಡ್ ಅಂಗಳದಲ್ಲಿ ಅವರನ್ನು ಸಧ್ಯಕ್ಕೆ ಕರೆಯುವ ಅಡ್ಡಾ ಹೆಸರುಗಳು.
"ಮೀಮಿ' ಯಾದ ಪ್ರಿಯಾಂಕಾ ಚೋಪ್ರಾ:
ಬಾಲಿವುಡ್ ಹುಡುಗಿ ಪ್ರಿಯಾಂಕಾ ಚೋಪ್ರಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆದರೆ ಪ್ರಿಯಾಂಕಾ ಅವರನ್ನು ಕರೆಯುವ ನಿಕ್ ನೇಮ್ ಮಾತ್ರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಅಂದಹಾಗೆಪ್ರಿಯಾಂಕಾ ಕೂಡ ಪೆಟ್ ಲವರ್. ಅವರನ್ನು ಮನೆಯಲ್ಲಿ ಕರೆಯುವುದು "ಮೀಮೀ' ಎಂದು ಅದಕ್ಕೆ ಬಹುಮುಖ್ಯ ಕಾರಣ ಹಾಲಿವುಡ್ ತಾರೆ ಮೀಮೀ ರೋಜರ್ ಅದೇ ರೀತಿ ಇದ್ದಾಳೆ ಎನ್ನುವ ಕಾರಣಕ್ಕೆ. ಆದರೆ ಪ್ರಿಯಾಂಕಾ ಅವರ ಒರಿಜಿನಲ್ ನಿಕ್ ನೇಮ್ "ಮೀತೂ' . ಆದರೆ ಶಾಲೆಯಲ್ಲಿ ಪ್ರಿಯಾಂಕಾ ಅವರನ್ನು ಕರೆಯುತ್ತಿದ್ದ ನಿಕ್ ನೇಮ್ "ಮೀಮೀ' ಯಂತೆ. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಕೂಡ ಪ್ರಿಯಾಂಕಾ ಅವರನ್ನು ಕರೆಯುವುದು ಇದೇ ಹೆಸರಿನಿಂದ ಎನ್ನುವುದು ಗೊತ್ತಿರಲಿ. ಆದರೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಪ್ರಿಯಾಂಕಾ ಅವರಿಗೆ ಒಂದು ನಾಯಿ ಮರಿಯನ್ನು ಕೊಟ್ಟಿದ್ದರಂತೆ ಅದರ ಹೆಸರು "ಪಿಗ್ಗಿಚೋಪ್ಸ್ ' ಇದೇ ಬಾಲಿವುಡ್ ನಲ್ಲಿ ಪ್ರಿಯಾಂಕಾ ಚೋಪ್ರಾ ರಿಗೆ ಇರುವ ಅಡ್ಡಾ ಹೆಸರು.
Sunday, October 7, 2012
ಬಾಲಿವುಡ್ ನಲ್ಲಿ ತೂಕದ ಸಮಸ್ಯೆ ಬೇಟೆಯಾಡದ ಶಾಹೀದ್ !
ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ. ಮತ್ತೊಂದೆಡೆ ತೂಕದ ಸಮಸ್ಯೆಯಿಂದ ಚಿತ್ರವೊಂದು ಕೈ ಬಿಟ್ಟು ಹೋಗಿದೆ. ಈ ಎಲ್ಲ ವಿಚಾರಗಳ ಪೂರ್ಣ ವಿರಾಮ. ಬಾಲಿವುಡ್ ನ ಶಾನ್ ಹುಡುಗ ಶಾಹೀದ್..
* ಸ್ಟೀವನ್ ರೇಗೊ, ದಾರಂದಕುಕ್ಕು
ಯಾಕೋ ಗೊತ್ತಿಲ್ಲ ಮಾರಾಯ್ರೆ. ಈ ಪಾಟಿನೂ ಅದೃಷ್ಟ ಕೈ ಕೊಡುತ್ತೆ ಎನ್ನೋದು ಖುದ್ದು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಗೊಂದಲ ಮೂಡಬಹುದು. ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ. ಮತ್ತೊಂದೆಡೆ ತೂಕದ ಸಮಸ್ಯೆಯಿಂದ ಚಿತ್ರವೊಂದು ಕೈ ಬಿಟ್ಟು ಹೋಗಿದೆ. ಕತೆ ಏನ್ ಅಂತಾ ಕೇಳ್ತೀರಾ..?
ಕಾಲಿವುಡ್ ನಲ್ಲಿ ಸೂಪರ್ ನೆಗೆತ ಕಂಡ ವೇಟೈ( ಬೇಟೆ) ಚಿತ್ರವನ್ನು ಅನಾಮತ್ತಾಗಿ ಎತ್ತಿಕೊಂಡು ಬಾಲಿವುಡ್ ನಿರ್ದೇಶಕ ಮನೀಶ್ ಶರ್ಮಾ ಹಿಂದಿಯಲ್ಲೊಂದು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದರು. ಅಲ್ಲಿನ ಪಾತ್ರಕ್ಕೆ ಯಾರು ಹೋಲಿಕೆಯಾಗುತ್ತಾರೆ ಎಂಬ ವಿಚಾರದಲ್ಲೂ ತೀರಾ ಚರ್ಚೆ ನಡೆದು ಫುಲ್ ಆಗಿ ನಾಯಕನ ಸ್ಥಾನಕ್ಕೆ ಬುಕ್ಕಿಂಗ್ ಮಾಡಿಸಿಕೊಂಡಿದ್ದು ಬಾಲಿವುಡ್ ನ ಶಾನ್ ಎಂದೇ ಕರೆಯಲಾಗುವ ಶಾಹೀದ್ ಕಪೂರ್ ನನ್ನು. ಆದರೆ ಈ ಚಿತ್ರಕ್ಕೆ ಶಾಹೀದ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಒಂದು ಪಾತ್ರದಲ್ಲಿ ಸ್ವಲ್ಪ ದಪ್ಪಗೆ ಕಾಣಿಸಿಕೊಂಡರೆ ಇನ್ನೊಂದು ಕಡೆ ಸ್ವಲ್ಪ ತೆಳ್ಳಗೆ ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಚಿತ್ರದ ನಿರ್ದೇಶಕರು ಮಾಡಿದ್ದರು.
ಚಿತ್ರದ ಆರಂಭದಲ್ಲಿ ಕಾಲೇಜಿಗೆ ಹೋಗುವ ಹುಡುಗನ ಪಾತ್ರದಲ್ಲಿ ಶಾಹೀದ್ ಕಾಣಿಸಿಕೊಂಡರೆ ನಂತರ ಬೇರೆ ಪಾತ್ರಕ್ಕೆ ಶಾಹೀದ್ ಫಿಟ್ ಆಗಿರಬೇಕಾಗಿತ್ತು. ಇದೇ ವಿಚಾರವನ್ನು ಶಾಹೀದ್ ಗೂ ಕೂಡ ನಿರ್ದೇಶಕರು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಶಾಹೀದ್ ಕಪೂರ್ ಬಾಡಿ ಮಾತ್ರ ವೇಟೈಗೆ ತಕ್ಕಂತೆ ಬಗ್ಗುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಚಿತ್ರದಿಂದ ಶಾಹೀದ್ ಕಪೂರ್ ಔಟ್ ಮಾಡಲಾಗಿದೆ. ಈ ವಿಚಾರದಲ್ಲಿ ಶಾಹೀದ್ ಮಾತ್ರ ನಿರ್ಮಾಪಕ ಹಾಗೂ ತನ್ನ ನಡುವಿನ ಮಾತುಕತೆಯಿಂದಾಗಿ ಚಿತ್ರ ಬಿಟ್ಟಿದ್ದೇನೆ ಎಂದು ಹೇಳಿಕೊಂಡು ತಿರುಗಾಟ ಮಾಡುತ್ತಿದ್ದಾರೆ.
ಇತ್ತ ಕಡೆ ಶಾಹೀದ್ ಕಪೂರ್ ಅವರ ತರಬೇತುದಾರ ಅಬ್ಬಾಸ್ ಅಲಿ ಹೇಳುವಂತೆ : ವೇಟೈ ಚಿತ್ರಕ್ಕಾಗಿ ಶಾಹೀದ್ ನಾಲ್ಕು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತನ್ನ ತೂಕ ಇಳಿಯುತ್ತಿದೆ ಎಂದು ಗೊತ್ತಾದ ತಕ್ಷಣ ಶಾಹೀದ್ ತರಬೇತಿ ನಿಲ್ಲಿಸಿದ್ದಾರೆ. ಈ ಕಾರಣದಿಂದ ಚಿತ್ರಕ್ಕೆ ತಕ್ಕದಾದ ಫಿಟ್ ಬಾಡಿ ಮಾಡಲು ಸಾಧ್ಯವಾಗಿಲ್ಲ. ಶಾಹೀದ್ ಸಸ್ಯಹಾರಿ ಇದ್ದ ಕಾರಣ ತನ್ನ ದೇಹ ತೂಕದಲ್ಲಿ ಹೆಚ್ಚು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇತ್ತ ಕಡೆ ಶಾಹೀದ್ ವೇಟೈ ಬಿಟ್ಟು ನಿರ್ದೇಶಕ ಪ್ರಭುದೇವ ಅವರ ಚಿತ್ರ ನಮಕ್ ಚಿತ್ರಕ್ಕೂ ಸಹಿ ಮಾಡಿಕೊಂಡಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಚಿತ್ರ ಸಂಪೂರ್ಣವಾಗುವ ಸಾಧ್ಯತೆ ಇದೆ. ಪ್ರಭುದೇವ್ ಚಿತ್ರದ ಚಿತ್ರೀಕರಣಗಾಗಿ ತಯಾರಿ ನಡೆಸುತ್ತಿದ್ದಾರೆ. ಶಾಹೀದ್ ಗೂ ಬಾಲಿವುಡ್ ನಲ್ಲಿ ದೊಡ್ಡದಾದ ಬ್ರೇಕ್ ಸಿಗಲೇ ಬೇಕು. ಈ ಕಾರಣದಿಂದ ಪ್ರಭು ಪಾದಗಳಿಗೆ ಶಾಹೀದ್ ಶರಣು ಎಂದಿದ್ದಾರೆ ಎನ್ನುವ ಮಾತು ಕೂಡ ಬಾಲಿವುಡ್ ಅಂಗಳದಲ್ಲಿ ಕೇಳಿಸಿಕೊಂಡಿದೆ.
ಶಾಹೀದ್ ಅದೃಷ್ಟ ಉಲ್ಟಾಪಲ್ಟಾ:
ಬಾಲಿವುಡ್ ನಟ ಕಮ್ ನಿರ್ಮಾಪಕ, ನಿರ್ದೇಶಕ ಎನ್ನುವ ಹಣೆಪಟ್ಟಿಕಟ್ಟಿಕೊಂಡು ಸಿನ್ಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಪಂಕಜ್ ಕಪೂರ್ ಅವರ ಸನ್ ಶಾಹೀದ್ ಕಪೂರ್. ಬಾಲಿವುಡ್ನಲ್ಲಿ ಆರಂಭದ ಇನ್ನಿಂಗ್ಸ್ ಆಡಲು ಬಂದ ಶಾಹೀದ್ಗೆ ಬಹಳ ಬೇಡಿಕೆ ಇತ್ತು. ಮೊದಲ ಚಿತ್ರವೇ ಶಾಹೀದ್ನನ್ನು ಒಬ್ಬ "ಲವರ್ಬಾಯ್' ಆಗಿ ಫೋಕಸ್ ಮಾಡಿಬಿಟ್ಟಿತ್ತು.
ಬಾಲಿವುಡ್ನ ಸೈಜ್ಝೀರೋ ಹುಡುಗಿ ಕರೀನಾಳ ಜತೆ ಸುತ್ತಾಡುವುದಕ್ಕಾಗಿ ತಾನು ಪಕ್ಕಾ ವೆಜ್ ಹುಡುಗ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದ ಶಾಹೀದ್ ಹಾಗೂ ಕರೀನಾ ಜೋಡಿ ಬ್ರೇಕ್ ಆಫ್ ಆಯಿತು. ಇದು ಶಾಹೀದ್ನ ಮೊದಲ ಅನ್ಲಕ್ಕಿ ಸೀಸನ್ ಆರಂಭದ ಗಂಟೆ.
ಆದರೆ ಕರೀನಾಳನ್ನು ಕಳೆದುಕೊಂಡ ಶಾಹೀದ್ ಬಾಲಿವುಡ್ನಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ಕಂಗೋಳಿಸಿದ್ದು ಬಿಟ್ಟರೆ ಉಳಿದ ಚಿತ್ರಗಳು ತೋಪಾಗಿ ಬಿದ್ದು ಹೋಯಿತು. ಕರೀನಾ ವರ್ಸಸ್ ಶಾಹೀದ್ ಬ್ರೇಕ್ ಸೀಸನ್ನಲ್ಲಿ ಬಂದು ಹೋದ "ಜಬ್ ವೀ ಮೆಟ್' ಚಿತ್ರವೊಂದನ್ನು ಬಿಟ್ಟರೆ ಶಾಹೀದ್ ಬಾಲಿವುಡ್ ಕಡಿದುಕಟ್ಟಿ ಹಾಕಿದ ಯಾವುದೇ ಚಿತ್ರಗಳಿಲ್ಲ.
2013ರಲ್ಲಿ ಶಾಹೀದ್ ಬಳಿ ಮೂರು ಚಿತ್ರಗಳಿವೆ. ಅದರಲ್ಲಿ ಪ್ರಭುದೇವ ಅವರ ನಮಕ್, ಪಟ ಪೋಸ್ಟರ್ ನಿಕ್ಲಾ ಹೀರೋ, ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಆ ಬಳಿಕ ಶಾಹೀದ್ನ ನಿರುದ್ಯೋಗಿ ಪರ್ವ ಆರಂಭವಾಗುತ್ತದೆ. ಇದು ಅನ್ಲಕ್ಕಿ ಸೀಸನ್ನ ಎರಡನೇ ಗಂಟೆ. ಈ ವಿಚಾರವನ್ನು ಖುದ್ದು ಶಾಹೀದ್ ಒಪ್ಪಿಕೊಂಡು ಟ್ವಿಟ್ಟರ್ನಲ್ಲಿ ಹೇಳಿಕೊಂಡ ಮಾತು ಇಲ್ಲಿದೆ. "ಚಿತ್ರದ ನಿರ್ಮಾಪಕ ಬಂದು ಚಿತ್ರಕ್ಕೆ ನೀನು ಆಯ್ಕೆಯಾಗಿದ್ದಿ ಎಂದು ಪ್ರಕಟಿಸುವ ವರೆಗೂ ನನ್ನ ಕೈಯಲ್ಲಿ ಯಾವುದೇ ಚಿತ್ರಗಳಿರುವುದಿಲ್ಲ. ಅದಕ್ಕಾಗಿ ನನಗೆ ನಿರುದ್ಯೋಗಿ ಎನ್ನುವ ಟೈಟಲ್ ಸರಿಯಾಗಿದೆ ' ಎಂದಿದ್ದಾರೆ.
ಮದುವೆಯಿಂದ ಲಕ್ ಬರುತ್ತೆ:
2013ರ ಹೊತ್ತಿನಲ್ಲೇ ಶಾಹೀದ್ ಮದುವೆಯಾಗಬೇಕೆಂದುಕೊಂಡಿದ್ದಾರೆ.. ಈ ಮೂಲಕವಾದರೂ ಅದೃಷ್ಟ ನನ್ನ ಬಳಿಯಲ್ಲಿ ಇರುತ್ತದೆ ಎನ್ನೋದು ಶಾಹೀದ್ ಕಪೂರ್ನ ನಂಬಿಕೆ.
ಮದುವೆಯ ನಂತರ ಬಾಲಿವುಡ್ನಲ್ಲಿ ನೆಲೆ ನಿಂತವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಬಾಲಿವುಡ್ ನಟ ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಜೇಯ್ ದೇವಗನ್, ಹೃತಿಕ್ ರೋಷನ್ ಬಹಳಷ್ಟು ಜನರು ತಮ್ಮ ಮದುವೆಯ ನಂತರ ಬಾಲಿವುಡ್ನಲ್ಲಿ ಕ್ಲಿಕ್ ಆಗಿದ್ದಾರೆ. ಅವರ ರೂಲ್ಗಳನ್ನೇ ಫಾಲೋ ಮಾಡೋಣ ಅಂತಾ ಯೋಚನೆ ಮಾಡುತ್ತಿದ್ದೇನೆ ಎನ್ನೋದು ಶಾಹೀದ್ ಕಪೂರ್ನ ಓಪನ್
"ಬರೀ ಮದುವೆಯಿಂದ ಲಕ್ ಬರುತ್ತೆ ಎನ್ನುವ ನನ್ನ ವಾದದಲ್ಲೂ ಬೇರೆ ವಿಚಾರಗಳು ಅಡಗಿದೆ. ಸಿಂಗಲ್ ಇದ್ದಾಗ ನಿಮ್ಮ ಬಗ್ಗೆ ಪ್ರೀತಿ ತೋರಿಸುವ ಕೈಗಳು ಇರೋದಿಲ್ಲ. ನಿಮ್ಮ ಸುಖ ದುಃಖಗಳಲ್ಲಿ ಎಂಟ್ರಿಯಾಗುವ ಬಂಧುಗಳು ಸಿಗೋದಿಲ್ಲ. ಅದಕ್ಕಾಗಿ ಫೈನಲ್ ಮದುವೆಯಲ್ಲಿ ಎಲ್ಲವೂ ಸಿಗುತ್ತದೆ" ಎನ್ನೋದು ಶಾಹೀದ್ ಕಪೂರ್ರ ವಾದ.
"ಮದುವೆಯಾಗುತ್ತಿದ್ದೇನೆ ಎಂದಾಗ ಹುಡುಗಿ ಎಲ್ಲಿ ಎಂದು ಕೇಳುವವರು ಜಾಸ್ತಿ. ಈ ಕುರಿತು ಯಾವುದೇ ಯೋಚನೆ ಮಾಡಿಲ್ಲ. ನನಗೆ ಯಾವುದಾದರೂ ಒಳ್ಳೆಯ ಹುಡುಗಿ ಇದ್ದಾರೆ ಹೇಳಿ ಬಿಡಿ. ನಾನು ಮದುವೆಯಾಗಲು ಸಿದ್ಧ" ಎಂದಿದ್ದಾರೆ ಶಾಹೀದ್ . ಮದುವೆಯ ಮೂಲಕವಾದರೂ ಶಾಹೀದ್ ಕಪೂರ್ನ ಲಕ್ ಚೇಂಜ್ ಕಾಣುತ್ತಾ ಅಂದೊಂದು ಗೊತ್ತಾಗುತ್ತಿಲ್ಲ ಮಾರಾಯ್ರೆ...
Saturday, October 6, 2012
ಬಾಲಿವುಡ್ ಗೊಬ್ಬಳೇ ಗೌರಮ್ಮ !
ಬಾಲಿವುಡ್ ಅಂಗಳದಲ್ಲಿ ಆರ್. ಬಾಲ್ಕಿ( ಆರ್. ಬಾಲಕೃಷ್ಣನ್) ಹೆಸರು ಬಹುತೇಕ ಮಂದಿಗೆ ಚಿರಪರಿಚಿತ. ಅಷ್ಟೇ ಗೌರಿಯ ಹೆಸರು ಕೂಡ ಚಿರಪರಿಚಿತವಾಗಿರಬೇಕಿತ್ತು. ಕಾರಣ ಪಾಲ್ಕಿಯ ಚಿತ್ರ ಜಗತ್ತಿನ ಅಧ್ಯಾಯ ಆರಂಭವಾಗೋದು ಗೌರಿಯ ಮೂಲಕ ಎಂಬ ವಿಚಾರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಇದೇ ಗೌರಿ ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಮೂಲಕ ಹೊಸ ದಿಶೆ ಬರೆಯುತ್ತಿದ್ದಾರೆ...
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಲ್ಲಿ ಸಿಂಪಲ್ ಕತೆ ಯನ್ನು ಇಟ್ಟುಕೊಂಡು ಕೂಡ ಸಿನಿಮಾ ಮಾಡಬಹುದು. ಅದಕ್ಕಾಗಿ ಕತೆ, ಸ್ಟಾರ್ ಗಿರಿಗಾಗಿ ಹಿಮಾಲಯ ಪರ್ವತ ಏರುವ ಅವಶ್ಯಕತೆಯಂತೂ ಇಲ್ಲ ಎನ್ನುವ ಉತ್ತರ ಕೊಟ್ಟವರು ಗೌರಿ ಶಿಂಧೆ. ಅಂದಹಾಗೆ ಗೌರಿ ಯಾರಪ್ಪ ಅಂದರೆ ಬಾಲಿವುಡ್ ನಲ್ಲಿ ಚೀನಿ ಕಮ್ ಹಾಗೂ ಪಾ ದಂತಹ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಬಹಳ ಹತ್ತಿರವಾದ ನಿರ್ದೇಶಕ ಆರ್. ಬಾಲ್ಕಿ ಅವರ ಮಿಸಸ್. ಬಾಲಿವುಡ್ ಅಂಗಳದಲ್ಲಿ ಆರ್. ಬಾಲ್ಕಿ( ಆರ್. ಬಾಲಕೃಷ್ಣನ್) ಹೆಸರು ಬಹುತೇಕ ಮಂದಿಗೆ ಚಿರಪರಿಚಿತ. ಅಷ್ಟೇ ಗೌರಿಯ ಹೆಸರು ಕೂಡ ಚಿರಪರಿಚಿತವಾಗಿರಬೇಕಿತ್ತು. ಕಾರಣ ಪಾಲ್ಕಿಯ ಚಿತ್ರ ಜಗತ್ತಿನ ಅಧ್ಯಾಯ ಆರಂಭವಾಗೋದು ಗೌರಿಯ ಮೂಲಕ ಎಂಬ ವಿಚಾರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಅವರ ಚೀನಿ ಕಮ್ ಚಿತ್ರವಾಗಲಿ ಅಥವಾ ಪಾ ಚಿತ್ರದಲ್ಲೂ ಪಾಲ್ಕಿಯ ನಿರ್ದೇಶನದಷ್ಟೇ ಗೌರಿಯ ಪಾತ್ರವಿತ್ತು.
ಇದೇ ಗೌರಿ ಬಾಲಿವುಡ್ ಅಂಗಳದಲ್ಲಿ ಸಿಂಪಲ್ ಕತೆಯ ಮೂಲಕ ಭರ್ಜರಿ ಓಟವನ್ನು ದಾಖಲಿಸುತ್ತಿರುವ ಇಂಗ್ಲೀಷ್ ವಿಂಗ್ಲೀಷ್ ಚಿತ್ರದ ನಿರ್ದೇಶಕಿ. ಬಾಲಿವುಡ್ ರಂಗದಲ್ಲಿ ಹದಿನೈದು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ನಟಿ ಶ್ರೀದೇವಿಗೆ ಭರ್ಜರಿ ಓಪನಿಂಗ್ ಕೊಟ್ಟು ಎಲ್ಲರ ಕೈಯಿಂದಲೂ ಗೌರಿ ಶಹಬ್ಬಾಸ್ ಗಿರಿ ಪಡೆಯುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಖ್ಯಾತ ನಿರ್ದೇಶಕಿಯರ ಸ್ಥಾನದಲ್ಲಿ ಗೌರಿ ಸಖತ್ ಬೇಡಿಕೆ ತನ್ನ ಚಿತ್ರದ ಮೂಲಕ ಪಡೆದುಕೊಂಡಿದ್ದಾರೆ. ಭಾರತೀಯ ಮಧ್ಯಮ ವರ್ಗದ ಮಹಿಳೆಯ ಪಾತ್ರದಲ್ಲಿ ಶ್ರೀದೇವಿಯನ್ನು ಇಟ್ಟುಕೊಂಡು ಈ ಮಹಿಳೆ ಅಮೆರಿಕಾದಲ್ಲಿ ಎದುರಿಸುವ ಸಂಕಷ್ಟಗಳನ್ನು ತೋರಿಸುವ ಪ್ರಯತ್ನ ಈ ಚಿತ್ರದ ಮೂಲಕ ಸಾಗಿದೆ. ಇಂಗ್ಲೀಷ್ ಬಾರದ ಭಾರತೀಯ ಮಹಿಳೆ ಎದುರಿಸುವ ಸಮಸ್ಯೆಯೇ ಚಿತ್ರದ ಕಥಾ ವಸ್ತುವಾಗಿ ರೂಪುಗೊಂಡಿದ್ದು ನೋಡಿದರೆ ಯಾಕಪ್ಪಾ ನಾವು ಇಂತಹ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಬಾರದಿತ್ತು ಎನ್ನುವ ಪ್ರಶ್ನೆ ಭಾರತೀಯ ಚಿತ್ರರಂಗದ ಬಹುತೇಕ ನಿರ್ದೇಶಕರ ಮನಸ್ಸನ್ನು ಕಾಡಿದೆ ಎಂಬುವುದಂತೂ ನಿಜ.
ಯಾರಮ್ಮ ಗೌರಮ್ಮ:
ಗೌರಿ ಶಿಂಧೆ ಬೇಸಿಕಲಿ ಪುಣಿಯ ಹುಡುಗಿ. ಮುಂಬಯಿಯಲ್ಲಿದ್ದ ಸಿದ್ದಾರ್ಥ್ ಕಾಕ್ ಎನ್ನುವ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಬೆಳೆದ ಗೌರಿ ಶಿಂಧೆ ಇಂಗ್ಲೀಷ್- ವಿಂಗ್ಲೀಷ್ ಚಿತ್ರ ಬರುವುದಕ್ಕೂ ಮೊದಲು 100 ಜಾಹೀರಾತು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಅಮೇರಿಕದಲ್ಲೂ ನಿಂತುಕೊಂಡು ಜಾಹೀರಾತು ಕಂಪನಿಗಳಿಗೆ ದುಡಿದಿದ್ದಾರೆ. ಇಲ್ಲಿನ ದುಡಿತ ಇಂದಿನ ಇಂಗ್ಲೀಷ್- ವಿಂಗ್ಲೀಷ್ ಚಿತ್ರವಾಯಿತು. ಮುಖ್ಯವಾಗಿ ಭಾರತೀಯ ಮಹಿಳೆಯರು ವಿದೇಶದಲ್ಲಿ ಇಂಗ್ಲೀಷ್ ಗಾಗಿ ನಡೆಸುವ ಒದ್ದಾಟವನ್ನು ತೀರಾ ನೈಜವಾಗಿ ಚಿತ್ರೀಸಿರುವ ಗೌರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರೋದು ಇದೇ ಕಾರಣಕ್ಕೆ.
ಗೌರಿ ಹಾಗೂ ಬಾಲ್ಕಿಯ ಲವ್ ಸ್ಟೋರಿ ಕೂಡ ತುಂಬಾನೇ ವಿಶೇಷ. ಮುಂಬಯಿಯ ಜಾಹೀರಾತು ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಗೌರಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಬಾಲ್ಕಿಯ ಲವ್ ಸ್ಟೋರಿ ಅಧ್ಯಾಯ ಆರಂಭವಾಗಿರೋದು ಕಂಪನಿಯ ಲಿಫ್ಟ್ ವೊಂದರಲ್ಲಿಯಂತೆ ! ಒಂದು ಬಾರಿ ಲಿಫ್ಟ್ ಕೆಟ್ಟುಹೋಗಿ ಇಬ್ಬರು ಜತೆಯಾಗಿ ಬಂಧಿಯಾದರು. ಕಾಲು ಗಂಟೆಯ ಈ ಪುಟ್ಟ ಪ್ರಯಾಣದಲ್ಲಿ ಇಬ್ಬರ ಜತೆ ಸ್ನೇಹ ಬೆಳೆಯಿತು. ನಂತರ ಕೆಲವು ತಿಂಗಳ ನಂತರ ಡೇಟಿಂಗ್ ಮೂಲಕ ಪ್ರೇಮದ ಅಧ್ಯಾಯಗಳು ಆರಂಭವಾಯಿತು ಎನ್ನೋದು ಗೌರಿ ಮಾತು. ಬಳಿಕ ಬಾಲಿವುಡ್ ನಲ್ಲಿ ಬಂದ ನಟಿ ಕಾಜೋಲ್ ಚಿತ್ರವೊಂದು ಇಬ್ಬರ ಮದುವೆಗೂ ಮೂಲ ಪ್ರೇರಣೆಯಾಯಿತು. ಇಬ್ಬರು ಕಾಜೋಲ್ ಅಭಿಮಾನಿಗಳು. ಇದೇ ಕಾರಣದಿಂದ ಇಬ್ಬರು ಸಿನಿಮಾದ ನೆಪ ಹೇಳಿಕೊಂಡು ಸುತ್ತಾಟ ಮಾಡುತ್ತಿದ್ದರಂತೆ. ಬಾಲ್ಕಿ ಬಾಲಿವುಡ್ ನಲ್ಲಿ ಚೀನಿ ಕಮ್ ಚಿತ್ರ ನಿರ್ದೇಶನ ಮೂಡುವ ಮೊದಲ ವರ್ಷದಲ್ಲಿ ಇಬ್ಬರಿಗೂ ವಿವಾಹವಾಯಿತು.
ಇಂಗ್ಲೀಷ್- ವಿಂಗ್ಲೀಷ್ ಕತೆಗೆ ಕಾರಣ ಯಾರು:
ಬಾಲಿವುಡ್ ನಿರ್ದೇಶಕಿ ಗೌರಿ ಶಿಂಧೆ ಹೇಳುವ ಪ್ರಕಾರ ಈ ಚಿತ್ರಕ್ಕೆ ಮೂಲಕ ಕಾರಣ ಗೌರಿಯ ತಾಯಿಯಂತೆ.. ಈ ಕಾರಣದಿಂದ ಚಿತ್ರವನ್ನು ಗೌರಿಯ ತಾಯಿಗೆ ಅರ್ಪಿಸಲಾಗಿದೆ. ಗೌರಿಯ ತಾಯಿ ಮರಾಠಿ ಭಾಷಿಕರು. ಪುಣೆಯಲ್ಲಿ ತಮ್ಮದೇ ಆದ ಉಪ್ಪಿನ ಕಾಯಿ ವ್ಯಾಪಾರ ಮಾಡಿಕೊಂಡಿದ್ದರು. ವ್ಯಾಪಾರ ಸಂಬಂಧಿಯಾಗಿ ಅವರು ಇಂಗ್ಲೀಷ್ ತರಬೇತಿ ಕ್ಲಾಸ್ ಗೆ ಹೋಗಲು ಅಣಿಯಾದ ಕತೆಯನ್ನೇ ನಾನು ಚಿತ್ರದಲ್ಲಿ ಬಳಸಿಕೊಂಡಿದ್ದೇನೆ ಎನ್ನುತ್ತಾರೆ ಗೌರಿ ಶಿಂಧೆ. ತಾಯಿ ಇಂಗ್ಲೀಷ್ ಕಲಿಯುತ್ತಿದ್ದಾಗ ಸಂಕಷ್ಟಗಳನ್ನು ಅಧ್ಯಯನ ಮಾಡಿಕೊಂಡು ಗೌರಿ ಚಿತ್ರದ ಕತೆಯನ್ನು ಬರೆಯಲು ಆರಂಭಿಸಿದರು. ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಕತೆ ಹಾಗೂ ಇಡೀ ಸಿನಿಮಾ ನನ್ನ ಹಾಗೂ ನನ್ನ ತಾಯಿಗೆ ಸಂಬಂಧಪಟ್ಟದ್ದು ಎನ್ನುವುದು ಗೌರಿಯ ಮಾತು. ಈ ಚಿತ್ರದಲ್ಲಿ ಬರುವ ಸಂಭಾಷಣೆಯೊಂದು ನನಗೆ ತೀರಾ ಹತ್ತಿರವಾಗಿದೆ ಅದೇನಪ್ಪಾ ಅಂದರೆ ಪಾಸ್ ಪೋರ್ಟ್ ಮಾಡಿಸಿಕೊಳ್ಳುತ್ತಿರುವಾಗ ಅಧಿಕಾರಿಯೊಬ್ಬ ಕೇಳುವ ಪ್ರಶ್ನೆ ಹಾಗೂ ಅದಕ್ಕೆ ಅವಳು ನೀಡುವ ಉತ್ತರ ಇಡೀ ಚಿತ್ರದ ಕತೆಯನ್ನು ಹೇಳಿಕೊಂಡು ಹೋಗುತ್ತದೆ ಎನ್ನುವುದು ಗೌರಿಯ ಮಾತು.
ಬಹಳಷ್ಟು ಗೆಳೆಯರು ಮನೆಗೆ ಬಂದಾಗ ಮರಾಠಿ ಭಾಷಿಕರಾದ ತಾಯಿ ಜತೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಒಳ್ಳೆಯ ಕುಕ್ ಎನ್ನುವ ಕಾರಣಕ್ಕೆ ಗೆಳೆಯರು ಮತ್ತೇ ಮತ್ತೇ ಮನೆಗೆ ಬರುತ್ತಾರೆ. ಒಂದು ಸಲ ಇಂಗ್ಲೀಷ್ ಕುರಿತಾದ ಪ್ರಶ್ನೆಯೇ ಎದುರಿಗೆ ನಿಂತಿತ್ತು. ಇದೇ ಪ್ರಶ್ನೆಯನ್ನು ನಾನು ಪರದೆಯ ಮೇಲೆ ತೋರಿಸಿದ್ದೇನೆ ಎನ್ನುತ್ತಾರೆ ಗೌರಿ. ಈ ಚಿತ್ರದಲ್ಲಿ ಮಹಿಳೆ ಹಾಗೂ ಪುರುಷರು ಎಲ್ಲ ರೀತಿಯಿಂದಲೂ ಸಮಾನರು ಹಾಗೂ ಇಂಗ್ಲೀಷ್ ಕಲಿಯಲು ಬರೀ ಪುರುಷರೇ ಬೇಕಾಗಿಲ್ಲ. ಗೃಹಿಣಿಯರು ಕೂಡ ಕಲಿತು ಸಮಾಜದಲ್ಲಿ ಉನ್ನತವಾಗಿ ಬದುಕು ಸಾಗಿಸಬಹುದು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರ ನೋಡಿದ ನಂತರವಂತೂ ಶ್ರೀದೇವಿಯ ಪತಿ ಬೋನಿ ಕಪೂರ್ ಕೂಡ ಕಣ್ಣೀರು ತಂದುಕೊಂಡರು. ಅವರು ಕೂಡ ತನ್ನ ತಾಯಿ ಜತೆಯಲ್ಲಿ ಇದೇ ರೀತಿ ವರ್ತಿಸುತ್ತಿದ್ದರು ಎಂದು ನನ್ನ ಬಳಿ ಹೇಳಿಕೊಂಡರು. ಅದರಲ್ಲೂ ಬೋನಿ ಶ್ರೀದೇವಿಯ ಜತೆಯಲ್ಲೂ ಇದೇ ರೀತಿ ನಡೆದುಕೊಂಡಿದ್ದೇನೆ ಎಂದು ಬಿಟ್ಟರಂತೆ ಗೌರಿ ಶಿಂಧೆ ಬಳಿ.. ಟೋಟಲಿ ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಮೂಲಕ ಬೆಳಕಿಗೆ ಬಂದ ಗೌರಿ ಶಿಂಧೆ ಬಾಲಿವುಡ್ ಪಾಲಿಗೆ ನಿಜಕ್ಕೂ ಒಳ್ಳೆಯ ನಿರ್ದೇಶಕಿಯರಲ್ಲಿ ಒಬ್ಬಳು ಎನ್ನುವ ಮಾತಿಗೆ ಗ್ಯಾರಂಟಿ ಇದೆ.
Friday, October 5, 2012
<ಸತ್ಯ ಮೇವಾ ಜಯತೇ ಎಡವಟ್ಟು ಆಮೀರ್ ತಲಾಶ್ ಶುರು !
ಇಂಟ್ರೋ:
ಭಾರತೀಯ ಸಿನಿಮಾ ಇಂಡಸ್ಟ್ರಿಯ ಇತ್ತೀಚಿನ ಸಿನಿಮಾಗಳ ಬೆಳವಣಿಗೆಯಲ್ಲಿ ಒಂದು ಚಿತ್ರದ ಕಥೆಯನ್ನು ಮೂರು ಬಾರಿ ಬದಲಾವಣೆ ಮಾಡಿದ ಖ್ಯಾತಿಗೆ "ತಲಾಶ್' ಭಾಜನವಾಗಿದೆ. ಅದರಲ್ಲೂ ಆಮೀರ್ ಖಾನ್ ಒಂದು ಬಾರಿ ನಟಿಸಿದ ನಾಯಕಿಯರ ಜತೆಯಲ್ಲಿ ಮತ್ತೊಂದು ಸಲ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಅವರ ಹಿಂದಿನ ಚಿತ್ರಗಳ ನಾಯಕಿಯ ಬದಲಾವಣೆಯನ್ನೇ ಗಮನಿಸಿದರೆ ತಿಳಿದು ಬರುತ್ತದೆ. ಆದರೆ ತಲಾಶ್ ನಲ್ಲಿ ಎಲ್ಲವೂ ಉಲ್ಟಾ- ಪಲ್ಟಾ .. ಏನ್ ಅಂತಾ ಕೇಳ್ತೀರಾ..?
ಇಂಟ್ರೋ:
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಇರಲಿ ಇತರ ಯಾವುದೇ ಭಾರತೀಯ ಸಿನಿಮಾ ಇಂಡಸ್ಟ್ರಿ ಇರಲಿ ಆಮೀರ್ ಖಾನ್ ಅಂದಾಕ್ಷಣ ಕುತೂಹಲದ ಕರಿ ನೆರಳು ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ಇದು ಈ ಹೆಸರಿಗೆ ಇರುವ ಕಿಮ್ಮತ್ತು ಎಂದುಕೊಂಡರೂ ಅದು ತಪ್ಪಿಲ್ಲ. ಯಾಕೆಂದರೆ ಬಾಲಿವುಡ್ ಸಿನಿಮಾ ರಂಗದಲ್ಲಿ ಆಮೀರ್ ಎಂದರೆ ನೂರಕ್ಕೆ ನೂರು ಪರ್ಫೆಕ್ಟ್ ಕಾಂಬೀನೇಶನ್. ಅದು ಚಿತ್ರ ಇರಲಿ ಅಥವಾ ಆಮೀರ್ ಬದುಕಿನ ಯಾವುದೇ ಸಾಮಾಜಿಕ ವಿಚಾರಗಳಿರಲಿ ಎಲ್ಲ ವಿಚಾರದಲ್ಲೂ ಎತ್ತಿದ ಕೈ. ಅಂದಹಾಗೆ ಆಮೀರ್ ಖಾನ್ 2000 ಇಸವಿಯ ಮೊದಲು ಹೇಗಿದ್ದರೋ ಆ ವಿಚಾರವನ್ನು ಸೈಡ್ ಗೆ ಇಟ್ಟುಕೊಂಡು ನೋಡಿ 2000 ಇಸವಿಯ ನಂತರ ಆಮೀರ್ ನಟಿಸಿದ ಹಾಗೂ ನಿರ್ಮಾಪಕನಾಗಿ ಮಾಡಿದ ಎಲ್ಲ ಚಿತ್ರಗಳು ಸಾಮಾಜಿಕ ವಿಚಾರಗಳನ್ನೇ ಎತ್ತಿಕೊಂಡು ಮಾಡಿದ್ದು ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಹುಟ್ಟು ಹಾಕುವ ಸಿನಿಮಾಗಳಿಗೆ ಆಮೀರ್ ಮೊದಲ ಆದ್ಯತೆ ನೀಡುತ್ತ ಬಂದ ಕಲಾವಿದ.
ಆಮೀರ್ ಖಾನ್ ನಟಿಸಿದ "ಲಗಾನ್', "ಮಂಗಲ್ ಪಾಂಡೆ', "ರಂಗ್ ದೇ ಬಸಂತಿ', "ತಾರೆ ಜಮೀನ್ ಪರ್', "ಗಜನಿ", "ತ್ರಿ ಇಡಿಯಡ್ಸ್', "ಧೋಬಿ ಘಾಟ್' ಈಗ "ತಲಾಶ್" ಚಿತ್ರದ ಸರಣಿಯನ್ನೇ ತೆಗೆದುಕೊಂಡರೂ ಎಲ್ಲವೂ ಸಾಮಾಜಿಕ ವಿಚಾರಗಳಿಂದ ಸಿಡಿದು ಎದ್ದ ಕತೆ ಹಾಗೂ ಚಿತ್ರದ ಮೂಲಕ ಸಂದೇಶ ಕೊಡುವ ಪ್ರಯತ್ನ ಆಮೀರ್ ಮಾಡುತ್ತಾ ಬರುತ್ತಿದ್ದಾರೆ. ಈ ಎಲ್ಲ ಚಿತ್ರ ಗಳು ಕೂಡ ಒಂದೊಂದು ವರ್ಷದ ಅಂತರ ಕಾಯ್ದುಕೊಂಡು ಬಂದಿದೆ. ಈ ಮೂಲಕ ಆಮೀರ್ ಚಿತ್ರ ಆಯ್ಕೆ ಮೊದಲು ಕೂಡ ಬಹಳಷ್ಟು ಅಧ್ಯಯನ ಮಾಡಿಕೊಂಡು ಇಳಿಯುತ್ತಾರೆ ಎಂಬ ವಿಚಾರವನ್ನು ಈ ಘಟನೆಗಳು ಸಾಕ್ಷಿ ನೀಡುತ್ತದೆ.
ತಲಾಶ್ ಹುಟ್ಟು ಹಾಕಿದ ಕ್ರೇಜ್ :
ಬಾಲಿವುಡ್ ನ ಇತ್ತೀಚಿನ ಸಿನಿಮಾ ಗಳನ್ನು ಟೋಟಲಿ ಅಧ್ಯಯನ ಮಾಡಿದರೂ ಚಿತ್ರದ ಮುಹೂರ್ತ ಹಾಗೂ ಬಿಡುಗಡೆ ಅವಧಿ ಅಬ್ಬಾಬ್ಬ ಅಂದರೂ 6 ತಿಂಗಳಿನಿಂದ ಒಂದೂವರೆ ವರ್ಷ ಹಿಡಿದು ಬಿಡುತ್ತದೆ. ಆದರೆ "ತಲಾಶ್ ' ಚಿತ್ರದ ಕತೆನೇ ಬೇರೆ ಯಾಕ್ ಅಂತೀರಾ ಈ ಚಿತ್ರ ಅಧಿಕೃತವಾಗಿ ಆರಂಭವಾಗಿದ್ದು 2010ರ ಕೊನೆ ಭಾಗದಲ್ಲಿ ಈ ಬಳಿಕ 2011 ನವೆಂಬರ್ ಹೊತ್ತಿಗೆ ಆಮೀರ್ ಖಾನ್ ಖುದ್ದಾಗಿ ಈ ಚಿತ್ರಕ್ಕೆ ಟೈಟಲ್ ಸೂಟ್ ಮಾಡಿದ್ದರು. ಚಿತ್ರದ ನಿರ್ದೇಶಕಿ ರೀಮಾ ಕಾಡ್ಗಿ ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಕೊನೆಗೊಂಡಾಗ ಇಡೀ ಚಿತ್ರದ ಕತೆಯನ್ನೇ ಬದಲಾವಣೆ ಮಾಡಲು ಯೋಚನೆಗೆ ಇಳಿದರು. ಇದೇ ಸಮಯದಲ್ಲಿ ಬಂದ ವಿದ್ಯಾ ಬಾಲನ್ ಚಿತ್ರ ಕಹಾನಿ ಹಾಗೂ ತಲಾಶ್ ಚಿತ್ರ ಕತೆಗೂ ಹೋಲಿಕೆ ಇದೆ ಎನ್ನುವ ಮಾತುಗಳು ಹೊರಗಡೆ ಬರುತ್ತಿದ್ದಾಗಲೇ ರೀಮಾ ಹಾಗೂ ಆಮೀರ್ ಜತೆ ಸೇರಿ ತಲಾಶ್ ಚಿತ್ರದ ಕತೆಗೆ ಮತ್ತೆ ಟ್ವೀಸ್ಟ್ ತಂದರು.
ಈ ಮೂಲಕ ಭಾರತೀಯ ಸಿನಿಮಾ ಇಂಡಸ್ಟ್ರಿಯ ಇತ್ತೀಚಿನ ಸಿನಿಮಾಗಳ ಬೆಳವಣಿಗೆಯಲ್ಲಿ ಒಂದು ಚಿತ್ರದ ಕಥೆಯನ್ನು ಮೂರು ಬಾರಿ ಬದಲಾವಣೆ ಮಾಡಿದ ಖ್ಯಾತಿಗೆ "ತಲಾಶ್' ಭಾಜನವಾಗಿದೆ. ಅದರಲ್ಲೂ ಆಮೀರ್ ಖಾನ್ ಒಂದು ಬಾರಿ ನಟಿಸಿದ ನಾಯಕಿಯರ ಜತೆಯಲ್ಲಿ ಮತ್ತೊಂದು ಸಲ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಅವರ ಹಿಂದಿನ ಚಿತ್ರಗಳ ನಾಯಕಿಯ ಬದಲಾವಣೆಯನ್ನೇ ಗಮನಿಸಿದರೆ ತಿಳಿದು ಬರುತ್ತದೆ. ಆದರೆ ತಲಾಶ್ ವಿಚಾರದಲ್ಲಿ ಇದೆಲ್ಲವೂ ಉಲ್ಟಾ-ಪಲ್ಟಾ. ಕಾರಣ ಬಾಲಿವುಡ್ ನ 90ರ ದಶಕದಲ್ಲಿ ಬಂದ ಹಿಂದಿ ಚಿತ್ರ ಗುಲಾಮ್ ನಾಯಕಿ ರಾಣಿ ಮುಖರ್ಜಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ತ್ರಿ ಇಡಿಯಟ್ಸ್ ಖ್ಯಾತಿ ಕರೀನಾ ಕಪೂರ್ ಕೂಡ ಆಮೀರ್ ಖಾನ್ ರ ತಲಾಶ್ ಗೆ ಸಾಥ್ ನೀಡಲಿದ್ದಾರೆ. ಇದು ಚಿತ್ರ ಮತ್ತೊಂದು ಮಗ್ಗಲು.
ತಲಾಶ್ ಗೆ ಹೊಡೆದ ನೀಡಿದ ಆಮೀರ್ ಸತ್ಯ:
ಚಿತ್ರದ ಆರಂಭದ ಬಹುತೇಕ ದೃಶ್ಯಗಳು ಮುಂಬಯಿಯ ರೆಡ್ ಲೈಟ್ ಏರಿಯಾದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಕರೀನಾ ಕಪೂರ್ ಈ ಚಿತ್ರದಲ್ಲಿ ರೋಸಿ ಎನ್ನುವ ವೇಶ್ಯೆಯೊಬ್ಬರ ಪಾತ್ರದಲ್ಲಿ ಕಾಣಿಇಸಕೊಳ್ಳಲಿದ್ದಾರೆ ಎಂದು ಚಿತ್ರದ ಮುಹೂರ್ತ ಸಂದರ್ಭ ನಿರ್ದೇಶಕಿ ರೀಮಾ ಮಾಧ್ಯಮಗಳಿಗೆ ಹೇಳಿದ್ದರು. ಈ ಬಳಿಕ ಚಿತ್ರದ ಕತೆ ಹಾಗೂ ಉಳಿದ ಮಾಹಿತಿಗಳನ್ನು ಮುಚ್ಚಿಟ್ಟುಕೊಂಡಿದ್ದರು. ಚಿತ್ರದ ಎರಡನೇ ಹಂತವನ್ನು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆಸಿ ಉಳಿದಂತೆ ರಾಯಘಡದ ಕಪೋಲಿ ಪ್ರದೇಶದಲ್ಲಿ ಚಿತ್ರೀಕರಣ ನಡೆಯಿತು.
ಇದೆಲ್ಲವೂ ನಡೆಯುತ್ತಿದ್ದಾಗ ಚಿತ್ರದ ಕತೆಯೇ ಬದಲಾವಣೆ ಕಂಡಿತ್ತು. ನವೆಂಬರ್ 2011ರ ಹೊತ್ತಿನಲ್ಲಿ ಚಿತ್ರದ ಬಹುತೇಕ ಭಾಗ ಮರು ಚಿತ್ರೀಕರಣ ನಡೆಸಿ ಕೆಲವೊಂದು ಬಾಕಿ ದೃಶ್ಯಗಳ ಚಿತ್ರೀಕರಣಕ್ಕಾಗಿ ಆಮೀರ್ ಖಾನ್ ಗೆ ಕಾದು ಕೂರಲಾಯಿತು. ಇದೇ ಸಮಯದಲ್ಲಿ ಆಮೀರ್ ತನ್ನ ರಿಯಾಲಿಟಿ ಶೋ ಸತ್ಯ ಮೇವ ಜಯತೇ ಯಲ್ಲಿ ಬ್ಯುಸಿಯಾಗಿದ್ದರು. ಈಗ ಚಿತ್ರದ ಚಿತ್ರೀಕರಣ ನಡೆದು ಮಾಧ್ಯಮಗಳಿಗೆ ಪ್ರೋಮೊಗಳನ್ನು ಬಿಡುಗಡೆ ಮಾಡಲಾಗಿದೆ. ನವೆಂಬರ್ ಕೊನೆಯ ಹೊತ್ತಿನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಚಿತ್ರದ ನಿರ್ಮಾಪಕರದ್ದು ಕಾರಣ ಆಮೀರ್ ಖಾನ್ ಚಿತ್ರಗಳು ವರ್ಷದ ಕೊನೆ ಭಾಗದಲ್ಲಿ ಸಿನಿಮಾ ಥಿಯೇಟರ್ ಗೆ ಬಂದರೆ ಅದು ಆಮೀರ್ ಪಾಲಿಗೆ ಅದೃಷ್ಟ ವಾಗಿರುತ್ತದೆ ಎನ್ನುವ ನಂಬಿಕೆಯ ಮಾತು ಬಾಲಿವುಡ್ ಅಂಗಳದಲ್ಲಿ ಚಾಲ್ತಿಯಲ್ಲಿದೆ. ಖುದ್ದು ಆಮೀರ್ ಸೇರಿದಂತೆ ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್, ಶರಣ್ ವಾಲ್ಕರ್ ಚಿತ್ರದ ನಿರ್ಮಾಪಕರ ಸ್ಥಾನದಲ್ಲಿದ್ದಾರೆ.
ಆರುಷಿ ಕೊಲೆ ಪ್ರಕರಣವೇ ತಲಾಶ್ ಕತೆನಾ?
ಸಮಾಜದಲ್ಲಿರುವ ನೈಜ ಘಟನೆಗಳನ್ನೇ ತನ್ನ ಚಿತ್ರಕ್ಕೆ ಬಂಡವಾಳ ಮಾಡಿಕೊಂಡು ಬರುತ್ತಿರುವ ಆಮೀರ್ ತ್ನ ಹೊಸ ಚಿತ್ರ ತಲಾಶ್ ನಲ್ಲೂ ಇದೇ ಪ್ರಯೋಗ ಮಾಡಿದ್ದಾರೆ ಎನ್ನುವ ಮಾತಿದೆ. ತೀರಾ ಇತ್ತೀಚೆಗೆ ಬಹಳ ಸುದ್ದಿಯಾದ ಾರುಷಿ ಕೊಲೆ ಪ್ರಕರಣವನ್ನೇ ಚಿತ್ರದ ಕತೆಯಾಗಿ ಸೇರಿಸಿಕೊಂಡಿದ್ದಾರೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ. ದಿಲ್ಲಿಯ ನೊಯಿಡಾ ಪ್ರದೇಶದಲ್ಲಿ ನಡೆದ ಆರುಷಿ ಕೊಲೆ ಪ್ರಕರಣವನ್ನು ಆರಂಭದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಅದು ಸಿಬಿಐ ಕೈ ಸೇರಿದ ಕತೆಯನ್ನೇ "ತಲಾಶ್' ಹೊಂದಿದೆ ಎನ್ನಲಾಗುತ್ತಿದೆ.
14ರ ಬಾಲೆ ಆರುಷಿಯನ್ನು 16 ಮೇ 2008ರಲ್ಲಿ ತನ್ನ ನೋಯಿಡಾ ನಿವಾಸದಲ್ಲಿ ಕೊಲೆ ಮಾಡಲಾಗಿತ್ತು. ಪೊಲೀಸರ ತನಿಖೆಯ ಸಂದರ್ಭ ಆರುಷಿ ಹೆತ್ತವರೇ ಅದನ್ನು ಮುಚ್ಚಿ ಹಾಕಲು ಪ್ರಯತ್ನ ಪಟ್ಟು ಸೆರೆ ಸಿಕ್ಕಿದ್ದು ಇದೇ ಮೂಲ ಎಳೆಯಿಂದ ತಲಾಶ್ ಚಿತ್ರ ಓಡಲಿದೆ . ಈಗಾಗಲೇ ಬಾಲಿವುಡ್ ನಲ್ಲಿ ಬಂದ "ನೋ ವನ್ ಕಿಲ್ಡ್ ಜೇಸಿಕಾ' ಚಿತ್ರ ಕೂಡ ಸಮಾಜದಲ್ಲಿ ನಡೆದ ನೈಜ ಅಪರಾಧ ಕತೆಯನ್ನೇ ಹೊಂದಿತ್ತು. ತಲಾಶ್ ಚಿತ್ರದ ನಿರ್ದೇಶಕಿ ರೀಮಾ ಕೂಡ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಹಾಗೂ ಪೊಲೀಸರ ಜತೆಯಲ್ಲಿ ಮಾತುಕತೆ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ಕಾಣಿಇಸಕೊಂಡ ತಿರುವು ಎಲ್ಲವೂ ರಿಮಾ ತನ್ನ ತಲಾಶ್ ನಲ್ಲಿ ಆಳವಡಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಮಾತು ಮಾಧ್ಯಮಗಳು ಬಾಯಿ ಬಿಟ್ಟಿದೆ. ಟೋಟಲಿ ಬಾಲಿವುಡ್ ನ ದೊಡ್ಡ ಪರದೆಯ ಮೇಲೆ ತಲಾಶ್ ಬಿಡುಗಡೆಯಾಗುವ ಮೊದಲು ಏನೂ ಹೇಳುವಂತಿಲ್ಲ. ಕಾರಣ ಬಾಲಿವುಡ್ ನ ಪರ್ಫೆಕ್ಟ್ ಮ್ಯಾನ್ ಎಂದು ಕರೆಯುವ ಆಮೀರ್ ಚಿತ್ರದ ಮೂಲ ಕತೆಯಲ್ಲಿ ಬದಲಾವಣೆ ಮಾಡದೇ ಇರುತ್ತಾರಾ..? ಎನ್ನುವ ಪ್ರಶ್ನೆ ಚಿತ್ರ ಪ್ರೇಮಿಗಳಲ್ಲಿ ಎದುರಾಗಿದೆ.
Tuesday, October 2, 2012
ಮಣಿ ಕೈಯಲ್ಲಿ ಈಗ ಐಶ್ವರ್ಯಾ !
* ಸ್ಟೀವನ್ ರೇಗೊ, ದಾರಂದಕುಕ್ಕು
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಮಾತಿಗೆ ಜಗದೇಕ ಸುಂದರಿ ಐಶ್ವರ್ಯಾ ರೈ ತಕ್ಷಣ ಒಪ್ಪಿಕೊಳ್ಳಲು ಇರುವ ಕಾರಣ ಏನೂ ಎಂಬ ಪ್ರಶ್ನೆ ಬಹಳ ಮಂದಿಯನ್ನು ಕಾಡುತ್ತಿರಬಹುದು. ಬಾಲಿವುಡ್ ಬಿಗ್ ಬಿ ಸೊಸೆಯ ರೀ ಎಂಟ್ರಿ ಭರ್ಜರಿಯಾಗಿರಬೇಕು ಎಂದುಕೊಂಡು ಹತ್ತಾರು ಬಾಲಿವುಡ್ ನ ಚಿತ್ರ ನಿರ್ಮಾಣ ಬ್ಯಾನರ್ ಗಳು ಜತೆಗೆ ನಿರ್ದೇಶಕರು ತುದಿ ಕಾಲಿನಲ್ಲಿ ನಿಂತಿದ್ದರೂ ಕೂಡ ಐಶ್ ಬೇಬಿಯ ಕಾಲ್ ಶೀಟ್ ಮಣಿರತ್ನಂ ಎನ್ನುವ ನಿರ್ದೇಶಕನ ಪಾಲಿಗೆ ಸಿಗಲು ಕಾರಣ ಏನೂ ಎಂಬುದಕ್ಕೆ 1997ರಲ್ಲಿ ಬಿಡುಗಡೆ ಕಂಡ ಇರುವರ್ ಚಿತ್ರ ಹೇಳುತ್ತದೆ.
ಒಂದಲ್ಲ ಎರಡಲ್ಲ ಬರೋಬರಿ 10 ತಿಂಗಳ ಕಾಲ ಯಾವುದೇ ಬಣ್ಣದ ಲೋಕದ ಟಚ್ ಬಿಟ್ಟುಕೊಂಡು ಬದುಕು ಕಟ್ಟೋದು ಅಂದರೆ ಹೇಳುವಂತೆ ಸುಲಭದ ಮಾತಲ್ಲ. ಪ್ರತಿದಿನ ಶೂಟಿಂಗ್ ಬ್ಯುಸಿಯ ಓಡಾಟ, ಹತ್ತಾರು ಜಾಹೀರಾತು ಕಂಪನಿಗಳ ನಿರಂತರ ಶೂಟಿಂಗ್ ಅಲ್ಲೊಂದು ಇಲ್ಲೊಂದು ಅಂತಹ ಹೇಳಿಕೊಂಡು ಸಮಾಜ ಸೇವೆಯ ಕೆಲಸಗಳು ಎಲ್ಲವೂ ಬಿಟ್ಟು ಬದುಕಿನ ಶಕ್ತಿ ನಟಿಗೆ ಬಂದು ಬಿಟ್ಟರೆ ಆಕೆ ಮತ್ತೆ ಸಿನಿಮಾ ಫೀಲ್ಡ್ ಗೆ ಎಂಟ್ರಿ ಕೊಡುವುದು ಬಾಲಿವುಡ್ ಲೆಕ್ಕಚಾರದ ಪ್ರಕಾರ ತೀರಾನೇ ಕಡಿಮೆ. ಈ ಪಟ್ಟಿಯಲ್ಲಿ ಕುಡ್ಲದ ಕುವರಿ ಐಶ್ವರ್ಯಾ ರೈ ಬಂದಿದ್ದಾರೆ. ತೀರಾ ಇತ್ತೀಚೆಗೆ ವಿಶ್ವ ಸಂಸ್ಥೆಯ ಪರವಾಗಿ ಆಂದೋಲನವೊಂದಕ್ಕೆ ಐಶ್ ರಾಯಭಾರಿ ಆಗುವುದರ ಜತೆಗೆ ಚಿನ್ನಾಭರಣ ಕಂಪನಿಯೊಂದಕ್ಕೆ ಬ್ರಾಂಡ್ ಅಂಬಾಸೀಡರ್ ಆಗಿದ್ದು ಕೂಡ ಈಗ ಬಹಳ ಹಳಸಲು ಸುದ್ದಿ.
ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ಐಶ್ವರ್ಯಾ ರೈ ಆರಾಧ್ಯಳ ತಾಯಿಯಾಗಿ, ಜಾಹೀರಾತು ಕಂಪನಿಗೆ ರೂಪದರ್ಶಿಯಾಗುವುದರ ಬೆನ್ನಿಗೆ ಮತ್ತೆ ಬಣ್ಗದ ಲೋಕಕ್ಕೆ ರೀ ಎಂಟ್ರಿ ಕೊಡುತ್ತಿರುವ ವಿಚಾರ ಇಡೀ ಬಾಲಿವುಡ್ ಚಿತ್ರರಂಗಕ್ಕೆ ಬಹಳ ದೊಡ್ಡ ಸುದ್ದಿ ಅಲ್ವಾ..? ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗುಜಾರಿಶ್' ನಂತರ ಐಶ್ ಗೆ ಮಧುರ್ ಭಂಡಾರ್ ಕರ್ ಅವರ ಹೀರೋಯಿನ್ ನಲ್ಲೂ ಅವಕಾಶ ಬಂದಿತ್ತು. ಇದೇ ಸಮಯದಲ್ಲಿ ಐಶ್ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಈ ಜಾಗದಲ್ಲಿ ಕರೀನಾ ಕಪೂರ್ ಬಂದು ನಿಂತಿದ್ದರು. ಅಲ್ಲಿಗೆ ಐಶ್ ಪತಿ, ಮಗು ಹಾಗೂ ಮಾವ- ಮತ್ತೆ ಎನ್ನುವ ಸಂಬಂಧಗಳ ನಡುವೆ ಕಾಲ ಕಳೆಯುತ್ತಾರೆ ಎಂದೇ ಅವರ ಅಭಿಮಾನಿಗಳು ಎಂದುಕೊಂಡು ಬಿಟ್ಟಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಐಶ್ ಮರಳಿ ಸಿನಿಮಾಕ್ಕೆ ಬರುವ ಮಾತು ಆಡಿದ್ದಾರೆ.
ಮಣಿಯಲ್ಲಿ ಅರಳಿದ ಐಶ್ವರ್ಯಾ:
ಅಂದಹಾಗೆ ಐಶ್ ಬೇಬಿ ಮತ್ತೆ ಸಿನಿಮಾ ರಂಗಕ್ಕೆ ಕಾಲಿಡಲು ಕಾರಣ ಮಣಿರತ್ಣಂ. ಹೌದು. ಆಂಗ್ಲ ಕಾದಂಬರಿಗಾರ ಡ್ಯಾಫ್ನೇ ಡೂ ಮೂರಿಯರ್ ಅವರ ಖ್ಯಾತ ಕಾದಂಬರಿ "ರೆಬೇಕಾ' ಈಗ ಮಣಿರತ್ನಂ ಅವರ ಕೈಯಲ್ಲಿ ಅರಳಲಿರುವ ಚಿತ್ರ. ಈಗಾಗಲೇ ಐಶ್ ಜತೆಯಲ್ಲಿ ಚಿತ್ರದ ಕುರಿತಾಗಿ ಮಾತುಕತೆಗಳು ಮುಗಿದಿದೆ. ಚಿತ್ರಕ್ಕೆ ತಕ್ಕಂತೆ ಶೂಟಿಂಗ್ ಸ್ಪಾಟ್ ಗಳನ್ನು ಗುರುತಿಸುವ ಕೆಲಸ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಇನ್ನೂಳಿದಂತೆ ರೆಬೇಕಾ ಚಿತ್ರಕ್ಕೆ ನಾಯಕ ಯಾರು ಎನ್ನೋದು..? ಈ ಪ್ರಶ್ನೆಗೆ ಉತ್ತರ ನೀಡಲು ಮಣಿ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ವಿಚಾರ ಕೂಡ ಹೊರಬಂದಿದೆ. ಮಣಿರತ್ನಂ ಅವರ ಕಳೆದ ಎರಡು ಚಿತ್ರಗಳಲ್ಲಿ ಐಶ್ವರ್ಯಾ ರೈ ಗೆ ನಾಯಕನಾಗಿ ಅಭಿಷೇಕ್ ಅವರನ್ನು ಬಳಸಿಕೊಂಡಿದ್ದರು. ಈ ಚಿತ್ರದಲ್ಲೂ ಇದೇ ನಾಯಕ- ನಾಯಕಿ ಮುಂದವರಿಸುವ ಕುರಿತು ಚಿಂತನೆ ನಡೆದಿದೆ ಎನ್ನುವ ಮಾತುಗಳು ಮುಂಬಯಿ ಗಲ್ಲಿಯಲ್ಲಿ ಕೇಳಿಸಿಕೊಂಡಿದೆ.
ಐಶ್ ಯಾಕೆ ಮಣಿ ಚಿತ್ರಕ್ಕೆ ಒಪ್ಪಿಕೊಂಡಳು:
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಮಾತಿಗೆ ಜಗದೇಕ ಸುಂದರಿ ಐಶ್ವರ್ಯಾ ರೈ ತಕ್ಷಣ ಒಪ್ಪಿಕೊಳ್ಳಲು ಇರುವ ಕಾರಣ ಏನೂ ಎಂಬ ಪ್ರಶ್ನೆ ಬಹಳ ಮಂದಿಯನ್ನು ಕಾಡುತ್ತಿರಬಹುದು. ಬಾಲಿವುಡ್ ಬಿಗ್ ಬಿ ಸೊಸೆಯ ರೀ ಎಂಟ್ರಿ ಭರ್ಜರಿಯಾಗಿರಬೇಕು ಎಂದುಕೊಂಡು ಹತ್ತಾರು ಬಾಲಿವುಡ್ ನ ಚಿತ್ರ ನಿರ್ಮಾಣ ಬ್ಯಾನರ್ ಗಳು ಜತೆಗೆ ನಿರ್ದೇಶಕರು ತುದಿ ಕಾಲಿನಲ್ಲಿ ನಿಂತಿದ್ದರೂ ಕೂಡ ಐಶ್ ಬೇಬಿಯ ಕಾಲ್ ಶೀಟ್ ಮಣಿರತ್ನಂ ಎನ್ನುವ ನಿರ್ದೇಶಕನ ಪಾಲಿಗೆ ಸಿಗಲು ಕಾರಣ ಏನೂ ಎಂಬುದಕ್ಕೆ 1997ರಲ್ಲಿ ಬಿಡುಗಡೆ ಕಂಡ ಇರುವರ್ ಚಿತ್ರ ಹೇಳುತ್ತದೆ.
1994ರಲ್ಲಿ ಜಗದೇಕ ಸುಂದರಿ ಕಿರೀಟ ಹೊತ್ತ ಐಶ್ವರ್ಯಾ ರೈ ನಂತರ ನಾನಾ ಸಿನಿಮಾಗಳಿಗೆ ನಾಯಕಿ ಸ್ದಾನಕ್ಕೆ ಅವಕಾಶ ಕೇಳಿಕೊಂಡಿದ್ದಳು. ಆದರೆ ನಿರ್ದೇಶರು ಐಶ್ ಅವರನ್ನು ಬರೀ ಸುಂದರ ಗೊಂಬೆಯಾಗಿ ಮಾತ್ರ ನೋಡಲು ಬಯಸಿದ್ದರು. ಇದೇ ಸಮಯದಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ತನ್ನ ಇರುವರ್ ಚಿತ್ರದಲ್ಲಿ ನಟಿಸಲು ಐಶ್ ಗೆ ಅವಕಾಶ ಮಾಡಿಕೊಟ್ಟರು. ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಐಶ್ ಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಐಶ್ ಈ ಚಿತ್ರದಲ್ಲಿ ಕಲ್ಪನಾ, ಕನಕವಳ್ಳಿಯ ಪಾತ್ರದಲ್ಲಿ ಎಲ್ಲ ಪ್ರೇಕ್ಷಕರಿಗೂ ಇಷ್ಟವಾದಳು. ಇತ್ತ ಕಡೆ ಐಶ್ ಗೆ ಎಲ್ಲ ಚಿತ್ರರಂಗದಿಂದಲೂ ಅವಕಾಶಗಳು ಬರಲು ಆರಂಭವಾಯಿತು. ನಂತರ ಮಣಿರತ್ನಂ ತನ್ನ ಚಿತ್ರಗಳಿಗೆ ಹೊಸ ನಾಯಕ- ನಾಯಕಿರನ್ನು ಬಳಸಿಕೊಂಡು ಸಕ್ಸಸ್ ಕಾಣುತ್ತಿದ್ದಾರೆ. ಇತ್ತ ಕಡೆ ಐಶ್ ತಮ್ಮದೇ ಸಿನಿಮಾ ಗುಂಗಿನಲ್ಲಿ ಕಾಲಕಳೆಯುತ್ತಿದ್ದರು.
ಐಶ್- ಅಭಿಯನ್ನು ಒಂದು ಮಾಡಿದ ಮಣಿ:
ನಿರ್ದೇಶಕ ಮಣಿರತ್ನಂ ಐಶ್ ಬದುಕಿನಲ್ಲಿ ಬಹಳ ದೊಡ್ಡದಾದ ಪಾತ್ರದಲ್ಲಿದ್ದಾರೆ. ಐಶ್ ನ ಆರಂಭದ ಚಿತ್ರದಿಂದ ಹಿಡಿದು ಕೊನೆಗೆ ಮದುವೆಯ ವರೆಗೂ ಮಣಿ ಐಶ್ ಗೆ ಸಾಥ್ ನೀಡಿದ್ದರು. ಇರುವರ್ ಚಿತ್ರದ ಮೂಲಕ ಮಣಿರತ್ನಂ ಐಶ್ವರ್ಯಾ ರೈ ಸಿನಿಮಾ ಬದುಕಿನ ಮೊದಲ ಅಧ್ಯಾಯ ತೆರೆದರು. 2007ರಲ್ಲಿ ಗುರು ಸಿನಿಮಾದಲ್ಲಿ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ ಅವರನ್ನು ತನ್ನ ಚಿತ್ರ ಗುರು ಗೆ ಜತೆ ಸೇರಿಸಿಕೊಳ್ಳುವ ಮೂಲಕ ಇಬ್ಬರ ನಡುವೆ ಪ್ರೀತಿಯ ಬೆಸುಗೆ ಹಾಕಿದ್ದರು. ಇದೇ ಸಮಯದಲ್ಲಿ ಅಭಿ ಹಾಗೂ ಐಶ್ ಅವರ ಮದುವೆಯಾಗಿತ್ತು. ಈ ಬಳಿಕ 2010ರಲ್ಲಿ ರಾವಣ್ ಚಿತ್ರದಲ್ಲಿ ಮತ್ತೆ ಇಬ್ಬರನ್ನು ಒಟ್ಟು ಸೇರಿಸುವ ಮೂಲಕ ಅರಾಧ್ಯ ಬಚ್ಚನ್ ಬಿಗ್ ಬಿ ಕುಟುಂಬಕ್ಕೆ ಮೊಮ್ಮಗಳನ್ನು ಪಡೆಯುವಂತೆ ಆಯಿತು. ಈ ಎಲ್ಲ ವಿಚಾರಗಳ ಹಿಂದೆ ಮಣಿರತ್ನಂ ಇದ್ದರು. ಈಗ ಚಿತ್ರರಂಗಕ್ಕೆ ಐಶ್ ಅವರನ್ನು ರೀ ಎಂಟ್ರಿ ಕೊಡಿಸುವ ಮೂಲಕ ಮತ್ತೆ ಗುರುವಾಗಿ ಮೆರೆದಿದ್ದಾರೆ. ಮೂರನೇ ಚಿತ್ರ ರೆಬೇಕಾದ ಮೂಲಕ ಐಶ್- ಮಣಿ ಕೆಮೆಸ್ಟ್ರಿ ಒಳ್ಳೆಯ ರೀತಿಯಲ್ಲಿ ವರ್ಕ್ ಔಟ್ ಆಗಲಿ ಎನ್ನೋದು ಪ್ರೇಕ್ಷಕ ಪ್ರಭು ಮಾಡಿಕೊಳ್ಳುವ ಮನವಿ.
Tuesday, September 25, 2012
ಬಾಲಿವುಡ್ ಹೀರೋಯಿನ್ ಸೂಪರ್ ಲಾಸ್ !
ಬಾಲಿವುಡ್ ಅಂಗಳದಲ್ಲಿ ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ಹೀರೋಯಿನ್ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ನ ನಾಡಿ ಮಿಡಿತದ ಅಧ್ಯಯನದಿಂದ ಹೊರ ಬಂದ ವರದಿ ಏನಪ್ಪಾ ಅಂದರೆ ಮಧುರ್ ಪಾಲಿಗೆ ಹೀರೋಯಿನ್ ನಿಜಕ್ಕೂ ಕೈ ಕೊಟ್ಟಿದೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ ಕರ್ ಚಿತ್ರ ಎಂದಾಕ್ಷಣ ಬಾಲಿವುಡ್ ಅಂಗಳದಲ್ಲಿರುವ ಇತರ ಸಿನಿಮಾಗಳ ಪಾಲಿಗೊಂದು ಹಕಿ ಸುದ್ದಿಯೇ ಆಗಿ ಬಿಡುತ್ತದೆ ಎನ್ನುವ ಮಾತು ಪ್ರಚಲಿತದಲ್ಲಿತ್ತು. ಆದರೆ ಈ ಎಲ್ಲ ಮಾತುಗಳು ಸುಳ್ಳಾಗುತ್ತಿರುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಕಾರಣ ಇಷ್ಟೇ.. ಬಾಲಿವುಡ್ ಅಂಗಳದಲ್ಲಿ ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ಹೀರೋಯಿನ್ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ನ ನಾಡಿ ಮಿಡಿತದ ಅಧ್ಯಯನದಿಂದ ಹೊರ ಬಂದ ವರದಿ ಏನಪ್ಪಾ ಅಂದರೆ ಮಧುರ್ ಪಾಲಿಗೆ ಹೀರೋಯಿನ್ ನಿಜಕ್ಕೂ ಕೈ ಕೊಟ್ಟಿದೆ.
ವಿಶ್ವದ ಹಿರಿತೆರೆಯ ಮೇಲೆ ಹೀರೋಯಿನ್ ಹೇಳುವಷ್ಟರ ಮಟ್ಟಿಗೆ ತನ್ನ ಚಮಕ್ ತೋರಿಸಿಲ್ಲ. ಬಿಡುಗಡೆಯಾಗಿ ಒಂದು ವಾರದ ಕಲೆಕ್ಷನ್ ತೀರಾ ಕುಸಿತ ಕಂಡಿದೆ. ಜತೆಯಲ್ಲಿ ಆಡಿಯನ್ಸ್ ಲೇವೆಲ್ ಫೋಲ್ ನಲ್ಲೂ ಹೀರೋಯಿನ್ ಟೋಟಲಿ ಉಲ್ಟಾಪಲ್ಟಾ ಆಗಿದೆ. 32 ಕೋಟಿ ರೂಪಾಯಿಗಳಲ್ಲಿ ಸಿದ್ಧಗೊಂಡ ಹೀರೋಯಿನ್ ವಾರದ ಕಲೆಕ್ಷನ್ ಗ್ಲೋಬಲ್ ಮಾರುಕಟ್ಟೆಯಲ್ಲಿ ಬರೀ 25 ಕೋಟಿ ರೂಪಾಯಿ ಮಾತ್ರ ! ಆದರೆ ಚಿತ್ರದ ನಿಜವಾದ ಓಟ ಆರಂಭವಾಗೋದೆ ಚಿತ್ರ ಬಿಡುಗಡೆ ಕಂಡ ಮೊದಲ ವಾರದಲ್ಲಿ ಚಿತ್ರಕ್ಕೆ ಹಾಕಿದ ಬಜೆಟ್ ಮತ್ತೆ ನಿರ್ಮಾಪಕನ ಕೈ ಸೇರುತ್ತದೆ. ಹೀರೋಯಿನ್ ಮಾತ್ರ ಈ ಕೆಲಸವನ್ನು ನೆಟ್ಟಗೆ ಮಾಡಿಲ್ಲ.
ಹೀರೋಯಿನ್ ಹುಟ್ಟುವ ಮೊದಲು ಸುದ್ದಿ:
ರಿಯಾಲಿಟಿ ವಸ್ತು ವಿಚಾರಗಳ ಮೇಲೆ ಪಡಿಯಚ್ಚು ತೆಗೆಯುವುದರಲ್ಲಿ ಸದಾ ಸಿದ್ಧ ಹಸ್ತರೆಂದೇ ಗುರುತಿಸಿಕೊಳ್ಳುವ ನಿರ್ದೇಶಕ ಮಧುರ್ ಈ ಚಿತ್ರದಲ್ಲಿ ಹಾಲಿವುಡ್ ನಾಯಕಿಯೊಬ್ಬರನ್ನು ಬಾಲಿವುಡ್ ರಂಗದ ನಾಯಕಿಯ ಜತೆಗೆ ತುಲನೆ ಮಾಡಿಕೊಂಡು ಮಾಡಿದ ಸಿನಿಮಾ ಎನ್ನುವ ಕಾರಣಕ್ಕೆ ಚಿತ್ರ ಬಿಡುಗಡೆ ಕಾಣುವ ಮೊದಲೇ ಸುದ್ದಿಯಾಗಿತ್ತು. ಚಿತ್ರದ ಆರಂಭದಲ್ಲಿ ಹೀರೋಯಿನ್ ಪಟ್ಟಕ್ಕೆ ಸಿದ್ಧಗೊಂಡವರು ಬಿಗ್ ಬಿ ಸೊಸೆ ಐಶ್ವರ್ಯಾ ರೈ ಬಚ್ಚನ್. ಚಿತ್ರದ ಕತೆಗೂ ಐಶ್ ಬದುಕಿಗೂ ಒಂದು ಲಿಂಕ್ ಇತ್ತು ಎನ್ನುವ ಕಾರಣಕ್ಕೆ ನಿರ್ದೇಶಕ ಮಧುರ್ ಐಶ್ ರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ದುರಾದೃಷ್ಟವೆಂದರೆ ಹೀರೋಯಿನ್ ನಾಯಕಿ ಐಶ್ವರ್ಯಾ ರೈ ಎಂದು ಘೋಷಣೆ ಮಾಡುತ್ತಿದ್ದಾಗಲೇ ಐಶ್ ಗರ್ಭಿಣಿ ಎನ್ನುವ ಸುದ್ದಿ ಬಂತು.
ಈ ವಿಚಾರದಿಂದ ನಿರ್ದೇಶಕ ಮಧುರ್ ಗೆ ಮೊದಲು ಹೊಡೆತ ಬಿದ್ದ ಬಳಿಕ ಹೀರೋಯಿನ್ ಜಾಗಕ್ಕೆ ಬಂದವರು ಕರೀನಾ ಕಪೂರ್. ಈ ಚಿತ್ರದ ಸಂಭಾವನೆ ಮೂಲಕ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕರೀನಾ ಮೊದಲ ಸ್ಥಾನಕ್ಕೆ ಸಲ್ಲಿಕೆಯಾದರು. ಚಿತ್ರದಲ್ಲಿರುವ ಹಲ್ಕಟ್ ಜವಾನಿ ಹಾಡಿನ ಮೂಲಕ ಯುಟ್ಯೂಬ್ ನಲ್ಲಿ ಕರೀನಾ ಕಪೂರ್ ಮತ್ತೊಬ್ಬ ನಟಿ ಕತ್ರಿನಾ ಕೈಫ್ ಹಿಂದಿನ ಹಾಡು ಶೀಲಾಕೀ ಜವಾನಿಗೆ ಟಾಂಗ್ ಕೊಟ್ಟಳು. ಈ ಬಳಿಕ ಚಿತ್ರದ ಆರಂಭದಿಂದ ಕೊನೆಯವರೆಗೂ ಒಂದಲ್ಲ ಒಂದು ಸುದ್ದಿಯ ಮೂಲಕ ಹೀರೋಯಿನ್ ಪ್ರಚಾರದ ಅಂಗಳದಲ್ಲಿಯೇ ವರ್ಷ ಪೂರ್ತಿ ನಿಂತು ಹೋದಳು.
ಹೀರೋಯಿನ್ ಸೋತದದ್ದು ಯಾಕೆ?
ಮಧುರ್ ಚಿತ್ರಗಳ ವಿಶೇಷತೆಯಲ್ಲಿ ಕತೆಗೆ ಮೊದಲ ಸ್ಥಾನ ಇದ್ದೆ ಇರುತ್ತದೆ. ಈ ಕತೆಯನ್ನು ಮಧುರ್ ತಮ್ಮ ಶೈಲಿಗೆ ಅನ್ವಯಿಸಿಕೊಂಡು ಪ್ರೇಕ್ಷಕರ ಮುಂದೆ ಭಿನ್ನ ರೀತಿಯಲ್ಲಿ ಇಟ್ಟಾಗ ಪ್ರೇಕ್ಷಕನಿಗಂತೂ ವಿಶಿಷ್ಟ ರೀತಿಯ ಅನುಭವ ಚಿತ್ರದ ಮೂಲಕ ಲಭ್ಯವಾಗುತ್ತಿರುವುದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ವಿಚಾರ. ಆದರೆ ನಾಯಕಿಯೊಬ್ಬಳ ಬದುಕಿನ ಚಿತ್ರಣವನ್ನು ಈ ಬಾರಿ ಮಧುರ್ ತನ್ನ ಚಿತ್ರದಲ್ಲಿ ಸರಿಯಾಗಿ ಇಟ್ಟಿಲ್ಲ. ಚಿತ್ರ ವಿಮರ್ಶಕರ ಪ್ರಕಾರ ಇದು ಮಧುರ್ ಚಿತ್ರವಲ್ಲ ಕರೀನಾ ಚಿತ್ರ ಎಂದು ಹೇಳಿಕೊಂಡಿದ್ದರು.
ಚಿತ್ರ ಬಿಡುಗಡೆಯ ಮೊದಲು ವಿಶೇಷವಾದ ಪ್ರಚಾರ ತಂತ್ರಗಳು ಕೂಡ ಚಿತ್ರದ ಸೋಲಿಗೆ ಕಾರಣವಾಗಿದೆ. ಪ್ರೇಕ್ಷಕ ಸಮೂಹ ವಿಶೇಷವಾದ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ಗಳಿಗೆ ಹೋಗಿದ್ದರು. ಆದರೆ ಚಿತ್ರದ ಸಪ್ಪೆಯಾದ ಕತೆ ಪ್ರೇಕ್ಷಕರಿಗೆ ನಿರಾಶೆ ಮೂಡಿಸಿತ್ತು. ಇತ್ತ ಕಡೆ ಬಾಲಿವುಡ್ ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿರುವ ಬರ್ಫಿಯ ರಾಕೆಟ್ ವೇಗದ ಮುಂದೆ ಹೀರೋಯಿನ್ ಮಲಗಿಯೇ ಹೋದಳು. ಬಾಲಿವುಡ್ ಲೆಕ್ಕಚಾರದ ಪ್ರಕಾರ ಬಿಡುಗಡೆ ಕಂಡ ಚಿತ್ರವೊಂದು ಸಕ್ಸಸ್ ಫುಲ್ ಆಗಿ ಓಡುತ್ತಿರುವಾಗ ಮತ್ತೊಂದು ಚಿತ್ರ ಬಿಡುಗಡೆ ಮಾಡಿದರೆ ಗೆಲುವು ಸಾಧಿಸುವ ಸಾಧ್ಯತೆಗಳು ಬಹಳ ಕಡಿಮೆ ಎನ್ನುವ ಮಾತಿದೆ. ಇದು ಬರ್ಫಿ ಹಾಗೂ ಹೀರೋಯಿನ್ ಪಾಲಿನ ವಿಚಾರದಲ್ಲಿ ಸರಿಯಾಗಿದೆ.
ಚಿತ್ರದ ನಾಯಕಿ ಕರೀನಾ ಕಪೂರ್ ಚಿತ್ರ ಬಿಡುಗಡೆ ಕಾಣುವ ಮೊದಲೇ ಸೈಫ್ ಅಲಿಖಾನ್ ಅವರನ್ನು ಮದುವೆಯಾಗುವ ಕುರಿತು ಮಾಧ್ಯಮಗಳಲ್ಲಿ ಹೇಳಿದ ನೀಡಿಕೆ ಕೂಡ ಕರೀನಾ ವೃತ್ತಿ ಬದುಕಿಗೆ ಉಲ್ಟಾ ಆಗಿದೆ. ಮದುವೆಯಾಗುತ್ತಿರುವ ನಾಯಕಿಯನ್ನು ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವೀಕಾರ ಮಾಡುವ ಪ್ರಮೇಯಗಳು ಬಾಲಿವುಡ್ ನಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣ ಸಿಕ್ಕಿದೆ. ಕರೀನಾ ಮದುವೆ ಹೀರೋಯಿನ್ ಗೆ ಮೈನಸ್ ಪಾಯಿಂಟ್. ಯೂ ಟಿವಿ ಮೋಶನ್ ಪಿಕ್ಟರ್ ಆಡಿಯಲ್ಲಿ ಬಂದ ಹೀರೋಯಿನ್ ಚಿತ್ರದ ಪ್ರಚಾರದಲ್ಲಿ ಮಾಡಿದ ಎಡವಟ್ಟು. ಆರಂಭದ ಹೀರೋಯಿನ್ ಚಿತ್ರಕ್ಕೆ ಐಶ್ ರನ್ನು ಇಳಿಸುವ ಇರಾದೆಯಿಂದ ಯುಟಿವಿ ಚಿತ್ರ ನಿರ್ಮಾಣ ಸಂಸ್ಥೆ ಐಶ್ ರನ್ನೇ ಬಂಡವಾಳ ಇಟ್ಟುಕೊಂಡು ಪ್ರಚಾರಕ್ಕೆ ಇಳಿಯಿತು. ಆದರೆ ಚಿತ್ರದ ನಾಯಕಿ ಬದಲಾದ ನಂತರ ಚಿತ್ರದ ಪ್ರಚಾರದಲ್ಲಿ ಕರೀನಾ ಅವರನ್ನು ಬಳಸಿಕೊಂಡು ಯಾವುದೇ ಗಿಮಿಕ್ ಮಾಡಲು ಯುಟಿವಿ ಮುಂದೆ ಬರಲಿಲ್ಲ. ಇತ್ತ ಕಡೆ ಬಾಲಿವುಡ್ ನಲ್ಲಿ ಬಂದ ಏಜೆಂಟ್ ವಿನೋದ್ ಚಿತ್ರದಲ್ಲೂ ಕರೀನಾ ಪ್ಲಾಪ್ ನಾಯಕಿಯಾಗಿಯೇ ಗುರುತಿಸಿಕೊಂಡಳು. ಅದು ಹೀರೋಯಿನ್ ಪಾಲಿಗೆ ಶಾಪವಾಯಿತು. ಟೋಟಲಿ ಹೀರೋಯಿನ್ ಪಾಲಿನ ಸೋಲು ನಿಜಕ್ಕೂ ಕರೀನಾಗೆ ತಟ್ಟುತ್ತಾ ಅಥವಾ ನಿರ್ದೇಶಕ ಮಧುರ್ ಬದುಕಿಗೆ ಮುಳ್ಳಾಗುತ್ತಾ ಎನ್ನೋದು ಚಿತ್ರ ನೋಡಿ ಹೊರ ಬಂದ ಪ್ರೇಕ್ಷರನ್ನು ಕಾಡಿದ ಪ್ರಶ್ನೆ.
Monday, September 24, 2012
ಪ್ರೇಕ್ಷಕರ ಮನಕರಗಿಸಿದ ಬರ್ಫಿ !
ಬರ್ಫಿ ಬಾಲಿವುಡ್ ನ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ಎರಡರಲ್ಲೂ ಗೆದ್ದುಕೊಂಡು ಬಂದಿದೆ. ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ-ಇಲಿಯಾನ ಡಿ ಕ್ರೂಝ್ ನಟನೆಯಿಂದ ಬರ್ಫಿ ಪ್ರೇಕ್ಷಕನ ಭರವಸೆಯನ್ನು ಹುಸಿ ಮಾಡಿಲ್ಲ ಎನ್ನುವುದು ಚಿತ್ರ ಬಿಡುಗಡೆಯ ನಂತರ ಕೇಳಿ ಬರುತ್ತಿರುವ ಒಳ್ಳೆಯ ಮಾತು.
* ಸ್ಟೀವನ್ ರೇಗೊ
ಆಸ್ಕರ್ ಪ್ರಶಸ್ತಿ ಪ್ರತಿಯೊಬ್ಬ ನಿರ್ದೇಶಕನ ಕನಸ್ಸಿನ ಕೂಸು. ತಾನು ನಿರ್ದೇಶನ ಮಾಡಿದ ಎಲ್ಲ ಚಿತ್ರಗಳು ಕೂಡ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ನಾಮಕಿಂತಗೊಳ್ಳಬೇಕು ಎನ್ನೋದು ನಿರ್ದೇಶಕನ ಬದುಕಿನ ತುಂಬಾ ಚಡಪಡಿಕೆ. ಆದರೆ ದುರಾದೃಷ್ಟವೆಂದರೆ ಎಲ್ಲ ಚಿತ್ರಗಳು ಈ ಪಾಟಿಗೆ ಸಕ್ಸಸ್ ಕಾಣೋದಿಲ್ಲ. ಅದಕ್ಕೂ ಮುಖ್ಯವಾಗಿ ಆಸ್ಕರ್ ಪಟ್ಟಿಯೊಳಗೆ ಸೇರಿಕೊಳ್ಳುವ ಮಾತು ಕೂಡ ಬಹಳ ಕಷ್ಟ.
ಅದರಲ್ಲೂ ಭಾರತೀಯ ಚಿತ್ರರಂಗದಲ್ಲಂತೂ ಎಲ್ಲರೂ ಒಪ್ಪಿಕೊಳ್ಳಬೇಕಾದ ಒರಿಜಿನಾಲಿಟಿ ಮಾತು. ಇದೇ ಆಸ್ಕರ್ ಪಟ್ಟಿಯಲ್ಲಿ ಬಾಲಿವುಡ್ ನ ಬರ್ಫಿ ಚಿತ್ರ ಸೇರಿಕೊಂಡಿದೆ. ಭಾರತೀಯ ಚಿತ್ರರಂಗದ ಹತ್ತಾರು ಚಿತ್ರಗಳು ಬಾಲಿವುಡ್ ನ ವಿದ್ಯಾ ಬಾಲನ್ ನಟಿಸಿದ ‘ಕಹಾನಿ’, ‘ಡರ್ಟಿ ಪಿಕ್ಚರ್’ ಜತೆಗೆ ಸುದೀಪ್ ನಟನೆಯ ‘ಈಗ’, ತಮಿಳಿನ ‘ಏಳಾಂ ಅರಿವು’ ಮತ್ತು ‘ವಳಕ್ಕು ಎನ್ನ’ ಚಿತ್ರಗಳು ಆಸ್ಕರ್ ಪಟ್ಟಿಯಲ್ಲಿ ನಾಮಕಿಂತಗೊಂಡಿದೆ. ಆದರೆ ತಂತ್ರಜ್ಞಾನ, ಕತೆ, ನಟನೆ ಎಲ್ಲವೂ ಲೆಕ್ಕಚಾರ ಮಾಡಿಕೊಂಡು ಫಿಲ್ಮಾ ಫೆಡರೇಶನ್ ಆಫ್ ಇಂಡಿಯಾ (ಎಫ್ಎಫ್ ಐ) ಆಸ್ಕರ್ ಗಾಗಿ ಚಿತ್ರಗಳನ್ನು ಆಯ್ಕೆ ಮಾಡುತ್ತದೆ.
ಈ ಎಲ್ಲ ವಿಚಾರಗಳನ್ನು ಸೈಡ್ಗೆ ಇಟ್ಟುಕೊಂಡರೂ ಕೂಡ ಬರ್ಫಿ ಬಾಲಿವುಡ್ ನ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ಎರಡರಲ್ಲೂ ಗೆದ್ದುಕೊಂಡು ಬಂದಿದೆ. ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ-ಇಲಿಯಾನ ಡಿ ಕ್ರೂಝ್ ನಟನೆಯಿಂದ ಬರ್ಫಿ ಪ್ರೇಕ್ಷಕನ ಭರವಸೆಯನ್ನು ಹುಸಿ ಮಾಡಿಲ್ಲ ಎನ್ನುವುದು ಚಿತ್ರ ಬಿಡುಗಡೆಯ ನಂತರ ಕೇಳಿ ಬರುತ್ತಿರುವ ಒಳ್ಳೆಯ ಮಾತು.
ಚಿತ್ರ ಯಾಕೆ ನೋಡಬೇಕು:
ಬಾಲಿವುಡ್ ಪ್ರತಿಭಾವಂತ ನಿರ್ದೇಶಕ ಅನುರಾಗ್ ಬಸು ಬರ್ಫಿ ಚಿತ್ರ ತಯಾರಿಸುವ ಹೊತ್ತಿನಲ್ಲೇ ವಿಚಿತ್ರ ಪ್ರೋಮೋಗಳ ಮೂಲಕ ಸುದ್ದಿಯಾಗಿತ್ತು. ಚಿತ್ರದಲ್ಲಿರುವ ವಿಶಿಷ್ಟ ಕತೆ, ನಟನೆ ಜತೆಗೆ ಮುದನೀಡುವ ಹಾಡುಗಳಿಂದ ಬರ್ಫಿ ಚಿತ್ರ ಓಡಿದೆ ಎನ್ನೋದು ಎಲ್ಲರೂ ಹೇಳಿಕೊಂಡು ತಿರುಗಾಡುವ ಮಾತು.
ಆದರೆ ಒರಿಜಿನಾಲಿಟಿಯಾಗಿ ಹೇಳುವುದಾದರೆ ಬರ್ಫಿ ಸೂಪರ್ ಚಿತ್ರ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿರುವ ಕಿವುಡ, ಮೂಗ ಹುಡುಗನ ಕತೆಯೇ ಚಿತ್ರದ ತುಂಬಾ ಓಡಾಡುತ್ತದೆ. ಈ ಪಾತ್ರವನ್ನು ರಣಬೀರ್ ಕಪೂರ್ ಮಾಡಿದ್ದಾರೆ. ಇಬ್ಬರು ನಾಯಕಿಯಲ್ಲಿ ಪ್ರಿಯಾಂಕಾ ಹಾಗೂ ಇಲಿಯಾನಾ ಪಾತ್ರ ವರ್ಗಕ್ಕೆ ಪ್ರಾಣ ತುಂಬಿದ್ದಾರೆ. ಸಮಾಜದಲ್ಲಿರುವ ಭಿನ್ನರ ಬದುಕಿನಲ್ಲಿ ಪಾಸಿಟಿವ್ ಆಶಾಕಿರಣ ಮೂಡಿಸುವ ಚಿತ್ರವಾಗಿರುವುದರಿಂದ ಬಿಡುಗಡೆಯ ಮೊದಲೇ ಗೆಲ್ಲುವ ಸೂಚನೆ ಬರ್ಫಿಯಲ್ಲಿತ್ತು.
ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ರಣಬೀರ್ ನಂತರ ಇಬ್ಬರು ಹುಡುಗಿಯರನ್ನು ಭೇಟಿಯಾಗುವ ಸನ್ನಿವೇಶದಿಂದಲೇ ಚಿತ್ರ ಆರಂಭ ಸಾಗುತ್ತದೆ. ಎರಡು ಹಂತದಲ್ಲಿ ಸಾಗುವ ಬರ್ಫಿ ಇಂಗ್ಲೀಷ್ ಚಿತ್ರದಿಂದ ಪ್ರೇರಿತವಾಗಿದೆ ಎನ್ನೋದು ಸುಳ್ಳಲ್ಲ. ಮಸಾಲೆ, ಪ್ರೇಮ ಸಲ್ಲಾಪಗಳ ಚಿತ್ರಗಳಿಂದ ರೋಸಿ ಹೋದ ಚಿತ್ರ ಪ್ರೇಕ್ಷಕರಂತೂ ಬರ್ಫಿಯಲ್ಲಿ ಭಿನ್ನ ಶೈಲಿಯ ಕತೆ, ನಟರ ನಟನೆಯಿಂದ ಕಡ್ಡಾಯವಾಗಿ ಚಿತ್ರ ನೋಡಬೇಕು ಎನ್ನಿಸಿಬಿಡುತ್ತದೆ. ವಿಚಿತ್ರ ಪರಿಸ್ಥಿತಿಯಲ್ಲಿ ಬೆಳಯುವ ಪ್ರಿಯಾಂಕಾ ಚೋಪ್ರಾರನ್ನು ತನ್ನ ಮಗಳೆಂದು ಒಪ್ಪಿಕೊಳ್ಳಲು ರೆಡಿ ಇಲ್ಲದ ಹೆತ್ತವರು, ರಣಬೀರ್ನ ಮುದ್ದು ಮುದ್ದು ನಟನೆ, ಇಲಿಯಾನಾರ ಮತ್ತೇ ಮತ್ತೇ ನೋಡುವಂತೆ ಮಾಡುವ ಪಾತ್ರ ಎಲ್ಲವೂ ಚಿತ್ರದ ಪ್ಲಸ್ ಪಾಯಿಂಟ್ಗಳು. ಮಾತಿಲ್ಲದ ಕತೆಯಿಲ್ಲದ ಬರೀ ಆಂಗಿಕ ಭಾಷೆಯಿಂದಲೇ ಓಡುವ ಬರ್ಫಿ ಚಿತ್ರಕ್ಕಂತೂ ಸಧ್ಯದ ಮಾರುಕಟ್ಟೆಯಲ್ಲಿ ಸಖತ್ ಭವಿಷ್ಯವಂತೂ ಇದ್ದೇ ಇದೆ ಎನ್ನುವುದು ಪ್ರೇಕ್ಷಕ ವರ್ಗದ ಮಾತು.
ಯೂಟಿವಿ ಮೋಶನ್ ಪಿಕ್ಚರ್ ಬ್ಯಾನರ್ ನಲ್ಲಿ ಸಿದ್ಧಾರ್ಥ ರಾಯ್ ಕಪೂರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೋತು ನಂತರ ಮತ್ತೇ ಬದ್ದು ಬರಲು ಪ್ರಯತ್ನ ಪಟ್ಟ ಅನುರಾಗ್ ಬಸು ಹೊಸ ಪ್ರಯತ್ನ ಎಲ್ಲರಿಗೂ ಹಿಡಿಸಿದೆ ಎನ್ನುವುದರ ಪುರಾವೆ ಬರ್ಫಿ ಚಿತ್ರ ಓಡುತ್ತಿರುವ ಓಟವೇ ಸಾಕ್ಷಿ ನೀಡುತ್ತದೆ.
ಬರ್ಫಿ ಕಲೆಕ್ಷನ್ನಲ್ಲೂ ಸೂಪರ್:
ರೊಮ್ಯಾಂಟಿಕ್, ಕಾಮಿಡಿ ಬೇಸ್ಡ್ ಮೇಲೆ ನಿರೂಪಿತರಾದ ಬರ್ಫಿ ಚಿತ್ರ ಬಿಡುಗಡೆಯಾದ ಪ್ರಥಮ ವಾರಾಂತ್ಯಕ್ಕೆ ೩೪.೬ ಕೋಟಿ ರೂ. ಬಾಚಿಕೊಂಡಿದೆ. ಚಿತ್ರವನ್ನು ೩೦ ಕೋಟಿ ರೂ. ಬಜೆಟ್ ನಲ್ಲಿ ತಯಾರಿಸಲಾಗಿತ್ತು. ಚಿತ್ರ ಬಿಡುಗಡೆಯ ಮೊದಲ ದಿನವೇ ೯.೨೦ ಕೋಟಿ ರೂ., ಎರಡನೇ ದಿನ ೧೧.೫೦ ಕೋಟಿ ರೂ., ೩ನೇ ದಿನ ೧೩.೫ ಕೋಟಿ ರೂ. ಸಂಪಾದಿಸಿದೆ.
ಚಿತ್ರ ಭಾರತದಲ್ಲಿನ ಸುಮಾರು ೧೩೦೦ ಸಿನೆಮಾ ಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ದೊಡ್ಡ ಚಿತ್ರಗಳಿಗೆ ಹೋಲಿಸಿದರೆ ಇದು ಕಡಿಮೆ ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬರ್ಫಿಗೆ ದೊರಕಿರುವ ಪ್ರತಿಕ್ರಿಯೆ ಅದ್ಭುತವಾಗಿದೆ ಎನ್ನುವುದು ನಿರ್ಮಾಪಕ ಸಿದ್ಧಾರ್ಥ ರಾಯ್ ಕಪೂರ್ ಹೇಳುತ್ತಾರೆ. ಚಿತ್ರವನ್ನು ಇತರ ಚಿತ್ರಗಳಿಗಿಂತ ಭಿನ್ನವಾಗಿ ರೂಪಿಸಲು ಸಂಗೀತ ನಿರ್ದೇಶಕ ಪ್ರೀತಮ್ ಸಾಕಷ್ಟು ಕೆಲಸ ಮಾಡಿದ್ದಾರೆ. ಖುದ್ದು ಹಾಡಲು ಬರೋದಿಲ್ಲ ಎಂದು ಕೂರುವ ರಣಬೀರ್ನನ್ನು ಹಾಡಿಸಿದ ಪಾಟಿಪಟಿ ಹಾಡು ಈಗಾಗಲೇ ಯೂಟ್ಯೂಬ್ ಪ್ರೇಕ್ಷಕರನ್ನು ಮೋಡಿ ಮಾಡಿದೆ.
Sunday, September 23, 2012
ಮೋನಿಕಾ ಓ ಮೈ ಡಾರ್ಲಿಂಗ್ !
ಎಸ್.. ಅವಳು ಮತ್ತೆ ಫೀಲ್ಡ್ ಗೆ ಬಂದಿದ್ದಾಳೆ. ಇಡೀ ಅಮೇರಿಕದ ಮಂದಿಯೇ ಅವಳು ಏನೂ ಹೇಳುತ್ತಾಳೆ ಎನ್ನುವ ವಿಚಾರಕ್ಕೆ ಕಿವಿ ನೆಟ್ಟಗೆ ಮಾಡಿಕೊಂಡು ಕೂತಿದ್ದಾರೆ. ಇತ್ತ ಕಡೆ ಅಮೇರಿಕದ ಅಧ್ಯಕ್ಷರುಗಳೇ ಮತ್ತೊಂದು ಇಂತಹ ತಪ್ಪುಗಳು ನಡೆಯಕೂಡದು ಎಂದು ಪಣ ತೊಟ್ಟು ಬಿಟ್ಟಿದ್ದಾರೆ. ಅಮೇರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬದುಕಿನಲ್ಲಂತೂ ಇವಳ ಮಾತಿನಿಂದ ಮತ್ತೊಂದು ಸುನಾಮಿ ಎದ್ದು ಬಿಡುವ ಸಾಧ್ಯತೆಗಳೇ ಜಾಸ್ತಿಯಾಗಿದೆ. ಇವಳೇ ಮೋನಿಕಾ ಸ್ಯಾಮ್ಲಿ ಲೆವೆನ್ಸ್ಕೀ.
ಎಸ್.. ಅವಳು ಮತ್ತೆ ಫೀಲ್ಡ್ ಗೆ ಬಂದಿದ್ದಾಳೆ. ಇಡೀ ಅಮೇರಿಕದ ಮಂದಿಯೇ ಅವಳು ಏನೂ ಹೇಳುತ್ತಾಳೆ ಎನ್ನುವ ವಿಚಾರಕ್ಕೆ ಕಿವಿ ನೆಟ್ಟಗೆ ಮಾಡಿಕೊಂಡು ಕೂತಿದ್ದಾರೆ. ಇತ್ತ ಕಡೆ ಅಮೇರಿಕದ ಅಧ್ಯಕ್ಷರುಗಳೇ ಮತ್ತೊಂದು ಇಂತಹ ತಪ್ಪುಗಳು ನಡೆಯಕೂಡದು ಎಂದು ಪಣ ತೊಟ್ಟು ಬಿಟ್ಟಿದ್ದಾರೆ. ಅಮೇರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬದುಕಿನಲ್ಲಂತೂ ಇವಳ ಮಾತಿನಿಂದ ಮತ್ತೊಂದು ಸುನಾಮಿ ಎದ್ದು ಬಿಡುವ ಸಾಧ್ಯತೆಗಳೇ ಜಾಸ್ತಿಯಾಗಿದೆ. ಇವಳೇ ಮೋನಿಕಾ ಸ್ಯಾಮ್ಲಿ ಲೆವೆನ್ಸ್ಕೀ. ಶಾರ್ಟ್ ನಲ್ಲಿ ಹೇಳಿ ಬಿಡೋದಾದರೆ ಮೋನಿಕಾ ಲೆವೆನ್ಸ್ಕೀ. ಇಡೀ ಜಗತ್ತಿಗೆ ಅಮೇರಿಕದ ದೇಶದ ಹೆಸರಿನ ಜತೆಯಲ್ಲಿ ಮೋನಿಕಾ ಹೆಸರು ಕೂಡ ಅಷ್ಟೇ ಫೇಮಸ್ಸ್. ಕ್ಲಿಂಟನ್- ಮೋನಿಕಾ ರಸಲೀಲೆ ಎನ್ನುವ ಪುಟ್ಟ ನಾಲ್ಕು ಅಕ್ಷರಗಳನ್ನು ಜತೆಯಾಗಿ ಕಂಪೋಸ್ ಮಾಡಿ ಗೂಗಲ್ ಬ್ರಡ್ಮಾಂಡದಲ್ಲಿ ಹರಿಯಬಿಟ್ಟರೆ ಸಾಕು. ನೂರಾರು ಪುಟಗಳು ತೆರೆದು ಕೂರತ್ತೆ. ಹತ್ತಾರು ವಿಚಾರಗಳು ಕೂಲ್ ಆಗಿ ಓಪನ್ ಆಗಿ ನೋಡುವ ವಲಯವನ್ನೇ ದಂಗು ಮೂಡಿಸಿಬಿಡುತ್ತದೆ. ಅದೇ ಈ ಹೆಸರಿಗೆ ಇರುವ ಕಿಮ್ಮತ್ತು.
ಅಂದಹಾಗೆ ಮೋನಿಕಾ ಯಾರು ಎನ್ನುವ ಕುತೂಹಲ ಕೆರಳುತ್ತಿದ್ದಾರೆ ಕೇಳಿ ಇಲ್ಲಿ. ಅಮೇರಿಕ ವೈಟ್ ಹೌಸ್ ನ ಹತ್ತಾರು ಗೋಡೆಗಳು ಅವಳ ಕುರಿತು ಬಾಯಿ ಬಡಿದುಕೊಳ್ಳುತ್ತದೆ. ೧೯೯೫ ನವೆಂಬರ್ ನಿಂದ ೧೯೯೭ ಮಾರ್ಚ್ ಅವಧಿಯಲ್ಲಿ ಅಮೇರಿಕದ ಅಧ್ಯಕ್ಷ ಪಟ್ಟಗೆ ಬಂದ ಬಿಲ್ ಕ್ಲಿಂಟನ್ ಅವರ ಆಪ್ತ ಸಹಾಯಕಿಯಾಗಿ ಸೇರಿಕೊಂಡ ಮಹಿಳೆಯೇ ಈ ಮೋನಿಕಾ . ಈ ಅವಧಿಯಲ್ಲಿಯೇ ಬಿಲ್ ಕ್ಲಿಂಟನ್ ರ ಅಕ್ರಮ ಸಂಬಂಧಗಳನ್ನು ಮೊತ್ತ ಮೊದಲ ಬಾರಿಗೆ ಇಡೀ ವಿಶ್ವದ ಮುಂದೆ ಬಾಯಿಬಡಿದುಕೊಂಡವಳು ಕೂಡ ಇದೇ ಮೋನಿಕಾ. ಜಾಗತಿಕ ವಲಯದಲ್ಲಿ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೇರಿಕದ ನಾಯಕನನ್ನು ಮುಖ ತೋರಿಸಿಕೊಂಡು ಓಡಾಡದಂತೆ ಮಾಡಿದ ದಿಟ್ಟ ಮಹಿಳೆ ಮೋನಿಕಾ ಎಂದು ಎಲ್ಲರಿಗೂ ಗೊತ್ತಿದೆ.
ಮೋನಿಕಾ ಕುಟುಕು ಕ್ಲಿಂಟನ್ ಟೆಲ್ ಆಲ್:
ಅಮೆರಿಕದ ಮಾಜಿ ಅಧ್ಯಕ್ಷರನ್ನು ಸಾಕಷ್ಟು ಮುಜುಗರಕ್ಕೀಡಾಗುವಂತೆ ಮಾಡಿದ್ದ ಮೋನಿಕಾ, ಸದ್ಯಕ್ಕೆ ಹೊಸ ಬಾಂಬ್ ಹಾಕಲಿದ್ದಾಳೆ. ತನ್ನ ಮತ್ತು ಕ್ಲಿಂಟನ್ ನಡುವಿನ ಸಂಬಂಧದ ಇನ್ನಷ್ಟು ಗುಟ್ಟಿನ ವಿಚಾರಗಳನ್ನು ಯಥಾವತ್ತಾಗಿ ಪುಸ್ತಕದ ರೂಪದಲ್ಲಿ ಜಗತ್ತಿನ ಮುಂದೆ ಇಡಲಿದ್ದಾಳೆ. ಅದಕ್ಕಾಗಿ ಅವಳು ಈ ಕೃತಿಗೆ ಇಟ್ಟ ಹೆಸರೇ ಕ್ಲಿಂಟನ್ ಟೆಲ್-ಆಲ್ ಎನ್ನುವುದು. ಈ ಕೃತಿಯ ಮೂಲಕ ತನ್ನ ಮತ್ತು ಕ್ಲಿಂಟನ್ ನಡುವಿನ ಪ್ರೇಮ ವ್ಯವಹಾರಗಳನ್ನು ಬಿಚ್ಚಿಡಲು ಮೋನಿಕಾ ನಿರ್ಧರಿಸಿದ್ದಾಳೆ. ಈ ಕೃತಿ ಕ್ಲಿಂಟನ್ ನ ವಿವಾಹ ಬಾಂಧವ್ಯವನ್ನು ಮುರಿದು ಹಾಕುವ ನಿಟ್ಸಿನಲ್ಲಿದೆ ಮತ್ತು ೨೦೧೬ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸಲಿರುವ ಹಿಲರಿಯ ಯೋಜನೆಗಳ ಮೇಲೂ ಪರಿಣಾಮ ಬೀರುವ ಎಲ್ಲ ಸೂಚನೆಗಳು ಕಾಣಿಸಿಕೊಂಡಿದೆ.
ಈಗಾಗಲೇ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಕ್ಲಿಂಟನ್ ಗೆ ಈ ಕೃತಿ ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕಬಹುದು ಎನ್ನುವ ಮಾತುಗಳು ಅಮೇರಿಕದ ತುಂಬಾ ಕೇಳಲು ಆರಂಭವಾಗಿದೆ. ಕೆಲವು ಮಾಧ್ಯಮಗಳು ಆಕೆಯ ಪುಸ್ತಕ ಕೇವಲ ಪ್ರತೀಕಾರದಂತಿಲ್ಲ. ಅದು ಅವರನ್ನು ಸಾಯಿಸಲು ಸಾಕು! ಎನ್ನುವಂತೆ ಅಮೇರಿಕದ ಮಾಧ್ಯಮಗಳು ಬರೆದುಕೊಳ್ಳುತ್ತಿದೆ. ಈ ತಿಂಗಳ ಆರಂಭದಲ್ಲಿ ಕ್ಲಿಂಟನ್ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಯಶಸ್ವೀ ಭಾಷಣ ಮಾಡಿದ ಬಳಿಕ ಈ ಪುಸ್ತಕ ಹೊರಬರುತ್ತಿರುವ ಸುದ್ದಿ ಹೊರ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ. ತನ್ನ ಹಳೆಯ ನೆನಪುಗಳನ್ನು ಮರುಕಳಿಸುತ್ತಿರುವುದಕ್ಕಾಗಿ ಆಕೆಗೆ ೧೨ ಮಿಲಿಯನ್ ಡಾಲರ್ ಸಂಪಾದನೆಯಾಗುವ ಸಾಧ್ಯತೆಗಳಿವೆ ಎಂದು ಈ ಕೃತಿಯನ್ನು ಹೊರ ತರುವ ಪ್ರಕಾಶಕರು ಹೇಳಿಕೊಂಡಿದ್ದಾರೆ.
ಮುಖ್ಯವಾಗಿ ತನ್ನ ಮತ್ತು ಕ್ಲಿಂಟನ್ ನಡುವಿನ ಪ್ರೇಮ ಪತ್ರಗಳನ್ನು ಬಹಿರಂಗ ಪಡಿಸುವುದಾಗಿ ಮೋನಿಕಾ ಹೇಳಿಕೊಂಡಿರುವುದರ ಜತೆಯಲ್ಲಿ ಕ್ಲಿಂಟನ್ ಗೆ ತನ್ನ ಪತ್ನಿ ಹಿಲರಿ ಬಗ್ಗೆ ಇದ್ದ ತಾತ್ಸಾರದ ಕುರಿತೂ ಬಹಿರಂಗ ಪಡಿಸಲಿದ್ದಾಳೆ. ಹಿಲರಿಗೂ ಅಕ್ರಮ ಸಂಬಂಧ ಹೊಂದುವ ಬಗ್ಗೆ ಆಸಕ್ತಿಯಿದೆ ಎಂದು ತಾನು ಭಾವಿಸುವುದಾಗಿ ಬಿಲ್ ಕ್ಲಿಂಟನ್ ತನ್ನ ಬಳಿ ಹೇಳಿಕೊಂಡಿದ್ದುದಾಗಿ ಮೋನಿಕಾ ಈ ಪುಸ್ತಕದಲ್ಲಿ ಬಹಿರಂಗ ಪಡಿಸಲಿದ್ದಾಳೆ ಎನ್ನುವ ಮಾತುಗಳು ಹೊರಬಂದಿದೆ.
ಕ್ಲಿಂಟನ್ ಗೆ ಇತ್ತು ಕಾಮತೃಷೆ:
ಅಮೇರಿಕದ ಡೆಮಾಕ್ರಟಿಕ್ ಪಕ್ಷದ ಮೂಲಕ ಆಯ್ಕೆಯಾದ ಬಿಲ್ ಕ್ಲಿಂಟನ್ಗೆ ಲೈಂಗಿಕ ವಿಚಾರಗಳ ಮೇಲೆ ಅತೀಯಾದ ಮೋಹವಿತ್ತು ಎನ್ನುವುದು ಮೋನಿಕಾ ಕೃತಿಯಲ್ಲಿ ಅಡಕವಾಗಿರುವ ಪ್ರಧಾನ ವಿಚಾರ. ಲೈಂಗಿಕ ಚಟುವಟಿಕೆಗಳಿಗೆ ಬರೀ ಹೆಣ್ಣುಗಳು ಇದ್ದರೆ ಮಾತ್ರ ಸಾಧ್ಯವಿಲ್ಲ ಎನ್ನುವ ಮನೋಭಾವನೆಯಲ್ಲಿ ಕ್ಲಿಂಟನ್ ಇದ್ದರೂ ಎನ್ನುತ್ತಾಳೆ ಮೋನಿಕಾ. ಆದರೆ ಮೈ ಲೈಫ್ ತ್ರೀ ಇಯರ್ ಲೇಟರ್ ಮೋನಿಕಾ ಎನ್ನುವ ಕೃತಿಯಲ್ಲಿ ಬಿಲ್ ಕ್ಲಿಂಟನ್ ತನ್ನ ಆತ್ಮಕತೆಯಲ್ಲಿ ಸುಳ್ಳು ಹೇಳಿಕೊಂಡಿದ್ದಾರೆ ಅದಕ್ಕಾಗಿ ಈ ಕೃತಿಯಲ್ಲಿ ಎಲ್ಲ ಸಾಕ್ಷ್ಯಾಗಳನ್ನು ನೀಡಿದ್ದೇನೆ ಎನ್ನುವುದು ಮೋನಿಕಾ ಮಾತು. ಕ್ಲಿಂಟನ್ ಸೆಕ್ಸ್ ಹಗರಣಗಳ ನಂತರ ಮೋನಿಕಾ ೨೦೦೫ರಲ್ಲಿ ಇಂಗ್ಲೆಂಡ್ ಗೆ ಬಂದು ಖಾಸಗಿ ಚಾನೆಲ್ ವೊಂದರಲ್ಲಿ ವರದಿಗಾರ್ತಿಯಾಗಿ ಸೇರಿಕೊಂಡಿದ್ದರು. ಅಲ್ಲಿಯೇ ಈ ಕೃತಿ ಬರೆಯುವ ಹುಮ್ಮಸ್ಸು ಸಿಕ್ಕಿತ್ತು ಎಂದು ಮೋನಿಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕ್ಲಿಂಟನ್ ಅವರ ೯ ಪತ್ರಗಳ ಜತೆಯಲ್ಲಿ ಬಹಳಷ್ಟು ರಹಸ್ಯ ವಿಚಾರ ಈ ಕೃತಿಯ ಮೂಲಕ ಸ್ಫೋಟಗೊಳ್ಳುವ ಸಾಧ್ಯತೆ ಇದೆಯಂತೆ.
ಮೋನಿಕಾ ಎನ್ನುವ ಬಾಂಬ್:
ಮೋನಿಕಾ ಹುಟ್ಟಿ ಬೆಳೆದದ್ದು ಅಮೇರಿಕದ ಸ್ಯಾನ್ ಪ್ರಾನ್ಸಿಸ್ಕೋ ಎನ್ನುವ ನಗರದಲ್ಲಿ ತಂದೆ ತಾಯಿ ಇಬ್ಬರು ಯೆಹೂದಿಗಳಾಗಿದ್ದರು. ಮೋನಿಕಾ ಹುಟ್ಟುವ ಸಂದರ್ಭ ಯೆಹೂದಿ ಕೃತಿಯೊಂದು ತುಂಬಾನೇ ಫೇಮಸ್ ಆಗಿತ್ತು. ಇದೇ ಕಾರಣಕ್ಕೆ ಈ ಕೃತಿಯ ಹೆಸರನ್ನು ಹುಟ್ಟಿದ ಹುಡುಗಿಗೆ ಇಟ್ಟುಕೊಂಡರು. ಆದರೆ ಕೆಲವೇ ಸಮಯದಲ್ಲಿ ಹೆತ್ತವರು ಬೇರೆ ಬೇರೆಯಾಗಿ ಉಳಿದುಬಿಟ್ಟರು. ತಂದೆ ಮತ್ತೊಂದು ತಾಯಿಯನ್ನು ಕರೆದುಕೊಂಡು ಮನೆಗೆ ಬಂದರು. ಈ ಸಮಯದಲ್ಲಿ ಮೋನಿಕಾಳಿಗೆ ಮಲತಾಯಿ ಕಿರುಕುಳ ನೀಡಲು ಆರಂಭಿಸಿದಳು. ಮೋನಿಕಾಳ ಬೆಳವಣಿಗೆಯಲ್ಲಿ ಈ ವಿಚಾರ ತೀರನೇ ಘಾಸಿಗೊಳಿಸಿತು.
ಇತ್ತ ಕಡೆ ತಾಯಿ ಕೂಡ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಉಳಿದುಕೊಂಡರು. ಇಬ್ಬರ ಪ್ರೀತಿಯಿಂದ ವಂಚಿತಳಾದ ಮೋನಿಕಾ ಬದುಕಿನಲ್ಲಿ ಆರಂಭದ ಅಧ್ಯಾಯಗಳೇ ಕಿರಿಕಿರಿ ಎನ್ನಿಸುವಂತೆ ಇತ್ತು. ನಾನಾ ಕಡೆ ಶಿಕ್ಷಣ ಪಡೆದುಕೊಂಡು ಕೆಲಸ ಮಾಡುತ್ತಾ ೧೯೯೫ರ ಹೊತ್ತಿಗೆ ಅಮೇರಿಕದ ವೈಟ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಇದೇ ಸಮಯದಲ್ಲಿ ಬಿಲ್ ಕ್ಲಿಂಟನ್ ನ ಸೆಕ್ಸ್ ಹಗರಣವನ್ನು ಮೀನಿಕಾ ಹೊರತಂದಳು. ಇದು ಈಗ ವಿಶ್ವದ ತುಂಬಾ ಲೆವೆನ್ಸ್ಕೀ ಹಗರಣ ಎಂದೇ ಕರೆಸಿಕೊಂಡಿದೆ. ಈ ಹಗರಣದ ನಂತರ ಮೋನಿಕಾ ರಾಜಕೀಯ, ಮಾಧ್ಯಮಗಳ ವಲಯದಲ್ಲಿ ಸಿಕ್ಕಾಪಟ್ಟೆ ಗುರುತಿಸಿಕೊಂಡರು. ಖಾಸಗಿ ವಾಹಿನಿಯೊಂದು ಇವರ ಸಂದರ್ಶನ ಪ್ರಸಾರ ಮಾಡಿದಾಗ ವಿಶ್ವದ ೭೦ ಮಿಲಯ ಮಂದಿ ವಾಹಿನಿ ಕಡೆ ಮುಖ ಮಾಡಿ ಕೂತಿದ್ದರು. ಮೋನಿಕಾ ಹೇಳಿದ ವಿಚಾರಗಳನ್ನು ಬಂಡವಾಳವಾಗಿಟ್ಟುಕೊಂಡು ಮಾರ್ಟನ್ ಎನ್ನುವ ಕೃತಿಕಾರ ತಯಾರಿಸಿದ ಕ್ಲಿಂಟನ್ ಆಫೇರ್ ಇನ್ ಮೋನಿಕಾ ಸ್ಟೋರಿ ಇಡೀ ವಿಶ್ವದ ಪುಸ್ತಕ ಮಾರುಕಟ್ಟೆಯಲ್ಲಿ ಕೋಲಾಹಲ ಎಬ್ಬಿಸಿತ್ತು. ಈ ಬಳಿಕ ಮೋನಿಕಾ ರನ್ನು ಮಾಧ್ಯಮ, ಕೃತಿಕಾರರು, ರಾಜಕೀಯ ರಂಗ ಎಲ್ಲರೂ ಬಳಿಸಿಕೊಂಡು ತಮ್ಮ ಸಂಪಾದನೆಯಲ್ಲಿ ತೊಡಗಿಕೊಂರುವ ಎನ್ನುವುದೇ ಮಹಾನ್ ದುರಂತಗಳಲ್ಲಿ ಒಂದು ಎಂದು ವಿಮರ್ಶಕರು ಹೇಳುತ್ತಾರೆ.
Sunday, May 20, 2012
ಹುಡುಗರು ಮಾಡಿದ ರೇಡಿಯೋ ಇಡ್ಲಿ !
ರೇಡಿಯೋ ಇಡ್ಲಿ ! ಇದು ಖಂಡಿತವಾಗಿಯೂ ತಿನ್ನುವ ಇಡ್ಲಿ ಅಲ್ಲ ಮಾರಾಯ್ರೆ. ಕುಡ್ಲದ ಇಬ್ಬರು ಹುಡುಗರು ರೇಡಿಯೋ ಇಡ್ಲಿ ಮೂಲಕ ಜಸ್ಟ್ ಕ್ಲಿಕ್ ಆಗಿದ್ದಾರೆ. ಪುಟ್ಟ ಕೊಂಕಣಿ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಕೊಡಿಸುತ್ತಿದ್ದಾರೆ. ಓವರ್ ಟು ಬಾಯ್ಸ್...
ತುಂಬಾನೇ..ನಾಜೂಕು ಅಷ್ಟೇ ಮೃದು...ಕೊಂಚ ಪರಿಮಳ ಜತೆಯಲ್ಲಿ ಒಂದಿಷ್ಟು ಆಯತಪ್ಪಿದ ಆಕೃತಿ. ಇದು ಇಡ್ಲಿಯ ಬಗ್ಗೆ ಸಾಮಾನ್ಯನ ತಲೆಯೊಳಗೆ ಮೂಡುವ ಕಾನ್ಸೆಪ್ಟ್ ತಾನೇ..? ಈಗ ಇಡ್ಲಿಯ ಮಾತು ಬದಿಗಿಡಿ. ಕರಾವಳಿ ಮೂಲದ ಹುಡುಗರಿಬ್ಬರು ಇದೇ ಕುಡ್ಲದ ಟೇಸ್ಟಿ ವಿದ್ ಸಾಫ್ಟಿ ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾರೆ.
ಮೂಲ್ಕಿ ಹಾಗೂ ಕಾಸರಗೋಡಿನ ಟಚ್ ಇದ್ದ ಮುಂಬಯಿಯ ಜಿಎಸ್ಬಿ ಹುಡುಗ ನಾಗೇಶ್ ರಾಮಚಂದ್ರ ಪೈ ಹಾಗೂ ಮುಂಬಯಿಯಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕದ ಖ್ಯಾತ ಸಾಫ್ಟ್ವೇರ್ ಕಂಪನಿಯಲ್ಲಿ ದುಡಿಯುತ್ತಿರುವ ಕೃಷ್ಣಾನಂದ ನಾಯಕ್ ( ಸಂಕಲ್ಪ ನಾಯಕ್) ಈ ರೀತಿಯ ಇಡ್ಲಿ ಮಾರಾಟದಲ್ಲಿ ತಲ್ಲೀನರಾಗಿದ್ದಾರೆ.
ಜಿಎಸ್ಬಿ ಸಮುದಾಯದ ಭಾಷೆಗಾಗಿ ೨೦೦೭ರಲ್ಲಿ ‘ರೇಡಿಯೋ ಇಡ್ಲಿ’ ಎಂಬ ಹೊಸ ಬ್ಲಾಗ್ ಕಣ್ಣು ತೆರೆಯಿತು. ೨೦೦೮ರಲ್ಲಿ ಇದೇ ‘ರೇಡಿಯೋ ಇಡ್ಲಿ ’ ಸೈಟ್ ರೂಪಕ್ಕೆ ತಿರುಗಿತು. ಈಗ ಈ ಸೈಟ್ಗೆ ಭೇಟಿ ನೀಡುವ ಮಂದಿ ದಿನವೊಂದಕ್ಕೆ ಸುಮಾರು ೩ ಸಾವಿರ ದಾಟ ಬಹುದು.
ಕಳೆದ ಮೂರು ವರ್ಷಗಳಿಂದ ಈ ಸೈಟ್ನ ಮೂಲಕ ಜಿಎಸ್ಬಿ ಸಮುದಾಯದ ಪ್ರತಿಭಾವಂತ ಗಾಯಕ- ಗಾಯಕಿಯರಿಗೆ ಒಂದು ವೇದಿಕೆಯನ್ನು ನೀಡಿದ್ದಾರೆ. ವಿದೇಶದಲ್ಲಿ ಕೂತು ಕೂಡ ರಥಬೀದಿಯಲ್ಲಿರುವ ವೆಂಕಟರಮಣ ದೇವರ ತೇರು ಯೂ ಟ್ಯೂಬ್ ಮೂಲಕ ನೋಡುವ ಭಾಗ್ಯವನ್ನು ಈ ಸೈಟ್ ಕರುಣಿಸಿದೆ. ಜಿಎಸ್ಬಿಯ ಅಡುಗೆ ಮನೆಯಲ್ಲಿ ಶಾಲಿನಿ ಗಡಿಯಾರ್ ಅವರ ಕೈಯಲ್ಲಿ ಜಿಎಸ್ಬಿಯ ವೈವಿಧ್ಯಪೂರ್ಣವಾದ ಖಾದ್ಯಗಳು ತಯಾರಾಗುತ್ತಿದೆ. ಈ ಖಾದ್ಯಗಳಿಗೆ ತಕ್ಕಂತೆ ಡಯಾಟಿಷನ್ನಿಂದ ಸಲಹೆ ಸೂಚನೆಗಳಿವೆ.
ಯೂತ್ ಬೇಸ್ಡ್ ಫೇಸ್ ಬುಕ್, ಟ್ವಿಟ್ಟರ್, ಕಲ್ಚರಲ್ ಇವೆಂಟ್ ಹೀಗೆ ಬೇರೆ ಸೈಟ್ಗಳಿಗಿಂತ ಭಿನ್ನರೂಪದಲ್ಲಿ ರೇಡಿಯೋ ಇಡ್ಲಿ ಕಾಣಿಸಿಕೊಳ್ಳುತ್ತದೆ. ಜಿಎಸ್ಬಿ ಮಾತ್ರವಲ್ಲದೇ ಚಿತ್ಪಾವನ್ ಬ್ರಾಹ್ಮಣ ಹಾಗೂ ಇತರ ಸಬ್ ಕಾಸ್ಟ್ಗಳ ವಿಶೇಷ ರೀತಿಯ ಕಲಾವೈವಿಧ್ಯ, ಸಂಸ್ಕೃತಿ, ಭಾಷಾ ಸೊಗಡು ಜತೆಯಲ್ಲಿ ದೇವಸ್ಥಾನದ ತೇರು, ಲೈವ್ ಕಾನ್ಸರ್ಟ್ಗಳು, ವಿಶೇಷ ವರದಿಗಳು, ಪ್ರತಿಭಾವಂತ ಜಿಎಸ್ಬಿ ಗಾಯಕ- ಗಾಯಕಿಯರ ಧ್ವನಿ ಸುರುಳಿಗಳಿಂದ ಹಾಡುಗಳು ಎಲ್ಲವೂ ಒಂದೇ ತಾಣದಲ್ಲಿ ರೆಡಿ ಮೇಡ್ ಆಗಿ ಸಿಗುತ್ತದೆ.
ಕರಾವಳಿಯ ಕೊಂಕಣಿ ಪರಂಪರೆಯ ಬಗ್ಗೆ ಹಿರಿಯ ಕೊಂಕಣಿ ವಿದ್ವಾಂಸರು ಬರೆದ ಲೇಖನಗಳು ಸೈಟ್ಗೆ ಭೇಟಿ ನೀಡುವ ವೀಕ್ಷಕರಿಗೆ ಲಭ್ಯವಾಗುತ್ತಿದೆ. ಜಿಎಸ್ಬಿ ಕೊಂಕಣಿ ಸಮುದಾಯದ ಪುಟ್ಟ ಗ್ರಂಥಾಲಯದಂತೆ ಈ ಸೈಟ್ ಕೆಲಸಮಾಡುತ್ತಿದೆ. ಅಂದಹಾಗೆ ರೇಡಿಯೋ ಇಡ್ಲಿಗೆ ಬರುವವರು ಕ್ಲಿಕ್ ಮಾಡಿ. ಡಿಡಿಡಿ.Zbಜಿಟಜಿbಜಿ.ಛಿಠಿ ?eಠಿಠಿm://ಡಿಡಿಡಿ.Zbಜಿಟಜಿbಜಿ.ಛಿಠಿ/|
ರೇಡಿಯೊ ಇಡ್ಲಿ ಎಲ್ಲಿಂದ ಬಂತು !
ಮುಂಬಯಿಯ ಮಾಟುಂಗಾದಲ್ಲಿ ‘ಇಡ್ಲಿ ಹೌಸ್’ಎಂಬ ಚೈನ್ ಹೋಟೆಲ್ಗಳಿವೆ. ಅಲ್ಲಿ ಐವತ್ತಕ್ಕಿಂತ ಹೆಚ್ಚು ಬಗೆಯ ಇಡ್ಲಿ ಹಾಗೂ ಫಿಲ್ಟರ್ ಕಾಫಿಯನ್ನು ನೀಡಲಾಗುತ್ತದೆ. ಮುಂಬಯಿಯಲ್ಲಿ ಉಡುಪಿ ಹೊಟೇಲ್ಗಳ ಜನಕ ಎಂದೇ ಖ್ಯಾತರಾದ ರಾಮ ನಾಯಕ್ ಅವರ ಮಾಲೀಕತ್ವದಲ್ಲಿ ಈ ಹೊಟೇಲ್ಗಳು ಕುಡ್ಲ, ಉಡುಪಿ ಶೈಲಿಯ ಆಹಾರವನ್ನು ನೀಡುತ್ತಿದೆ. ಸಂಕಲ್ಪ ಹಾಗೂ ನಾಗೇಶ್ ಈ ಹೊಟೇಲ್ಗೆ ಒಂದು ಬಾರಿ ಭೇಟಿ ನೀಡಿ ಇಡ್ಲಿ ತಿನ್ನುತ್ತಿದ್ದಾಗ ಅವರ ತಲೆಯಲ್ಲಿ ಇಡ್ಲಿಯ ಮೇಲೆ ಒಂದು ಸೈಟ್ ಮಾಡುವ ಯೋಚನೆ ಬಂತು ಅಂತೆ!
ಕರಾವಳಿ ಹಾಗೂ ಇತರ ಪ್ರದೇಶದಲ್ಲಿ ಹರಡಿಕೊಂಡಿರುವ ಜಿಎಸ್ಬಿ ಸಮುದಾಯವನ್ನು ಅಭಿವೃದ್ಧಿ ಪಡಿಸುವ ಹಾಗೂ ಅದರಲ್ಲಿರುವ ಪ್ರತಿಭಾವಂತರನ್ನು ಹೊರಗೆ ತರುವ ಕಾರ್ಯಕ್ಕೆ ರೇಡಿಯೋ ಇಡ್ಲಿ ಎಂಬ ಸೈಟ್ ಕ್ಲಿಕ್ ಆಯಿತು. ನಂತರ ಜಿಎಸ್ಬಿ ಸಮುದಾಯದ ಯುವ ಗಾಯಕ- ಗಾಯಕಿಯರ ಹಾಡುಗಳನ್ನು ರೆಕಾರ್ಡ್ ಮಾಡಿ ಈ ಸೈಟ್ನಲ್ಲಿ ಆಪ್ಲೋಡ್ ಮಾಡಿ ನಾನಾ ದೇಶಗಳಲ್ಲಿ ಹರಡಿಕೊಂಡಿರುವ ಜಿಎಸ್ಬಿ ಸಮುದಾಯಕ್ಕೆ ಕಳುಹಿಸುವ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಣೆಗೆ ಇಳಿಯಿತು ಎನ್ನುತ್ತಾರೆ ಇದರ ರೇಡಿಯೋ ಇಡ್ಲಿಯ ಮುಖ್ಯಸ್ಥ ನಾಗೇಶ್ ಆರ್. ಪೈ.
ರೇಡಿಯೊದಲ್ಲಿ ಹೊಸತು ಏನಿದೆ..?
ನಾಗೇಶ್ ಹಾಗೂ ಸಂಕಲ್ಪ ಇಬ್ಬರು ತುಂಬಾ ಬ್ಯುಸಿ ಪರ್ಸನ್ಗಳು. ನಾಗೇಶ್ ಎಸ್ಬಿಐ ಮ್ಯೂಚುವಲ್ ಪಂಡ್ನಲ್ಲಿ ಇಂಟರ್ನೆಟ್ ಸೆಕ್ಷನ್ನ ಹೆಡ್ ಆಗಿ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಕಲ್ಪ ನಾಯಕ್ ಐಟಿಯವರು ಈಗ ಅಮೆರಿಕದಲ್ಲಿದ್ದಾರೆ. ಇಬ್ಬರು ಇಂಟರ್ನೆಟ್ ಮೂಲಕ ಚಾಟಿಂಗ್ ಮಾಡಿಕೊಂಡು ಈ ರೇಡಿಯೊ ಇಡ್ಲಿಯನ್ನು ಈಗ ನಡೆಸುತ್ತಿದ್ದಾರೆ. ಆದರೆ ಮೊದಲು ೧೫ ದಿನಗಳಿಗೊಮ್ಮೆ ಈ ಸೈಟ್ ಆಪ್ಲೋಡ್ ಮಾಡುವ ಪ್ರಮೇಯ ಇತ್ತು. ಈಗ ಪ್ರತಿ ವಾರಕ್ಕೊಂದು ಸಾರಿ ವೀಕೆಂಡ್ ಟೈಮ್ನಲ್ಲಿ ಆಪ್ಲೋಡ್ ಮಾಡುವ ಪರಂಪರೆ ಬಂದಿದೆ.
............
* ಸ್ಟೀವನ್ ರೇಗೊ, ದಾರಂದಕುಕ್ಕು
...............
Wednesday, May 16, 2012
ಕುಡ್ಲದ ಹುಡುಗರ ‘ಪಾಣಿಘಾಸ್’
ಬ್ಲರ್ಬ್:
ಸಂಗೀತದ ಮೇಲೆ ವಿಶೇಷ ಹುಚ್ಚು ಹಿಡಿಸಿ ಕೊಂಡ ಯುವಕರ ತಂಡದ ಕತೆಯಿದು. ಬೆಂಗಳೂರಿನ ಕಾರ್ಪೋರೇಟ್ ರಂಗದಲ್ಲಿ ಪಾಣಿಘಾಸ್ ಎಂದಾಕ್ಷಣ ಕೇಳುವ ಕಿವಿಗಳು ಒಂದ್ ಸಾರಿ ನೆಟ್ಟಗೆ ನಿಂತು ಕೇಳಿಸಿ ಕೊಳ್ಳೋಣ ಮಾರಾಯ್ರೆ ಎನ್ನುತ್ತದೆ. ಬನ್ನಿ ಹುಡುಗರ ಮಾತಿನಲ್ಲೇ ಕೇಳಿ ಬಿಡೋಣ...
ಬ್ಲರ್ಬ್:
ಈಗಷ್ಟೇ ಶಿಕ್ಷಣ ಮುಗಿಸಿ ಕೆಲಸ ಸೇರಿಕೊಳ್ಳುವ ಜೋಶ್. ಹಳ್ಳಿಯ ಗೂಡಿನಿಂದ ಹುಡುಗರು ಪಟ್ಟಣ ಸೇರುವ ಹುಮ್ಮಸ್ಸು. ದಿನನಿತ್ಯದ ಕೆಲಸದ ನಡುವೆ ಒಂಚೂರು ಟೈಮ್ ಸಿಕ್ಕಾಗ ತಮ್ಮ ಪ್ರವೃತ್ತಿಗೆ ಕೀ ಕೊಡುವ ಉತ್ಸಾಹ. ಸಂಗೀತದ ಮೇಲೆ ಇಟ್ಟುಕೊಂಡ ಅಪಾರ ಪ್ರೀತಿ. ಎಲ್ಲವೂ ಸೇರಿಕೊಂಡಾಗ ಅದರ ಹೆಸರೇ ಪಾಣಿಘಾಸ್. ಇದು ಟೋಟಲಿ ಸಂಗೀತ ಕೇಳುವ ಕಿವಿಗಳಿಗೆ ಸಿಗುವ ಮನರಂಜನೆ. ಇಂತಹ ಒಂದು ತಂಡವನ್ನು ಕಟ್ಟಿ ಕಾರ್ಪೋರೇಟ್ ದುನಿಯಾದಲ್ಲಿ ಮಿಂಚು ಹರಿಸುವ ಹುಡುಗರೆಲ್ಲರೂ ಕರಾವಳಿಯ ತಟದವರು.
ಕಳೆದ ಒಂದು ವರ್ಷದಿಂದ ಬೆಂಗಳೂರಿನ ಕಾರ್ಪೋರೇಟ್ ರಂಗದಲ್ಲಿ ಈ ಹುಡುಗರು ಹೆಸರು ಮಾಡುತ್ತಿದ್ದಾರೆ. ಪಾಣಿಘಾಸ್ ಎಂದಾಕ್ಷಣವೇ ಅಲ್ಲೊಂದು ಸಂಗೀತದ ಅಲೆ ನಿಧಾನವಾಗಿ ಮೈಚಾಚಿಕೊಳ್ಳುತ್ತದೆ. ನಿಜವಾದ ಸಂಗೀತದ ಅಭಿಮಾನಿಗಳು ಪಾಣಿಘಾಸ್ ತಂಡದ ಸಂಗೀತ ಕೇಳಿದಾಕ್ಷಣ ಒಂದು ಸಾರಿ ಕಿವಿ ನಿಮಿರಿ ನಿಲ್ಲುತ್ತದೆ. ಇದು ಪಾಣಿಘಾಸ್ ಕ್ರಿಯೇಟ್ ಮಾಡಿದ ಸಂಗೀತ ಲೋಕದ ಹೊಸ ಕ್ರೇಜ್.
ಅಂದಹಾಗೆ ‘ಪಾಣಿಘಾಸ್’ ಯಾಕೆ ಇತರ ಸಂಗೀತ ಬ್ಯಾಂಡ್ಗಳಿಗಿಂತ ಭಿನ್ನ ಅಂತೀರಾ..? ಹಾಗಾದರೆ ನಿಮ್ಮ ಪ್ರಶ್ನೆಯ ಮೊಣಚಿನಲ್ಲಿಯೇ ಉತ್ತರ ಕೂಡ ಇದೆ ಅನ್ನಬಹುದು. ‘ಪಾಣಿಘಾ’ ಇದು ಪಕ್ಕಾ ಸಂಸ್ಕೃತ ಪದಕೋಶದಿಂದ ಬಳಕೆಯಾದ ಪದ ಎನ್ನುವುದು ತಂಡದ ಮಾತು. ಆಂಗ್ಲ ಭಾಷೆಯಲ್ಲಿಯೇ ಇದರ ಅರ್ಥವನ್ನು ಹೇಳುವುದಾದರೆ ಪರ್ಕಸನಿಷ್ಟ್. ಅಚ್ಚ ಕನ್ನಡ ಭಾಷೆಯಲ್ಲಿ ಹೇಳುವುದಾದರೆ ಬರೀ ಕೈಯಲ್ಲಿಯೇ ಸಂಗೀತ ಪರಿಕರಗಳನ್ನು ಬಡಿಯುವವರಿಗೆ ‘ಪಾಣಿಘಾ’ ಎನ್ನಲಾಗುತ್ತದೆ. ಪಾಣಿಘಾಸ್ ಎಂದರೆ ಬರೀ ಕೈಯಲ್ಲಿ ಸಾಧನಾ ಬಡಿಯುವ ಹುಡುಗರು ಎನ್ನುವ ಅರ್ಥ ಬರುತ್ತದೆ.
ಹುಡುಕಾಟದ ಹುಡುಗರು:
ಪಾಣಿಘಾಸ್ ಟೋಟಲಿ ಭಿನ್ನ. ಇಲ್ಲಿ ದೇಶ- ವಿದೇಶಗಳಲ್ಲಿ ಬಳಸುವ ಸಂಗೀತ ಪರಿಕರಕಗಳೇ ಮುಖ್ಯ ಐಟಂಗಳು. ಅರೇಬಿಯನ್ ದೇಶಗಳಲ್ಲಿ ಜಾಸ್ತಿಯಾಗಿ ಕಂಡು ಬರುವ ಬೆಲ್ಲಿ ಡ್ಯಾನ್ಸ್ಗೆ ಬಳಸಲಾಗುವ ದರುಬೂಕಾ ಎನ್ನುವ ವಿಶಿಷ್ಟ ಮಾದರಿಯ ಸಂಗೀತ ಪರಿಕರಕವನ್ನು ತಂಡ ಹೊಂದಿದೆ. ಇದರ ಜತೆಯಲ್ಲಿ ಆಪ್ರಿಕನ್ ದೇಶದಿಂದ ಜಂಬೆ, ಕ್ಯೂಬಾ ರಾಷ್ಟ್ರದಿಂದ ತಂದ ಪೊಂಗೋ ಎನ್ನುವ ಸಂಗೀತ ಸಾಧನ ತಂಡದ ಮುಖ್ಯ ಬೇಸ್ ಪಾಯಿಂಟ್.
ಇದರ ಜತೆಗೆ ದೇಶದಲ್ಲಿರುವ ನಾನಾ ಅದಿವಾಸಿ ಸಮುದಾಯದಿಂದ ತಂದ ಸಂಗೀತ ಪರಿಕರಕಗಳು, ಲೋಕಲ್ ಆಗಿ ಸಿಗುವ ಚೆಂಡೆ, ತಾಸೆ, ಜಾಗಟೆಯಂತಹ ಐಟಂಗಳು ಈ ತಂಡದಲ್ಲಿದೆ. ಡಿಜಿರೆಡೋ ಆಸೀಸ್ನ ಅದಿವಾಸಿ ಸಂಗೀತ ಪರಿಕರಕಗಳು, ಕರಾವಳಿ ಮೂಲದ ದುಡಿ ಎಲ್ಲವೂ ಪಾಣಿಘಾಸ್ ತಂಡದ ಸೊತ್ತುಗಳು. ಈಗಲೂ ಇಂತಹ ಸಂಗೀತ ಸಾಧನಾಗಳನ್ನು ಹುಡುಕಾಟದಲ್ಲಿಯೇ ಹುಡುಗರು ಸಂಪೂರ್ಣ ಮಗ್ನವಾಗಿದ್ದಾರೆ.
ಒಂದೊಂದು ಸಂಗೀತ ಸಾಧನಕ್ಕಾಗಿ ಬರೋಬರಿ ಎರಡು- ಮೂರು ತಿಂಗಳು ಸುತ್ತಾಟ ಮಾಡಿದ್ದು ಇದೆ ಎನ್ನುತ್ತಾರೆ ಪಾಣಿಘಾಸ್ ತಂಡದ ಸದಸ್ಯ ಕಬೀರ್ ಮಾನವ್. ಸಂಗೀತ ಸಾಧನಗಳು ಹೆಚ್ಚು ಕಡಿಮೆ ಬೆಲೆಬಾಳುವಂತವುಗಳು.. ಮೊದಲು ತಿಂಗಳ ಸಂಬಳ ಕೊಟ್ಟು ಇಡೀ ಒಂದು ತಿಂಗಳು ಉಪವಾಸ ವೃತ್ತ ಮಾಡಿದ ಕತೆಯನ್ನು ಕಬೀರ್ ಬಿಚ್ಚಿಡುತ್ತಾ ರೆ. ಪಾಣಿಘಾಸ್ ತಂಡದಲ್ಲಿರುವ ಒಂದೊಂದು ಸಂಗೀತ ಸಾಧನಗಳು ಒಂದೊಂದು ಕತೆಯನ್ನು ಹೇಳುತ್ತದೆ.
ಸಂಗೀತ ಪರಿಕರಕಗಳ ಹುಡುಕಾಟ, ಆರ್ಥಿಕ ಮುಗ್ಗಟ್ಟು, ತಂಡದ ತರಬೇತಿ ಸಮಯದಲ್ಲಿ ಅಕ್ಕಪಕ್ಕದವರು ಮಾಡುವ ಕಿರಿಕಿರಿ ಬಹಳಷ್ಟು ಸಲ ತಂಡವನ್ನು ಘಾಸಿ ಮಾಡಿದ ನೆನಪುಗಳನ್ನು ಕಬೀರ್ ನಿದಾನವಾಗಿ ಬಿಚ್ಚಿಡುತ್ತಾರೆ. ಆದರೆ ತಂಡ ಕಳೆದ ಒಂದು ವರ್ಷದಲ್ಲಿ ಈ ಎಲ್ಲ ಕಹಿ ನೆನಪುಗಳನ್ನು ಮರೆತು ಬಿಟ್ಟು ಹೊಸ ಪರಂಪರೆಯನ್ನು ಹುಟ್ಟಿ ಹಾಕಿದೆ ಎಂದಾಗ ಕಬೀರ್ ಸಂತೃಪ್ತಿಯ ನಗು ಪಸರಿಸುತ್ತಾರೆ.
ಪಾಣಿಘಾದ ಬಾಯ್ಸ್ ಝೋನ್:
‘ಪಾಣಿಘಾಸ್’ ಹುಟ್ಟಿದ ಕತೆನೇ ತುಂಬಾನೇ ಭಿನ್ನ. ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಿಂದ ಎಲ್ಎಲ್ಬಿ ಪದವಿ ಪಡೆದ ಕಬೀರ್ ಮಾನವ್ ಹಾಗೂ ಬೆಂಗಳೂರಿನ ಆಂಟೆನಾ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿರುವ ಮಂಜೇಶ್ವರ ಮೂಲದ ವೆಂಕಟ್ ಇಬ್ಬರಿಗೂ ಸಂಗೀತ ಮೇಲೆ ವಿಶೇಷ ಮೋಹ. ಏನಾದರೂ ಸಾಸಿ ಬಿಡಬೇಕೇನ್ನುವ ಚಟ. ಇದೇ ಮೋಹ ಚಟದ ಪರಿಣಾಮ ‘ಪಾಣಿಘಾ’ ಎನ್ನುವ ಟೋಟಲಿ ಭಿನ್ನ ತಂಡವೊಂದು ಹುಟ್ಟಿಕೊಂಡಿತು.
ಇದೇ ಆಸಕ್ತಿಯಿಂದ ಬೆಂಗಳೂರಿನಲ್ಲಿ ಸುತ್ತಾಡಿಕೊಂಡಿದ್ದ ಶೈಲೇಶ್, ದಿನೇಶ್, ಧನುಷ್, ಆಂಜೋ ಜೋಕೆಬ್, ಅರ್ಜುನ್ ಕಜೆ, ರಾಮಕೃಷ್ಣ ಜತೆ ಸೇರಿದರು. ಪಾಣಿಘಾಸ್ನ ಟೀಮ್ ಮ್ಯಾನೇಜರ್ ಕೋರಮಂಗಲದಲ್ಲಿದ್ದ ದಿನೇಶ್ ಭಟ್ ಅವರ ಫ್ಲ್ಯಾಟ್ ಮೇಲೆ ಪ್ರತಿ ವಾರಕ್ಕೊಮ್ಮೆ ತರಬೇತಿ ಆರಂಭವಾಯಿತು. ವೆಂಕಟ್ ದುಡಿಯುತ್ತಿದ್ದ ಸಾಫ್ಟ್ವೇರ್ ಕಂಪನಿಯಲ್ಲಿ ಪಾಣಿಘಾ ತಂಡ ತನ್ನ ಮೊದಲ ಕಾರ್ಯಕ್ರಮ ನೀಡಿತು.
ಈ ಬಳಿಕ ಕೋರಮಂಗಲದ ಪಾರ್ಕ್ನಲ್ಲಿ ಫ್ಲಾಶ್ ಮೋಬ್, ಮಹಮ್ಮದ್ ಬೊಳುವಾರು ಅವರ ಕೃತಿ ಬಿಡುಗಡೆಯ ಸಮಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರ ಅತೀ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಳಿಕ ಪಾಣಿಘಾ ತಂಡಕ್ಕೆ ದೊಡ್ಡ ಮಟ್ಟದ ಬ್ರೇಕ್ ಸಿಕ್ಕಿತು ಎನ್ನುತ್ತಾರೆ ಕಬೀರ್ ಮಾನವ್. ಹುಡುಗರ ಸತತ ಹೋರಾಟ ಹಾಗೂ ಸಾಸಬೇಕೇನ್ನುವ ಛಲ ಪಾಣಿಘಾಸ್ ತಂಡದ ಹೈಲೇಟ್ ಎನ್ನಬಹುದು. ಟೋಟಲಿ ಹೊಸ ಹುಡುಗರ ಪ್ರಯತ್ನಕ್ಕಂತೂ ಶಹಬ್ಬಾಸ್ ಎನ್ನಲೇ ಬೇಕು.
......
ಕೋಟ್ ಕಾರ್ನರ್
‘ಸಂಗೀತವನ್ನು ನಮ್ಮ ತಂಡ ಯಾವತ್ತೂ ಕೂಡ ಸಿರೀಯಸ್ ಆಗಿ ಸ್ಟಡಿ ಮಾಡಿಲ್ಲ. ಯಾವುದೇ ಉಪಕರಣ ಕೊಟ್ಟರೂ ಅದರಿಂದ ಸಂಗೀತ ಕೇಳಿಸುವಂತಹ ತಾಕತ್ತು ನಮ್ಮಲ್ಲಿದೆ. ಸಂಗೀತದ ಕುರಿತು ನಮ್ಮಲ್ಲಿ ಹುಟ್ಟಿಕೊಂಡ ವಿಶೇಷ ಪ್ರೀತಿಯೇ ಈ ತಂಡದ ರಚನೆಗೆ ಕಾರಣವಾಯಿತು. ವಿನಾಶದ ಅಂಚಿನಲ್ಲಿರುವ ಬಹಳ ಹಳೆಯ ಸಂಗೀತ ಪರಿಕರಕಗಳನ್ನು ಒಂದಾಗಿ ಸೇರಿಸಿಕೊಂಡು ಸಂಸ್ಕೃತಿಯ ಜತೆಗೆ ಕೂಡಿಸುವ ಕೆಲಸ ನಮ್ಮಿಂದ ನಡೆಯುತ್ತಿದೆ ಎನ್ನುವ ಹೆಮ್ಮೆ ನಮ್ಮ ತಂಡದಲ್ಲಿದೆ.
- ಕಬೀರ್ ಮಾನವ್, ಪಾಣಿಘಾಸ್ ತಂಡದ ಸದಸ್ಯ.
......................
ವಿಜಯ ಕರ್ನಾಟಕ-ಯುವಘರ್ಜನೆ-೧೨-೧೬-೦೫-೧೨
* ಸ್ಟೀವನ್ ರೇಗೊ, ದಾರಂದಕುಕ್ಕು
Tuesday, May 15, 2012
ನನ್ನಪತ್ರಿಕೆ ನನ್ನ ಮಾತು..
ಸುಗತ ಶ್ರೀನಿವಾಸ್ರಾಜು
ನನ್ನ ಬದುಕಿಗೆ ರೂಪುಕೊಟ್ಟ ರಾಜ್ಯದ ನಂಬರ್ವನ್ ಪತ್ರಿಕೆ ವಿಜಯಕರ್ನಾಟಕದ ಹೊಸ ಸಂಪಾದಕರು. ಸುಗತ ಈಗಾಗಲೇ ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಔಟ್ಲುಕ್ನಲ್ಲಿ ದುಡಿದವರು. ಅದರಲ್ಲೂ ಮುಖ್ಯವಾಗಿ ಖ್ಯಾತ ಪತ್ರಕರ್ತರಾದ ವಿನೋದ್ ಮೆಹ್ತಾ ಅವರ ತಂಡದಲ್ಲಿದ್ದ ಉತ್ಸಾಹಿ ಪತ್ರಕರ್ತ. ವಿಜಯ ಕರ್ನಾಟಕ ಪತ್ರಿಕೆ ಮಾಡುತ್ತಿರುವ ಹೊಸ ಮಾದರಿ ಪ್ರಯತ್ನಗಳಿಂದ ಈಗಾಗಲೇ ರಾಜ್ಯದಲ್ಲಿಯೇ ಮೊದಲ ಸ್ಥಾನ ಉಳಿಸಿಕೊಂಡು ತನ್ನ ಸಾಮರ್ಥ್ಯ ಹಾಗೂ ಪ್ರಾಬಲ್ಯತೆಯನ್ನು ಮೆರೆದಿದೆ.
ಸುಗತ ಬಂದ ನಂತರನೂ ಈ ಕೆಲಸ ಮುಂದುವರಿಯುವ ಎಲ್ಲ ಸಾಧ್ಯತೆಗಳು ಮತ್ತಷ್ಟೂ ದಟ್ಟವಾಗುವ ಸಾಧ್ಯತೆ ಇದೆ. ಬರಹಗಾರನಾಗಿ, ಹವ್ಯಾಸಿ ಪತ್ರಕರ್ತರಾಗಿ ಅದಕ್ಕೂ ಮುಖ್ಯವಾಗಿ ಕ್ಯಾಮೆರಾದಲ್ಲಿ ಕಣ್ಣುಗಳನ್ನು ನೆಟ್ಟ ಸುಗತ ಶ್ರೀನಿವಾಸ್ರಾಜು ವಿ.ಕ.ದ ಪಾಲಿಗೊಂದು ವರದಾನ ಎಂದೇ ಹೇಳಬಹುದು. ಅಂದಹಾಗೆ ಸುಗತ ಕುರಿತು ಸರಿಯಾಗಿ ತಿಳಿಯಬೇಕಾದರೆ ಅವರ ಬ್ಲಾಗ್ಗೊಮ್ಮೆ ಭೇಟಿ ಕೊಟ್ಟು ನೋಡಿ. www.sugataraju.blogspot.com ಟೋಟಲಿ ಸುಗತ ಎನ್ನುವ ಸರಳ, ಧನಾತ್ಮಕ ಚಿಂತನೆಯ ವ್ಯಕ್ತಿಯೊಬ್ಬರು ಇಲ್ಲಿ ಕಾಣ ಸಿಗುತ್ತಾರೆ. ನನ್ನ ಹೊಸ ಬಾಸ್ಗೆ ಕಂಗ್ರಾಟ್ಸ್ .. ವಿ.ಕ.ದಲ್ಲಿ ಮತ್ತಷ್ಟೂ hosa ಅವತಾರವನ್ನು ತಾಳಲಿ ಎನ್ನೋದು ನನ್ನ ಕನಸು..
ಸ್ಟೀವನ್ ರೇಗೊ, ದಾರಂದಕುಕ್ಕು
ರೇಗೋ ಬಾಲ್ಕನಿ
Thursday, May 10, 2012
ರೇಡಿಯೋ ‘ಮಿರ್ಚಿ’ ಯಲ್ಲಿ ಬ್ರೇಕಿಂಗ್ ನ್ಯೂಸ್ !
ನಂಬರ್ವನ್ ಖಾಸಗಿ ಎಪ್ಎಂವಾಹಿನಿ ರೇಡಿಯೋ ಮಿರ್ಚಿಯಲ್ಲಿ ಕಾರ್ಯಕ್ರಮಗಳಲ್ಲಿ ಕೇಳುವರಿಗೆ ಗುರುವಾರ ಬ್ರೇಕಿಂಗ್ ನ್ಯೂಸ್ ಕಾದಿತ್ತು. ಎಲೆಕ್ಕ್ರಾನಿಕ್ ಮಾಧ್ಯಮಗಳ ಜತೆಗಿನ ದಿನಾಲೂ ಒದ್ದಾಡುವ ಪದವೊಂದು ಯಾಕ್ ಅಂತಾ ರೇಡಿಯೋದಲ್ಲಿ ಬಂತು ಅಂತೀರಾ..? ಜಸ್ಟ್ ಡಿಟೇಲ್ಗೆ ಓದಿ ನೋಡಿ....
ನಗರದ ನಂಬರ್ವನ್ ಖಾಸಗಿ ಎಪ್ಎಂವಾಹಿನಿ ರೇಡಿಯೋ ಮಿರ್ಚಿಯಲ್ಲಿ ಕಾರ್ಯಕ್ರಮಗಳಲ್ಲಿ ಕೇಳುವರಿಗೆ ಗುರುವಾರ ಬ್ರೇಕಿಂಗ್ ನ್ಯೂಸ್ ಕಾದಿತ್ತು. ಎಲೆಕ್ಕ್ರಾನಿಕ್ ಮಾಧ್ಯಮಗಳ ಜತೆಗಿನ ದಿನಾಲೂ ಒದ್ದಾಡುವ ಪದವೊಂದು ಯಾಕ್ ಅಂತಾ ರೇಡಿಯೋದಲ್ಲಿ ಬಂತು ಅಂತೀರಾ..? ಅದರಲ್ಲೂ ರೇಡಿಯೋದಲ್ಲೂ ಇನ್ನೂ ಮುಂದೆ ಬ್ರೇಕಿಂಗ್ ನ್ಯೂಸ್ ಬರ್ತಾ..? ಎನ್ನುವ ಪ್ರಶ್ನೆಗಳ ಬಾಣವನ್ನು ಬಿಡುವ ಮೊದಲು ಜಸ್ಟ್ ಹೋಲ್ಡ್ ಆನ್ ಇದು ಬ್ರೇಕಿಂಗ್ ನ್ಯೂಸ್ ಚಿತ್ರದ ಕುರಿತು ಮಾತು.
ಮಂಗಳೂರಿನ ಸ್ಟಾರ್ ರೇಡಿಯೋ ವಾಹಿನಿ ರೇಡಿಯೋ ಮಿರ್ಚಿಯ ದಿನಚರಿ ಗುರುವಾರ ಬದಲಾಗಿತ್ತು. ದಿನನಿತ್ಯದ ಕಾರ್ಯಕ್ರಮಗಳ ಜತೆಯಲ್ಲಿ ವಿಭಿನ್ನತೆಯನ್ನು ಕೊಡಲು ತಂಡ ವಿಶಿಷ್ಟ ರೂಪದ ಚಾಟ್ ಶೋ ಆಯೋಜಿಸಿತ್ತು. ಸ್ಯಾಂಡಲ್ವುಡ್ ಇಂಡಸ್ಟ್ರಿಯಲ್ಲಿ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ಗಳ ಮೇಲೆ ಹೊಡೆತ ನೀಡಲು ಬರುತ್ತಿರುವ ನಾಗತಿಹಳ್ಳಿ ಮೇಷ್ಟ್ರು ನಿರ್ದೇಶನದ ಬ್ರೇಕಿಂಗ್ ನ್ಯೂಸ್ ತಂಡ ಸಖತ್ ಆಗಿ ಗಂಟೆ ಗಟ್ಟಲೆ ರೇಡಿಯೋ ಜಾಕಿಗಳ ಜತೆ ಮುಕ್ತ ವಾಗಿ ಮಾತಿಗೆ ನಿಂತಿತ್ತು.
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಜತೆ ನಟ ಅಜೇಯ್ರಾವ್, ನಟಿ ರಾದಿಕಾ ಪಂಡಿತ್, ಚಿತ್ರದ ಸಂಗೀತ ನಿರ್ದೇಶಕ ಸ್ಟೀಪನ್ ಪ್ರಯೋಗ್ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡು ಕೇಳುಗರಿಗೆ ಮನರಂಜನೆ ನೀಡುತ್ತಿದ್ದರು. ರಿವೈಂಡ್ ರಾಗದಲ್ಲಿ ರೇಡಿಯೋ ಮಿರ್ಚಿ ಜಾಕಿ ಜ್ಯೋತಿ ಸಾಲಿಗ್ರಾಮ ಸಖತ್ ಆಗಿ ಬ್ರೇಕಿಂಗ್ ನ್ಯೂಸ್ ತಂಡವನ್ನು ತುಂಟಾದ ಪ್ರಶ್ನೆಗಳ ಮೂಲಕ ಮಜಾ ನೀಡುತ್ತಿದ್ದರು.
ಕನ್ನಡಬಿಟ್ಟ ಮೇಷ್ಟ್ರು:
ಕನ್ನಡದ ಖ್ಯಾತ ನಿರ್ದೇಶಕರ ಸಾಲಿನಲ್ಲಿ ಸೇರಿಕೊಳ್ಳುವ ನಾಗತಿಹಳ್ಳಿ ಚಂದ್ರಶೇಖರ್ ಈ ಬಾರಿ ಕನ್ನಡವನ್ನು ಬಿಟ್ಟು ಬಿಟ್ಟಿದ್ದಾರೆ. ಈ ಹಿಂದೆ ಕನ್ನಡದ ಪದಗಳಲ್ಲಿಯೇ ಚಿತ್ರ ಶೀರ್ಷಿಕೆಯನ್ನು ಜೋಡಿಸಿಕೊಟ್ಟು ಕನ್ನಡ ಪ್ರೀತಿ ಮೆರೆಯುತ್ತಿದ್ದ ಮೇಷ್ಟ್ರು ಈ ಬಾರಿ ಆಂಗ್ಲ ವ್ಯಾಮೋಹಕ್ಕೆ ಸಿಲುಕಿಕೊಂಡಿದ್ದಾರೆ. ಕಾದಂಬರಿ, ಕವಿತೆಯ ಸಾಲಿನಲ್ಲಿ ಶೀರ್ಷಿಕೆಯನ್ನು ಇಟ್ಟು ಮೋಡಿ ಮಾಡುತ್ತಿದ್ದ ಮೇಷ್ಟ್ರು ಆಧುನಿಕ ಕಾಲಘಟ್ಟದಲ್ಲಿ ಕನ್ನಡದ ಜತೆಯಲ್ಲಿ ಆಂಗ್ಲನೂ ಇರಲಿ ಎನ್ನುವ ಮೂಲಾಜಿಗೆ ಬಿದ್ದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎನ್ನುವ ಪದ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸರಿಯಾದ ಅರ್ಥದಲ್ಲಿ ಬಳಕೆಯಾಗುತ್ತಿಲ್ಲ ಎನ್ನುವ ಕೊರಗಿನಲ್ಲಿ ಮೇಷ್ಟ್ರು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಮಾಧ್ಯಮಗಳ ನಿಜವಾದ ಹೊಣೆಗಾರಿಕೆ ಹಾಗೂ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿಯ ಚಿತ್ರಣ ಈ ಚಿತ್ರದಲ್ಲಿ ಇರಲಿದೆಯಂತೆ. ಅದರಲ್ಲೂ ತಕ್ಕಮಟ್ಟಿಗೆ ಗ್ಲಾಮರ್ ಹಾಗೂ ಕಮರ್ಷಿಯಲ್ ಟಚ್ ಆಪ್ ಚಿತ್ರದಲ್ಲಿ ಕಾಣಿಸಿಕೊಂಡಿದೆ.
ಚಿತ್ರದಲ್ಲಿ ನಟ ಅಜೇಯ್ ರಾವ್ ವರದಿಗಾರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರಾದಿಕಾ ಪಂಡಿತ್ ತುಂಬಾನೇ ಚೆಲ್ಲು ಚೆಲ್ಲಾದ ಪಾತ್ರದಲ್ಲಿ ಮಿಂಚಿದ್ದಾರೆ. ಇವರ ಜತೆಯಲ್ಲಿ ಅನಂತ್ನಾಗ್, ರಂಗಾಯಣ ರಘು, ಕಾಸರಗೋಡು ಚಿನ್ನಾ ಸೇರಿದಂತೆ ಬಹುತಾರಾಗಣ ಚಿತ್ರಕ್ಕಿದೆ.
ರಾಗಕ್ಕೆ ಬಂತು ಜೀವ !:
ಪ್ಯಾರಿಸ್ ಪ್ರಣಯದ ಮೂಲಕ ಕ್ಲಿಕ್ ಆದ ಸ್ಟೀಪನ್ ಪ್ರಯೋಗ್ ಈ ಚಿತ್ರಕ್ಕೆ ವಿಶಿಷ್ಟ ರೂಪದ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿರುವ ಆರು ಹಾಡುಗಳಲ್ಲಿಯೂ ಪ್ರಯೋಗ್ ಹೊಸ ರೀತಿಯ ಪ್ರಯೋಗ ಮಾಡಿದ್ದಾರೆ.
ಚಿತ್ರಕ್ಕೆ ನಾಲ್ಕು ಹಾಡುಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದಿದ್ದಾರೆ. ಒಂದು ಹಾಡನ್ನು ಮಂಗಳೂರಿನ ನಿವೃತ್ತ ಪ್ರಾಧ್ಯಾಪಕ ನಾ.ದಾಮೋದರ ಶೆಟ್ಟಿ ಬರೆದಿದ್ದಾರೆ. ಮತ್ತೊಂದು ಹಾಡನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ. ಸಂಬಂಧ ಎನ್ನುವ ಹಾಡುವ ಮೂಲಕ ಸಂಗೀತ ಲೋಕದಲ್ಲಿ ತೀರಾ ವಿರಳವಾಗಿ ಬಳಸುವ ಹಂಸನಾದರಾಗವನ್ನು ಬಳಸಲಾಗಿದೆ.
ಕನ್ನಡದ ಇಂದಿನ ಸಿನಿಮಾಗಳಲ್ಲಿ ಈ ರಾಗವನ್ನು ಅಷ್ಟಾಗಿ ಬಳಕೆ ಮಾಡುತ್ತಿಲ್ಲ ಎನ್ನುವುದು ಮೇಷ್ಟ್ರು ಮಾತು. ಸಂಬಂಧ ಹಾಡನ್ನು ಇಲ್ಲಿ ಗುಜರಿ ಹಾಡೆಂದು ಕರೆಯಲಾಗಿದೆಯಂತೆ. ಕಾರಣ ಗುಜರಿ ವಸ್ತುಗಳ ನಡುವೆ ಇಡೀ ಹಾಡು ಚಿತ್ರೀಕರಣ ಮಾಡಲಾಗಿದೆ ಎನ್ನೋದು ಚಿತ್ರತಂಡ ತೆರೆದಿಟ್ಟ ಸಿಕ್ರೇಟ್ ಮಾತು. ಚಿತ್ರೀಕರಣ ನೋಡಿಕೊಂಡೇ ಪ್ರಯೋಗ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದರಂತೆ.
ಹುಡುಗಿ ಬಾರೇ...ಓಡಿ ಹೋಗೋಣ..ಎನ್ನುವ ಹಾಡಿನ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹಳೆಯ ಮಾಧುರ್ಯ ಹಾಡುಗಳಿಗೆ ಗುಡ್ಬಾಯ್ ಹೇಳಿ ಹೊಸ ಟಪೋರಿ ಮಾದರಿಯ ಹಾಡಿಗೆ ಶರಣಾಗಿದ್ದಾರೆ. ಇಂದಿನ ಯುವಜನತೆಗೆ ಈ ಹಾಡು ಬಹಳಷ್ಟು ಹಿಡಿಸಲಿದೆ ಎನ್ನೋದು ಮೇಷ್ಟ್ರು ಹೇಳುವ ಮಾತು.
ಕೋಟ್ ಕಾರ್ನರ್:
ಬ್ರೇಕಿಂಗ್ ನ್ಯೂಸ್ ಸಿನಿಮಾದ ಉದ್ದೇಶ ಬರೀ ಮನರಂಜನೆ ಮಾತ್ರವಲ್ಲ. ಇದು ತಲೆ ಹಾಗೂ ಹೃದಯಕ್ಕೆ ಒಂದೇ ಸಲ ಕೆಲಸ ಕೊಡುತ್ತದೆ. ಚಿತ್ರದಲ್ಲಿ ರಂಜನೆ ಇದೆ. ರಂಜನೆ ಇರೋದು ಚಿತ್ರದಲ್ಲಿ ಚಿಂತನೆಯಾಗಿ ಬದಲಾವಣೆಯಾಗುತ್ತದೆ. ಪ್ರತಿ ಪಾತ್ರನೂ ನಮ್ಮ ನಡುವೆ ಇರುವ ಪಾತ್ರದಂತೆ ಕಾಣುತ್ತದೆ. ಚಿತ್ರದ ನೋಡಿದ ನಂತರ ವಿಮರ್ಶೆಯ ಬೀಜ ಬಿತ್ತುತ್ತದೆ.
- ನಾಗತಿಹಳ್ಳಿ ಚಂದ್ರಶೇಖರ್- ನಿರ್ದೇಶಕರು ಬ್ರೇಕಿಂಗ್ ನ್ಯೂಸ್
......
ಕೋಟ್ ಕಾರ್ನರ್
೨೪ ಗಂಟೆನೂ ಕೆಲಸ ಕಣ್ರಿ
ಮಾಧ್ಯಮದ ಮಂದಿಯ ಮೇಲೆ ನನಗೆ ವಿಶೇಷ ಪ್ರೀತಿ. ಯಾಕ್ ಅಂತೀರಾ ಈ ಚಿತ್ರದಲ್ಲಿ ನಾನು ಕೂಡ ವರದಿಗಾರ ದಿನದ ೨೪*೭ನಂತೆ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ವರದಿಗಾರನ ಕೆಲಸವನ್ನು ಅಷ್ಟೇ ಸೂಕ್ಷ್ಮವಾಗಿ ಗಮನಿಸಿಕೊಂಡು ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಕತೆ ಎಲ್ಲೂ ಲೂಸ್ ಆಗಿಲ್ಲ. ಸ್ಕ್ರೀಪ್ಟ್ ತುಂಬಾನೇ ಚೆನ್ನಾಗಿ ವರ್ಕ್ ಆಗಿದೆ ಎನ್ನುವ ಅಂಶವನ್ನು ಪ್ರೇಕ್ಷಕನೇ ಚಿತ್ರ ನೋಡಿ ನೀಡುತ್ತಾ ನೆ.
- ಅಜೇಯ್ ರಾವ್, ನಟ ಬ್ರೇಕಿಂಗ್ ನ್ಯೂಸ್.
...
ಕೋಟ್ ಕಾರ್ನರ್
ಶ್ರದ್ಧೆ ಇಲ್ಲದ ಹುಡುಗಿ
ನನ್ನ ವೈಯಕ್ತಿಕ ಬದುಕಿಗೂ ಈ ಪಾತ್ರಕ್ಕೂ ತೀರಾ ಹತ್ತಿರದ ಹೋಲಿಕೆ ಇದೆ. ಚಿತ್ರದಲ್ಲಿ ನನಗೆ ಶ್ರದ್ಧಾ ಎನ್ನುವ ಹೆಸರಿಡಲಾಗಿದೆ. ಆದರೆ ಚಿತ್ರದ ತುಂಬಾ ಶ್ರದ್ಧೆಯನ್ನು ಬಿಟ್ಟು ಬಿಡುವ ಪಾತ್ರ. ಚಿತ್ರದ ಕುರಿತು ನಿರೀಕ್ಷೆ ಇದೆ. ಮೇಷ್ಟ್ರು ಜತೆ ಕೆಲಸ ಎಂದಾಗ ಶಿಸ್ತಿಗೆ ಜಾಸ್ತಿ ಮಹತ್ವ ಇದೆ. ಚಿತ್ರ ಮುಗಿಯುವ ವರೆಗೂ ನನಗೆ ಮನೆ ವಾತಾವರಣ ಎಂದೇ ಅನಿಸಿತ್ತು.
- ರಾದಿಕಾ ಪಂಡಿತ್- ನಟಿ, ಬ್ರೇಕಿಂಗ್ ನ್ಯೂಸ್
Tuesday, May 8, 2012
Monday, May 7, 2012
ಕುಡ್ಲದ ಯಂಗ್ ಡೈರೆಕ್ಟರ್ !
ಬ್ಲರ್ಬ್:
ಬಾಲಿವುಡ್ನ ಪಡಸಾಲೆಯಲ್ಲಿಕೂತು ಸಿನ್ಮಾದ ಕುರಿತು ಅಧ್ಯಯನ ಮಾಡಿಕೊಂಡು ತುಳು ಮಾತೃಭಾ ಷೆಯಲ್ಲಿ ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದ ಯುವಕನೊಬ್ಬನ ಕತೆ ಮುಂದಿದೆ.
ಬ್ಲರ್ಬ್:
ಬಾಲಿವುಡ್ಗೆಸಿನಿಮಾ ಇಂಡಸ್ಟ್ರಿಗೆ ಮುಂಬಯಿ ಇದೆ. ಟಾಲಿವುಡ್ ಸಿನಿಮಾಗಳಿಗೆ ಹೈದರಾಬಾದ್ ಇದೆ. ಕಾಲಿವುಡ್ ಸಿನಿಮಾಗಳಿಗೆಚೆನ್ನೈ ಇದೆ. ಸ್ಯಾಂಡಲ್ವುಡ್ಗೆ ಗಾಂಽನಗರವಿದೆ. ಕೋಸ್ಟಲ್ವುಡ್ ಸಿನ್ಮಾಗೆ ಇಡೀ ಕರಾವಳಿಯೇ ಇದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಈ ಇಂಡಸ್ಟ್ರಿಯಲ್ಲಿ ಬದಲಾವಣೆ ಎನ್ನೋದು ಸುಲಭದ ಮಾತಲ್ಲ. ಇಲ್ಲಿನ ಸೀಮಿತ ಮಾರುಕಟ್ಟೆ, ಸೀಮಿತ ಪ್ರೇಕ್ಷಕ ವರ್ಗದಿಂದ ಚಿತ್ರದಗೆಲುವು- ಸೋಲು ಸದಾ ಕಾಲ ಅನಿಶ್ಚಿತ.
ಆದರೆಈಗ ಕಾಲ ಬದಲಾಗಿದೆ. ಅದರಲ್ಲೂಕೋಸ್ಟಲ್ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಇಡೀ ಕೋಸ್ಟಲ್ವುಡ್ ಸಿನ್ಮಾ ಇಂಡಸ್ಟ್ರಿಯೇ ಬೆರಗು ಕಣ್ಣಿ ನಿಂದ ನೋಡುವಂತಹ ಯುವ ನಿರ್ದೇಶಕರೊಬ್ಬರು ಬಂದಿದ್ದಾರೆ.
ಬಾಲಿವುಡ್ನ ಪಡಸಾಲೆಯಲ್ಲಿಕೂತು ಸಿನ್ಮಾದ ಕುರಿತು ಅಧ್ಯಯನ ಮಾಡಿಕೊಂಡು ತಮ್ಮ ಮಾತೃಭಾ ಷೆಯಲ್ಲಿ ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದ ಯುವಕನೊಬ್ಬನ ಕತೆ ಮುಂದಿದೆ. ಅದರಲ್ಲೂಬಾಲಿವುಡ್ ಅಂಗಣದಲ್ಲಿ ಕುಣಿದು ಕುಪ್ಪಳಿಸಬೇಕಾದ ಪ್ರತಿಭೆ ಲೋಕಲ್ ಸಿನಿಮಾ ರಂಗದಲ್ಲಿ ಮಿಂಚುತ್ತಿರುವುದು ಕೋಸ್ಟಲ್ವುಡ್ ಸಿನಿಮಾ ನಗರಿಯ ಅದೃಷ್ಟನೇ ಸರಿ.
ಲೋಕಲ್ ಹೀರೋ :
ಅದೇನೋ ಸಿನಿಮಾದ ಕುರಿತು ಕಲಿಯಬೇಕೆನ್ನುವಅತೀ ಉತ್ಸಾಹ. ಕಿನ್ನಿಗೋಳಿಯ ಮುಂಡ್ಕೂರುನ ರಂಜನ್ ರಾಘು ಶೆಟ್ಟಿ ಎನ್ನುವ ಹುಡುಗ ಮುಂಬಯಿಯಲ್ಲಲ್ಲಿ ಕನಸ್ಸು ಕಾಣುತ್ತಾನೆ. ಕನಸ್ಸಿನ ಮುಂದುವರಿದ ಭಾಗದಂತೆ ಬಾಲಿವುಡ್ನ ದಿಗ್ಗಜ ಸುಭಾಷ್ ಘಾಯ್ ಸಿನ್ಮಾ ಸ್ಕೂಲ್ ವಿಸ್ಟ್ಲಿಂಗ್ವುಡ್ಸ್ ಇಂಟರ್ನ್ಯಾಷನಲ್ ಎಂಟ್ರಿ ಪಡೆಯುತ್ತಾನೆ.
ಏಷ್ಯಾದಲ್ಲಿ ಅತೀ ದೊಡ್ಡ ಸಿನ್ಮಾ ಸ್ಕೂಲ್ ಎನ್ನುವ ಹಣೆಪಟ್ಟಿ ಇದರ ಪಾಲಿಗಿದೆ. ಟಿವಿ, ಆನಿಮೇಷನ್, ನಟನೆ, ಸಿನಿಮಾ ಅಟೋಗ್ರಾಫಿ, ಡೈರೆಕ್ಷನ್, ಎಡಿಟಿಂಗ್, ಪ್ರಾಡಕ್ಷನ್ ಸೇರಿದಂತೆ ಸಿನ್ಮಾದ ಕುರಿತು ಏನೆಲ್ಲ ಬೇಕೋ ಅದನೆಲ್ಲ ಈ ಶಿಕ್ಷಣ ದೇಗುಲದಲ್ಲಿ ವರ್ಲ್ಡ್ ಕ್ಲಾಸ್ ಗುರುಗಳಿಂದ ಕಲಿಸಲಾಗುತ್ತದೆ. ಇಲ್ಲಿಯ ಶಿಕ್ಷಣ ಜತೆಯಲ್ಲಿರಂಜನ್ ನಿರ್ಮಿಸಿದ ನಾನಾ ಡಾಕ್ಯುಮೆಂಟರಿಯ ಮೂಲಕ ಕೆನಡಾ, ಈಜಿಪ್ಟ್, -ನ್ಸ್ ಮೊದಲಾದ ವಿದೇಶಿ ದೇಶಗಳಲ್ಲಿ ಸ್ಕ್ರೀನಿಂಗ್ ಮಾಡಿಸಿಕೊಂಡು ಒಳ್ಳೆಯ ಹೆಸರು ಸಂಪಾದಿಸುತ್ತಾನೆ.
೨೦೦೭ರಲ್ಲಿ ನೋಕಿಯಾ ಎನ್ ಸಿರೀಸ್ ಕಂಪನಿ ನಡೆಸಿದ ಸ್ಪರ್ಧೆಯಲ್ಲಿ ರಂಜನ್ ಮೊಬೈಲ್ನಲ್ಲಿ ಮೂರು ನಿಮಿಷಗಳ ಕಾಲ ಚಿತ್ರಿಸಿದ ‘ಸೋಲಿಟ್ಯೂಟ್ ಡ್ರೀಮ್ಸ್’ಗೆ ಪ್ರಥಮ ಸ್ಥಾನ ಲಭ್ಯವಾಗುತ್ತದೆ. ಅಲ್ಲಿಂದಲೇ ಸಿನಿಮಾದ ಕುರಿತು ರಂಜನ್ ಮತ್ತಷ್ಟೂಸಿರೀಯಸ್ ಆಗಿ ಹೋದರಂತೆ !
ಅದೇ ಸಮಯದಲ್ಲಿ ಸಹಪಾಟಿಯಾಗಿದ್ದಸೂರ್ಯ ಮೆನನ್ ಹಾಗೂ ರಂಜನ್ ಸೇರಿಕೊಂಡು ಮಾತೃಭಾಷೆಯಲ್ಲಿ ಸಿನಿಮಾ ಮಾಡುವ ಕುರಿತು ದೊಡ್ಡ ಯೋಜನೆಯನ್ನು ಹಾಕಿಕೊಂಡಿದ್ದರು. ರಂಜನ್ ನಿರ್ದೇಶನದ ಜವಾಬ್ದಾರಿ ಹೊತ್ತು ಮೆನನ್ ನಿರ್ಮಾಪಕರಾಗಿ ‘ಅಮೇಟ್ ಅಸಲ್ ಈಮೇಟ್ ಕುಸಲ್’( ಆ ಕಡೆ ಅಸಲಿ ಈ ಕಡೆ ನಕಲಿ) ಎನ್ನುವ ತುಳು ಚಿತ್ರ ಈಗ ಕರಾವಳಿಯ ತುಂಬಾ ಸುದ್ದಿಯಲ್ಲಿದೆ. ಚಿತ್ರ ಬಿಡುಗಡೆಯಾದ ನಂತರವಂತೂ ಈ ಇಬ್ಬರು ಯುವಕರು ಕೋಸ್ಟಲ್ವುಡ್ನಲ್ಲಿ ಹೀರೋಗಳಾಗಿ ಮಿಂಚಿದ್ದಾರೆ.
ಅಸಲಿಗೂ ಚಿತ್ರದಲ್ಲಿ ಏನಿದೆ:
ಆಂಗ್ಲ ಭಾಷೆಯ ಖ್ಯಾತ ನಾಟಕಕಾರ ಶೇಕ್ಸ್ಪಿಯರ್ನ ‘ಎ ಕಾಮೆಡಿ ಆ- ಎರ್ರಾರಾಸ್’ನ ಮೂಲ ಕತೆಗೆ ಕರಾವಳಿಯ ಕಾಮೆಡಿ ಟಚ್ ಕೊಟ್ಟು ಈ ಚಿತ್ರವನ್ನು ಮಾಡಲಾಗಿದೆ. ಸೂರ್ಯ ಮೆನನ್ ಇಂಗ್ಲೀಷ್ನಲ್ಲಿ ಚಿತ್ರ ಕತೆಯನ್ನು ರೆಡಿ ಮಾಡಿದ್ದರು. ಈ ಚಿತ್ರಕತೆಗೆ ತುಳುವಿನ ಟಚ್ ಕೊಟ್ಟವರು ಕರಾವಳಿಯ ರಂಗಭೂಮಿ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಹಾಗೂ ಎಂ. ಸಾಯಿಕೃಷ್ಣ.
ಬಾಲಿವುಡ್ ಹಿನ್ನೆಲೆ ಗಾಯಕಿ ಚiಕ್ ಚಲ್ಲೋ -ಮ್ ಹಂಸಿಕಾ ಅಯ್ಯರ್ ಈ ಚಿತ್ರಕ್ಕೆ ಹಾಡೊಂದನ್ನು ಹಾಡಿದ್ದಾರೆ. ಚಿತ್ರಕ್ಕೆ ಸಂಗೀತವನ್ನುರಂಜನ್ ಸಹಪಾಟಿ ಅಕಾಶ್ ಪ್ರಜಾಪತಿ ಹಾಗೂ ಹುಮಾಂಗ್ ದೋಶಿ ನೀಡಿದ್ದಾರೆ. ಛಾಯಾಗ್ರಹಣವನ್ನು ಸಾಹೀಲ್ ಪತಾಕ್ ನಿರ್ವಹಿಸಿದ್ದಾರೆ.
ಅದರಲ್ಲೂ ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಅವರ ಪುತ್ರ ಸಿದ್ದಾರ್ಥ್ರನ್ನು ಮೊದಲ ಬಾರಿಗೆ ಕರಾವಳಿ ಚಿತ್ರವೊಂದಕ್ಕೆ ಹಾಡಿಸಿದ ಖ್ಯಾತಿ ಈ ಚಿತ್ರ ತಂಡಕ್ಕೆ ಸಲ್ಲುತ್ತಿದೆ. ಈ ತುಳು ಚಿತ್ರದ ಮೂಲಕ ಸಿದ್ದಾರ್ಥ್ರನ್ನು ಲಾಂಚ್ ಮಾಡಲಾಗಿದೆ. ಇದೆಲ್ಲವೂ ಕೋಸ್ಟಲ್ವುಡ್ ಪಾಲಿಗೆ ಮೊತ್ತ ಮೊದಲ ಪ್ರಯತ್ನ. ಟೋಟಲಿ ದೂರದ ಹುಡುಗರು ಕರಾವಳಿಯಲ್ಲಿ ಮಾಡಿದ ಕೆಲಸ ಪ್ರೇಕ್ಷಕರ ಮುಂದೆ ನಿಂತಿದೆ.
..................
ಕೋಟ್ ಕಾರ್ನರ್
ಆರಂಭದಲ್ಲಿ ಸಾಹಸ ಪ್ರಧಾನ ಚಿತ್ರ ಮಾಡುವ ಯೋಜನೆ ಇತ್ತು. ಆದರೆ ಕರಾವಳಿಯ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಬಂದ ನಂತರವಂತೂ ಸಾಹಸ ಪ್ರಧಾನ ಚಿತ್ರಕ್ಕಿಂತ ಹಾಸ್ಯ ಪ್ರಧಾನ ಚಿತ್ರ ಮಾಡಿದರೆ ಮಾರುಕಟ್ಟೆ ಸ್ವಾಗತ ಮಾಡುತ್ತದೆ ಎಂದುಕೊಂಡು ಅಸಲ್-ಕುಸಲ್ ಮಾಡಲು ಯೋಜನೆಹಾಕಿಕೊಂಡೇವು
-------ರಂಜನ್ ರಾಘು ಶೆಟ್ಟಿ
ನಿರ್ದೇಶಕಅಮೇಟ್ ಅಸಲ್ ಈಮೇಟ್ ಕುಸಲ್
...
ಕೋಟ್ ಕಾರ್ನರ್
ತುಳು ಚಿತ್ರದ ಮೂಲಕ ಮತ್ತಷ್ಟೂ ಉತ್ಸಾಹ ಬಂದಿದೆ. ಬರುವ ವರ್ಷ ಹಿಂದಿಯಲ್ಲಿ ಚಿತ್ರ ನಿರ್ದೇಶನ ಹಾಗೂ ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ. ಎರಡು ವರ್ಷದ ನಂತರ ಮತ್ತೊಂದು ತುಳು ಚಿತ್ರ ನಿರ್ಮಾಣ ಮಾಡುವ ಕನಸ್ಸು ಇದೆ.
---ಸೂರ್ಯ ಮೆನನ್, ನಿರ್ಮಾಪಕಅಮೇಟ್ ಅಸಲ್ ಈಮೇಟ್ ಕುಸಲ್
................
* ಸ್ಟೀವನ್ ರೇಗೊ, ದಾರಂದಕುಕ್ಕು
...
ಕರಾವಳಿಯ ಡಾಕ್ಯುಮೆಂಟರಿ ಹುಡುಗ !
ಯುವಘರ್ಜನೆ-11
ಬ್ಲರ್ಬ್:
ಕಾಸರಗೋಡಿನ ಹುಡುಗನೊಬ್ಬ ಡಾಕ್ಯುಮೆಂಟರಿಗೆ ಕೈ ಹಾಕಿದ್ದಾನೆ. ಅದರ ಹೆಸರು ‘ದಿ ಎಂಡ್’ ಅಂತಾ. ಇದು ಬರೀಯ ಡಾಕ್ಯುಮೆಂಟರಿಯಾದರೆ ದೊಡ್ಡ ವಿಚಾರವೇ ಅಲ್ಲ. ಸಮಾಜಶಾಸ್ತ್ರಜ್ಞರಿಗೆ ಹಾಗೂ ಮಾನಸಿಕ ತಜ್ಞರಿಗೂ ಸದಾ ಕಾಲ ಜಟಿಲವಾಗಿ ಕಾಡುತ್ತಿರುವ ಆತ್ಮಹತ್ಯೆಯಂತಹ ಪ್ರಕರಣವನ್ನು ಈ ಹುಡುಗ ತನ್ನ ಡಾಕ್ಯುಮೆಂಟರಿಯಲ್ಲಿ ಎತ್ತಿಕೊಂಡಿದ್ದಾನೆ. ಮೋರ್ ಡಿಟೇಲ್ ಮುಂದೆ ಓದಿ....
ಬ್ಲರ್ಬ್:
ಸರಿಯಾಗಿ ಮೂರು ವರ್ಷದ ಹಿಂದೆ ಅಂದರೆ ನವೆಂಬರ್ ೨೯,೨೦೦೯ ರಂದು ರಾಜ್ಯದ ನಂಬರ್ ವನ್ ಕನ್ನಡ ದೈನಿಕ ‘ವಿಜಯ ಕರ್ನಾಟಕ’ದ ಸಾಪ್ತಾಹಿಕದಲ್ಲಿ ಪ್ರಕಟವಾದ ಒಂದು ಲೇಖನದ ವಸ್ತು ಈ ಹುಡುಗನ ಡಾಕ್ಯಮೆಂಟರಿಗೆ ಆಹಾರವಾಗಿತ್ತು. ಪುತ್ತೂರಿನಿಂದ ಮಾರು ದೂರ ಇರುವ ಕೆಯ್ಯೂರು-ಕಣಿಯೂರಿನ ಕಾಡಿನಲ್ಲಿರುವ ಕುಕ್ಕ ಎನ್ನುವ ಶ್ರೀಸಾಮಾನ್ಯ ವ್ಯಕ್ತಿಯನ್ನು ಇಟ್ಟುಕೊಂಡು ಕಾಸರಗೋಡಿನ ಹುಡುಗನೊಬ್ಬ ಡಾಕ್ಯುಮೆಂಟರಿ ತಯಾರಿಸಿದ್ದು ಮಾತ್ರವಲ್ಲ ಅದನ್ನು ಇಟ್ಟುಕೊಂಡು ಇಂಟರ್ನ್ಯಾಷನಲ್ ಲೆವೆಲ್ಗೂ ಸಾಗಿಸಿ ಹೆಸರು ಸಂಪಾದಿಸಿಕೊಂಡು ಬಂದಿದ್ದು ಈಗ ಬರೀ ಇತಿಹಾಸ.
ಆದರೆ ಇದೇ ಹುಡುಗ ಮತ್ತೆ ಡಾಕ್ಯುಮೆಂಟರಿಗೆ ಕೈ ಹಾಕಿದ್ದಾನೆ. ಅದರಲ್ಲೂ ಈ ಬಾರಿಯ ಡಾಕ್ಯುಮೆಂಟರಿ ನಾನಾ ಕಾರಣಗಳಿಂದ ಸುಂದರ ಸಮಾಜದಲ್ಲಿ ತಲ್ಲಣ ಎಬ್ಬಿಸುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಸಮಾಜಶಾಸ್ತ್ರಜ್ಞರಿಗೆ ಹಾಗೂ ಮಾನಸಿಕ ತಜ್ಞರಿಗೂ ಸದಾ ಕಾಲ ಜಟಿಲವಾಗಿ ಕಾಡುತ್ತಿರುವ ಆತ್ಮಹತ್ಯೆಯಂತಹ ಪ್ರಕರಣವನ್ನು ಈ ಹುಡುಗ ತನ್ನ ಡಾಕ್ಯುಮೆಂಟರಿಯಲ್ಲಿ ಎತ್ತಿಕೊಂಡಿದ್ದಾನೆ. ಈ ಮೂಲಕ ಆತ್ಮಹತ್ಯೆಯ ಹಾದಿ ಹಿಡಿಯುವ ಯುವ ಮನಸ್ಸುಗಳಿಗೆ ಗಟ್ಟಿಯಾದ ಸಂದೇಶ ನೀಡಲು ರೆಡಿಯಾಗಿದ್ದಾನೆ.
ಪ್ರತಿಭೆಯ ಖನಿ ಅಭಿ:
ಅಂದಹಾಗೆ ಈ ಹುಡುಗನ ಹೆಸರು ಅಭಿಷೇಕ್ ಕಾಸರಗೋಡು. ರಾಜ್ಯದ ಹಿರಿಯ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಹಿರಿಯ ಪುತ್ರ ಅಭಿಷೇಕ್ ತಂದೆಯಂತೆ ಪ್ರತಿಭಾವಂತ. ಬೆಂಗಳೂರಿನಲ್ಲಿರುವ ಸಿನಿಮಾ ಹಾಗೂ ಟೆಲಿವಿಷನ್ ಇನ್ಸ್ಸ್ಟಿಟ್ಯೂಟ್ನಲ್ಲಿ ೨೦೦೮-೦೯ರಲ್ಲಿ ಡಿಪ್ಲೋಮಾ ಮಾಡಿಕೊಂಡು ನೇರವಾಗಿ ಇಳಿದ್ದು ಗಾಂನಗರದ ಅಡ್ಡಾಕ್ಕೆ.. ಅದರಲ್ಲೂ ತಂದೆಯ ಬರವಣಿಗೆಯನ್ನು ಬಿಟ್ಟು ಅಭಿಷೇಕ್ ಮುತ್ತಿಕೊಂಡಿದ್ದು ಬಣ್ಣದ ಲೋಕವನ್ನು ಕ್ಯಾಮರೆಮನ್ ಸತ್ಯ ಹೆಗ್ಗಡೆ, ಅಶೋಕ್ ಕಶ್ಯಪ್ ಸೇರಿದಂತೆ ನಾನಾ ಕ್ಯಾಮರೆಮನ್ಗಳ ಕೈಯಲ್ಲಿ ಸಾಕಷ್ಟು ಕಲಿದ ಹುಡುಗ ಅಭಿಷೇಕ್ ‘ಕುಕ್ಕು ಹೇಳಿದ ಮರದ ಕತೆ’ಯ ಮೂಲಕ ಮೊದಲ ಬಾರಿಗೆ ಡಾಕ್ಯುಮೆಂಟರಿಯೊಂದಕ್ಕೆ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದರು.
ಆತ್ಮಹತ್ಯೆ ಮಾಡುವರಿಗೊಂದು ಪಾಠ:
‘ದಿ ಎಂಡ್’ ಎನ್ನುವ ಶಿರೋನಾಮೆಯಲ್ಲಿ ಲೈಫ್ ಸಮ್ ಟೈಮ್ಸ್ ಹಾರ್ಡ್ ಆಂಡ್ ಪೂವರ್ ಬಟ್ ಈಟ್ ಇಸ್ ಪ್ಯಾರಡೈಸ್ ಇನ್ ಕಂಪ್ಯಾರೀಶನ್ ವಿದ್ ಡೆತ್ ಎನ್ನುವ ಟ್ಯಾಗ್ಲೈನ್ ಇಟ್ಟುಕೊಂಡು ಬಂದಿರುವ ಈ ಡಾಕ್ಯುಮೆಂಟರಿಯಲ್ಲಿ ನಿರ್ದೇಶಕರಾದ ಅಶೋಕ್ ಕಶ್ಯಪ್ ಅವರ ಪ್ರೀತಿಯಿಂದ ಧಾರಾವಾಹಿಯ ಪಾತ್ರಧಾರಿ ಗಿರೀಶ್ ಕೃಷ್ಣ ಎನ್ನುವವರು ಆತ್ಮಹತ್ಯೆ ಮಾಡುವ ಸನ್ನಿವೇಶವನ್ನು ಈ ಡಾಕ್ಯುಮೆಂಟರಿಯಲ್ಲಿ ಚಿತ್ರಿಸಲಾಗಿದೆ. ಡಾಕ್ಯುಮೆಂಟರಿಗೆ ಚಿತ್ರಕತೆಯನ್ನು ಅಭಿಷೇಕ್ ಕಾಸರಗೋಡು ಹಾಗೂ ಚರಣ್ ವೀರ್ನಾಗ್ ಮಾಡಿದ್ದಾರೆ.
ಇನ್ನೂಳಿದಂತೆ ಸಂಕಲನದಲ್ಲೂ ಅಭಿ, ಚರಣ್ ಹಾಗೂ ಪ್ರವೀಣ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕ್ಯಾಮೆರಾ ಹಾಗೂ ನಿರ್ದೇಶಕನ ಜವಾಬ್ದಾರಿಯನ್ನು ಖುದ್ದು ಅಭಿಷೇಕ್ ಕಾಸರಗೋಡು ವಹಿಸಿಕೊಂಡಿದ್ದಾರೆ. ಎರಡು ಕ್ಯಾಮೆರಾಗಳ ಜತೆ ಚಿತ್ರೀಕರಣ ಮಾಡಲಾಗಿರುವ ಈ ಡಾಕ್ಯುಮೆಂಟರಿಗೆ ಈ ಯುವಕರು ಅತೀ ಹೆಚ್ಚು ಶ್ರಮ ಹಾಕಿರುವ ದಾಖಲೆ ಡಾಕ್ಯುಮೆಂಟರಿ ನೋಡಿದ ಪ್ರತಿಯೊಬ್ಬನಿಗೂ ಕಾಣಿಸಿಕೊಳ್ಳುತ್ತದೆ. ಅಭಿಷೇಕ್ರ ಮನೆಯ ಕೋಣೆಯೊಂದರಲ್ಲಿ ಸಂಪೂರ್ಣ ಚಿತ್ರಿತವಾಗಿರುವ ‘ದಿ ಎಂಡ್’ ನಂತರದ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಪ್ರಚಾರ ಮಾಡಿ ಆತ್ಮಹತ್ಯೆ ಮಾಡುವವರು ಈ ಕೃತ್ಯದಿಂದ ಹಿಂದೆ ಸರಿಯುವಂತೆ ಮಾಡುವ ಯೋಚನೆ ಇವರಲ್ಲಿದೆ.
ಕುಕ್ಕ ಎನ್ನುವ ಡಾಕ್ಯುಮೆಂಟರಿ:
ಕುಕ್ಕ ಒಬ್ಬ ಶ್ರೀಸಾಮಾನ್ಯ ವ್ಯಕ್ತಿ. ಆತನ ವರ್ಕಿಂಗ್ ಪ್ಲೇಸ್ ಕೆಯ್ಯೂರಿನ ಕಣಿಯೂರಿನ ದಟ್ಟವಾದ ಕಾಡು. ಚಿತ್ರದ ಕತೆ ಆರಂಭವಾಗೋದು ಇಲ್ಲಿಂದ, ಕುಕ್ಕ ತನ್ನ ಬದುಕಿನ ನಾಲ್ಕು ಕತೆಗಳನ್ನು ಹೇಳುತ್ತಾನೆ. ಅದರಲ್ಲಿ ಕುಕ್ಕನ ಬದುಕು, ತನ್ನ ಸುತ್ತಮುತ್ತಲಿನ ಪ್ರಪಂಚ, ಕಾಣಿಯೂರಿನ ಸ್ಥಳೀಯರ ಜತೆಯಲ್ಲಿರುವ ಬಹಳ ಗಟ್ಟಿಯಾದ ಆತನ ಸಂಬಂಧಗಳು, ಕಾಡಿನ ಬಗ್ಗೆ ಇರುವ ಆತನ ಕಾಳಜಿ ಎಲ್ಲವೂ ಇಲ್ಲಿ ಕೌಂಟ್ ಆಗಿ ಚಿತ್ರ ಮುಂದುವರಿಯುತ್ತದೆ.
ಚಿತ್ರ ವೀಕ್ಷಿಸುತ್ತಾ ಸಾಗುತ್ತಿದ್ದಾಗ ಕುಕ್ಕನ ಬಗ್ಗೆ ಇರುವ ದೃಷ್ಟಿಕೋನಗಳು ಬದಲಾಗುತ್ತಾ ಸಾಗುತ್ತದೆ.
ಕುಕ್ಕನ ಪರಿಚಯ ಚಿತ್ರದ ಮೂಲಕ ಹೊರ ಬರುತ್ತಿದ್ದಂತೆಯೇ ಅಲ್ಲೊಂದು ಸಂದೇಶ ರವಾನೆಯಾಗುತ್ತದೆ. ‘ ನಿಜಕ್ಕೂ ಕುಕ್ಕ ಪಟ್ಟಣದಲ್ಲಿರುವ ಒಬ್ಬ ಶಿಕ್ಷಿತ ವ್ಯಕ್ತಿಗಿಂತ ಭಿನ್ನ ರೀತಿಯಲ್ಲಿ ಕಾಣಿಸುತ್ತಾನೆ. ಅದರಲ್ಲೂ ಮುಖ್ಯವಾಗಿ ಶಿಕ್ಷಿತ ವರ್ಗ ಮಾಡದೇ ಇರುವ ಕೆಲಸವನ್ನು ಕುಕ್ಕ ಕಾಡಿನಲ್ಲಿ ನಿಂತು ಮಾಡುವ ಮೂಲಕ ಪರಿಸರದ ಕುರಿತು ಕೊಂಚ ನಿಧಾನವಾಗಿ ವೀಕ್ಷಕರತ್ತ ಸಂದೇಶ ರವಾನಿಸುವಂತೆ ಭಾಸವಾಗುತ್ತದೆ.
ಈ ಚಿತ್ರ ೨೪ ನಿಮಿಷಗಳ ಕಾಲ ವೀಕ್ಷಕರನ್ನು ಎಳೆದಿಟ್ಟುಕೊಂಡು ಮುಂದುವರಿಯುತ್ತದೆ. ಈ ಡಾಕ್ಯುಮೆಂಟರಿ ಈಗಾಗಲೇ ದೇಶ-ವಿದೇಶದ ನಾನಾ ಫೆಸ್ಟಿವಲ್ಗೆ ಹೋಗಿ ಹೆಸರುಗಳಿಸಿಕೊಂಡು ವಾಪಾಸು ಬಂದಿದೆ. ಟೋಟಲಿ ಅಭಿಷೇಕ್ ಎನ್ನುವ ಪ್ರತಿಭಾವಂತ ಹುಡುಗ ತನ್ನದೇ ವ್ಯಾಪ್ತಿಯಲ್ಲಿ ಹೊಸ ಹೊಸ ಯೋಚನಾಲಹರಿಯನ್ನು ಬಿಚ್ಚಿಡುತ್ತಿದ್ದಾರೆ. ಗಾಂನಗರದ ಮಂದಿ ಸಾತ್ ಕೊಡುತ್ತಾರೋ ಗೊತ್ತಿಲ್ಲ. ಆದರೆ ಅಭಿಷೇಕ್ನಿಗಂತೂ ಉಜ್ವಲ ಭವಿಷ್ಯವಂತೂ ಕಾದಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ.
...
ಕೋಟ್ ಕಾರ್ನರ್.....
ಯುವಜನತೆಯಲ್ಲಿ ಇತ್ತೀಚೆಗೆ ಮೌನ ಹಾಗೂ ಗಂಭೀರತೆಯ ಕೊರತೆ ಎದ್ದು ಕಾಣುತ್ತಿದೆ. ಆದರೆ ಅಭಿಷೇಕ್ ವಿಚಾರದಲ್ಲಿ ಮಾತ್ರ ಇದು ತಪ್ಪಾಗಿದೆ. ಅಭಿಷೇಕ್ನಲ್ಲಿ ವಯಸ್ಸಿಗೆ ಮೀರಿದ ಗಂಭೀರತೆ ಇದೆ. ಆತನ ಮೌನದಿಂದ ಬಹಳಷ್ಟು ವಿಚಾರಗಳನ್ನು ನಿರೀಕ್ಷೆಇಟ್ಟುಕೊಳ್ಳಬಹುದು.
- ನರೇಂದ್ರ ರೈ ದೇರ್ಲ, ಖ್ಯಾತ ಬರಹಗಾರ
...............
ಕೋಟ್ ಕಾರ್ನರ್
ಆತ್ಮಹತ್ಯೆ ತುಂಬಾನೇ ಸೂಕ್ಷ್ಮವಾದ ವಿಚಾರ. ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುವ ನೂರಾರು ಆತ್ಮಹತ್ಯೆಗಳ ಪ್ರಕರಣಗಳು ಮಾಧ್ಯಮಗಳ ಮೂಲಕ ಕಣ್ಣ ಮುಂದೆ ಯಾವಾಗಲೂ ಬರುತ್ತಿತ್ತು. ಇಂತಹ ಆತ್ಮಹತ್ಯೆಗೆ ಕಾರಣ ಹಾಗೂ ಕೊನೆಕ್ಷಣದಲ್ಲಿ ವ್ಯಕ್ತಿಯ ಮನಸ್ಸಿನಲ್ಲಿ ನಡೆಯುವ ತಳಮಳಗಳನ್ನು ಚಿತ್ರೀಕರಣಮಾಡಬೇಕು ಎನ್ನೋದು ನನ್ನ ಬಹಳ ದಿನಗಳ ಕನಸ್ಸು. ದಿ ಎಂಡ್ ಮೂಲಕ ಇದು ಈಡೇರಿದೆ.
- ಅಭಿಷೇಕ್ ಕಾಸರಗೋಡು, ದಿ ಎಂಡ್ ನಿರ್ದೇಶಕ
..............
* ಸ್ಟೀವನ್ ರೇಗೊ, ದಾರಂದಕುಕ್ಕು
................
Wednesday, March 21, 2012
ಪ.ಗೋ.ಪ್ರಶಸ್ತಿಗೆ ಸ್ಟೀವನ್ ರೇಗೊ ಆಯ್ಕೆ

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ.ಗೋ.ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ೨೦೧೧ನೇ ಸಾಲಿನಲ್ಲಿ ಪತ್ರಕರ್ತ ಸ್ಟೀವನ್ ರೇಗೊ ಆಯ್ಕೆಯಾಗಿದ್ದಾರೆ. ಅಕ್ಟೋಬರ್ ೩೧,೨೦೧೧ ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಅವರ ‘ನಂದಿನಿ ಮಾಯವಾಗುವ ಮುನ್ನ...’ ವರದಿಗೆ ಈ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ ೨೬ರ ಸೋಮವಾರ ಪೂವಾಹ್ನ ೧೦.೩೦ ಗಂಟೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು ರೂ.೫೦೦೧/, ಪ್ರಶಸ್ತಿ ಪತ್ರ, ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಮೊತ್ತವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾಯೋಜಿಸುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನಿವಾಸ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸ್ಟೀವನ್ ರೇಗೊ ಕಳೆದ ಐದು ವರ್ಷಗಳಿಂದ ಮಂಗಳೂರು ವಿಜಯ ಕರ್ನಾಟಕ ಬ್ಯೂರೋದಲ್ಲಿ ಉಪಸಂಪಾದಕ ಹಾಗೂ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಜತೆಗೆ ಸಂತ. ಫಿಲೋಮಿನಾ ಕಾಲೇಜು ಪದವಿ ಪೂರೈಸಿಕೊಂಡು ನಂತರ ಮಂಗಳೂರು ವಿವಿಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಪುತ್ತೂರಿನ ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ದಂಪತಿಗಳ ಹಿರಿಯ ಪುತ್ರ. ಇವರ ಮತ್ತೊಬ್ಬ ಸಹೋದರ ಸುನೀಲ್ ರೇಗೊ ಭಾರತೀಯ ಭೂ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
Tuesday, February 21, 2012
ಕಾಲಿವುಡ್ನಲ್ಲಿ ‘ಬಿ ’ಟೌನ್ ಬೇಬ್ಸ್ !

‘ಬಿ’ ಟೌನ್ನಲ್ಲಿ ಚಿಂಗಾರಿ ಹೊತ್ತಿಸಿದ ಬೇಬ್ಸ್ಗಳು ಇನ್ನೂ ಮುಂದೆ ‘ಬಿ ’ಟೌನ್ನ ಪಾವ್ ಬಾಜಿ ಬಿಟ್ಟು ತಿರುನಲ್ವೇಲ್ ಹಲ್ವಾ ತಿನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ನಲ್ಲಿ ಕುಣಿದು ಕುಪ್ಪಳಿಸಿದ ನಾಯಕಿಯರು ಇನ್ನೂ ಕಾಲಿವುಡ್ನಲ್ಲಿ ಮಸಾಲೆ ಹರಿಯುವ ಸಾಧ್ಯತೆಗಳು ದಟ್ಟವಾಗಿದೆ.
ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಈಗ ಮುಂಚಿನಂತೆ ಇಲ್ಲ. ಬಾಲಿವುಡ್ನ ನೆತ್ತಿ ಮೇಲೆ ನಿಂತು ಕರಡಿಯಂತೆ ಕುಣಿಯಲು ಎಲ್ಲ ರೀತಿಯಿಂದಲೂ ಕಾಲಿವುಡ್ ಸಜ್ಜಾಗಿದೆ. ಒಂದು ಲೆಕ್ಕಚಾರದ ಪ್ರಕಾರ ಬಾಲಿವುಡ್ ಸಿನ್ಮಾ ನಗರಿಗೆ ಮೀಸೆ ತಿರುವಿಕೊಂಡು ಸವಾಲು ಹಾಕಿಬಿಡುವ ಛಾತಿ ಇರೋದು ಬರೀ ಕಾಲಿವುಡ್ಗೆ ಮಾತ್ರ ಎನ್ನುವ ವಿಷ್ಯಾವೇನೂ ಗುಪ್ತವಾಗಿ ಉಳಿದಿಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ತಮಿಳಿನ ಮೋಸ್ಟ್ ಸಕ್ಸಸ್ ರೇಟೆಡ್ ಸಿನ್ಮಾಗಳನ್ನು ತಂದು ಬಾಲಿವುಡ್ನಲ್ಲಿ ರಿಮೇಕ್ ಮಾಡುತ್ತಿರುವ ಪರಂಪರೆ ಹುಟ್ಟಿದೆ. ಇದರ ಅರ್ಥ ತಮಿಳಿನ ಚಿತ್ರಗಳು ಎಲ್ಲ ರೀತಿಯಿಂದಲೂ ಬಾಲಿವುಡ್ ಮಂದಿಯನ್ನು ಮೀರಿಸುವಂತಿದೆ ಎಂದಾಯಿತು.
ಈಗ ಮಾತಿನ ಅಂಗಣದೊಳಗೆ ಬನ್ನಿ. ‘ಬಿ’ ಟೌನ್ನಲ್ಲಿ ಚಿಂಗಾರಿ ಹೊತ್ತಿಸಿದ ಬೇಬ್ಸ್ಗಳು ಇನ್ನೂ ಮುಂದೆ ‘ಬಿ ’ಟೌನ್ನ ಪಾವ್ ಬಾಜಿ ಬಿಟ್ಟು ತಿರುನಲ್ವೇಲ್ ಹಲ್ವಾ ತಿನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ನಲ್ಲಿ ಕುಣಿದು ಕುಪ್ಪಳಿಸಿದ ನಾಯಕಿಯರು ಇನ್ನೂ ಕಾಲಿವುಡ್ನಲ್ಲಿ ಮಸಾಲೆ ಹರಿಯುವ ಸಾಧ್ಯತೆಗಳು ದಟ್ಟವಾಗಿದೆ ಎನ್ನುವ ಮಾತು ಕಾಲಿವುಡ್ ಸಿನ್ಮಾ ಗಲ್ಲಿಯ ಮೂಲೆಯಿಂದ ರವಾನೆಯಾಗಿದೆ.
ಬಾಲಿವುಡ್ ನಟಿ ಪಿಂಕಿ ಆಲಿಯಾಸ್ ಪ್ರಿಯಾಂಕಾ ಚೋಪ್ರಾ(ಪಿಸಿ)ಯನ್ನು ಕಾಲಿವುಡ್ ನಿರ್ದೇಶಕ ಎ.ಆರ್. ಮುರುಗದಾಸ್ ತನ್ನ ಮುಂದಿನ ಚಿತ್ರ ‘ತೂಫಾಕಿ’ಗಾಗಿ ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಗಲ್ಲಿಗೆ ಬಂದಿದೆ. ಈ ಚಿತ್ರದಲ್ಲಿ ಇಳಯದಳಪತಿ ವಿಜಯ್ ನಟಿಸುತ್ತಿರುವುದರಿಂದ ಚಿತ್ರದ ಕುರಿತು ನಿರೀಕ್ಷೆಗಳು ಈಗಾಗಲೇ ಕಾಲಿವುಡ್ನಲ್ಲಿ ಬೆಳೆದುಬಿಟ್ಟಿದೆ. ಈಗಾಗಲೇ ಮುರುಗದಾಸ್ರನ್ನು ಸೆಟ್ನಲ್ಲಿ ಪಿಂಕಿ ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ಕೂಡ ಮುಗಿಸಿದ್ದಾರೆ ಎನ್ನುವ ಸುದ್ದಿಗಳು ಗರಿಬಿಚ್ಚಿಕೊಂಡಿದೆ. ಒಂದು ಮೂಲದ ಪ್ರಕಾರ ಮುರುಗದಾಸ್ ಪಿಂಕಿಯನ್ನು ಬಿಟ್ಟು ಕಾಜಲ್ ಅಗರ್ವಾಲ್ರನ್ನು ಆಯ್ಕೆ ಮಾಡುವ ಸೂಚನೆ ಕೂಡ ಬಂದಿದೆ. ಆದರೆ ಫೈನಲ್ ನಾಯಕಿ ಯಾರು ಎನ್ನುವ ವಿಚಾರಕ್ಕೆ ಉತ್ತರವಂತೂ ಸಿಕ್ಕಿಲ್ಲ.
ಇದರ ಜತೆಯಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್( ಸನಿ)ಕೂಡ ಕಾಲಿವುಡ್ನಲ್ಲಿ ಎಂಟ್ರಿಯಾಗುವ ಸೂಚನೆ ಬಂದಿದೆ. ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದ ‘ತೂಫಾಕಿ’ ಚಿತ್ರದ ಸೆಕೆಂಡ್ ಹೀರೋಯಿನ್ ಪಟ್ಟಕ್ಕೆ ಸೋನಮ್ಗೆ ಆಫರ್ ನೀಡಲಾಗಿದೆ. ಅದರ ಜತೆಯಲ್ಲಿ ಕಮಲ್ ಹಾಸನ್ ನಟಿಸುವ ‘ವಿಶ್ವರೂಪಂ’, ಖ್ಯಾತ ನಿರ್ದೇಶಕ ಮಣಿರತ್ನಂರ ‘ಕಾದಲ್’, ಕಾಲಿವುಡ್ ನಿರ್ದೇಶಕ ವೆಂಕಟ್ ಪ್ರಭು ಅವರ ನಿರ್ದೇಶನದ ಚಿತ್ರವೊಂದರಲ್ಲಿ ಸೋನಮ್ ನಟಿಸುವುದು ಖಾತರಿಯಾಗಿದೆ. ವಿಶೇಷ ಏನಪ್ಪಾ ಅಂದರೆ ತನಗೆ ತಮಿಳು ಚಿತ್ರದಲ್ಲಿ ಪಾತ್ರಕೊಡಿ ಎಂದು ಎಲ್ಲಿಯೂ ಕೂಡ ಸೋನಮ್ ಕೇಳಿಕೊಂಡಿಲ್ಲ ಎನ್ನುವ ಮಾತನ್ನು ಸ್ವತಃ ಕಾಲಿವುಡ್ ನಿರ್ದೇಶಕರೇ ಹೇಳುತ್ತಿದ್ದಾರೆ.
ಸೋನಿ ಕುಡಿಯ ಬಾಲಿವುಡ್ನಲ್ಲಿ ಮಾಡಿದ ಪಾತ್ರಗಳು ಕಾಲಿವುಡ್ ನಿರ್ದೇಶಕರ ಮನಸ್ಸು ಕಚ್ಚಿ ಹಿಡಿದಿದೆ ಎನ್ನುವ ಕಾರಣಕ್ಕೆ ಸೋನಮ್ಗೆ ಪಾತ್ರ ನೀಡಲಾಗುತ್ತಿದೆ ಎನ್ನುವುದು ಕಾಲಿವುಡ್ ನಿರ್ದೇಶಕ ಮಾತು. ಆದರೆ ಮಣಿರತ್ನಂ ಚಿತ್ರದಿಂದ ಸೋನಮ್ ಕಪೂರ್ ಬದಲಾಗಿ ದೂಕೂಡು ಫೇಮ್ ಸಮಂತಾ ಹೆಸರು ಕೇಳಿ ಬರುತ್ತಿದೆ. ಆದರೆ ಈ ನಾಯಕಿ ಪಟ್ಟ ಇಬ್ಬರಲ್ಲಿ ಯಾರಿಗೆ ಎನ್ನೋದು ಇನ್ನೂ ಇತ್ಯರ್ಥವಾಗಿಲ್ಲ. ಟೋಟಲಿ ಬಾಲಿವುಡ್ನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಬಣ್ಣದ ಚಿಟ್ಟೆಗಳು ಕಾಲಿವುಡ್ ಆಗಸದಲ್ಲಿ ಮನಸೋ ಬಿಚ್ಚಿ ಹಾರಾಡುತ್ತಾ ಎನ್ನುವ ಪ್ರಶ್ನೆ ಮಾತ್ರ ಚಿತ್ರಗಳು ತೆರೆಗೆ ಬಂದ ನಂತರವೇ ತಿಳಿಯಬೇಕು. ನಾಯಕಿಯರಿಗೆ ಬಾಲಿವುಡ್ನಲ್ಲಿರುವ ಭಾಷೆ, ನಟನೆಯ ಚಮಕ್ ಕಾಲಿವುಡ್ನಲ್ಲಿ ವರ್ಕ್ ಔಟ್ ಆಗುತ್ತಾ ಎನ್ನೋದು ಡಾಲರ್ ಪ್ರಶ್ನೆ.
ಬಾಲಿಯ ‘ಕತ್ರಿ’ಗೆ ದೊಡ್ಡ ಚಿತ್ರ
ಬಾಲಿವುಡ್ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ರಜನಿಕಾಂತ್ರ ‘ಕೋಚಡಿಯಾನ್’ನಲ್ಲಿ ಹಾಗೂ ಕಮಲ್ಹಾಸನ್ ನಟಿಸುತ್ತಿರುವ ‘ವಿಶ್ವರೂಪಂ’ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಕಾಲಿವುಡ್ ಇತಿಹಾಸದಲ್ಲಿಯೇ ಈ ಎರಡು ಚಿತ್ರಗಳು ಈಗಾಗಲೇ ಭಾರೀ ಪ್ರಚಾರವನ್ನು ಪಡೆದುಕೊಂಡಿದೆ. ಜತೆಗೆ ಅತೀ ಹೆಚ್ಚು ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿರುವ ಚಿತ್ರ ಎನ್ನುವ ಹೆಗ್ಗಳಿಕೆ ಕೂಡ ಬಗಲಿಗಿದೆ. ಅದರಲ್ಲೂ ‘ವಿಶ್ವರೂಪಂ’ನ ವಿದ್ಯಾಬಾಲನ್, ಸೋನಮ್ ಹಾಗೂ ಕತ್ರಿನಾರ ಜಾಗಕ್ಕೆ ಪೂಜಾ ಕುಮಾರ್ ಅವರ ಹೆಸರು ಕೇಳಿ ಬರಲು ಆರಂಭವಾಗಿದೆ. ಕಾರಣ ಈ ಮೂರು ನಾಯಕಿಯರಲ್ಲಿ ಡೇಟ್ಸ್ ಕೊರತೆ ಕಾಣಿಸಿಕೊಂಡಿದೆ. ಆದರೂ ಕತ್ರಿನಾ ಈ ಎರಡು ಚಿತ್ರಗಳಿಗೆ ಓಕೆ ಎಂದಿದ್ದಾರೆ ಎನ್ನುವ ಮಾತು ಕೂಡ ಕಾಲಿವುಡ್ನಲ್ಲಿ ಓಡುತ್ತಿದೆ.
(vk lvk published dis article on 24.02.2012)
Subscribe to:
Posts (Atom)