

ಮುಖದಲ್ಲಿ ಫುಲ್ ತುಂಬಿರುವ ಸೌಮ್ಯತೆ, ಕಾಸಿನ ಅಗಲದ ಕುಂಕುಮ, ಕುಂಕುಮದ ಮೇಲ್ ಭಾಗದಲ್ಲಿ ಬಿಳಿನಾಮದ ಅಡ್ಡಗೆರೆ, ತಲೆ ತುಂಬಾ ಉದ್ದ ಕೂದಲು. ಇಡೀಯಾಗಿ ಬಿಡಿಯಾಗಿ ಹೇಳುವುದಾದರೂ ಮೋನಿಷಾ ಉನ್ನಿ ಪಕ್ಕಾ ಮಲೆಯಾಳಿ ಕುಟ್ಟಿ. ಇದೇ ಮೋನಿಷಾರಿಗೆ ದೇವರು ಕೈ ಕೊಟ್ಟ ಮಾತು ಕೇಳಿ....
ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಅವರೊಬ್ಬರೇ ನ್ಯಾಚುರಲ್ ಬ್ಯೂಟಿ ಎನ್ನುವುದು ಬಹಳಷ್ಟು ಸಿನಿ ವಿಮರ್ಶಕರ ಗಟ್ಟಿ ಮಾತು. ಅದು ಖರೇನೆ ಇರಬಹುದು. ಸಿನಿಮಾ ನೋಡುವ ಪ್ರೇಕ್ಷಕನಲ್ಲಿ ಮೋನಿಷಾ ಉನ್ನಿ ಎಂದರೆ ತಮ್ಮ ಮನೆ ಮಗಳು, ಒಡಹುಟ್ಟಿದ ತಂಗಿ- ಅಕ್ಕ ಎನ್ನುವ ಕಲ್ಪನೆಗಳೇ ಜಾಸ್ತಿಯಾಗಿ ಬಂದು ಬಿಡುತ್ತದೆ.
ಮುಖದಲ್ಲಿ ಫುಲ್ ತುಂಬಿರುವ ಸೌಮ್ಯತೆ, ಕಾಸಿನ ಅಗಲದ ಕುಂಕುಮ, ಕುಂಕುಮದ ಮೇಲ್ ಭಾಗದಲ್ಲಿ ಬಿಳಿನಾಮದ ಅಡ್ಡಗೆರೆ, ತಲೆ ತುಂಬಾ ಉದ್ದ ಕೂದಲು. ಇಡೀಯಾಗಿ ಬಿಡಿಯಾಗಿ ಹೇಳುವುದಾದರೂ ಮೋನಿಷಾ ಉಣ್ಣಿ ಪಕ್ಕಾ ಮಲೆಯಾಳಿ ಕುಟ್ಟಿ. ಬರೀ ೧೫ರ ಹರೆಯದಲ್ಲಿ ಮಲಯಾಳಿ ಚಿತ್ರದಲ್ಲಿ ಕಾಣಿಸಿಕೊಂಡ ಮೋನಿಷಾ ತನ್ನ ಮೊದಲ ಚಿತ್ರ ‘ನಖಾಕ್ಷತಂಗಳ್’(೧೯೮೬)ನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದಳು.
ಮಲಯಾಳಂನ ಖ್ಯಾತ ನಿರ್ದೇಶಕ ಹರಿಹರನ್ ಈ ಚಿತ್ರದ ನಿರ್ದೇಶಕರಾಗಿದ್ದರು. ಮಲಯಾಳಂನ ಖ್ಯಾತ ಕಾದಂಬರಿಗಾರ ಎಂ.ಟಿ. ವಾಸುದೇವನ್ ನಾಯರ್ ಅವರ ಕಾದಂಬರಿಯನ್ನು ಆಧರಿಸಿಕೊಂಡು ಈ ಚಿತ್ರ ಹೊರಬಂದಿತ್ತು. ೮೦-೯೦ರ ದಶಕದಲ್ಲಿ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಚಿತ್ರ ಹೊಸ ಅಲೆಯನ್ನು ಸೃಷ್ಟಿಸಿಬಿಟ್ಟಿತು. ಸಂಗೀತಗಾರನ ಜತೆಯಲ್ಲಿ ಪ್ರೇಮಾಂಕುರವಾಗುವ ವಿಶಿಷ್ಟ ಸನ್ನಿವೇಶದಲ್ಲಿ ಖ್ಯಾತ ನಟ ವಿನೀತ್ ಜತೆಯಲ್ಲಿ ಮೋನಿಷಾ ನಟಿಸಿದ್ದರು.
ತ್ರಿಶೂರ್ನಿಂದ ಐಟಿ ಸಿಟಿಗೆ:ನಾರಾಯಣಿ ಉನ್ನಿ ಹಾಗೂ ಶ್ರೀದೇವಿ ಅಮ್ಮರಿಗೆ ಮೋನಿಷಾ ಬಿಟ್ಟರೆ ಮತ್ತೊಬ್ಬ ಪುತ್ರನಿದ್ದ ಸಾಜಿತ್ ಅಂತಾ ಅವನ ಹೆಸರು. ಅವನು ಮೋನಿಷಾಕ್ಕಿಂತ ಒಂದೆರಡು ವರ್ಷ ಚಿಕ್ಕವನು. ನಾರಾಯಣಿ ಉನ್ನಿ ತ್ರಿಶೂರ್ನಲ್ಲಿ ಚರ್ಮದ ಉದ್ಯಮ ನಡೆಸುತ್ತಿದ್ದರು. ಆದರೆ ಯಾಕೋ ಅಲ್ಲಿ ವ್ಯಾಪಾರ ಕೈಗೂಡಿಲ್ಲ. ಎಲ್ಲವನ್ನು ತೊರೆದು ಬೆಂಗಳೂರು ಬಂದು ಬಿಟ್ಟರು. ಮೋನಿಷಾರಿಗೆ ತಾಯಿ ಶ್ರೀದೇವಿ ಎಂದರೆ ಬಹಳ ಅಚ್ಚುಮೆಚ್ಚು.
ಶ್ರೀದೇವಿ ಒಬ್ಬ ಒಳ್ಳೆಯ ಭರತನಾಟ್ಯ ಕಲಾವಿದೆ. ಅವರನ್ನು ನೋಡಿ ನೋಡಿ ಮೋನಿಷಾನೂ ಭರತನಾಟ್ಯ ಕಲಿತುಕೊಂಡರು. ೧೯೮೫ರಲ್ಲಿ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ‘ಕೌಶಿಕ’ ಪ್ರಶಸ್ತಿಯನ್ನು ಬಾಚಿಕೊಂಡರು. ಬೆಂಗಳೂರಿನ ಸೈಂಟ್. ಚಾಲ್ಸ್, ಬಿಷಪ್ ಕಾಟನ್ ಸ್ಕೂಲ್, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತನ್ನ ಪದವಿಯನ್ನು ಪಡೆದುಕೊಂಡಿದ್ದರು.
ಇದೇ ಸಮಯದಲ್ಲಿ ಮೋನಿಷಾರ ಹತ್ತಿರದ ಸಂಬಂಽಯಾದ ಮಲಯಾಳಂ ನಿರ್ದೇಶಕ ಹರಿಹರನ್ ತನ್ನ ಚಿತ್ರ‘ನಖಾಕ್ಷತಂಗಳ್’(೧೯೮೬)ನಲ್ಲಿ ಅವಕಾಶ ಕೊಟ್ಟರು. ನಂತರ ಇಡೀ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಮೋನಿಷಾ ಯಾರು ಎನ್ನುವುದು ಸಾಭೀತಾಯಿತು. ಅಲ್ಲಿಂದ ಬರೀ ೧೦ ವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ಮೋನಿಷಾ ಮಿಂಚಾಗಿ ಮೆರೆದಳು.
ಪೂಖಲಾ ವೈದಂ ಇಲಾತ್ತಲ್ ಎನ್ನುವ ತಮಿಳು ಚಿತ್ರದಲ್ಲಿ ಕೂಡ ಮೋನಿಷಾ ಕಾಣಿಸಿಕೊಂಡಿದ್ದಳು. ಈ ಚಿತ್ರ ಮೋನಿಷಾ ನಟಿಸಿದ್ದ ‘ನಖಾಕ್ಷತಂಗಳ್’ನ ರಿಮೇಕ್ ಚಿತ್ರವಾಗಿತ್ತು. ರಾಘವೇಂದ್ರ ರಾಜ್ಕುಮಾರ್ ಜತೆಯಲ್ಲಿ ನಟಿಸಿದ ‘ಚಿರಂಜೀವಿ ಸುಧಾಕರ’ ಮಲಯಾಳಂನ ಖ್ಯಾತ ಮೋಹನ್ಲಾಲ್ ಜತೆಯಲ್ಲಿ ನಟಿಸಿದ ‘ಕಮಲದಳಂ’ ಸೇರಿದಂತೆ ಸರಿಸುಮಾರು ೨೦ಕ್ಕಿಂತ ಅಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಚಪ್ಪಡಿ ವಿದ್ಯೆ ಮತ್ತು ಅಪಘಾತ:೧೯೯೨ರ ಡಿಸೆಂಬರ್೫ ರಂದು ತನ್ನ ಮುಂದಿನ ಮಲಯಾಳಂ ಚಿತ್ರ ‘ಚಪ್ಪಡಿವಿದ್ಯೆ’ಯ ಚಿತ್ರೀಕರಣಕ್ಕಾಗಿ ಅಲಪ್ಪುರಂನ ಸಮೀಪದ ಚೆರ್ತಲಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಕೇರಳ ಸರಕಾರದ ಬಸ್ವೊಂದು ಎದುರು ಬದಿಯಿಂದ ಬಂತು. ಕಾರು ಚಾಲಕ ಬಸ್ಗೆ ಸೈಡ್ಕೊಡುವ ನೆಪದಲ್ಲಿ ರಸ್ತೆಯಿಂದ ಕಾರನ್ನು ಬದಿಗೆ ತಂದ ಆದರೆ ರಸ್ತೆಯಿಂದ ಬದಿಗೆ ಬಂದ ಕಾರು ನಾಲ್ಕು ಪಲ್ಟಿಯಾಗಿ ಬಿದ್ದುಕೊಂಡಿತು. ಚಾಲಕ ಸ್ಥಳದಲ್ಲಿಯೇ ಔಟ್. ರಕ್ತದ ಮಡುವಿನಲ್ಲಿ ಮೋನಿಷಾ ರಸ್ತೆಯಲ್ಲಿ ಬಿದ್ದುಕೊಂಡಿದ್ದಳು. ಶ್ರೀದೇವಿಯಮ್ಮ ಕಾಲು, ಮೂಗು ಮೂರಿದು ಪ್ರಞೆ ತಪ್ಪಿ ಬಿದ್ದುಕೊಂಡಿದ್ದರು. ಯಾರೋ ಪುಣ್ಯಾತ್ಮರು ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದರು.
ಆದರೆ ಸಾಗಿಸುವ ದಾರಿ ಮಧ್ಯೆನೇ ಮೋನಿಷಾ ಎಲ್ಲರನ್ನು ಬಿಟ್ಟು ಹೊರಟು ಹೋದರು. ಶ್ರೀದೇವಿಯಮ್ಮ ಮಾತ್ರ ಉಳಿದುಬಿಟ್ಟರು. ಅಗ ಮೋನಿಷಾರಿಗೆ ಬರೀ ೨೧ರ ಹರೆಯ. ಅದು ಖಂಡಿತವಾಗಿಯೂ ಸಾಯುವ ವಯಸ್ಸಲ್ಲ ಎನ್ನುವುದು ಸಿನಿ ಪ್ರೇಕ್ಷಕರ ಮಾತು. ಒಂದು ವೇಳೆ ಸಿನಿಮಾ ಜಗತ್ತಿನಲ್ಲಿ ಮೋನಿಷಾ ಇದ್ದು ಬಿಟ್ಟಿದ್ದರೆ ಇನ್ನಷ್ಟೂ ಒಳ್ಳೆಯ ಚಿತ್ರಗಳು ಮೂಡಿಬರುತ್ತಿದ್ದವು, ಆದರೆ ವಿಯಾಟದ ಮುಂದೆ ಮೋನಿಷಾ ಇಲ್ಲದೇ ಹೋದಳು. ಇತ್ತಕಡೆ ಶ್ರೀದೇವಿಯಮ್ಮ ಈಗಲೂ ಸಿನಿಮಾಗಳಲ್ಲಿ ತಾಯಿ ಪಾತ್ರ ಮಾಡುತ್ತಿದ್ದಾರೆ. ಭರತನಾಟ್ಯ ಕಲಾವಿದೆಯಾದ ಶ್ರೀದೇವಿಯಮ್ಮ ಮಗಳು ಮೋನಿಷಾರ ಹೆಸರಿನಲ್ಲಿ ‘ಮೋನಿಷಾ ನಾಟ್ಯಾಲಯ’ವನ್ನು ತೆರೆದುಕೊಂಡಿದ್ದಾರೆ. ಎಳೆಯ ವಯಸ್ಸಿನ ಪುಟಾಣಿಗಳಿಗೆ ಭರತನಾಟ್ಯ ಹಾಗೂ ಮೋಹಿನಿಯಾಟ್ಟಂ ನೃತ್ಯಗಳನ್ನು ಬಿಡುವಿನ ವೇಳೆಯಲ್ಲಿ ಕಲಿಸುತ್ತಿದ್ದಾರೆ. ಜತೆಗೆ ಮಗಳ ಹೆಸರಿನಲ್ಲಿ ಬಹಳಷ್ಟು ದಾನಧರ್ಮಗಳನ್ನು ಮಾಡುತ್ತಿದ್ದಾರೆ. ಉಳಿದಂತೆ ಮೋನಿಷಾರನ್ನು ಬಲಿ ತೆಗೆದುಕೊಂಡ ಚೆರ್ತಲ ಸರ್ಕಲ್ ಈಗ ‘ಮೋನಿಷಾ ಸರ್ಕಲ್’ ಆಗಿ ಬದಲಾಗಿದೆ. ಪುಟ್ಟ ನಾಮಪಲಕದಲ್ಲಿ ಮೋನಿಷಾರ ಮುದ್ದು ಮೊಗದ ಚಿತ್ರ ಹೋಗಿ ಬರುವವರನ್ನು ನೋಡುತ್ತಿದೆ. ಯಾಕೋ ಗೊತ್ತಿಲ್ಲ. ಮೋನಿಷಾರ ಭವಿಷ್ಯ ರೇಖೆ ಬಹಳಷ್ಟು ಸಣ್ಣದಿತ್ತು ಅಂತಾ ವರ ಚಿತ್ರಗಳನ್ನು ನೋಡುತ್ತಿದ್ದಾಗ ಪ್ರೇಕ್ಷಕರಿಗೆ ಅನ್ನಿಸದೇ ಇರೋದಿಲ್ಲ.
....
ವಿಜಯ ಕರ್ನಾಟಕದಲವಲವಿಕೆಯಲ್ಲಿ ಮೇ ೨೦,2011ರಂದು ಪ್ರಕಟವಾಗಿದೆ)