Thursday, July 28, 2011

ಅಸಲ್ ಸುನಾಮಿ


ಈಗ ದಕ್ಷಿಣ ಕನ್ನಡದ ಮನೆ- ಮನೆಗಳಲ್ಲಿ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ನೀಡಿದೆ. ಅದರಲ್ಲೂ ಗಾಂನಗರದಲ್ಲೂ ಚಿತ್ರ ಈ ವಾರ ತೆರೆ ಕಾಣುತ್ತಿದೆ. ‘ಅಸಲ್’ನ ಜತೆಯಲ್ಲಿ ಎಂಜಾಯ್ ಮಾಡಿಕೊಂಡು ಬನ್ನಿ.

ಕರಾವಳಿಯ ಕೋಸ್ಟಲ್ವುಡ್ ಸಿನ್ಮಾ ಇಂಡಸ್ಟ್ರಿಗೆ ಏಕ್ ದಂ ಹೈ ಡೋಸ್ ಗ್ಲುಕೋಸ್ ಸಿಕ್ಕಿದೆ. ತುಳು ಸಿನ್ಮಾ ಲ್ಯಾಂಡ್ನಲ್ಲಿ ಈಗ ‘ಒರಿಯರ್ದೊರಿ ಅಸಲ್’ ಹೊಸ ಮೈಲ್ ಸ್ಟೋನ್ ನೆಟ್ಟಿದೆ. ೨೫ ವರ್ಷಗಳ ಹಿಂದಿನ ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿದ ತುಳು ನಾಟಕ ‘ಒರಿಯರ್ದೊರಿ ಅಸಲ್ ’ಈಗ ಹಿರಿತೆರೆಯ ಮೇಲೆ ರಾಕೆಟ್ ವೇಗದಲ್ಲಿ ಓಡುತ್ತಿದೆ ಎನ್ನೋದು ರೆಕಾರ್ಡ್ ಬುಕ್ನಲ್ಲಿ ಬರೆದಿಟ್ಟುಕೊಳ್ಳಬೇಕಾದ ವಿಷ್ಯಾಯಾಗುತ್ತಿದೆ. ಕರಾವಳಿಯ ಪ್ರತಿಭಾವಂತ ರಂಗಭೂಮಿ ಕಲಾವಿದ ವಿಜಯ್ಕುಮಾರ್ ಕೊಡಿಯಾಲ್ಬೈಲ್ ಈಗ ಸಿನ್ಮಾದ ಮೂಲಕ ಗೆಲುವಿನ ನಗೆ ಬೀರಿ ನಿಂತಿದ್ದಾರೆ.
ಇದು ‘ಒರಿಯರ್ದೊರಿ ಅಸಲ್’ ಮಾತು . ಕರಾವಳಿಯ ಹತ್ತಾರು ಥಿಯೇಟರ್ಗಳಿಗೆ ಒಂದೇ ವೇಳೆ ದಾಳಿ ಇಟ್ಟ ‘ಅಸಲ್’ ಭರ್ಜರಿಯಾಗಿ ಶತ ದಿನಗಳತ್ತ ಮುನ್ನುಗ್ಗುತ್ತಿದೆ. ಅಸಲ್ ಇದ್ದ ಚಿತ್ರ ಮಂದಿರಗಳು ದಿನದಿಂದ ದಿನಕ್ಕೆ ಪ್ರೇಕ್ಷಕ ವರ್ಗದಿಂದ ತುಂಬಿ ತುಳುಕುತ್ತಿದೆ ಎನ್ನೋದು ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ರ ಆನ್ ದಿ ರೆಕಾರ್ಡ್ ಮಾತು. ತುಳು ನಾಟಕ ರಂಗದಲ್ಲಿ ತನ್ನದೇ ಆದ ಅಭಿಮಾನಿ ವರ್ಗವನ್ನು ಕ್ರಿಯೇಟ್ ಮಾಡಿಕೊಂಡ ವಿಜಯ್ ಕುಮಾರ್ ಅವರ ಗೆಲುವು ಒಂದು ಲೆಕ್ಕಚಾರದ ಪ್ರಕಾರ ನಿರೀಕ್ಷಿತ ಗೆಲುವು.
ವಿಜಯಣ್ಣ ಮುಟ್ಟಿದ್ದು ಎಲ್ಲವೂ ಸಕ್ಸಸ್ ಕಂಡಿದೆ ಎನ್ನೋದು ಅವರ ಆಪ್ತ ವಲಯದ ಮಾತಿದೆ. ಅವರ ಕ್ಯಾಂಪ್ನಿಂದ ಬಂದ ಎಲ್ಲ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿದೆ. ಸಾಮಾಜಿಕ ಕಾಳಜಿ ಜತೆಯಲ್ಲಿ ಹಾಸ್ಯದ ಲೇಪವನ್ನು ಸೇರಿಸಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುವ ವಿಚಾರದಲ್ಲಿ ಕರಾವಳಿಯ ನಾಟಕ ಪ್ರಿಯರಿಗೆ ವಿಜಯ್ ಕುಮಾರ್ ಎ ವನ್ ಬ್ರ್ಯಾಂಡ್ ಎಂದೇ ಹೇಳಲಾಗುತ್ತಿದೆ. ಅದರಲ್ಲೂ ‘ಅಸಲ್’ ಇಡೀ ತುಳು ನಾಟಕ ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲು ಹಾಕಿದ ನಾಟಕ. ಈ ನಾಟಕದ ಯಶಸ್ವಿನಿಂದ ಹಲವಾರು ನಾಟಕ ಸಂಘಗಳು ಹುಟ್ಟಿಕೊಂಡಿತು.
ಕರಾವಳಿಯಲ್ಲಿ ವಿಶ್ವದ ಎಲ್ಲ ಸಿನ್ಮಾಗಳು ಬಂದು ಸಕ್ಸಸ್ ಆದರೂ ಕೂಡಾ ತುಳು ನಾಟಕಕ್ಕಂತೂ ಪ್ರೇಕ್ಷಕ ವರ್ಗದ ಕೊರತೆ ಬಿದ್ದಿಲ್ಲ. ವಿಜಯ್ ಕುಮಾರ್ ಅವರ ನಾಟಕಗಳು ಪ್ರದರ್ಶನವಾಗುತ್ತಿದೆ ಎಂದಾದರೆ ಅಲ್ಲಿ ಸಿನ್ಮಾ ಥಿಯೇಟರ್ಗಳೇ ಬರಿದಾಗಿ ಬಿಡುತ್ತಿತ್ತು ಎನ್ನುವ ಮಾತು ಕೂಡ ಕರಾವಳಿಯ ಸಿನ್ಮಾ ವಠಾರದಲ್ಲಿ ಚಾಲ್ತಿಯಲ್ಲಿದೆ. ಅಂದಹಾಗೆ ಈಗ ದಕ್ಷಿಣ ಕನ್ನಡದ ಮನೆ- ಮನೆಗಳಲ್ಲಿ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ನೀಡಿದೆ.
ಒಮ್ಮೆ ಕುಟುಂಬದ ಜತೆಯಲ್ಲಿ ಸಿನ್ಮಾ ಥಿಯೇಟರ್ಗಳಿಗೆ ಹೋಗಿ ಬಂದವರು ಗೆಳೆಯರ, ಸ್ನೇಹಿತೆಯರ, ಅಕ್ಕಪಕ್ಕದವರ ಒತ್ತಾಯಕ್ಕೆ ಮಣಿದು ಸಿನ್ಮಾ ನೋಡಿಕೊಂಡು ಬಂದು ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ನಿರ್ದೇಶಕರ ಕೈಗೆ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್. ಇದೇ ತುಳುನಾಡಿನ ಪ್ರೇಕ್ಷಕ ವರ್ಗದ ಕ್ರೇಜ್ ಕರಾವಳಿಯ ಉದ್ದಕ್ಕೂ ಸಿನ್ಮಾ ಶತದಿನಗಳತ್ತ ಓಡುವಂತೆ ಮಾಡುತ್ತಿದೆ.
ಅಂದಹಾಗೆ ತುಳು ಸಿನ್ಮಾದ ಇತಿಹಾಸದಲ್ಲಿಯೇ ‘ಅಸಲ್’ನದ್ದು ದೊಡ್ಡ ಗಳಿಕೆ. ಕನ್ನಡ ಸಿನ್ಮಾ ರೇಂಜ್ನಲ್ಲಿ ಈ ಚಿತ್ರ ಕರಾವಳಿಯಲ್ಲಿ ಬ್ಯುಸಿನೆಸ್ ಕುದುರಿಸಿದೆ. ದೊಡ್ಡ ದೊಡ್ಡ ಮಲ್ಟಿಫ್ಲೆಕ್ಸ್ ಥಿಯೇಟರ್ನಲ್ಲೂ ಬಿಂದಾಸ್ ಕಲೆಕ್ಷನ್ ಮಾಡಿದೆ. ತುಳುವರಿಗೆ ಭಾಷಾಭಿಮಾನವಿಲ್ಲ, ತುಳು ಸಿನ್ಮಾಗಳು ಬರೀ ಅವಾರ್ಡ್ಗೆ ಮಾತ್ರ ಮಾಡಿಕೊಂಡು ಬರುತ್ತಾರೆ ಎನ್ನುವ ಆರೋಪದ ಖಜಾನೆಗೆ ‘ಒರಿಯರ್ದೊರಿ ಅಸಲ್’ ನೇರವಾಗಿ ಬ್ಯುಸಿನೆಸ್ ಮೂಲಕ ಉತ್ತರ ನೀಡಿದೆ.
ಅದರಲ್ಲೂ ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ಗೆ ಮಾತ್ರ ಮೊರೆ ಹೋಗುತ್ತಿದ್ದ ಸೋಕಾಲ್ಡ್ ಹೈಫೈ ಮಂದಿ ಕೂಡ ‘ಅಸಲ್’ಗೆ ತಲೆತೂಗಿ ಬಂದಿದ್ದಾರೆ. ಚಿತ್ರ ಇರುವ ಪ್ರತಿ ಥಿಯೇಟರ್ ಮುಂದೆ ಪ್ರೇಕ್ಷಕ ವರ್ಗ ಕ್ಯೂ ನಿಂತುಕೊಂಡು ಟಿಕೇಟ್ ಸಿಗದೇ ಬ್ಲಾಕ್ ಮಾರ್ಕೆಟ್ ಟಿಕೇಟ್ಗೆ ಮೊರೆ ಹೋಗುವ ಸ್ಥಿತಿ ಉದ್ಭವವಾಗಿರೋದು ಸಧ್ಯಕ್ಕಂತೂ ‘ಅಸಲ್’ಗೆ ಮಾತ್ರ ಅನ್ನೋದು ವಿಷ್ಯಾ. ಇನ್ನೂ ರಂಗಭೂಮಿಯಲ್ಲಿ ಮಾತ್ರ ತನ್ನ ಸಾಮರ್ಥ್ಯ ತೋರಿಸುತ್ತಿದ್ದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇಲ್ಲಿ ತನ್ನ ಕ್ರಿಯೇಟಿವಿಟಿಗೆ ಧಕ್ಕೆಯಾಗದ ರೀತಿಯಲ್ಲಿ ಮ್ಯಾನೇಜ್ ಮಾಡಿಕೊಂಡು ಬಂದಿರೋದು ಚಿತ್ರದ ಯಶಸ್ವಿಯ ಕಾರಣದಲ್ಲೊಂದು ಎನ್ನಲಾಗುತ್ತಿದೆ.
ಕರಾವಳಿಯ ಮಾಧ್ಯಮಗಳ ಉದ್ದಕ್ಕೂ ವಿಭಿನ್ನ ರೀತಿಯ ಅಸಲ್ನ ಪ್ರಚಾರ ತಂತ್ರ. ಜಾಹೀರಾತುಗಳಲ್ಲಿ ಕಂಡು ಬರುತ್ತಿದ್ದ ಡಿಫರೆಂಟ್ ವರ್ಕ್ ಔಟ್ಗಳೆಲ್ಲವೂ ಚಿತ್ರದ ಯಶಸ್ವಿಯಲ್ಲಿ ಭಾಗಿಯಾಗಿದೆ. ಚಿತ್ರ ಕರಾವಳಿಯ ತುಳು ಪ್ರೇಕ್ಷಕ ವರ್ಗವನ್ನು ಬಹಳಷ್ಟು ಮೋಡಿ ಮಾಡಿದೆ. ಅದಕ್ಕಾಗಿ ತುಳುವರು ದೇಶ- ವಿದೇಶದ ಯಾವುದೇ ಮೂಲೆಯಲ್ಲಿರಲಿ ಅಲ್ಲಿ ಹೋಗಿ ಸಿನ್ಮಾ ತೋರಿಸಿಬರಬೇಕು ಎನ್ನೋದು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ರ ಮಾತು.
ಅದಕ್ಕಾಗಿ ಈ ವಾರ ಬೆಂಗಳೂರಿನಲ್ಲಿ ಚಿತ್ರ ತೆರೆ ಕಾಣಲಿದೆ. ಇಲ್ಲಿನ ಯಶಸ್ಸಿನ ನಂತರ ಮಧ್ಯಪ್ರಾಚ್ಯ ದೇಶಗಳಲ್ಲಿ ಹಾಗೂ ಬಾಲಿವುಡ್ ನಗರಿ ಮುಂಬಯಿಯಲ್ಲೂ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ತೆರೆಗೆ ತರುವ ಕುರಿತು ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ವಿಜಯ್ ಕುಮಾರ್ ಕೊಡಿಯಾಲ್ಬೈಲ್. ತುಳು ಚಿತ್ರವನ್ನು ಸಾಟಲೈಟ್ ಚಾನೆಲ್ನವರು ಖರೀದಿ ಮಾಡೋದು ಬಹಳ ಕಡಿಮೆ. ಅಂತೂ ಇಂತೂ ಅವಾರ್ಡ್ ಬಂದರಂತೂ ಸರಕಾರದ ಅನದಲ್ಲಿರುವ ಚಾನೆಲ್ಗಳು ತುಳು ಚಿತ್ರವನ್ನು ಖರೀದಿ ಮಾಡುತ್ತಾರೆ. ಆದರೆ ‘ಅಸಲ್’ನ ಟಿವಿ ಹಕ್ಕುಗಳನ್ನು ಪಡೆಯಲು ಕೆಲವು ಖಾಸಗಿ ಚಾನೆಲ್ಗಳು ಮುಂದೆ ಬಂದಿದೆಯಂತೆ. ಆದರೆ, ಒಳ್ಳೆಯ ಬೆಲೆಗಾಗಿ ಕೊಡಿಯಾಲ್ಬೈಲ್ ಎದುರು ನೋಡುತ್ತಿದ್ದಾರೆ. ವಾರದೊಳಗೆ ಎತ್ತಂಗಡಿಯಾಗುವ ಸಿನಿಮಾಗಳ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗುವಾಗ ‘ಅಸಲ್’ ಜನ ಮೆಚ್ಚಿದ ಚಿತ್ರ. ಸೋ. ವಿಜಯ್ ಕುಮಾರ್ ಅವರ ಕಾಯುವಿಕೆಗೆ ಅರ್ಥವಿದೆ ಅನ್ನಿಸೋಲ್ವ..?
(vk daily lvk puravani published dis article 29.07.2011)

No comments:

Post a Comment