Friday, October 7, 2011

ಅವಾರ್ಡ್ ಬಂತು ನಿರೀಕ್ಷೆ ಹೆಚ್ಚಾಯಿತು






ವಿಜಯ ಕರ್ನಾಟಕ ಮಂಗಳೂರು ಆವೃತ್ತಿಗೆಉಪಸಂಪಾದಕ/ ವರದಿಗಾರನಾಗಿ ಬಂದು ಬರೋಬರಿ ಐದು ವರ್ಷಗಳು ಉರುಳಿ ಹೋಗಿದೆ. ಕೆಲಸದಲ್ಲಿ ನೆಮ್ಮದಿ, ತೃಪ್ತಿ ಜತೆಗೆ ಗೌರವ, ಹೆಸರು ಎಲ್ಲವೂ ಪುಟ್ಟ ಅವಽಯಲ್ಲಿ ಬಂದು ಆಗಿತ್ತು. ಆದರೆ ಪ್ರಶಸ್ತಿ ಎನ್ನುವ ವಿಚಾರ ಮರೀಚಿಕೆ ಎಂದೇ ನಾನು ನಂಬಿಕೆ ಇಟ್ಟುಕೊಂಡಿದ್ದೆ. ಪತ್ರಿಕೋದ್ಯಮದಲ್ಲಿ ಹಿರಿಯ ಪತ್ರಕರ್ತರಿಗೆ ಮಾತ್ರ ಪ್ರಶಸ್ತಿ, ಸನ್ಮಾನಗಳು ಮೀಸಲಾಗಿದೆ ಎನ್ನುವ ಕಲ್ಪನೆಯ ಪ್ರಪಂಚದಲ್ಲಿ ದಿನಲೂ ತೇಲಾಡುತ್ತಿದ್ದೆ.
ಆದರೆ ಇದೆಲ್ಲವೂ ಸುಳ್ಳು ಅನ್ನಿಸಿದ್ದು ಮಾತ್ರ ಹಿರಿಯ ಪತ್ರಕರ್ತ ಕೆ.ಜೆ.ಶೆಟ್ಟಿ ಕಡಂದಲೆಯ ಹೆಸರಿನಲ್ಲಿ ಕಿನ್ನಿಗೋಳಿಯ ಯುಗಪುರುಷ ಹಾಗೂ ವಿಜಯಾ ಕಲಾವಿದರು ನೀಡಿದ ಕಡಂದಲೆ ಪ್ರಶಸ್ತಿಸ್ವೀಕಾರ ಮಾಡಿದ ನಂತರ... ‘ಟ್ರ್ಯಾಜಿಡಿ ಊರು ಶಂಕರಪುರ ಮಲ್ಲಿಗೆಯ ಕಟುವಾಸನೆ’ ಎನ್ನುವ ನನ್ನ ಗ್ರಾಮೀಣ ವರದಿಗೆ ಕಡಂದಲೆ ಪ್ರಶಸ್ತಿ ಬಂದಿದೆ. ಕಿನ್ನಿಗೋಳಿಯಲ್ಲಿ ಅಕ್ಟೋಬರ್ ೨ರಂದು ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ಪಡೆದುಕೊಂಡ ಕೆಲವೊಂದು ರಸ ನಿಮಿಷಗಳ ಚಿತ್ರವನ್ನು ನನ್ನ ಪತ್ರಕರ್ತ ಗೆಳೆಯ ಮನೋಜ್ ಹಾಗೂ ಸುನೀಲ್ ಹಳೆಯಂಗಡಿ ಸೆರೆ ಹಿಡಿದು ಇಮೇಲ್ ಕಳುಹಿಸಿ ಕೊಟ್ಟಿದ್ದಾರೆ.

No comments:

Post a Comment