
ಕನ್ನಡದಲ್ಲಿ ಒಂದೊಳ್ಳೆಯ ಲಾಂಚ್ಗಾಗಿ ಕಾಯುತ್ತಿದ್ದ ಡಾ. ಜಯಮಾಲ ಮಗಳು ಸೌಂದರ್ಯಗೆ ಕೊನೆಗೂ ಅಂಥದ್ದೊಂದು ಸುವರ್ಣಾವಕಾಶ ಕನ್ನಡದಲ್ಲಿ ಬಂದಿದೆ. ಅಂದಹಾಗೆ ಸೌಂದರ್ಯ ಪಾಲಿನ ಗಾಡ್ಫಾದರ್ ಯಾರು ಅಂತೀರಾ.. ಬನ್ನಿ ಮಾತು ಕೇಳಿ..
‘ಸೌಂದರ್ಯ’ ಇದು ಕನ್ನಡದ ಹೊಸ ನಾಯಕಿಯ ಹೆಸರು. ಅಂದಹಾಗೆ ಸೌಂದರ್ಯ ಹಿರಿಯ ಸಿನಿಮಾ ತಾರೆ ಡಾ.ಜಯಮಾಲ ಅವರ ಪುತ್ರಿ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಮಾತು ಇಲ್ಲಿ ಬಲಗೊಂಡಿದೆ. ಸೌಂದರ್ಯ ಹೇಳುವ ಜತೆಯಲ್ಲಿ ನೋಡುವುದರಲ್ಲೂ ಸಖತ್ ಬ್ಯೂಟಿಫುಲ್ ಹುಡುಗಿ. ನಯನ ಮನೋಹರವಾದ ಕಣ್ಣುಗಳು, ಅಗಲವಾದ ಮೊಗ, ತುಟಿ ಅಂಚಿನಲ್ಲಿ ಮುದ್ದು ನಗು ಎಲ್ಲವೂ ನಾಯಕಿಯ ಪಟ್ಟಕ್ಕೆ ಹೇಳಿ ಮಾಡಿಸಿದ ಪ್ರಾಡಕ್ಟ್ಗಳು. ಕನ್ನಡದಲ್ಲಿ ಒಂದೊಳ್ಳೆಯ ಲಾಂಚ್ಗಾಗಿ ಕಾಯುತ್ತಿದ್ದ ಡಾ.ಜಯಮಾಲ ಪುತ್ರಿ ಸೌಂದರ್ಯಗೆ ಕೊನೆಗೂ ಅಂಥದ್ದೊಂದು ಸುವರ್ಣಾವಕಾಶ ಕನ್ನಡದಲ್ಲಿ ಬಂದಿದೆ. ಸೌಂದರ್ಯ ಪಾಲಿಗೆ ಗಾಡ್ ಫಾದರ್ ಆಗಿರೋರು ಕನ್ನಡದ ನಿರ್ಮಾಪಕ ಕೆ. ಮಂಜು.
ನಟ ಅಜಿತ್ ಹಾಗೂ ಅಸೀನ್ ನಟಿಸಿರುವ ತಮಿಳಿನ ಚಿತ್ರ ‘ವರಲಾರು ದಿ ಗಾಡ್ಫಾದರ್’ ಕನ್ನಡದಲ್ಲಿ ‘ಗಾಡ್ಫಾದರ್’ ಆಗಿ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ಸೌಂದರ್ಯಗೆ ಮಂಜು ಅವಕಾಶ ಕೊಟ್ಟಿದ್ದಾರೆ. ಈ ಮೂಲಕ ಸೌಂದರ್ಯ ಕೊನೆಗೂ ಬಣ್ಣಹಚ್ಚುವಂತಾಗಿದೆ. ಸೌಂದರ್ಯ ಬಣ್ಣ ಹಚ್ಚುತ್ತಿರುವ ಸುದ್ದಿ ಕೇಳಿ ಬರುತ್ತಿರುವುದು ಇದು ಮೊದಲೇನಲ್ಲ. ಯೋಗರಾಜ್ ಭಟ್ ನಿರ್ದೇಶಿಸಬೇಕಿದ್ದ, ಪುನೀತ್ ರಾಜ್ಕುಮಾರ್ ಅಭಿನಯಿಸಬೇಕಿದ್ದ ‘ಲಗೋರಿ’ ಚಿತ್ರಕ್ಕೆ ಸೌಂದರ್ಯ ನಾಯಕಿಯಾಗಿದ್ದಾರೆ ಎಂದು ಸುದ್ದಿ ಗಾಂನಗರದಲ್ಲಿ ಹಬ್ಬಿತ್ತು. ಆದರೆ ಚಿತ್ರ ಶುರುವಾಗಲೇ ಇಲ್ಲ. ಇನ್ನು ಸೌಂದರ್ಯ, ನಟ ಯಶೋ ಸಾಗರ್ ಅಭಿನಯದ ‘ಮಿಸ್ಟರ್ ಪ್ರೇಮಿಕುಡು’ ಎಂಬ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಬೇಕಿತ್ತು.
ಚಿತ್ರದ ಮುಹೂರ್ತವೂ ಆಗಿತ್ತು. ಆದರೆ, ಚಿತ್ರ ಮುಂದುವರೆಯಲಿಲ್ಲವಂತೆ. ಹೀಗಿರುವಾಗ ನಿರ್ಮಾಪಕ ಮಂಜು, ಡಾ. ಜಯಮಾಲ ಅವರಿಗೆ ಒಮ್ಮೆ ಫೋನ್ ಮಾಡಿ, ಉಪೇಂದ್ರ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಕಳುಹಿಸಿಕೊಡುತ್ತೀರಾ ಎಂದು ಕೇಳಿ ಕೊಂಡಿದ್ದರಂತೆ..ಒಳ್ಳೆಯ ಬ್ಯಾನರ್, ಚಿತ್ರ, ನಾಯಕ ... ಇಷ್ಟೆಲ್ಲಾ ಒಳ್ಳೆಯದುಗಳಿರುವಾಗ, ಮಗಳಿಗೂ ಒಳ್ಳೆಯದಾಗಬಹುದು ಎಂದು ಜಯಮಾಲ ಮಗಳು ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಮಾತು ಹೊರಬಂದಿದೆ. ಅಲ್ಲಿಗೆ ಚಿತ್ರದ ನಾಯಕಿಯರು ಯಾರು ಎಂಬ ಪ್ರಶ್ನೆಗೆ ಅರ್ಧ ಉತ್ತರ ಸಿಕ್ಕಿದೆ. ಇನ್ನೊಬ್ಬ ನಾಯಕಿ ಪಾತ್ರಕ್ಕೆ ಸಿಮ್ರಾನ್, ಭೂಮಿಕಾ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ಯಾರು ನಾಯಕಿಯರು ಎಂದು ಚಿತ್ರ ಆರಂಭವಾಗುವಾಗಲೇ ಗೊತ್ತಾಗಬೇಕು ಮಾರಾಯ್ರೆ.
No comments:
Post a Comment