Sunday, July 31, 2011

ಬಾಲಿವುಡ್ಗೆ ಕುಡ್ಲದ ವಾಯ್ಸ್ ಓವರ್


ಕರಾವಳಿಯಲ್ಲಿ ವೈಷ್ಣು ಬೇಬಿಯ ಕಾರ್ಯಕ್ರಮ ಇದೆ ಎಂದು ಹೇಳಿದ್ರೆ ಸಾಕು. ಮೂರು ಸಾವಿರ ಆಡಿಯನ್ಸ್ ರೆಡಿಯಾಗಿರುತ್ತಾರೆ. ತುಳುವಿನಲ್ಲಿ ಮಾತನಾಡುವ ಶೈಲಿಗೆ ಇಡೀ ಆಡಿಯೆನ್ಸ್ಗಳು ಶರಣು ಹೊಡೆದ ಬಹಳಷ್ಟು ಉದಾಹರಣೆಗಳು ಕುಡ್ಲದಲ್ಲಿ ಹುಡುಕಾಡಿದರೆ ಸಿಗುತ್ತದೆ.

ಅವಳು ಈಗಷ್ಟೇ ಮುಂಬಯಿಯ ಅಂಧೇರಿಯಲ್ಲಿರುವ ಡಿವೈನ್ ಚೆಲ್ಡ್ ಸ್ಕೂಲ್ನ ಸೆವೆನ್ತ್ ಕ್ಲಾಸ್ನಲ್ಲಿ ಸ್ಟಡಿ ಮಾಡುವ ಪುಟ್ಟ ಪೋರಿ. ಆದರೆ ಬಾಲಿವುಡ್ನ ಬಹುತೇಕ ಮಂದಿಗೆ ಅವಳು ಚಿರಪರಿಚಿತಳು. ಎಲ್ಲಕ್ಕಿಂತಲೂ ಮುಖ್ಯವಾಗಿ ಬಾಲಿವುಡ್ನ ಘಟಾನುಘಟಿ ಸ್ಟಾರ್ ನಟ- ನಟಿಯರ ಜತೆಯಲ್ಲಿ ವೈಷ್ಣು ಬೇಬಿಗೆ ತುಂಬಾ ಸಲುಗೆ ಇದೆ. ಸಲುಗೆ ಯಾಕಿರಬಾರದು ಹೇಳಿ. ವೈಷ್ಣು ಒಂದ್ ಸಲ ‘ಅಂಕಲ್- ಆಂಟಿ ’ಎನ್ನುವ ಒಂದು ಉಚ್ಛಾರ ತೆಗೆದರೆ ಸಾಕು ಬಿಡಿ. ಯಾರು ಬೇಕಾದರೂ ಟೋಟಲಿ ಬೌಲ್ಡ್ .
ಇಂಗ್ಲೀಷ್, ಹಿಂದಿ, ಮರಾಠಿ, ಕನ್ನಡ, ತುಳು ಹೀಗೆ ಏಕಕಾಲದಲ್ಲಿ ನಿರರ್ಗಳವಾಗಿ ಮಾತನಾಡುವ ಹುಡುಗಿ ನೋಡಲು ಕೂಡ ಅಷ್ಟೇ ಮುದ್ದು ಮುದ್ದು . ಮಾತು ಕೂಡ ಗಂಟಳ ಪೆಟ್ಟಿಗೆಯಲ್ಲಿ ಇಳಿದು ಸ್ಕ್ಯಾನಿಂಗ್ ಆಗಿ ಹೊರ ಬರುತ್ತಿದೆಯೇ ಎನ್ನುವ ಸಂದೇಹ ಬಹುತೇಕ ಮಂದಿಗೆ ಕಾಡುವುದಿದೆ. ಅಂದಹಾಗೆ ಪುಟ್ಟ ಪೋರಿ ವೈಷ್ಣವಿ ಶೆಟ್ಟಿ ಈ ಎಲ್ಲ ಹೊಗಳಿಕೆ ಮಾತುಗಳಿಂದ ಮೇಲೆ ಇದ್ದಾಳೆ ಎನ್ನೋದು ಮಾತ್ರ ಗ್ಯಾರಂಟಿಯಾಗಿ ಹೇಳಿಬಿಡಬಹುದು. ಅಂದಹಾಗೆ ಬಾಲಿವುಡ್ನ ಪಡಸಾಲೆಗೆ ನುಗ್ಗಿ ಬನ್ನಿ. ಅಲ್ಲಿ ನಿಜವಾಗಿಯೂ ವೈಷ್ಣವಿ ಶೆಟ್ಟಿಯ ಪರಿಚಯವಾಗಿ ಬಿಡುತ್ತದೆ. ಆಸ್ಕರ್ ವಿಜೇತ ಭಾರತೀಯ ಚಿತ್ರ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರ ಆರಂಭವಾಗುವುದಕ್ಕಿಂತ ಮೊದಲು ಇವಳ ವಾಯ್ಸ್ ಬಂದು ಬಿಡುತ್ತದೆ. ಯೆಸ್. ಕರಾವಳಿಯ ಪುಟ್ಟ ಪೋರಿ ವೈಷ್ಣು ಬಾಲಿವುಡ್ನ ಚಿತ್ರಗಳಿಗೆ ವಾಯ್ಸ್ ಕೊಡುತ್ತಿದ್ದಾರೆ. ಅವರೊಬ್ಬ ಕಂಠದಾನ ಕಲಾವಿದೆ.
ಆಮೀರ್ ಖಾನ್ ನಟಿಸಿದ ‘ಘಜನಿ’ ಶಾಹೀದ್ ನಟಿಸಿದ ‘ಕಿಸ್ಮತ್ ಕನೆಕ್ಷನ್’ ಅಕ್ಷಯ್ ಕುಮಾರ್ ನಟಿಸಿದ ‘ಜಂಬೋ’ ಚಿತ್ರಗಳು ಸೇರಿದಂತೆ ಮರಾಠಿ ಹಾಗೂ ಹಿಂದಿಯ ಭಾಷೆಯ ಸರಿಸುಮಾರು ೨೦ಕ್ಕಿಂತ ಹೆಚ್ಚು ಚಿತ್ರಗಳಿಗೆ ಕಂಠದಾನ ಕಲಾವಿದೆಯಾಗಿ ದುಡಿದಿದ್ದಾರೆ. ಇಷ್ಟು ಚೆನ್ನಾಗಿದ್ದೀಯಾ .. ವೈಷ್ಣುಆಕ್ಟಿಂಗ್ಗೆ ಯಾಕೆ ಬಂದಿಲ್ಲ ಅಂತಾ ಕೇಳಿದ್ರೆ ‘ ಇಲ್ಲ. ಅಂಕಲ್ ನನಗೆ ಆಫರ್ಗಳು ಸಾಲಾಗಿ ಬಂದವು. ಆದರೆ ಆಫರ್ಗಳು ನನ್ನ ಶಿಕ್ಷಣಕ್ಕೆ ಬಹಳ ತೊಂದರೆ ಕೊಡುತ್ತಿತ್ತು. ವಾಯ್ಸ್ ಕೊಡೋದು ನನಗೆ ಹಾಬಿ ಇದ್ದ ಹಾಗೆ. ಅಲ್ಲಿ ನನಗೆ ಸಿಕ್ಕ ಫ್ರಿ ಟೈಮ್ನಲ್ಲಿ ಕೆಲಸ ಮಾಡುವ ಅವಕಾಶ ಇದೆ. ಅದಕ್ಕಾಗಿ ಚಿತ್ರಗಳಿಗೆ ವಾಯ್ಸ್ ಕೊಡುತ್ತಿದ್ದೇನೆ’ ಎಂದು ಬಿಟ್ಟಳು.
ವೈಷ್ಣುವಿನ ಮೆಮೋರಿ ಕಾರ್ಡ್ನಿಂದ ಒಂದ್ ಸಲ ರಿಕಾಲ್ ಮಾಡಿದಾಗ ಅವಳು ಹೇಳಿದಿಷ್ಟು: ಅಕ್ಕಿ ಮಾಮ ಅಭಿನಯದ ‘ಜಂಬೋ’ ನನಗೆ ಬಹಳ ಖುಷಿ ಕೊಟ್ಟ ಚಿತ್ರ ನನ್ನ ಮೊದಲ ಡೈಲಾಗ್ ನನಗೆ ಈಗಲೂ ನೆನಪಿದೆ.ಲಾಂಗ್ಡಾ ಕೇ ಕ್ಯೂ ಚಲ್ ರಹೇ ಹೋ... ಎಂದು ಸೋನಿಯಾ ಎನ್ನುವ ಪುಟ್ಟ ಆನೆ ಮರಿಗೆ ವಾಯ್ಸ್ ಕೊಟ್ಟಿದ್ದು ನಂತರ ನಟಿ ಲಾರಾ ನನ್ನ ವಾಯ್ಸ್ಗೆ ಮೆಚ್ಚಿ ತಂಬಿಕೊಂಡು ಮುದ್ದಾಡಿದ್ದು ಎಲ್ಲವೂ ಖುಷಿಯಾಗುತ್ತೆ ಅಂಕಲ್.. ’ಅಂದ್ಲು ಬಿಟ್ಳು. ವೈಷ್ಣು ಬರೀ ಬಾಲಿವುಡ್ ಚಿತ್ರಗಳಿಗೆ ವಾಯ್ಸ್ ಕೊಡುತ್ತಾಳೆ ಎನ್ನುವುದಕ್ಕಿಂತ ಹೆಚ್ಚಾಗಿ ಅವಳು ಪ್ರತಿಭಾವಂತ ಹುಡುಗಿ. ಇಡೀ ಮರಾಠವಾಡಿ ಸಾರಿ ಕಣ್ರಿ ಮಹಾರಾಷ್ಟ್ರದಲ್ಲಿ ಇವಳಷ್ಟೂ ನಿರರ್ಗಳವಾಗಿ ಹರಿಕಥೆ ಮಾಡುವ ಹುಡುಗಿ ಎಲ್ಲೂ ಸಿಗಲು ಸಾಧ್ಯವಿಲ್ಲ. ಮುಂಬಯಿಯಲ್ಲಿ ಈಗಾಗಲೇ ಹರಿಕಥೆಯ ಎರಡು- ಮೂರು ಕಾರ್ಯಕ್ರಮಗಳು ನಡೆದಿದೆ.
ಅದಕ್ಕಿಂತಲೂ ಕರಾವಳಿಯಲ್ಲಿ ವೈಷ್ಣು ಬೇಬಿಯ ಕಾರ್ಯಕ್ರಮ ಇದೆ ಎಂದು ಹೇಳಿದ್ರೆ ಸಾಕು. ಮೂರು ಸಾವಿರ ಆಡಿಯನ್ಸ್ ರೆಡಿಯಾಗಿರುತ್ತಾರೆ. ತುಳುವಿನಲ್ಲಿ ಮಾತನಾಡುವ ಶೈಲಿಗೆ ಇಡೀ ಆಡಿಯೆನ್ಸ್ಗಳು ಶರಣು ಹೊಡೆದ ಬಹಳಷ್ಟು ಉದಾಹರಣೆಗಳು ಕುಡ್ಲದಲ್ಲಿ ಹುಡುಕಾಡಿದರೆ ಸಿಗುತ್ತದೆ. ೨೦೦೬ರಲ್ಲಿ ಸಹರಾ ಟಿವಿಯವರು ನಡೆಸಿದ ರಿಯಾಲಿಟಿ ಶೋನಲ್ಲಿ ಎರಡು ಬಾರಿ ವಿಜೇತರಾಗಿ ಹೊರ ಬಂದಿದ್ದಾರೆ. ಕಲಿಯುವುದರಲ್ಲೂ ತುಂಬಾ ಮುಂದೆ ಆದರೂ ಮ್ಯಾಕ್ಸ್ ಕೊಂಚ ತಲೆ ಕಡೆಸಿಬಿಡುತ್ತದೆ ಎನ್ನುತ್ತಾಳೆ ವೈಷ್ಣು. ಎಲ್ಲಕ್ಕೂ ಎಲ್ಲಿಂದ ಬಂತು ಪ್ರೇರಣೆ ಎಂದಾಗ ತನ್ನ ಪಕ್ಕದಲ್ಲಿ ನಿಂತಿದ್ದ ತಂದೆ ದಾಮೋದರ್, ತಾಯಿ ಕೇಸರಿ ಹಾಗೂ ಅಕ್ಕ ತೃಪ್ತಿಯನ್ನು ಬೊಟ್ಟು ಮಾಡಿ ತೋರಿಸಿ ಬಿಟ್ಟಳು ವೈಷ್ಣವಿ.
ಅಂದಹಾಗೆ ಶಬನಾ ಆಜ್ಮಿ ನಟಿಸಿದ ಇನ್ನೂ ರಿಲೀಸ್ ಆಗದ ಚಿತ್ರವೊಂದರಲ್ಲಿ ವೈಷ್ಣು ಲೀಡ್ ರೋಲ್ವೊಂದಕ್ಕೆ ವಾಯ್ಸ್ ಕೊಟ್ಟಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಈ ಚಿತ್ರ ಆರ್ಟ್ ವಿದ್ ಕಮರ್ಷಿಯಲ್ ಟಚ್ ಇದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ವೈಷ್ಣುವಿನ ಸೊಲೋ ವಾಯ್ಸ್ ಇಡೀ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರೇಕ್ಷಕರ ಹೃದಯ ಬಡಿತವನ್ನು ಸರಿಯಾಗಿ ಅಧ್ಯಯನ ಮಾಡಿದ ವೈಷ್ಣವಿಗೆ ಮುಂದೆ ಓದಿ ಹಾರ್ಟ್ ಸ್ಪೆಶಾಲಿಸ್ಟ್ ಆಗಬೇಕೆನ್ನುವುದು ಮಹಾದಾಸೆ. ಒಳ್ಳೆಯದಾಗಲಿ ಪುಟ್ಟಿ ಎಂದು ಬೆನ್ನು ತಟ್ಟಿ ಹೊರ ಬಂದಾಗ ವೈಷ್ಣು ಮೊಗದಲ್ಲಿ ನಗುವಿತ್ತು. ಭವಿಷ್ಯದಲ್ಲಿ ಮಿಂಚುವ ಹೊಳಪಿತ್ತು.

Saturday, July 30, 2011

ಇದು ‘ರಮ್ಯಾ’ ಕಾಲ


ಗ್ಲಾಮರ್ ಹಾಗೂ ಎಕ್ಸ್ಫೋಸಿಂಗ್ ಎರಡು ತುಂಬಾನೇ ಭಿನ್ನ ಸಬ್ಜೆಕ್ಟ್. ಗ್ಲಾಮರ್ ಎನ್ನೋದು ಪ್ರತಿಯೊಂದು ಸಿನಿಮಾ ನಟಿಯರಿಗೆ ಇರಬೇಕಾದ ಆಭರಣ. ಆದರೆ ಎಕ್ಸ್ಫೋಸಿಂಗ್ ಎನ್ನೋದು ಆಗಲ್ಲ ಎನ್ನೋದು ರಮ್ಯಾ ಬಾರ್ನಾರ ಬಿಂದಾಸ್ ಮಾತು.

ಅಮಲು ಕಡಲಿನಲ್ಲಿ ತೇಲಿಸಿ ಬಿಡುವ ಸೌಂದರ್ಯದ ಗಣಿ. ತುಟಿ ಅಂಚಿನಲ್ಲಿ ಮಿಂಚಿ ಮರೆಯಾಗುವ ನಗು. ದುಂಡುಮುಖದ ತುಂಬಾ ಎದ್ದು ಕಾಣುವ ಸೌಮ್ಯತೆ. ಯಾರನ್ನೋ ಹುಡುಕಾಟದಲ್ಲಿರುವ ಅಗಲವಾದ ನಯನಗಳು ಎಲ್ಲವೂ ಜತೆಯಾಗಿ ಸೇರಿಕೊಂಡರೆ ಅವಳೇ ರಮ್ಯಾ ಬಾರ್ನಾ.
ಗ್ಲಾಮರ್ ಲೋಕದ ಬಳುಕಿನ ಜತೆಗೆ ಆಕ್ಟಿಂಗ್ನ ಪಾಠಗಳನ್ನು ಸರಿಯಾಗಿ ಕಲಿತಕೊಂಡು ನಟಿಸಲು ಬಂದ ರಮ್ಯಾ ಬಾರ್ನಾ ಈಗ ಕರಾವಳಿಯ ಪಾಲಿಗೆ ‘ಪ್ರೀತಿ’ಯ ಹುಡುಗಿ. ಕರಾವಳಿಯಲ್ಲಿ ಸೆಂಚುರಿಯತ್ತ ಓಡುತ್ತಿರುವ ತುಳು ಸಿನ್ಮಾ ‘ಒರಿಯರ್ದೊರಿ ಅಸಲ್’ನ ಪ್ರೀತಿಯ ರೋಲ್ನಲ್ಲಿ ರಮ್ಯಾ ಬಾರ್ನಾ ಕಾಣಿಸಿಕೊಂಡಿದ್ದು ತುಳುವರಿಗೆ ತುಂಬಾನೇ ಲೈಕ್ ಆಗಿದೆ.
‘ರಮ್ಯಾ ಬಾರ್ನಾ ನಮ್ಮೂರ ಹುಡುಗಿ. ನಮ್ಮ ಪಕ್ಕದ ಮನೆಯಲ್ಲಿ ಹುಟ್ಟಿದ ಪ್ರೀತಿ’ ಎಂದು ಹೇಳಿಕೊಂಡು ಸುತ್ತಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆಯಂತೆ ಎನ್ನುವ ಮೆಸೇಜ್ ರಮ್ಯಾ ಬಾರ್ನಾರ ಸೆಲ್ಗೂ ಬಡಿದಿದೆ. ಇತ್ತ ಕಡೆ ‘ಒರಿಯರ್ದೊರಿ ಅಸಲ್’ ತುಳು ಚಿತ್ರ ಬೆಂಗಳೂರಿನ ಥಿಯೇಟರ್ನಲ್ಲಿ ಇಳಿದು ಸಖತ್ ಆಗಿ ಓಡುತ್ತಿದೆ. ಕರಾವಳಿಯಲ್ಲೂ ಅರ್ಧ ಸೆಂಚುರಿ ಬಾರಿಸಿರುವ ‘ಅಸಲ್’ ಚಿತ್ರದ ಕಾರ್ಯಕ್ರಮವೊಂದರಲ್ಲಿ ರಮ್ಯಾ ಬಾರ್ನಾ ಲವಲವಿಕೆಯ ಜತೆ ಕೂತು ಬಹಳ ಹೊತ್ತು ಹರಟಿದರು. ‘ಅಸಲ್’ ಸಿನ್ಮಾದ ಜತೆಯಲ್ಲಿ ರಮ್ಯಾ ಬಾರ್ನಾ ತನ್ನ ಟಾಪ್ ಸಿಕ್ರೇಟ್ಗಳನ್ನು ಕೂಡ ಬಿಚ್ಚಿಟ್ಟರು.
‘ನನಗೆ ತುಳು ಭಾಷೆ ಸರಿಯಾಗಿ ಗೊತ್ತಿಲ್ಲ. ಆದರೆ ಅದು ಎಲ್ಲೂ ಸಮಸ್ಯೆ ಆಗಿಲ್ಲ. ಅಸಲ್ ನಾಟಕ ಕರಾವಳಿಯಲ್ಲಿ ಕ್ಲಿಕ್ ಆಗಿತ್ತು ಎನ್ನುವ ವಿಚಾರ ನನಗೆ ಮೊದಲೇ ತಿಳಿದಿತ್ತು. ಅಸಲ್ನ ಸ್ಟೋರಿ, ಕಾಮೆಡಿ, ಟೀಮ್ ವರ್ಕ್ ಕುರಿತು ಬಹಳ ಇಷ್ಟವಾಯಿತು. ತುಳುವಿನಲ್ಲಿ ನಟಿಸುವಾಗ ಅದೊಂದು ಸವಾಲು ಎಂದು ಸ್ವೀಕರಿಸಿ ನಟಿಸಿದೆ. ಚಿತ್ರ ಎಲ್ಲ ಕಡೆ ಗೆಲುತ್ತಿದೆ ಎನ್ನೋದು ಖುಷಿ ಎಂದು ಬಿಟ್ಟ್ರು ರಮ್ಯಾ ಬಾರ್ನಾ.
ಚಿತ್ರಗಳ ಸೋಲೋ ಪಾತ್ರದಲ್ಲಿ ಕಾಣಿಸುತ್ತಿರೋದು ಕಡಿಮೆಯಾಗುತ್ತಿದೆಯಲ್ಲ ಮೇಡಂ ಎಂದು ಕೇಳಿದರೆ ರಮ್ಯಾ ಹೇಳುವುದಿಷ್ಟು: ಆರಂಭದ ವೃತ್ತಿ ಬದುಕಿನಲ್ಲಿ ಸೋಲೋ ಪಾತ್ರಗಳಿಗೆ ಜಾಸ್ತಿ ಮಹತ್ವ ನೀಡಿದೆ. ಯಾಕೋ ಏನೋ ಅದು ಪ್ರೇಕ್ಷಕ ವರ್ಗವನ್ನು ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ. ಆದರೆ ನಾನು ‘ಪಂಚರಂಗಿ’ ‘ಹುಡುಗರು’ ಚಿತ್ರದಲ್ಲಿ ಸೋಲೋಕ್ಕಿಂತ ಬೇರೆ ಪಾತ್ರದಲ್ಲಿ ನಟಿಸಿದೆ. ಅದು ಪ್ರೇಕ್ಷಕರಿಗೆ ಹಿಡಿಸಿದೆ. ಮುಂದಿನ ‘ಅರ್ನಾಕಲಿ’ ಹಾಗೂ ‘ಪಂಚಾಮೃತ’ದಲ್ಲೂ ಇಂತಹ ಪಾತ್ರಗಳೇ ಮುಂದುವರಿದಿದೆ. ನನಗೆ ಪಾತ್ರ ಬೇಡುವ ಅವಕಾಶ, ಸ್ಟೋರಿಲೈನ್ ಮಾತ್ರ ಮುಖ್ಯವಾಗುತ್ತದೆ ಎನ್ನುತ್ತಾರೆ ಅವರು.
ಗ್ಲಾಮರ್ ಹಾಗೂ ಎಕ್ಸ್ಫೋಸಿಂಗ್ ಎರಡು ತುಂಬಾನೇ ಭಿನ್ನ ಸಬ್ಜೆಕ್ಟ್. ಗ್ಲಾಮರ್ ಎನ್ನೋದು ಪ್ರತಿಯೊಂದು ಸಿನಿಮಾ ನಟಿಯರಿಗೆ ಇರಬೇಕಾದ ಆಭರಣ. ಆದರೆ ಎಕ್ಸ್ಫೋಸಿಂಗ್ ಎನ್ನೋದು ಆಗಲ್ಲ. ರಮ್ಯಾ ಬಾರ್ನಾ ಎರಡರಲ್ಲಿ ಯಾವ ಸೈಡ್ ನಿಲ್ಲುತ್ತಾರೆ ಎಂದರೆ ರಮ್ಯಾ ಹೀಗೆಳುತ್ತಾರೆ : ಪಾತ್ರಗಳು ಅಂತಹ ಎಕ್ಸ್ಫೋಸಿಂಗ್ ವಿಚಾರವನ್ನು ಬಯಸಿದಾಗ ಖಂಡಿತವಾಗಿಯೂ ಯೋಚನೆ ಮಾಡುತ್ತೇನೆ. ಆದರೆ ಅನಗತ್ಯ ಎಕ್ಸ್ಫೋಸಿಂಗ್ ನನಗೆ ಇಷ್ಟವಿಲ್ಲ. ಪಾತ್ರದ ಬೇಡಿಕೆಗೆ ತಕ್ಕಂತೆ ಎಕ್ಸ್ಫೋಸಿಂಗ್ ಇರಬೇಕು. ಐಟಂ ಸಾಂಗ್ನಲ್ಲಿ ಕುಣಿಯುವ ನಾಯಕಿ ಗ್ಲಾಮರ್ನಲ್ಲಿ ಕಂಡರೆ ಸಾಲದು ಎಕ್ಸ್ಫೋಸಿಂಗ್ ಮಾಡಬೇಕು ಎಂದು ಐಟಂ ಸಾಂಗ್ ಬಯಸುತ್ತದೆ.
ಅಸಲ್ನಲ್ಲಿ ಕಾಲೇಜು ಹುಡುಗಿಯ ಗ್ಲಾಮರ್ ಲುಕ್ ಇತ್ತು. ಆದರೆ ಎಕ್ಸ್ಫೋಸಿಂಗ್ ಮ್ಯಾಟರ್ ಇರಲಿಲ್ಲ. ಸಾಮಾನ್ಯವಾಗಿ ಕಾಲೇಜು ಹುಡುಗಿ ಯಾವ ರೀತಿ ಡ್ರೆಸ್ ಕೋಡ್ ಬಯಸುತ್ತಾಳೆ. ಅದೇ ಡ್ರೆಸ್ ಕೋಡ್ ‘ಅಸಲ್’ನಲ್ಲಿ ಇತ್ತು. ಸೆಕೆಂಡ್ ಪಾರ್ಟ್ನಲ್ಲಿ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಸೀರೆಗೆ ಜಾಸ್ತಿ ಮಹತ್ವ ಕೊಟ್ಟಿದ್ದರು. ಇದು ನನಗೆ ಬಹಳ ಹಿಡಿಸಿದೆ.
ರಮ್ಯಾ ಬಾರ್ನಾಗೆ ಫ್ರೀ ಟೈಮ್ ಇದ್ದಾಗ ಏನ್ ಮಾಡ್ತಾರೆ? ಫ್ರೆಂಡ್ಸ್ಗಳ ಜತೆಯಲ್ಲಿ ಶಾಫಿಂಗ್ ಮಾಡುತ್ತೇನೆ. ಗೆಳೆಯರ ಜತೆಗೆ ಹೋಗಿ ಸಿನಿಮಾ ನೋಡುತ್ತೇನೆ. ತುಂಬಾನೇ ಫ್ರೀ ಟೈಮ್ ಇತ್ತು ಅಂದ್ರೆ ಹೆತ್ತವರ, ಗೆಳೆಯರ ಜತೆಯಲ್ಲಿ ಲಾಂಗ್ ಟೂರ್ಗೆ ಹೋಗಿ ಬರುತ್ತೇನೆ. ಕಾಲೇಜಿನಲ್ಲಿದ್ದಾಗ ಜಾಸ್ತಿ ಕಾದಂಬರಿಗಳನ್ನು ಓದುತ್ತಿದ್ದೆ ಆದರೆ ಈಗ ಓದಲು ಟೈಮ್ ಸಿಕ್ತಿಲ್ಲ . ಕಾದಂಬರಿ ಒಂದ್ ಸಾರಿ ಓದಲು ಕುಳಿತರೆ ಅದನ್ನು ಮುಗಿಸಿಯೇ ಹೇಳಬೇಕು ಅನ್ನೋದು ನನ್ನ ನಿಯಮ ಎನ್ನುತ್ತಾರೆ ರಮ್ಯಾ. ಮದುವೆ ವಿಚಾರ ಎತ್ತಿದರೆ ಸಾಕು. ಈಗ ಬೇಡ ಸಧ್ಯಕ್ಕೆ ಅಂತಾ ಯೋಚನೆಯಲ್ಲಿ ಇಲ್ಲ ಅಂತಾ ನಗುವಿನ ಮೂಲಕ ಪ್ರಶ್ನೆಯನ್ನು ಗುಡಿಸಿ ತೆಗೆಯುತ್ತಾರೆ. ಟೋಟಲಿ ರಮ್ಯಾ ಸಿನ್ಮಾ ಲ್ಯಾಂಡ್ನ್ನು ಸಿರೀಯಸ್ ಆಗಿ ಪರಿಗಣಿಸಿದ್ದಾರೆ ಅಂದಾಯಿತು ಮಾರಾಯ್ರೆ.

ಭಾರದ ಹುಡುಗಿ ‘ಸೋನಿ’


ಬಾಲಿವುಡ್ ಬಾಕ್ಸಾಫೀಸ್ನ ಗಲ್ಲಾ ಪೆಟ್ಟಿಗೆಯನ್ನು ಸೂರೆ ಮಾಡಿದ ‘ದಭಾಂಗ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸೋನಾಕ್ಷಿಯ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಬಾಲಿವುಡ್ನ ಘಟಾನುಘಟಿ ನಿರ್ದೇಶಕರು ಸೋನಾಕ್ಷಿ ಮನೆಯ ಮುಂದೆ ಕುರ್ಚಿ ಹಾಕಿ ಕೂತಿದ್ದಾರೆ. ಆದರೆ ಸೋನಾಕ್ಷಿ ಬೆಳೆಸಿಕೊಳ್ಳುವ ‘ದೇಹ ಭಾರ’ ಬಹಳಷ್ಟು ಸುದ್ದಿಗೆ ಗ್ರಾಸವಾಗುತ್ತಿದೆ.

ಪ್ರೇಕ್ಷಕನನ್ನು ಅಮಲು ಕಡಲಿನಲ್ಲಿ ತೇಲಿಸಿ ಬೀಡುವ ಮಾದಕ ಕಣ್ಣುಗಳು. ಬಿಟ್ಟು ಬಿಡದೇ ಪ್ರೇಕ್ಷಕನನ್ನು ಕಾಡಿಸಿ ಪೀಡಿಸುವ ಮೊಗ ಜತೆಯಲ್ಲಿ ವಯಸ್ಸಿಗೂ ಮೀರಿದ ದೇಹ ಸಿರಿ. ಒಂದ್ ಕಾಲದಲ್ಲಿ ತೆಳ್ಳಗೆ ಬೆಳ್ಳಗೆ ಇದ್ದೆ ಎಂದು ಖುದ್ದು ಅವಳೇ ಹೇಳಿಕೊಂಡರೂ ಒಪ್ಪಿಕೊಳ್ಳಲು ಒಳ್ಳದ ಮನಸ್ಥಿತಿ ಇದ್ರೆ ಅವಳೇ ದಭಾಂಗ್ ಹುಡುಗಿ ಸೋನಾಕ್ಷಿ ಸಿನ್ಹಾ. ತಂದೆ ಶತ್ರುಘ್ನ ಸಿನ್ಹಾ ಬಾಲಿವುಡ್ನಲ್ಲಿ ಬಹಳ ದೊಡ್ಡ ಹೆಸರು ಎಂದು ಕೊಂಡು ಬಾಲಿವುಡ್ ಅಂಗಳದಲ್ಲಿ ತನ್ನ ಮಾಕು ತೋರಿಸದೇ ಪ್ರತಿಭೆಯ ಮೂಲಕವೇ ಎಲ್ಲರ ಗಮನ ಸೆಳೆದ ಸೋನಾಕ್ಷಿ ಸಿನ್ಹಾ ಬಾಲಿವುಡ್ ಸಿನ್ಮಾ ನಗರಿಗೆ ಹೊಸ ಹುಡುಗಿ.
ಬಾಲಿವುಡ್ ಬಾಕ್ಸಾಫೀಸ್ನ ಗಲ್ಲಾ ಪೆಟ್ಟಿಗೆಯನ್ನು ಸೂರೆ ಮಾಡಿದ ‘ದಭಾಂಗ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸೋನಾಕ್ಷಿಯ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಬಾಲಿವುಡ್ನ ಘಟಾನುಘಟಿ ನಿರ್ದೇಶಕರು ಸೋನಾಕ್ಷಿ ಮನೆಯ ಮುಂದೆ ಕುರ್ಚಿ ಹಾಕಿ ಕೂತಿದ್ದಾರೆ. ಆದರೂ ಒಂಚೂರು ಮಾಕು ತೋರಿಸದೇ ವರ್ಕ್ ಮಾಡುವ ಹುಡುಗಿ ಎಂದೇ ಬಾಲಿವುಡ್ ಮಂದಿ ಹೇಳುತ್ತಿದ್ದಾರೆ. ‘ದಭಾಂಗ್’ ನಂತರ ಸೋನಾಕ್ಷಿ ಕಾಣಿಸಿಕೊಳ್ಳುವ ನಿರ್ದೇಶಕ ಶಿರೀಸ್ ಕುಂದರ್ರ ‘ಜೋಕರ್’ ಚಿತ್ರ ಈಗಾಗಲೇ ದೊಡ್ಡ ಹೈಫ್ ಬೆಳೆಸಿಕೊಂಡಿದೆ. ಶಿರೀಸ್ ಕುಂದರ್ ಎರಡನೇ ಚಿತ್ರದಲ್ಲಾದರೂ ಗೆಲ್ಲಬೇಕು ಎಂಬ ಹಟದಲ್ಲಿದ್ದಾರೆ. ಇತ್ತ ಕಡೆ ಸೋನಾಕ್ಷಿಗೂ ಮೊದಲ ಹಿಟ್ ನಂತರ ಮತ್ತೊಂದು ಹಿಟ್ ಕೊಡಬೇಕು ಎನ್ನುವ ಕಾತರನೂ ಇದೆ.
‘ಜೋಕರ್’ ಸಿನ್ಮಾ ಥಿಯೇಟರ್ಗೆ ಲಗ್ಗೆ ಇಟ್ಟ ನಂತರ ಸೋನಾಕ್ಷಿ ನಟಿಸುವ ‘ರೇಸ್-೨’, ತೆಲುಗಿನ ಕಿಕ್ ರಿಮೇಕ್ ಚಿತ್ರ ಹಿಂದಿಯ ‘ಕಿಕ್’, ತೆಲುಗಿನ ‘ವಿಕ್ರಮಾಕ್ರುಡು’ನ ಅವತರಣಿಕೆ ‘ರೌಡಿ ರಾಥೋಡ್’ ಹಾಗೂ ‘ಸನ್ ಆಫ್ ಸರ್ದಾರ್’ ಚಿತ್ರಗಳ ಚಿತ್ರೀಕರಣ ನಡೆಯಲಿದೆ. ಸೋನಾಕ್ಷಿಯ ಜೋಕರ್ನ ಸಕ್ಸಸ್ ಪಾಯಿಂಟ್ ಈ ಎಲ್ಲ ಚಿತ್ರಗಳಿಗೂ ಆನ್ವಯಿಸಲಿದೆ. ಅದರ ಗೆಲುವು ಮುಂದಿನ ಚಿತ್ರಗಳಿಗೂ ಮುಂದುವರಿಯುವ ಕುರಿತು ಮಾತುಕತೆ ನಡೆಯುತ್ತಿದೆ. ಅಂದಹಾಗೆ ಎರಡು ವರ್ಷಗಳ ಕಾಲ ಸೋನಾಕ್ಷಿ ಯಾರ ಕೈಗೂ ಸಿಗೋದಿಲ್ಲ ಎನ್ನೋದು ಮುಂಬಯಿ ಮಾಯಾನಗರಿಯ ಪಡಸಾಲೆಯಲ್ಲಿ ಕೂತಿರುವ ಬಾಲಿವುಡ್ ಪಂಡಿತರ ಭವಿಷ್ಯದ ಮಾತು.
ಆದರೆ ಸೋನಾಕ್ಷಿ ಸಿನ್ಹಾ ‘ದಭಾಂಗ್’ ಚಿತ್ರದ ಸಕ್ಸಸ್ ನಂತರ ಒಂಚೂರು ಮೈ ‘ಸಿರಿ’ ಬೆಳೆಸಿದ್ದಾರೆ ಎನ್ನೋದು ‘ಜೋಕರ್’ ಚಿತ್ರ ನಿರ್ದೇಶಕ ಶಿರೀಸ್ ಕುಂದರ್ರ ಸಿರೀಯಸ್ ಮಾತು. ಇದೇ ಮಾತನ್ನು ‘ದಭಾಂಗ್ ನಿರ್ಮಾಪಕರಾದ ಅರ್ಬಜ್ಖಾನ್ ಹಾಗೂ ಮಲೈಕಾ ಆರೋರಾ ಕೂಡ ಹೇಳಿದ್ದರು. ‘ದಭಾಂಗ್’ ಚಿತ್ರ ತಯಾರಿ ಹಂತದಲ್ಲಿದ್ದಾಗ ಸೋನಾಕ್ಷಿಯ ಮೈ‘ಭಾರ’ ಜಾಸ್ತಿಯಾಗಿತ್ತು. ದೇಹ ಭಾರ ಕಡಿಮೆಯಾದರೆ ಮಾತ್ರ ನಾಯಕಿ ಪಟ್ಟ ಕೊಡಲಾಗುವುದು ಎಂದು ಅಂದು ಅರ್ಬಜ್ ಖಾನ್ ಹೇಳಿದ್ದರು. ಅವರ ಮಾತಿನಂತೆ ಸೋನಾಕ್ಷಿ ಬಹಳಷ್ಟು ದೇಹ ಭಾರವನ್ನು ಇಳಿಸಿಕೊಂಡಿದ್ದರು.
‘ಜೋಕರ್’ ಸಿನ್ಮಾ ಈಗಾಗಲೇ ಬಹಳಷ್ಟು ಭಾಗದ ಚಿತ್ರೀಕರಣ ಮುಗಿಸಿದೆ. ಇನ್ನೂಳಿದ ಭಾಗದ ಚಿತ್ರೀಕರಣದಲ್ಲಿ ಕೊಂಚ ಮೈ ಭಾರ ಇಳಿಸಿಕೊಳ್ಳಿ ಎಂದು ಸೋನಾಕ್ಷಿ ಸಿನ್ಹಾರಿಗೆ ಶಿರೀಸ್ ಕುಂದರ್ ಸಲಹೆ ಕೊಟ್ಟಿದ್ದಾರೆ. ಚಿತ್ರದ ಆರಂಭದಲ್ಲಿ ಸೋನಾಕ್ಷಿಯ ಮೈ ಭಾರ ೬೦ರ ಅಸುಪಾಸಿತ್ತು. ಚಿತ್ರೀಕರಣ ಮಧ್ಯಭಾಗದಲ್ಲಿ ನಿಂತಾಗ ೯೦ ಕೆ.ಜಿಯಾಗಿದೆ ಇದನ್ನು ನೋಡಿ ಶಿರೀಸ್ ಕುಂದರ್ ಬಿಪಿ ರೈಸ್ ಮಾಡಿಕೊಂಡಿದ್ದಾರೆ. ಸೋನಾಕ್ಷಿಯನ್ನು ತೆಳ್ಳಗೆ ನೋಡಲು ಪ್ರೇಕ್ಷಕ ಬಯಸುತ್ತಾನೆ ಹೊರತು ದಢೂತಿ ಸೋನಾಕ್ಷಿಯಲ್ಲ ಎಂದು ಶಿರೀಸ್ ಸುಮ್ಮನೆ ಸೆಟ್ನಲ್ಲಿ ರೇಗಾಡಿದ್ದಾರೆ. ಮೈ ಭಾರ ಇಳಿಸಲು ಸರಳ ಟಿಪ್ಸ್ಗಳನ್ನು ಕೊಟ್ಟು ಅದಷ್ಟೂ ಚಾಕಲೇಟ್, ಜಂಕ್ಫುಡ್ಗಳಿಂದ ದೂರ ಇರುವಂತೆ ಸೋನಾಕ್ಷಿ ಸಿನ್ಹಾರಿಗೆ ಎಚ್ಚರಿಕೆ ನೀಡಿದ್ದಾರೆ.
‘ಜೋಕರ್’ನ ಒಂದು ಐಟಂ ಸಾಂಗ್ಗೆ ಸೋನಾಕ್ಷಿ ಸಿನ್ಹಾ ಬಹಳಷ್ಟು ತೆಳ್ಳಗೆ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಮೈಭಾರ ಏರಿಸಿಕೊಂಡಿರುವ ಸೋನಾಕ್ಷಿಯಿಂದ ಈ ಐಟಂ ಸಾಂಗ್ಗೆ ಪೆಟ್ಟು ಬೀಳಲಿದೆ. ಈ ವಿಚಾರದಲ್ಲಿ ಚಿತ್ರದ ಕೊರಿಯೋಗ್ರಾಫರ್ ಫ್ಹರಾ ಖಾನ್ ಕೂಡ ಉಪಯುಕ್ತವಾದ ಟಿಪ್ಸ್ಗಳನ್ನು ಕೊಟ್ಟು ಸೋನಾಕ್ಷಿಯ ಮೈಭಾರ ಕಡಿಮೆ ಮಾಡಲು ಪರದಾಟ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಮುಂಬಯಿ ನಗರಿಯಿಂದ ಬಂದು ಬಿದ್ದಿದೆ. ಫ್ಹರಾ ಖಾನ್ರ ‘ಶೀಲಾ ಕೀ ಜವಾನಿ’ಯ ಮ್ಯಾಜಿಕ್ ವರ್ಕ್ ಈ ಚಿತ್ರದ ಐಟಂ ಸಾಂಗ್ನಲ್ಲಿ ಮುಂದುವರಿಸುವ ಸಾಧ್ಯತೆ ಕೂಡ ದಟ್ಟವಾಗಿದೆ. ಈ ಎಲ್ಲದರ ನಡುವೆ ಸೋನಾಕ್ಷಿಯ ಮೈ ಭಾರ ಬಹಳಷ್ಟು ಸುದ್ದಿಗೆ ಇಂಬು ಕೊಡುತ್ತಿದೆ ಎನ್ನೋದು ಮಾತ್ರ ನಿಜ. ಸೋನಾಕ್ಷಿಯ ಮೈ ಭಾರ ಇಳಿದರೆ ಮತ್ತೊಂದು ಶೀಲಾ ಬಾಲಿವುಡ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂಬೋದು ಗ್ಯಾರಂಟಿ ಮಾತು.

೫ ಸಾವಿರ ಆದರೂ ನಿಂತಿಲ್ಲ ಓಟ !


ಪತ್ರಕರ್ತನಾಗಿ ‘ವಿಜಯ ಕರ್ನಾಟಕ’ಕ್ಕೆ ಬಂದ ನಂತರ ಬ್ಲಾಗ್ ಬರೆಯಬೇಕು ಎನ್ನುವ ಕನಸ್ಸಿತ್ತು. ನಾನು ಬರೆದ ನೂರಾರು ಬರಹಗಳನ್ನು ಬ್ಲಾಗ್ನಲ್ಲಿ ತುಂಬಿಸಿಡಬೇಕು ಎಂಬ ಹೆಬ್ಬಯಕೆ ಕೂಡ ಆಲದ ಮರದಂತೆ ಬೆಳೆದಿತ್ತು. ಯಾಕೋ ಗೊತ್ತಿಲ್ಲ ಸಾವಿರಾರು ಬ್ಲಾಗ್ಗಳ ನಡುವೆ ಪುಟ್ಟ ಹುಡುಗನ ಹೆಜ್ಜೆ ಗುರುತುಗಳು ಕಾಣಿಸೋದಿಲ್ಲ ಎಂಬ ಮಾತಿದೆ ಅಲ್ವಾ...? ಹಾಗೆಯೇ ವರ್ಷಗಳು ಉರುಳಿ ಹೋಯಿತು. ಕಡೇ ಆಟವಾಗಿ ಈ ವರ್ಷ ಬ್ಲಾಗ್ ಆರಂಭ ಮಾಡಿಕೊಂಡು ಬಿಟ್ಟೆ. ಈಗ ‘ರೇಗೊ ಬಾಲ್ಕನಿ’ ಎನ್ನುವ ಪುಟ್ಟ ೫ ತಿಂಗಳ ಬ್ಲಾಗ್ಗೆ ೫ ಸಾವಿರ ಮಂದಿ ಭೇಟಿ ನೀಡಿ ಹೋಗಿದ್ದಾರೆ. ಇದು ಬ್ಲಾಗ್ ಬರಹಗಾರನಿಗೆ ಖುಷಿ ಕೊಡುವ ವಿಚಾರ.
ವಿಜಯ ಕರ್ನಾಟಕ ಹಾಗೂ ಅದರ ಲವಲವಿಕೆಯ ಪುರವಣಿಯಲ್ಲಿ ಬಂದ ಲೇಖನಗಳನ್ನೇ ಇಲ್ಲಿ ತುಂಬಿಸಿ ಕೊಟ್ಟಿದ್ದೆ ಅದನ್ನು ಪ್ರೀತಿಯಿಂದ ಬಹಳಷ್ಟು ಜನ ಸ್ವಾಗತಿಸಿದರು. ನನಗೂ ಈ ಎಲ್ಲ ಲೇಖನಗಳನ್ನು ಜೋಪಾನವಾಗಿ ಇಡುವ ಕೆಲಸ ಕೂಡ ಈ ಬ್ಲಾಗ್ನಿಂದಾಗಿ ತಪ್ಪಿದೆ. ನಾನು ಯಾರು..? ಎಂದು ಪ್ರಶ್ನೆ ಹಾಕಿದವರಿಗೆ ಈ ಬ್ಲಾಗ್ ತೋರಿಸಿಬಿಡಬಹುದು ಎಂಬ ಧೈರ್ಯ ನನಗೆ ಈಗ ಬಂದು ಬಿಟ್ಟಿದೆ. ಬ್ಲಾಗ್ನ ವೀಕ್ಷಕರ ಸಂಖ್ಯೆ ೫ ಸಾವಿರ ದಾಟಿದೆ. ಈ ವೇಗದಲ್ಲಿ ವೀಕ್ಷಕರು ಇನ್ನೂ ಬ್ಲಾಗ್ಗೆ ಬರಲಿ ಎಂದು ಶುಭ ಹಾರೈಸಿದವರು ಬಹಳಷ್ಟು ಮಂದಿ. ಅದರಲ್ಲೂ ರಾಜ್ಯದ ಹಿರಿಯ ಪತ್ರಕರ್ತರು, ಪರಿಸರವಾದಿಗಳು, ಹಿರಿಯ ಸಾಹಿತಿಗಳು, ಸಮಾಜ ಸೇವಕರು, ಕ್ರೀಡಾಪಟುಗಳು, ಸಿನಿಮಾ ತಾರೆಯರು, ಖ್ಯಾತ ನಾಮ ವೈದ್ಯರು,ನನ್ನ ನೆಚ್ಚಿನ ಗೆಳೆಯರ ವರ್ಗ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಥ್ಯಾಂಕ್ಸ್..

ಇಂತೀ ನಿಮ್ಮವ
ರೇಗೊ ಬಾಲ್ಕನಿಯಿಂದ
ಸ್ಟೀವನ್ ರೇಗೊ, ದಾರಂದಕುಕ್ಕು

Thursday, July 28, 2011

ಅಸಲ್ ಸುನಾಮಿ


ಈಗ ದಕ್ಷಿಣ ಕನ್ನಡದ ಮನೆ- ಮನೆಗಳಲ್ಲಿ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ನೀಡಿದೆ. ಅದರಲ್ಲೂ ಗಾಂನಗರದಲ್ಲೂ ಚಿತ್ರ ಈ ವಾರ ತೆರೆ ಕಾಣುತ್ತಿದೆ. ‘ಅಸಲ್’ನ ಜತೆಯಲ್ಲಿ ಎಂಜಾಯ್ ಮಾಡಿಕೊಂಡು ಬನ್ನಿ.

ಕರಾವಳಿಯ ಕೋಸ್ಟಲ್ವುಡ್ ಸಿನ್ಮಾ ಇಂಡಸ್ಟ್ರಿಗೆ ಏಕ್ ದಂ ಹೈ ಡೋಸ್ ಗ್ಲುಕೋಸ್ ಸಿಕ್ಕಿದೆ. ತುಳು ಸಿನ್ಮಾ ಲ್ಯಾಂಡ್ನಲ್ಲಿ ಈಗ ‘ಒರಿಯರ್ದೊರಿ ಅಸಲ್’ ಹೊಸ ಮೈಲ್ ಸ್ಟೋನ್ ನೆಟ್ಟಿದೆ. ೨೫ ವರ್ಷಗಳ ಹಿಂದಿನ ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿದ ತುಳು ನಾಟಕ ‘ಒರಿಯರ್ದೊರಿ ಅಸಲ್ ’ಈಗ ಹಿರಿತೆರೆಯ ಮೇಲೆ ರಾಕೆಟ್ ವೇಗದಲ್ಲಿ ಓಡುತ್ತಿದೆ ಎನ್ನೋದು ರೆಕಾರ್ಡ್ ಬುಕ್ನಲ್ಲಿ ಬರೆದಿಟ್ಟುಕೊಳ್ಳಬೇಕಾದ ವಿಷ್ಯಾಯಾಗುತ್ತಿದೆ. ಕರಾವಳಿಯ ಪ್ರತಿಭಾವಂತ ರಂಗಭೂಮಿ ಕಲಾವಿದ ವಿಜಯ್ಕುಮಾರ್ ಕೊಡಿಯಾಲ್ಬೈಲ್ ಈಗ ಸಿನ್ಮಾದ ಮೂಲಕ ಗೆಲುವಿನ ನಗೆ ಬೀರಿ ನಿಂತಿದ್ದಾರೆ.
ಇದು ‘ಒರಿಯರ್ದೊರಿ ಅಸಲ್’ ಮಾತು . ಕರಾವಳಿಯ ಹತ್ತಾರು ಥಿಯೇಟರ್ಗಳಿಗೆ ಒಂದೇ ವೇಳೆ ದಾಳಿ ಇಟ್ಟ ‘ಅಸಲ್’ ಭರ್ಜರಿಯಾಗಿ ಶತ ದಿನಗಳತ್ತ ಮುನ್ನುಗ್ಗುತ್ತಿದೆ. ಅಸಲ್ ಇದ್ದ ಚಿತ್ರ ಮಂದಿರಗಳು ದಿನದಿಂದ ದಿನಕ್ಕೆ ಪ್ರೇಕ್ಷಕ ವರ್ಗದಿಂದ ತುಂಬಿ ತುಳುಕುತ್ತಿದೆ ಎನ್ನೋದು ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ರ ಆನ್ ದಿ ರೆಕಾರ್ಡ್ ಮಾತು. ತುಳು ನಾಟಕ ರಂಗದಲ್ಲಿ ತನ್ನದೇ ಆದ ಅಭಿಮಾನಿ ವರ್ಗವನ್ನು ಕ್ರಿಯೇಟ್ ಮಾಡಿಕೊಂಡ ವಿಜಯ್ ಕುಮಾರ್ ಅವರ ಗೆಲುವು ಒಂದು ಲೆಕ್ಕಚಾರದ ಪ್ರಕಾರ ನಿರೀಕ್ಷಿತ ಗೆಲುವು.
ವಿಜಯಣ್ಣ ಮುಟ್ಟಿದ್ದು ಎಲ್ಲವೂ ಸಕ್ಸಸ್ ಕಂಡಿದೆ ಎನ್ನೋದು ಅವರ ಆಪ್ತ ವಲಯದ ಮಾತಿದೆ. ಅವರ ಕ್ಯಾಂಪ್ನಿಂದ ಬಂದ ಎಲ್ಲ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿದೆ. ಸಾಮಾಜಿಕ ಕಾಳಜಿ ಜತೆಯಲ್ಲಿ ಹಾಸ್ಯದ ಲೇಪವನ್ನು ಸೇರಿಸಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುವ ವಿಚಾರದಲ್ಲಿ ಕರಾವಳಿಯ ನಾಟಕ ಪ್ರಿಯರಿಗೆ ವಿಜಯ್ ಕುಮಾರ್ ಎ ವನ್ ಬ್ರ್ಯಾಂಡ್ ಎಂದೇ ಹೇಳಲಾಗುತ್ತಿದೆ. ಅದರಲ್ಲೂ ‘ಅಸಲ್’ ಇಡೀ ತುಳು ನಾಟಕ ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲು ಹಾಕಿದ ನಾಟಕ. ಈ ನಾಟಕದ ಯಶಸ್ವಿನಿಂದ ಹಲವಾರು ನಾಟಕ ಸಂಘಗಳು ಹುಟ್ಟಿಕೊಂಡಿತು.
ಕರಾವಳಿಯಲ್ಲಿ ವಿಶ್ವದ ಎಲ್ಲ ಸಿನ್ಮಾಗಳು ಬಂದು ಸಕ್ಸಸ್ ಆದರೂ ಕೂಡಾ ತುಳು ನಾಟಕಕ್ಕಂತೂ ಪ್ರೇಕ್ಷಕ ವರ್ಗದ ಕೊರತೆ ಬಿದ್ದಿಲ್ಲ. ವಿಜಯ್ ಕುಮಾರ್ ಅವರ ನಾಟಕಗಳು ಪ್ರದರ್ಶನವಾಗುತ್ತಿದೆ ಎಂದಾದರೆ ಅಲ್ಲಿ ಸಿನ್ಮಾ ಥಿಯೇಟರ್ಗಳೇ ಬರಿದಾಗಿ ಬಿಡುತ್ತಿತ್ತು ಎನ್ನುವ ಮಾತು ಕೂಡ ಕರಾವಳಿಯ ಸಿನ್ಮಾ ವಠಾರದಲ್ಲಿ ಚಾಲ್ತಿಯಲ್ಲಿದೆ. ಅಂದಹಾಗೆ ಈಗ ದಕ್ಷಿಣ ಕನ್ನಡದ ಮನೆ- ಮನೆಗಳಲ್ಲಿ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ನೀಡಿದೆ.
ಒಮ್ಮೆ ಕುಟುಂಬದ ಜತೆಯಲ್ಲಿ ಸಿನ್ಮಾ ಥಿಯೇಟರ್ಗಳಿಗೆ ಹೋಗಿ ಬಂದವರು ಗೆಳೆಯರ, ಸ್ನೇಹಿತೆಯರ, ಅಕ್ಕಪಕ್ಕದವರ ಒತ್ತಾಯಕ್ಕೆ ಮಣಿದು ಸಿನ್ಮಾ ನೋಡಿಕೊಂಡು ಬಂದು ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ನಿರ್ದೇಶಕರ ಕೈಗೆ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್. ಇದೇ ತುಳುನಾಡಿನ ಪ್ರೇಕ್ಷಕ ವರ್ಗದ ಕ್ರೇಜ್ ಕರಾವಳಿಯ ಉದ್ದಕ್ಕೂ ಸಿನ್ಮಾ ಶತದಿನಗಳತ್ತ ಓಡುವಂತೆ ಮಾಡುತ್ತಿದೆ.
ಅಂದಹಾಗೆ ತುಳು ಸಿನ್ಮಾದ ಇತಿಹಾಸದಲ್ಲಿಯೇ ‘ಅಸಲ್’ನದ್ದು ದೊಡ್ಡ ಗಳಿಕೆ. ಕನ್ನಡ ಸಿನ್ಮಾ ರೇಂಜ್ನಲ್ಲಿ ಈ ಚಿತ್ರ ಕರಾವಳಿಯಲ್ಲಿ ಬ್ಯುಸಿನೆಸ್ ಕುದುರಿಸಿದೆ. ದೊಡ್ಡ ದೊಡ್ಡ ಮಲ್ಟಿಫ್ಲೆಕ್ಸ್ ಥಿಯೇಟರ್ನಲ್ಲೂ ಬಿಂದಾಸ್ ಕಲೆಕ್ಷನ್ ಮಾಡಿದೆ. ತುಳುವರಿಗೆ ಭಾಷಾಭಿಮಾನವಿಲ್ಲ, ತುಳು ಸಿನ್ಮಾಗಳು ಬರೀ ಅವಾರ್ಡ್ಗೆ ಮಾತ್ರ ಮಾಡಿಕೊಂಡು ಬರುತ್ತಾರೆ ಎನ್ನುವ ಆರೋಪದ ಖಜಾನೆಗೆ ‘ಒರಿಯರ್ದೊರಿ ಅಸಲ್’ ನೇರವಾಗಿ ಬ್ಯುಸಿನೆಸ್ ಮೂಲಕ ಉತ್ತರ ನೀಡಿದೆ.
ಅದರಲ್ಲೂ ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ಗೆ ಮಾತ್ರ ಮೊರೆ ಹೋಗುತ್ತಿದ್ದ ಸೋಕಾಲ್ಡ್ ಹೈಫೈ ಮಂದಿ ಕೂಡ ‘ಅಸಲ್’ಗೆ ತಲೆತೂಗಿ ಬಂದಿದ್ದಾರೆ. ಚಿತ್ರ ಇರುವ ಪ್ರತಿ ಥಿಯೇಟರ್ ಮುಂದೆ ಪ್ರೇಕ್ಷಕ ವರ್ಗ ಕ್ಯೂ ನಿಂತುಕೊಂಡು ಟಿಕೇಟ್ ಸಿಗದೇ ಬ್ಲಾಕ್ ಮಾರ್ಕೆಟ್ ಟಿಕೇಟ್ಗೆ ಮೊರೆ ಹೋಗುವ ಸ್ಥಿತಿ ಉದ್ಭವವಾಗಿರೋದು ಸಧ್ಯಕ್ಕಂತೂ ‘ಅಸಲ್’ಗೆ ಮಾತ್ರ ಅನ್ನೋದು ವಿಷ್ಯಾ. ಇನ್ನೂ ರಂಗಭೂಮಿಯಲ್ಲಿ ಮಾತ್ರ ತನ್ನ ಸಾಮರ್ಥ್ಯ ತೋರಿಸುತ್ತಿದ್ದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇಲ್ಲಿ ತನ್ನ ಕ್ರಿಯೇಟಿವಿಟಿಗೆ ಧಕ್ಕೆಯಾಗದ ರೀತಿಯಲ್ಲಿ ಮ್ಯಾನೇಜ್ ಮಾಡಿಕೊಂಡು ಬಂದಿರೋದು ಚಿತ್ರದ ಯಶಸ್ವಿಯ ಕಾರಣದಲ್ಲೊಂದು ಎನ್ನಲಾಗುತ್ತಿದೆ.
ಕರಾವಳಿಯ ಮಾಧ್ಯಮಗಳ ಉದ್ದಕ್ಕೂ ವಿಭಿನ್ನ ರೀತಿಯ ಅಸಲ್ನ ಪ್ರಚಾರ ತಂತ್ರ. ಜಾಹೀರಾತುಗಳಲ್ಲಿ ಕಂಡು ಬರುತ್ತಿದ್ದ ಡಿಫರೆಂಟ್ ವರ್ಕ್ ಔಟ್ಗಳೆಲ್ಲವೂ ಚಿತ್ರದ ಯಶಸ್ವಿಯಲ್ಲಿ ಭಾಗಿಯಾಗಿದೆ. ಚಿತ್ರ ಕರಾವಳಿಯ ತುಳು ಪ್ರೇಕ್ಷಕ ವರ್ಗವನ್ನು ಬಹಳಷ್ಟು ಮೋಡಿ ಮಾಡಿದೆ. ಅದಕ್ಕಾಗಿ ತುಳುವರು ದೇಶ- ವಿದೇಶದ ಯಾವುದೇ ಮೂಲೆಯಲ್ಲಿರಲಿ ಅಲ್ಲಿ ಹೋಗಿ ಸಿನ್ಮಾ ತೋರಿಸಿಬರಬೇಕು ಎನ್ನೋದು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ರ ಮಾತು.
ಅದಕ್ಕಾಗಿ ಈ ವಾರ ಬೆಂಗಳೂರಿನಲ್ಲಿ ಚಿತ್ರ ತೆರೆ ಕಾಣಲಿದೆ. ಇಲ್ಲಿನ ಯಶಸ್ಸಿನ ನಂತರ ಮಧ್ಯಪ್ರಾಚ್ಯ ದೇಶಗಳಲ್ಲಿ ಹಾಗೂ ಬಾಲಿವುಡ್ ನಗರಿ ಮುಂಬಯಿಯಲ್ಲೂ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ತೆರೆಗೆ ತರುವ ಕುರಿತು ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ವಿಜಯ್ ಕುಮಾರ್ ಕೊಡಿಯಾಲ್ಬೈಲ್. ತುಳು ಚಿತ್ರವನ್ನು ಸಾಟಲೈಟ್ ಚಾನೆಲ್ನವರು ಖರೀದಿ ಮಾಡೋದು ಬಹಳ ಕಡಿಮೆ. ಅಂತೂ ಇಂತೂ ಅವಾರ್ಡ್ ಬಂದರಂತೂ ಸರಕಾರದ ಅನದಲ್ಲಿರುವ ಚಾನೆಲ್ಗಳು ತುಳು ಚಿತ್ರವನ್ನು ಖರೀದಿ ಮಾಡುತ್ತಾರೆ. ಆದರೆ ‘ಅಸಲ್’ನ ಟಿವಿ ಹಕ್ಕುಗಳನ್ನು ಪಡೆಯಲು ಕೆಲವು ಖಾಸಗಿ ಚಾನೆಲ್ಗಳು ಮುಂದೆ ಬಂದಿದೆಯಂತೆ. ಆದರೆ, ಒಳ್ಳೆಯ ಬೆಲೆಗಾಗಿ ಕೊಡಿಯಾಲ್ಬೈಲ್ ಎದುರು ನೋಡುತ್ತಿದ್ದಾರೆ. ವಾರದೊಳಗೆ ಎತ್ತಂಗಡಿಯಾಗುವ ಸಿನಿಮಾಗಳ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗುವಾಗ ‘ಅಸಲ್’ ಜನ ಮೆಚ್ಚಿದ ಚಿತ್ರ. ಸೋ. ವಿಜಯ್ ಕುಮಾರ್ ಅವರ ಕಾಯುವಿಕೆಗೆ ಅರ್ಥವಿದೆ ಅನ್ನಿಸೋಲ್ವ..?
(vk daily lvk puravani published dis article 29.07.2011)

Wednesday, July 27, 2011

‘ರಿಪ್ಪಡ್ ಜೀನ್ಸ್’ ಜಮಾನಾ !


‘ರಿಪ್ಪಡ್ ಜೀನ್ಸ್’ ಪ್ಯಾಂಟ್ ಇದು ಬರೀ ಜಂಟ್ಸ್ ಸೆಕ್ಷನ್ಗೆ ಮಾತ್ರ ಸೀಮಿತವಾಗಿಲ್ಲ. ಪಕ್ಕ ಗ್ಲಾಮರ್ ತುಂಬಿತುಳುಕಲು ನಟಿ ಮಣಿಯರು ರಿಪ್ಪಡ್ ಜೀನ್ಸ್ಗಳಿಗೆ ಮೊರೆ ಹೋಗುತ್ತಿದ್ದಾರೆ. ಟಾಲಿವುಡ್ ಬ್ಯೂಟಿ ಇಲಿಯಾನಾಗೂ ರಿಪ್ಪಡ್ ಜೀನ್ಸ್ ಮ್ಯಾಲೆ ಶಾಣೆ ಮೋಹ. ಇಲಿಯಾನಾ ರಿಪ್ಪಡ್ ಜೀನ್ಸ್ ಧರಿಸಿಕೊಂಡು ಬೀದಿಗೆ ಇಳಿದು ಬಿಟ್ಟರೆ ನೂರು ಕಣ್ಣುಗಳು ಬಂದು ಮುತ್ತಿಕೊಳ್ಳುತ್ತೆ ಎಂದು ಟ್ವಿಟ್ಟರ್ನಲ್ಲಿ ಖುದ್ದು ಇಲಿಯಾನಾ ಬಹಳ ಹಿಂದೆ ಹೇಳಿಕೊಂಡಿದ್ದರು.

ಜೀನ್ಸ್ ಪ್ಯಾಂಟ್ ಅದರಲ್ಲೂ ‘ರಿಪ್ಪಡ್ ಜೀನ್ಸ್ ’ ಪ್ಯಾಂಟ್ ಅಂದ್ರೆ ಯೂತ್ ಜನರೇಶನ್ನಲ್ಲಿ ಒಂಚೂರು ಕ್ರೇಜ್ ಜಾಸ್ತಿ ಮಗಾ ಎಂದು ಬಿಟ್ಟ್ರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಶಿವಣ್ಣ ಗಾಂನಗರದ ಯಾವುದೇ ಕಾರ್ಯಕ್ರಮಗಳಿಗೆ ಹೋಗಲಿ ಅವರು ಹಾಕಿಕೊಳ್ಳುವುದು ‘ರಿಪ್ಪಡ್ ಜೀನ್ಸ್’ ಪ್ಯಾಂಟ್ ಎನ್ನುವ ವಿಚಾರ ಬಹಳಷ್ಟು ಮಂದಿಗೆ ಗೊತ್ತಿದೆ. ಇದು ಒಬ್ಬ ಶಿವಣ್ಣರ ಕತೆಯಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಜತೆಯಲ್ಲಿ ಸ್ಯಾಂಡಲ್ವುಡ್ನಲ್ಲಿ ಈಗ ರಿಪ್ಪಡ್ ಜೀನ್ಸ್ ಪ್ಯಾಂಟ್ ಧರಿಸುವ ಪರಂಪರೆ ಆರಂಭವಾಗಿದೆ.
ಇದು ಬರೀ ಜಂಟ್ಸ್ ಸೆಕ್ಷನ್ಗೆ ಮಾತ್ರ ಸೀಮಿತವಾಗಿಲ್ಲ. ಪಕ್ಕ ಗ್ಲಾಮರ್ ತುಂಬಿತುಳುಕಲು ನಟಿ ಮಣಿಯರು ಇಂತಹ ‘ರಿಪ್ಪಡ್ ಜೀನ್ಸ್’ ಪ್ಯಾಂಟ್ಗಳಿಗೆ ಮೊರೆ ಹೋಗುತ್ತಿದ್ದಾರೆ. ಟಾಲಿವುಡ್ ಬ್ಯೂಟಿ ಇಲಿಯಾನಾಗೂ ರಿಪ್ಪಡ್ ಜೀನ್ಸ್ ಮ್ಯಾಲೆ ಶಾಣೆ ಮೋಹ. ಇಲಿಯಾನಾ ರಿಪ್ಪಡ್ ಜೀನ್ಸ್ ಧರಿಸಿಕೊಂಡು ಬೀದಿಗೆ ಇಳಿದು ಬಿಟ್ಟರೆ ನೂರು ಕಣ್ಣುಗಳು ಬಂದು ಮುತ್ತಿಕೊಳ್ಳುತ್ತೆ ಎಂದು ಟ್ವಿಟ್ಟರ್ನಲ್ಲಿ ಖುದ್ದು ಇಲಿಯಾನಾ ಬಹಳ ಹಿಂದೆ ಹೇಳಿಕೊಂಡಿದ್ದರು. ಅದಕ್ಕಾಗಿ ಬಹಳಷ್ಟು ತೆಲುಗು ಸಿನ್ಮಾಗಳಲ್ಲಿ ಇಲಿಯಾನಾ ‘ರಿಪ್ಪಡ್ ಜೀನ್ಸ್’ ಬೇಕೇ ಬೇಕು ಎಂದು ಕಾಸ್ಟ್ಯೂಮ್ ಡಿಸೈನರ್ಗಳಿಗೆ ದೊಂಬಾಲು ಬಿದ್ದಿದ್ದಳು ಎಂದು ಅವರ ಆಪ್ತ ವಲಯದಿಂದ ಹೊರ ಬಂದ ಮಾತು.
ಇದು ಬರೀ ಸಿನ್ಮಾ ಲ್ಯಾಂಡ್ಗೆ ಸೀಮಿತವಾದ ಡ್ರೆಸ್ಕೋಡ್ ಅಲ್ಲ ಮಾರಾಯ್ರೆ. ರಿಪ್ಪಡ್ ಜೀನ್ಸ್ ಪ್ಯಾಂಟ್ ಜಮಾನಾ ಫ್ಯಾಶನ್ ಲೋಕದಲ್ಲೊಂದು ಡ್ರೆಂಟ್ ಸೆಟ್ಟರ್ ಕಾಸ್ಟ್ಯೂಮ್ ಅಂತಾ ಯೂತ್ ಜನರೇಶನ್ ಸೆಲ್ಟೆಕ್ಟ್ ಮಾಡಿದೆ. ಯೂತ್ ವರ್ಲ್ಡ್ಗೆ ಅಂತಹದ್ದೇ ಸೆಕ್ಸಿ ವಿದ್ ರಫ್ ಆಂಡ್ ಟಫ್ ಜೀನ್ಸ್ ಪ್ಯಾಂಟ್ ಮ್ಯಾಲೆ ಆಸಕ್ತಿ ಜಾಸ್ತಿಯಂತೆ. ರಿಪ್ಪಡ್ ಜೀನ್ಸ್ ಹಾಕಿಕೊಂಡು ಬೀದಿಗೆ ಇಳಿದಾಗ ನಾಲ್ಕಾರು ಮಂದಿ ತಾನು ಧರಿಸಿದ ಬಟ್ಟೆಯ ಬಗ್ಗೆ ಕುತೂಹಲದಿಂದ ನೋಡಬೇಕು. ಜತೆಗೆ ಡ್ರೆಸ್ಸೆನ್ಸ್ ಕುರಿತು ಮಾತನಾಡಬೇಕು ಎನ್ನುವ ಹಂಬಲ ಹೊಂದಿರುತ್ತದೆ ಎನ್ನುವ ಮಾತು ಎಲ್ಲರಿಗೂ ಗೊತ್ತು.
ಬಾಲಿವುಡ್ ನ್ಯೂ ಚಾಕಲೇಟ್ ಬಾಯ್ ರಣಬೀರ್ ಕಪೂರ್ರ ‘ಚಿಲ್ಲರ್ ಪಾರ್ಟಿ’ಯ ಹೊಸ ಐಟಂ ಸಾಂಗ್ ‘ಟಾಯ್ ಟಾಯ್ ಪಿಸ್ಸ್.. ’ನಲ್ಲಿ ಹಾಕಿಕೊಂಡ ಡ್ರೆಸ್ ಕೋಡ್ ಮೆಚ್ಚಿಕೊಂಡು ಮುಂಬಯಿ ಗಲ್ಲಿಯಲ್ಲಿರುವ ಠಪೋರಿ ಯೂತ್ ವರ್ಲ್ಡ್ ಶಾಣೆ ಇಷ್ಟಪಟ್ಟಿತ್ತು. ಸ್ಯಾಂಡಲ್ವುಡ್ನ ಸೂಪರ್ ಹಿಟ್ ಚಿತ್ರ ‘ಸೂಪರ್ನ ಉಪೇಂದ್ರರ ಸ್ಟೈಲ್ ಫ್ಯಾಶನ್ ಒಂದೇ ಸಲ ಯೂತ್ ಜನರೇಶನ್ನ್ನು ಟಾರ್ಗೆಟ್ ಮಾಡಿಕೊಂಡಿತ್ತು. ಇಂತಹ ಸ್ಟೈಲ್ ಸ್ಟೇಟ್ಮೆಂಟ್ಗಳನ್ನು ಫಾಲೋ ಮಾಡಿಕೊಂಡು ಯುವಜನತೆ ಈಗ ಬೆಳೆಯುತ್ತಿದೆ. ಆದರೆ ರಿಪ್ಪಡ್ ಜೀನ್ಸ್ ಪ್ಯಾಂಟ್ಗಳ ಜಮಾನಾ ಆರಂಭವಾಗಿ ಬಹಳ ವರ್ಷಗಳೇ ಆಗಿದೆ. ೧೯೬೦-೭೦ರ ದಶಕಗಳಲ್ಲಿ ವಿದೇಶದಲ್ಲಿ ಇಂತಹ ಜೀನ್ಸ್ ಪ್ಯಾಂಟ್ಗಳಿಗೆ ಬೇಡಿಕೆ ಕುದುರಿತ್ತು.
ಖ್ಯಾತ ಹಾಲಿವುಡ್ ನಟ ರಾಮೋನೋಸ್ ಇಂತಹ ರಿಪ್ಪಡ್ ಜೀನ್ಸ್ಗಳನ್ನು ಧರಿಸಿಕೊಂಡು ಸಿನ್ಮಾ ಮಾಡುತ್ತಿದ್ದರು. ಅವರನ್ನು ಫಾಲೋ ಮಾಡುತ್ತಿದ್ದ ಮಕ್ಕಳು ಇಂತಹ ಜೀನ್ಸ್ ಪ್ಯಾಂಟ್ಗಳಿಗೆ ಮೊರೆ ಹೋಗುತ್ತಿದ್ದರು. ಯಾಕೋ ಏನೋ ಈ ನಟ ಸಿನ್ಮಾ ಲ್ಯಾಂಡ್ ಬಿಟ್ಟು ಹೋದ ನಂತ್ರ ರಿಪ್ಪಡ್ ಜೀನ್ಸ್ಗೂ ಬ್ರೇಕ್ ಬಿತ್ತು. ೧೯೯೦ರ ನಂತರ ಹಾಲಿವುಡ್ ಸ್ಟಾರ್ ನಟ-ನಟಿಯರು ಮತ್ತೆ ರಿಪ್ಪಡ್ ಜೀನ್ಸ್ ಕಡೆ ಮುಖ ಮಾಡಿಬಿಟ್ಟರು. ಮತ್ತೆ ರಿಪ್ಪಡ್ ಜೀನ್ಸ್ ಪ್ಯಾಂಟ್ ಜಮಾನಾ ಚಿಗುರಿ ನಿಂತಿತು. ನಟಿ ಮಣಿಯರಾದ ಜೂಲಿಯಾ ರಾಬರ್ಟ್ಸ್, ಮೆಗ್ ರೇಯಾನ್, ಡ್ಯಾರೆಲ್ ಅನಾನ್, ಮಿಚೆಲ್ ಪಿಫೇರ್ ರಿಪ್ಪಡ್ ಜೀನ್ಸ್ನ ಬ್ರಾಂಡ್ ಅಂಬಾಸೀಡರ್ಗಳಂತೆ ಪ್ರಚಾರಕ್ಕೆ ಇಳಿದರು.
ರಿಪ್ಪಡ್ ಜೀನ್ಸ್ ಜತೆಯಲ್ಲಿ ಅದಕ್ಕೆ ತಕ್ಕಂತೆ ಟೀ- ಶರ್ಟ್, ಉದ್ದ ಕಾಲಿನ ಬೂಟು, ಬಿಚ್ಚಿ ಕಟ್ಟಿದ ಉದ್ದ ಕೂದಲು, ಮೇಕಪ್ ಸಹಿತ ಸ್ಕ್ರೀನ್ ಮೇಲೆ ಅವರು ಕಾಣಿಸಿಕೊಂಡರೆ ಪ್ರೇಕ್ಷಕರು ಎದ್ದು ನಿಂತು ಚಿತ್ರ ನೋಡುತ್ತಿದ್ದರು. ಅಲ್ಲಿಂದ ಬಾಲಿವುಡ್ ಸಿನ್ಮಾ ರಂಗಕ್ಕೆ ಎಂಟ್ರಿಯಾಗಲು ಈ ರಿಪ್ಪಡ್ ಜೀನ್ಸ್ ಬಹಳಷ್ಟು ಟೈಮ್ ತೆಗೆದುಕೊಂಡಿತ್ತು. ೨೦೦೦ರ ನಂತರ ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ರಿಪ್ಪಡ್ ಜೀನ್ಸ್ ಪ್ಯಾಂಟ್ ಪರವಾಗಿ ಪ್ರಚಾರಕ್ಕೆ ನಿಂತರು. ಅಲ್ಲಿಂದ ಶಾರೂಕ್ ಖಾನ್ ಹೀಗೆಯೇ ರಿಪ್ಪಡ್ ಜೀನ್ಸ್ ಧರಿಸುವ ನಟರ ಪಟ್ಟಿ ಬೆಳೆಯುತ್ತಾ ಸಾಗಿತು. ಬರೀ ನಟರಿಗೆ ಸೀಮಿತವಾಗಿದ್ದ ಈ ರಿಪ್ಪಡ್ ಜೀನ್ಸ್ ನಂತರದ ದಿನಗಳಲ್ಲಿ ನಟಿಮಣಿಯರನ್ನು ಆಕರ್ಷಿಸಲು ಆರಂಭ ಮಾಡಿತು.
ಮಂಗಳೂರು ಮೂಲದ ಫ್ಯಾಶನ್ ಡಿಸೈನರ್ ರಾಜೇಶ್ ಬಡ್ಡೂರು ಹೇಳುವಂತೆ ‘ಪಾಶ್ಚಿಮಾತ್ಯ ದೇಶಗಳಲ್ಲಿ ಈ ರಿಪ್ಪಡ್ ಜೀನ್ಸ್ಗೆ ಬಹಳ ಬೇಡಿಕೆ ಇತ್ತು. ಅಲ್ಲಿನ ಮಾರುಕಟ್ಟೆ ಅಧ್ಯಯನ ಮಾಡಿದ ಇತರ ದೇಶಗಳು ಈ ರಿಪ್ಪಡ್ ಜೀನ್ಸ್ಗೆ ಬೇಡಿಕೆ ಇಟ್ಟರು. ನಟ-ನಟಿಯರು ಈ ಪ್ಯಾಂಟ್ ಹಾಕಿಕೊಳ್ಳುವುದನ್ನು ನೋಡಿದ ಯೂತ್ ವರ್ಲ್ಡ್ ರಿಪ್ಪಡ್ ಜೀನ್ಸ್ ಪ್ಯಾಂಟ್ ಕುರಿತು ಕ್ರೇಜ್ ಬೆಳೆಸಿತು. ಇತ್ತೀಚೆಗೆ ಈ ಜೀನ್ಸ್ ಪ್ಯಾಂಟ್ಗಳಲ್ಲಿ ಬಹಳಷ್ಟು ಬದಲಾವಣೆಗಳು ಬಂದಿದೆ. ಪ್ಯಾಂಟ್ನ ಕೆಲವು ಭಾಗಗಳಲ್ಲಿ ಹರಿದು ಹೋಗುವಂತೆ ಡಿಸೈನರ್ಗಳು ಕತ್ತರಿ ಪ್ರಯೋಗ ಮಾಡುತ್ತಾರೆ. ಇನ್ನೂ ಕೆಲವು ಕಡೆ ನಾನಾ ರೀತಿಯ ಬಣ್ಣಗಳನ್ನು ಪ್ರಯೋಗ ಮಾಡುತ್ತಾರೆ. ಇಂತಹ ಜೀನ್ಸ್ ಪ್ಯಾಂಟ್ಗಳಿಗೆ ತಮ್ಮ ಲೇಬಲ್ಗಳನ್ನು ಹಾಕಿಕೊಂಡು ಮಾರುಕಟ್ಟೆಯೊಳಗೆ ಪ್ರಾಡಕ್ಟ್ಗಳನ್ನು ಇಳಿಸಿಬಿಡುತ್ತಾರೆ. ರಿಪ್ಪಡ್ ಜೀನ್ಸ್ ಬದಲಾಗಿ ಹೊಸ ಲೇಬಲ್ ಹಾಕಿದ ಡಿಸೈನರ್ ಅಲ್ಲಿ ಕ್ಲಿಕ್ ಆಗಿ ಬಿಡುತ್ತಾನೆ’ ಎನ್ನುತ್ತಾರೆ ಅವರು.
ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ರಿಪ್ಪಡ್ ಜೀನ್ಸ್ ಪ್ಯಾಂಟ್ ಕುರಿತು ಹೇಳುವುದಿಷ್ಟು: ಈ ಜೀನ್ಸ್ ಪ್ಯಾಂಟ್ಗಳು ಬಹಳಷ್ಟು ಕಂಪಾರ್ಟ್ ಅನ್ನಿಸಿಬಿಡುತ್ತದೆ. ಹಾಕಿಕೊಳ್ಳಲು ಕೂಡ ಬಹಳ ಖುಷಿ ಕೊಡುತ್ತದೆ. ಜೀನ್ಸ್ ಪ್ಯಾಂಟ್ ಯಾವಾಗಲೂ ಸಿಂಪಲ್ ಆಗಿ ಬಿಡುತ್ತದೆ. ಆದರೆ ರಿಪ್ಪಡ್ ಜೀನ್ಸ್ ಪ್ಯಾಂಟ್ಗಳಂತೂ ಸಿಂಪಲ್ನಲ್ಲಿ ಎಕ್ಸಾಟ್ರಾ ಅರ್ಡಿನರಿ. ನೋಡುವವರಿಗೂ ಜೀನ್ಸ್ ಪ್ಯಾಂಟ್ ಲೈಕ್ ಆಗಿಬಿಡುತ್ತದೆ ಎನ್ನುತ್ತಾರೆ ಅವರು. ಟೋಟಲಿ ರಿಪ್ಪಡ್ ಜೀನ್ಸ್ ಪ್ಯಾಂಟ್ಗಳಂತೂ ನಿಧಾನವಾಗಿ ವಿದೇಶದಿಂದ ನಮ್ಮ ಲೋಕಲ್ ಮಾರುಕಟ್ಟೆಗೆ ದಾಳಿ ಮಾಡುತ್ತಿದೆ. ಜತೆಯಲ್ಲಿ ಅಷ್ಟೇ ವೇಗವಾಗಿ ಯುವಜನತೆಯನ್ನು ಮೋಡಿ ಮಾಡಿಕೊಂಡು ಹೊಸ ಕ್ರೇಜ್ ಹುಟ್ಟುಹಾಕುತ್ತಿದೆ ಎನ್ನೋದು ಗ್ಯಾರಂಟಿ ಮಾತು. ಒಂದ್ ಸಾರಿ ಈ ರಿಪ್ಪಡ್ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹಾಗೆನೇ ಬೀದಿ ಸುತ್ತಿಕೊಂಡು ಬನ್ನಿ ನೋಡೋಣ ಹೆಂಗ್ ಕಾಣ್ತೀರಿ ಅಂತಾ.

ನನ್ನ ಪತ್ರಿಕೆ ನನ್ನ ಬರಹ-7


(vk daily lvk puravani 26.07.2011)

Sunday, July 24, 2011

ನಶೆ ಏರಿಸಲು ‘ನಿಶಾ’ ಬರ್ತಾಳೆ!



ಕಾಲಿವುಡ್, ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸಿನ್ಮಾ ರಂಗದಲ್ಲಿ ಒಂದೇ ರೀತಿಯ ಪ್ಯಾನ್ ಕ್ಲಬ್ಗಳನ್ನು ಕ್ರಿಯೇಟ್ ಮಾಡಿಕೊಂಡಿರುವ ನಿಶಾ ಕೊತಾರಿ ಸಧ್ಯಕ್ಕೆ ತಮಿಳಿನ ಇನ್ನೂ ಹೆಸರಿಡದ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನೋದು ಮಾತು.

ಬಾಲಿವುಡ್ನ ಗ್ಲಾಮರ್ ಡಾಲ್ ನಿಶಾ ಕೊತಾರಿ ಈಗ ಸುದ್ದಿಯ ಅಂಗಣದಲ್ಲಿ ಬಂದು ನಿಂತಿದ್ದಾಳೆ. ಕೈಯಲ್ಲಿ ಸರಿಯಾದ ಚಿತ್ರಗಳಿಲ್ಲದಿದ್ದರೂ ನಿಶಾ ಕೊತಾರಿ ತುಂಬಾನೇ ಬ್ಯುಸಿ ಅಂತೆ. ಇತ್ತೀಚೆಗೆ ಬಾಲಿವುಡ್ನಲ್ಲಿ ತೆರೆಕಂಡು ಸುದ್ದಿಯಾಗದ ‘ಬಿನ್ ಬುಲೆಯೇ ಬರಾತಿ’ ನಂತ್ರ ನಿಶಾ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ ಎನ್ನೋದು ಅವರ ಆಪ್ತ ವಲಯದಿಂದ ಬಂದ ಮಾತು. ಇತ್ತೀಚೆಗೆ ಕಂಪನಿಯೊಂದರ ಬ್ರಾಂಡ್ ಅಂಬಾಸೀಡರ್ ಆಗಿ ಮಂಗಳೂರಿಗೆ ಬಂದ ನಿಶಾ ಕೊತಾರಿ ಮಾತನಾಡಿದ್ದೆಲ್ಲ ಕಂಪನಿಯ ಪ್ರಾಡಕ್ಟ್ಗಳ ಬಗ್ಗೆಯಾದರೂ ತನ್ನ ವೃತ್ತಿಯ ಕುರಿತು ಇಲ್ಲಿನ ಆಪ್ತರಲ್ಲಿ ಬಿಚ್ಚುಮಾತನಾಡಿದಳು ಎನ್ನುವ ಮಾಹಿತಿಯನ್ನು ಲವಲವಿಕೆ ಹುಡುಕಿ ತೆಗೆದಿದೆ.
ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ರಾಮ್ಗೋಪಾಲ್ ವರ್ಮರ ಕ್ಯಾಂಪ್ನಲ್ಲಿ ಭರ್ಜರಿಯಾಗಿ ಎಂಟ್ರಿಕೊಟ್ಟ ನಾಯಕಿಯಾರ ಸಾಲಿನಲ್ಲಿ ನಿಶಾ ಕೊತಾರಿ ಕೂಡ ಕಾಣಸಿಗುತ್ತಾರೆ. ಬಂಗಾಳದ ನಿಶಾ ಕೊತಾರಿಯ ಒರಿಜಿನಲ್ ಹೆಸರು ಪ್ರಿಯಾಂಕಾ ಕೊತಾರಿ ಯಾಕೋ ಆರ್ಜಿವಿಗೆ ಈ ಹೆಸರು ಅಷ್ಟಾಗಿ ಹಿಡಿಸಲಿಲ್ಲ ಎಂಬ ಕಾರಣಕ್ಕೆ ಆರ್ಜಿವಿ ಪ್ರಿಯಾಂಕಾವನ್ನು ‘ನಿಶಾ’ ಎಂದು ಬದಲಾಯಿಸಿ ಬಿಟ್ಟರು. ಆರ್ಜಿವಿಯ ‘ಜೇಮ್ಸ್’ ‘ಸರಕಾರ್’ ಹಾಗೂ ಅಗ್ಯಾತ್ ನಲ್ಲಿ ನಿಶಾ ಕೊತಾರಿಗೆ ಲೀಡ್ ರೋಲ್ ಕೂಡ ಸಿಕ್ಕಿತ್ತು. ಈಗಲೂ ಆರ್ಜಿವಿಯ ಪೋಸ್ಟ್ ಪ್ರಾಡಕ್ಷನ್ ಕಂಪನಿಯಲ್ಲಿ ‘ರಕ್ತಚರಿತ್ರ-೩’ ಹಾಗೂ ’ಅಗ್ಯಾತ್-೨’ನಲ್ಲೂ ನಿಶಾ ಕೊತಾರಿಗೆ ಲೀಡ್ ರೋಲ್ ಇದೆ ಎನ್ನೋದು ನಿಶಾರ ಮಾತು. ಆದರೆ ಆರ್ಜಿವಿ ಈ ಚಿತ್ರಗಳನ್ನು ಸಧ್ಯಕ್ಕಂತೂ ತೆರೆಯ ಮೇಲೆ ತರುವ ಯಾವುದೇ ಸೂಚನೆ ನೀಡಿಲ್ಲ ಎನ್ನೋದು ಬಾಲಿವುಡ್ ಪಂಡಿತರ ಮಾತು.
ಕಾಲಿವುಡ್, ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸಿನ್ಮಾ ರಂಗದಲ್ಲಿ ಒಂದೇ ರೀತಿಯ ಪ್ಯಾನ್ ಕ್ಲಬ್ಗಳನ್ನು ಕ್ರಿಯೇಟ್ ಮಾಡಿಕೊಂಡಿರುವ ನಿಶಾ ಕೊತಾರಿ ಸಧ್ಯಕ್ಕೆ ತಮಿಳಿನ ಇನ್ನೂ ಹೆಸರಿಡದ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನೋದು ಮಾತು. ಬಾಲಿವುಡ್ನಲ್ಲಿ ನಾಯಕಿ ಪಟ್ಟದಲ್ಲಿದ್ದ ನಿಶಾ ಕೊತಾರಿ ಏಕ್ದಂ ಪಕ್ಕದ ಸಿನ್ಮಾ ರಂಗದ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲು ಕಾರಣ ಏನೂ ಅಂತಾ ಕ್ವಶನ್ ಮಾಡಿದ್ರೆ ಬಾಲಿವುಡ್ನಲ್ಲಿ ದೊಡ್ಡ ದೊಡ್ಡ ನಾಯಕಿಯರು ಐಟಂ ಸಾಂಗ್ನಲ್ಲಿ ಕುಣಿಯಬೇಕು ಎಂದುಕೊಂಡು ಸಿನ್ಮಾ ರಂಗದ ಬಾಗಿಲು ತಟ್ಟುತ್ತಾರೆ. ನಾನೇಕೆ ಕುಣಿಯಬಾರದು ಎನ್ನೋದು ನಿಶಾರ ಮಾತು.
ಕೈತುಂಬಾ ಸಿನ್ಮಾಗಳು ಇಲ್ಲ ಎನ್ನುವ ಕಾರಣಕ್ಕೆ ನಿಶಾ ಕೊತಾರಿ ಐಟಂ ಸಾಂಗಿಗೂ ಕುಣಿಯಬೇಕು ಎನ್ನುವ ಮನಸ್ಸು ಮಾಡಿದ್ದಾಳೆ ಎಂಬ ಮಾತು ಕೂಡ ಸಿನ್ಮಾ ರಂಗದಲ್ಲಿ ಗರಿಬಿಚ್ಚಿಕೊಂಡು ಓಡಾಡುತ್ತಿದೆ. ಹಾಗಾದರೆ ನಿಶಾ ಸಿನ್ಮಾಗಳು ಇಲ್ಲದೇ ಇದ್ದಾಗ ಏನ್ ಮಾಡ್ತಾಳೆ ಅಂತಾ ಕೇಳಿದ್ರೆ ದೇಶ- ವಿದೇಶಕ್ಕೆ ಟೂರ್ ಹೋಗೋದು ಜತೆಗಿಷ್ಟು ಕಂಪನಿಗಳ ಬ್ರಾಂಡ್ ಅಂಬಾಸೀಡರ್ ಆಗಿ ಕಾಲ ಕಳೆಯವುದು ಅಂತಾರೆ. ಕನ್ನಡದಲ್ಲಿ ‘ರಾಜ್’ ದೀ ಶೋ ಮ್ಯಾನ್ ನಂತರ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಇರಾದೆ ಇದೆಯಾ ಎಂದು ಕೇಳಿದ್ರೆ ನಿರ್ಮಾಪಕರು ಬರುತ್ತಾರೆ. ಆದರೆ ಸಿನ್ಮಾ ಸ್ಟೋರಿ ಲೈನ್, ಪಾತ್ರಗಳು ನನಗೆ ಬಹುಮುಖ್ಯ ಚಿತ್ರಗಳ ಆಯ್ಕೆ ವಿಚಾರದಲ್ಲಿ ಬಹಳಷ್ಟು ಚ್ಯುಸಿಯಾಗಿರಲು ಬಯಸುತ್ತೇನೆ ಎನ್ನುವುದು ನಿಶಾ ಕೊತಾರಿಯ ಬಲಿತ ಮಾತು.
ಖಾಸಗಿ ಚಾನೆಲ್ವೊಂದರ ರಿಯಾಲಿಟಿ ಶೋವಿನಲ್ಲೂ ನಿಶಾ ಕೊತಾರಿ ಕಾಣಿಸಿಕೊಳ್ಳುವ ಕುರಿತು ಮಾತು ಹರಡಿತ್ತು. ಅದರ ಕತೆ ಏನಾಯಿತು ಅಂತಾ ಕೇಳಿದ್ರೆ.. ರಿಯಾಲಿಟಿಯಲ್ಲಿ ಜಾಸ್ತಿ ಬಿಚ್ಚುಡುಗೆಯ ಕುರಿತು ಒಪ್ಪಂದವಾಗಿತ್ತು. ಇದು ಯಾಕೋ ಸರಿ ಬಂದಿಲ್ಲ. ಗ್ಲಾಮರ್ ಇರೋದು ಬಿಚ್ಚುವಿಕೆಯಲ್ಲಿ ಅಲ್ಲ ಎಂಬುವುದು ನಿಶಾ ಕೊತಾರಿಯ ಗ್ಲಾಮರ್ ಮಾತು. ಟೋಟಲಿ ಸಿನ್ಮಾ ಇಲ್ಲದೇ ಹೋದರೂ ತಾನು ಬ್ಯುಸಿ ಲೈಪ್ನಲ್ಲಿ ಬದುಕುತ್ತಿದ್ದೇನೆ ಎಂಬ ನಿಶಾರ ಮಾತು ಬಹಳಷ್ಟು ಸಿನಿಮಾ ನಟ-ನಟಿಯರಿಗೆ ಅನ್ವಯಿಸುವಂತಿದೆ ಅಲ್ವಾ..?
…….
ಚಿತ್ರಗಳು: ಜಿ.ಕೆ.ಹೆಗಡೆ.................

Monday, July 18, 2011

ನನ್ನ ಪತ್ರಿಕೆ ನನ್ನ ಬರಹ-೩



(vk daily lvk puravani published dis article 18.07.2011)

ಫನ್ಗ್ಯಾಲರಿ ‘ಕೇರಾಫ್’ ಪ್ರಕಾಶ್ ಶೆಟ್ಟಿ !


ದೇಶದ ಎಲ್ಲ ರಾಜ್ಯಗಳನ್ನು ಸುತ್ತಾಡಿಕೊಂಡು ಬಂದರೂ ‘ಫನ್ ಗ್ಯಾಲರಿ’ ಕಾನ್ಸೆಪ್ಟ್ ಎಲ್ಲೂ ಕಾಣ ಸಿಗೋಲ್ಲ. ಅದನ್ನು ಬೆಂಗಳೂರಿನಲ್ಲಿ ಹುಡುಕಬೇಕು. ವೀಕೆಂಡ್ ಡೇಸ್ನಲ್ಲಿ ಫನ್ಗ್ಯಾಲರಿಗೊಮ್ಮೆ ವಿಸೀಟ್ ಕೊಟ್ಟು ನೋಡಿ.

‘ಮನಯ ಗೋಡೆಯಲ್ಲಿಡುವುದಕ್ಕೆ ಈ ಫ್ಯಾಮಿಲಿ ಕ್ಯಾರಿಕೇಚರ್ಸ್ ಎಷ್ಟು ಚೆನ್ನಾಗಿದೆ ನೋಡಿ ! ಮೂಡ್ ಔಟ್ ಆದಾಗಲೆಲ್ಲ ನೋಡಿ ಖುಷಿ ಪಡಬಹುದು’ ಎಂದವರು ಬೆಂಗಳೂರು ನೆಲಮಂಗಳದ ನಿವಾಸಿ ಜಯಮಾಲಾ.
‘ಇಲ್ನೋಡಿ ನಾನು ಯಾವತ್ತು ಲ್ಯಾಪ್ಟಾಪ್ ಮುಂದೆ ಕೂತಿರುತ್ತೇನೆ. ಅದನ್ನೇ ಬರೆದುಬಿಟ್ಟಿದ್ದಾರೆ. ನನ್ನ ಹೆಂಡ್ತಿ ಅಡುಗೆ ಎಕ್ಸ್ಪರ್ಟ್ ಅಂತಲೂ ಅವರಿಗೆ ಗೊತ್ತಾಗಿದೆ. ಮಗಳಿಗೆ ಪುಸ್ತಕ ಓದುವ ಹವ್ಯಾಸ ಇರೋದು ಎಲ್ಲವನ್ನು ಅಷ್ಟು ಚೆನ್ನಾಗಿ ನಾವು ಹೇಳದೇ ಬರೆದುಬಿಟ್ಟಿದ್ದಾರೆ’ ಎನ್ನುತ್ತಾರೆ ಬೆಂಗಳೂರಿನ ಐಟಿಯಲ್ಲಿ ದುಡಿಯುತ್ತಿರುವ ಸಾಫ್ಟ್ವೇರ್ ಎಂಜಿನಿಯರ್ ರಾಜೇಶ್ ಜೇವಿಯನ್ ಡಿಸೋಜ.
ಹೌದು..ಇದು ಫನ್ಗ್ಯಾಲರಿಯ ಕರಾಮತ್ತು. ದೇಶದ ಎಲ್ಲ ರಾಜ್ಯಗಳನ್ನು ಇಡಿ ಬಿಡಿಯಾಗಿ ಸುತ್ತಾಡಿಕೊಂಡು ಬಂದರೂ ‘ಫನ್ ಗ್ಯಾಲರಿ’ ಕಾನ್ಸೆಪ್ಟ್ ಎಲ್ಲೂ ಕಾಣ ಸಿಗೋಲ್ಲ. ಅದು ಸಿಗಬೇಕಾದರೆ ನಮ್ಮ ರಾಜ್ಯದ ಬೆಂಗಳೂರಿನಲ್ಲಿಯೇ ಹುಡುಕಬೇಕು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೋಕುಲ್ ಆರ್ಕೆಡ್ ಮಾಲ್ನ ಸೂರಿನೊಳಗೆ ವಿಶಿಷ್ಟ ರೀತಿಯ ಫನ್ಗ್ಯಾಲರಿ ಎದ್ದು ನಿಂತು ಬರೋಬರಿ ಒಂದು ವರ್ಷ ಆಗಿದೆ.
ಇಂತಹ ಫನ್ಗ್ಯಾಲರಿಯ ವಿಶಿಷ್ಟತೆ ಹುಡುಕಿಕೊಂಡು ಗೂಗಲ್ ಸರ್ಚ್ ಎಂಜಿನ್ಗೂ ಮೊರೆ ಹೋಗಿ ಬಂದವರಿದ್ದಾರೆ. ಮೆಟ್ರೋ ಸಿಟಿಗಳ ವಿಶಿಷ್ಟ ಪರಂಪರೆಯಲ್ಲಿ ಒಂದಾದ ‘ವೀಕೆಂಡ್ ಡೇಸ್’ನಲ್ಲಿ ಫನ್ಗ್ಯಾಲರಿಯೊಳಗೆ ಯುವಜನತೆಯ ಸಾಲೇ ಜಮಾಯಿಸಿರುತ್ತದೆ. ಐಟಿ- ಬಿಟಿಯ ಓವರ್ ವರ್ಕ್ ಲೋಡ್ನಿಂದ ಇಳಿದುಕೊಂಡು ಬರುವ ಯುವಜನತೆ ಫನ್ಗ್ಯಾಲರಿಯಲ್ಲಿ ಕೂತು ಒಂಚೂರು ನಕ್ಕು ವಾಪಸಾಗುತ್ತಿದೆ. ಇದು ಬೆಂಗಳೂರಿನಲ್ಲಿರುವ ‘ಫನ್ಗ್ಯಾಲರಿ’ ಬೆಳೆಸಿಕೊಂಡು ಬಂದಿರುವ ಕಿಮ್ಮತ್ತು !
ಏನೂಂಟು ಮಾರಾಯ್ರೆ:
‘ಫನ್ಗ್ಯಾಲರಿ’ ಸಬ್ಜೆಕ್ಟ್ ತುಂಬಾನೇ ಡಿಫರೆಂಟ್. ಯಾಕ್ ಅಂತ್ತೀರಾ..? ಇಲ್ಲಿ ಬರುವವರು ಹೊಟ್ಟೆ ತುಂಬಾ ನಕ್ಕು ಹೊರ ಹೋಗುತ್ತಾರೆ. ಶಾರೂಕ್, ಚಾಪ್ಲಿನ್, ಸಚಿನ್ರಂತಹ ಕ್ಯಾರಿಕೇಚರ್ಗಳು ನಿಮಷಾರ್ಧದಲ್ಲಿ ತಯಾರಾಗಿ ನಿಮ್ಮ ಮನೆ ಸೇರುತ್ತದೆ. ಟೀ -ಶರ್ಟ್ ಮೇಲೆ ನೀವೇ ಕ್ಯಾರಿಕೇಚರ್ ರೂಪದಲ್ಲಿ ನಿಂತು ದಿನಾಲೂ ನಗುವ ಚಾನ್ಸ್ ಎಲ್ಲಿ ತಾನೇ ಸಿಗಬಹುದು. ಆದರೆ ಅಂತಹ ಚಾನ್ಸ್ ಇಲ್ಲಿ ಗ್ಯಾರಂಟಿಯಾಗಿ ಸಿಗುತ್ತದೆ.
ಮದುವೆ, ವಿದಾಯ, ಹುಟ್ಟುಹಬ್ಬಕ್ಕೆ ವಿಭಿನ್ನ ರೂಪದ ಕಾರ್ಟೂನ್ಗಳು ಸಿದ್ಧವಾಗಿ ಪಡೆದುಕೊಂಡವರು ಸದಾ ಕಾಲ ನಗೆಕಡಲಿನಲ್ಲಿ ತೂಗಾಡುವಂತೆ ಮಾಡುವ ಕೆಲಸ ಇಲ್ಲಿ ದಿನಾಲೂ ನಡೆಯುತ್ತಿದೆ. ಇಂತಹ ವಿಚಿತ್ರ ಐಡಿಯಾಗಳ ಹಿಂದೆ ಕರಾವಳಿ ಮೂಲದ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಇದ್ದಾರೆ. ತನ್ನ ಕ್ಯಾರಿಕೇಚರ್ ಮೂಲಕ ಭಿನ್ನ ರೀತಿಯ ಸುದ್ದಿ ಮಾಡುವ ಪ್ರಕಾಶ್ ಶೆಟ್ಟರು ಈ ಫನ್ಗ್ಯಾಲರಿಯಿಂದ ಹೊಸ ಟ್ರೆಂಡ್ ಮಾಡಲು ಸಿದ್ಧರಾಗಿದ್ದಾರೆ.
ಈ ಫನ್ಗ್ಯಾಲರಿಯ ಕುರಿತು ಪ್ರಕಾಶ್ ಶೆಟ್ಟಿ ಹೇಳುವುದಿಷ್ಟು: ನಾನು ನನ್ನ ಕಲೆಯನ್ನು ಬದುಕುವ ಕಲೆಯನ್ನಾಗಿ ಸ್ವೀಕರಿಸುವುದರ ಹಿಂದೆ ಒಂದು ಕಾರಣವಿದೆ. ಎಲ್ಲರೂ ಕ್ಯಾರಿಕೇಚರ್ನ್ನು ಒಂದು ಪ್ರವೃತ್ತಿಯಾಗಿ ಪ್ರೀತಿಸುತ್ತಿದ್ದಾರೆ. ನಾನು ಹಾಸ್ಯಸೇವೆ ಎಂದು ಭಾವಿಸಿಕೊಂಡಿದ್ದೇನೆ. ನಮ್ಮ ಕಲಾವಿದರು ಜನರನ್ನು ಮುಟ್ಟುವ ಪ್ರಯತ್ನ ಸರಿಯಾಗಿ ಮಾಡುತ್ತಿಲ್ಲ . ಶ್ರೀಸಾಮಾನ್ಯ ವಲಯಕ್ಕೂ ನಾನು ಮುಟ್ಟಬೇಕು ಎನ್ನುವ ಉದ್ದೇಶದಿಂದ ಈ ಫನ್ಗ್ಯಾಲರಿಗೆ ಇಳಿದಿದ್ದೇನೆ ಎನ್ನುತ್ತಾರೆ ಅವರು.
ಮೆಟ್ರೋ ಸಿಟಿಯ ಓವರ್ ಒತ್ತಡದಿಂದ ಬಳಲುತ್ತಿರುವವರು, ನಗಲು ಮರೆತು ಕೂತವರು ಇನ್ನಾದರೂ ಎದ್ದು ನಿಂತು ಫನ್ಗ್ಯಾಲರಿಗೆ ವಿಸೀಟ್ ಕೊಡಬಹುದು. ಪ್ರಕಾಶ್ ಶೆಟ್ಟರ ಕ್ಯಾರಿಕೇಚರ್ ಬಿಡಿಸುವ ಮೋಡಿಗೆ ಸಿಲುಕದೇ ವಾಪಸು ಮನೆ ಸೇರುವ ಮಾತೇ ಇಲ್ಲ ಎನ್ನೋದು ಬಹುತೇಕ ಫನ್ಗ್ಯಾಲರಿ ಪ್ರಿಯರ ಒಕ್ಕೊರಲಿನ ಮಾತು.
(Vk daily lvk puravani Published dis article 19.07.2011)

Saturday, July 16, 2011

ರಂಗೀಲಾ ಬೆಡಗಿ ಉರ್ಮಿಳೆ !


ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮರ ‘ನಾಟ್ ಎ ಲವ್ ಸ್ಟೋರಿ’ ವಿವಾದಗಳಿಂದ ಸುದ್ದಿಯಾಗುವ ಜತೆಯಲ್ಲಿ ಆರ್ಜಿವಿಯ ಜತೆಯಲ್ಲಿ ಮಾತು ಬಿಟ್ಟವರು ಕೂಡ ನಟಿಸುತ್ತಿದ್ದಾರೆ. ಅದೇ ಸಾಲಿನಲ್ಲಿ ರಂಗೀಲಾ ಬೆಡಗಿ ಉರ್ಮಿಳಾ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ನ ದೊಡ್ಡ ಹಿಟ್ ಚಿತ್ರ ‘ರಂಗೀಲಾ’ ಬೆಡಗಿ ಉರ್ಮಿಳಾ ಮಾಂತೋಡ್ಕರ್ ರಾಮ್ಗೋಪಾಲ್ ವರ್ಮರ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಮುಂಬಯಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ೯೦ರ ದಶಕದಲ್ಲಿ ಇವರಿಬ್ಬರ ಕಾಂಬಿನೇಷನ್ನಲ್ಲಿ ತೆರೆಕಂಡ ಚಿತ್ರಗಳೆಲ್ಲವೂ ಹಿಟ್ ಅನ್ನಿಸಿಕೊಂಡಿತ್ತು.
೯೫ರಲ್ಲಿ ಬಿಡುಗಡೆಯಾದ ‘ರಂಗೀಲಾ’ ನಂತರ ಆರ್ಜಿವಿಯ ಜತೆಯಲ್ಲಿ ಉರ್ಮಿಳಾ ‘ದೌಡ್’, ‘ಸತ್ಯ’, ‘ಮಸ್ತ್’, ‘ಕೌನ್’, ‘ಜಂಗಲ್’ ಹಾಗೂ ‘ಬೂತ್’ನಲ್ಲಿ ಮಿಂಚಿದ್ದರು. ಆರ್ಜಿವಿಯ ಆರಂಭದ ಚಿತ್ರಗಳಲ್ಲಿ ಉರ್ಮಿಳಾರಿಗೆ ಸಿಗುತ್ತಿದ್ದ ಬಹುಮುಖ್ಯವಾದ ರೋಲ್ಗಳಿಂದ ಇಬ್ಬರ ನಡುವೆ ಸಿನ್ಮಾ ಬಿಟ್ಟು ಬೇರೆ ಸಂಬಂಧ ಇದೆ ಎನ್ನುವ ಗಾಸಿಪ್ ಕೂಡ ತೆರೆಮರೆಯಲ್ಲಿ ಕೇಳಿ ಬರುತ್ತಿತ್ತು.
ಈ ಎಲ್ಲ ವಿವಾದಗಳಿಂದ ದೂರ ಓಡುತ್ತಿದ್ದ ಎರಡು ಜೋಡಿಗಳು ಮತ್ತೆ ಮತ್ತೆ ಸಿನ್ಮಾದ ಮೂಲಕ ಒಂದಾಗುತ್ತಿದ್ದರು. ಆರ್ಜಿವಿ ಕ್ಯಾಂಪ್ನಲ್ಲಿ ಯಾವಾಗ ಹೊಸ ನಾಯಕಿಯರು ಕಾಣಿಸಿಕೊಳ್ಳಲಾರಂಭಿಸದರೋ ಅಲ್ಲಿಂದ ಉರ್ಮಿಳಾ ಸೈಡ್ನಲ್ಲಿ ಉಳಿಯಲಾರಂಭಿಸಿದರು.
ಶೋಲೆಯ ರಿಮೇಕ್ ಚಿತ್ರ ‘ರಾಮ್ ಗೋಪಾಲ್ ಕೀ ಅಗ್’ಯಲ್ಲಿ ಉರ್ಮಿಳಾ ‘ಮೆಹಬೂಬಾ ಮೆಹಬೂಬಾ’ ಎನ್ನುವ ಐಟಂ ಸಾಂಗ್ನಲ್ಲಿ ಮತ್ತೆ ಒಂದಾಗಿದ್ದರು. ನಂತರ ಬಂದ ಆರ್ಜಿವಿ ನಿರ್ದೇಶನದ ಚಿತ್ರಗಳಲ್ಲಿ ಉರ್ಮಿಳಾ ನಾಪತ್ತೆಯಾಗಿ ಹೋದರು.
ಈಗ ಉರ್ಮಿಳಾ ಮತ್ತೆ ರಾಮ್ ಗೋಪಾಲ್ ವರ್ಮರ ಜತೆಗೂಡಿದ್ದಾರೆ. ರಾಮ್ಗೋಪಾಲ್ ವರ್ಮರ ಬಹಳ ವಿವಾದದಿಂದ ಕೂಡಿದ ಮರಿಯಾ ಸುಸೈರಾಜ್ ಪ್ರಕರಣದಿಂದ ಪ್ರೇರಿತ ‘ನಾಟ್ ಎ ಲವ್ ಸ್ಟೋರಿ’ ಚಿತ್ರದ ಪ್ರಮುಖ ಐಟಂ ಸಾಂಗ್ನಲ್ಲಿ ಉರ್ಮಿಳಾ ಕುಣಿಯಲಿದ್ದಾರೆ ಎನ್ನುವುದು ಚಿತ್ರ ತಂಡದಿಂದ ಹೊರ ಬಂದ ಮಾಹಿತಿ.
ದಿಲ್ಲಿಯ ಕೆಲವೊಂದು ಭಾಗದಲ್ಲಿ ಈ ಚಿತ್ರದ ಹಾಡಿನ ಚಿತ್ರೀಕರಣ ಈಗಾಗಲೇ ನಡೆದಿದೆ. ಉಳಿದಂತೆ ಉರ್ಮಿಳಾ ಮಾಂತೋಡ್ಕರ್, ರಾಮ್ ಗೋಪಾಲ್ ವರ್ಮರ ಜತೆಯಲ್ಲಿ ಚಿತ್ರದ ಪರ ಪ್ರಮೋಶನ್ ಕಾರ್ಯಕ್ಕೆ ಇಳಿದಿದ್ದಾರೆ ಎನ್ನುವ ಸುದ್ದಿನೂ ಬಂದಿದೆ. ಮಾಧ್ಯಮಗಳಲ್ಲಿ ಇಬ್ಬರ ಸಂಬಂಧಗಳ ಕುರಿತು ಕೇಳಿ ಬರುತ್ತಿದ್ದ ಗಾಸಿಪ್ಗಳಿಗೆ ಬೆಲೆ ಕೊಡದ ಉರ್ಮಿಳಾ ಹೇಳುತ್ತಿದ್ದದ್ದು ಇಷ್ಟೇ : ನಾವಿಬ್ಬರು ಒಂದೇ ವೃತ್ತಿಯಲ್ಲಿರುವುದರಿಂದ ಇಂತಹ ಗಾಸಿಪ್ಗಳು ಕಾಮನ್. ಇದರಿಂದ ನಮ್ಮ ಸಂಬಂಧ ಹಾಳಾಗುವುದಿಲ್ಲ ಎಂದಿದ್ದರು.
ಇದೇ ರೀತಿಯ ಮಾತನ್ನು ಆರ್ಜಿವಿ ತನ್ನ ಹಿಂದಿನ ಚಿತ್ರ ‘ಏಕ್ ಹಸೀನಾ ತೀ’ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅಲ್ಲಿಗೆ ಮಾಧ್ಯಮಗಳು ಇಬ್ಬರ ಸಂಬಂಧಕ್ಕೆ ತೆರೆ ಎಳೆದು ಬಿಟ್ಟಿತು. ಆದರೆ ಈಗ ಆರ್ಜಿವಿ ಹಾಗೂ ಉರ್ಮಿಳೆ ಜತೆಗೂಡಿದ್ದಾರೆ. ಮತ್ತೆ ಮಾಧ್ಯಮಗಳಲ್ಲಿ ‘ಲವ್ವಿಡವ್ವಿ ’ ಸುದ್ದಿಗಳು ಹರಿದಾಡುವ ಸೂಚನೆಯಂತೂ ಬರಬಹುದೇನೋ..? ಕಾದು ಕೂರೋಣ...
......

Friday, July 15, 2011

ಪ್ರಿಯಾಂಕಾ ಹೊಸ ‘ಐಟಂ’ ಬಾಂಬ್ !


ಬಾಲಿವುಡ್ನಲ್ಲಿ ಐಟಂ ಸಾಂಗ್ಗಳದ್ದೇ ಕಾರುಬಾರು. ‘ಮುನ್ನಿ ’ನಂತರ ಬಂದ ‘ಶೀಲಾ ಕೀ ಜವಾನಿ’ಯಂತೆ ಸೊಂಟ ಬಳುಕಿಸುವ ಖಯಾಲಿ ಪ್ರಿಯಾಂಕಾಳಿಗೂ ಬಂದು ಬಿಟ್ಟಿದೆ ಎನ್ನೋದು ಮುಂಬಯಿ ಪಾಠಶಾಲೆಯ ಮಾತು.


ಬಾಲಿವುಡ್ನಲ್ಲಿ ಐಟಂನಂಬರ್Uಳು ಹೆಚ್ಚಾಗುತ್ತಿವೆ. ಅದರಲ್ಲೂ ‘ಮುನ್ನಿ’, ‘ಶೀಲಾ ಕೀ ಜವಾನಿ..’ನಂತರವಂತೂ ಹೇಳುದೇ ಬೇಡ, ನಟ-ನಟಿಯರೆಲ್ಲಾ ಒಂದು ಕೈ ನೋಡೇ ಬಿಡುವ ಎಂದು ಐಟಂಸಾಂಗ್ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು.
ನಿರ್ದೇಶಕ ಶಿರಿಶ್ ಕುಂದರ್ರ ಬಹುನಿರೀಕ್ಷಿತ ಚಿತ್ರ ‘ಜೊಕರ್’ನಲ್ಲಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡರೆ, ದೀಪಿಕಾ ಪಡುಕೋಣೆ ‘ಧಮ್ ಮಾರೋ ಧಮ್’ನಲ್ಲಿ ಸ್ಟೆಪ್ ಕುಣಿದಿದ್ದರು. ಐಟಂ ಸಾಂಗ್ ಅದಕ್ಕೆ ತಕ್ಕಂತೆ ಕುಣಿಯುವ ಹುಡುಗಿಯರು ಮಾತ್ರ ಐಟಂ ಗರ್ಲ್ಗಳಾಗಿ ಮಿಂಚಿದ್ದರು.
ಆದರೆ ಈಗ ಹುಡುಗ್ರು ಕೂಡ ಒಂದು ಕೈ ನೋಡಿದ್ದಾರೆ. ‘ಡೆಲ್ಲಿ ಬೆಲ್ಲಿ’ಯಲ್ಲಿ ಅಮೀರ್ ಖಾನ್ ಕುಣಿದು ಕುಪ್ಪಳಿಸಿದರೆ, ‘ಚಿಲ್ಲರ್ ಪಾರ್ಟಿ’ಯ ಪ್ರೊಮೋಶನ್ಗಾಗಿ ರಣಬೀರ್ ಕುಣಿದಿದ್ದಾನೆ. ಈಗ ಹೊಸ ವಿಷ್ಯಾ ಎಂದರೆ ಪ್ರಿಯಾಂಕಾ ಚೋಪ್ರಾ ಐಟಂ ಸಾಂಗ್ವೊಂದರಲ್ಲಿ Pಣಿಸಿಕೊಳ್ಳಲು ಒಪಿಕೊಂಡಿದ್ದಾಳೆ.
ಅದು ‘ತೇಜ್’ ಸಿನಿಮಾದಲ್ಲಿ ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾದಲ್ಲಿ ಇಡೀ ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್ ಕೊಡುವಂತಹ
ಐಟಂ ಹಾಡೊಂದು ಇದೆಯಂತೆ. ಅದಕ್ಕೆ ತುಂಬಾ ಪೇಸ್ ಮುಖ ಬೇಕಾದ ಕಾರಣ ಚಿತ್ರತಂಡ ಪ್ರಿಯಾಂಕಾಳನ್ನು ಕೇಳಿಕೊಂಡಾಗ ಆಕೆ ಕೂಡ ಒಪ್ಪಿzಳೆ.
ಈಗ ಪ್ರಿಯಾಂಕಾ ಕುಣಿತಕ್ಕೆ ವೇದಿಕೆ ಸಿದ್ಧವಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಟೇಜ್ ಕೂಡ ರೆಡಿಯಾಗಿದೆ. ಸಾಜಿದ್-ವಾಜಿದ್ ಸಖತ್ ಆಗಿರುವಂತಹ ಮ್ಯೂಸಿಕ್ ಕೂಡ ಆ ಹಾಡಿಗೆ ಕಂಪೋಸ್ ಮಾಡಿದ್ದಾg.
ಹಿಂದೆ ಪ್ರಿಯಾಂಕಾ ‘zಸ್ತಾನಾ’ ಹಾಗೂ ‘ಬಿಲ್ಲು ಬಾರ್ಬರ್’ ಸಿನಿಮಾದಲ್ಲಿ ಸಖತ್ ಟ್ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದಳು. ಆ ನಂತರ ತಾನು ಐಟಂಸಾಂಗ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದ ಹೆಳಿದ್ದಳು.
ಆದರೆ ಅದ್ಯಾP ಈಗ ಪ್ರಿಯಾಂPU ಮತ್ತೆ ಮನಸ್ಸಾಗಿದೆ. ‘ಶೀಲಾ..’ ಹಾಗ ‘ನ್ನಿ...’ಯನ್ನು ಮೀರಿವಂತೆ ಸೊಂಟ ಬಳುಕಿಸಬೇಕೆಂಬ ತೀಮಾನಿಸಿದಂತಿದೆ. ಪ್ರಿಯಾಂಕಾ ಎನ್ನುವ ಹೊಸ ‘ಐಟಂ’ ಬಾಂಬ್ ಸ್ವಿಲರ್ ಸ್ಕ್ರೀನ್ ಮೇಲೆ ಸಿಡಿಯುತ್ತಾ... ಟುಸ್ ಎನ್ನುತ್ತಾ ಎನ್ನುವ ಪ್ರಶ್ನೆ ಬಕ ಪಕ್ಷಿಯಂತೆ ಕಾದು ಕೂತಿರುವ ಪ್ರೇಕ್ಷಕ ಅನ್ಸರ್ ಕೊಡಬೇಕು.

ಬಾಲಿವುಡ್ನಲ್ಲಿ ‘ಐಟಂ ಹುಡುಗ್ರು’



ಬಾಲಿವುಡ್ನಲ್ಲಿ ಇನ್ನೂ ಮುಂದೆ ಐಟಂ ಹುಡುಗಿಯರ ಜಮಾನ ಎಂಡ್ ಆಗುತ್ತೇ... ಅವರ ಜಾಗದಲ್ಲಿ ಹೊಸ ‘ಐಟಂ ಹುಡುಗ್ರು’ ಸಿಲ್ವರ್ ಸ್ಕ್ರೀನ್ ಮೇಲೆ ಕುಣಿದು ಕುಪ್ಪಳಿಸಿ ಪ್ರೇಕ್ಷಕ ವರ್ಗವನ್ನು ಮೋಡಿ ಮಾಡಲಿದ್ದಾರೆ. ಬನ್ನಿ ವಿಷ್ಯಾಕ್ಕೆ ಬರೋಣ...

ಬಾಲಿವುಡ್ ಪಡಸಾಲೆಯಲ್ಲಿ ತುಂಡು ಬಟ್ಟೆ ಉಟ್ಟು ...ದೇಹ ಸೌಂದರ್ಯ ಪ್ರೇಕ್ಷಕರಿಗೆ ಕೊಟ್ಟು ... ಮಸ್ತ್ ಆಗಿ ಮಸಾಲೆ ಅರೆದುಕೊಡುತ್ತಿದ್ದ ಐಟಂ ಹುಡುಗಿಯರಿಗೆ ಇನ್ನೂ ಮುಂದೆ ಬ್ರೇಕ್ ಬೀಳಲಿದೆ. ಬಾಲಿವುಡ್ ಸಿನ್ಮಾ ರಂಗದಲ್ಲಿ ಐಟಂ ಹುಡುಗಿಯರ ಮೋಡಿಯಿಲ್ಲದೇ ಪ್ರೇಕ್ಷಕ ವರ್ಗ ಕಂಗಾಲು ಆಗಲಿದೆ ಎನ್ನೋದು ಗೊತ್ತಿಲ್ಲ. ಆದರೆ ‘ಐಟಂ ಹುಡುಗ್ರು’ ಮಾತ್ರ ಸುದ್ದಿಯಲ್ಲಿದ್ದಾರೆ.
೨೦೧೦ ಬಾಲಿವುಡ್ನಲ್ಲಿ ‘ಮುನ್ನಿ’ ಬಂದು ಕುಣಿದಿದ್ದಳು. ಶೀಲಾ ಬಂದು ಜವಾನಿ ತೋರಿಸಿ ಹೋಗಿದ್ದಳು. ಆದರೆ ೨೦೧೧ರಲ್ಲಿ ‘ಐಟಂ ಹುಡುಗ್ರು’ ಬಂದಿದ್ದಾರೆ. ಆದರೆ ಇವರು ಐಟಂ ಹುಡುಗಿಯರಂತೆ ದೇಹದ ಯಾವುದೇ ಸ್ಪೇರ್ ಪಾರ್ಟ್ಸ್ ತೋರಿಸುವುದಿಲ್ಲ. ಇದ್ದ ಪಾರ್ಟ್ಸ್ಗಳನ್ನು ಮುಚ್ಚಿಟ್ಟುಕೊಂಡು ಹ್ಯಾಂಕಿಪ್ಯಾಂಕಿ ಡ್ರೆಸ್ ಕೋಡ್ನಿಂದ ಸಿಲ್ವರ್ ಸ್ಕ್ರೀನ್ ಮೇಲೆ ಅಂಕುಡೊಂಕು ರೀತಿಯಲ್ಲಿ ಕುಣಿದುಕುಪ್ಪಳಿಸಿ ಪ್ರೇಕ್ಷಕ ವರ್ಗವನ್ನು ಮೋಡಿ ಮಾಡುತ್ತಿದ್ದಾರೆ.
ಇದು ಐಟಂ ಹುಡುಗರ ಹಕೀಕತ್ತು. ಮಸಾಲೆ ಪ್ಲಸ್ ಗ್ಲಾಮರ್ ಹದವಾಗಿ ಬರಿತ ಬಾಲಿವುಡ್ನಲ್ಲಿ ಈಗ ಐಟಂ ಹುಡುಗರದೇ ಎಲ್ಲ ಕಡೆ ಮಾತು ಹರಿದಾಡುತ್ತಿದೆ. ಇತ್ತೀಚೆಗೆ ತೆರೆಕಂಡು ಸ್ಕ್ರೀನ್ ಮೇಲೆ ಟೊಂಕುತ್ತಿರುವ ಅಮೀರ್ ಖಾನ್ ಬ್ಯಾನರ್ನ ‘ದೆಲ್ಲಿಬೆಲ್ಲಿ’ ಚಿತ್ರದಲ್ಲಿ ಅಮೀರ್ ಐಟಂ ಹಾಡೊಂದರಲ್ಲಿ ಮಿಂಚಿದ್ದಾರೆ.
ದೆಲ್ಲಿಬೆಲ್ಲಿಯ ‘ಐ ಹೇಟ್ ಯೂ, ಲೈಕ್ ಐ ಲವ್ ಯೂ’ ಎಂಬ ಐಟಂ ಹಾಡಿಗೆ ೭೦ರ ದಶಕದ ನಾಯಕರಂತೆ ಡ್ರೆಸ್ ತೊಟ್ಟು ಅಮೀರ್ ಸೊಂಟ ಬಳುಕಿಸಿದ್ದಾರೆ. ೭೦ರ ದಶಕದಲ್ಲಿರುವ ಎಲ್ಲ ನಾಯಕರ ಸ್ಟೈಲ್ಗಳನ್ನು ಆಮೀರ್ ತನ್ನ ಒಂದು ಐಟಂ ಹಾಡಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಐಟಂ ಹಾಡಿಗೂ ಸಿನ್ಮಾಕ್ಕೂ ಯಾವುದೇ ಲಿಂಕ್ ಇಲ್ಲ ಎನ್ನುವುದು ಬೇರೆ ವಿಷ್ಯಾ. ಚಿತ್ರದಲ್ಲಿರುವ ಈ ಹಾಡು ಮಾತ್ರ ಎಲ್ಲರಿಗೂ ಕಿಕ್ ಕೊಟ್ಟಿದೆ ಎನ್ನೋದು ನಿಜ.
ಇತ್ತೀಚೆಗೆ ತೆರೆಕಂಡು ಸುದ್ದಿಮಾಡಿದ ಸಲ್ಮಾನ್ ಖಾನ್ ನಿರ್ಮಾಣದ ಮಕ್ಕಳ ಚಿತ್ರ ‘ಚಿಲ್ಲರ್ ಪಾರ್ಟಿ’ಯ ‘ಟಾಯ್ ಟಾಯ್ ಪೀಸ್ಸ್....’ನಲ್ಲಿ ಠಪೋರಿ ಡ್ರೆಸ್ ಕೋಡ್ನಲ್ಲಿ ರಣಬೀರ್ ಕಪೂರ್ ಮಿಂಚಿದ್ದಾರೆ. ಇದು ರಣ್ಬೀರ್ ಕಪೂರ್ರ ಮೊದಲ ಐಟಂ ಹಾಡು. ರಣ್ಬೀರ್ ಕಪೂರ್ ತನ್ನ ತಂದೆ ನಟ ರಿಶಿ ಕಪೂರ್ರ ‘ಅಮರ್ ಅಕ್ಬರ್ ಅಂತೋನಿ ’ ಚಿತ್ರದ ಸ್ಟೈಲ್ಗಳನ್ನು ಯಥಾವತ್ತಾಗಿ ನಕಲು ಮಾಡಿದ್ದಾರೆ. ಚಿಲ್ಲರ್ ಪಾರ್ಟಿಯ ಈ ಹಾಡು ಈಗಾಗಲೇ ಸಾಂಗ್ ರೇಟಿಂಗ್ನಲ್ಲಿ ಬಹಳ ಮುಂದೆ ನಿಂತಿದೆ.
ಬಾಲಿವುಡ್ನಲ್ಲಿ ಇಂತಹ ಐಟಂ ಹುಡುಗರು ಈಗಾಗಲೇ ಬೇಕಾದಷ್ಟು ಮಂದಿ ಬಂದು ಹೋಗಿದ್ದಾರೆ. ಬಂದವರು ಮಿಂಚಿದ್ದಾರೆ. ಇದೇ ಮಿಂಚು ಹೊಸ ಐಟಂ ಹುಡುಗರ ಪ್ರವೇಶಕ್ಕೆ ನಾಂದಿ ಹಾಡಿದೆ ಎನ್ನೋದು ಗಮನಿಸಿಕೊಳ್ಳಬೇಕಾದ ವಿಷ್ಯಾ. ಶಾರುಕ್ ಖಾನ್ ಈಗಾಗಲೇ ಅತೀ ಹೆಚ್ಚು ಐಟಂ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಬಿಲ್ಲು ಬಾರ್ಬರ್ನಲ್ಲಿ ‘ದರ್ದೆ ಡಿಸ್ಕೋ’ ‘ಕ್ರೇಜಿ-೪’ ಹಾಗೂ ‘ಅಲ್ವೇಸ್ ಕಬಿ ಕಬಿ’ ಯಲ್ಲೂ ಐಟಂ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಐಟಂ ಹುಡುಗರ ಸಾಲಿನಲ್ಲಿ ನಂತರದ ಸ್ಥಾನಮಾನ ಹೃತಿಕ್ ರೋಷನ್, ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ ಸಿಗುತ್ತದೆ. ಬಾಲಿವುಡ್ನಲ್ಲಿ ಬಹಳ ವರ್ಷಗಳ ವರೆಗೂ ಐಟಂ ಸಾಂಗ್ನಲ್ಲಿ ಮಹಿಳೆಯರೇ ಜಾಸ್ತಿಯಾಗಿ ಕಾಣಿಸಿಕೊಂಡು ಪ್ರಾಬಲ್ಯ ಮೆರೆದು ಕೂತಿದ್ದರು. ಈಗ ಅವರ ಜಾಗದಲ್ಲಿ ‘ಐಟಂ ಹುಡುಗ್ರು’ ಬರುತ್ತಿದ್ದಾರೆ. ಬದಲಾವಣೆ ಜಗದ ನಿಯಮ ಎನ್ನೋದು ಇದಕ್ಕೆ ಇರಬಹುದು ಅಲ್ವಾ...?

Wednesday, July 13, 2011

ಲೇಡಿ ಕಮಾಂಡರ್


ಮಹಿಳೆಯೊಬ್ಬರು ನೌಕಪಡೆಯಲ್ಲಿ ಕೆಲಸ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ೧೪ ವರ್ಷಗಳ ಕಾಲ ದೇಶದ ಬಹುತೇಕ ಕರಾವಳಿ ತೀರದ ನೇವಲ್ ಪಡೆಯಲ್ಲಿ ಕೆಲಸ ಮಾಡಿ ರಾಜ್ಯದ ಮೊದಲ ಮಹಿಳಾ ಲೇಡಿ ಕಮಾಂಡರ್ ಇಂಧೂಪ್ರಭಾ ಲವಲವಿಕೆಯ ಮುಂದೆ ಬಂದಿದ್ದಾರೆ. ಇದು ಮಹಿಳಾ ದಿನಾಚರಣೆಗೆ ಮಹಿಳೆಯರಿಗೊಂದು ವಿಶೇಷ ಕತೆ...

ಎನ್ಸಿಸಿಯ ಆರ್ಮಿ ವಿಂಗ್ನಲ್ಲಿ ಹುಡುಗಿಯರಿಗೂ ಅವಕಾಶವಿದೆ ಎನ್ನುವ ಮಾತು ಹೇಗೋ ಗೊತ್ತಿಲ್ಲ ನನ್ನ ಕವಿಗೆ ಬಂದು ಬಿತ್ತು. ಮನೆಯ ಪಕ್ಕದಲ್ಲಿಯೇ ಇದ್ದ ಕಾಲೇಜುನ್ನು ಬಿಟ್ಟು ೨೯ ಕಿ.ಮೀ ದೂರದಲ್ಲಿದ್ದ ಎರ್ನಾಕುಲಂ ಬಿಟ್ಟು ಸಂತ. ಝೇವಿಯರ್ ಕಾಲೇಜಿಗೆ ಬಂದು ಸೇರಿಬಿಟ್ಟೆ. ಎನ್ಸಿಸಿಯಲ್ಲಿ ಕಲಿಸಿಕೊಡುತ್ತಿದ್ದ ಶಿಸ್ತಿನ ಬದುಕು, ಎನ್ಸಿಸಿ ಕ್ಯಾಪ್, ಯೂನಿಫಾರಂ ಎಲ್ಲವೂ ಹಾಕಿ ಸಾಹಸಿ ಬದುಕು ಬಾಳಬೇಕು ಎನ್ನುವ ಒಂದು ಹಂಬಲ ಗೊತ್ತಿಲ್ಲದೇ ಮನಸ್ಸಿನ ಮೂಲೆಯಲ್ಲಿ ಗರಿಕೆದರಿಕೊಂಡಿತು. ಹೆತ್ತವರು ನೀಡಿದ ಸ್ವಾತಂತ್ರ್ಯ ನನ್ನ ಇಂದಿನ ಸಾಹಸಿ ಬದುಕಿಗೆ ದಾರಿಯಾಗಿದೆ ಎಂದರು ಇಂಧೂಪ್ರಭಾ ವಿ. ಕ್ಷಮಿಸಿ. ಭಾರತದ ನೇವಿ ವಿಭಾಗದ ರಾಜ್ಯದ ಮೊತ್ತ ಮೊದಲ ಮಹಿಳಾ ಕಮಾಂಡರ್ ಇಂಧೂಪ್ರಭಾ ಎಂದರೆ ಅದೇ ಸರಿಯಾದ ಮಾತು. ಇಂಧೂಪ್ರಭಾ ಮೂಲತಃ ಮೂಲ್ಕಿಯವರು. ಇಂಧೂಪ್ರಭಾರ ತಂದೆ ಕೇಂದ್ರ ಸರಕಾರದ ಮೀನುಗಾರಿಕೆ ವಿಭಾಗದಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ಮೀನುಗಾರಿಕೆ ಎಂದರೆ ಇಡೀ ಭಾರತದ ಕರಾವಳಿ ತೀರದಲ್ಲಿಯೇ ಕೆಲಸ. ಹಾಗಾಗಿ ಇಂಧೂಪ್ರಭಾರ ಬಾಲ್ಯ ಎಲ್ಲವೂ ಕೇರಳದ ಕೊಚ್ಚಿನ್ನಲ್ಲಿ ಕಳೆದು ಹೋಯಿತು. ಇಂಧೂಪ್ರಭಾರ ಸಹೋದರ, ಸಹೋದರಿಯರೆಲ್ಲರೂ ವಿಜ್ಞಾನ ವಿಚಾರದಲ್ಲಿ ವ್ಯಾಸಂಗ ಮಾಡಿ ನಂತರ ಮೀನುಗಾರಿಕೆಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೆ ಇಂಧೂಪ್ರಭಾ ಮಾತ್ರ ಉಳಿದವರಿಗಿಂತ ಭಿನ್ನ. ತಾನು ಎಲ್ಲರಂತೆ ಅಲ್ಲ ಎಂದುಕೊಂಡು ಭಾರತೀಯ ಸೇನಾ ಪಡೆಗೆ ಸೇರಿಕೊಂಡರು ಎನ್ನುತ್ತಾರೆ ಅವರ ತಂದೆ ಕ್ಯಾಪ್ಟನ್ ವಾಸು ಎ.ಪುತ್ರನ್.
ಮಹಿಳೆಯೊಬ್ಬರು ನೇವಲ್( ನೌಕಪಡೆ) ವಿಭಾಗದಲ್ಲಿ ಕೆಲಸ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ೧೪ ವರ್ಷ ದೇಶದ ಬಹುತೇಕ ಕರಾವಳಿ ತೀರದ ನೇವಲ್ ಪಡೆಯಲ್ಲಿ ಕೆಲಸ ಎಂದರೆ ಅದೊಂದು ಸಾಹಸದ ಮಾತೇ ಸರಿ ಎನ್ನುವುದು ನೇವಲ್ ವಿಭಾಗದಿಂದ ಬಂದ ಮಾತು.
ಇಂಧೂ ನೇವಿಗೆ ಸೇರಿದ್ದು ಹೇಗೆ ?
ಅದು ೧೯೯೦ರ ಮಾತು. ಎನ್ಸಿಸಿಯಲ್ಲಿದ್ದ ಕ್ರೇಜ್ ದೂರದ ಊರಿನ ಕಾಲೇಜಿಗೆ ಹೋಗುವಂತೆ ಮಾಡಿತು. ಎನ್ಸಿಸಿ ಎಂದಾಗಲೇ ಅಲ್ಲೊಂದು ದೇಶಸೇವೆಯ ಕಿಚ್ಚು ನಿಧಾನವಾಗಿ ಗೊತ್ತಿಲ್ಲದೇ ಮೊಳಕೆ ಹೊಡೆದು ಬಿಡುತ್ತದೆ. ಇದೇ ಸಮಯದಲ್ಲಿ ಕೇರಳದ ದಿನಪತ್ರಿಕೆಯೊಂದು ದೇಶದ ಸೇನಾಪಡೆಗೆ ಮಹಿಳಾ ಅಕಾರಿಗಳು ಬೇಕಾಗಿದ್ದಾರೆ ಎನ್ನುವ ಪುಟ್ಟ ಜಾಹೀರಾತು ನೀಡಿತು. ಇಂಧೂ ಅವರ ಮನಸ್ಸಿನ ಮೂಲೆಯಲ್ಲಿದ್ದ ಬಯಕೆ ಈಡೇರುವ ಜಾಹೀರಾತು ಅದಾಗಿತ್ತು. ‘ಏನೂ ಬೇಕಾದರೂ ಮಾಡಮ್ಮಾ...ಆದರೆ ನಿನ್ನ ನಿರ್ಧಾರ ಸರಿಯಾಗಿರಬೇಕು’ ಎಂದು ಹೇಳಿದ್ದನ್ನು ಇಂಧೂಪ್ರಭಾ ಈಗಲೂ ನೆನಪಿಸಿಕೊಳ್ಳುತ್ತಾರೆ. ೧೯೯೨ರಲ್ಲಿ ಭಾರತೀಯ ಸೇನಾಪಡೆಯ ನೌಕ,ವಾಯು, ಭೂಸೇನೆ ಎಲ್ಲಕ್ಕೂ ಪರೀಕ್ಷೆ ಬರೆದು ಕೂತರು. ಆದರೆ ಇಂಧೂಪ್ರಭಾ ಈ ಪರೀಕ್ಷೆಗಳ ಕುರಿತು ತುಂಬಾನೇ ಸಿರೀಯಸ್ ಆಗಿರಲಿಲ್ಲ. ಇಂಧೂಪ್ರಭಾ ಮೆರಿಟ್ ಲೀಸ್ಟ್ನಿಂದ ಆ ವರ್ಷ ಹೊರಗೆ ಉಳಿಯುವಂತಾಯಿತು. ಮರಳಿ ಯತ್ನವ ಮಾಡು ಎನ್ನುವ ಸಿದ್ಧಾಂತಕ್ಕೆ ಅಂಟಿಕೊಂಡು ನಂತರ ಎರಡನೇ ಬಾರಿ ಪರೀಕ್ಷೆ ಬರೆದರು. ಮೆರಿಟ್ ಲೀಸ್ಟ್ನಲ್ಲಿ ಈ ಬಾರಿ ಇಂಧೂಪ್ರಭಾ ಹೆಸರು ಕಾಣಿಸಿಕೊಂಡಿತು. ಪರೀಕ್ಷೆಯ ಕುರಿತು ಮಾತನಾಡಿದಾಗ ಇಂಧೂ ಹೇಳುವುದು ಹೀಗೆ ‘ ಬದುಕಿನ ಹೋರಾಟದಲ್ಲಿ ಗೆದ್ದು ಬಂದ ತೃಪ್ತಿ ಈ ಪರೀಕ್ಷೆಯಿಂದ ದೊರಕಿದೆ. ಇಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಒಂದೇ ಪರೀಕ್ಷೆ ಇತ್ತು. ಅದರಲ್ಲೂ ಮೆರಿಟ್ ಲೀಸ್ಟ್ನಲ್ಲಿ ಕಾಣಿಸಿಕೊಳ್ಳುವುದು ಎಂದರೆ ಅದು ಸುಲಭದ ಮಾತೇ ಆಗಿರಲಿಲ್ಲ. ಆದರೆ ಕೊನೆಗೆ ಸಾಸಿ ತೋರಿಸಿದೇ... ನನ್ನ ಮುಂದೆ ನೌಕ ಪಡೆಯ ಯುನಿಫಾರಂ ಇತ್ತು. ನನಗಾದ ಸಂತೋಷ ಈಗಲೂ ವರ್ಣಿಸಲು ಆಗುತ್ತಿಲ್ಲ ಎನ್ನುತ್ತಾರೆ ಅವರು.
ಮರೆಯಲಾಗದ ಅನುಭವ:ಭಾರತೀಯ ನೌಕೆ ಪಡೆಯಲ್ಲಿ ೧೪ ವರ್ಷಗಳ ಕಾಲ ಸುದೀರ್ಘ ಸೇವೆ. ಮಾತ್ರವಲ್ಲ ನಿವೃತ್ತಿಯ ನಂತರನೂ ದಿಲ್ಲಿಯಲ್ಲಿರುವ ಇಂಡೋ- ರಷ್ಯಾ ಕಂಪನಿಯೊಂದರಲ್ಲಿ ಭಾರತೀಯ ನೌಕಪಡೆಗೆ ಸಂಬಂಸಿದ ಕೆಲಸ ಮಾಡ ತ್ತಿರುವ ಇಂಧೂಪ್ರಭಾ ಸಾಹಸಿ ಬದುಕಿನ ಪೊಟ್ಟಣದಲ್ಲಿ ಮರೆಯಲಾಗದ ನೆನಪುಗಳನ್ನು ಬಚ್ಚಿಟ್ಟುಕೊಂಡಿದ್ದಾರೆ. ಇಂಧೂ ಪ್ರಭಾ ಅಸಿಸ್ಟೆಂಟ್ ಲಾಜಿಸ್ಟಿಕ್ ಆಫೀಸರ್ ಆಗಿದ್ದಾಗ ಒಂದು ನೆನಪು ಇಲ್ಲಿದೆ. ಐಎನ್ಎಸ್ ಅಂಬಾ ಎನ್ನೋದು ಭಾರತೀಯ ನೌಕಪಡೆಯ ಒಂದು ನೌಕೆ. ಅದರಲ್ಲಿ ೩೦೦ ಮಂದಿ ಪುರುಷರು ಹಾಗೂ ಇಬ್ಬರು ನೇವಲ್ ಆಫೀಸರ್ಗಳು ಇರುತ್ತಾರೆ. ಅದರಲ್ಲಿ ಒಬ್ಬರು ಇಂಧೂ ಇನ್ನೊಬ್ಬರು ವೈದ್ಯೆ. ೧೫ ದಿನಗಳ ಕಾಲ ನೀರಿನಲ್ಲಿಯೇ ಬದುಕು. ಹೊರ ಜಗತ್ತಿನ ಸಂಪರ್ಕ ಇಲ್ಲದೇ ಬದುಕ ಬೇಕಾದ ಸನ್ನಿವೇಶ. ಇದೊಂದು ಮರೆಯಲಾಗದ ಅನುಭವ ಎನ್ನೋದು ಇಂಧೂರ ಮಾತು. ಡೆಫ್ಯುಟಿ ಲಾಜಿಸ್ಟಿಕ್ಸ್ ಆಫೀಸರ್ ಆಗಿದ್ದಾಗ ಐಎನ್ಎಸ್ ಉತ್ಕೋರ್ಷನಲ್ಲಿ ಮಾಡಿದ ಕೆಲಸ ಕೂಡ ಆಗಾಗ ನೆನಪಿಗೆ ಬರುತ್ತದೆ. ಅಂಡಮಾನ್- ನಿಕೋಬರ್ನಲ್ಲಿ ಕಾಣಿಸಿಕೊಂಡ ಸುನಾಮಿ ಸಮಯವಂತೂ ಎಂದಿಗೂ ಮರೆಯಲಾಗದು ಎನ್ನುತ್ತಾರೆ ಇಂಧೂಪ್ರಭಾ. ಅಂದಹಾಗೆ ಬರೀ ದೇಶಸೇವೆಯ ಜತೆಯಲ್ಲಿಯೇ ಸ್ಕೈ ಡೈವಿಂಗ್ನಲ್ಲೂ ಇಂಧೂಪ್ರಭಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಹತೆಯನ್ನು ಪಡೆದುಕೊಂಡಿದ್ದಾರೆ. ಊರಿಗೆ ಬಂದಾಗಲೆಲ್ಲಾ ಸಮಾಜ ಸೇವೆ, ಭಾರತೀಯ ಸೇನಾ ಪಡೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ- ಮಾರ್ಗದರ್ಶನ, ಉಪನ್ಯಾಸ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಮಹಿಳೆಯರಿಗೆ ಭಾರತೀಯ ಸೇನಾ ಪಡೆಯಲ್ಲಿ ತಾರತಮ್ಯತೆ ಇದೆಯಾ ಎಂದು ಕೇಳಿದರೆ ಇಂಧೂ ಪ್ರಭಾ ಹೇಳುವುದು ಹೀಗೆ ಮಹಿಳೆ ಯಾವುದೇ ವೃತ್ತಿ ಮಾಡಲಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಮುಖ್ಯವಾಗಿ ವೃತ್ತಿಯಲ್ಲಿರುವ ಎಲ್ಲ ವಿಚಾರಗಳನ್ನು ತಿಳಿದುಕೊಂಡರೆ ಅವಳಿಗೆ ಯಾವುದೇ ತಾರತಮ್ಯತೆ ಕಾಣ ಸಿಗುವುದಿಲ್ಲ. ಪುರುಷ- ಮಹಿಳೆ ಎನ್ನುವ ಗಡಿರೇಖೆ ಮರೆಯಾಗಿ ಮಹಿಳೆಯ ಬಗ್ಗೆ ಗೌರವ ಭಾವನೆ ಬೆಳೆದು ಬಿಡುತ್ತದೆ. ಅಂತಹ ಭಾವನೆಯನ್ನು ಮಹಿಳೆ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಹೌದು. ಮಹಿಳೆ ಈಗ ನಾಲ್ಕು ಗೋಡೆಗಳ ಪ್ರಪಂಚದಿಂದ ದೂರಕ್ಕೆ ಬಂದು ನಿಂತಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸೇನಾ ಕ್ಷೇತ್ರಕ್ಕಂತೂ ಅವಳ ಆಗಮನ ತುಂಬಾನೇ ವಿರಳ. ಅದರಲ್ಲೂ ಉನ್ನತ ಹುದ್ದೆಯಲ್ಲಿ ಮಹಿಳೆಯೊಬ್ಬರು ಕಾಣಿಸಿಕೊಳ್ಳುವುದು ಅಪರೂಪದಲ್ಲಿಯೇ ಅಪರೂಪ. ಅಂತವರಲ್ಲಿ ಇಂಧೂಪ್ರಭಾ ಒಬ್ಬರು. ದೇಶ ಸೇವೆಯೇ ತನ್ನ ಅಂತಿಮ ಗುರಿ ಎನ್ನುವ ಇಂಧೂಪ್ರಭಾರಿಗೊಂದು ಸೆಲ್ಯುಟ್ ಹೊಡೆಯಲೇ ಬೇಕು.. ಅಲ್ವಾ...?

Tuesday, July 12, 2011

ದುಬಾರಿ ಇಂಧನ ಉಳಿಕೆಗೆ ಸುಲಭದ ವಿಧಾನ


ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ರಾಕೆಟ್ನಂತೆ ಓಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಪೆಟ್ರೋಲ್ ಬ್ಯಾರಲ್ ದರ ಏರುತ್ತಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಇತ್ತ ಕಡೆ ಕೇಂದ್ರವೇ ಪೆಟ್ರೋಲ್ ದರ ಏರಿಸಿ ಕೂತಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ನಿಜಕ್ಕೂ ಪೆಟ್ರೋಲ್ ದರ ಇಳಿಯುವ ಸಾಧ್ಯತೆಯಂತೂ ಕ್ಷೀಣಿಸುತ್ತಿದೆ. ಆದರೂ ಪೆಟ್ರೋಲ್ ಹಾಕಿ ವಾಹನ ಓಡಿಸುವ ಮಂದಿ ಯಾವ ರೀತಿಯಲ್ಲಿ ಇಂಧನ ಉಳಿಸಬಹುದು ಎಂಬುವುದಕ್ಕೆ ಇಲ್ಲಿ ಕೊಂಚ ಸರಳ ಟಿಪ್ಸ್ಗಳಿವೆ... ಪಾಲಿಸಿ ನೋಡಿ ಬಿಡಿ.

* ನಿಮ್ಮ ವಾಹನದ ಟಯರ್ಗಳಿಂದಲೂ ಇಂಧನ ಉಳಿಸಬಹುದು ಅಂತಾ ಗೊತ್ತಾ..? ಟಯರ್ಗಳ ಗಾಳಿಯನ್ನು ಯಾವಾಗಲೂ ಭರ್ತಿ ಇರುವಂತೆ ನೋಡಿಕೊಳ್ಳಿ. ಅದು ಅತ್ಯಂತ ಸರಳವಾಗಿ ಇಂಧನ ಉಳಿಸುವ ಮಾರ್ಗೋಪಾಯ. ಅತೀ ಹೆಚ್ಚು ಗಾಳಿ ಟಯರ್ಗಳಲ್ಲಿ ಇದ್ದರೆ ನಿಮ್ಮ ವಾಹನ ಹೆಚ್ಚು ಇಂಧನ ಕುಡಿಯುತ್ತದೆ ಎಂದು ಅರ್ಥ ಎನ್ನುವುದು ವಾಹನ ತಯಾರಕರ ಮಾತು.
* ಒಂದೇ ರೀತಿಯ ವೇಗದಿಂದ ವಾಹನಗಳನ್ನು ಓಡಿಸಿ. ಸಂಚಾರ ಕಡಿಮೆ ಇರುವ ರಸ್ತೆಗಳಲ್ಲಿ ಹೆಚ್ಚು ವೇಗದಿಂದ ವಾಹನವನ್ನು ಓಡಿಸಲು ಹೋಗಬೇಡಿ. ನಿಮ್ಮ ವಾಹನದ ವೇಗ ಹೆಚ್ಚಿದಂತೆ ಇಂಧನ ಕೂಡ ಹೆಚ್ಚಾಗುತ್ತದೆ ಎಂದು ತಿಳಿದಿರಲಿ. ನಿಮ್ಮ ಕಾರಿನ ವೇಗ ೧೦೦ ಕಿ.ಮೀ ದಾಟಿದೆ ಎಂದಾದರೆ ಶೇ ೧೫ರಷ್ಟು ಪೆಟ್ರೋಲ್ ಜಾಸ್ತಿ ಕುಡಿದಿದೆ ಎಂದಾರ್ಥ. ಅದಷ್ಟೂ ನಿಮ್ಮ ವಾಹನದ ವೇಗ ೫೦ ಕಿ.ಮೀಕ್ಕಿಂತ ಹೆಚ್ಚು ಇಲ್ಲದೇ ಇರಲಿ.
* ವಾಹನಗಳಲ್ಲಿ ತೆಳ್ಳಗಿನ ಟಯರ್(ಚಕ್ರ)ಗಳನ್ನು ಬಳಸಿಕೊಳ್ಳಿ. ಇದು ನಿಮ್ಮ ವಾಹನವನ್ನು ನಿಯಂತ್ರಣ ಮಾಡಲು ಸುಲಭ ಹಾಗೂ ಇಂಧನ ಉಳಿಕೆಕೂಡ ಸಾಧ್ಯ. ತೆಳ್ಳಗಿನ ಟಯರ್ಗಳು ಹೆಚ್ಚು ಬಾರಿ ರೋಲಿಂಗ್(ತಿರುಗುವ) ಸಾಮರ್ಥ್ಯವನ್ನು ಹೊಂದಿರುತ್ತದೆ.
* ವಾಹನ ಸ್ಟಾರ್ಟ್ ಆಗಿ ೩೦ ಸೆಕೆಂಡ್ಗಿಂತ ಹೆಚ್ಚು ಕಾಲ ರೈಸ್ ಮಾಡಿ ಇಟ್ಟುಕೊಳ್ಳಬೇಡಿ. ಜತೆಗೆ ವಾಹನದ ಗೇರ್ಗಳನ್ನು ಪದೇ ಪದೇ ಬದಲಾಯಿಸಲು ಹೋಗಬೇಡಿ ಎರಡು ಕೂಡ ಇಂಧನ ಉಳಿಕೆಗೆ ಮಾರಕ.
* ವಾಹನದಲ್ಲಿ ಅನಗತ್ಯವಾದ ಭಾರದ ವಸ್ತುಗಳನ್ನು ಹೊತ್ತುಕೊಂಡು ಹೋಗಬೇಡಿ. ನಿಮ್ಮ ವಾಹನದ ಭಾರಕ್ಕಿಂತ ದುಪ್ಪಟ್ಟು ಭಾರ ಶೇ.೨ರಷ್ಟು ಇಂಧನವನ್ನುತಿನ್ನುತ್ತದೆ ಎಂಬುವುದು ಗೊತ್ತಿರಲಿ. ವಾಹನವನ್ನು ಅತೀಯಾಗಿ ಅಲ್ಟ್ರೇಶನ್ ಮಾಡುವುದು ಕೂಡ ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ.
* ವಾಹನದ ಬ್ರೇಕ್ಗಳನ್ನು ಪದೇ ಪದೇ ಹಾಕುವುದು ಹಾಗೂ ಎಕ್ಸಿಲರೇಟರ್ ಪದೇ ಪದೇ ಕೊಡುವುದರಿಂದಲೂ ನಿಮ್ಮ ವಾಹನದ ಇಂಧನ ಉಳಿಕೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ.
* ನೀವು ವಾಹನದಲ್ಲಿ ಬಳಸುವ ಎ.ಸಿ ಕೂಡ ಶೇ ೧೦ರಷ್ಟು ಇಂಧನವನ್ನು ನುಂಗುತ್ತದೆ. ವಾಹನದಲ್ಲಿ ೮೦ ಕಿ.ಮೀ ವೇಗದಲ್ಲಿ ಹೋಗುತ್ತಿದ್ದರೆ ವಾಹನದ ಕಿಟಿಕಿಗಳನ್ನು ಒಪನ್ ಮಾಡಿ ಇಟ್ಟುಕೊಳ್ಳಿ ಇದ್ದರಿಂದ ಇಂಧನ ಕೂಡ ಉಳಿತಾಯವಾಗುತ್ತದೆ.
* ನೀವು ಪೆಟ್ರೋಲ್ ಬಂಕ್ನಲ್ಲಿ ಇಂಧನ ಹಾಕುವ ವೇಳೆಯಿಂದಲೂ ಇಂಧನ ಉಳಿಸಲು ಸಾಧ್ಯವಿದೆ. ಬೆಳಗ್ಗಿನ ಹೊತ್ತುಹವಾಮಾನ ತಂಪಾಗಿರುತ್ತದೆ. ಈ ವೇಳೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ನಲ್ಲಿ ಹೆಚ್ಚು ಇಂಧನ ಶೇಖರಣೆಯಾಗುತ್ತದೆ. ಅದೇ ಮಧ್ಯಾಹ್ನ, ಸಂಜೆ ಹೊತ್ತು ಈ ರೀತಿ ನಡೆಯುವುದಿಲ್ಲ. ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಅದು ಭರ್ತಿ ಒಂದು ಲೀಟರ್ ಯಾಗಿರುವುದಿಲ್ಲ.
* ಪೆಟ್ರೋಲ್ ಬಂಕ್ನಲ್ಲಿ ಇಂಧನ ಹಾಕುವ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಿ. ೧ ನಿಧಾನ,೨ ಮಧ್ಯಮ, ೩ ವೇಗ ಈ ರೀತಿಯಲ್ಲಿ ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬಿಸಲಾಗುತ್ತದೆ. ಮಧ್ಯಮ ಹಾಗೂ ವೇಗವಾಗಿ ಇಂಧನ ತುಂಬಿಸಲಾಗುತ್ತದೆ ಎಂದಾದರೆ ಜೋರಾಗಿ ಮೀಟರ್ ತಿರುಗುತ್ತದೆ ಹೊರತು,ನಿಮ್ಮ ಬೆಲೆಗೆ ತಕ್ಕ ಇಂಧನ ಸಿಕ್ಕಿಲ್ಲ ಎಂದಾರ್ಥ.
* ವಾಹನದ ಪೆಟ್ರೋಲ್ ಟ್ಯಾಂಕ್ ಅರ್ಧ ಇಂಧನ ಇದ್ದಾಗ ಅದರೊಳಗೆ ತುಂಬಿರುವ ಗಾಳಿಯ ಸಾಂದ್ರತೆ ಹೆಚ್ಚಾಗಿರುತ್ತದೆ. ಆಗ ಪೆಟ್ರೋಲ್ ಖರ್ಚಾಗುವುದು ಕೂಡ ಕಡಿಮೆಯಾಗಿರುತ್ತದೆ. ಆದರೆ ಪೂರ್ತಿ ಟ್ಯಾಂಕ್ ಪೆಟ್ರೋಲ್ ಇದ್ದಾಗ ಗಾಳಿಯ ಸಾಂದ್ರತೆ ಕಡಿಮೆ ವಾಹನ ಇಂಧನ ಕುಡಿಯುವ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತದೆ.
* ಇಂಧನ ಬೆಲೆ ಜಾಸ್ತಿ ಆಯಿತು ಎಂದುಕೊಂಡು ಪೆಟ್ರೋಲ್ ಬದಲಾಗಿ ಬೇರೆಕಳಪೆ ಇಂಧನ ಬಳಸಿದರೆ ವಾಹನ ಕೈ ಕೊಟ್ಟು ಬಿಟ್ಟಿತು. ಇದು ಉಳಿಕೆಯ ಬದಲು ಹಣ ಕಳೆದುಕೊಳ್ಳುವ ಮಾರ್ಗವಾಗಬಹುದು.
* ದ್ವಿಚಕ್ರ ವಾಹನವನ್ನು ಎಲ್ಲದರೂ ಪಾರ್ಕಿಂಗ್ ಮಾಡುವುದಾದರೆ ಸುಡುಬಿಸಿಲಿಗೆ ಪಾರ್ಕಿಂಗ್ ಮಾಡಬೇಡಿ. ಅದಷ್ಟೂ ಬಿಸಿಲು ಇಲ್ಲದ ಜಾಗ ನೋಡಿ ಪಾರ್ಕಿಂಗ್ ಮಾಡಿಬಿಡಿ. ಬಿಸಿಲಿಗೆ ಪಾರ್ಕಿಂಗ್ ಮಾಡಿದರೂ ಕೂq ಪೆಟ್ರೋಲ್ ಟ್ಯಾಂಕ್ ಮೇಲೆ ಒದ್ದೆ ಬಟ್ಟೆ ಹಾಕಿಬಿಡಿ. ಅದು ನಿಮ್ಮ ವಾಹನದ ಇಂಧನ ಉಳಿಸುತ್ತದೆ.
* ವಾಹನದ ಎಂಜಿನ್ ಕುರಿತು ಜಾಗೃತವಾಗಿರಿ. ಕೆಟ್ಟ ಎಂಜಿನ್ ನಿಮ್ಮ ವಾಹನದ ಮೈಲೇಜ್ ಕಿತ್ತುಕೊಳ್ಳುವುದರ ಜತೆಗೆಶೇ ೨೦ರಷ್ಟು ಇಂಧನವನ್ನುಕಸಿದುಬಿಡುತ್ತದೆ. ಎಂಜಿನ್ಗೆ ಹಾಕುವ ಲ್ಯೂಬ್ರಿಕೇಟ್ಸ್ಗಳು ಬ್ರಾಂಡೆಡ್ ಆಗಿರಲಿ. ವಾಹನದ ತಯಾರಕರು ಯಾವುದನ್ನು ಮಾನ್ಯ ಮಾಡಿರುತ್ತಾರೋ ಅದನ್ನೇ ಬಳಸಿಕೊಳ್ಳಿ. ಆಯಿಲ್ಗಳನ್ನು ಬದಲಾಯಿಸುವಾಗ ಮೊದಲು ಬಳಸಿದ ಆಯಿಲ್ಗಳನ್ನುತೊಳೆದುಬಿಡಿ. ಇದು ವಾಹನz ಎಂಜಿನ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
* ವಾಹನಗಳನ್ನು ಓಡಿಸುವಾಗ ಅದಷ್ಟೂ ಪ್ಲ್ಯಾನ್ ಮಾಡಿಕೊಂಡು ರಸ್ತೆಗೆ ಇಳಿಯಿರಿ. ಕೆಲವೊಂದು ಲಾಂಗ್ ರೂಟ್ಗಳು ವಾಹನದ ಇಂಧನ ಉಳಿಸುತ್ತದೆ. ಹತ್ತಿರದ ರೂಟ್ಗಳು ಟ್ರಾಫಿಕ್ನಿಂದಾಗಿ ಹೆಚ್ಚು ಇಂಧ ಖಾಲಿಯಾಗಬಹುದು.
* ಅದಷ್ಟೂ ಸಾರ್ವಜನಿಕ ವಾಹನಗಳನ್ನು ಬಳಸಿಕೊಳ್ಳಿ. ಅಪರೂಪಕ್ಕೊಂದು ಬಾರಿಯಾದರೂ ಕಚೇರಿಗೆ ಹೋಗುವಾಗಬಸ್ನಲ್ಲಿ ಪ್ರಯಾಣಿಸಿ. ಇದು ನಿಮ್ಮ ಹಣ ಉಳಿತಾಯ ಮಾಡುವುದರ ಜತೆಯಲ್ಲಿ ಟ್ರಾಫಿಕ್ ವ್ಯವಸ್ಥೆಗೂ ನೀವು ನೆರವಾಗುತ್ತೀರಿ.
* ಬಹಳ ಹತ್ತಿರದ ಸ್ಥಳಗಳಿಗೆ ವಾಹನ ಬಳಸಬೇಡಿ. ಇದು ಇಂಧನ ಉಳಿಕೆಗೆ ಮಾರಕ. ಹತ್ತಿರದ ಸ್ಥಳಗಳಿಗೆ ವಾಕಿಂಗ್ ಮಾಡಿ. ಇದು ಹಣ ಉಳಿತಾಯದ ಜತೆಯಲ್ಲಿ ನಿಮ್ಮ ಆರೋಗ್ಯಕ್ಕೂ ಉತ್ತಮ.
* ಇಂಧನದ ಬೆಲೆಏರುತ್ತಾ ಹೋಗುತ್ತಿರುವುದರಿಂದ ಪರ್ಯಾಯ ಇಂಧನದ ಕಡೆ ಗಮನ ಕೊಡಿ. ಪೆಟ್ರೋಲ್ ಬದಲಾಗಿ ಎಲ್ಪಿಜಿ/ಸಿಎನ್ಜಿಗಳನ್ನು ಬಳಸಿಕೊಳ್ಳಿ. ಇದು ಶೇ ೩೦ರಿಂದ ೪೦ರಷ್ಟು ಇಂಧನ ಉಳಿಕೆಗೆ ಸಹಕಾರಿಯಾಗುತ್ತದೆ.
-

Saturday, July 2, 2011

ಕಾಲಿವುಡ್ಗೆ ಹೊಸ ವಿಕ್ರಮ !



ಕಾಲಿವುಡ್ ಸಿನ್ಮಾಕ್ಕೆ ಹೊಸ ಹುಡುಗ ವಿಕ್ರಂ ಪ್ರಭು ಬರುತ್ತಿದ್ದಾರೆ. ಅವರೇನ್ ವಿಶೇಷ ಅಂತ್ತೀರಾ...ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಶಿವಾಜಿ ಗಣೇಶನ್ ಈ ಹುಡುಗನಿಗೆ ಅಜ್ಜನಾಗಬೇಕು. ತಮಿಳಿನ ನಟ ಪ್ರಭು ತಂದೆಯಾಗಬೇಕು. ಇದು ವಿಕ್ರಂ ಪ್ರಭು ಅವರ ಶಾರ್ಟ್ ಇಂಟರ್ಡಕ್ಷನ್ ಮಾರ್ಕ್.

ನಮ್ಮ ಪಕ್ಕದ ಕಾಲಿವುಡ್ ಸಿನ್ಮಾ ಇಂಡಸ್ಟ್ರಿಗೆ ಹೊಸ ಹುಡುಗನ ಎಂಟ್ರಿಯಾಗಿದೆ. ಕಾಲಿವುಡ್ ಸಿನ್ಮಾ ಮಂದಿನೇ ಹಾಗೇ ಅಲ್ಲಿ ಅದ್ಧೂರಿತನದ ಜತೆಗೆ ಪ್ರತಿಭಾವಂತರಿಗಂತೂ ಮೊದಲ ಮಣೆ ಇದ್ದೇ ಇರುತ್ತದೆ. ಹೊಸ ಹೊಸ ಹುಡುಗರು ಬಂದು ಅಭಿಮಾನಿಗಳ ಸ್ಟಾರ್ಗಳಾಗಿ ಮಿಂಚಿದವರ ಸಂಖ್ಯೆ ಎಲ್ಲ ಇಂಡಸ್ಟ್ರಿಕ್ಕಿಂತ ಜಾಸ್ತಿ ಕಾಲಿವುಡ್ನಲ್ಲಿ ಕಾಣ ಸಿಗುತ್ತದೆ.
ಕಾಲಿವುಡ್ ಸಿನ್ಮಾದ ದೊಡ್ಡ ಮಾರ್ಕೆಟ್, ಗಲ್ಲಿ ಗಲ್ಲಿಯಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ಗಳಿಗಾಗಿ ಕಟ್ಟುವ ‘ಅಭಿಮಾನಿ ಸಂಘ’, ಅಲ್ಲಿ ತುಂಬಿ ತುಳುಕುವ ಸಿನ್ಮಾ ಕ್ರೇಜ್ ಟೋಟಲಿ ಸೂಪರ್ ಎಂದು ಇತರ ಸಿನ್ಮಾ ಇಂಡಸ್ಟ್ರಿಯವರೇ ಹೇಳಿಕೊಳ್ಳುವುದಿದೆ. ಇಂತಹ ಇಂಡಸ್ಟ್ರಿಗೆ ಈಗ ಹೊಸ ಹುಡುಗನ ಆಗಮನವಾಗಿದೆ. ಈ ಹುಡುಗನ ಬ್ಯಾಕ್ಗ್ರೌಂಡೇ ತುಂಬಾ ದೊಡ್ಡದಿದೆ.
ಅದೇನಪ್ಪಾ ಅಂದ್ರೆ ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಶಿವಾಜಿ ಗಣೇಶನ್ ಈ ಹುಡುಗನಿಗೆ ಅಜ್ಜನಾಗಬೇಕು. ತಮಿಳಿನ ನಟ ಪ್ರಭು ತಂದೆಯಾಗಬೇಕು. ಹೌದು, ಇದು ವಿಕ್ರಂ ಪ್ರಭು ಅವರ ಶಾರ್ಟ್ ಇಂಟರ್ಡಕ್ಷನ್ ಮಾರ್ಕ್. ಅಂದಹಾಗೆ ವಿಕ್ರಂ ಪ್ರಭುರ ಚಿತ್ರವನ್ನು ತಮಿಳಿನ ಸೂಪರ್ ಹಿಟ್ ಚಿತ್ರ ‘ಮೈನಾ’ದ ನಿರ್ದೇಶಕ ಪ್ರಭು ಸಲೋಮನ್ ನಿರ್ದೇಶನ ಮಾಡುತ್ತಿದ್ದಾರೆ. ಟೋಟಲಿ ಈ ಎರಡು ವಿಚಾರಗಳಿಂದ ಚಿತ್ರ ಬರುವ ಮೊದಲೇ ಕುತೂಹಲದ ಹಬೆ ಎದ್ದು ಕೂತಿದೆ.
‘ಮೈನಾ’ ಚಿತ್ರಕ್ಕಿಂತ ಈ ಚಿತ್ರವನ್ನು ಬಹಳಷ್ಟು ಡಿಪರೆಂಟ್ ರೀತಿಯಲ್ಲಿ ತೋರಿಸಲು ಮುಂದೆ ಬಂದಿರುವ ಸಲೋಮನ್ ವಿಕ್ರಂ ಪ್ರಭುಗೆ ಈ ಚಿತ್ರದಲ್ಲಿ ಆನೆ ಮಾವುತನ ಪಾತ್ರ ನೀಡಲಾಗಿದೆ. ಅದಕ್ಕೆ ತಕ್ಕಂತೆ ವಿಕ್ರಂ ಕೂಡ ಕೇರಳದ ಆನೆ ಮಾವುತಗಳಿಂದ ತರಬೇತಿ ಪಡೆಯುತ್ತಿದ್ದಾರೆ. ವಿದೇಶಕ್ಕೆ ಹೋಗಿ ಮಾರ್ಶಲ್ ಆರ್ಟ್ಸ್ನಲ್ಲೂ ಸಖತ್ ಪರಿಣತಿ ಪಡೆದುಕೊಂಡು ಬಂದಿದ್ದಾರೆ.
ಇಡೀ ಚಿತ್ರ ವನ್ಯಲೋಕದ ವಿಶಿಷ್ಠ ಅಧ್ಯಾಯವನ್ನು ತೆರೆದಿಡುವ ಸಾಧ್ಯತೆ ಇದೆ ಎನ್ನೋದು ಸಲೋಮನ್ ಅವರ ಆಪ್ತ ವಲಯದ ಮಾತು. ಸಲೋಮನ್ ವನ್ಯ ಸಂರಕ್ಷಣಾ ಇಲಾಖೆಗೂ ಚಿತ್ರದ ಕತೆ ಕೊಟ್ಟು ಯಾವುದಾದರೂ ಅಡೆತಡೆಗಳಿವೆ ಎನ್ನುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬರುವ ಆನೆ ಕೇರಳ ರಾಜ್ಯದಾಗಿದ್ದು, ಮಾಧವನ್ ಎಂದು ಹೆಸರಿಡಲಾಗಿದೆ.
ಆಗಸ್ಟ್ ತಿಂಗಳ ಮೊದಲ ವಾರದಿಂದ ಚಿತ್ರೀಕರಣ ನಡೆಯುವ ಸಾಧ್ಯತೆಗಳಿವೆ. ಜೋಗ್ಪಾಲ್ಸ್, ಒಟ್ಟಾಪಲಂ ಮತ್ತು ಥಾಯ್ಲೆಂಡ್ನ ಚಾಂಗ್ ಮಯೀಯಲ್ಲೂ ಚಿತ್ರದ ಚಿತ್ರೀಕರಣ ನಡೆಯುತ್ತದೆ ಎನ್ನೋದು ಚಿತ್ರ ತಂಡದ ಮಾತು. ಸಲೋಮನ್ ಮೈನಾ ಮೇನಿಯಾ ಇಲ್ಲೂ ವರ್ಕ್ಔಟ್ ಆಗುತ್ತಾ, ವಿಕ್ರಂ ಪ್ರಭು ನಿಜಕ್ಕೂ ಕಾಲಿವುಡ್ ಇಂಡಸ್ಟ್ರಿಗೆ ಸೂಪರ್ ಹೀರೋ ಆಗುತ್ತಾರಾ ಎಂಬ ನಾನಾ ಪ್ರಶ್ನೆಗಳಿಗೆ ಉತ್ತರ ಚಿತ್ರ ಬಂದ ನಂತರ ಗೊತ್ತಾದೀತು ಅಲ್ವಾ...?