Friday, January 25, 2013
‘ಲಿಟಲ್ ಹಾರ್ಟ್’ ಮೌನ ಒಡೆದು ಮಾತಾಯಿತು!
ಸಿನಿಮಾ ಎಂದರೆ ಬೇಕುಗಳ ಸಮುದ್ರ ಎನ್ನೋದು ಸಿನಿಮಾ ಪಂಡಿತರ ಮಾತು. ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ ಬಂಡವಾಳ ಬೇಕು, ನಟ-ನಟಿಯರು ಬೇಕು, ಭರ್ಜರಿ ಲೊಕೇಷನ್ ಬೇಕು, ಮಾತು ಬೇಕು... ಆದರೆ ಇವು ಇಲ್ಲದೇ ಸಿನಿಮಾ ಮಾಡಬಹುದು ಎನ್ನೋದಕ್ಕೆ ಕರಾವಳಿ ಹುಡುಗರು ಇಲ್ಲಿದ್ದಾರೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಸಿನಿಮಾ ಎಂದರೆ ಬೇಕುಗಳ ಸಮುದ್ರ ಎನ್ನೋದು ಸಿನಿಮಾ ಪಂಡಿತರ ಮಾತು. ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ ಬಂಡವಾಳ ಬೇಕು, ನಟ-ನಟಿಯರು ಬೇಕು, ಭರ್ಜರಿ ಲೊಕೇಷನ್ ಬೇಕು, ಮಾತು ಬೇಕು... ಹೀಗೆ ಬೇಕುಗಳ ನಡುವೆ ಸಿನಿಮಾ ನಿರ್ಮಾಣವಾಗಿ ಹೊರಬರುವ ಪ್ರಸಂಗಗಳೇ ಜಾಸ್ತಿ. ಆದರೆ ವಿಪರ್ಯಾಸ ಎಂದರೆ ಈ ಬೇಕುಗಳಿಲ್ಲದೇ ಸಿನಿಮಾ ನಿರ್ಮಾಣ ಮಾಡಬಹುದು ಎನ್ನುವ ಸತ್ಯ ಮಾತ್ರ ಅರಿವಿಗೆ ಬರೋದು ಬಹಳ ಕಷ್ಟ.
ಆದರೆ ಕರಾವಳಿಯಲ್ಲಿ ಇಂತಹ ಬೇಕುಗಳನ್ನು ಬದಿಗೊತ್ತಿದ ಯುವಕರು ಸದ್ದು ಮಾಡಿದ್ದಾರೆ. ಲಿಟಲ್ ಹಾರ್ಟ್ ಮಾತುಗಳೇ ಇಲ್ಲದ ಸುಂದರ ಚಿತ್ರವೊಂದು ಈಗಾಗಲೇ ಯೂ ಟ್ಯೂಬ್ನಲ್ಲಿ ಸಖತ್ ಕ್ಲಿಕ್ ಆಗುತ್ತಿದೆ. ಯುವಕರು ಮಾಡಿದ ಪುಟ್ಟ ಚಿತ್ರವೊಂದು ಬಹಳಷ್ಟು ಮಂದಿಯನ್ನು ಮೋಡಿ ಮಾಡಿದೆ ಎನ್ನುವುದಕ್ಕೆ ಕ್ಲಿಕ್ ಆಗುತ್ತಿರುವ ಸಂಖ್ಯೆಯ ಲೆಕ್ಕಚಾರವೇ ಹೇಳುತ್ತಿದೆ.
ಮೌನ ಹೇಗೆ ಮಾತಾಯಿತು:
‘ಲಿಟಲ್ ಹಾರ್ಟ್’ ಬರೀ ಹನ್ನೆರಡು ನಿಮಿಷಗಳ ಪುಟ್ಟ ಚಿತ್ರ. ಅಂದಹಾಗೆ ಇಲ್ಲಿ ಮೈಲು ಉದ್ದ ಗಾತ್ರದ ಸಂಭಾಷಣೆಗಳಿಲ್ಲ. ಪ್ರೇಕ್ಷಕರನ್ನು ಕಿರಿಕಿರಿ ಮಾಡುವ ಪದ ಪ್ರಯೋಗಗಳಿಲ್ಲ. ಇಲ್ಲಿ ಇರುವುದು ಬರೀ ಮೌನ. ಚಿತ್ರದ ಜತೆಯಲ್ಲಿ ಸಾಗುವ ಹಿನ್ನೆಲೆ ಸಂಗೀತ ನೋಡುವ ಪ್ರೇಕ್ಷಕನನ್ನು ಮೋಡಿ ಮಾಡುತ್ತದೆ. ಭಿಕ್ಷುಕ ಹುಡುಗ (ಬಸಪ್ಪ) ಮತ್ತು ಸಾಮಾನ್ಯ ಮಧ್ಯಮ ವರ್ಗದ ಹುಡುಗ(ಶಾನನ್)ನ ಮುಗ್ಧತೆ ಮತ್ತು ತೀರಾ ವಿರಳ ಎನ್ನುವಂತಹ ಗೆಳೆತನವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಸ್ನೇಹಕ್ಕೆ, ಮಾನವೀಯತೆಗೆ ಜಾತಿ, ಧರ್ಮ, ಹಣ, ಅಂತಸ್ತಿನ ಅಡ್ಡಿಯಿಲ್ಲ ಎನ್ನುವುದನ್ನು ಈ ಕಿರು ಚಿತ್ರ ಮತ್ತೇ ಮತ್ತೇ ಗಟ್ಟಿಯಾಗಿ ಹೇಳುವಂತಿದೆ. ಈ ಜಗತ್ತಿನಲ್ಲಿ ನಮಗೆ ಹತ್ತಿರವಾದವರು ಎಷ್ಟೇ ಜನ ಇದ್ದರೂ ಕೆಲವೊಬ್ಬರು ಮಾತ್ರ ಮರೆಯಲಾರದಷ್ಟು ಹತ್ತಿರವಾಗುತ್ತಾರೆ. ಬಹುಶಃ ಇಂತಹ ಮನಸ್ಥಿತಿ ಹೆಚ್ಚಾಗಿ ಮಕ್ಕಳಲ್ಲಿ ಮಾತ್ರ ಮೂಡಿಬರಲು ಸಾಧ್ಯ ಎನ್ನೋದು ಕಿರುಚಿತ್ರ ಹೇಳುತ್ತಿರುವ ಮಾತು. ಚಿತ್ರದಲ್ಲಿ ಬಿಜಾಪುರದ ಪ್ರಸ್ತುತ ಮಂಗಳೂರಿನಲ್ಲಿ ಹೈಸ್ಕೂಲ್ ಓದುತ್ತಿರುವ ಬಸಪ್ಪ, ಅತ್ತಾವರದ ಶಾನನ್ ವಿದ್ಯಾರ್ಥಿಗಳಾದ ಆರನ್ ಮತ್ತು ಅನುಷ್, ಚಂದ್ರಹಾಸ್,ಲತಾ, ನಿತಿನ್ ನಟಿಸಿದ್ದಾರೆ. ಚಿತ್ರವನ್ನು ಟ್ರೈಬಲ್ ಇಮ್ಯಾಜಿನೇಶನ್ ಫಿಲಂಸ್ ನಿರ್ಮಾಣ ಮಾಡಿದೆ. ಕ್ಯಾಮೆರಾದಲ್ಲಿ ಆರ್.ಕೆ .ಮಂಗಳೂರು, ಸಂಗೀತದಲ್ಲಿ ಪುಷ್ಪರಾಜ್ . ಆರ್ .ಎಸ್, ಕಲಾ ನಿರ್ದೇಶನದಲ್ಲಿ ವಿಕಾಸ್ ಮತ್ತು ಮೊನೀಶ್ ಶೆಟ್ಟಿ ಹಾಗೂ ಪ್ರಾಜೆಕ್ಟ್ ಅಂಡ್ ಟೆಕ್ನಿಕಲ್ ಹೆಡ್ಗಳಾಗಿ ಪ್ರದೀಪ್ ರಾಯ್ ,ಸಂತೋಷ್ ಶೆಟ್ಟಿ , ಪುಷ್ಪರಾಜ್ .ಆರ್.ಎಸ್ ಹಾಗೂ ಕಥೆ ,ಚಿತ್ರಕಥೆ ,ನಿರ್ದೇಶನದಲ್ಲಿ ನಾಗೇಶ್ ಪುತ್ತೂರು ದುಡಿದಿದ್ದಾರೆ.
ನಾಗೇಶ್ ಎನ್ನುವ ಪ್ರತಿಭಾವಂತ:
ಮಂಗಳೂರಿನ ಎಂಜಿ ರಸ್ತೆಯಲ್ಲಿರುವ ಟ್ರೈಬಲ್ ಟ್ಯಾಟೂವಿನಲ್ಲಿ ದುಡಿಯುತ್ತಿರುವ ನಾಗೇಶ್ ಪುತ್ತೂರು ಪ್ರತಿಭಾವಂತ ಹುಡುಗ. ಟ್ಯಾಟೂ ಸೇರಿದಂತೆ ೩ಡಿಯಲ್ಲಿ ವಿಶೇಷ ಪರಿಣತಿಯನ್ನು ಪಡೆದಿರುವ ನಾಗೇಶ್ ಈ ಹಿಂದೆ ಕೂಡ ಇಂತಹ ಕಿರುಚಿತ್ರಗಳ ಹಾಗೂ ಚಿತ್ರಗಳ ನಿರ್ಮಾಣದಲ್ಲಿ ದುಡಿದವರು. ತಮ್ಮ ಸ್ನೇಹಿತರ ಬೆಂಬಲದಿಂದ ಕಡಿಮೆ ಖರ್ಚಿನಲ್ಲಿ ‘ಲಿಟಲ್ ಹಾರ್ಟ್’ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯ ಅಂಗವಾಗಿ,ವಿಭಾ ಚಾರಿಟೇಬಲ್ ಟ್ರಸ್ಟ್ , ಡ್ಯುಯಲ್ ಥಾಟ್ಸ್ ನ ಸಹಯೋಗದೊಂದಿಗೆ ನಡೆದ ‘ಕಿರುಚಿತ್ರ ಸ್ಪರ್ಧೆ’ಯಲ್ಲಿ ‘ಲಿಟಲ್ ಹಾರ್ಟ್’ ಕಿರುಚಿತ್ರ ಮಕ್ಕಳಿಗಾಗಿ ರಚಿಸಲಾದ ಅತ್ಯುತ್ತಮ ಕಿರುಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಬಹುಮಾನ ಲಭಿಸಿದೆ. ೫೦ ಸಾವಿರಕ್ಕೂ ಅಧಿಕ ಎಂಟ್ರಿಗಳ ನಡುವೆ ಮೊದಲ ಸುತ್ತಿನಲ್ಲಿ ೪೩ ಹಾಗೂ ಎರಡನೇ ಸುತ್ತಿನಲ್ಲಿ ೧೦ ಆಯ್ಕೆಗಳ ಜತೆಯಲ್ಲಿ ಲಿಟಲ್ ಹಾರ್ಟ್ ವಿಶೇಷ ಬಹುಮಾನ ಪಡೆದಿದೆ. ಟೋಟಲಿ ಕಡಿಮೆ ಖರ್ಚಿನಲ್ಲೂ ಸಿನಿಮಾ ಮಾಡಿ ತೋರಿಸಬಹುದು ಎನ್ನುವುದಕ್ಕೆ ಈ ಹುಡುಗರೇ ದೊಡ್ಡ ಸ್ಯಾಂಪಲ್.
...
Tuesday, January 22, 2013
ಟ್ವಿಟ್ಟರ್ ಹುಡುಗ ಜಸ್ಟಿನ್ !
ಅಮೆರಿಕದ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ ‘ಮೈ ವಲ್ಡ್ ’ ಸಂಗೀತ ಆಲ್ಬಂವಂತೂ ಜಸ್ಟಿನ್ ಎನ್ನುವ ಪೋರನನ್ನು ಪಾಪ್ ಲೋಕದ ಧ್ರುವ ತಾರೆಯನ್ನಾಗಿ ಮಾಡಿತು. ಅಂದಹಾಗೆ ಜಸ್ಟಿನ್ ಈಗಷ್ಟೇ ೧೮ರ ಅಸುಪಾಸಿನಲ್ಲಿರುವ ಹುಡುಗ. ಆದರೆ ಆತನ ಫಾಲೋ ಗ್ರೂಫ್ ನೋಡಿದರೆ ದಂಗು ಮೂಡುತ್ತದೆ.
ಸ್ಟೀವನ್ ರೇಗೊ, ದಾರಂದಕುಕ್ಕು
ಪಾಪ್ ಲೋಕದಲ್ಲಿ ಜಸ್ಟಿನ್ ಬೀಬರ್ ಹೆಸರು ತೀರಾ ಪರಿಚಿತ. ಆತ ಪಾಪ್ ಲೋಕದಲ್ಲಿ ಮಾಡಿದ ಕೆಲಸಗಳೆಲ್ಲವೂ ಸಿಕ್ಕಾಪಟ್ಟೆ ಹಿಟ್ ಮೇಲೆ ಹಿಟ್. ಅದರಲ್ಲೂ ಅಮೆರಿಕದ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ ‘ಮೈ ವಲ್ಡ್ ’ ಸಂಗೀತ ಆಲ್ಬಂವಂತೂ ಜಸ್ಟಿನ್ ಎನ್ನುವ ಪೋರನನ್ನು ಪಾಪ್ ಲೋಕದ ಧ್ರುವ ತಾರೆಯನ್ನಾಗಿ ಮಾಡಿತು. ಅಂದಹಾಗೆ ಜಸ್ಟಿನ್ ಈಗಷ್ಟೇ ೧೮ರ ಅಸುಪಾಸಿನಲ್ಲಿರುವ ಹುಡುಗ. ಆದರೆ ಆತನ ಫಾಲೋ ಗ್ರೂಫ್ ನೋಡಿದರೆ ದಂಗು ಮೂಡುತ್ತದೆ.
ಅದರಲ್ಲೂ ಸಾಮಾಜಿಕ ತಾಣಗಳಲ್ಲಿ ಒಂದಾದ ಟ್ವಿಟ್ಟರ್ ಸಾಮಾಜಿಕ ತಾಣದಲ್ಲಿ ಅವನಿಗೆ ಇರುವ ಅಭಿಮಾನಿಗಳ ಸಂಖ್ಯೆ ಎಷ್ಟು ಗೊತ್ತಾ..? ಬರೋಬ್ಬರಿ ೩೩,೩೨೬,೬೨೪. ಇದು ಟ್ವಟ್ಟಿರ್ ನಲ್ಲಿಯೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ವ್ಯಕ್ತಿ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲು ಸಾಧ್ಯವಿಲ್ಲ. ಕಾರಣ ಜಸ್ಟಿನ್ ಸಾಮಾಜಿಕ ತಾಣಗಳಲ್ಲಿ ಅತೀ ಹೆಚ್ಚು ಜನಪ್ರಿಯ ವ್ಯಕ್ತಿ.
ಆತನ ಹಾಡುಗಳು ಎಷ್ಟು ಜನಪ್ರಿಯವಾಗಿರುತ್ತದೆಯೋ ಅದೇ ರೀತಿಯಲ್ಲಿ ಆತನ ಟ್ವಿಟ್ಟ್ಗಳು ಅಷ್ಟೇ ಮಜಬೂತಾಗಿರುತ್ತದೆ. ಇದೇ ಜನಪ್ರಿಯವನ್ನೇ ಬಂಡವಾಳ ಇಟ್ಟುಕೊಂಡು ಬಂದಿರುವ ಜಸ್ಟಿನ್ ಬೀಬರ್ ‘ಬೀಲಿವ್ ಅಕೋಸ್ಟಿಕ್’ ಎನ್ನುವ ಹೊಸ ಆಲ್ಬಂವೊಂದನ್ನು ಈ ವರ್ಷ ಬಿಡುಗಡೆ ಮಾಡುವ ಸರದಿಯಲ್ಲಿ ನಿಂತಿದ್ದಾನೆ.
ಅಂದಹಾಗೆ ಇತನ ಜತೆಯಲ್ಲಿ ಟ್ವಿಟ್ಟರ್ನಲ್ಲಿ ಸ್ಪರ್ಧೆಗೆ ಬಿದ್ದಿರೋದು ಬೇರೆ ಯಾರು ಅಲ್ಲ. ಪಾಪ್ ಲೋಕದ ತಾರೆ ಲೇಡಿ ಗಾಗಾ, ಇವರ ಜತೆಗೆ ಹಾಲಿವುಡ್ ನಟಿ ಕೇಟ್ ಪೆರ್ರಿ, ಪಾಪ್ ಗಾಯಕಿ ರಿಹಾನಾ, ಬರಾಕ್ ಒಬಾಮಾ, ಬ್ರಿಟ್ನಿ ಸ್ಪಿಯರ್, ಟೇಲರ್ ಸ್ಫೀಟ್, ಶಕೀರಾ, ಕಿಮ್ ಕದರ್ಶಿಯನ್ ಎಲ್ಲರೂ ಒಂದರ ಹಿಂದೆ ಒಬ್ಬರನ್ನು ಫಾಲೋ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ.
ಯುವ ಜನತೆಗೆ ಮಾದರಿ ಜಸ್ಟಿನ್ :
ಪಾಪ್ ಲೋಕದ ಜಸ್ಟಿನ್ ಬೀಬರ್ ಒಂದು ಲೆಕ್ಕಚಾರದ ಪ್ರಕಾರ ಯೂತ್ ಬ್ರಿಗೇಡ್ ಗೆ ರೋಲ್ ಮಾಡೆಲ್. ಕಾರಣ ಅತೀ ಸಣ್ಣ ವಯಸ್ಸಿನಲ್ಲೇ ಬೀಬರ್ ಪಾಪ್ ಲೋಕದಲ್ಲಿ ಮೆರೆದಾಡಿದ್ದು ನೋಡಿದರೆ ಪಾಪ್ ಲೋಕದಲ್ಲಿದ್ದವರು ಕೂಡ ಬೀಬರ್ ಕಂಡು ಬೆರಗು ಗೊಂಡಿದ್ದರು. ೨೦೧೨ರ ಫ್ರೋಬ್ಸ್ ಮ್ಯಾಗಜೀನ್ ಕವರ್ ಪೇಜ್ನಲ್ಲಿ ಬೀಬರ್ ಚಿತ್ರ ಹಾಕಿ ವಿಶ್ವದ ಪ್ರಬಲ ವ್ಯಕ್ತಿಗಳ ಸಾಲಿನಲ್ಲಿ ತಂದು ಕೂರಿಸಲಾಯಿತು. ಬೀಬರ್ ಅಲ್ಬಂಗಳಂತೂ ಒಂದಕ್ಕಿಂತ ಒಂದು ಹಿಟ್ ಕೊಡುವ ಮೂಲಕ ಒಂದೇ ವರ್ಷದಲ್ಲಿ ೧೫ ಬಿಲಿಯನ್ ಆಲ್ಬಂಗಳನ್ನು ಬಿಕರಿ ಮಾಡುವ ಮೂಲಕ ದಾಖಲೆ ಮಾಡಿದ ಪೋರ.
ಒಂದೇ ವರ್ಷದಲ್ಲಿ ೫೫ ಮಿಲಿಯನ್ ಡಾಲರ್ ತನ್ನ ಕೆಲಸಕ್ಕೆ ಪಡೆದ ಸಾಹಸಿ ಬೀಬರ್ ಟ್ವಿಟ್ಟರ್ ಲೋಕದಲ್ಲಿ ಭಿನ್ನ ಸಾಹಸಿಗ ಅದರಲ್ಲೂ ಆತನ ಒಂದು ಟ್ವಿಟ್ ವಿಶ್ವದಲ್ಲಿಯೇ ಬಹಳ ಕೋಲಾಹಲ ಮಾಡಿತ್ತು. ಜಸ್ಟಿನ್ ಹೇಳುವಂತೆ ‘ ನೀವು ಯಾರ ಜತೆಯಲ್ಲೂ ಸೆಕ್ಸ್ ಮಾಡಲು ಇಚ್ಚಿಸುತ್ತೀರಿ ಎಂದಾದರೆ ನೀವು ಅವರನ್ನು ಪ್ರೀತಿಸುತ್ತೀರಿ ಎಂದಾರ್ಥ’ ಇದು ಟ್ವಿಟ್ ಮಾತುಗಳು ಜಸ್ಟಿನ್ ಟ್ವಿಟ್ಟರ್ ಅಕೌಂಟ್ನ್ಲಲಿ ಬೇಜಾನ್ ಕಾಣ ಸಿಗುತ್ತದೆ. ಅದಕ್ಕೂ ಮುಖ್ಯವಾಗಿ ಜಸ್ಟಿನ್ ಬೀಬರ್ ತನ್ನ ಟ್ವಿಟ್ ಗಳ ಮೂಲಕ ಹರೆಯದವರಿಗೂ ಇಷ್ಟವಾಗುತ್ತಾನೆ.
...
ಚಿತ್ರ: ಜಸ್ಟಿನ್ ಬೀಬರ್
.......
(vk lvk published dis article on 24.1.2013)
Sunday, January 20, 2013
ಬಾಲಿವುಡ್ನ ವಿವೇಕ ಸ್ವಾಮಿ !
ಭಕ್ತಿಯ ಭಾವದ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂಚೂರು ಭಿನ್ನವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ವಿವೇಕ್ಗೆ ದೇವರ ಮೇಲೆ ಅಪಾರ ನಂಬಿಕೆ. ಯಾವುದೇ ಕೆಲಸಗಳಲ್ಲೂ ವಿವೇಕ್ ದೇವರನ್ನು ನಂಬಿಕೆ ಇಟ್ಟುಕೊಂಡೇ ಮುಂದುವರಿಯುತ್ತಾರೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಎಂದಾಕ್ಷಣ ಇಲ್ಲಿ ನಂಬಿಕೆ ಎನ್ನುವ ಪದಕ್ಕೆ ಜಾಸ್ತಿ ಅರ್ಥ ಇರುತ್ತದೆ ಎನ್ನೋದು ಬಾಲಿವುಡ್ ಪಂಡಿತರ ಮಾತು. ಇದೇ ನಂಬಿಕೆಯ ಮೇಲೆಯೇ ಬಾಲಿವುಡ್ನಲ್ಲಿ ಚಿತ್ರಗಳ ನಿರ್ಮಾಣ, ವಿತರಣೆ, ಸೋಲು- ಗೆಲುವು ಎಲ್ಲವೂ ಲೆಕ್ಕಚಾರಗಳು ನಡೆಯುತ್ತದೆ. ಈ ನಂಬಿಕೆಯ ಜತೆಯಲ್ಲಿ ಬಾಲಿವುಡ್ ನಟ- ನಟಿಯರಿಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ಮುಂಬಯಿಯ ಗಣೇಶೋತ್ಸವದಲ್ಲಿ ಬಾಲಿವುಡ್ ನಟ-ನಟಿಯರು ಹಮ್ಮಿಕೊಳ್ಳುವ ಗಣಪತಿ ಹಬ್ಬದ ಸಂಭ್ರಮ ಕಳೆಕಟ್ಟುತ್ತದೆ.
ಆದರೆ ಇಂತಹ ಭಕ್ತಿಯ ಭಾವದ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂಚೂರು ಭಿನ್ನವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ವಿವೇಕ್ಗೆ ದೇವರ ಮೇಲೆ ಅಪಾರ ನಂಬಿಕೆ. ಯಾವುದೇ ಕೆಲಸಗಳಲ್ಲೂ ವಿವೇಕ್ ದೇವರನ್ನು ನಂಬಿಕೆ ಇಟ್ಟುಕೊಂಡೇ ಮುಂದುವರಿಯುತ್ತಾರೆ. ಅದರಲ್ಲೂ ದೇಶದಲ್ಲಿರುವ ಎಲ್ಲ ಪುಣ್ಯಕ್ಷೇತ್ರಗಳಿಗೆ ವಿವೇಕ್ ಹೋಗಿ ಬಂದಿದ್ದಾರೆ. ಇಷ್ಟರಲ್ಲೂ ಕೇರಳದಲ್ಲಿರುವ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಎಂದರೆ ವಿವೇಕ್ಗೆ ಒಂಚೂರು ಭಕ್ತಿ ಜಾಸ್ತಿ. ಇದೇ ಕಾರಣದಿಂದ ವಿವೇಕ್ ಒಬೆರಾಯ್ ತಪ್ಪದೇ ಕಳೆದ ೧೨ ವರ್ಷಗಳಿಂದ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.
ಈ ಬಾರಿಯ ವಿವೇಕ ದರ್ಶನ ರಹಸ್ಯ ಏನೂ:
ತೀರಾ ಇತ್ತೀಚೆಗೆ ಮುಂಬಯಿಯಲ್ಲಿ ವಿವೇಕ್ ಸಹೋದರಿ ಮೇಘನಾ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ ಮತ್ತೊಂದೆಡೆ ಫೆಬ್ರವರಿ ಮಧ್ಯಭಾಗದಲ್ಲಿ ವಿವೇಕ್ ಪತ್ನಿ ಪ್ರಿಯಾಂಕಾ ಕೂಡ ಡೆಲಿವರಿ ಡೇಟ್ ಗಳು ಸನಿಹಕ್ಕೆ ಬಂದು ನಿಂತಿದೆ. ಪ್ರಿಯಾಂಕಾ ಹಾಗೂ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲು ವಿವೇಕ್ ಈ ಬಾರಿ ಶಬರಿಮಲೆಯ ಆಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ ಎನ್ನೋದು ಸಿಕ್ರೇಟ್ ಮಾತು.
ಇತ್ತಕಡೆ ಈ ಕುರಿತು ವಿವೇಕ್ ಒಬೆರಾಯ್ ಮಾತ್ರ ಯಾವುದೇ ಮಾತಿಗೆ ತಲೆಯಾಡಿಸುತ್ತಿಲ್ಲ. ದೇವರ ದರ್ಶನವೇ ತನ್ನ ಮೂಲ ಪ್ರಯಾಣದ ಉದ್ದೇಶ . ಈ ಕಾರಣದಿಂದ ನನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಶಬರಿಮಲೆಯ ಯಾತ್ರೆ ಕೈಗೊಳ್ಳುತ್ತಿದ್ದೇನೆ ಎಂದು ವಿವೇಕ್ ಒಬೆರಾಯ್ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ.
ಬಾಲಿವುಡ್ ನಟ ವಿವೇಕ್ ಒಬೆರಾಯ್ ಈ ಬಾರಿ ೧೩ ವರ್ಷನೇ ಆಯ್ಯಪ್ಪ ಸ್ವಾಮಿಯ ಭಕ್ತನಾಗಿ ಮಲೆ ಕಡೆಗೆ ಹೋಗಿದ್ದರು. ಅಂದಹಾಗೆ ಅವರು ಪ್ರತಿ ಬಾರಿಯೂ ಮಕರ ಸಂಕ್ರಾಂತಿ ಸಮಯದಲ್ಲಿಯೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ೪೧ ದಿನಗಳ ಕಾಲ ಮಾಲೆ ಧರಿಸುವ ವಿವೇಕ್ ಒಬೆರಾಯ್ ಅಯ್ಯಪ್ಪ ಭಕ್ತನೊಬ್ಬ ಯಾವ ರೀತಿಯ ಕಟ್ಟು ನಿಟ್ಟು ಪಾಲಿಸುತ್ತಾರೋ ಅಷ್ಟೇ ಕಟ್ಟುನಿಟ್ಟಿನ ಬದುಕಿಗೆ ವಿವೇಕ್ ಶರಣಾಗುತ್ತಾರೆ.
ಶಬರಿಮಲೆಯ ಕುರಿತು ವಿವೇಕ್ ಒಬೆರಾಯ್ ಈ ರೀತಿ ಹೇಳುತ್ತಾರೆ : ಶಬರಿಮಲೆಯ ಯಾತ್ರೆ ಒಂದು ಮನಸ್ಸಿಗೆ ತೃಪ್ತಿ ನೀಡುವ ಕೇಂದ್ರ. ಮನಸ್ಸೊಂದು ಮೊಬೈಲ್ ಬ್ಯಾಟರಿಯಂತಿರುತ್ತದೆ. ಶಬರಿಮಲೆ ಚಾರ್ಜ್ ಮಾಡುವ ಸ್ಟೇಷನ್ನಂತಿರುತ್ತದೆ. ಇಂತಹ ಚಾರ್ಜಿಂಗ್ ಸ್ಟೇಷನ್ನಿಂದ ನನ್ನ ಮನಸ್ಸು ಶಾಂತಿಯ ಕಡೆ ಕೇಂದ್ರೀಕೃತವಾಗುತ್ತದೆ. ಧನಾತ್ಮಕ ಚಿಂತನೆಗಳನ್ನು ಜಾಸ್ತಿಯಾಗಿ ಚಿಂತಿಸುವಂತೆ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಈ ವರ್ಷ ಇಡೀ ಯಶಸ್ಸು ನನ್ನ ಕೈಯಲ್ಲಿರುತ್ತದೆ ಎನ್ನುವ ನಂಬಿಕೆ ಬೆಳೆಯುತ್ತದೆ. ಕಪ್ಪು ಬಟ್ಟೆ ಧರಿಸಿಕೊಂಡು ಅಯ್ಯಪ್ಪ ಸ್ವಾಮಿಯ ಯಾತ್ರೆ ಕೈಗೊಳ್ಳುವ ಪರಂಪರೆ ವಿವೇಕ್ ಮುಂದೇನೂ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನೋದು ಅವರ ಮಾತು.
(vk lvk published dis articl on 21.01.2013)
ಶರ್ಲಿನ್ ಬೋಲ್ಡ್ ಸೂತ್ರ !
*ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಲ್ಲಿ ನಗ್ನತೆಗೆ ವಿಶೇಷ ಮನ್ನಣೆ ಇದೆ. ಮಲ್ಲಿಕಾ ಶೆರವಾತ್, ಪೂನಂ ಪಾಂಡೆ, ರಾಖಿ ಸಾವಂತ್ ಎನ್ನುವ ಬಿಚ್ಚು ನಟಿಯರ ಮುಂದೆ ಶರ್ಲಿನ್ ಎನ್ನುವ ಹಾಟ್ ಹುಡುಗಿ ಬಂದು ನಿಂತಿದ್ದಾಳೆ. ಅದು ಕೂಡ ಹೇಗೆ ಅಂತೀರಾ ಟೋಟಲಿ ನೇಕೇಡ್ !
ನಗ್ನತೆ ಎನ್ನೋದು ಸಿನಿಮಾ ನಗರಿಗೆ ಹೊಸ ವ್ಯಾಖೆಯಲ್ಲ. ಸಿನಿಮಾದ ಜತೆಯಲ್ಲಿ ನಗ್ನತೆಗೂ ಗಟ್ಟಿಯಾದ ತಳಹದಿ ಇದೆ. ಸಿನಿಮಾದ ಜತೆಯಲ್ಲಿ ಮಸಾಲೆ ಹಾಗೂ ಕೊಂಚ ನಗ್ನತೆ ಎನ್ನುವ ಎರಡು ಐಟಂಗಳು ಜತೆಗೂಡಿದಾಗ ಸಿನಿಮಾ ಒಂದು ರೀತಿಯ ಪ್ರಚಾರಕ್ಕೆ ಬಂದು ಮುಟ್ಟುತ್ತದೆ ಎನ್ನೋದು ಸಿನಿಮಾ ಮಂದಿಯ ಅನುಭವ ನುಡಿಗಟ್ಟು. ಅದರಲ್ಲೂ ಬಾಲಿವುಡ್ ನಲ್ಲಿ ನಗ್ನತೆಗೆ ವಿಶೇಷ ಮನ್ನಣೆ ಇದೆ.
ಮಲ್ಲಿಕಾ ಶೆರವಾತ್, ಪೂನಂ ಪಾಂಡೆ, ರಾಖಿ ಸಾವಂತ್ ಎನ್ನುವ ಬಿಚ್ಚು ನಟಿಯರ ಮುಂದೆ ಶರ್ಲಿನ್ ಎನ್ನುವ ಹಾಟ್ ಹುಡುಗಿ ಬಂದು ನಿಂತಿದ್ದಾಳೆ. ಅದು ಕೂಡ ಹೇಗೆ ಅಂತೀರಾ ಟೋಟಲಿ ನೇಕೇಡ್ ! ಹೌದು. ಶರ್ಲಿನ್ ಚೋಪ್ರಾ ಹೆಸರಿನ ಜತೆಯಲ್ಲಿಯೇ ಹಾಟ್ನೆಸ್ ಸೇರಿಕೊಳ್ಳುತ್ತದೆ. ಬಾಲಿವುಡ್ ಪಡಸಾಲೆಯಲ್ಲಿ ಏನೋ ನಟಿಯಾಗಬೇಕು ಎನ್ನುವ ಕನಸ್ಸುಗಳನ್ನು ಕಟ್ಟಿಕೊಂಡು ಬಂದ ಹುಡುಗಿಯೊಬ್ಬಳು ಮುಂಬಯಿ ಗಲ್ಲಿಯಲ್ಲಿಯೇ ಬೆತ್ತಲಾಗಿ ಕಾಣಿಸಿಕೊಂಡಳು.
ಸಿನಿಮಾಗಳಲ್ಲಿ ಅವಕಾಶ ಇಲ್ಲ ಎನ್ನುವ ನೇಮ್ ಪ್ಲೇಟ್ ನೋಡಿದ ಹುಡುಗಿ ಹಾಲಿವುಡ್ ಮಟ್ಟದಲ್ಲೂ ಬಿಚ್ಚಾಟದಲ್ಲಿ ಯಾರಿಗೂ ಕಮ್ಮಿಯಿಲ್ಲ ಎನ್ನುವ ಪುರಾವೆ ಈ ಹಿಂದೆ ಕೂಡ ಹೊರ ಬಂದಿತ್ತು. ಪದೇ ಪದೇ ಬಟ್ಟೆ ಬಿಚ್ಚು ಖಯಾಲಿಯ ಶರ್ಲಿನ್ ಚೋಪ್ರಾ ಈಗ ಕಾಮಸೂತ್ರ ೩ಡಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಹಾಟ್ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಶೆರ್ಲಿನ್ ಸಂಪೂರ್ಣ ನಗ್ನವಾಗಿದ್ದು, ತಮ್ಮ ಚಿತ್ರದ ಗುಟ್ಟುಗಳನ್ನು ಒಂದೊಂದೇ ಬಿಚ್ಚಿಟ್ಟಿದ್ದಾರೆ. ಚಿತ್ರದ ಹೆಸರೇ ಕಾಮಸೂತ್ರ. ಪ್ರೇಕ್ಷಕರು ಇನ್ನೇನು ನಿರೀಕ್ಷಿಸಲು ಸಾಧ್ಯ. ಅವರ ನಿರೀಕ್ಷೆಗೆ ತಕ್ಕಂತೆ ಶೆರ್ಲಿನ್ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ.
ರುಪೇಶ್ ಪೌಲ್ ಎಂಬ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಕ್ಯಾನೆ ಚಿತ್ರೋತ್ಸವದಲ್ಲಿ ಈ ಚಿತ್ರದ ಬಗ್ಗೆ ಈಗಾಗಲೇ ಪ್ರಕಟಿಸಲಾಗಿದೆ. ಶೆರ್ಲಿನ್ ಚೋಪ್ರಾ ಜೊತೆ ಬಾಲಿವುಡ್ ನ ಇನ್ನಿಬ್ಬರು ತಾರೆಗಳು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ. ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ ‘ಕಾಮಸೂತ್ರ’ ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.
ಶರ್ಲಿನ್ ಯಾಕೆ ಬಿಚ್ಚುತ್ತಾರೆ ಗೊತ್ತಾ? :
ಹಾಟ್ ಬೆಡಗಿಯರಾದ ಪೂನಂ ಪಾಂಡೆ ಹಾಗೂ ವೀಣಾ ಮಲಿಕ್ ಪ್ರವರ್ಧಮಾನಕ್ಕೆ ಬಂದ ಮೇಲಂತೂ ಶರ್ಲಿನ್ರನ್ನು ಮೂಸಿ ನೋಡುವವರೇ ಇಲ್ಲದಂತಾಗಿತ್ತು. ಇದ್ದಕ್ಕಿದ್ದಂತೆ ಈಕೆ ಮೈಮೇಲೆ ರತಿಮನ್ಮಥರನ್ನು ಆವಾಹಿಸಿಕೊಂಡಂತೆ ಆಡುತ್ತಿದ್ದಾರೆ ಶೆರ್ಲಿನ್ ಅಂತಾರಾಷ್ಟ್ರೀಯ ಪುರುಷರ ನಿಯತಕಾಲಿಕೆ ಪ್ಲೇಬಾಯ್ ಗೆ ಹುಟ್ಟುಡುಗೆಯ ಫೋಟೋಗಳನ್ನು ನೀಡುವ ಮೂಲಕ ಪಡ್ಡೆಗಳ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ.
ಇದುವರೆಗೂ ಬಹಳಷ್ಟು ಬಾಲಿವುಡ್ ತಾರೆಗಳು ಪ್ಲೇಬಾಯ್ ಮುಖಪುಟ ಅಲಂಕರಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಆದರೆ ಶೆರ್ಲಿನ್ ವಿಶೇಷ ಎಂದರೆ ಪ್ಲೇಬಾಯ್ ಮುಖಪುಟ ಅಲಂಕರಿಸುತ್ತಿರುವ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿರುವುದು.
ಪ್ಲೇಬಾಯ್ ನಿಯತಕಾಲಿಕೆಯಲ್ಲಿ ತಮ್ಮ ದೇಹ ಸೌಂದರ್ವವನ್ನು ಪ್ರದರ್ಶಿಸಬೇಕು ಎಂದು ಬಹಳಷ್ಟು ಮಂದಿ ಮಹಿಳೆಯರು ಕನಸು ಕಾಣುತ್ತಲೇ ಇದ್ದಾರೆ. ಆದರೆ ಎಲ್ಲರ ಕನಸು ನೆರವೇರಲ್ಲ. ಬಟ್ಟೆ ಬಿಚ್ಚುವವರನ್ನೆಲ್ಲಾ ಪ್ಲೇಬಾಯ್ ಪ್ರದರ್ಶಿಸುವುದೂ ಇಲ್ಲ. ಇದುವರೆಗೂ ತನ್ನನ್ನು ತಾನು ಪ್ಲೇಬಾಯ್ ಗರ್ಲ್ ಎಂದೇ ಶೆರ್ಲಿನ್ ಬಿಂಬಿಸಿಕೊಂಡಿದ್ದರು.
ಸೆಕ್ಸ್ ನನಗೆ ಬಹಳ ಇಷ್ಟ:
ಒಂದು ಕಾಲದಲ್ಲಿ ತಾನು ಹಲವರೊಂದಿಗೆ ಹಾಸಿಗೆ ಹಂಚಿಕೊಂಡಿದ್ದೇನೆ. ಆದರೆ ಅದು ದುಡ್ಡಿಗಾಗಿ ಎಂಬ ಸತ್ಯವನ್ನು ಹೇಳಿಕೊಳ್ಳುವ ಮೂಲಕ ಶರ್ಲಿನ್ ಚೋಪ್ರಾ ಬಿರುಗಾಳಿ ಎಬ್ಬಿಸಿದ್ದರು. ಈ ರೀತಿ ಹೇಳಿಕೊಳ್ಳುತ್ತಿರುವುದು ಯಾವುದೇ ಸಾರ್ವಜನಿಕ ಅನುಕಂಪಕ್ಕಾಗಲಿ ಅಥವಾ ಯಾರನ್ನಾದರೂ ಹುಬ್ಬೇರಿಸುವುದಾಗಲಿ ಅಥವಾ ಕೆಟ್ಟ ಹುಡುಗಿ ಒಳ್ಳೆಯಳಾದಳು ಎನ್ನಿಸಿಕೊಳ್ಳಲಾಗಲಿ ಅಲ್ಲವೇ ಅಲ್ಲ. ಕೆಲವೊಂದು ವಿಷಯಗಳನ್ನು ಹೇಳಬೇಕಾಗಿತ್ತು ಅಷ್ಟೇ. ಅದಕ್ಕಾಗಿ ಹೇಳುತ್ತಿದ್ದೇನೆ ಎನ್ನುವ ಮೂಲಕ ತಮ್ಮ ಧೈರ್ಯ ಮೆರೆದಿದ್ದಳು.
ತಾನು ಬೋಲ್ಡ್ ಆಗಿ ಇರಲು ಇಷ್ಟಪಡುತ್ತೇನೆ. ಕಾಮಕೆರಳಿಸುವ ಛಾಯಾಚಿತ್ರಗಳಲ್ಲಿ ಹಾಗೂ ವಿಡಿಯೋಗಳಲ್ಲಿ ಕಾಣಿಸಿಕೊಳ್ಳಲು ಆನಂದಿಸುತ್ತೇನೆ. ಚುಡಾಯಿಸುವುದೆಂದರೆ ನಂಗಿಷ್ಟ. ಒಂದು ವೇಳೆ ತಡೆದುಕೊಳ್ಳಲಾರದಷ್ಟು ಕಾಮ ಬಯಕೆ ಅಥವಾ ಆಕರ್ಷಣೆ ಉಂಟಾದರೆ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತೇನೆ. ಆದರೆ ದುಡ್ಡಿಗಾಗಿ ಮಾತ್ರ ಇಲ್ಲ ಎಂದು ಬಿಚ್ಚು ಮಾತನಾಡಿ ಶರ್ಲಿನ್ ಪಡ್ಡೆ ಹೈಕಳನ್ನು ಒದ್ದೆ ಮಾಡಿದ್ದರು. ಇಂತಹ ಶರ್ಲಿನ್ ಈಗ ಕಾಮಸೂತ್ರದಲ್ಲಿ ಬಂದಿದ್ದಾರೆ. ಮುಂದಿನ ಶರ್ಲಿನ್ ಅವತಾರ ಕಾದು ನೋಡಬೇಕು.
Saturday, January 19, 2013
ಸ್ಟೀವನ್ ರೇಗೊಗೆ ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ
ಮಂಗಳೂರಿನ ಮೆಗಾ ಮೀಡಿಯಾ ನ್ಯೂಸ್ ಇದರ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಹಬ್ಬದಲ್ಲಿ ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿಜಯ ಕರ್ನಾಟಕದ ವರದಿಗಾರ ಸ್ಟೀವನ್ ರೇಗೊ ದಾರಂದಕುಕ್ಕು ಅವರಿಗೆ ನೀಡಲಾಯಿತು. ಈ ಸಂದರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕರಾವಳಿ ಕಾಲೇಜುಗಳ ಅಧ್ಯಕ್ಷ ಗಣೇಶ್ ರಾವ್, ಕರ್ಣಾಟಕ ಬ್ಯಾಂಕ್ನ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ರಾವ್, ಮೆಗಾ ಮೀಡಿಯಾದ ಆಡಳಿತ ನಿರ್ದೇಶಕ ಶಿವಪ್ರಸಾದ್ ನನಾ ಅತಿಥಿಗಳು ಉಪಸ್ಥಿತರಿದ್ದರು.
Sunday, January 13, 2013
ಸ್ಟೀವನ್ ರೇಗೊಗೆ ಪತ್ರಿಕೋದ್ಯಮ ಪ್ರಶಸ್ತಿ
ಮಂಗಳೂರು: ಮೆಗಾ ಮೀಡಿಯಾ ನ್ಯೂಸ್ ತನ್ನ ಹತ್ತನೇ ವರ್ಷದ ಸವಿನೆನಪಿಗಾಗಿ ನೀಡುವ ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಗೆ ಮಂಗಳೂರು ವಿಜಯ ಕರ್ನಾಟಕ ದಿನ ಪತ್ರಿಕೆ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ ದಾರಂದಕುಕ್ಕು ಆಯ್ಕೆಯಾಗಿದ್ದಾರೆ.
ವಿಜಯ ಕರ್ನಾಟಕದ ನಮ್ಮ ಕರಾವಳಿಯಲ್ಲಿ ಬಂದ ‘ಕತ್ತಲಲ್ಲಿ ಮೂಡಿಬಂತು ಬೆಳಕು !’ ಲೇಖನ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ಐದುಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಸನ್ಮಾನಿತ ಗೌರವಾದರಗಳನ್ನೊಳಗೊಂಡಿದೆ. ಸ್ಟೀವನ್ ರೇಗೊ ಅವರ ಗ್ರಾಮೀಣ ಪತ್ರಿಕೋದ್ಯಮಕ್ಕೆ ಈ ಹಿಂದೆ ಕಿನ್ನಿಗೋಳಿಯ ಕಡಂದಲೆ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತರ ಪತ್ರಕರ್ತರ ಸಂಘದ ಪ.ಗೋ ಪ್ರಶಸ್ತಿಗಳು ಸಿಕ್ಕಿದೆ. ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ಅವರ ಸುಪತ್ರ.
ಕುಡ್ಲ ಹುಡುಗರ ‘ಸಾದಿ’
ಸ್ಟೀವನ್ ರೇಗೊ, ದಾರಂದಕುಕ್ಕು
ಕುಡ್ಲದ ಹುಡುಗರು ಏನಾದರೂ ಮಾಡಿ ಯುವಜನತೆಯನ್ನು ಹಾದಿ ತರುವ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಪುಟ್ಟ ಟೆಲಿಚಿತ್ರದ ಮೂಲಕ ಜೋರಾಗಿ ಸೌಂಡ್ ಮಾಡಿ ಯುವಜನತೆಯನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸಿದ್ದಾರೆ. ಸಾದಿಯ ಹಾದಿ ಹೇಗಿದೆ ನೋಡಿ...
‘ಸಾದಿ’ ಇದು ಸಾವಿನ ಕಡೆ ತೋರಿಸುವ ಹಾದಿ ಎನ್ನುವ ಟ್ಯಾಗ್ಲೈನ್ನಲ್ಲೇ ಕುಡ್ಲದ ಹುಡುಗರು ಕ್ಲಿಕ್ ಆಗಿದ್ದಾರೆ. ಕರಾವಳಿಯಲ್ಲಿ ಮಾತ್ರವಲ್ಲ ಇಡೀ ದೇಶದ ಯುವ ಪೀಳಿಗೆಯ ಕುರಿತು ಕುಡ್ಲದ ಹುಡುಗರು ಸಿರೀಯಸ್ ಆಗಿ ಸ್ಟಡಿ ಮಾಡಿದ್ದಾರೆ. ಎಲ್ಲರೂ ಅಧ್ಯಯನ ಮಾಡುವುದರಲ್ಲಿಯೇ ಕಾಲಕಳೆಯುವ ಹೊತ್ತಿಗೆ ಕುಡ್ಲದ ಹುಡುಗರು ಏನಾದರೂ ಮಾಡಿ ಯುವಜನತೆಯನ್ನು ಹಾದಿ ತರುವ ಕೆಲಸ ಮಾಡಿದ್ದಾರೆ. ತಮ್ಮದೇ ಪುಟ್ಟ ಟೆಲಿಚಿತ್ರದ ಮೂಲಕ ಜೋರಾಗಿ ಸೌಂಡ್ ಮಾಡಿ ಯುವಜನತೆಯನ್ನು ನಿದ್ದೆಯಿಂದ ಎಬ್ಬಿಸಿ ಕೂರಿಸಿದ್ದಾರೆ.
ಕಾಲೇಜಿನ ಮೆಟ್ಟಿಲಿಗೆ ಹೆಜ್ಜೆ ಹಾಕುತ್ತಿದ್ದಂತೆ ಯುವಜನತೆಯ ಹಾದಿ ತಪ್ಪುತ್ತಿದೆ ಎನ್ನುವ ಮಾತುಗಳೇ ಈಗ ಕೇಳಿಸಿಕೊಳ್ಳಲು ಆರಂಭವಾಗಿದೆ. ಮಾದಕ ದ್ರವ್ಯಗಳ ಸೇವನೆಯಿಂದ ಭವ್ಯ ಭವಿಷ್ಯದ ಪ್ರಜೆಗಳಾಗಬೇಕಾದವರೂ ಕೂಡ ಆಸ್ಪತ್ರೆಯಲ್ಲಿ ಬಂಧಿಯಾಗಿ ಚಿಕಿತ್ಸೆ ಪಡೆಯುವ ಹಂತಕ್ಕೂ ಬಂದು ತಲುಪಿದ್ದಾರೆ. ಅವರನ್ನು ಒಂದು ಹಾದಿಗೆ ತರುವ ಕೆಲಸ ನಮ್ಮಂತಹ ಯುವಕರಿಂದ ಆದರೆ ಅದು ನಮ್ಮ ಟೆಲಿಚಿತ್ರಕ್ಕೆ ಸಿಕ್ಕ ಯಶಸ್ಸು ಎಂದು ಸಾದಿಯನ್ನು ನಿರ್ದೇಶನ ಮಾಡಿದ ಯುವಕ ನಾಗರಾಜ್ ಅಂಬರ್ ಅವರ ಮಾತು.
ನಾಗರಾಜ್ ಸಾದಿಯ ಹುಟ್ಟು ಬೆಳವಣಿಗೆಯ ಕುರಿತು ಹೇಳುವ ಮಾತು ಹೀಗಿದೆ: ಕರಾವಳಿಯಲ್ಲಿ ಬಹಳಷ್ಟು ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ನನ್ನ ಸುತ್ತಮುತ್ತ ಇಂತಹ ಯುವಕರನ್ನು ಕಣ್ಣಾರೆ ಕಂಡು ಅವರ ನೋವು ನಾನು ಅನುಭವಿಸಿದ್ದೇನೆ. ಅವರನ್ನು ಬದಲಾಯಿಸುವ ಶಕ್ತಿ ನನ್ನ ಬಳಿ ಇಲ್ಲ. ಆದರೆ ಇಂತಹ ಹೊಸ ಯುವಪೀಳಿಗೆಯಂತೂ ಮತ್ತೆ ಅಂತಹ ಚಟಕ್ಕೆ ಗುರಿಯಾಗಬಾರದು ಎನ್ನುವ ಕಾಳಜಿಯಿಂದ ಈ ಟೆಲಿಚಿತ್ರ ರೂಪುಗೊಂಡಿತು ಎನ್ನೋದು ಸಾದಿಯ ಸಿಕ್ರೇಟ್ ಮಾತು.
ಸಾದಿ ಹಾದಿಗೆ ಬಂದು ನಿಂತಿತು:
ಕುಡ್ಲದ ತುಳು ಭಾಷೆಯಲ್ಲಿ ‘ಸಾದಿ’ ಎಂದರೆ ಹಾದಿ ಎನ್ನುವ ಅರ್ಥ ಬರುತ್ತದೆ. ಕರಾವಳಿಯ ಯುವಜನತೆ ಯಾವ ಪರಿಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಾರೆ ಎನ್ನುವ ಪುಟ್ಟ ಸ್ಟ್ರೀಮ್ಲೈನ್ ಇಟ್ಟುಕೊಂಡು ಒಂದು ಗಂಟೆಯ ಟೆಲಿಚಿತ್ರವನ್ನು ಮಾಡಲಾಗಿದೆ. ಕರಾವಳಿಯಲ್ಲಿ ಆಗಾಗ ಮಾದಕ ವ್ಯವಸನಕ್ಕೆ ಬಿದ್ದು ಮೃತಪಡುವ ಯುವಜನತೆ ರಹಸ್ಯವನ್ನು ಭೇದಿಸಲು ಆರು ಯುವಕರ ಜತೆಗೆ ಪೊಲೀಸ್ ಇಲಾಖೆಯಿಂದ ನಡೆಯುವ ಕಾರ್ಯಾಚರಣೆ ಎಲ್ಲವೂ ಸಾದಿಯಲ್ಲಿರುವ ಮುಖ್ಯ ಪಾಯಿಂಟ್ಗಳು.
ಈಗಾಗಲೇ ‘ಸಾದಿ’ಯ ಪ್ರೋಮೋಗಾಗಿ ಈಗಾಗಲೇ ಕತ್ರಿನಾ...ಎನ್ನುವ ರಾಕ್ ಸಾಂಗ್ ಯೂಟ್ಯೂಬ್ ಅಂಗಳದಲ್ಲಿ ಕ್ಲಿಕ್ ಆಗಲು ಆರಂಭವಾಗಿದೆ. ಇವುಗಳ ಜತೆಯಲ್ಲಿ ಟೆಲಿಚಿತ್ರದಲ್ಲಿ ನಾಲ್ಕು ಹಾಡುಗಳನ್ನು ನಾಲ್ಕು ವಿಭಿನ್ನ ಸಂಗೀತ ನಿರ್ದೇಶಕರಾದ ಸಂದೇಶ್, ಲಾಯ್ ವೆಲೆಂಟೈನ್, ಸಂದೀಪ್ ಬಳ್ಳಾಲ್, ವಿನೋದ್ ಸುವರ್ಣರಿಂದ ಮೂಡಿ ಬಂದಿದೆ. ಇಡೀ ಟೆಲಿ ಚಿತ್ರ ತುಳು ಭಾಷೆಯಲ್ಲಿರುವುದರಿಂದ ಕರಾವಳಿಯ ಜನತೆಗೆ ಮಾತ್ರ ಸೀಮಿತವಾಗಲಿದೆ.
ಈಗಾಗಲೇ ಯುವಜನತೆಯ ಲೋಕಲ್, ಇಂಟರ್ ನ್ಯಾಷನಲ್ ಅಡ್ಡಾ ಎಂದೇ ಗುರುತಿಸಿಕೊಳ್ಳುವ ಸಾಮಾಜಿಕ ತಾಣಗಳಲ್ಲಿ ಒಂದಾದ ಯೂ ಟ್ಯೂಬ್ ನಲ್ಲಿ ಈ ಸಾದಿ ಟೆಲಿಚಿತ್ರವನ್ನು ಹಾಕುವ ಕೆಲಸ ನಡೆಯುತ್ತಿದೆ. ಈ ಮೂಲಕ ದೇಶ- ವಿದೇಶದಲ್ಲಿರುವ ಕರಾವಳಿ ಮೂಲದ ಎಲ್ಲ ಯುವಜನತೆಯನ್ನು ತಲುಪಲು ಸಾಧ್ಯವಾಗುತ್ತದೆ ಎನ್ನುವ ಇರಾದೆ ಚಿತ್ರದ ನಿರ್ದೇಶಕ ನಾಗರಾಜ್ ಅಂಬರ ಅವರದ್ದು.
ಅಂದಹಾಗೆ ಚಿತ್ರದ ಸಿನಿಮಾಟೋಗ್ರಾಫಿ ಹಾಗೂ ಎಡಿಟಿಂಗ್ ಜಾಗದಲ್ಲಿ ಸಚಿನ್ ಶೆಟ್ಟಿ, ಸಾಹಿತ್ಯದಲ್ಲಿ ನಾಗರಾಜ್, ಕಲಾನಿರ್ದೇಶಕರಾಗಿ ಶಶಿ ನಾರ್ಣಕಜೆ, ಕೋರಿಗ್ರಾಫಿಯಲ್ಲಿ ಅವಿನಾಶ್ ಬಂಗೇರಾ, ಸಾಹಸದಲ್ಲಿ ಜಿತೇಂದ್ರ ಸಿಂಗ್ ಮಣಿಪುರ, ನಿರ್ಮಾಪಕರಾಗಿ ರೀಜು, ನಾಗರಾಜ್, ಸೂರಜ್, ಶ್ರೀಕುಮಾರ್ ಕೈ ಜೋಡಿಸಿದ್ದಾರೆ. ಜ.೧೧ರಿಂದ ಯ್ಯೂ ಟೂಬ್ನಲ್ಲಿ ಚಿತ್ರದ ಪ್ರೋಮೋಗಳು ಓಡುತ್ತಿದೆ. ತುಳು ರಂಗಭೂಮಿಯ ಕಲಾವಿದ ದಿನೇಶ್ ಅತ್ತಾವರ, ಲೀಲಾಧರ ಶೆಟ್ಟಿ ಕಾಪು ಸೇರಿದಂತೆ ಕುಡ್ಲದ ಯುವಕರಾದ ನಾಗರಾಜ್, ರಾಮಪ್ರಸಾದ್, ಸುಕೇಶ್, ದೀಪಕ್, ವರುಣ್, ಸೂರಜ್, ಯಶ್ರಾಜ್, ಶಶಿ ನಾರ್ಣಕಜೆ, ಜೀವನ್, ಸಂಶುದ್ಧೀನ್, ಪ್ರಸನ್ನ ನಟಿಸಿದ್ದಾರೆ.
ಟ್ಯಾಲೆಂಟ್ ಹುಡುಗನ ದಂಡಯಾತ್ರೆ:
ಖಾಸಗಿ ರೇಡಿಯೋ ವಾಹಿನಿಯೊಂದರಲ್ಲಿ ಆರ್ಜೆ ಆಗಿರುವ ನಾಗರಾಜ್ ಅಂಬರ್ ಪ್ರತಿಭಾವಂತ ಹುಡುಗ. ಮೂಲತಃ ಕಾಸರಗೋಡಿನ ನಾಗರಾಜ್ ಡ್ಯಾನ್ಸಿಂಗ್ ನಲ್ಲಿ ಎತ್ತಿ ಕೈ. ಈಗಾಗಲೇ ಸಾವಿರಕ್ಕೂ ಅಧಿಕ ನೃತ್ಯ ಪ್ರದರ್ಶನಗಳನ್ನು ನೀಡಿರುವ ನಾಗರಾಜ್ ನಾನಾ ಖಾಸಗಿ ವಾಹಿನಿಗಳ ಡ್ಯಾನ್ಸ್ ಶೋಗಳಿಂದ ಬಹುಮಾನ ಬಾಚಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಾಗರಾಜ್ ಈಗಾಗಲೇ ‘ಭಾತ್ರತ್ವ’ ಎನ್ನುವ ಪುಟ್ಟ ಟೆಲಿ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇಂಗ್ಲೀಷ್ ನಲ್ಲಿ ‘ತ್ರೀಶೇಡ್ಸ್’ ಎನ್ನುವ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಖಾಸಗಿ ರೇಡಿಯೋ ವಾಹಿನಿಯಲ್ಲಿ ಕಾರ್ಯಕ್ರಮ ನೀಡುವ ನಾಗರಾಜ್ನ ಧ್ವನಿ ಕೇಳುವ ಅಭಿಮಾನಿಗಳ ವರ್ಗವೊಂದು ಸೃಷ್ಟಿಯಾಗಿದೆ. ಟೋಟಲಿ ಯುವಜನತೆಗಾಗಿ ಏನಾದರೂ ಮಾಡಬೇಕು ಎನ್ನುವ ಸಾಹಸದ ಕೆಲಸ ಹಿರಿಯರು ಮೆಚ್ಚಲೇ ಬೇಕು ಅಲ್ವಾ..?
......
vk lvk published dis article
......
ಬಾಲಿವುಡ್ನ ‘ಡಬ್ಬೂ ’ ಕ್ಯಾಲೆಂಡರ್
ಡಬ್ಬೂ ರತ್ನಾನಿ ಹೆಸರು ಬಾಲಿವುಡ್ ಅಂಗಳದಲ್ಲಿ ಸಾಣೇ ಕೇಳಿಸಿಕೊಳ್ಳುವ ಫ್ಯಾಶನ್ ಛಾಯಾಗ್ರಾಹಕನ ಹೆಸರು. ಮಹಾರಾಷ್ಟ್ರದ ಪುಟ್ಟ ಹಳ್ಳಿಯ ಕಡು ಬಡತನದಲ್ಲಿ ಬೆಳೆದ ಹುಡುಗ ನಂತರ ಮುಂಬಯಿಯ ಬಣ್ಣದ ಲೋಕದ ಕಣ್ಮಣಿಯಾದ ಕತೆನೇ ಕೊಂಚ ಭಿನ್ನ.
* ಸ್ಟೀವನ್ ರೇಗೊ, ದಾರಂದಕುಕ್ಕು
ಡಬ್ಬೂ ರತ್ನಾನಿ. ಇದು ಪ್ರತಿ ವರ್ಷದ ಆರಂಭದಲ್ಲಿ ಸುದ್ದಿಯಾಗುತ್ತಿರುವ ವ್ಯಕ್ತಿ. ಅಂದಹಾಗೆ ಇಡೀ ಬಾಲಿವುಡ್ನಲ್ಲಿ ಈತನ ಮಾತಿಗೆ ಒಂದು ಗತ್ತು ಇದೆ. ಅವರನ್ನು ತನ್ನ ತಾಳಕ್ಕೆ ತಕ್ಕಂತೆ ಬೆಂಡ್ ಮಾಡುವ ಧೈರ್ಯವಿದೆ. ಎಲ್ಲಕ್ಕೂ ಮುಖ್ಯವಾಗಿ ‘ಡಬ್ಬೂ ’ ಎನ್ನುವ ಮಾಸ್ಟರ್ ಫೀಸ್ ಮುಂದೆ ನಟ-ನಟಿಯರು ಸಿಕ್ಕಾಪಟ್ಟೆ ಬೋಲ್ಡ್ನೆಸ್ಗೆ ಮಾರು ಹೋಗುತ್ತಾರೆ. ಇದು ಡಬ್ಬೂ ರತ್ನಾನಿ ಎನ್ನುವ ಕ್ಯಾಮೆರಾಕಣ್ಣಿನ ಹೀರೋನ ಕತೆ. ಜತೆಗೆ ಪ್ರತಿ ವರ್ಷ ಆತ ಹೊರ ತರುವ ‘ಡಬ್ಬೂ ರತ್ನಾನಿ ಕ್ಯಾಲೆಂಡರ್’ ಎನ್ನುವ ಕನಸ್ಸಿನ ಕತೆ.
ಅಂದಹಾಗೆ ಡಬ್ಬೂ ರತ್ನಾನಿ ಹೆಸರು ಬಾಲಿವುಡ್ ಅಂಗಳದಲ್ಲಿ ಸಾಣೇ ಕೇಳಿಸಿಕೊಳ್ಳುವ ಫ್ಯಾಶನ್ ಛಾಯಾಗ್ರಾಹಕನ ಹೆಸರು. ಮಹಾರಾಷ್ಟ್ರದ ಪುಟ್ಟ ಹಳ್ಳಿಯ ಕಡು ಬಡತನದಲ್ಲಿ ಬೆಳೆದ ಹುಡುಗ ನಂತರ ಮುಂಬಯಿಯ ಬಣ್ಣದ ಲೋಕದ ಕಣ್ಮಣಿಯಾದ ಕತೆನೇ ಕೊಂಚ ಭಿನ್ನ. ೯೦ರ ದಶಕದಲ್ಲಿ ಮುಂಬಯಿಯ ಫ್ಯಾಶನ್ ಲೋಕದಲ್ಲಿ ಬಹಳ ಕೇಳಿಸಿಕೊಳ್ಳುತ್ತಿದ್ದ ಸುಮಿತ್ ಚೋಪ್ರಾ ಎನ್ನುವ ಫ್ಯಾಶನ್ ಫೋಟೋಗ್ರಾಫರ್ ನ ಹಿಂದೆ ಬಿದ್ದು ಫೋಟೋಗ್ರಾಫಿಯನ್ನು ಬಹಳ ಸಿರೀಯಸ್ ಆಗಿ ಅಧ್ಯಯನ ಮಾಡಿಕೊಂಡು ಹೊರಬಂದ ಡಬ್ಬೂ ನಂತರ ಗುರುವನ್ನು ಮೀರಿಸುವ ಶಿಷ್ಯನಾದ .
೯೪ರ ಹೊತ್ತಿಗೆ ಡಬ್ಬೂ ತನ್ನದೇ ಪುಟ್ಟ ಛಾಯಾಚಿತ್ರದ ಅಂಗಡಿ ತೆರೆದಿಟ್ಟ. ಬಾಲಿವುಡ್ ಸಿನಿಮಾಗಳ ಕಾರ್ಯಕ್ರಮಗಳಲ್ಲಿ ಡಬ್ಬೂ ರತ್ನಾನಿ ಎನ್ನುವ ಛಾಯಾಗ್ರಾಹಕನ ತಲೆ ಕಾಣಿಸಿಕೊಂಡ ನಂತರವಂತೂ ಬಾಲಿವುಡ್ ಬಣ್ಣದ ಸಿನಿಮಾಗಳಲ್ಲಿ ಡಬ್ಬೂ ಇಲ್ಲದೇ ಏನೂ ಇಲ್ಲ ಎನ್ನುವ ಮಟ್ಟ ಮುಟ್ಟಿನಿಂತಿತ್ತು. ಅದೇ ಡಬ್ಬೂ ಎನ್ನುವ ಕಲಾತ್ಮಕ ಹಾಗೂ ಗ್ಲಾಮರ್ ಲೋಕದ ಎರಡು ಶೇಡ್ಗಳ ಜತೆಯಲ್ಲಿ ಆಟವಾಡಿ ಪ್ರತಿ ವರ್ಷನೂ ಡಬ್ಬೂ ಕ್ಯಾಲೆಂಡರ್ ತರುವ ಯೋಜನೆಗೆ ಕೈ ಹಾಕಿ ಗೆದ್ದು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾನೆ.
ಬಾಲಿವುಡ್ನ್ನು ಮಲಗಿಸುವ ಕ್ಯಾಲೆಂಡರ್ :
ಅದು ೨೦೦೪ ಬಾಲಿವುಡ್ ಅಂಗಳದಲ್ಲಿ ಮೊದಲ ಬಾರಿಗೆ ಡಬ್ಬೂ ಕ್ಯಾಲೆಂಡರ್ ಹೊರಬಂತು. ಈ ಮೊದಲು ಚಿಕ್ಕಪುಟ್ಟ ಗಿಮಿಕ್ಗಳ ಮೂಲಕವೇ ಹೆಸರುಗಳಿಸಿ ಉಳಿಸಿಕೊಂಡಿದ್ದ ಡಬ್ಬೂ ಈ ಕ್ಯಾಲೆಂಡರ್ ಮೂಲಕ ಬಣ್ಣದ ಲೋಕದಲ್ಲಿ ಹೊಸ ಕ್ರೇಜ್ ಹುಟ್ಟಿ ಹಾಕಿದ. ಮೊಡೆಲ್ಗಳ ಜತೆಯಲ್ಲಿ ಆಟಹಾಡಿಕೊಂಡಿದ್ದ ಡಬ್ಬೂ ೨೦೦೪ ರ ಬಳಿಕ ಬಾಲಿವುಡ್ ನಟ- ನಟಿಯರ ಜತೆಯಲ್ಲಿ ಆಟಕ್ಕೆ ಕೂತು ಬಿಟ್ಟ. ಈ ಹೊಸ ಪ್ರಯತ್ನ ಕ್ಲಿಕ್ ಆಗಿ ಹೋಯಿತು.
೨೦೦೪ರಲ್ಲಿ ಬಾಲಿವುಡ್ನ ಟಾಪ್ ತಾರೆಯನ್ನು ಒಟ್ಟು ಸೇರಿಸಿಕೊಂಡು ಕ್ಯಾಲೆಂಡರ್ ಹೊರ ತಂದ. ಅದರಲ್ಲಿ ಹಿರಿಯ ನಟರ ಜತೆಯಲ್ಲಿ ಬಾಲಿವುಡ್ನಲ್ಲಿ ಕಾಣಿಸಿಕೊಂಡ ಹೊಸಪ್ರತಿಭೆಗೂ ಜಾಗ ಮಾಡಿಕೊಟ್ಟ. ಬಾಲಿವುಡ್ ನಟ- ನಟಿಯರನ್ನು ಒಂದೇ ಪ್ಯಾಕೇಜ್ನಡಿಯಲ್ಲಿ ತಮ್ಮ ಅಭಿಮಾನಿಗಳ ಕೈ ಸೇರುವಂತೆ ಕ್ಯಾಲೆಂಡರ್ ತಯಾರಿಸಿಕೊಟ್ಟ ಡಬ್ಬೂ ತನ್ನ ಕ್ಯಾಲೆಂಡರ್ಗಳಲ್ಲಿ ೨೪ ಬಾಲಿವುಡ್ ಸೆಲೆಬ್ರಿಟಿಗಳನ್ನು ತಮ್ಮ ಕ್ಯಾಲೆಂಡರ್ಗಳಲ್ಲಿ ತೋರಿಸುತ್ತಾರೆ. ಡಬ್ಬೂ ರತ್ನಾನಿಯ ಕ್ಯಾಲೆಂಡರ್ಗಳಲ್ಲಿ ಕಾಯಂ ಜಾಗ ಪಡೆಯುವ ಮಂದಿಯಲ್ಲಿ ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್, ಶಾರೂಕ್ ಖಾನ್ ಸೇರಿಕೊಂಡಿರುತ್ತಾರೆ. ೨೦೧೦ರ ನಂತರ ತಂದ ಡಬ್ಬೂ ಕ್ಯಾಲೆಂಡರ್ ಗಳ ಶೂಟಿಂಗ್ ಚಿತ್ರವನ್ನು ಡಬ್ಬೂ ಯೂ ಟ್ಯೂಬ್ನಲ್ಲಿ ತುಂಬಿಸಿ ಬಿಡುವ ಪರಂಪರೆ ಆರಂಭ ಮಾಡಿದರು. ಬಾಲಿವುಡ್ ಪಾಲಿಗೆ ಡಬ್ಬೂ ಕ್ಯಾಲೆಂಡರ್ಗಳಷ್ಟು ಚರ್ಚೆಯಾಗುವಷ್ಟು ವಿಚಾರ ಬೇರೆ ಇಲ್ಲ ಎನ್ನುವ ಮಾತಿದೆ.
ಡಬ್ಬೂ ಎನ್ನುವ ಕ್ರಿಯೇಟರ್:
ಅಂದಹಾಗೆ ೨೦೧೩ರ ಡಬ್ಬೂ ಕ್ಯಾಲೆಂಡರ್ ಹೊರಬಂದಿದೆ. ಕಳೆದ ವರ್ಷದ ಡರ್ಟಿ ಹುಡುಗಿ ವಿದ್ಯಾಬಾಲನ್ ಹಾಗೂ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡ ಹೊಸ ತಾರೆ ವರುಣ್ ಧವನ್ ಡಬ್ಬೂ ಕ್ಯಾಲೆಂಡರ್ನಲ್ಲಿ ಈ ವರ್ಷದಲ್ಲಿ ಪ್ಲಸ್ ಆಗುವ ಐಟಂಗಳು. ಉಳಿದಂತೆ ಶಾರೂಕ್ ಖಾನ್, ಹೃತಿಕ್ ರೋಷನ್, ಕಾಜೋಲ್, ಬಾಲಿವುಡ್ ನಿರ್ದೇಶಕರಾದ ಅಬ್ಬಾಸ್- ಮಸ್ತಾನ್, ಅಲಿಯಾ ಭಟ್, ಮಧುರ್ ಭಂಡಾರ್ಕರ್, ಅಫ್ತಾಬ್ ಶಿವದಾಸನಿ, ಅರ್ಜುನ್ ರಾಂಪಾಲ್ನಂತಹ ನಟರು ಕ್ಯಾಲೆಂಡರ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿ ವರ್ಷ ಡಬ್ಬೂ ಕ್ಯಾಲೆಂಡರ್ಗಳಲ್ಲಿ ಕಾಣಿಸಿಕೊಳ್ಳುವ ವಿಶೇಷತೆ ಏನಪ್ಪಾ ಅಂದರೆ ಕ್ಯಾಲೆಂಡರ್ಗಳಲ್ಲಿ ಕಾಣಿಸಿಕೊಳ್ಳುವ ಹೊಸ ಪ್ರತಿಭೆಗಳು ಇಡೀ ವರ್ಷ ಸಕ್ಸಸ್ ರೇಟಿನಲ್ಲಿರುತ್ತಾರೆ. ಕಳೆದ ವರ್ಷ ಹಾಟ್ ಆಗಿ ಕಾಣಿಸಿಕೊಂಡ ವಿದ್ಯಾ ಬಾಲನ್ ಡರ್ಟಿ ಪಿಕ್ಚರ್ ಹಾಗೂ ಕಹಾನಿ ಮೂಲಕ ಸಿಕ್ಕಾಪಟ್ಟೆ ಕ್ಲಿಕ್ ಆಗಿದ್ದಳು. ಈ ಬಾರಿಯ ಹೊಸ ಕ್ಯಾಲೆಂಡರ್ನಲ್ಲಿ ವರುಣ್ ಹಾಗೂ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಈ ವರ್ಷ ಬಾಲಿವುಡ್ ರಂಗದಲ್ಲಿ ಈ ತಾರೆಗಳು ಮಿಂಚಲಿದೆ ಎನ್ನುವ ಅಭಿಪ್ರಾಯ ಮೂಡಿದೆ.
..........................
vk lvk published dis article
ಮೋಲಿವುಡ್ನಲ್ಲಿ ಕಾಳಿದಾಸ
ರೀಲ್ ಗಳ ಜತೆಯಲ್ಲಿ ಸುತ್ತಾಟ ಮಾಡಿಕೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕರು ಎಚ್ಡಿ ಫಾರ್ಮೆಟ್ಗೆ ಇಳಿದಿರುವುದು ಹೊಸ ತಂತ್ರಜ್ಞಾನದ ಬಳಕೆಯಲ್ಲಿ ಮಲಯಾಳಂ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆ ಕಾಣಿಸಿಕೊಂಡಿದೆ. ಟೋಟಲಿ ಮಲಯಾಳಂ ಚಿತ್ರ ನಗರಿಯಲ್ಲಿ ಎಲ್ಲ ಬದಲಾವಣೆಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಜತೆಯಲ್ಲಿ ಸಿನಿಮಾ ನಗರಿಗೆ ಬರುವ ಹೊಸ ಹುಡುಗರನ್ನು ಬೆನ್ನು ತಟ್ಟುತ್ತಿದ್ದಾರೆ. ಈಗ ಕಾಳಿದಾಸನ್ ಸರದಿ...
* ಸ್ಟೀವನ್ ರೇಗೊ, ದಾರಂದಕುಕ್ಕು
ಮೋಲಿವುಡ್ ಸಿನಿಮಾ ನಗರಿಯಲ್ಲಿ ಈಗ ಹೊಸ ಹವಾ ಎದ್ದು ನಿಂತಿದೆ. ಹೊಸ ನಾಯಕ- ನಾಯಕಿಯರನ್ನು ತಂದು ಸಿನಿಮಾ ಗೆಲ್ಲಿಸುವ ಪ್ರಯತ್ನಗಳು ಸಿಕ್ಕಾಪಟ್ಟೆ ಮೋಲಿವುಡ್ ಸಿನಿಮಾ ಜಗತ್ತಿಲ್ಲಿ ವರ್ಕ್ ಔಟ್ ಆಗುತ್ತಿದೆ. ಹೊಸ ತಂತ್ರಜ್ಞರು, ನಿರ್ದೇಶಕರು ತಮ್ಮದೇ ಆಂಗಲ್ನಲ್ಲಿ ಚಿತ್ರ ನಿರ್ಮಾಣ ಮಾಡಿಕೊಂಡು ಗೆದ್ದು ಬರುತ್ತಿರುವ ಉತ್ತಮ ಬೆಳವಣಿಗೆಯೊಂದು ಮೋಲಿವುಡ್ ಸಿನಿಮಾ ಜಗತ್ತಿನಲ್ಲಿ ಕಾಣಿಸಿಕೊಂಡಿದೆ. ಮೋಲಿವುಡ್ ಸಿನಿಮಾ ರಂಗದಲ್ಲಿ ಫ್ಯಾಮಿಲಿ ಬ್ಯುಸಿನೆಸ್ಗಳು ಹುಟ್ಟಿಕೊಂಡಿರುವುದು ಹಳೆಯ ನಾಯಕ-ನಾಯಕಿಯರ ಸಿನಿಮಾ ಅವಕಾಶಗಳಿಗೆ ಕತ್ತರಿ ಬೀಳುತ್ತಿದೆ. ಹೊಸ ನಾಯಕ- ನಾಯಕಿಯರಿಗೆ ನೀಡುತ್ತಿರುವ ಮೊದಲ ಮಣೆ ಕೂಡ ಮಲಯಾಳಂ ಚಿತ್ರ ವೀಕ್ಷಕರಿಂದಲೂ ಮನ್ನಣೆ ಸಿಗುತ್ತಿದೆ.
ಅಂದಹಾಗೆ ಇತ್ತೀಚೆಗೆ ಮೋಲಿವುಡ್ ಚಿತ್ರಗಳನ್ನು ಲೋ ಬಜೆಟ್ನಿಂದ ಎತ್ತಿಕೊಂಡು ಏಕ್ ದಂ ಹೈ ಬಜೆಟ್ ನತ್ತ ಮುಖ ಮಾಡುತ್ತಿರುವುದು ಕೂಡ ಇತರ ಚಿತ್ರರಂಗದಲ್ಲಿ ಮಲಯಾಳಂ ಚಿತ್ರಗಳು ಕೂಡ ಸ್ಪರ್ಧೆಯಲ್ಲಿ ಹೊಡೆದಾಡುವ ಪ್ರಮೇಯಗಳು ಕಾಣಿಸಿಕೊಂಡಿದೆ. ಈ ಹಿಂದೆ ರೀಲ್ ಗಳ ಜತೆಯಲ್ಲಿ ಸುತ್ತಾಟ ಮಾಡಿಕೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕರು ಎಚ್ಡಿ ಫಾರ್ಮೆಟ್ಗೆ ಇಳಿದಿರುವುದು ಹೊಸ ತಂತ್ರಜ್ಞಾನದ ಬಳಕೆಯಲ್ಲಿ ಮಲಯಾಳಂ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆ ಕಾಣಿಸಿಕೊಂಡಿದೆ. ಟೋಟಲಿ ಮಲಯಾಳಂ ಚಿತ್ರ ನಗರಿಯಲ್ಲಿ ಎಲ್ಲ ಬದಲಾವಣೆಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಜತೆಯಲ್ಲಿ ಸಿನಿಮಾ ನಗರಿಗೆ ಬರುವ ಹೊಸ ಹುಡುಗರನ್ನು ಬೆನ್ನು ತಟ್ಟುತ್ತಿದ್ದಾರೆ.
ಸಿನಿಮಾ ಕುಟುಂಬದಲ್ಲಿ ಹುಟ್ಟಿದ ನಟ:
ಮೋಲಿವುಡ್ ಸಿನಿಮಾದ ಸೂಪರ್ ಸ್ಟಾರ್ ಮಮ್ಮುಟಿಯ ಪುತ್ರ ದುಲ್ವೀಕರ್ ಸಲ್ಮಾನ್ ಕಳೆದ ವರ್ಷವಷ್ಟೇ ಮಲಯಾಳಂ ಸಿನಿಮಾದಲ್ಲಿ ಕಣ್ಣು ಬಿಟ್ಟಿದ್ದರು. ತಮ್ಮ ‘ಸೆಕೆಂಡ್ ಶೋ’ ಚಿತ್ರದ ಮೂಲಕ ಸಾಧಾರಣ ಯಶಸ್ಸು ದಾಖಲಿಸಿಕೊಂಡಿದ್ದರು. ಈ ಬಳಿಕ ಬಂದ ಹಿರಿಯ ನಟ ತಿಲಕನ್ರ ಮೊಮ್ಮಗನ ಪಾತ್ರದಲ್ಲಿ ನಟಿಸಿದ ಸಲ್ಮಾನ್ ಚಿತ್ರ ‘ಉಸ್ತಾದ್ ಹೋಟೆಲ್’ ಮಲಯಾಳಂ ಸಿನಿಮಾದ ಬಾಕ್ಸಾಫೀಸ್ನಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿತ್ತು. ಇದೇ ರೀತಿಯಲ್ಲಿ ಮಲಯಾಳಂನ ಖ್ಯಾತ ನಟ ಶ್ರೀನಿವಾಸ್ ಅವರ ಪುತ್ರ ವಿನೀದ್ ನಟರಾಗಿ ನಂತರ ನಿರ್ದೇಶಕರಾಗಿ ಹೊರ ಬಂದರು. ಈಗ ಇದೇ ಸಾಲಿನಲ್ಲಿ ಕಾಳಿದಾಸನ್ ಸೇರುವ ಸಾಧ್ಯತೆ ಇದೆ.
ಅಂದಹಾಗೆ ಈ ಕಾಳಿದಾಸನ್ ಬೇರೆ ಯಾರು ಅಲ್ಲ. ಮಲಯಾಳಂನಲ್ಲಿ ಅತ್ತ ಆಕ್ಷನ್ ಗೂ ಸೈ ಇತ್ತ ಹಾಸ್ಯಕ್ಕೂ ಸೈ ಎಂದುಕೊಂಡು ನಿರ್ಮಾಪಕರು ತಮ್ಮ ಸಿನಿಮಾಕ್ಕೆ ಆರಿಸಿಕೊಳ್ಳುತ್ತಿದ್ದ ನಟ ಜಯರಾಮ್ ಅವರ ಪುತ್ರ. ಅಂದಹಾಗೆ ಕಾಳಿದಾಸನ್ ಮಲಯಾಳಂನ ಖ್ಯಾತ ಸಿನಿಮಾ ನಟಿ ಪಾರ್ವತಿಯ ಪುತ್ರ. ಈ ಹಿಂದೆ ಕಾಳಿದಾಸನ್ ಬಾಲ ನಟರಾಗಿ ಮೋಲಿವುಡ್ ಚಿತ್ರರಂಗದಲ್ಲಿ ಕಾಲೂರಿದ್ದರು. ಮಲಯಾಳಂನ ಖ್ಯಾತ ನಿರ್ದೇಶಕ ಸತ್ಯನ್ ಅಂತಿಕಾಡ್ ಅವರ ‘ ಕೊಚ್ಚು ಕೊಚ್ಚು ಸಂತೋಷಗಳ್’ ನಲ್ಲಿ ನಟ ಜಯರಾಮ್ ಅವರ ಪುತ್ರನಾಗಿ ಕಾಳಿದಾಸನ್ ಕಾಣಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.
ಮೋಲಿವುಡ್ ಅಡ್ಡಾದಲ್ಲಿ ಪುತ್ರರ ಪೈಪೋಟಿ:
ಈ ವರ್ಷ ಮೋಲಿವುಡ್ ಚಿತ್ರರಂಗದಲ್ಲಿ ಅಂದುಕೊಂಡಂತೆ ಎಲ್ಲವೂ ನಡೆದರೆ ನಾಯಕ ನಟರ ಪುತ್ರರ ನಡುವೆ ಏಕ್ದಂ ಪೈಪೋಟಿ ಕಾಣಿಸಿಕೊಳ್ಳಲಿದೆ. ಒಂದೆಡೆ ಮಮ್ಮುಟಿಯ ಪುತ್ರ ಸಲ್ಮಾನ್ನ ಚಿತ್ರವೊಂದು ಬಿಡುಗಡೆಯ ಹಾದಿ ಕಾಯುತ್ತಿದೆ. ಮತ್ತೊಂದೆಡೆ ಶ್ರೀನಿವಾಸ್ ಪುತ್ರ ವಿನೀದ್ ಚಿತ್ರವೊಂದು ಥಿಯೇಟರ್ ಬಾಗಿಲಲ್ಲಿ ನಿಂತಿದೆ. ಮಲಯಾಳಂನ ಸೂಪರ್ ಸ್ಟಾರ್ರಲ್ಲಿ ಒಬ್ಬರಾದ ಮೋಹನ್ ಲಾಲ್ ಪುತ್ರ ಪ್ರಣವ್ ಕೂಡ ಮೋಲಿವುಡ್ ನಲ್ಲಿ ಬಣ್ಣದ ಬದುಕು ಕಟ್ಟಿಕೊಳ್ಳುವ ಸಾಹಸಕ್ಕೆ ಇಳಿಯಲಿದ್ದಾರೆ. ಇವರ ಜತೆಯಲ್ಲಿ ಜಯರಾಮ್ ಪುತ್ರ ಕಾಳಿದಾಸನ್ ಕೂಡ ಒಳ್ಳೆಯ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಇವರೆಲ್ಲರೂ ಈ ವರ್ಷದಲ್ಲಿ ಮಲಯಾಳಂ ಸಿನಿಮಾದ ಮುಕುಟ ಮಣಿಗಳಾಗುತ್ತಾರೆ ಎನ್ನೋದು ಸಿನಿಮಾ ನಗರಿಯ ಮಾತು. ಆದರೆ ಕಾಳಿದಾಸನ್ ಕುರಿತಾಗಿ ಅವರ ತಂದೆ ನಟ ಜಯರಾಮ್ ಹೇಳುವಂತೆ: ನಾವು ಮಗನ ಶಿಕ್ಷಣದ ಕುರಿತು ಹೆಚ್ಚಾಗಿ ಯೋಚಿಸುತ್ತಿದ್ದೇವೆ. ಚೆನ್ನೈಯಲ್ಲಿ ಅವನ ಶಿಕ್ಷಣ ಅಂತಿಮ ಹಂತದಲ್ಲಿದೆ. ಬರೀ ಶಿಕ್ಷಣ ಕಡೆ ಕಾಳಿ ಗಮನಕೊಟ್ಟರೆ ಸಾಕು ಎನ್ನೋದು ನಮ್ಮ ಹೆಬ್ಬಯಕೆ. ಅವಸರದಿಂದ ಸಿನಿಮಾ ನಗರಿಗೆ ಬರೋದು ಬೇಡ ಎನ್ನುವ ಸಲಹೆಯನ್ನು ನಾನು ಕಾಳಿಗೆ ನೀಡುತ್ತಾ ಬಂದಿದ್ದೇನೆ ಎಂದು ಜಯರಾಮ್ ಎಂದಿದ್ದಾರೆ. ಆದರೆ ಮಲಯಾಳಂ ಸಿನಿಮಾ ನಗರಿ ಈ ಹುಡುಗರಿಗಂತೂ ಕಾದು ನಿಂತಿದೆ ಎನ್ನುವ ಮಾತು ಹೊರ ಬಂದಿದೆ. ಅದರಲ್ಲೂ ಕಾಳಿದಾಸನ್ ತಂದೆಯಂತೆ ಎಲ್ಲ ಕಡೆಯಲ್ಲೂ ಸಲ್ಲುವ ಪಾತ್ರವಾಗುತ್ತಾರೆ ಎನ್ನೋದು ಮಲಯಾಳಂ ಸಿನಿ ಪ್ರೇಕ್ಷಕರ ಗಟ್ಟಿಮಾತು.
....
vk lvk published dis article.
ಬಾಲಿವುಡ್ ಫ್ಯಾಮಿಲಿ ಬಿಸಿನೆಸ್
ಬಾಲಿವುಡ್ ಎಂದಾಕ್ಷಣ ಅಲ್ಲಿ ಬಣ್ಣದ ಕನಸ್ಸುಗಳನ್ನು ಕಾಣುವ, ಮಾರುವ ಕೆಲಸಗಳು ಸಖತ್ ಆಗಿಯೇ ನಡೆಯುತ್ತದೆ. ಅಂದಹಾಗೆ ಈ ವರ್ಷವಂತೂ ಬಾಲಿವುಡ್ನ ಹಿರಿಯ ನಟರ ಪುತ್ರ- ಪುತ್ರಿಯರು ಸಖತ್ ಫಿಲ್ಮಿ ಫಾರ್ಮ್ ಗೆ ಬರಲಿದ್ದಾರೆ. ಏನಿದು ಕತೆ ಅಂತೀರಾ.. ಜಸ್ಟ್ ರೀಡ್ ಇಟ್
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಎಂದಾಕ್ಷಣ ಅಲ್ಲಿ ಬಣ್ಣದ ಕನಸ್ಸುಗಳನ್ನು ಕಾಣುವ, ಮಾರುವ ಕೆಲಸಗಳು ಸಖತ್ ಆಗಿಯೇ ನಡೆಯುತ್ತದೆ. ಹೊಸ ಹೊಸ ಪ್ರಯೋಗಶೀಲತೆಯ ಜತೆಯಲ್ಲಿ ಇತರ ಭಾಷೆಗಳ ಕಲಬೆರಕೆಯ ಮಾಲುಗಳ ಮೂಲಕ ವಿಶಿಷ್ಟ ಪ್ರಾಡಕ್ಟ್ ಗಳು ಜನ್ಮ ತಾಳುವುದನ್ನು ಇಲ್ಲಿಯೇ ನೋಡಿ ತಿಳಿಯಬೇಕು. ಸಖತ್ ಕಲರ್ಫುಲ್ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಬದಲಾವಣೆಯ ಹವಾ ತಾಗಿದೆ.
ಎಲ್ಲವೂ ಮೊಡರ್ನ್ನಿಟಿಗೆ ತಕ್ಕಂತೆ ಸಿನಿಮಾಗಳು ರಂಗೀನ್ ಆಗಿ ತೆರೆಗೆ ಬಂದು ಅಪ್ಪಳಿಸುತ್ತಿದೆ. ಬದಲಾಗುತ್ತಿರುವ ಬಾಲಿವುಡ್ನಲ್ಲಿ ಈಗ ಹೊಸ ಪರ್ವ ಹುಟ್ಟಿಕೊಂಡಿದೆ. ಅಂದಹಾಗೆ ಈ ಬದಲಾವಣೆ ಏನಪ್ಪಾ ಅಂದರೆ ಬಾಲಿವುಡ್ ಅಂಗಳದಲ್ಲಿ ಈಗ ಫ್ಯಾಮಿಲಿ ಬಿಸಿನೆಸ್ ನಡೆಯುತ್ತಿದೆ. ಹೊಸ ವರ್ಷದ ಆರಂಭದಲ್ಲಿಯೇ ಬಾಲಿವುಡ್ ಫ್ಯಾಮಿಲಿಗಳ ಕುಡಿಗಳು ತಮ್ಮ ಬಣ್ಣದ ಬದುಕು ಕಟ್ಟಿಕೊಡಲು ತಯಾರಿಯನ್ನು ತೆರೆಮರೆಯಲ್ಲಿ ನಡೆಸುತ್ತಿದ್ದಾರೆ.
ಬಾಲಿವುಡ್ನಲ್ಲಿ ಹೊಸ ವರುಣ:
ತೀರಾ ಇತ್ತೀಚೆಗೆ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ಅವರ ಈ ವರ್ಷ ಮೋಸ್ಟ್ ಸಕ್ಸಸ್ ಕಂಡ ಚಿತ್ರ ‘ಸ್ಟುಡೆಂಟ್ ಆಫ್ ದೀ ಇಯರ್’ ನಲ್ಲಿ ಮಿಂಚಿದ ನವತಾರೆ ವರುಣ್ ಧವನ್ ಈ ವರ್ಷ ಏಕ್ತಾ ಕಪೂರ್ ಅವರ ಬ್ಯಾನರ್ನಲ್ಲಿ ಮೂಡಿ ಬರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳ ಸಿಗುತ್ತಿತ್ತು. ಈಗ ಈ ಸುದ್ದಿಗೆ ಮತ್ತೊಂದು ಬಂದು ಸೇರಿದೆ. ಅದೇನಪ್ಪಾ ಅಂದರೆ ವರುಣ್ ಧವನ್ ಜತೆಯಲ್ಲಿ ಅವರ ಅಪ್ಪ ನಿರ್ದೇಶಕ ಡೇವಿಡ್ ಧವನ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಚಿತ್ರಕ್ಕೆ ಏಕ್ತಾ ಕಪೂರ್
ಇಟ್ಟಿರುವ ಹೆಸರು ‘ಮೇ ತೇರಾ ಹೀರೋ’ ಎನ್ನುವುದು ಕೇಳಿ ಬಂದ ಮಾತು.
ಈ ಕುರಿತು ನಿರ್ದೇಶಕ ಡೇವಿಡ್ ಧವನ್ ಹೇಳುವ ಮಾತು ಹೀಗಿದೆ: ನಾನು ಬಾಲಿವುಡ್ನ ಬಹುತೇಕ ಮಂದಿಯ ಜತೆಯಲ್ಲಿ ಕೆಲಸ ಮಾಡಿದ್ದೇನೆ. ಅಮಿತಾಭ್ನಿಂದ ಹಿಡಿದು ವಿನೋದ್ ಖನ್ಹಾ, ಗೋವಿಂದ, ಸಲ್ಮಾನ್ ಎಲ್ಲರೂ ನನ್ನ ಕೆಲಸದಲ್ಲಿ ಸಾಥ್ ನೀಡಿದ್ದಾರೆ. ಆದರೆ ವರುಣ್ ಜತೆಯಲ್ಲಿ ಕೆಲಸ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ನಿರ್ಮಾಪಕಿ ಏಕ್ತಾ ಕಪೂರ್ ಬಂದು ಚಿತ್ರದ ಕತೆ ಹೇಳಿದಾಗ ಈ ಚಿತ್ರ ಮಾಡಲೇ ಬೇಕು ಎನ್ನುವ ಹೆಬ್ಬಯಕೆ ಮೂಡಿತು ಎಂದಿದ್ದಾರೆ.
ಟಾಲಿವುಡ್ನಿಂದ ಬಾಲಿವುಡ್ಗೆ ಚಿತ್ರ:
ಅಂದಹಾಗೆ ಬಾಲಿವುಡ್ನಲ್ಲಿ ತೆರೆ ಕಾಣಲಿರುವ ‘ಮೇ ತೇರಾ ಹೀರೋ’ ಚಿತ್ರ ನಿಜಕ್ಕೂ ತೆಲುಗಿನ ಸೂಪರ್ ಹಿಟ್ ಚಿತ್ರ ‘ಕಂದೀರಿಗಾ’ ದ ಪಡಿಯಚ್ಚು. ಇದನ್ನು ಬಾಲಿವುಡ್ ಶೈಲಿಗೆ ಬದಲಾಯಿಸಿಕೊಂಡು ಧವನ್ ಸಾಹೇಬ್ರು ಚಿತ್ರ ಹೊರತಾರುತ್ತಾರೆ. ಈ ಕುರಿತು ಡೇವಿಡ್ ಧವನ್ ಹೀಗೆ ಹೇಳುತ್ತಾರೆ: ಈ ಚಿತ್ರದ ಬಹುಮುಖ್ಯ ಭಾಗಗಳನ್ನು ಲಂಡನ್ನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಚಿತ್ರವನ್ನು ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ತರುವ ಕೆಲಸ ನಡೆಯುತ್ತದೆ. ಬಾಲಿವುಡ್ ನಲ್ಲಿ ಇದೊಂದು ಉತ್ತಮ ಮನರಂಜನೆಯಿಂದ ಕೂಡಿದ ಚಿತ್ರವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದಿದ್ದಾರೆ.
ಶತ್ರು ಪಾಳಯದಲ್ಲಿ ಹೊಸ ಬ್ಯಾನರ್:
ಬಾಲಿವುಡ್ನ ಹಿರಿಯ ನಟ ಶತ್ರುಘ್ನಾ ಸಿನ್ಹಾ ಅವರ ಪುತ್ರರಾದ ಲವ ಹಾಗೂ ಕುಶ ಜತೆಯಾಗಿ ‘ಶಾಟ್ಗನ್’ ಬ್ಯಾನರ್ನಡಿಯಲ್ಲಿ ಅವರ ಸಹೋದರಿ ನಟಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಕುಶ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಬ್ಯಾನರ್ ನಿಂದ ಜಾಕಿಶ್ರಾಫ್ ಚಿತ್ರ ಮೇರಾ ದಿಲ್ ಲೇಕೇ ದೇಕೋ ಎನ್ನುವ ಚಿತ್ರವೊಂದು ತೆರೆಗೆ ಬಂದಿತ್ತು. ಈ ಬಳಿಕ ಶಾಟ್ಗನ್ ಬ್ಯಾನರ್ ಹೊಸ ಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಯಾವುದೇ ಆಸಕ್ತಿಯನ್ನು ತಾಳಲಿಲ್ಲ. ಈಗ ಸೋನಾಕ್ಷಿಯಿಂದ ಬ್ಯಾನರ್ ಮತ್ತೇ ಜೀವಕಳೆ ಬಂದಿದೆ.
ಬ್ಯಾನರ್ ಕುರಿತು ಹಿರಿಯ ನಟ ಶತ್ರು ಹೇಳುವಂತೆ ‘ ಇಬ್ಬರು ಸಹೋದರರ ಜತೆಯಲ್ಲಿ ಸೋನಾಕ್ಷಿ ಕೂಡ ಕೈ ಜೋಡಿಸುವುದರಿಂದ ಬ್ಯಾನರ್ ಮತ್ತೆ ಎದ್ದು ನಿಲ್ಲುತ್ತದೆ. ಅಂದಹಾಗೆ ಮೂವರಿಗೂ ನನ್ನ ಸಹಾಯದ ಅವಶ್ಯಕತೆ ಬೀಳೋದಿಲ್ಲ. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ. ಈ ಹೊಸ ಚಿತ್ರದ ನಡುವೆ ಸೋನಾಕ್ಷಿ ಶಾಹೀದ್ ಕಪೂರ್ ಜತೆಯಲ್ಲಿ ರ್ಯಾಂಬೋ ರಾಜಕುಮಾರ್ ಹಾಗೂ ವನ್ಸ್ ಅಪನ್ ಟೈಮ್ ಇನ್ ಮುಂಬಯಿ -೨ ನ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಈ ಬಳಿಕವಷ್ಟೇ ಸೋನಾಕ್ಷಿ ಸಿನ್ಹಾ ಕಾಲ್ಶೀಟ್ ಸಿಗೋದು ಈ ಮೂಲಕ ಶತ್ರು ಬ್ಯಾನರ್ನ ಚಿತ್ರ ಈ ವರ್ಷವಂತೂ ತೆರೆಗೆ ಬರುವ ಸಾಧ್ಯತೆ ಇಲ್ಲ ಎಂದಾಯಿತು.
....
vk lvk published dis article on 10.1.2013)
......
ಹಾಲಿವುಡ್ ನ "ಕಿಮ್’ ಎದೆಗಾರಿಕೆ
ಕಿಮ್ ಕದರ್ಶಿಯನ್ ಇದು ಪಕ್ಕಾ ಹಾಲಿವುಡ್ ಇಂಡಸ್ಟ್ರಿಯ ಹಾಟೇಸ್ಟ್ ಪ್ರಾಪರ್ಟಿ. ಕಿಮ್ ಎಂದರೆ ಹಾಗೇ ಚಳಿಗಾಲದಲ್ಲೂ ಪುರುಷ ಮೃಗಗಳ ದೇಹದಲ್ಲಿ ಬೆವರು ಹುಟ್ಟಿಕೊಳ್ಳುತ್ತದೆ. ಕಿಮ್ ಈಗ ತುಂಬು ಗರ್ಭಿಣಿ. ಆದರೆ ಮದುವೆಯಾಗುವ ಯೋಚನೆ ಇಟ್ಟುಕೊಂಡಿಲ್ಲ.
* ಸ್ಟೀವನ್ ರೇಗೊ, ದಾರಂದಕುಕ್ಕು
ಕಿಮ್ ಕದರ್ಶಿಯನ್ ಇದು ಪಕ್ಕಾ ಹಾಲಿವುಡ್ ಇಂಡಸ್ಟ್ರಿಯ ಹಾಟೇಸ್ಟ್ ಪ್ರಾಪರ್ಟಿ. ಕಿಮ್ ಎಂದರೆ ಹಾಗೇ ಚಳಿಗಾಲದಲ್ಲೂ ಪುರುಷ ಮೃಗಗಳ ದೇಹದಲ್ಲಿ ಬೆವರು ಹುಟ್ಟಿಕೊಳ್ಳುತ್ತದೆ. ಕಿಮ್ ಕದರ್ಶಿಯನ್ ಎನ್ನುವ ಪುಟ್ಟ ಹೆಸರನ್ನು ಹಾಗೆನೇ ಗೂಗಲ್ ಎನ್ನುವ ಜಾಲಾಡುವ ಬಲೆಯಲ್ಲಿ ಹಾಕಿಬಿಡಿ. ಥಟ್ ಅಂತಾ ಕಿಮ್ ಜನ್ಮ ಕುಂಡಳಿ ನಿಮ್ಮ ಮುಂದೆ ಹಾಜರಾಗಿ ಹೋಗುತ್ತದೆ. ಕಿಮ್ ಎನ್ನುವ ಸುಂದರಿಯನ್ನು ಬಹಳ ಜನ ಲೈಕ್ ಮಾಡುವುದು ಒಂದೇ ವಿಚಾರಕ್ಕೆ ಜಗತ್ತಿನಲ್ಲಿ ಅತ್ಯಂತ ಸುಂದರ ನಿತಂಬವುಳ್ಳ ನಟಿ ಎನ್ನುವ ಟ್ಯಾಗ್ ಲೈನ್ ಅವಳ ಹೆಸರಿನಲ್ಲಿ ಜತೆಯಲ್ಲಿ ಅಂಟಿಕೊಂಡಿದೆ.
ಸುಂದರ ನಿತಂಬಗಳ ಕುರಿತಾಗಿ ಹಾಲಿವುಡ್ ಅಂಗಳದಲ್ಲಿ ಸ್ಪರ್ಧೆಯೊಂದು ನಡೆದಿತ್ತು. ಅದರಲ್ಲಿ ಗೆಲ್ಲುವ ಕುದುರೆ ಯಾವುದು ಎನ್ನುವ ಕುತೂಹಲದ ಪ್ರಶ್ನೆಗೆ ಕಿಮ್ ಕರ್ದಶಿಯನ್ ಹಾಗೂ ಜೆನ್ನಿಫರ್ ಲೋಪೆಜ್ ಎಂಬ ಉತ್ತರ ಥಟ್ಟನೆ ಬಂದು ಬಿಟ್ಟಿತ್ತು. ಅದರಲ್ಲೂ ಕಿಮ್ ನಿತಂಬದ ನೈಜತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸುಂದರ ಶೇಪ್ ನ ಈ ನಿತಂಬದಲ್ಲಿ ನೈಜತೆ ಇಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರೂ ಇರಬಹುದು ಎಂದು ಸುದ್ದಿ ಹಬ್ಬಿತ್ತು.
ಕಿಮ್ ಸುಂದರ ನಿತಂಬಗಳ ರಹಸ್ಯ:
ಇದಕ್ಕೆ ಉತ್ತರವಾಗಿ ೩೨ ವರ್ಷದ ನಟಿ ಕಿಮ್ ತಮ್ಮ ನಿತಂಬದ ಎಕ್ಸ್ ರೇ ತೆಗೆಸಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಮುಗುಳು ನಕ್ಕಿದ್ದರು. ಈ ಮೂಲಕ ನನ್ನ ದೇಹದಲ್ಲಿ ಯಾವುದೇ ಭಾಗ ಸಿಲಿಕಾನ್ ಅಂಶ ಸೇರಿಸಿಲ್ಲ. ಪ್ಲಾಸ್ಟಿಕ್ ಸರ್ಜರಿ ಮೂಲಕ ನಿತಂಬದ ಗಾತ್ರ ಹಿಗ್ಗಿಸಿಲ್ಲ. ಬೇಕಾದರೆ ಎಕ್ಸ್ ರೇ ರಿಪೋರ್ಟ್ ಇದೆ ನೋಡಿ ಎಂದು ಅಭಿಮಾನಿಗಳಲ್ಲಿ ಕಳಕಳಿಯಿಂದ ಕೇಳಿಕೊಂಡಿದ್ದರು.
ಜನಪ್ರಿಯ ಸರಣಿ ಕೀಪಿಂಗ್ ಅಪ್ ವಿಥ್ ಕದರ್ಶಿಯನ್ಸ್ ನಲ್ಲಿ ತನ್ನ ಕರ್ವ್ ನೈಸರ್ಗಿಕವಾದದ್ದು ಎಂದು ಸಾಬೀತು ಪಡಿಸಿದ್ದಳು. ಕಿಮ್ ತಂಗಿ ಕೊಹ್ಲೆ ತನ್ನ ಟ್ವೀಟ್ ನಲ್ಲಿ ಅಕ್ಕನ ನಿತಂಬ ೧೦೦% ನೈಜವಾದದ್ದು ಎಂದು ಘೋಷಿಸಿಕೊಂಡಿದ್ದಳು. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ ಬೊಟೆಕ್ಸ್ ಇಂಜೆಕ್ಷನ್ ಬಳಸಿದ್ದೆ. ಆಮೇಲೆ ಅಲರ್ಜಿ ಆದ ಮೇಲೆ ಬಿಟ್ಟು ಬಿಟ್ಟೆ ಎಂದು ಕಿಮ್ ಟ್ವಿಟ್ ಲೋಕದಲ್ಲಿ ಮಾತುಕತೆಯ ಮೂಲಕ ಅಭಿಮಾನಿಗಳ ಎದೆಗೂಡಿನಲ್ಲಿ ಹವಾ ಹುಟ್ಟುಹಾಕುತ್ತಿದ್ದಳು.
ಕಿಮ್ ಮದುವೆಗೂ ಮುಂಚೆ ಗರ್ಭಿಣಿ:
ಆ ವಿಚಾರದಲ್ಲಿ ಹಾಗೆನೇ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತ ಗ್ಯಾರಂಟಿ. ಎಲ್ಲರೂ ಹೇಳಿಕೊಳ್ಳುತ್ತಿರುವ ಮಾತು ಒಂದೇ ಆಕೆ ಒಂಚೂರು ಜಾಗ್ರತೆ ವಹಿಸಬೇಕಾಗಿತ್ತು. ಬೇಡದ ಗರ್ಭ ತಡೆಯಲು ಎಷ್ಟೆಲ್ಲಾ ಮಾರ್ಗೋಪಾಯಗಳಿವೆ. ಈಕೆಗೆ ಅಷ್ಟೂ ಗೊತ್ತಾಗಲಿಲ್ಲವೆ? ಎಂದು ಆಕೆಯ ಅಭಿಮಾನಿಗಳು, ಹಿತೈಷಿಗಳು ಅವಳನ್ನು ಹುಡುಕಿಕೊಂಡು ಪ್ರಶ್ನೆ ಕೇಳುತ್ತಿದ್ದರು. ಹಾಲಿವುಡ್ ನ ಜನಪ್ರಿಯ ತಾರೆ ಕಿಮ್ ಕರ್ದಾಶಿಯನ್ ತುಂಬಿದ ಗರ್ಭಿಣಿ.
ಖ್ಯಾತ ಗಾಯಕ ಕೇನ್ ಸೆಟ್ ಜತೆ ಕೆಲ ತಿಂಗಳಿಂದ ಕಿಮ್ ಡೇಟಿಂಗ್ ಮಾಡುತ್ತಿದ್ದರು. ಆದರೆ ಇವರಿಬ್ಬರು ಅದ್ಯಾವ ಘಳಿಗೆಯಲ್ಲಿ ಮೈಮರೆತರೋ ಏನೋ, ತಪ್ಪು ನಡೆದುಹೋಗಿದೆ. ಈಕೆ ಈಗ ತುಂಬು ಗರ್ಭಿಣಿ. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಕಿಮ್ ಬಾಯ್ ಫ್ರೆಂಡ್ ಕೇನ್ ವೆಸ್ಟ್ ಮಾತನಾಡುತ್ತಾ ಆಕೆ ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಮೂವತ್ತೆರಡರ ಹರೆಯದ ಕಿಮ್ ಹಾಗೂ ಕೇನ್ ವೆಸ್ಟ್ ಇಬ್ಬರ ನಡುವೆ ಹತ್ತು ವರ್ಷಗಳಷ್ಟು ಪರಿಚಯವಿದೆ. ಆದರೆ ಕಳೆದ ಕೆಲ ತಿಂಗಳಿಂದಷ್ಟೇ ಡೇಟಿಂಗ್ ಮಾಡುತ್ತಿದ್ದರು.
ಇದಕ್ಕೂ ಮುನ್ನ ಫುಟ್ ಬಾಲ್ ಪಟು ಕ್ರಿಸ್ ಹಂಪ್ರೆಸ್ ಅವರನ್ನು ಮದುವೆಯಾಗಿದ್ದರು. ಆದರೆ ಅದೇನಾಯಿತೋ ಏನೋ ಕೇವಲ ೭೨ ದಿನಗಳಲ್ಲೇ ವಿವಾಹ ವಿಚ್ಛೇದನದ ಮೂಲಕ ಇಬ್ಬರೂ ಬೇರ್ಪಟ್ಟರು. ಕೇನ್ ಜೊತೆ ಹೊಸ ಸಂಬಂಧ ಬೆಳೆಸಿದ ಕಿಮ್, ನಮ್ಮಿಬ್ಬರ ದಾಂಪತ್ಯ ಹಾಗೂ ಪ್ರಣಯ ಜೀವನ ಸುಖಕರವಾಗಿರುತ್ತದೆ. ಇದಕ್ಕೆ ನಮ್ಮಿಬ್ಬರ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ಸಹಕರಿಸುತ್ತದೆ. ನಮ್ಮಿಬ್ಬರ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಶೀಘ್ರವೇ ನಮ್ಮ ಮದುವೆ ನಡೆಯುತ್ತದೆ ಎನ್ನುವ ಮೂಲಕ ತನ್ನ ಗರ್ಭಿಣಿತನಕ್ಕೆ ಉತ್ತರ ನೀಡಿದ್ದಳು.
ಕಿಮ್ ಹಾಗೂ ಸರಸ:
೨೦೦೭ರ ಫೆಬ್ರವರಿ ತಿಂಗಳಲ್ಲಿ ಕಿಮ್ ಹಾಗೂ ಸಿಂಗರ್ ರೇ ಜೇ ಜತೆಗಿನ ಸರಸ ಸಲ್ಲಾಪದ ವಿಡಿಯೋ ತುಣುಕೊಂದು ಬಟಾ ಬಯಲಾಗಿ ಹೋಯಿತು. ಇದು ಇಡೀ ಹಾಲಿವುಡ್ ಲೋಕದಲ್ಲಿಯೇ ಸಂಚಲನ ಮೂಡಿಸಿದ ಪ್ರಕರಣವಾಗಿ ನಂತರದ ದಿನಗಳಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಬಯಲು ಮಾಡಿದ ಕಂಪನಿಗೆ ಕಿಮ್ ನ್ಯಾಯಾಂಗದ ಮೂಲಕ ಉತ್ತರ ಕೊಟ್ಟು ಕಂಪನಿಯಿಂದ ಬರೋಬರಿ ೫ ಮಿಲಿಯನ್ ಡಾಲರ್ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಇಳಿಸಿಕೊಂಡಳು. ೨೦೦೭ರ ಡಿಸೆಂಬರ್ ತಿಂಗಳ ಪ್ಲೇಬಾಯ್ ಪುರುಷರ ಮ್ಯಾಗಜೀನ್ ನ ಮುಖಪುಟದಲ್ಲಿ ತನ್ನ ಸಹಜ ಸೌಂದರ್ಯದ ಗಣಿಯನ್ನು ಬಿಚ್ಚಿ ಅಭಿಮಾನಿ ಸಮೂಹಕ್ಕೆ ಮತ್ತೆ ದಂಗು ಮೂಡಿಸಿ ಹೋದಳು. ಈ ಬಳಿಕ ಬಟ್ಟೆಯಂತೆ ಹುಡುಗರನ್ನು ಬದಲಾಯಿಸುತ್ತಾ ಹೋದ ಕಿಮ್ ನೆಚ್ಚಿನ ಗೆಳತಿ ಯಾರು ಗೊತ್ತಾ..? ಅವಳೇ ಸಕಲ ಕಲಾ ವಲ್ಲಭೆ ಪ್ಯಾರಿಸ್ ಹಿಲ್ಟನ್ !
ಚಳಿಗಾಲದಲ್ಲಿ ಹಾಟ್ ಮಾಲು:
ಅತ್ಯಂತ ಸಹಜ ನಿತಂಬಗಳ ಸುಂದರಿ ಎಂದು ಬಿಂಬಿಸಿಕೊಂಡಿರುವ ಹಾಲಿವುಡ್ ಬೆಡಗಿ ಕಿಮ್ ಕರ್ದಶಿಯನ್ ಚಳಿಗಾಲದಲ್ಲಿ ತೀರಾ ಹತ್ತಿರವಾಗಿ ಹೋಗುತ್ತಾರೆ. ಯಾಕ್ ಅಂತೀರಾ..ಚಳಿಗಾಲದಲ್ಲಿಯೇ ಕಿಮ್ ತನ್ನ ಬಿಕಿನಿ ಕಲೆಕ್ಷನ್ ಗಳ ಮಾಲನ್ನು ಹೊರಹಾಕುತ್ತಾರೆ. ಪ್ರತಿ ವರ್ಷನೂ ತಮ್ಮ ಮಾದಕ ಮೈಮಾಟವನ್ನು ದಟ್ಟ ನೀಲಿ ಬಿಕಿನಿಯಲ್ಲಿ ಪ್ರದರ್ಶಿಸುತ್ತಾರೆ. ಕಳೆದ ವರ್ಷ ಕರ್ದಶಿಯನ್ ಕಲೆಕ್ಷನ್ ನ ಈ ಈಜುಡುಗೆ ತೊಡುಗೆಗಳಲ್ಲಿ ಕಿಮ್ ತಮ್ಮ ಮಾದಕ ಮೈಮಾಟವನ್ನು ಪ್ರದರ್ಶಿಸಿದ್ದರು. ಜೊತೆಗೆ ಈಕೆಯ ಸಹೋದರಿಯರಾದ ಕೌರ್ಟ್ನಿ ಹಾಗೂ ಖೋಲ್ ಕೂಡ ಸಾಥ್ ನೀಡಿದ್ದರು. ವರ್ಷ ಪೂರ್ತಿ ಕಿಮ್ ಅಭಿಮಾನಿಗಳಿಗಂತೂ ಈ ಬಿಕಿನಿ ಚಿತ್ರಗಳು ಚಳಿಗಾಲದಲ್ಲಿ ಮದಿರೆಯ ಜತೆಗೆ ನಾಲಗೆ ಸವರಿಕೊಳ್ಳಲು ಸಾಥ್ ನೀಡುವ ಉಪ್ಪಿನ ಕಾಯಿಯಂತೆ ಮಜಬೂತಾಗಿರುತ್ತದೆ ಎನ್ನುವುದು ಅಭಿಮಾನಿಗಳಿಂದ ಹೊರ ಬಂದ ಮಾತು.
...
( vk lvk published dis article on 8.01.2013)
ಮುಂಬಯಿಯಲ್ಲಿ ‘ರಿನೋ ’ ಮ್ಯಾಜಿಕ್ !
ರೊನಾಲ್ಡಿನೋ ಎಂದಾಕ್ಷಣ ಫುಟ್ಬಾಲ್ ಆಟಗಾರರ ಕಣ್ಣು, ಕಿವಿ ನೆಟ್ಟಗೆ ನಿಂತು ಬಿಡುತ್ತದೆ. ಅವರ ಕಾಲ ಬುಡಕ್ಕೆ ಫುಟ್ಬಾಲ್ ಚೆಂಡು ಬಂದು ಮುಟ್ಟಿದರೆ ಸಾಕು... ಗೋಲು ಆಗಿಯೇ ಹೋಗುತ್ತದೆ ಎನ್ನುವ ಮಾತುಗಳು ಈ ಹಿಂದೆ ಬ್ರೆಜಿಲ್ ಫುಟ್ಬಾಲ್ ತಂಡ ಫಾರ್ಮ್ನಲ್ಲಿದ್ದಾಗ ಕೇಳಿಸಿಕೊಳ್ಳಲು ಆರಂಭವಾಗಿತ್ತು. ಈ ಬಳಿಕ ಕೂಡ ನಾನಾ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿರುವ ರಿನೋ ಗೆ ಈಗ ಬಣ್ಣದ ಲೋಕದ ನಂಟು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಬಹುತೇಕ ಫುಟ್ಬಾಲ್ ಪ್ರಿಯರಿಗೆ ಇದ್ದೇ ಇದೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಫುಟ್ಬಾಲ್ ಎಂದಾಕ್ಷಣ ಬ್ರೆಜಿಲ್ ದೇಶದ ನಕಾಶೆ ಕಣ್ಣ ಮುಂದೆ ಸುಳಿದು ಬಿಡುತ್ತದೆ. ಬ್ರೆಜಿಲ್ನ ನರನಾಡಿಯಲ್ಲಿ ಫುಟ್ಬಾಲ್ ಆಟ ಮಿಲಿತಗೊಂಡಿದೆ. ಇಲ್ಲಿನ ಪ್ರತಿಯೊಬ್ಬರು ಫುಟ್ಬಾಲ್ ಆಟ ಎಂದಾಕ್ಷಣ ಕಾಲ ಬುಡದಲ್ಲಿ ಫುಟ್ಬಾಲ್ ಹುಡುಕಾಡಲು ಆರಂಭ ಮಾಡುತ್ತಾರೆ. ಇಂತಹ ನಾಡಿನಲ್ಲಿ ಬೆಳೆದವರು ರಿನೋ ಅರ್ಥಾತ್ ರೊನಾಲ್ಡಿನೋ ತೀರಾ ಇತ್ತೀಚೆಗೆ ಮುಂಬಯಿಗೆ ಬಂದು ಇಳಿದಿದ್ದರು. ಮುಂಬಯಿಯ ಗಲ್ಲಿ ಗಲ್ಲಿಯಲ್ಲೂ ಕಣ್ಣಾಡಿಸಿಕೊಂಡು ಹೋದ ರೊನಾಲ್ಡಿನೋಗೆ ಭಾರತದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ ಎನ್ನೋದು ಬಹುತೇಕ ಮಂದಿಗೆ ಗೊತ್ತೇ ಇಲ್ಲ.
ಭಾರತಕ್ಕೆ ಈ ಹಿಂದೆ ರಿನೋ ಬಂದಿದ್ದಾಗ ವರ್ಷದಲ್ಲಿ ಒಂದೆರಡು ಬಾರಿಯಾದರೂ ಇಲ್ಲಿಗೆ ಬಂದು ನಿಲ್ಲಬೇಕು ಎನ್ನುವ ಕನಸ್ಸುಗಳಿತ್ತು. ತನ್ನ ನೆಚ್ಚಿನ ಫುಟ್ಬಾಲ್ ಆಟವನ್ನು ಭಾರತದಲ್ಲೂ ಭರ್ಜರಿಯಾಗಿ ನಿಲ್ಲುವಂತೆ ಮಾಡಬೇಕು ಎನ್ನುವ ಕಿಚ್ಚು ಮೊಳೆದಿತ್ತು. ಮುಂಬಯಿಯ ಗಲ್ಲಿಯಲ್ಲಿ ಎದ್ದು ನಿಂತ ಬೃಹತ್ ಗಾತ್ರದ ಸಿನಿಮಾ ಕಟೌಟ್ಗಳನ್ನು ನೋಡಿ ತಾನು ಕೂಡ ಇದೇ ಮಾದರಿಯಲ್ಲಿ ನಿಲ್ಲಬೇಕು ಎನ್ನುವ ಬಯಕೆ ಹುಟ್ಟಿಕೊಂಡಿತ್ತು ಎಂದು ಖುದ್ದು ರಿನೋ ಮಾಧ್ಯಮಗಳಲ್ಲಿ ಈ ಹಿಂದೆ ಬಂದಾಗ ಹೇಳಿಕೊಂಡಿದ್ದರು. ಈಗ ಇದೆಲ್ಲವೂ ದಿಟವಾಗಿದೆ.
ಹೌದು.. ಈಗ ರಿನೋ ಬಾಲಿವುಡ್ ಅಂಗಳದಲ್ಲಿ ಹೀರೋ ಆಗುವ ಕನಸ್ಸಿನ ಮೇಲೆ ಇಲ್ಲಿಗೆ ಬಂದಿದ್ದಾರೆ. ಫುಟ್ಬಾಲ್ ಲೋಕದ ಧ್ರುವತಾರೆ ರಿನೋ ಬಾಲಿವುಡ್ ಬೇಸ್ಡ್ ಆನಿಮೇಷನ್ ಚಿತ್ರವೊಂದರಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನೋದು ಹೊರ ಬಂದ ಮಾಹಿತಿ.
ಅಂದಹಾಗೆ ರೊನಾಲ್ಡಿನೋ ಎಂದಾಕ್ಷಣ ಫುಟ್ಬಾಲ್ ಆಟಗಾರರ ಕಣ್ಣು, ಕಿವಿ ನೆಟ್ಟಗೆ ನಿಂತು ಬಿಡುತ್ತದೆ. ಅವರ ಕಾಲ ಬುಡಕ್ಕೆ ಫುಟ್ಬಾಲ್ ಚೆಂಡು ಬಂದು ಮುಟ್ಟಿದರೆ ಸಾಕು... ಗೋಲು ಆಗಿಯೇ ಹೋಗುತ್ತದೆ ಎನ್ನುವ ಮಾತುಗಳು ಈ ಹಿಂದೆ ಬ್ರೆಜಿಲ್ ಫುಟ್ಬಾಲ್ ತಂಡ ಫಾರ್ಮ್ನಲ್ಲಿದ್ದಾಗ ಕೇಳಿಸಿಕೊಳ್ಳಲು ಆರಂಭವಾಗಿತ್ತು. ಈ ಬಳಿಕ ಕೂಡ ನಾನಾ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿರುವ ರಿನೋ ಗೆ ಬಣ್ಣದ ಲೋಕ ನಂಟು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಬಹುತೇಕ ಫುಟ್ಬಾಲ್ ಪ್ರಿಯರಿಗೆ ಇದ್ದೇ ಇದೆ.
ಇದಕ್ಕೆ ಉತ್ತರ ಇಲ್ಲಿದೆ...ಭಾರತೀಯ ಮೂಲದ ಖ್ಯಾತ ಪೌಲ್ಡ್ರಿ ಕಂಪನಿ ವೆಂಕಿ ರಿನೋಗಾಗಿ ಆನಿಮೇಷನ್ ಚಿತ್ರವೊಂದನ್ನು ಸಿದ್ಧಪಡಿಸುತ್ತಿದ್ದಾರೆ. ವೆಂಕಿ ಈ ಹಿಂದೆ ಕೂಡ ರಿನೋನ ಫುಟ್ಬಾಲ್ ಆಟಕ್ಕೆ ಸಹಾಯ ಹಸ್ತ ನೀಡುತ್ತಾ ಬಂದಿದೆ. ಇದೇ ಸಲುಗೆಯಲ್ಲಿ ವೆಂಕಿ ಕಂಪನಿಗೆ ಕಟ್ಟಿಬಿದ್ದು ರಿನೋ ಆನಿಮೇಷನ್ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವುದು ಹೊರ ಬಂದ ಮಾತು.
‘ರೊನಾಲ್ಡಿನೋ ವರ್ಸಸ್ ಏಲಿಯನ್ಸ್ ’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಚಿತ್ರದ ಮೂಲ ಕತೆಯೇ ಬಾಹ್ಯಾಕಾಶದ ಟ್ರಾಫಿಕ್ ಸಮಸ್ಯೆಗಳ ಕುರಿತಾಗಿ ಅನ್ಯಗ್ರಹದ ಜೀವಿಗಳು ಹಾಗೂ ರಿನೋ ಜತೆ ನಡೆಯುವ ಕತೆಯೇ ಚಿತ್ರದ ಮುಖ್ಯ ಪಾಯಿಂಟ್. ಚಿತ್ರದಲ್ಲಿ ರಿನೋ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಿಮೇಷನ್ ಚಿತ್ರವಾಗಿದ್ದರ ಪರಿಣಾಮ ರಿನೋ ನಟನೆಗಿಂತ ಹೆಚ್ಚಾಗಿ ಧ್ವನಿಗೆ ಜಾಸ್ತಿ ಮಹತ್ವ ಸಿಗಲಿದೆ.
ಅದರಲ್ಲೂ ಮುಖ್ಯವಾಗಿ ಫುಟ್ಬಾಲ್ ರಂಗದಲ್ಲಿ ಎರಡು ಬಾರಿ ಫಿಫಾ ವರ್ಷದ ಆಟಗಾರನಾಗಿ ಹೊರಬಂದ ರಿನೋ ಮೊದಲ ಬಾರಿಗೆ ಆನಿಮೇಷನ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರಿಂದ ನಿರೀಕ್ಷೆಯ ಮೂಟೆಯಂತೂ ಇದ್ದೇ ಇದೆ . ಮತ್ತೊಂದೆಡೆ ಫುಟ್ಬಾಲ್ ಆಟಗಾರ ರಿನೋ ಹೇಳುವಂತೆ ಬ್ರೆಜಿಲ್ ಈ ವರ್ಷ ವಿಶ್ವಕಪ್ ಗೆದ್ದೇ ಗೆಲ್ಲುತ್ತೇ..ಅದರಲ್ಲಿ ನಾನು ಕೂಡ ಆಡಬೇಕು ಎನ್ನುವ ಹಂಬಲವಿದೆ. ಅಂದಹಾಗೆ ಭಾರತ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ನನ್ನ ಹೊಸ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ನಂಬಿಕೆ ಇದೆ ಎಂದು ಮಾಧ್ಯಮಗಳಿಗೆ ಮಾತು ಬಿಟ್ಟಿದ್ದಾರೆ. ಅಂದಹಾಗೆ ಹೊಸ ವರ್ಷದಲ್ಲಿ ರಿನೋ ಚಿತ್ರಕ್ಕೆ ಕಾದು ಕುಳಿತುಕೊಳ್ಳುವ ಸರದಿಯಂತೂ ರಿನೋ ಅಭಿಮಾನಿಗೆ ಬಂದು ಬಿಡಬಹುದು.
( vk lvk published dis article 0n 7.1.2013)
ಪ್ರಭುದೇವ ಧೂಳ್ ಟಕ್ಕರ್
* ಸ್ಟೀವನ್ ರೇಗೊ, ದಾರಂದಕುಕ್ಕು
ಪ್ರಭುದೇವ ಯಾರಿಗೊತ್ತಿಲ್ಲ ಹೇಳಿ.. ನಟ, ನಿರ್ದೇಶಕ ಕಮ್ ಡಾನ್ಸ್ ಮಾಸ್ಟರ್ ನಾನಾ ಕೆಟಗರಿಯಲ್ಲಿ ನಾನಾ ಆ್ಯಂಗಲ್ ಗಳಲ್ಲಿ ನಿಂತು ನೋಡಿದಾಗ ಪ್ರಭುದೇವ ಟೋಟಲಿ ಭಿನ್ನ ಮನುಷ್ಯ. ಸದಾ ಕಾಲ ಡಾನ್ಸ್ ಎಂದಾಗ ಪ್ರಭು ದೇಹದಲ್ಲಿ ವೈಬ್ರೇಶನ್ ಸ್ಟಾರ್ಟ್ ಆಗಿ ಹೋಗುತ್ತದೆ. ಪ್ರಭು ಪಾಲಿನ ಪ್ರತಿಯೊಂದು ಚಿತ್ರಗಳು ಕೂಡ ನೃತ್ಯಕ್ಕೆ ಹೆಚ್ಚಿನ ಮಹತ್ವ ಇರುತ್ತದೆ.
ಸಿನಿಮಾ ರಂಗದಲ್ಲಿ ದುಡಿಯುವ ಬಹಳಷ್ಟು ನಟಿಯರು ಪ್ರಭುದೇವರ ಜತೆಯಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ. ತೀರಾ ಕಷ್ಟಕರವಾದ ಸ್ಟೆಪ್ಗಳನ್ನು ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದಂತೆ ನೃತ್ಯ ಮಾಡುವ ಪ್ರಭುವನ್ನು ಕಂಡು ಬಹಳಷ್ಟು ನಟಿಯರು ಪ್ರಭು ಚಿತ್ರವೊಂದು ಬೇಡ ಎಂದು ಕೂತ ಕತೆಗಳಿವೆ. ಗಾಳಿಯಲ್ಲಿಯೇ ಗುದ್ದಾಟ ನಡೆಸುವ ಪ್ರಭುದೇವರದ ಸ್ಟೆಪ್ ಗೆ ಮನ ಸೋಲಾದ ವ್ಯಕ್ತಿಯೇ ಇಲ್ಲ ಎನ್ನುವುದು ಅವರಿಗೆ ಅಂಟಿಕೊಂಡ ಟ್ಯಾಗ್ಲೈನ್.
ಕಾವೇರಿಯ ಹುಡುಗ ಪ್ರಭು:
ಎಲ್ಲಕ್ಕೂ ಮುಖ್ಯವಾಗಿ ಪ್ರಭುದೇವ ಅಪ್ಪಟ ಕನ್ನಡಿಗರು. ಮೈಸೂರಿನಲ್ಲಿ ಹರಿಯುತ್ತಿರುವ ಕಾವೇರಿ ನೀರು ಕುಡಿದು ಬೆಳೆದ ಹುಡುಗ ಚೆನ್ನೈಗೆ ಹೋದ ನಂತರವೇ ಸಿನಿಮಾ ರಂಗದಲ್ಲಿ ಮಿಂಚಿದ್ದು ಎನ್ನುವುದು ಪ್ರಭುದೇವರ ಹಳೆಯ ಬದುಕಿನ ಪುಟಗಳಲ್ಲಿ ಕಾಣ ಸಿಕ್ಕ ಮಾಹಿತಿ.
ಸಿನಿಮಾ ರಂಗದ ಖ್ಯಾತ ಡ್ಯಾನ್ಸ್ ಮಾಸ್ಟರ್ ಮುಗೂರು ಸುಂದರಂ ಅವರ ಮೂವರು ಪುತ್ರರಲ್ಲಿ ಪ್ರಭು ಮೊದಲಿಗರು ಉಳಿದಂತೆ ನಟರಾದ ರಾಜು ಸುಂದರಂ ಹಾಗೂ ನಾಗೇಂದ್ರ ಪ್ರಸಾದ್. ಮೂವರು ನೃತ್ಯವನ್ನು ಅರಿದು ಕುಡಿದವರು. ಮೂವರು ಈಗ ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಕಂಡುಕೊಂಡ ಕೋರಿಯೋಗ್ರಾಫರ್ಸ್ಗಳು.
ಅಂದಹಾಗೆ ಬಹಳ ಮಂದಿಗೆ ಗೊತ್ತಿರದ ಸತ್ಯವೆಂದರೆ ಪ್ರಭುದೇವ ಭರತನಾಟ್ಯವನ್ನು ಕಲಿತದ್ದು ಕರಾವಳಿ ಮೂಲದ ಖ್ಯಾತ ಭರತನಾಟ್ಯ ಕಲಾವಿದ ಉಡುಪಿ ಮೂಲದ ಲಕ್ಷ್ಮಿ ನಾರಾಯಣನನ್ ಹಾಗೂ ಧರ್ಮರಾಜ್ ಅವರಿಂದ... ಇದೇ ಕಾರಣದಿಂದ ಆಗಾಗ ಸದ್ದಿಲ್ಲದೇ ಮೈಸೂರು ಹಾಗೂ ಉಡುಪಿಯಲ್ಲಿರುವ ನೃತ್ಯ ಗುರುವಿನ ಮನೆಗೆ ಪ್ರಭುದೇವ ಕದ್ದು ಮುಚ್ಚಿ ಬರುತ್ತಾ ಇರುತ್ತಾರೆ ಎನ್ನುವುದು ಅವರನ್ನು ನೋಡಿದ ಅಭಿಮಾನಿಗಳ ಮಾತು.
ನಾಯಕಿಯರು ತೆರೆಗೆ ಸರಿದು ಹೋದರು:
ನಟ ಪ್ರಭುದೇವ ಅವರಿಗೆ ನಟನೆ ಬರೋದಿಲ್ಲ.. ಜತೆಗೆ ಅವರ ಜತೆಯಲ್ಲಿ ನಟಿಸಿದ ನಾಯಕಿಯರು ಮತ್ತೆ ತೆರೆಯಿಂದ ಮರೆಯಾಗುತ್ತಾರೆ ಎನ್ನುವ ಅಪವಾದವೊಂದು ಅವರನ್ನು ಸದಾ ಕಾಲ ಕಾಡುತ್ತಾ ಇದೆ. ಪ್ರಭುದೇವ ಜತೆಯಲ್ಲಿ ಆರಂಭಿಕ ಚಿತ್ರಗಳಲ್ಲಿ ನಟಿಸಿದ ನಗ್ಮಾ, ಭೂಮಿಕಾ, ಜ್ಯೋತಿಕಾ ಹೀಗೆ ಐದಾರು ನಾಯಕಿಯರು ಪ್ರಭುದೇವ ಅವರ ಜತೆಯಲ್ಲಿ ನಟಿಸಿದ ನಂತರ ಏಕ್ದಂ ಮರೆಯಾಗಿ ಹೋದರು. ಪ್ರಭುದೇವ ಚಿತ್ರಗಳು ಬರೀ ಡ್ಯಾನ್ಸ್ ಮಾತ್ರ ಮೊದಲ ಅದ್ಯತೆ ನೀಡುತ್ತಾರೆ ಎನ್ನುವ ಕಾರಣಕ್ಕೆ ಪ್ರಭು ಅವರ ಚಿತ್ರಗಳು ಸಾಧಾರಣ ಓಟ ದಾಖಲಿಸಿಕೊಂಡಿದೆ.
ಪ್ರಭುದೇವ ಅವರ ವೈವಾಹಿಕ ಬದುಕು ಕೂಡ ನೆಟ್ಟಗೆ ಉಳಿದಿಲ್ಲ. ಪ್ರಭು ಅವರ ಆರಂಭಿಕ ಪತ್ನಿ ರಮಾಲತಾ ಬಿಟ್ಟು ನಟಿ ನಯನಾತಾರಾ ಅವರ ಸೀರೆ ಹಿಡಿದುಕೊಂಡು ಪ್ರಭು ಮದುವೆ ಹಂತಕ್ಕೆ ತಲುಪಿದಾಗ ವಿವಾಹ ಮುರಿದುಬಿತ್ತು. ಕೊನೆಗೆ ಯಾವುದು ಬೇಡ ಎಂದುಕೊಂಡು ಪ್ರಭುದೇವ ವೈವಾಹಿಕ ಬದುಕಿನಲ್ಲಿ ಸುಮ್ಮನೆ ಕೂತು ಸಿನಿಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಾರೆ.
ಪ್ರಭುದೇವ ನಿರ್ದೇಶನದ ಬಹುತೇಕ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಹೊಸ ಹವಾವನ್ನೇ ಸೃಷ್ಟಿಸಿದೆ. 'ವಾಟೆಂಡ್', 'ರೌಡಿ ರಾಥೋಡ್' ಚಿತ್ರಗಳನ್ನು ಬಾಲಿವುಡ್ ಗೆ ಕೊಟ್ಟು ಬಾಲಿವುಡ್ ಪ್ರೇಕ್ಷಕ ವರ್ಗಕ್ಕೆ ಹೊಸ ಕ್ರೇಜ್ ಹುಟ್ಟುಹಾಕಿದರು. ಮತ್ತೊಂದೆಡೆ ತಮಿಳು, ತೆಲುಗಿನಲ್ಲೂ ವರ್ಷಕ್ಕೆ ಒಂದರೆಡು ಚಿತ್ರಗಳನ್ನು ಮಾಡಿ ನಿರ್ದೇಶಕರಾಗಿ ಒಳ್ಳೆಯ ಹೆಸರು ಸಂಪಾದನೆ ಮಾಡುತ್ತಿದ್ದಾರೆ.
ಸಚಿನ್ ಅಭಿಮಾನಿ ಪ್ರಭು:
ಪ್ರಭುದೇವ ಸಚಿನ್ ತೆಂಡುಲ್ಕರ್ ಅವರ ಅಪ್ಪಟ ಅಭಿಮಾನಿ. ಭಾರತ ಕ್ರಿಕೆಟ್ ತಂಡದಿಂದ ಸಚಿನ್ ನಿವೃತ್ತಿ ಘೋಷಣೆ ಮಾಡಿದಾಗ ಪುಟ್ಟ ಮಗುವಿನಂತೆ ಪ್ರಭು ಅತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಸಚಿನ್ ನಿವೃತ್ತಿಯಾಗಬಾರದಿತ್ತು ಎನ್ನುವ ನೋವಿನಲ್ಲೇ ಪ್ರಭು ಸಚಿನ್ ಅಭಿಮಾನಿಗಳಿಗೆ ಯೂಟ್ಯೂಬ್ನಲ್ಲಿ ಹಾಡೊಂದನ್ನು ಪೋಸ್ಟ್ ಮಾಡಿದ್ದಾರೆ.
ಈ ಹಾಡು ವಿಶೇಷವಾಗಿ ಸಚಿನ್ಗಾಗಿ ಹಾಗೂ ಅವರ ಅಭಿಮಾನಿಗಳಿಗೆ ಅದಕ್ಕಾಗಿ 'ಧೂಳ್ ಟಕ್ಕರ್' ಹೆಸರಿಟ್ಟಿದ್ದೇನೆ ಎಂದು ಟ್ವಿಟ್ಟರ್ನಲ್ಲಿ ಪ್ರಭು ಬರೆದುಹಾಕಿದ್ದರು. ಇದರಲ್ಲಿ ತೆಂಡುಲ್ಕರ್ ಕುರಿತ ಗೀತೆಯೊಂದಿದೆ. ಈ ವೀಡಿಯೋದಲ್ಲಿ ತೆಂಡುಲ್ಕರ್ ಡ್ರೈವ್ಗಳು, ವಿಶಿಷ್ಟ ಹೊಡೆತಗಳನ್ನು ತೋರಿಸಿದ್ದಾರೆ. ಪ್ರಭುದೇವ್ ಗೀತೆಗೆ ಎಲ್.ವಿ. ಗಣೇಶನ್ ಸಂಗೀತ ಸಂಯೋಜನೆ ಮಾಡಿದ್ದು, ರಾಮಲಿಂಗಮ್ ನಿರ್ದೇಶಿಸಿದ್ದಾರೆ.
ಸ್ಫೋಟಕ ಆಟಗಾರ ವೀರೇಂದ್ರ ಸೆಹವಾಗ್ ಕುರಿತ ವೀಡಿಯೋಗಳನ್ನು ಕೂಡಾ ಪ್ರಭುದೇವ್ ಬಿಡುಗಡೆ ಮಾಡಿದ್ದಾರೆ. ಇವೀಗ ಯೂ-ಟ್ಯೂಬ್ನಲ್ಲಿ ಕ್ಲಿಕ್ ಆಗುತ್ತಿದೆ. ದಿನದಿಂದ ದಿನಕ್ಕೆ ಈ ಹಾಡನ್ನು ನೋಡುವವರ ಸಂಖ್ಯೆ ಜ್ವರದಂತೆ ಏರಿಕೆ ಕಂಡಿದೆ. ಟೋಟಲಿ ಪ್ರಭುದೇವ ಸಿನಿಮಾದ ಜತೆಯಲ್ಲಿ ಹಾಡಿನ ಮೂಲಕ ಮತ್ತೊಂದು ಸಲ ಹಿಟ್ ಆಗುತ್ತಿದ್ದಾರೆ ಎನ್ನೋದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರ.
( vk lvk published dis article on 9.1.2013)
ಕಡಲ್ ಮಣಿ ಕಟ್ಟಿದ ಕಡಲ್ !
* ಸ್ಟೀವನ್ ರೇಗೊ, ದಾರಂದಕುಕ್ಕು
ಮಣಿರತ್ನಂ ನಿರೀಕ್ಷಿತ ಚಿತ್ರ ಕಡಲ್ ಫೆಬ್ರವರಿಯ ಮೊದಲ ವಾರದಲ್ಲಿ ಬಿಡುಗಡೆ ಕಾಣುವ ಭವಿಷ್ಯ ಹೇಳಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕಡಲ್ ಹತ್ತು ಹಲವು ಕಾರಣಗಳಿಂದ ನಿರೀಕ್ಷೆ ಖುದ್ದು ಮಣಿಗಿಂತ ಜಾಸ್ತಿ ಅವರನ್ನು ನೆಚ್ಚಿಕೊಂಡಿರುವ ಅಭಿಮಾನಿಗಳಿಗೆ ಇದ್ದೆ ಇದೆ.
ಕಡಲ್ ನಲ್ಲಿ ತೇಲುತ್ತಾರಾ ಮಣಿ..?
ತಮಿಳಿನ ಖ್ಯಾತ ನಟ ಕಾರ್ತಿಕ್ ಪುತ್ರ ಗೌತಮ್ ಕಾರ್ತಿಕ್ ನನ್ನು ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಡುವಂತೆ ಮಾಡುವ ಪ್ರಯತ್ನ ಕಡಲ್ ನಲ್ಲಿ ನಡೆಯುತ್ತಿದೆ. ಇದರ ಜತೆಯಲ್ಲಿ ಖ್ಯಾತ ನಟಿ ರಾಧಾ ಅವರ ಪುತ್ರಿ ತುಳಸಿ ಕೂಡ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಮೀನುಗಾರನೊಬ್ಬನ ನಂಬಿಕೆ ಹಾಗೂ ಮಾನವೀಯತೆಯ ನುಡುವಿನ ಒಂದು ಸೂಕ್ಷ್ಮವಾದ ಎಳೆಯನ್ನು ಇಟ್ಟುಕೊಂಡು ಮಣಿ ಕಡಲ್ ಚಿತ್ರವನ್ನು ಸುಂದರವಾಗಿ ಪೋಣಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತದಿಂದ ಹೊರ ಬಂದ ಕಡಲ್ ಈಗಾಗಲೇ ಯೂಟ್ಯೂಬ್ ರೌಂಡ್ ಟೇಬಲ್ ಮೇಲೆ ಹಿಟ್ ಮ್ಯಾಲೆ ಹಿಟ್ ಆಗುತ್ತಿದೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ಜತೆಯಲ್ಲಿ ಮಣಿಯ ನೆಚ್ಚಿನ ಶಿಷ್ಯ ಅರವಿಂದ ಸ್ವಾಮಿ ಮತ್ತೆ ನಟನೆಗೆ ಇಳಿದುಬಿಟ್ಟಿದ್ದಾರೆ. ಈಗಾಗಲೇ ಅರವಿಂದ ಸ್ವಾಮಿ ತನ್ನ ಸಿನಿಮಾ ಬದುಕಿನಿಂದ ದೂರ ಉಳಿದುಬಿಟ್ಟಿದ್ದರು.
ಕಡಲ್ಗೆ ನಾಯಕಿಯರದ್ದೇ ಕಾಟ :
ಮಣಿರತ್ನಂ ಚಿತ್ರಗಳೆಂದರೆ ಅಲ್ಲಿ ನಾಯಕಿಯರಿಗೂ ಸಾಕಷ್ಟು ಅವಕಾಶಗಳಿರುತ್ತದೆ ಎನ್ನುವುದಕ್ಕೆ ಅವರ ನಿರ್ದೇಶನದ ಚಿತ್ರಗಳೇ ಸಾಕ್ಷಿ ನೀಡುತ್ತದೆ. ಈ ಮಾತು ಕಡಲ್ಗೂ ಅನ್ವಯಿಸುತ್ತದೆ. ಕಡಲ್ ಚಿತ್ರಕ್ಕೆ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರಾ ಹಾಸನ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಹೊರಬಂದಿತ್ತು. ಆದರೆ ಅಕ್ಷರಾ ನಟಿಸುವುದಿಲ್ಲ ಎಂದು ಮಾಧ್ಯಮಗಳಲ್ಲಿ ಬಾಯಿಬಿಟ್ಟರು.
ಈ ಬಳಿಕ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಹೆಸರು ಕೂಡ ಓಡಾಡಿಕೊಂಡಿತ್ತು. ಆದರೆ ನಂತರ ಸೋನಮ್ ತಂದೆ ಅನಿಲ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರಿಂದ ಮಣಿ ಸೋನಮ್ ಕೈ ಬಿಡಬೇಕಾಯಿತು. ಈ ಬಳಿಕ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿಯ ಪುತ್ರಿ ಜಾನ್ವಿ ಹೆಸರು ಕೇಳಿ ಬಂದಿತ್ತು.
ಆದರೆ ನಂತರ ತೆಲುಗು ನಟಿ ಸಮಂತಾ ನಾಯಕಿ ಎನ್ನುವ ಘೋಷಣೆ ಹೊರಬಂತು. ಇತ್ತಕಡೆ ಸಮಂತಾ ಇತರ ಚಿತ್ರಗಳ ಡೇಟ್ ಗಳು ಒಂದಕ್ಕೊಂದು ತಾಳೆ ಹಾಕುವುದಿಲ್ಲ ಎಂದು ಗೊತ್ತಾದ ತಕ್ಷಣ ಸಮಂತಾ ಕೂಡ ಮಣಿಯ ಕೈ ಯಿಂದ ಜಾರಿ ಹೋದಳು. ಈ ಬಳಿಕವೇ ನಟಿ ರಾಧಾ ಪುತ್ರಿ ತುಳಸಿ ನಾಯರ್ ಎ್ನವ ಬೆಡಗಿ ಕಡಲ್ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಂಡರು.
ಕಡಲ್ ಫಸ್ಟ್ ಲುಕ್ನಲ್ಲಿ ಪ್ರೇಕ್ಷಕ ಫಿದಾ !
ಡಿಸೆಂಬರ್ ತಿಂಗಳ ನಡು ಭಾಗದಲ್ಲಿ ಕಡಲ್ ಚಿತ್ರಕ್ಕೆ ಸಂಬಂಧಿಸಿದ ಚಿತ್ರಗಳು ಮಾಧ್ಯಮಗಳಲ್ಲಿ ಹೊರಬಂದಿತ್ತು. ಇದೇ ಚಿತ್ರಗಳು ಗೂಗಲ್ ಹಾಗೂ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸರ್ಚ್ ಮಾಡುವ ಗೀಳು ಪ್ರೇಕ್ಷಕ ವಲಯದಲ್ಲಿ ಮೂಡಿತ್ತು ಎನ್ನುವ ಮಾತು ಹರಿದಾಡುತ್ತಿದೆ. ಈ ಚಿತ್ರದಲ್ಲಿನ ತುಳಸಿಗೆ ನಾಯರ್ ಗೆ ಸಂಬಂಧಿಸಿದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿದ ನಂತರ ಪ್ರೇಕ್ಷಕರು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.
ಫಸ್ಟ್ ಲುಕ್ ಬಿಡುಗಡೆ ಸಂದರ್ಭದಲ್ಲಿ ತುಳಸಿ ಮಾತನಾಡುತ್ತಾ, ನನ್ನ ಫೋಟೋಗಳನ್ನು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನೋಡಿಕೊಳ್ಳಬೇಕು ಎಂದು ಅದೆಷ್ಟೋ ದಿನಗಳಿಂದ ಕನಸು ಕಾಣುತ್ತಿದ್ದೆ. ಈಗದು ನನಸಾಗಿದೆ ಎಂದಿದ್ದರು. ನಟನೆ ಎಂದರೆ ತುಂಬಾ ಇಷ್ಟ. ನನ್ನ ಸಂಭಾಷಣೆಯನ್ನು ನಾನೇ ಹೇಳಿಕೊಳ್ಳಬೇಕು. ಮನೆಪಾಠಕ್ಕೆ ಹೋಗಿ ತಮಿಳು, ತೆಲುಗು ಭಾಷೆಗಳನ್ನು ಕಲಿತೆ. ಮಣಿರತ್ನಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವುದು ನಿಜಕ್ಕೂ ನನ್ನ ಪಾಲಿನ ಅತಿದೊಡ್ಡ ಅದಷ್ಟ ಎಂದು ತುಳಸಿ ಮಣಿರತ್ನಂರನ್ನು ಸಿಕ್ಕಾಪಟ್ಟೆ ಹೊಗಳಿದ್ದರು.
( lvk published dis article on 8.1.2013)
Subscribe to:
Posts (Atom)