Wednesday, September 28, 2011

ಸ್ಟೀವನ್ ರೇಗೊಗೆ ಕಡಂದಲೆ ಪ್ರಶಸ್ತಿ


ಯುಗಪುರುಷ ಹಾಗೂ ವಿಜಯಾ ಕಲಾವಿದರು ನೀಡುವ ಕೆ.ಜೆ.ಶೆಟ್ಟಿ ಕಡಂದಲೆ ಪ್ರಶಸ್ತಿಗೆ ವಿಜಯ ಕರ್ನಾಟಕದ ಮಂಗಳೂರು ಆವೃತ್ತಿಯ ಉಪಸಂಪಾದಕ ಸ್ಟೀವನ್ ರೇಗೊ ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕದಲ್ಲಿ ೨೦ಜುಲೈ೨೦೧೦ರಂದು ಪ್ರಕಟವಾಗಿದ್ದ ಸ್ಟೀವನ್ ರೇಗೊ ಅವರ ‘ಮಲ್ಲಿಗೆಯ ಕಟು ವಾಸನೆ, ಟ್ರ್ಯಾಜಿಡಿ ಊರು ಶಂಕರಪುರ ’ ವರದಿಯು ತೀರ್ಪುಗಾರರ ಗಮನ ಸೆಳೆದಿದೆ. ಅತಿಯಾದ ಕೀಟನಾಶಗಳ ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಅವರ ಲೇಖನವು ಗ್ರಾಮೀಣ ವರದಿಗಾರಿಕೆ ಹಾಗೂ ನಗರಾಭಿವೃದ್ಧಿ ಸೇತುವಾಗಿತ್ತು. ಪತ್ರಕರ್ತ ದಿವಂಗತ ಕೆ.ಜೆ.ಶೆಟ್ಟಿ ಕಡಂದಲೆ ಸ್ಮರಣಾರ್ಥ ನೀಡುವ ಪ್ರಶಸ್ತಿಯು ೧೫ ಸಾವಿರ ರೂ. ನಗದು, ಫಲಕ ಹಾಗೂ ಸನ್ಮಾನ ಪತ್ರ ಒಳಗೊಂಡಿದೆ. ಅ.೨ರಂದು ಸಂಜೆ ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.

No comments:

Post a Comment