Monday, May 7, 2012
ಕುಡ್ಲದ ಯಂಗ್ ಡೈರೆಕ್ಟರ್ !
ಬ್ಲರ್ಬ್:
ಬಾಲಿವುಡ್ನ ಪಡಸಾಲೆಯಲ್ಲಿಕೂತು ಸಿನ್ಮಾದ ಕುರಿತು ಅಧ್ಯಯನ ಮಾಡಿಕೊಂಡು ತುಳು ಮಾತೃಭಾ ಷೆಯಲ್ಲಿ ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದ ಯುವಕನೊಬ್ಬನ ಕತೆ ಮುಂದಿದೆ.
ಬ್ಲರ್ಬ್:
ಬಾಲಿವುಡ್ಗೆಸಿನಿಮಾ ಇಂಡಸ್ಟ್ರಿಗೆ ಮುಂಬಯಿ ಇದೆ. ಟಾಲಿವುಡ್ ಸಿನಿಮಾಗಳಿಗೆ ಹೈದರಾಬಾದ್ ಇದೆ. ಕಾಲಿವುಡ್ ಸಿನಿಮಾಗಳಿಗೆಚೆನ್ನೈ ಇದೆ. ಸ್ಯಾಂಡಲ್ವುಡ್ಗೆ ಗಾಂಽನಗರವಿದೆ. ಕೋಸ್ಟಲ್ವುಡ್ ಸಿನ್ಮಾಗೆ ಇಡೀ ಕರಾವಳಿಯೇ ಇದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಈ ಇಂಡಸ್ಟ್ರಿಯಲ್ಲಿ ಬದಲಾವಣೆ ಎನ್ನೋದು ಸುಲಭದ ಮಾತಲ್ಲ. ಇಲ್ಲಿನ ಸೀಮಿತ ಮಾರುಕಟ್ಟೆ, ಸೀಮಿತ ಪ್ರೇಕ್ಷಕ ವರ್ಗದಿಂದ ಚಿತ್ರದಗೆಲುವು- ಸೋಲು ಸದಾ ಕಾಲ ಅನಿಶ್ಚಿತ.
ಆದರೆಈಗ ಕಾಲ ಬದಲಾಗಿದೆ. ಅದರಲ್ಲೂಕೋಸ್ಟಲ್ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಇಡೀ ಕೋಸ್ಟಲ್ವುಡ್ ಸಿನ್ಮಾ ಇಂಡಸ್ಟ್ರಿಯೇ ಬೆರಗು ಕಣ್ಣಿ ನಿಂದ ನೋಡುವಂತಹ ಯುವ ನಿರ್ದೇಶಕರೊಬ್ಬರು ಬಂದಿದ್ದಾರೆ.
ಬಾಲಿವುಡ್ನ ಪಡಸಾಲೆಯಲ್ಲಿಕೂತು ಸಿನ್ಮಾದ ಕುರಿತು ಅಧ್ಯಯನ ಮಾಡಿಕೊಂಡು ತಮ್ಮ ಮಾತೃಭಾ ಷೆಯಲ್ಲಿ ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದ ಯುವಕನೊಬ್ಬನ ಕತೆ ಮುಂದಿದೆ. ಅದರಲ್ಲೂಬಾಲಿವುಡ್ ಅಂಗಣದಲ್ಲಿ ಕುಣಿದು ಕುಪ್ಪಳಿಸಬೇಕಾದ ಪ್ರತಿಭೆ ಲೋಕಲ್ ಸಿನಿಮಾ ರಂಗದಲ್ಲಿ ಮಿಂಚುತ್ತಿರುವುದು ಕೋಸ್ಟಲ್ವುಡ್ ಸಿನಿಮಾ ನಗರಿಯ ಅದೃಷ್ಟನೇ ಸರಿ.
ಲೋಕಲ್ ಹೀರೋ :
ಅದೇನೋ ಸಿನಿಮಾದ ಕುರಿತು ಕಲಿಯಬೇಕೆನ್ನುವಅತೀ ಉತ್ಸಾಹ. ಕಿನ್ನಿಗೋಳಿಯ ಮುಂಡ್ಕೂರುನ ರಂಜನ್ ರಾಘು ಶೆಟ್ಟಿ ಎನ್ನುವ ಹುಡುಗ ಮುಂಬಯಿಯಲ್ಲಲ್ಲಿ ಕನಸ್ಸು ಕಾಣುತ್ತಾನೆ. ಕನಸ್ಸಿನ ಮುಂದುವರಿದ ಭಾಗದಂತೆ ಬಾಲಿವುಡ್ನ ದಿಗ್ಗಜ ಸುಭಾಷ್ ಘಾಯ್ ಸಿನ್ಮಾ ಸ್ಕೂಲ್ ವಿಸ್ಟ್ಲಿಂಗ್ವುಡ್ಸ್ ಇಂಟರ್ನ್ಯಾಷನಲ್ ಎಂಟ್ರಿ ಪಡೆಯುತ್ತಾನೆ.
ಏಷ್ಯಾದಲ್ಲಿ ಅತೀ ದೊಡ್ಡ ಸಿನ್ಮಾ ಸ್ಕೂಲ್ ಎನ್ನುವ ಹಣೆಪಟ್ಟಿ ಇದರ ಪಾಲಿಗಿದೆ. ಟಿವಿ, ಆನಿಮೇಷನ್, ನಟನೆ, ಸಿನಿಮಾ ಅಟೋಗ್ರಾಫಿ, ಡೈರೆಕ್ಷನ್, ಎಡಿಟಿಂಗ್, ಪ್ರಾಡಕ್ಷನ್ ಸೇರಿದಂತೆ ಸಿನ್ಮಾದ ಕುರಿತು ಏನೆಲ್ಲ ಬೇಕೋ ಅದನೆಲ್ಲ ಈ ಶಿಕ್ಷಣ ದೇಗುಲದಲ್ಲಿ ವರ್ಲ್ಡ್ ಕ್ಲಾಸ್ ಗುರುಗಳಿಂದ ಕಲಿಸಲಾಗುತ್ತದೆ. ಇಲ್ಲಿಯ ಶಿಕ್ಷಣ ಜತೆಯಲ್ಲಿರಂಜನ್ ನಿರ್ಮಿಸಿದ ನಾನಾ ಡಾಕ್ಯುಮೆಂಟರಿಯ ಮೂಲಕ ಕೆನಡಾ, ಈಜಿಪ್ಟ್, -ನ್ಸ್ ಮೊದಲಾದ ವಿದೇಶಿ ದೇಶಗಳಲ್ಲಿ ಸ್ಕ್ರೀನಿಂಗ್ ಮಾಡಿಸಿಕೊಂಡು ಒಳ್ಳೆಯ ಹೆಸರು ಸಂಪಾದಿಸುತ್ತಾನೆ.
೨೦೦೭ರಲ್ಲಿ ನೋಕಿಯಾ ಎನ್ ಸಿರೀಸ್ ಕಂಪನಿ ನಡೆಸಿದ ಸ್ಪರ್ಧೆಯಲ್ಲಿ ರಂಜನ್ ಮೊಬೈಲ್ನಲ್ಲಿ ಮೂರು ನಿಮಿಷಗಳ ಕಾಲ ಚಿತ್ರಿಸಿದ ‘ಸೋಲಿಟ್ಯೂಟ್ ಡ್ರೀಮ್ಸ್’ಗೆ ಪ್ರಥಮ ಸ್ಥಾನ ಲಭ್ಯವಾಗುತ್ತದೆ. ಅಲ್ಲಿಂದಲೇ ಸಿನಿಮಾದ ಕುರಿತು ರಂಜನ್ ಮತ್ತಷ್ಟೂಸಿರೀಯಸ್ ಆಗಿ ಹೋದರಂತೆ !
ಅದೇ ಸಮಯದಲ್ಲಿ ಸಹಪಾಟಿಯಾಗಿದ್ದಸೂರ್ಯ ಮೆನನ್ ಹಾಗೂ ರಂಜನ್ ಸೇರಿಕೊಂಡು ಮಾತೃಭಾಷೆಯಲ್ಲಿ ಸಿನಿಮಾ ಮಾಡುವ ಕುರಿತು ದೊಡ್ಡ ಯೋಜನೆಯನ್ನು ಹಾಕಿಕೊಂಡಿದ್ದರು. ರಂಜನ್ ನಿರ್ದೇಶನದ ಜವಾಬ್ದಾರಿ ಹೊತ್ತು ಮೆನನ್ ನಿರ್ಮಾಪಕರಾಗಿ ‘ಅಮೇಟ್ ಅಸಲ್ ಈಮೇಟ್ ಕುಸಲ್’( ಆ ಕಡೆ ಅಸಲಿ ಈ ಕಡೆ ನಕಲಿ) ಎನ್ನುವ ತುಳು ಚಿತ್ರ ಈಗ ಕರಾವಳಿಯ ತುಂಬಾ ಸುದ್ದಿಯಲ್ಲಿದೆ. ಚಿತ್ರ ಬಿಡುಗಡೆಯಾದ ನಂತರವಂತೂ ಈ ಇಬ್ಬರು ಯುವಕರು ಕೋಸ್ಟಲ್ವುಡ್ನಲ್ಲಿ ಹೀರೋಗಳಾಗಿ ಮಿಂಚಿದ್ದಾರೆ.
ಅಸಲಿಗೂ ಚಿತ್ರದಲ್ಲಿ ಏನಿದೆ:
ಆಂಗ್ಲ ಭಾಷೆಯ ಖ್ಯಾತ ನಾಟಕಕಾರ ಶೇಕ್ಸ್ಪಿಯರ್ನ ‘ಎ ಕಾಮೆಡಿ ಆ- ಎರ್ರಾರಾಸ್’ನ ಮೂಲ ಕತೆಗೆ ಕರಾವಳಿಯ ಕಾಮೆಡಿ ಟಚ್ ಕೊಟ್ಟು ಈ ಚಿತ್ರವನ್ನು ಮಾಡಲಾಗಿದೆ. ಸೂರ್ಯ ಮೆನನ್ ಇಂಗ್ಲೀಷ್ನಲ್ಲಿ ಚಿತ್ರ ಕತೆಯನ್ನು ರೆಡಿ ಮಾಡಿದ್ದರು. ಈ ಚಿತ್ರಕತೆಗೆ ತುಳುವಿನ ಟಚ್ ಕೊಟ್ಟವರು ಕರಾವಳಿಯ ರಂಗಭೂಮಿ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಹಾಗೂ ಎಂ. ಸಾಯಿಕೃಷ್ಣ.
ಬಾಲಿವುಡ್ ಹಿನ್ನೆಲೆ ಗಾಯಕಿ ಚiಕ್ ಚಲ್ಲೋ -ಮ್ ಹಂಸಿಕಾ ಅಯ್ಯರ್ ಈ ಚಿತ್ರಕ್ಕೆ ಹಾಡೊಂದನ್ನು ಹಾಡಿದ್ದಾರೆ. ಚಿತ್ರಕ್ಕೆ ಸಂಗೀತವನ್ನುರಂಜನ್ ಸಹಪಾಟಿ ಅಕಾಶ್ ಪ್ರಜಾಪತಿ ಹಾಗೂ ಹುಮಾಂಗ್ ದೋಶಿ ನೀಡಿದ್ದಾರೆ. ಛಾಯಾಗ್ರಹಣವನ್ನು ಸಾಹೀಲ್ ಪತಾಕ್ ನಿರ್ವಹಿಸಿದ್ದಾರೆ.
ಅದರಲ್ಲೂ ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಅವರ ಪುತ್ರ ಸಿದ್ದಾರ್ಥ್ರನ್ನು ಮೊದಲ ಬಾರಿಗೆ ಕರಾವಳಿ ಚಿತ್ರವೊಂದಕ್ಕೆ ಹಾಡಿಸಿದ ಖ್ಯಾತಿ ಈ ಚಿತ್ರ ತಂಡಕ್ಕೆ ಸಲ್ಲುತ್ತಿದೆ. ಈ ತುಳು ಚಿತ್ರದ ಮೂಲಕ ಸಿದ್ದಾರ್ಥ್ರನ್ನು ಲಾಂಚ್ ಮಾಡಲಾಗಿದೆ. ಇದೆಲ್ಲವೂ ಕೋಸ್ಟಲ್ವುಡ್ ಪಾಲಿಗೆ ಮೊತ್ತ ಮೊದಲ ಪ್ರಯತ್ನ. ಟೋಟಲಿ ದೂರದ ಹುಡುಗರು ಕರಾವಳಿಯಲ್ಲಿ ಮಾಡಿದ ಕೆಲಸ ಪ್ರೇಕ್ಷಕರ ಮುಂದೆ ನಿಂತಿದೆ.
..................
ಕೋಟ್ ಕಾರ್ನರ್
ಆರಂಭದಲ್ಲಿ ಸಾಹಸ ಪ್ರಧಾನ ಚಿತ್ರ ಮಾಡುವ ಯೋಜನೆ ಇತ್ತು. ಆದರೆ ಕರಾವಳಿಯ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಬಂದ ನಂತರವಂತೂ ಸಾಹಸ ಪ್ರಧಾನ ಚಿತ್ರಕ್ಕಿಂತ ಹಾಸ್ಯ ಪ್ರಧಾನ ಚಿತ್ರ ಮಾಡಿದರೆ ಮಾರುಕಟ್ಟೆ ಸ್ವಾಗತ ಮಾಡುತ್ತದೆ ಎಂದುಕೊಂಡು ಅಸಲ್-ಕುಸಲ್ ಮಾಡಲು ಯೋಜನೆಹಾಕಿಕೊಂಡೇವು
-------ರಂಜನ್ ರಾಘು ಶೆಟ್ಟಿ
ನಿರ್ದೇಶಕಅಮೇಟ್ ಅಸಲ್ ಈಮೇಟ್ ಕುಸಲ್
...
ಕೋಟ್ ಕಾರ್ನರ್
ತುಳು ಚಿತ್ರದ ಮೂಲಕ ಮತ್ತಷ್ಟೂ ಉತ್ಸಾಹ ಬಂದಿದೆ. ಬರುವ ವರ್ಷ ಹಿಂದಿಯಲ್ಲಿ ಚಿತ್ರ ನಿರ್ದೇಶನ ಹಾಗೂ ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ. ಎರಡು ವರ್ಷದ ನಂತರ ಮತ್ತೊಂದು ತುಳು ಚಿತ್ರ ನಿರ್ಮಾಣ ಮಾಡುವ ಕನಸ್ಸು ಇದೆ.
---ಸೂರ್ಯ ಮೆನನ್, ನಿರ್ಮಾಪಕಅಮೇಟ್ ಅಸಲ್ ಈಮೇಟ್ ಕುಸಲ್
................
* ಸ್ಟೀವನ್ ರೇಗೊ, ದಾರಂದಕುಕ್ಕು
...
Subscribe to:
Post Comments (Atom)
No comments:
Post a Comment