Tuesday, May 31, 2011

ಮಲೆಯಾಳಿ ಕುಟ್ಟಿಗೆ ದೇವರು ಕೈ ಕೊಟ್ಟಾಗ !



ಮುಖದಲ್ಲಿ ಫುಲ್ ತುಂಬಿರುವ ಸೌಮ್ಯತೆ, ಕಾಸಿನ ಅಗಲದ ಕುಂಕುಮ, ಕುಂಕುಮದ ಮೇಲ್ ಭಾಗದಲ್ಲಿ ಬಿಳಿನಾಮದ ಅಡ್ಡಗೆರೆ, ತಲೆ ತುಂಬಾ ಉದ್ದ ಕೂದಲು. ಇಡೀಯಾಗಿ ಬಿಡಿಯಾಗಿ ಹೇಳುವುದಾದರೂ ಮೋನಿಷಾ ಉನ್ನಿ ಪಕ್ಕಾ ಮಲೆಯಾಳಿ ಕುಟ್ಟಿ. ಇದೇ ಮೋನಿಷಾರಿಗೆ ದೇವರು ಕೈ ಕೊಟ್ಟ ಮಾತು ಕೇಳಿ....
ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಅವರೊಬ್ಬರೇ ನ್ಯಾಚುರಲ್ ಬ್ಯೂಟಿ ಎನ್ನುವುದು ಬಹಳಷ್ಟು ಸಿನಿ ವಿಮರ್ಶಕರ ಗಟ್ಟಿ ಮಾತು. ಅದು ಖರೇನೆ ಇರಬಹುದು. ಸಿನಿಮಾ ನೋಡುವ ಪ್ರೇಕ್ಷಕನಲ್ಲಿ ಮೋನಿಷಾ ಉನ್ನಿ ಎಂದರೆ ತಮ್ಮ ಮನೆ ಮಗಳು, ಒಡಹುಟ್ಟಿದ ತಂಗಿ- ಅಕ್ಕ ಎನ್ನುವ ಕಲ್ಪನೆಗಳೇ ಜಾಸ್ತಿಯಾಗಿ ಬಂದು ಬಿಡುತ್ತದೆ.
ಮುಖದಲ್ಲಿ ಫುಲ್ ತುಂಬಿರುವ ಸೌಮ್ಯತೆ, ಕಾಸಿನ ಅಗಲದ ಕುಂಕುಮ, ಕುಂಕುಮದ ಮೇಲ್ ಭಾಗದಲ್ಲಿ ಬಿಳಿನಾಮದ ಅಡ್ಡಗೆರೆ, ತಲೆ ತುಂಬಾ ಉದ್ದ ಕೂದಲು. ಇಡೀಯಾಗಿ ಬಿಡಿಯಾಗಿ ಹೇಳುವುದಾದರೂ ಮೋನಿಷಾ ಉಣ್ಣಿ ಪಕ್ಕಾ ಮಲೆಯಾಳಿ ಕುಟ್ಟಿ. ಬರೀ ೧೫ರ ಹರೆಯದಲ್ಲಿ ಮಲಯಾಳಿ ಚಿತ್ರದಲ್ಲಿ ಕಾಣಿಸಿಕೊಂಡ ಮೋನಿಷಾ ತನ್ನ ಮೊದಲ ಚಿತ್ರ ‘ನಖಾಕ್ಷತಂಗಳ್’(೧೯೮೬)ನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದಳು.
ಮಲಯಾಳಂನ ಖ್ಯಾತ ನಿರ್ದೇಶಕ ಹರಿಹರನ್ ಈ ಚಿತ್ರದ ನಿರ್ದೇಶಕರಾಗಿದ್ದರು. ಮಲಯಾಳಂನ ಖ್ಯಾತ ಕಾದಂಬರಿಗಾರ ಎಂ.ಟಿ. ವಾಸುದೇವನ್ ನಾಯರ್ ಅವರ ಕಾದಂಬರಿಯನ್ನು ಆಧರಿಸಿಕೊಂಡು ಈ ಚಿತ್ರ ಹೊರಬಂದಿತ್ತು. ೮೦-೯೦ರ ದಶಕದಲ್ಲಿ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಚಿತ್ರ ಹೊಸ ಅಲೆಯನ್ನು ಸೃಷ್ಟಿಸಿಬಿಟ್ಟಿತು. ಸಂಗೀತಗಾರನ ಜತೆಯಲ್ಲಿ ಪ್ರೇಮಾಂಕುರವಾಗುವ ವಿಶಿಷ್ಟ ಸನ್ನಿವೇಶದಲ್ಲಿ ಖ್ಯಾತ ನಟ ವಿನೀತ್ ಜತೆಯಲ್ಲಿ ಮೋನಿಷಾ ನಟಿಸಿದ್ದರು.
ತ್ರಿಶೂರ್ನಿಂದ ಐಟಿ ಸಿಟಿಗೆ:ನಾರಾಯಣಿ ಉನ್ನಿ ಹಾಗೂ ಶ್ರೀದೇವಿ ಅಮ್ಮರಿಗೆ ಮೋನಿಷಾ ಬಿಟ್ಟರೆ ಮತ್ತೊಬ್ಬ ಪುತ್ರನಿದ್ದ ಸಾಜಿತ್ ಅಂತಾ ಅವನ ಹೆಸರು. ಅವನು ಮೋನಿಷಾಕ್ಕಿಂತ ಒಂದೆರಡು ವರ್ಷ ಚಿಕ್ಕವನು. ನಾರಾಯಣಿ ಉನ್ನಿ ತ್ರಿಶೂರ್ನಲ್ಲಿ ಚರ್ಮದ ಉದ್ಯಮ ನಡೆಸುತ್ತಿದ್ದರು. ಆದರೆ ಯಾಕೋ ಅಲ್ಲಿ ವ್ಯಾಪಾರ ಕೈಗೂಡಿಲ್ಲ. ಎಲ್ಲವನ್ನು ತೊರೆದು ಬೆಂಗಳೂರು ಬಂದು ಬಿಟ್ಟರು. ಮೋನಿಷಾರಿಗೆ ತಾಯಿ ಶ್ರೀದೇವಿ ಎಂದರೆ ಬಹಳ ಅಚ್ಚುಮೆಚ್ಚು.
ಶ್ರೀದೇವಿ ಒಬ್ಬ ಒಳ್ಳೆಯ ಭರತನಾಟ್ಯ ಕಲಾವಿದೆ. ಅವರನ್ನು ನೋಡಿ ನೋಡಿ ಮೋನಿಷಾನೂ ಭರತನಾಟ್ಯ ಕಲಿತುಕೊಂಡರು. ೧೯೮೫ರಲ್ಲಿ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ‘ಕೌಶಿಕ’ ಪ್ರಶಸ್ತಿಯನ್ನು ಬಾಚಿಕೊಂಡರು. ಬೆಂಗಳೂರಿನ ಸೈಂಟ್. ಚಾಲ್ಸ್, ಬಿಷಪ್ ಕಾಟನ್ ಸ್ಕೂಲ್, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತನ್ನ ಪದವಿಯನ್ನು ಪಡೆದುಕೊಂಡಿದ್ದರು.
ಇದೇ ಸಮಯದಲ್ಲಿ ಮೋನಿಷಾರ ಹತ್ತಿರದ ಸಂಬಂಽಯಾದ ಮಲಯಾಳಂ ನಿರ್ದೇಶಕ ಹರಿಹರನ್ ತನ್ನ ಚಿತ್ರ‘ನಖಾಕ್ಷತಂಗಳ್’(೧೯೮೬)ನಲ್ಲಿ ಅವಕಾಶ ಕೊಟ್ಟರು. ನಂತರ ಇಡೀ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಮೋನಿಷಾ ಯಾರು ಎನ್ನುವುದು ಸಾಭೀತಾಯಿತು. ಅಲ್ಲಿಂದ ಬರೀ ೧೦ ವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ಮೋನಿಷಾ ಮಿಂಚಾಗಿ ಮೆರೆದಳು.
ಪೂಖಲಾ ವೈದಂ ಇಲಾತ್ತಲ್ ಎನ್ನುವ ತಮಿಳು ಚಿತ್ರದಲ್ಲಿ ಕೂಡ ಮೋನಿಷಾ ಕಾಣಿಸಿಕೊಂಡಿದ್ದಳು. ಈ ಚಿತ್ರ ಮೋನಿಷಾ ನಟಿಸಿದ್ದ ‘ನಖಾಕ್ಷತಂಗಳ್’ನ ರಿಮೇಕ್ ಚಿತ್ರವಾಗಿತ್ತು. ರಾಘವೇಂದ್ರ ರಾಜ್ಕುಮಾರ್ ಜತೆಯಲ್ಲಿ ನಟಿಸಿದ ‘ಚಿರಂಜೀವಿ ಸುಧಾಕರ’ ಮಲಯಾಳಂನ ಖ್ಯಾತ ಮೋಹನ್ಲಾಲ್ ಜತೆಯಲ್ಲಿ ನಟಿಸಿದ ‘ಕಮಲದಳಂ’ ಸೇರಿದಂತೆ ಸರಿಸುಮಾರು ೨೦ಕ್ಕಿಂತ ಅಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಚಪ್ಪಡಿ ವಿದ್ಯೆ ಮತ್ತು ಅಪಘಾತ:೧೯೯೨ರ ಡಿಸೆಂಬರ್೫ ರಂದು ತನ್ನ ಮುಂದಿನ ಮಲಯಾಳಂ ಚಿತ್ರ ‘ಚಪ್ಪಡಿವಿದ್ಯೆ’ಯ ಚಿತ್ರೀಕರಣಕ್ಕಾಗಿ ಅಲಪ್ಪುರಂನ ಸಮೀಪದ ಚೆರ್ತಲಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಕೇರಳ ಸರಕಾರದ ಬಸ್ವೊಂದು ಎದುರು ಬದಿಯಿಂದ ಬಂತು. ಕಾರು ಚಾಲಕ ಬಸ್ಗೆ ಸೈಡ್ಕೊಡುವ ನೆಪದಲ್ಲಿ ರಸ್ತೆಯಿಂದ ಕಾರನ್ನು ಬದಿಗೆ ತಂದ ಆದರೆ ರಸ್ತೆಯಿಂದ ಬದಿಗೆ ಬಂದ ಕಾರು ನಾಲ್ಕು ಪಲ್ಟಿಯಾಗಿ ಬಿದ್ದುಕೊಂಡಿತು. ಚಾಲಕ ಸ್ಥಳದಲ್ಲಿಯೇ ಔಟ್. ರಕ್ತದ ಮಡುವಿನಲ್ಲಿ ಮೋನಿಷಾ ರಸ್ತೆಯಲ್ಲಿ ಬಿದ್ದುಕೊಂಡಿದ್ದಳು. ಶ್ರೀದೇವಿಯಮ್ಮ ಕಾಲು, ಮೂಗು ಮೂರಿದು ಪ್ರಞೆ ತಪ್ಪಿ ಬಿದ್ದುಕೊಂಡಿದ್ದರು. ಯಾರೋ ಪುಣ್ಯಾತ್ಮರು ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದರು.
ಆದರೆ ಸಾಗಿಸುವ ದಾರಿ ಮಧ್ಯೆನೇ ಮೋನಿಷಾ ಎಲ್ಲರನ್ನು ಬಿಟ್ಟು ಹೊರಟು ಹೋದರು. ಶ್ರೀದೇವಿಯಮ್ಮ ಮಾತ್ರ ಉಳಿದುಬಿಟ್ಟರು. ಅಗ ಮೋನಿಷಾರಿಗೆ ಬರೀ ೨೧ರ ಹರೆಯ. ಅದು ಖಂಡಿತವಾಗಿಯೂ ಸಾಯುವ ವಯಸ್ಸಲ್ಲ ಎನ್ನುವುದು ಸಿನಿ ಪ್ರೇಕ್ಷಕರ ಮಾತು. ಒಂದು ವೇಳೆ ಸಿನಿಮಾ ಜಗತ್ತಿನಲ್ಲಿ ಮೋನಿಷಾ ಇದ್ದು ಬಿಟ್ಟಿದ್ದರೆ ಇನ್ನಷ್ಟೂ ಒಳ್ಳೆಯ ಚಿತ್ರಗಳು ಮೂಡಿಬರುತ್ತಿದ್ದವು, ಆದರೆ ವಿಯಾಟದ ಮುಂದೆ ಮೋನಿಷಾ ಇಲ್ಲದೇ ಹೋದಳು. ಇತ್ತಕಡೆ ಶ್ರೀದೇವಿಯಮ್ಮ ಈಗಲೂ ಸಿನಿಮಾಗಳಲ್ಲಿ ತಾಯಿ ಪಾತ್ರ ಮಾಡುತ್ತಿದ್ದಾರೆ. ಭರತನಾಟ್ಯ ಕಲಾವಿದೆಯಾದ ಶ್ರೀದೇವಿಯಮ್ಮ ಮಗಳು ಮೋನಿಷಾರ ಹೆಸರಿನಲ್ಲಿ ‘ಮೋನಿಷಾ ನಾಟ್ಯಾಲಯ’ವನ್ನು ತೆರೆದುಕೊಂಡಿದ್ದಾರೆ. ಎಳೆಯ ವಯಸ್ಸಿನ ಪುಟಾಣಿಗಳಿಗೆ ಭರತನಾಟ್ಯ ಹಾಗೂ ಮೋಹಿನಿಯಾಟ್ಟಂ ನೃತ್ಯಗಳನ್ನು ಬಿಡುವಿನ ವೇಳೆಯಲ್ಲಿ ಕಲಿಸುತ್ತಿದ್ದಾರೆ. ಜತೆಗೆ ಮಗಳ ಹೆಸರಿನಲ್ಲಿ ಬಹಳಷ್ಟು ದಾನಧರ್ಮಗಳನ್ನು ಮಾಡುತ್ತಿದ್ದಾರೆ. ಉಳಿದಂತೆ ಮೋನಿಷಾರನ್ನು ಬಲಿ ತೆಗೆದುಕೊಂಡ ಚೆರ್ತಲ ಸರ್ಕಲ್ ಈಗ ‘ಮೋನಿಷಾ ಸರ್ಕಲ್’ ಆಗಿ ಬದಲಾಗಿದೆ. ಪುಟ್ಟ ನಾಮಪಲಕದಲ್ಲಿ ಮೋನಿಷಾರ ಮುದ್ದು ಮೊಗದ ಚಿತ್ರ ಹೋಗಿ ಬರುವವರನ್ನು ನೋಡುತ್ತಿದೆ. ಯಾಕೋ ಗೊತ್ತಿಲ್ಲ. ಮೋನಿಷಾರ ಭವಿಷ್ಯ ರೇಖೆ ಬಹಳಷ್ಟು ಸಣ್ಣದಿತ್ತು ಅಂತಾ ವರ ಚಿತ್ರಗಳನ್ನು ನೋಡುತ್ತಿದ್ದಾಗ ಪ್ರೇಕ್ಷಕರಿಗೆ ಅನ್ನಿಸದೇ ಇರೋದಿಲ್ಲ.
....
ವಿಜಯ ಕರ್ನಾಟಕದಲವಲವಿಕೆಯಲ್ಲಿ ಮೇ ೨೦,2011ರಂದು ಪ್ರಕಟವಾಗಿದೆ)

ಒಂದ್ ಮಾತು..... ಅದೇನೂ ಅಂದ್ರೆ...


ಅಬ್ಬಾ.... ಒಂದು ಪುಟ್ಟ ವೈರಲ್ ಜ್ವರ ಈ ರೀತಿ ಕಂಗಾಲು ಮಾಡುತ್ತದೆ ಎಂದು ನಾನು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ ಮಾರಾಯ್ರೆ... ಬರೋಬರಿ ೧೦ರಿಂದ ೧೨ ದಿನಗಳ ಕಾಲ ನಾನು ವಿಜಯ ಕರ್ನಾಟಕ ಕಚೇರಿಗೆ ತಲೆ ಹಾಕಿ ಮಲಗದಂತೆ ಮಾಡಿ ಹಾಕಿತು. ಸುಮಾರು ಆರು ತಿಂಗಳುಗಳಿಂದ ನಾನು ನನ್ನ ವೃತ್ತಿಗೆ ರಜೆ ಹಾಕಿರಲಿಲ್ಲ. ಒಂದು ಪುಟ್ಟ ಜ್ವರ ನನ್ನನ್ನು ಬಹಳಷ್ಟು ಕಾಡಿಸಿದೆ.. ಪೀಡಿಸಿದೆ... ಜತೆಗಿಷ್ಟು ಕಾಸನ್ನು ಪೀಕಿಸಿದೆ. ಅದೆಲ್ಲ ಬಿಟ್ಟುಬಿಡಿ ಬಹಳ ದಿನಗಳ ನಂತರ ಬ್ಲಾಗ್ ಆಪ್ಡೇಟ್ ಮಾಡಿಲ್ಲ ಯಾಕೆ ಅಂತಾ ನನ್ನ ಗೆಳೆಯರು ಕೇಳಿದ್ದರು. ಅದಕ್ಕೆ ಕಾರಣ ಈ ಜ್ವರ ಎಂದುಬಿಡಬಹುದು. ಈಗ ನಾನು ಚೇತರಿಸಿಕೊಳ್ಳುತ್ತಿದ್ದೇನೆ...ಜತೆಗೆ ಬ್ಲಾಗ್ ಮತ್ತೆ ತುಂಬಿಸಲು ಹೊರಟಿದ್ದೇನೆ. ಸದ್ಯಕ್ಕೆ ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯ ‘ಪಂಚ್’ ಕೊಡುತ್ತಿದ್ದೇನೆ.. ಸ್ವೀಕರಿಸಿ.
* ಸ್ಟೀವನ್ ರೇಗೊ, ದಾರಂದಕುಕ್ಕು

Saturday, May 14, 2011

ಪ್ರಕಾಶ್ ಶೆಟ್ಟಿ ಪಂಚ್-೨


ಭ್ರಷ್ಟಚಾರದ ವಿರುದ್ಧ ಹೋರಾಟ ಮತ್ತೆ ಮುಂದುವರಿದಿದೆ. ಭ್ರಷ್ಟಚಾರದಕುರಿತು ಮಕ್ಕಳಲ್ಲಿ ಜಾಗೃತಿ ಹಚ್ಚುವಕೆಲಸವನ್ನು ಪ್ರಕಾಶ್ ಶೆಟ್ಟಿ ಕಾರ್ಟೂನ್ ಮೂಲಕ ಮಾಡುತ್ತಿದ್ದಾರೆ. ಭ್ರಷ್ಟಚಾರದ ಕುರಿತು ಮಕ್ಕಳು ಹೇಗೆ ವರ್ತಿಸಿದ್ದಾರೆ ಎನ್ನುವ ವಿಚಾರವನ್ನು ಪ್ರಕಾಶ್ ವ್ಯಂಗ್ಯದ ಮೂಲಕ ತೆರೆದಿಟ್ಟಿದ್ದಾರೆ. ಬನ್ನಿ ಈ ವಾರದ ಪಂಚ್ ನೋಡೋಣ...
*ಸ್ಟೀವನ್ ರೇಗೊ

ಬಿ ಟೌನ್ ಬ್ಯೂಟಿ ನಯನಾ




ಚಿತ್ರತಾರೆ ಪ್ರಭುದೇವ- ನಯನಾತಾರಾರ ಸಿಕ್ರೇಟ್ ಮಾತು ಹೊರಬಂದಿದೆ. ಇಷ್ಟರವರೆಗೆ ಪ್ರಭು ಹಾಗೂ ನಯನಾ ಜತೆಯಾಗಿ ಸುತಾಡುತ್ತಿದ್ದರು. ಇನ್ನು ಮುಂದೆ ಜತೆಯಾಗಿ ಚಿತ್ರ ಮಾಡ್ತಾರೆ ಅಂತೆ ! ಏನ್ ಕತೆ ಅಂತೀರಾ..?

ಏನಿಲ್ಲ...ನನ್ನ ನಿನ್ನ ನಡುವೆ ಏನಿಲ್ಲ...
ರಿಯಾಲಿ ನಮ್ಮ ನಡುವೆ ಏನಿಲ್ಲ ಅಂದುಕೊಂಡು ಬೀದಿ ಬೀದಿ ಸುತ್ತಾಡಿದ ಜೋಡಿಗಳಿಬ್ಬರ ಮಾತು. ನಮ್ಮ ಮದುವೆ ಆಗಿಯೇ ಹೋಗಿದೆ ಈ ಕುರಿತು ಚರ್ಚೆನೇ ಬೇಡ ಕಣ್ರಿ ಎಂದು ಮಾಧ್ಯಮಗಳ ಮುಂದೆ ಮುಖಗಂಟಿಕ್ಕಿದ ತಾರೆಗಳ ರಂಗೀನ್ ಕತೆ. ಈಗ ಈ ಕತೆ ಮತ್ತೆ ಮುಂದುವರಿದಿದೆ. ಹೌದು. ಚಿತ್ರತಾರೆ ಪ್ರಭುದೇವ- ನಯನಾತಾರಾರ ಸಿಕ್ರೇಟ್ ಮಾತು ಹೊರಬಂದಿದೆ.ಇಷ್ಟರವರೆಗೆ ಪ್ರಭು ಹಾಗೂ ನಯನಾ ಜತೆಯಾಗಿ ಸುತ್ತಾಡುತ್ತಿದ್ದರು. ಇನ್ನು ಮುಂದೆ ಜತೆಯಾಗಿ ಚಿತ್ರ ಮಾಡ್ತಾರೆ ಅಂತೆ !
ಹೌದು. ಬಿ-ಟೌನ್ನಲ್ಲಿ ದಕ್ಷಿಣ ಭಾರತದ ಮತ್ತೊಂದು ಸೂಪರ್ ಹುಡುಗಿ ಕಾಲಿಡುವ ಸೂಚನೆ ಹೊರಬಂದಿದೆ. ವಿದ್ಯಾಬಾಲನ್,ಆಸೀನ್, ತ್ರಿಶಾರ ನಂತರ ಈಗ ಹಿಟ್ ಲೀಸ್ಟ್ನಲ್ಲಿ ಇರೋದು ಸುಂದರ ಕಣ್ಣುಗಳ, ಮುದ್ದು ಮೊಗದ , ಗಟ್ಟಿಮುಟ್ಟಾದ ಹಾಟ್ ಹುಡುಗಿ ನಯನಾ ತಾರಾ. ಬಿ-ಟೌನ್ ನಿರ್ಮಾಪಕ ಬೋನಿ ಕಪೂರ್ ಬ್ಯಾನರ್ನಲ್ಲಿ ಮೂಡಿಬಂದ ಸೂಪರ್ಹಿಟ್ ಹಿಂದಿ ಚಿತ್ರ ‘ವಾಂಟೆಡ್’ ನಂತರ ಅದರ ಪಾರ್ಟ್ ಟೂ ಸಿನ್ಮಾ ಮಾಡುವ ಯೋಜನೆ ಬೋನಿಗೆ ಬಂದು ಬಿಟ್ಟಿದೆ. ಇದಕ್ಕಾಗಿ ಮುಂಬಯಿ ನಗರಿಯಲ್ಲಿ ಕೂತು ಬೋನಿ ‘ವಾಂಟೆಡ್-೨’ಗಾಗಿ ತಲೆ ಓಡಿಸುತ್ತಿದ್ದಾರೆ.
ತಮಿಳಿನ ‘ಪೋಕಿರಿ’ ಚಿತ್ರವನ್ನು ಮಕ್ಕಿಕಾ ಮಕ್ಕಿ ಕಾಪಿ ಹೊಡೆದು ‘ವಾಂಟೆಡ್’ ಚಿತ್ರ ಮಾಡಿದ ನಿರ್ದೇಶಕ ಪ್ರಭುದೇವ ಪಾರ್ಟ್ ಟೂ ಗೂ ನಿರ್ದೇಶಕರಾಗಿ ಜಾಗ ಪಡೆದುಕೊಂಡಿದ್ದಾರೆ. ಚಿತ್ರದ ಲೀಡ್ ರೋಲ್ನಲ್ಲಿ ಮಸಲ್ಮ್ಯಾನ್ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಆಯೀಷಾ ತಾಕಿಯಾ ಬದಲು ಈ ಬಾರಿ ಹೊಸ ಹುಡುಗಿ ನಯನಾ ತಾರಾ ಸೆಲೆಕ್ಟ್ ಆಗಿದ್ದಾರೆ. ಈ ಹಿಂದೆ ಸಲ್ಲು ಪ್ರಿಯ ಹುಡುಗಿ ಆಸೀನ್ ನಟಿಸುವ ಸಾಧ್ಯತೆಗಳು ಇವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ನಟನಟಿಯರ ಆಯ್ಕೆ ಸಮಿತಿಯಲ್ಲಿ ಯಾವಾಗ ನಿರ್ದೇಶಕ ಪ್ರಭುದೇವ ಬಂದು ಕೂತರೋ ಗೊತ್ತಿಲ್ಲ. ಪ್ರಭು ಹೇಳಿದ ಮಾತಿಗೆ ಎಲ್ಲರೂ ಒಪ್ಪಲೇಬೇಕಾಯಿತು. ‘ವಾಂಟೆಡ್-೨’ ನಿರ್ದೇಶನ ಮಾಡಬೇಕಾದರೆ ನಯನಾ ನಾಯಕಿಯಾಗಿ ಬರಬೇಕು ಎನ್ನೋದು ಪ್ರಭುದೇವರ ಮೊದಲ ಷರತ್ತು ಆಗಿತ್ತು ಎಂಬ ಮಾತು ಈಗ ಹೊರಬಿದ್ದಿದೆ.
ತಮಿಳಿನಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿರುವ ‘ಎಂಗೆಯುಂ ಎನ್ ಕಾದಲ್’ ಯಶಸ್ಸಿನಿಂದ ಬೀಗುತ್ತಿರುವ ನಿರ್ದೇಶಕ ಪ್ರಭುದೇವ ‘ವಾಂಟೆಡ್-೨’ನ ಕತೆ, ಉಳಿದ ಪಾತ್ರ ವರ್ಗಗಳ ಕುರಿತು ಸಿರೀಯಸ್ ಆಗಿ ಹೋಂ ವರ್ಕ್ ಆರಂಭ ಮಾಡಿದ್ದಾರೆ. ಹಿಂದಿಯಲ್ಲಿ ಮತ್ತೊಂದು ಸೂಪರ್ಹಿಟ್ ಹಾಗೂ ದೊಡ್ಡ ಬಜೆಟ್ ಚಿತ್ರಕ್ಕಾಗಿ ನಿರ್ಮಾಪಕ ಬೋನಿ ಕಪೂರ್ ಹೆಚ್ಚು ಹಣ ಸುರಿಯುವ ಧೈರ್ಯ ಮಾಡಿದ್ದಾರೆ. ಈ ಮೂಲಕ ಬಾಲಿವುಡ್ನಲ್ಲಿ ಮತ್ತೊಂದು ದಕ್ಷಿಣ ಭಾರತ ಅಲೆ ಎದ್ದು ಬರಲಿದೆ. ಪ್ರಭುದೇವರ ಕೈಚಳಕದಲ್ಲಿ ನಯನಾ ನಿಜಕ್ಕೂ ಬಿ ಟೌನ್ನಲ್ಲಿ ಹಿಟ್ ಆಗುತ್ತಾರಾ ಎನ್ನೋದು ಈಗಲೂ ಎಲ್ಲರಲ್ಲೂ ಸುತ್ತಾಡುತ್ತಿರುವಪ್ರಶ್ನೆ ಅದಕ್ಕೆ ಉತ್ತರ ಮಾತ್ರ ಸಾಧ್ಯದಲ್ಲಿಯೇ ದೊರೆಯಲಿದೆ.
...
(ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ೧೩.೦೫.೨೦೧೧ರಂದು ಪ್ರಕಟವಾಗಿದೆ)

Saturday, May 7, 2011

ಇದು ಪ್ರಕಾಶ್ ಶೆಟ್ಟಿಯ ಪಂಚ್-೧


ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ಅಮೆರಿಕದ ರಕ್ಷಣಾ ಪಡೆಗಳು ಲಾಡೆನ್ ಕತೆ ಮುಗಿಸಿದ ನಂತರ ಪಾಕಿಸ್ತಾನದ ಅಲ್- ಖೈದಾ ಉಗ್ರಗಾಮಿ ಸಂಘಟನೆ ಅಮೆರಿಕ ಹಾಗೂ ಭಾರತಕ್ಕೆ ಎಚ್ಚರಿಕೆ ನೀಡಿರುವ ವಿಚಾರದಿಂದ ಪ್ರಭಾವಿತರಾಗಿ ಶೆಟ್ಟರು ಕಾರ್ಟೂನ್ ಕಳುಹಿಸಿಕೊಟ್ಟಿದ್ದಾರೆ. ಅದೇ ಈ ವಾರದ ಪ್ರಕಾಶ್ ಶೆಟ್ಟಿಯ ಪಂಚ್ ಸರಣಿಯಲ್ಲಿ ಇಲ್ಲಿ ನೀಡುತ್ತಿದ್ದೇನೆ.
* ಸ್ಟೀವನ್ ರೇಗೊ, ದಾರಂದಕುಕ್ಕು

ಸೆಕ್ಸ್ ಪವರ್ ಜಾಸ್ತಿ ಮಾಡೋಕೆ ಶ್ವೇತಾ !


ಕೊನೆಗೂ ಮಲಯಾಲಂ ನಟಿ ಶ್ವೇತಾ ಮೆನನ್ ಗೆ ನ್ಯಾಯ ಸಿಕ್ಕಿದೆ. ಲೈಂಗಿಕಾಸಕ್ತಿ ಹೆಚ್ಚಿಸುವ ಹರ್ಬಲ್ ಉತ್ಪನ್ನದ ಜಾಹೀರಾತಿಗೆ ಶ್ವೇತಾಳ ಒಪ್ಪಿಗೆ ಪಡೆಯದೇ ಆಕೆಯ ಫೋಟೊ ಬಳಸಿದ ಆರೋಪದಡಿ ಮುಸ್ಲಿ ಪವರ್ ಕಂಪನಿಯ ನಿರ್ದೇಶಕನನ್ನು ಕಂಬಿಯ ಹಿಂದೆ ಕೂರಿಸಿದ್ದಾರೆ. ಅವಳ ಫೋಟೊ ಹಾಕಿದ್ದು ನಾನಲ್ಲ ಜಾಹೀರಾತು ಪ್ರೊಡ್ಯುಸರ್ ಅಂತ ಆತ ಅವಲತ್ತುಕೊಂಡಿದ್ದಾನೆ.
ಮಲಯಾಲಂ ಚಿತ್ರ ನಟಿ ಶ್ವೇತಾ ಮೆನನ್ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿ. ನೋಡಲು ಒಂದಿಷ್ಟು ಹಾಟ್ ಆಗಿಯು ಇದ್ದಾಳೆ. ಹಾಗಂತ ಅವಳ ಫೋಟೊವೊಂದನ್ನು ಸೆಕ್ಸ್ ಪವರ್ ಹೆಚ್ಚಿಸೋ ಉತ್ಪನ್ನದ ಜಾಹೀರಾತಿಗೆ ಬಳಸಿದರೆ ಸುಮ್ಮನಿರುತ್ತಾಳ? ಅದು ಕೂಡ ಆಕೆಯ ಅನುಮತಿಯಿಲ್ಲದೇ! ಕಯಾಮ್ ಎಂಬ ಮಲಯಾಲ ಚಿತ್ರದಲ್ಲಿ ನಟಿಸಿದ್ದ ಶ್ವೇತಾಳ ಫೋಟೊವನ್ನು ಮುಸ್ಲಿ ಪವರ್ ಜಾಹೀರಾತಿಗೆ ಬಳಸಿಕೊಳ್ಳಲಾಗಿತ್ತು. ಈ ಜಾಹೀರಾತು ಅವಳಿಗೆ ಗೊತ್ತಾಗದು ಅಥವಾ ಗೊತ್ತಾದರೂ ತೆಪ್ಪಗಿರುತ್ತಾಳೆ ಅಂತ ಕಂಪನಿ ಅಂದುಕೊಂಡಿತ್ತೋ ಏನೋ ಹಿಂದೆ ಮುಂದೆ ಯೋಚಿಸದೇ ಪ್ರಕಟಿಸಿತ್ತು.
ಕೆಲವೇ ದಿನಗಳಲ್ಲಿ ಎಲ್ಲೆಲ್ಲೋ ಆಕೆಯ ಚಿತ್ರವಿರುವ "ಮುಸ್ಲಿ ಪವರ್ ಎಕ್ಸ್ ಟ್ರಾ" ಜಾಹೀರಾತು ಕಾಣಲಾರಂಬಿಸಿತು. ಇದು ಶ್ವೇತಾ ಮೆನನ್ ಗಮನಕ್ಕೂ ಬಿದ್ದಿದ್ದೆ. ಸಹಜವಾಗಿಯೇ ಶ್ವೇತಾ ಕುಪಿತಗೊಂಡಿದ್ದಾಳೆ. ಬೆಂಗಳೂರಿನ ಬಿಎಂಟಿಸಿ ಬಸ್ ನೊಳಗೂ ಮುಸ್ಲಿ ಪವರ್ ಜಾಹೀರಾತು ನೀವು ನೋಡಿರಬಹುದು. ಅಷ್ಟೊಂದು ಜಾಹೀರಾತುಗಳನ್ನು ಪ್ರಕಟಿಸಲಾಗಿದೆ. ಈ ಕುರಿತು ಶ್ವೇತಾ ಪ್ರಕರಣ ದಾಖಲಿಸಿದಾಗ ಪೋಲಿಸರು ಮುಸ್ಲಿ ಪವರ್ ಎಕ್ಸ್ ಟ್ರಾ ಎಂಬ ಉತ್ಪನ್ನದ ತಯಾರಿಕಾ ಕಂಪನಿ ಕುನತ್ ಫಾರ್ಮಾದ ನಿರ್ದೇಶಕ ಕೆ. ಸಿ ಅಬ್ರಾಹಂ ಎಂಬಾತನನ್ನು ಬಂದಿಸಿದ್ದಾರೆ.

ಈ ಫೋಟೊವನ್ನು ಬಳಸಿದ್ದು ನಾನಲ್ಲ, ಇದರಲ್ಲಿ ನನ್ನದೇನೂ ತಪ್ಪಿಲ್ಲ ಅಂತ ಅಬ್ರಾಹಂ ಅವಲತ್ತುಕೊಂಡುಬಿಟ್ಟ. ಈ ಫೋಟೊ ಬಳಸಿರುವುದು ಜಾಹೀರಾತು ಪ್ರೊಡ್ಯುಸರ್ ಅಂತ ತಿಳಿಸಿದ್ದಾನಂತೆ. ಪೋಲಿಸರು ಹೆಚ್ಚಿನ ವಿಚಾರಣೆ ನಡೆಸಿ ಆತನನ್ನು ಬಿಡುಗಡೆ ಮಾಡಿದ್ದಾರೆ. ಈಗ ಆ ಜಾಹೀರಾತು ಪ್ರೊಡ್ಯುಸರ್ ಹುಡುಕಾಟದಲ್ಲಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

Thursday, May 5, 2011

ಸೌಂದರ್ಯದ ಗಣಿ


ಕನ್ನಡದಲ್ಲಿ ಒಂದೊಳ್ಳೆಯ ಲಾಂಚ್ಗಾಗಿ ಕಾಯುತ್ತಿದ್ದ ಡಾ. ಜಯಮಾಲ ಮಗಳು ಸೌಂದರ್ಯಗೆ ಕೊನೆಗೂ ಅಂಥದ್ದೊಂದು ಸುವರ್ಣಾವಕಾಶ ಕನ್ನಡದಲ್ಲಿ ಬಂದಿದೆ. ಅಂದಹಾಗೆ ಸೌಂದರ್ಯ ಪಾಲಿನ ಗಾಡ್ಫಾದರ್ ಯಾರು ಅಂತೀರಾ.. ಬನ್ನಿ ಮಾತು ಕೇಳಿ..

‘ಸೌಂದರ್ಯ’ ಇದು ಕನ್ನಡದ ಹೊಸ ನಾಯಕಿಯ ಹೆಸರು. ಅಂದಹಾಗೆ ಸೌಂದರ್ಯ ಹಿರಿಯ ಸಿನಿಮಾ ತಾರೆ ಡಾ.ಜಯಮಾಲ ಅವರ ಪುತ್ರಿ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಮಾತು ಇಲ್ಲಿ ಬಲಗೊಂಡಿದೆ. ಸೌಂದರ್ಯ ಹೇಳುವ ಜತೆಯಲ್ಲಿ ನೋಡುವುದರಲ್ಲೂ ಸಖತ್ ಬ್ಯೂಟಿಫುಲ್ ಹುಡುಗಿ. ನಯನ ಮನೋಹರವಾದ ಕಣ್ಣುಗಳು, ಅಗಲವಾದ ಮೊಗ, ತುಟಿ ಅಂಚಿನಲ್ಲಿ ಮುದ್ದು ನಗು ಎಲ್ಲವೂ ನಾಯಕಿಯ ಪಟ್ಟಕ್ಕೆ ಹೇಳಿ ಮಾಡಿಸಿದ ಪ್ರಾಡಕ್ಟ್ಗಳು. ಕನ್ನಡದಲ್ಲಿ ಒಂದೊಳ್ಳೆಯ ಲಾಂಚ್ಗಾಗಿ ಕಾಯುತ್ತಿದ್ದ ಡಾ.ಜಯಮಾಲ ಪುತ್ರಿ ಸೌಂದರ್ಯಗೆ ಕೊನೆಗೂ ಅಂಥದ್ದೊಂದು ಸುವರ್ಣಾವಕಾಶ ಕನ್ನಡದಲ್ಲಿ ಬಂದಿದೆ. ಸೌಂದರ್ಯ ಪಾಲಿಗೆ ಗಾಡ್ ಫಾದರ್ ಆಗಿರೋರು ಕನ್ನಡದ ನಿರ್ಮಾಪಕ ಕೆ. ಮಂಜು.
ನಟ ಅಜಿತ್ ಹಾಗೂ ಅಸೀನ್ ನಟಿಸಿರುವ ತಮಿಳಿನ ಚಿತ್ರ ‘ವರಲಾರು ದಿ ಗಾಡ್ಫಾದರ್’ ಕನ್ನಡದಲ್ಲಿ ‘ಗಾಡ್ಫಾದರ್’ ಆಗಿ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ಸೌಂದರ್ಯಗೆ ಮಂಜು ಅವಕಾಶ ಕೊಟ್ಟಿದ್ದಾರೆ. ಈ ಮೂಲಕ ಸೌಂದರ್ಯ ಕೊನೆಗೂ ಬಣ್ಣಹಚ್ಚುವಂತಾಗಿದೆ. ಸೌಂದರ್ಯ ಬಣ್ಣ ಹಚ್ಚುತ್ತಿರುವ ಸುದ್ದಿ ಕೇಳಿ ಬರುತ್ತಿರುವುದು ಇದು ಮೊದಲೇನಲ್ಲ. ಯೋಗರಾಜ್ ಭಟ್ ನಿರ್ದೇಶಿಸಬೇಕಿದ್ದ, ಪುನೀತ್ ರಾಜ್ಕುಮಾರ್ ಅಭಿನಯಿಸಬೇಕಿದ್ದ ‘ಲಗೋರಿ’ ಚಿತ್ರಕ್ಕೆ ಸೌಂದರ್ಯ ನಾಯಕಿಯಾಗಿದ್ದಾರೆ ಎಂದು ಸುದ್ದಿ ಗಾಂನಗರದಲ್ಲಿ ಹಬ್ಬಿತ್ತು. ಆದರೆ ಚಿತ್ರ ಶುರುವಾಗಲೇ ಇಲ್ಲ. ಇನ್ನು ಸೌಂದರ್ಯ, ನಟ ಯಶೋ ಸಾಗರ್ ಅಭಿನಯದ ‘ಮಿಸ್ಟರ್ ಪ್ರೇಮಿಕುಡು’ ಎಂಬ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಬೇಕಿತ್ತು.
ಚಿತ್ರದ ಮುಹೂರ್ತವೂ ಆಗಿತ್ತು. ಆದರೆ, ಚಿತ್ರ ಮುಂದುವರೆಯಲಿಲ್ಲವಂತೆ. ಹೀಗಿರುವಾಗ ನಿರ್ಮಾಪಕ ಮಂಜು, ಡಾ. ಜಯಮಾಲ ಅವರಿಗೆ ಒಮ್ಮೆ ಫೋನ್ ಮಾಡಿ, ಉಪೇಂದ್ರ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಕಳುಹಿಸಿಕೊಡುತ್ತೀರಾ ಎಂದು ಕೇಳಿ ಕೊಂಡಿದ್ದರಂತೆ..ಒಳ್ಳೆಯ ಬ್ಯಾನರ್, ಚಿತ್ರ, ನಾಯಕ ... ಇಷ್ಟೆಲ್ಲಾ ಒಳ್ಳೆಯದುಗಳಿರುವಾಗ, ಮಗಳಿಗೂ ಒಳ್ಳೆಯದಾಗಬಹುದು ಎಂದು ಜಯಮಾಲ ಮಗಳು ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಮಾತು ಹೊರಬಂದಿದೆ. ಅಲ್ಲಿಗೆ ಚಿತ್ರದ ನಾಯಕಿಯರು ಯಾರು ಎಂಬ ಪ್ರಶ್ನೆಗೆ ಅರ್ಧ ಉತ್ತರ ಸಿಕ್ಕಿದೆ. ಇನ್ನೊಬ್ಬ ನಾಯಕಿ ಪಾತ್ರಕ್ಕೆ ಸಿಮ್ರಾನ್, ಭೂಮಿಕಾ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ಯಾರು ನಾಯಕಿಯರು ಎಂದು ಚಿತ್ರ ಆರಂಭವಾಗುವಾಗಲೇ ಗೊತ್ತಾಗಬೇಕು ಮಾರಾಯ್ರೆ.

ಗಣೇಶ್ ಈಗ ಆಫ್ ದಿ ರೆಕಾರ್ಡ್



‘ಆಫ್ ದಿ ರೆಕಾರ್ಡ್’ ಎಂದಾಕ್ಷಣ ಅದು ಬೇರೊಬ್ಬರ ಬೆಡ್ರೂಮಿಗೆ ಹಿಡಿದ ಹಿಡನ್ ಕ್ಯಾಮೆರಾವಲ್ಲ; ವೈಯಕ್ತಿಕ ಬದುಕಿನ ಚರ್ವಿತ ಚರ್ವಣ ಲೈಂಗಿಕ ಹಗರಣವಲ್ಲ; ಹಾಡಹಗಲೇ ರಾತ್ರಿಯ ಬದುಕನ್ನು ತೆರೆದಿಡುವ ಪ್ರಯತ್ನವೂ ಅಲ್ಲ. ಇದೊಂದು ವಿಶಿಷ್ಟ ಪ್ರಯೋಗ ಎನ್ನುವುದು ಗಣೇಶ್ ಕಾಸರಗೋಡು ಮಾತು.

ಇದು ನೀವು ಊಹಿಸಿದಂತಿಲ್ಲ; ಆದರೆ ಖಂಡಿತಾ ನಿಮಗಿಷ್ಟವಾಗುತ್ತದೆ- ಇದು ನನ್ನ ಪ್ರಾಮಿಸ್ ಎನ್ನುತ್ತಾರೆ ಖ್ಯಾತ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು.
ವಿಷಯ ಏನಪ್ಪಾ ಅಂದ್ರೆ.... ಗಣೇಶ್ ಈಗ ‘ಆಫ್ ದಿ ರೆಕಾರ್ಡ್’ ಬರೆಯುತ್ತಿದ್ದಾರೆ. ಮಾಧ್ಯಮಗಳಲ್ಲಿ ಎಂದಿಗೂ ಹೇಳಿಕೊಳ್ಳಲಾಗದ ವಿಚಾರಗಳು ಇಲ್ಲಿ ಜಾಗ ಪಡೆದುಕೊಳ್ಳುತ್ತದೆ. ಚಿತ್ರರಂಗವೆಂಬ ಮಾಯಾಲೋಕಕ್ಕೆ ಅಕ್ಷರಗಳ ಮೇಲೆ ಪ್ರೀತಿ ಕಡಿಮೆ. ಕಾಲದ ಕಸದ ಬುಟ್ಟಿಯಲ್ಲಿ ಇರುವವರನ್ನು ತಂದು ಮುಂದೆ ಕೂರಿಸೋದು, ಮರದ ನೆರಳಿನಲ್ಲಿ ವಿಶ್ರಮಿಸುತ್ತಿರುವವರ ಜತೆ ಮಾತಿಗಿಳಿಯೋದು, ಯಾರಿಗೂ ನೆನಪೇ ಆಗದವರನ್ನು ಇವರಿನ್ನು ಬದುಕಿದ್ದಾರೆ, ಹೀಗೆ ಬದುಕಿದ್ದಾರೆ, ಹೀಗೂ ಒಂದು ಬದುಕು ಇರುತ್ತೆ ಎಂದು ಓದುಗನ ಕೈಹಿಡಿದು ತೋರಿಸುವ ಛಾತಿ ಇರುವ ಮನುಷ್ಯ ಗಣೇಶ್ ಕಾಸರಗೋಡು ಮಾತ್ರ ಎನ್ನುವುದು ಸಿನಿ ಪತ್ರಕರ್ತರ ವಲಯದಲ್ಲಿ ಹರಡಿಕೊಂಡಿರುವ ಮಾತು.
ಸಿನಿಮಾದ ರೂಟೀನ್ ಸ್ಟೋರಿಗಳನ್ನು ಬಿಟ್ಟು , ತೆರೆಮರೆಗೆ ಸರಿದ ನಾಯಕ- ನಾಯಕಿಯರನ್ನು ಹುಡುಕಿಕೊಂಡು ಹೋಗಿ ಸ್ಟೋರಿ ಮಾಡುವುದರಲ್ಲಿ ಗಣೇಶ್ ಎತ್ತಿದ ಕೈ. ಅದೇ ಒಂದು ಪಾಯಿಂಟ್ನಿಂದ ಗಣೇಶ್ ಉಳಿದ ಸಿನಿಮಾ ಪತ್ರಕರ್ತರಿಗಿಂತ ಕೊಂಚ ಭಿನ್ನವಾಗಿ ನಿಲ್ಲುತ್ತಾರೆ. ಇದು ಅವರ ಸ್ವಂತ ಆಸಕ್ತಿ. ಇಂತಹ ಲೇಖನಗಳನ್ನು ವೃತ್ತಿ ಖಂಡಿತವಾಗಿಯೂ ಬೇಡುವುದಿಲ್ಲ. ಪ್ರವೃತ್ತಿ ಮಾತ್ರ ಇದನ್ನು ಬಯಸುತ್ತದೆ ಎಂಬ ಮಾತು ಗಾಂನಗರದ ಗಲ್ಲಿ ಗಲ್ಲಿಗಲ್ಲಿಯಲ್ಲೂ ಹರಡಿದೆ.
ಅದೇ ಗಣೇಶ್ ಕಾಸರಗೋಡು ತಮ್ಮ ೩೦ ವರ್ಷಗಳ ವೃತ್ತಿ ಬದುಕಿನಲ್ಲಿ ನಾಯಕ-ನಾಯಕಿಯರು ಹೇಳಿದ ಹಾಗೂ ಗಣೇಶ್ ಯಾರಲ್ಲೂ ಹೇಳಿರದ, ಬರೆದಿರದ ನೂರಾರು ಮಾತುಗಳನ್ನು ಇಟ್ಟುಕೊಂಡು ವಂಡರ್ಫುಲ್ ಸ್ಟೋರಿ ಕೊಟ್ಟಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಲವಲವಿಕೆಯ ಜತೆ ಮಾತಿಗೆ ಸಿಕ್ಕಿದ ಗಣೇಶ್ ಕಾಸರಗೋಡು ಬರೋಬರಿ ಅರ್ಧ ತಾಸು ವೃತ್ತಿ ಬದುಕು, ಸಿನಿಮಾ, ಕೃತಿಯ ಸುತ್ತು ಗಿರಕಿ ಹೊಡೆದರು. ‘ಆಫ್ ದಿ ರೆಕಾರ್ಡ್ ಎಂದಾಕ್ಷಣ ಅದು ಬೇರೊಬ್ಬರ ಬೆಡ್ರೂಮಿಗೆ ಹಿಡಿದ ಹಿಡನ್ ಕ್ಯಾಮೆರಾವಲ್ಲ; ವೈಯಕ್ತಿಕ ಬದುಕಿನ ಚರ್ವಿತ ಚರ್ವಣ ಲೈಂಗಿಕ ಹಗರಣವಲ್ಲ; ಹಾಡಹಗಲೇ ರಾತ್ರಿಯ ಬದುಕನ್ನು ತೆರೆದಿಡುವ ಪ್ರಯತ್ನವೂ ಅಲ್ಲ. ಇದೊಂದು ವಿಶಿಷ್ಟ ಪ್ರಯೋಗ. ಇಲ್ಲಿ ನನ್ನ ರೂಟೀನ್ ಬರಹದ ಜತೆಗೆ ಸ್ಪೈಸಿ ಟಿಪ್ಸ್ಗಳು ಜತೆಯಲ್ಲಿ ಸಿಗುತ್ತದೆ ’ ಎಂದು ತಮ್ಮ ಕುರುಚಲು ಗಡ್ಡದ ಮೇಲೆ ಕೈಯಾಡಿಸಿ ಮುಗುಳು ನಕ್ಕರು ಗಣೇಶ್ ಕಾಸರಗೋಡು.
‘ ಬಹಳ ದಿನಗಳಿಂದ ಆಫ್ ದಿ ರೆಕಾರ್ಡ್ ಉಳಿದ ಕತೆಗಳಿಗೆ ಜೀವ ಕೊಡಬೇಕು ಅಂದುಕೊಂಡಿದ್ದೆ. ಇಂತಹ ಕೃತಿಯ ಮುದ್ರಣಕ್ಕೆ ಹಿಂದೇಟು ಹಾಕುವ ಮಂದಿ ಜಾಸ್ತಿ. ಅದಕ್ಕಾಗಿ ಅದರ ಪ್ರಕಾಶನ ಕೆಲಸವನ್ನು ಬಗಲಿಗೆ ಹಾಕಿಕೊಂಡಿದ್ದೇನೆ. ಸರಿಸುಮಾರು ೫೦ ಘಟನೆಗಳನ್ನು ‘ಆಫ್ ದಿ ರೆಕಾರ್ಡ್’ ಕೃತಿಯಲ್ಲಿ ತೆರೆದಿಡುತ್ತೇನೆ ’ ಎಂದರು ಗಣೇಶ್. ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಒಟ್ಟು ಸೇರಿಸಿಕೊಂಡು ‘ಚದುರಿದ ಚಿತ್ರಗಳು’, ‘ಮೌನ ಮಾತಾದಾಗ’ ‘ನೆನಪಿನಂಗಳದಲ್ಲಿ ಶಂಕರ್ ನಾಗ್’ ‘ರವಿಚಂದ್ರನ್’ ‘ಗುರಿ- ಹೆಗ್ಗುರಿ’ ‘ಹೇಗಿದ್ದ ಹೇಗಾದ ಗೊತ್ತಾ..?’ ‘ಪ್ರೀಮಿಯರ್ ಬಸವರಾಜ್’ ‘ಬಯೋಸ್ಕೋಪ್’ನ ನಂತರ ಈಗ ‘ಆಫ್ ದಿ ರೆಕಾರ್ಡ್’ ಗಣೇಶ್ರ ಬತ್ತಳಿಕೆಯಿಂದ ಬರುತ್ತಿದೆ.
ಏನೂ ಉಂಟು ಮಾರಾಯ್ರೆ:ಸರಿಸುಮಾರು ೨೦೦ ಪುಟಗಳು ತುಂಬಿರುವ ‘ಆಫ್ ದಿ ರೆಕಾರ್ಡ್’ನಲ್ಲಿ ಇರೋದಾದರೂ ಏನೂ ಎಂಬ ಬಗ್ಗೆ ಬಹಳ ಕುತೂಹಲ ಹುಟ್ಟಿ ಕೊಂಡಿರೋದು ನಿಜ. ಅದಕ್ಕೆ ಗಣೇಶ್ ನೀಡುವ ಡಜನ್ ಗಟ್ಟಲೆ ಉತ್ತರ ಇಲ್ಲಿದೆ. ಶಂಕರ್ನಾಗ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?, ಡಾ.ರಾಜ್ರನ್ನು ‘ಮಿನಿ ಹಿಟ್ಲರ್’ ಎಂದು ಕರೆದದ್ದು ಯಾರು?, ೬೭ರ ಕುಳ್ಳನ ಲವ್ ಮ್ಯಾರೇಜ್ ಎಪಿಸೋಡ್, ಸರಳ ರೇಖೆಯಲ್ಲ; ಇದು ವಕ್ರ ರೇಖೆ- ರೇಖಾದಾಸ್ ಮ್ಯಾರೇಜ್ ಸ್ಟೋರಿ, ಪೂಜಾಗಾಂ ಲವಿಡವಿ ಪ್ರಕರಣ ಮತ್ತು ಲಾಯರ್ ನೋಟಿಸ್, ಕೋಡ್ಲುವೇನು ಮಣಿರತ್ನನಾ?- ಹ್ಯಾಟ್ರಿಕ್ ಹೀರೋ ಪ್ರಶ್ನೆ, ರೋಗಿಯಾದಳಲ್ಲಾ ನಮ್ಮ ಗ್ಲಾಮರಸ್ ರಾಗಿಣಿ, ಉಪ್ಪಿ ಹೆಸರು ಹೇಳಿದರೆ ಏಕೆ ಈ ಪತ್ರಕರ್ತರು ರಾಂಗಾಗ್ತಾರೆ, ಫಿಲಂ ಜರ್ನಲಿಸ್ಟ್ಗಳನ್ನು ‘ಬಾಸ್ಟರ್ಡ್’ ಎಂದು ಕರೆದ ಮಹಾನುಭಾವ ಯಾರು?, ಪ್ರೀತಿಯ ‘ರಾಮು’ವಿನ ಗೋಲ್ಮಾಲ್ ಕತೆ, ಓದಿ ನೋಡಿ ಕಲಾಕೇಸರಿಯ ಮೊಮ್ಮಕ್ಕಳ ಪತ್ರ, ಆತ್ಮಹತ್ಯೆಗೆ ಯತ್ನಿಸಿದ್ದರೇ ಸಿ.ವಿ. ಶಂಕರ್ ಹೀಗೆ ಯಾರಿಗೂ ಗೊತ್ತಿಲ್ಲದ ಉತ್ತರಗಳು ಈ ಕೃತಿಯಲ್ಲಿ ಲಭ್ಯವಾಗಲಿದೆ ಎನ್ನೋದು ಗಣೇಶ್ರ ಮಾತು. ಯಾವುದಕ್ಕೂ ಈ ಕೃತಿಯನ್ನು ಮಾತ್ರ ಮೊದಲೇ ಬುಕ್ ಮಾಡಿ. ಮಾರುಕಟ್ಟೆಯಲ್ಲಿ ಖಾಲಿಯಾದರೆ ಗಣೇಶ್ ಜವಾಬ್ದಾರರಲ್ಲ.

Wednesday, May 4, 2011

ಸಾಯಿ ಈಗ ‘ಶ್ರೀ ದುರ್ಗಾಪರಮೇಶ್ವರಿ’


ಸಾಯಿಪ್ರಕಾಶ್. ಈ ಹೆಸರು ಕೇಳಿದೊಡನೆ ಹಾಗೊಮ್ಮೆ ಭಕ್ತಿ ಪ್ರಧಾನ ಚಿತ್ರಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ. ಸೆಂಟಿಮೆಂಟ್ ಹಾಗು ಭಕ್ತಿ ಪ್ರಧಾನ ಚಿತ್ರಗಳಿಗೂ ಸಾಯಿಪ್ರಕಾಶ್ ಅವರಿಗೂ ಅವಿನಾಭಾವ ಸಂಬಂಧವಿದೆ. ಆ ಕಾರಣಕ್ಕೋ ಏನೋ, ಸಾಯಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರಗಳ ಪೈಕಿ ಹೆಚ್ಚು ಭಕ್ತಿಪ್ರಧಾನ ಮತ್ತು ಸೆಂಟಿಮೆಂಟ್ ಚಿತ್ರಗಳೇ ಕಾಣಸಿಗುತ್ತವೆ. ಈ ಪ್ರಾಕಾರದ ಚಿತ್ರಗಳು ಎಂದಾಕ್ಷಣ ಸಾಯಿಪ್ರಕಾಶ್ ಹೆಸರು ಮೊದಲ ಸಾಲಲ್ಲೇ ಕಂಡುಬರುತ್ತದೆ ಇದು ನಿಜ ಕೂಡ. ಇತ್ತೀಚೆಗಷ್ಟೇ ‘ಶ್ರೀ ನಾಗಶಕ್ತಿ’ ಎಂಬ ಭಕ್ತಿ ಪ್ರಧಾನ ಚಿತ್ರ ನಿರ್ದೇಶಿಸಿದ್ದ ಸಾಯಿಪ್ರಕಾಶ್, ಇದೀಗ ಮತ್ತೊಂದು ಅಂಥದ್ದೇ ಭಕ್ತಿಪ್ರಧಾನವುಳ್ಳ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲು ಅಣಿಯಾಗುತ್ತಿದ್ದಾರೆ ಅವರು. ಅಂದಹಾಗೆ, ಆ ಚಿತ್ರಕ್ಕೆ ‘ಶ್ರೀ ದುರ್ಗಾಪರಮೇಶ್ವರಿ’ ಎಂದು ನಾಮಕರಣ ಮಾಡಲಾಗಿದೆ. ಚಂದ್ರಿಕಾ ಈ ಚಿತ್ರದ ನಿರ್ಮಾಪಕರು. ಚಿತ್ರ ದಲ್ಲಿ ಮುಖ್ಯ ಪಾತ್ರಧಾರಿಯಾಗಿ ಚಂದ್ರಿಕಾ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಇನ್ನು, ಶಶಿಕುಮಾರ್ ಅವರಿಗೆ ಇಲ್ಲೊಂದು ಪ್ರಮುಖ ಪಾತ್ರವಿದೆಯಂತೆ. ಉಳಿದಂತೆ ‘ಶ್ರೀನಾಗಶಕ್ತಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಲಾವಿದರು ಇಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂಬುದು ನಿರ್ದೇಶಕ ಸಾಯಿಪ್ರಕಾಶ್ ಅಂಬೋಣ. ‘ಇದು ಭಕ್ತಿ ಪ್ರಧಾನ ಚಿತ್ರ. ದುರ್ಗಾಪರಮೇಶ್ವರಿ ಚರಿತ್ರೆಯ ಒಂದು ಭಾಗವನ್ನು
ಚಿತ್ರದ ರೂಪದಲ್ಲಿ ತೋರಿಸಲಾಗುತ್ತಿದೆ. ಸಿನಿಮಾದಲ್ಲಿ ಅಗತ್ಯವಿದ್ದ ಕಡೆ ಮಾತ್ರ ಗ್ರಾμಕ್ಸ್ ಬಳಸಲಾಗುತ್ತದೆ. ಎಲ್ಲಿ , ಹೇಗೆ ಚಿತ್ರೀಕರಿಸಬೇಕು ಎಂಬ ಕುರಿತು ಈಗಷ್ಟೇ ಚರ್ಚೆ ನಡೆಯುತ್ತಿದೆ. ‘ಶ್ರೀ ನಾಗಶಕ್ತಿ’ ಚಿತ್ರದಲ್ಲಿ ದುಡಿದ ತಂತ್ರಜ್ಞರೇ ಇಲ್ಲೂ ನನ್ನೊಂದಿಗೆ ಜತೆಯಾಗುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ನನ್ನದು. ಉಳಿದಂತೆ ಗೋಟೂರಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಸದ್ಯಕ್ಕೆ, ‘ಶ್ರೀ ಆದಿಚುಂಚನಗಿರಿ ಕ್ಷೇತ್ರ’ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಆದಿಚುಂಚನಗಿರಿ
ಶ್ರೀಗಳ ಕುರಿತಾದ ಒಂದಷ್ಟು ಪುಸ್ತಕಗಳನ್ನು ತರಿಸಿಕೊಂಡು ಕೆಲ ಅಂಶಗಳನ್ನು ಹೆಕ್ಕಿ, ಚಿತ್ರಕಥೆಗೆ ಅಳವಡಿಸಿಕೊಳ್ಳಲಾಗುತ್ತಿದೆ. ಇನ್ನು, ‘ಶ್ರೀ ದುರ್ಗಾಪರಮೇಶ್ವರಿ’ ಚಿತ್ರ ಈ ತಿಂಗಳ ಮೂರನೇ ವಾರದಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನುತ್ತಾರೆ ನಿರ್ದೇಶಕರು.

ಇಂಡಿಯಾದಲ್ಲಿ ಬಾಂಡ್


ಜೇಮ್ಸ್ ಬಾಂಡ್ ಚಿತ್ರಗಳ ಸ್ಪೆಷಾಲಿಟಿ ಅದು. ಒಂದೊಂದು ಚಿತ್ರವೂ ಒಂದೊಂದು ದೇಶದಲ್ಲಿ ನಿರ್ಮಾಣವಾಗುತ್ತದೆ. ಹಾಗಾಗಿಯೇ ಪ್ರತಿ ಬಾಂಡ್ ಚಿತ್ರದಲ್ಲೂ ವಿಭಿನ್ನವಾದ ಪರಿಸರ, ಲೊಕೇಶನ್ ಕಾಣೋದಕ್ಕೆ ಸಾಧ್ಯ. ಅದೆಷ್ಟೋ ದೇಶಗಳನ್ನು ಸುತ್ತಿರುವ ಬಾಂಡ್, ಭಾರತಕ್ಕೂ ಒಮ್ಮೆ ಬಂದಿದ್ದ. ೧೯೮೩ರಲ್ಲಿ ಬಿಡುಗಡೆಯಾದ ‘ಆಕ್ಟೋಪುಸ್ಸಿ’ ಚಿತ್ರದಲ್ಲಿ ಬಾಂಡ್ ಭಾರತಕ್ಕೆ ಬಂದಿದ್ದ. ಇಲ್ಲಿನ ಜಯಪುರ, ಉದಯಪುರದಲ್ಲಿ ಓಡಾಡಿದ್ದ, ಹೊಡೆದಾಡಿದ್ದ. ಇಲ್ಲಿನ ಸುಂದರ ತರುಣಿಯರನ್ನು ರೊಮ್ಯಾನ್ಸ್ ಮಾಡಿದ್ದ. ಈಗ ಬಾಂಡ್ ಮತ್ತೊಮ್ಮೆ ಭಾರತಕ್ಕೆ ಬರುತ್ತಿದ್ದಾನೆ. ಬಾಂಡ್ ಸೀರೀಸ್ನ ೨೩ನೇ ಚಿತ್ರವಾದ ‘ಬಾಂಡ್ ೨೩’ರ ಚಿತ್ರೀರಣ ಮುಂಬೈ ಹಾಗೂ ಗೋವಾದ ಸುಂದರ ತಾಣ ಗಳಲ್ಲಿ ಚಿತ್ರೀಕರಣವಾಗಲಿದೆಯಂತೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬಾಂಡ್ ಹಾಗೂ ಚಿತ್ರತಂಡ ಭಾರತಕ್ಕೆ ಬರಲಿದೆ. ಸುಮಾರು ಒಂದು ತಿಂಗಳ ಕಾಲ ಇಲ್ಲಿನ ವಿವಿಧ ಲೊಕೇಶನ್ಗಳಲ್ಲಿ ಸತತ ಚಿತ್ರೀಕರಣ ನಡೆಯಲಿದೆ. ಇತ್ತೀಚೆಗೆ ಆ ಚಿತ್ರದ ನಿರ್ದೇಶಕರಾದ ಸ್ಯಾಮ್ ಮೆಂಡಸ್ ಮುಂಬೈಗೆ ಬಂದು ಲೊಕೇಶನ್ ನೋಡಿ ಹೋಗಿದ್ದಾರಂತೆ. ಬರವಣಿಗೆ ಕೆಲಸವೆಲ್ಲಾ ಮುಗಿದ ನಂತರ ಬಂದು ಚಿತ್ರೀಕರಣ ಮುಗಿಸಿಕೊಂಡು ಹೋಗಲಿದ್ದಾರಂತೆ. ಅಲ್ಲಿಗೆ ಬಾಂಡ್ ಮತ್ತೊಮ್ಮೆ ಭಾರತಕ್ಕೆ ಬರುವುದು ಖಾತ್ರಿಯಾಗಿದೆ. ಕಳೆದ ಬಾರಿ ಬಂದಾಗ, ಕಾಮಿಡಿ,
ಚೇಸಿಂಗ್ ದೃಶ್ಯಗಳನ್ನು ತೋರಿಸುವ ಭರಾಟೆಯಲ್ಲಿ ಭಾರತದ ಬಡತನ, ಇಲ್ಲಿನ ಪರಿಸರ ತೋರಿಸಿ ಭಾರತೀಯರ ಪಾಲಿಗೆ ವಿಲನ್ ಆಗಿದ್ದ. ಈಗ ಭಾರತದ ಪರಿಸರ ಸಾಕಷ್ಟು ಬದಲಾಗಿದೆ. ಈ ಬಾರಿ ಬಾಂಡ್ ಕಣ್ಣಲ್ಲಿ ಭಾರತ ಹೇಗೆ ಕಾಣುತ್ತದೋ, ನೋಡಬೇಕು.

ಮ್ಯಾಡಿ ಕಂಗು ಈಗ ಟೂ ಟೂ


ಮೊನ್ನೆ ಮೊನ್ನೆಯಷ್ಟೇ ಕಂಗನಾ ರಾಣವತ್ ಹಾಗೂ ಮಾಧವನ್ಗೆ ಮದುವೆಯಾಗಿದೆ. ಅಷ್ಟರಲ್ಲೇ ಅವರಿಬ್ಬರ ಮಧ್ಯೆ ಬಿರುಕು ಉಂಟಾಗಿದೆ. ಎಷ್ಟರ ಮಟ್ಟಿಗೆಂದರೆ ಮುಂದೆ ಒಟ್ಟೊಟ್ಟಿಗೆ ಸಾಗುವುದಿಲ್ಲ ಎಂಬಷ್ಟು! ಕಂಗನಾ ಹಾಗೂ ಮಾಧವನ್ ಯಾವತ್ತು ಮದುವೆಯಾದರು ಎಂದು ತಲೆಕೆರೆದುಕೊಳ್ಳಬೇಕಿಲ್ಲ. ನಾವು ಹೇಳುತ್ತಿರುವುದು ಅವರ ‘ತನು ವೆಡ್ಸ್ ಮನು’ ಸಿನಿಮಾ ವಿಷಯ. ಮಾಧವನ್ ಹಾಗೂ ಕಂಗನಾ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿತ್ತು. ಆಗ ಇವರಿಬ್ಬರ ಮಧ್ಯೆ ಎಲ್ಲವೂ ಸರಿ ಇತ್ತು. ಆದರೆ ಈಗ ಬಿರುಕು ಉಂಟಾದಂತೆ ಕಂಡು ಬರುತ್ತಿದೆ. ಅದಕ್ಕೆ ಸಾಕ್ಷಿ ‘ನಾನು ಕಂಗನಾ ಜೊತೆ ನಟಿಸುವುದಿಲ್ಲ’ ಎಂದು ಮಾಧವನ್ ಮುಖಕ್ಕೆ ಹೊಡೆದಂತೆ ಹೇಳಿದ್ದು. ರಾಕಾ ರಾವ್ ಹಾಗೂ ವಿನಯ್ ಸಪ್ರೂ ಅವರ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಕ್ಕೆ ಸನ್ನಿ ಡಿಯೋಲ್, ಕಂಗನಾ ಹಾಗೂ ಮಾಧವನ್ ಎಂದು ಆಯ್ಕೆಯಾಗಿತ್ತು. ಆದರೆ, ಈಗ ಮಾಧವನ್ ನೀಡಿರುವ ಹೇಳಿಕೆ ಎಲ್ಲರಿಗೂ ಶಾಕ್ ತಂದಿದೆ. ಮಾಧವನ್ ಈಗ ಆ ಚಿತ್ರದಲ್ಲಿ ನಟಿಸಲು ಒಪ್ಪುತ್ತಿಲ್ಲ. ಅದಕ್ಕೆ ಕಾರಣ ಕಂಗನಾ. ಆಕೆಯಿಂದ ಮಾಧವನ್ಗೆ ಏನೋ ಬೇಸರವಾಗಿದೆ. ಸೋ, ನಾನು ಹೊರಬರುತ್ತೇನೆ ಎಂದಿದ್ದಾನೆ. ಹೌದು, ಕಂಗನಾ ಈಗ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಹಾಟ್ ಬೆಡಗಿ. ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ನಟರ ಟ್ರೆಂಡ್ ಶಿಪ್ ಈಗ ಕಂಗನಾಳಿಗಿದೆ. ಇದರಿಂದ ಆಕೆ ಸಿಕ್ಕಾಪಟ್ಟೆ ಮಾಕು ತೋರಿಸುತ್ತಿದ್ದಾಳೆಂಬುದು ಕೆಲವರ ಅಭಿಪ್ರಾಯ.

Tuesday, May 3, 2011

ಅಮಲು ಅಮಲು ....


ರೀಮೇಕ್ನಲ್ಲೂ ‘ಒರಿಜಿನಾಲಿಟಿ’ ತೋರಿಸುವ ಒಂದು ಪ್ರಯತ್ನಕ್ಕೆ ನಿರ್ಮಾಪಕ ಕೆ.ಮಂಜು ಮುಂದಾಗಿದ್ದಾರೆ. ಅದು ತಮ್ಮ ‘ಮೈನಾ’ ರೀಮೇಕ್ ಚಿತ್ರದಲ್ಲಿ. ಒಂದರ ಮೇಲೊಂದರಂತೆ ರೀಮೇಕ್ ಸಿನಿಮಾಗಳನ್ನು ಮಾಡುತ್ತಿರುವ ಕೆ.ಮಂಜು ಅವರ ಹೊಸ ವೆಂಚರ್ ‘ಮೈನಾ’ ರೀಮೇಕ್. ಈಗ ಆ ರೀಮೇಕ್ ನಲ್ಲಿ ಒಂಚೂರು ಒರಿಜಿನಾಲಿಟಿ ಇರಲೆಂದು ಮೂಲ ಚಿತ್ರದ ನಿರ್ದೇಶಕ ಹಾಗೂ ನಾಯಕಿಯನ್ನೇ ಇಲ್ಲಿಗೂ ಕರೆತರುತ್ತಿದೆ. ಪ್ರಭು ಸೊಲೋಮನ್ ಈ ಚಿತ್ರದ ನಿರ್ದೇಶಕರು. ಅಮಲಾ ಪಾಲ್ ನಾಯಕಿ. ಈಗ ಈ ಇಬ್ಬರೂ ಮತ್ತೊಮ್ಮೆ ಕನ್ನಡ ಅವತರಣಿಕೆಯಲ್ಲಿ ಜೊತೆಯಾಗುತ್ತಿದ್ದಾರೆ. ನಾಯಕಿಯ ಆಯ್ಕೆ ವಿಷಯವನ್ನು ಮಂಜು ನಿರಾಕರಿಸುತ್ತಾರಾದರೂ ಮೂಲಗಳ ಪ್ರಕಾರ ಆಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಅಂದಹಾಗೆ, ನಿರ್ದೇಶಕ ಪ್ರಭು ಅವರಿಗೆ ಕನ್ನಡದಲ್ಲಿ ಇದು ಎರಡನೇ ಸಿನಿಮಾ. ೨೦೦೧ರಲ್ಲಿ ರವಿಚಂದ್ರನ್ ಅವರ ‘ಉಸಿರೇ’ ಸಿನಿಮಾವನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ರಾಕ್ಲೈನ್ ವೆಂಕಟೇಶ್ ಆಯೋಜಿಸಿದ್ದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ
ಆಗಮಿಸಿದ್ದ ಪ್ರಭು, ‘ಅಲ್ಲಿ ಹೇಗೆ ಮೈನಾ ಮಾಡಿದೆನೋ ಅದೇ ರೀತಿ ಇಲ್ಲೂ ಮಾಡುತ್ತೇನೆ. ಆದರೆ ಕನ್ನಡದ ನೆಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆಗಳಿರುತ್ತವೆ. ಈಗಾಗಲೇ ನಾಯಕ ಗಣೇಶ್ ಅವರ ಜೊತೆಯೂ ಚರ್ಚಿಸಿದ್ದೇನೆ’ ಎಂದರು. ಇದಕ್ಕೆ ಪೂರಕವಾಗಿ ಆಗ ತಾನೇ ರಾಕ್ಲೈನ್ ಅವರ ಕಾರ್ಯಕ್ರಮಕ್ಕೆ ಆಗಮಿಸಿದ ಗಣೇಶ್, ನಿರ್ದೇಶಕ ಪ್ರಭು ಅವರನ್ನು ಕಂಡ ಕೂಡಲೇ ಅವರನ್ನು ಕರೆದುಕೊಂಡು ಹೋಗಿ ಮತ್ತೆ ಚರ್ಚಿಸತೊಡಗಿದರು. ಚಿತ್ರ ಮೇ ೨೩ ರಂದು ಸೆಟ್ಟೇರಲಿದೆ. ನಂತರ ನಿರಂತರ ಶೂಟಿಂಗ್. ನಿರ್ಮಾಪಕ ಮಂಜು ಅವರ ಸ್ಟೈಲೇ ಹಾಗೇ. ಅವರು ಒಂದರ ಹಿಂದೊಂದು ಸಿನಿಮಾಗಳಿಗೆ ಮುಹೂರ್ತ ಮಾಡಿ ಸಿನಿಮಾಗಳನ್ನು ‘ಸ್ಟಾಕ್’ ಮಾಡುತ್ತಿರುತ್ತಾರೆ. ಸದ್ಯ ಅವರ ‘ಶಿಕಾರಿ’, ‘ಜಾಲಿಬಾಯ್’, ‘ಹ್ಯಾಪಿ’ ಚಿತ್ರಗಳು ತೆರೆಗೆ
ಸಿದಟಛಿವಾಗಿವೆ. ‘ಗಾಡ್ಫಾದರ್’ಗೆ ಮೊನ್ನೆಯಷ್ಟೇ ಮುಹೂರ್ತ ನಡೆದಿದೆ. ಈಗ ‘ಮೈನಾ’ ಸರದಿ.

Monday, May 2, 2011

ಕುಡ್ಲದಲ್ಲಿ ‘ಸಾರಂಗ’ ಧಮಾಕಾ!


ಎರಡು-ಮೂರು ಖಾಸಗಿ ರೇಡಿಯೋ ಚಾನೆಲ್ಗಳನ್ನು ಇಟ್ಟುಕೊಂಡು ಒದ್ದಾಡುತ್ತಿರುವ ಕುಡ್ಲದಲ್ಲಿ ಸಮುದಾಯ ರೇಡಿಯೋ ವಾಹಿನಿಯೊಂದು ಭರ್ಜರಿಯಾಗಿ ಒಂದು ವರ್ಷ ಪೂರೈಸಿ ನಿಂತಿದೆ. ಕೊಂಕಣಿ, ತುಳು, ಕನ್ನಡ, ಬ್ಯಾರಿ, ಮಳಯಾಳಂ ಹಾಗೂ ಪಂಜಾಬಿ ಭಾಷೆಯಲ್ಲಿ ವಿವಿಧ ಕಾರ್ಯಗಳನ್ನು ನೀಡುವ ಮೂಲಕ ಕುಡ್ಲದಲ್ಲಿ ‘ಸಾರಂಗ’ ಮೆಚ್ಚುಗೆಗೆ ಪಾತ್ರವಾಗಿದೆ. ದಿನಪ್ರತಿ ೧೪ ಗಂಟೆಗಳ ನಾನ್ಸಾಪ್ಟ್ ಕಾರ್ಯಕ್ರಮ ಪ್ರಸಾರದ ಮೂಲಕ ಸಮುದಾಯ ವಾಹಿನಿಗಳಲ್ಲಿಯೇ ಹೊಸ ದಾಖಲೆ ಬರೆದಿದೆ.

ನಾನ್ಸ್ಟಾಪ್ ಸಿನ್ಮಾಗಳ ಹಾಡು ಜತೆಗಿಷ್ಟು ಆರ್ಜೆ(ರೇಡಿಯೋ ಜಾಕಿ)ಗಳ ವಟವಟ ಇದು ಖಾಸಗಿ ಎಫ್ಎಂಗಳ ದುನಿಯಾ. ಈಗಾಗಲೇ ರಾಜ್ಯದಲ್ಲಿರುವ ಹತ್ತಾರು ಖಾಸಗಿ ರೇಡಿಯೋ ಚಾನೆಲ್ಗಳು ಮೆಟ್ರೋ ಸಿಟಿಯನ್ನು ಮಾತ್ರ ಟಾರ್ಗೆಟ್ ಮಾಡಿಕೊಳ್ಳದೇ ಮೂಲಭೂತ ಸೌಕರ್ಯಗಳಿಲ್ಲದ ಕುಗ್ರಾಮ ಹಳ್ಳಿಗಳನ್ನು ಮುಟ್ಟಿ ನಿಂತಿದೆ. ನಿಜಕ್ಕೂ ಈ ಖಾಸಗಿ ಎಫ್ಎಂಗಳ ದರಬಾರಿನ ಮುಂದೆ ಉಳಿದೆಲ್ಲ ರೇಡಿಯೋ ಚಾನೆಲ್ಗಳಿಗೆ ಮಂಕು ಕವಿದಿದೆ ಎಂದೇ ನಂಬಲಾಗಿತ್ತು.
ಆದರೆ ಕುಡ್ಲ ಸಿಟಿಯೊಳಗೆ ಸಮುದಾಯ ರೇಡಿಯೋ ವಾಹಿನಿ ಸಾರಂಗ ೧೦೭.೮ ಎಫ್ಎಂ ಸಕ್ಸಸ್ ಫುಲಿ ವನ್ ಇಯರ್ನ್ನು ಪೂರೈಸಿ ನಿಂತಿದೆ. ೧೩೧ ವರ್ಷಗಳ ಸುದೀರ್ಘ ಇತಿಹಾಸ ಇರುವ ಮಂಗಳೂರಿನ ಅಟೋನಾಮಸ್ ವಿವಿ ಸಂತ. ಅಲೋಶಿಯಸ್ನ ಮಾಧ್ಯಮ ಸಂವಹನ ವಿಭಾಗದ ಅಡಿಯಲ್ಲಿ ಸಾರಂಗ ೧೦೭.೮ ಎಫ್ಎಂ ಭರ್ಜರಿಯಾಗಿ ಕಾರ್ಯ ನಿರ್ವಹಣೆ ಮಾಡಿಕೊಂಡು ಬರುತ್ತಿದೆ.
ಸಮುದಾಯ ರೇಡಿಯೋ ವಾಹಿನಿ ಹಾಗೂ ಖಾಸಗಿ ರೇಡಿಯೋ ವಾಹಿನಿಗಳ ಮೋಟೋಗಳೇ ಭಿನ್ನ. ಖಾಸಗಿ ರೇಡಿಯೋ ವಾಹಿನಿಗಳಿಗೆ ಕಮರ್ಷಿಯಲ್ ದೃಷ್ಟಿಕೋನ ಮುಖ್ಯವಾದರೆ ಸಮುದಾಯ ರೇಡಿಯೋಗಳಿಗೆ ಸಮುದಾಯದ ಅಭಿವೃದ್ಧಿ ಹಾಗೂ ಅವರ ಆಸಕ್ತಿಗಳೇ ಕಾರ್ಯಕ್ರಮಗಳ ಜೀವಾಳವಾಗಿರುತ್ತದೆ. ಕುಡ್ಲ ಎಲ್ಲ ರೀತಿಯಿಂದಲೂ ಬೆಳೆಯುತ್ತಿರುವ ನಗರ. ಅದರಲ್ಲೂ ವಿವಿಧ ಜಾತಿ, ಧರ್ಮ, ಭಾಷೆಯ ತವರೂರು. ಎಲ್ಲರ ಆಸಕ್ತಿ, ಅಭಿವೃದ್ಧಿಗಳನ್ನು ಜೋಪಾನವಾಗಿ ಕಾಯುವಂತಹ ಕಾರ್ಯಕ್ರಮಗಳನ್ನು ನೀಡುವುದು ನಿಜಕ್ಕೂ ಒಂದು ಸವಾಲಿನ ಕೆಲಸ. ಅದನ್ನು ಸರಿಯಾಗಿ ಸಾರಂಗ ನಿಭಾಯಿಸಿಕೊಂಡು ಬಂದಿದೆ ಎನ್ನೋದು ಸಾರಂಗ ೧೦೭.೮ ಕಮ್ಯೂನಿಟಿ ರೇಡಿಯೋ ವಾಹಿನಿಯ ನಿರ್ದೇಶಕ ಡಾ. ರಿಚರ್ಡ್ ರೇಗೊ ಅವರ ಅಭಿಪ್ರಾಯ.
ಕರಾವಳಿ ಮೀನುಗಾರ ಸಮೂಹ, ಕೃಷಿಕ ಬಂಧುಗಳಿಗೆ ಮಾಹಿತಿ, ಆರೋಗ್ಯ- ಕಾನೂನು ಕ್ಷೇತ್ರದ ಜತೆಗೆ ವಿದ್ಯಾರ್ಥಿಗಳಿಗೆ ಆಸಕ್ತಿ ನೀಡುವಂತಹ ಕಾರ್ಯಕ್ರಮಗಳು, ರಸ್ತೆ ಸುರಕ್ಷೆಯ ಜತೆಗೆ ಮಳೆ ನೀರು ಕೊಯ್ಲು ಕಾರ್ಯಕ್ರಮಗಳು ಸಾರಂಗದಲ್ಲಿ ಜಾಸ್ತಿಯಾಗಿ ಪ್ರಸಾರವಾಗುತ್ತಿದೆ.
ಮಂಗಳೂರು ಸುತ್ತಮುತ್ತಲಿನ ಊರುಗಳ ಜತೆಗೆ ದೂರದ ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ಉಡುಪಿ ಮುಂತಾದ ಪ್ರದೇಶಗಳಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಇತರ ವರ್ಗದ ಜನರು ಸಾರಂಗದಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಪ್ರತಿನಿತ್ಯ ಪ್ರಸಾರವಾಗುವ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದೂರವಾಣಿ, ಎಸ್ಸೆಮ್ಮೆಸ್ ಹಾಗೂ ಈ-ಮೇಲ್ ಮೂಲಕ ತಿಳಿಸುತ್ತಾರೆ ಇದೆಲ್ಲವೂ ಸಾರಂಗ ಅವರಿಗೆ ಬಹಳ ಇಷ್ಟವಾಗಿದೆ ಎನ್ನೋದಕ್ಕೆ ಸಾಕ್ಷಿ ಎನ್ನುತ್ತಾರೆ ಡಾ.ರಿಚರ್ಡ್ ರೇಗೊ.
ಟೋಟಲಿ ಡಿಫರೆಂಟ್ ಕಾರ್ಯಕ್ರಮಗಳು :ಸಾರಂಗ ಈಗಾಗಲೇ ಪ್ರತಿದಿನ ಕೊಂಕಣಿ, ತುಳು, ಕನ್ನಡ, ಇಂಗ್ಲೀಷ್ ಕಾರ್ಯಕ್ರಮಗಳ ಜತೆಗೆ ವಾರಕ್ಕೊಂದರಂತೆ ಮಳಯಾಳಂ ಹಾಗೂ ಬ್ಯಾರಿ( ಕುಡ್ಲದ ಮುಸ್ಲಿಂ ಭಾಷೆ) ಹಾಗೂ ತಿಂಗಳಿಗೆ ಒಂದರಂತೆ ಪಂಜಾಬಿ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಪ್ರತಿದಿನ ೧೪ ಗಂಟೆ ಸಮುದಾಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಸಾರಂಗ ಸಮುದಾಯ ವಾಹಿನಿಗಳಲ್ಲಿಯೇ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ.
‘೨೮ ಜೂ. ೨೦೦೯ರಲ್ಲಿ ಬೆಳಗ್ಗೆ ೬.೩೦ ರಿಂದ ಸಂಜೆ ೮.೩೦ರವರೆಗೆ ನಾಲ್ಕು ಭಾಷೆಗಳಲ್ಲಿ ೧೪ ಗಂಟೆಗಳ ನಿರಂತರ ಮ್ಯಾರಥಾನ್ ಆರ್ಜೆ ಗಿರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ೧೫ ಆ. ೨೦೧೦ರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸತತ ೧೪ ಗಂಟೆಗಳ ಕಾಲ ರೇಡಿಯೋ ಜಾಕಿ (ನೇರ ಪ್ರಸಾರ) ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದು ಸಾರಂಗದ ಮೈಲಿಗಲ್ಲಿನಲ್ಲಿ ಒಂದಾಗಿ ನಿಂತಿದೆ. ಸಮುದಾಯದ ಆರೋಗ್ಯದ ಕುರಿತು ಆರೋಗ್ಯ ಸ್ಪರ್ಶ ಎನ್ನುವ ಕಾರ್ಯಕ್ರಮದ ಜತೆಗೆ ಫೋನ್- ಇನ್ ಕಾರ್ಯಕ್ರಮ, ಮಾಧ್ಯಮ ಹರಾಟೆ ಕಾರ್ಯಕ್ರಮಗಳು ಅತೀ ಹೆಚ್ಚಿನ ಕೇಳುಗರನ್ನು ಪಡೆದುಕೊಂಡಿದೆ ’ ಎಂದು ನಿರ್ದೇಶಕ ಡಾ. ರಿಚರ್ಡ್ ರೇಗೊ ಹೇಳುತ್ತಾರೆ.
ಕರಾವಳಿಯಲ್ಲಿ ಐದಾರು ಧರ್ಮ, ಭಾಷೆ, ಸಂಸ್ಕೃತಿಯ ಮಂದಿ ಬದುಕುತ್ತಿದ್ದಾರೆ. ಈ ಎಲ್ಲ ಮಂದಿಯನ್ನು ಒಂದು ಎಂಬ ಸಂಕೇತ ರೂಪವಾಗಿ ‘ಸಾರಂಗ’ ಎಂಬ ಹೆಸರನ್ನು ಸೂಚಿಸಲಾಗಿದೆ. ‘ಸಾರಂಗ’ ಎಂದರೆ ಹಲವು ಬಣ್ಣಗಳು ಎಂಬ ಅರ್ಥ ನೀಡುತ್ತದೆ. ವಿವಿಧ ಕಾರ್ಯಕ್ರಮಗಳು ಈ ‘ಸಾರಂಗ’ಕ್ಕೆ ಮತ್ತಷ್ಟೂ ಬಲ ನೀಡಿದೆ. ಟೋಟಲಿ ಸಮುದಾಯ ವಾಹಿನಿಯೊಂದು ನಾನಾ ಕಾರಣಗಳಿಗೆ ಸುದ್ದಿಯಾಗಿರೋದು ಒಳ್ಳೆಯ ವಿಚಾರ ಅಲ್ವಾ..?
..............
ಹಲೋ ರೇಡಿಯೋ ಕೇಳಿ.....
* ಇಗ್ನೋ(ಇಂದಿರಾ ಗಾಂ ವಿವಿ) ಜ್ಞಾನ ವಾಣಿ (ಗ್ಯಾನ್ ವಾಣಿ) ಶಿಕ್ಷಣ ರೇಡಿಯೋ ವಾಹಿನಿಯನ್ನು ಆರಂಭ ಮಾಡಿತು.
* ೨೦೦೪ ಫೆ.೧ರಂದು ಅಣ್ಣಾ-ಮದ್ರಾಸ್ ವಿವಿ-ಕ್ಯಾಂಪಸ್ ರೇಡಿಯೋ ೯೦.೮ಎಫ್ಎಂವನ್ನು ಆರಂಭ ಮಾಡಿತು.
* ಕರ್ನಾಟಕದ ಬೂದಿಕೋಟೆಯಲ್ಲಿರುವ ‘ನಮ್ಮ ಧ್ವನಿ’ ರಾಜ್ಯದ ಮೊದಲ ಸಮುದಾಯ ವಾಹಿನಿ.
* ಅತೀ ಹೆಚ್ಚಿನ ಸಮುದಾಯ ವಾಹಿನಿಗಳಿರೋದು ಸಿಲೋನ್, ನೇಪಾಳ, ಇಂಡೋನೇಷ್ಯಾ, ಸ್ಪೇನ್ ದೇಶಗಳಲ್ಲಿ.
*ದೇಶದ ಮೊತ್ತ ಮೊದಲ ಸಮುದಾಯ ವಾಹಿನಿ ಆಂಧ್ರ ಪ್ರದೇಶದ ಒರ್ವಕಾಲ್ನಲ್ಲಿ ಆರಂಭವಾಯಿತು.
* ಮೊತ್ತ ಮೊದಲ ಕಮರ್ಷಿಯಲ್ ರೇಡಿಯೋ ವಾಹಿನಿ ‘ರೇಡಿಯೋ ಸಿಟಿ’ ಬೆಂಗಳೂರಿನಲ್ಲಿ ಆರಂಭವಾಯಿತು.
* ಅವಿಭಜಿತ ದ.ಕ ಜಿಲ್ಲೆಯ ಮೊದಲ ಕಮ್ಯುನಿಟಿ ರೇಡಿಯೋ ಮಣಿಪಾಲದ್ದು. (ಮಣಿಪಾಲ್ ರೇಡಿಯೋ ೯೦.೪ ಎಫ್ಎಂ)

Sunday, May 1, 2011

ಬಾಲಿವುಡ್ನಲ್ಲಿ ‘ಉಪ್ಪಳ ಮೆಹಂದಿ’



ಬಾಲಿವುಡ್ನ ಖ್ಯಾತನಾಮ ನಟಿಮಣಿಗಳು ‘ಉಪ್ಪಳ ಮೆಹಂದಿ’ಗಾಗಿ ಮುಂಬಯಿಯ ಭೇಂಡಿ ಬಜಾರ್ಗೆ ಮೂಗಿ ಬೀಳುತ್ತಾರೆ. ನಟಿ ಐಶ್ವರ್ಯ ರೈ ಬಚ್ಚನ್, ನಿಕಿತಾ, ಕರೀಷ್ಮಾ ಕಪೂರ್, ಸೋನಾಲಿ ಬೇಂದ್ರೆ , ಹೃತಿಕ್ ರೋಷನ್ ಪತ್ನಿ ಸುಸಾನೆ ರೋಷನ್ ಹೀಗೆ ‘ಉಪ್ಪಳ ಮೆಹಂದಿ’ಯನ್ನು ಹಾಕದಿದ್ದಾರೆ ಸಮಾಧಾನವೇ ಇಲ್ಲವಂತೆ ! ಬನ್ನಿ ಏನ್ ವಿಷ್ಯಾ ಅಂತಾ ಕೇಳೋಣ....

‘ಉಪ್ಪಳ ಮೆಹಂದಿ’ ಇದು ಸದ್ದಿಲ್ಲದೇ ಮುಂಬಯಿ ಮಾರುಕಟ್ಟೆಯಲ್ಲಿ ಸುದ್ದಿ ಮಾಡುತ್ತಿದೆ. ಕಾಸರಗೋಡಿನಿಂದ ಬರೋಬರಿ ಹದಿನೈದು ಕಿ.ಮೀ ದೂರದಲ್ಲಿರುವ ‘ಉಪ್ಪಳ ’ಎಂಬ ಪುಟ್ಟ ಊರಿನ ಮುದ್ರೆ ಬಿದ್ದಾರೆ ಸಾಕು. ಮೆಹಂದಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಡುತ್ತದೆ. ಬಾಲಿವುಡ್ನ ಖ್ಯಾತನಾಮ ನಟಿಮಣಿಗಳು ‘ಉಪ್ಪಳ ಮೆಹಂದಿ’ಗಾಗಿ ಯಾರಿಗೂ ಹೇಳದೇ ಮುಂಬಯಿಯ ಭೇಂಡಿ ಬಜಾರ್ಗೆ ಮೂಗಿ ಬೀಳುತ್ತಾರೆ. ನಟಿ ಐಶ್ವರ್ಯ ರೈ ಬಚ್ಚನ್, ಕಾಜೋಲ್, ಕರೀಷ್ಮಾ ಕಪೂರ್, ಸೋನಾಲಿ ಬೇಂದ್ರೆ , ಹೃತಿಕ್ ರೋಷನ್ ಪತ್ನಿ ಸುಸಾನೆ ರೋಷನ್ ಹೀಗೆ ‘ಉಪ್ಪಳ ಮೆಹಂದಿ’ಯನ್ನು ಹಾಕದಿದ್ದಾರೆ ಸಮಾಧಾನವೇ ಇಲ್ಲ ! ಅದರಲ್ಲೂ ಮುಂಬಯಿಯ ಮಾರುವಾಡಿಗಳು, ಗುಜರಾತಿ ವ್ಯಾಪಾರಿಗಳು ಉಪ್ಪಳ ಮೆಹಂದಿಯನ್ನು ಹುಡುಕಿಕೊಂಡು ಬರುತ್ತಾರೆ. ಮೆಹಂದಿಗೆ ಹೇಳಿದ ರೇಟನ್ನು ಯಾವುದೇ ಚುಕ್ಕಾಸಿ ಇಲ್ಲದೇ ನೇರವಾಗಿ ಮುಂಬಯಿಗೆ ಸಾಗಿಸುತ್ತಾರೆ ಎಂದರೆ ಅದೊಂದು ಸಿಂಪಲ್ ಮಾತಲ್ಲ !
ಕಾಸರಗೋಡು ಜಿಲ್ಲೆಯ ಉಪ್ಪಳ ಮೆಹಂದಿ ತಯಾರಿಕೆಗೆ ಬಹಳಷ್ಟು ಪ್ರಸಿದ್ಧಿ. ಇನ್ನೂರರಿಂದ ಮೂನ್ನೂರು ಕುಟುಂಬಗಳು ಈ ಮೆಹಂದಿ ತಯಾರಿಕೆ ಕೆಲಸದಲ್ಲಿ ಯಾವಾಗಲೂ ಬ್ಯುಸಿ. ಇದೇ ಅವರಿಗೆ ವೃತ್ತಿ ಪ್ಲಸ್ ಪ್ರವೃತ್ತಿಯಾಗಿ ಬೆಳೆದಿದೆ. ವಿಭಿನ್ನ ಸಂಸ್ಕೃತಿಗಳ ಸಂಗಮ ಭೂಮಿಯಾದ ಉಪ್ಪಳದಲ್ಲಿ ಹನಫೀ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಇಲ್ಲಿ ತಯಾರಾಗುವ ಮೆಹಂದಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. ಹೆಚ್ಚಿನ ಕ್ಷಣಾರ್ಧದಲ್ಲಿ ಕೆಂಪನೆಯ ರಂಗೇರುವುದೇ ಇದರ ವೈಶಿಷ್ಟ್ಯ. ಇದಕ್ಕಾಗಿಯೇ ಇಲ್ಲಿನ ಮೆಹಂದಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ನೈಸರ್ಗಿಕ ವಸ್ತುಗಳನ್ನು ಜಾಸ್ತಿಯಾಗಿ ಬಳಕೆ ಮಾಡುವುದರಿಂದ ರಾಸಾಯನಿಕ ವಸ್ತುಗಳಿಗೆ ಮೆಹಂದಿಯಲ್ಲಿ ಜಾಗವಿಲ್ಲ. ನಾನಾ ಮಾದರಿಯ ಅತ್ಯಾಕರ್ಷಕ ಟ್ಯೂಬ್ಗಳಲ್ಲಿ ತುಂಬಿರಿಸಲಾಗುವ ಮೆಹಂದಿ ವಿಭಿನ್ನ ಹೆಸರುಗಳಲ್ಲಿ ಮಾರುಕಟ್ಟೆ ಪ್ರವೇಶಿಸುತ್ತದೆ.
ಅದರಲ್ಲೂ ‘ಉಪ್ಪಳ ಮೆಹಂದಿ’ ಎನ್ನುವ ಲೋಗೋ ಇಲ್ಲದೇ ಹೋದರೆ ಮಾರುಕಟ್ಟೆಯಲ್ಲಿ ಮೆಹಂದಿ ತನ್ನ ಕಾರುಬಾರು ನಡೆಸುವುದಿಲ್ಲ. ಇದೇ ಕಾರಣದಿಂದ ಮೆಹಂದಿಯನ್ನು ಉಪ್ಪಳದ ಅದೆಷ್ಟೋ ಹೆಂಗಸರು ಗುಡಿ ಕೈಗಾರಿಕೆಯನ್ನಾಗಿಸಿಕೊಂಡಿದ್ದಾರೆ. ಮೆಹಂದಿ ತಯಾರಿಸುವುದೇ ಒಂದು ಆಕರ್ಷಕ ಕಲೆ. ಮೆಹಂದಿ ಎಲೆಯನ್ನು ಒಣಗಿಸಿ ಪುಡಿ ಮಾಡುವುದು, ಅದಕ್ಕೆ ವಿಭಿನ್ನ ಸಾಮಗ್ರಿಗಳನ್ನು ಮಿಶ್ರಣ ಮಾಡುವುದು, ಆಕರ್ಷಕ ಪ್ಲಾಸ್ಟಿಕ್, ಪೇಪರ್ಗಳಿಂದ ಕೋನ್ (ಟ್ಯೂಬ್) ತಯಾರಿಸುವುದು, ಫಿಲ್ಲಿಂಗ್ ಯಂತ್ರದ ಮೂಲಕ ಟ್ಯೂಬ್ಗಳಿಗೆ ಮೆಹಂದಿ ತುಂಬಿಸುವುದು, ಬಳಿಕ ಅದಕ್ಕೆ ಆಕರ್ಷಕ ಸ್ಟಿಕ್ಕರ್ ಅಂಟಿಸುವುದು... ಹೀಗೆ ಸಾಗುತ್ತದೆ ಮೆಹಂದಿ ತಯಾರಿಯ ಪ್ರಕ್ರಿಯೆ.
ಉಗುರಿಗೆ ರಂಗೇರಿಸಲು ಇಲ್ಲಿ ಬೇರೆಯೇ ಗುಣಮಟ್ಟದ ಮೆಹಂದಿ ತಯಾರಾಗುತ್ತವೆ. ಆಡುಭಾಷೆಯಲ್ಲಿ ‘ನೈಲ್ ಮೆಹಂದಿ’ ಎಂದು ಕರೆಯಲ್ಪಡುವ ಈ ಮೆಹಂದಿಯ ರೇಟಂತೂ ಕೊಂಚ ಜಾಸ್ತಿ. ಮೆಹಂದಿ ಪುಡಿಯನ್ನು ಕುದಿಸಿದ ಬೆಲ್ಲದ ನೀರಿನ ಜತೆ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಸಣ್ಣಸಣ್ಣ ಟ್ಯೂಬ್ಗಳಲ್ಲಿ ಇದು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಪ್ರತಿನಿತ್ಯ ಸಾವಿರಾರು ಮೆಹಂದಿ ಟ್ಯೂಬ್ಗಳು ಇಲ್ಲಿನ ಮನೆಗಳಲ್ಲಿ ಸಿದ್ಧವಾಗುತ್ತವೆ. ಮದುವಣಗಿತ್ತಿಯರಿಗೆ ಗೋರಂಟಿ ಹಚ್ಚುವ ಮಂದಿಯೂ ಇಲ್ಲಿದ್ದಾರೆ. ಆಕರ್ಷಕ ಮೊಘಲ್ ಡಿಸೈನ್, ಅರಬ್ ಡಿಸೈನ್, ಇಂಡಿಯನ್ ಡಿಸೈನ್ಗಳಲ್ಲಿ ಮೆಹಂದಿ ಚಿತ್ತಾರ ಬಿಡಿಸುವ ಲಲನೆಯರನ್ನು ಇಲ್ಲಿ ಕಾಣಬಹುದು. ಹಲವೆಡೆ ಮೆಹಂದಿ ಡಿಸೈನ್ ತರಗತಿಗಳೂ ಇವೆ.
ಮೆಹಂದಿಯ ಚಿತ್ತಾರ ಬಿಡಿಸುವುದೂ ಒಂದು ಕಲೆ. ಬಾಲೆಯರು ರಜಾ ಸಮಯಗಳಲ್ಲಿ ಮೆಹಂದಿ ಚಿತ್ತಾರವನ್ನು ಕಲಿಯುತ್ತಾರೆ. ಮಂಗಳೂರು, ಉಡುಪಿ, ಕಾಸರಗೋಡಿನೆಲ್ಲೆಡೆಯೂ ವಿವಾಹ ಮತ್ತಿತರ ಶುಭ ಸಂದರ್ಭಗಳಲ್ಲಿ ಜನ ಮೆಹಂದಿ ಡಿಸೈನರ್ಗಳ ಮೊರೆ ಹೋಗುವುದು ಸಹಜವೇ. ಉಪ್ಪಳದಲ್ಲಿ ಬಹುತೇಕ ಹೆಂಗಳೆಯರು ಮೆಹಂದಿ ಸ್ಪೆಶಲಿಸ್ಟ್ಗಳಾಗಿದ್ದಾರೆ. ಉಪ್ಪಳ ಮೆಹಂದಿಯಿಂದಾಗಿ ಬೀಡಿ ಉದ್ಯಮವನ್ನು ಕೈ ಬಿಟ್ಟಿರುವ ಮಹಿಳೆಯರು ಮೆಹಂದಿಯನ್ನೇ ಲಾಭದಾಯಕವಾದ ಗುಡಿ ಕೈಗಾರಿಕೆಯಾಗಿ ಪರಿವರ್ತಿಸಿದ್ದಾರೆ. ಮಿತ ಬಂಡವಾಳದಲ್ಲಿ ಗರಿಷ್ಠ ಲಾಭ ಗಿಟ್ಟಿಸಬಲ್ಲ ಮೆಹಂದಿ ಉದ್ಯಮ ಮಹಿಳೆಯರ ಪಾಲಿಗೆ ವರದಾನವೂ ಆಗಿದೆ.

ಚಿತ್ರಗಳು: ಹರ್ಷದ್ ವರ್ಕಾಡಿ