
ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ ಎನ್ನೋದು ಅನ್ಲಕ್ಕಿಯ ವಿಷ್ಯಾ.
ಯಾಕೋ ಗೊತ್ತಿಲ್ಲ ಮಾರಾಯ್ರೆ. ಈ ಪಾಟಿನೂ ಅದೃಷ್ಟ ಕೈ ಕೊಡುತ್ತೆ ಎನ್ನೋದು ಖುದ್ದು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಗೊಂದಲ ಮೂಡಬಹುದು. ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ ಎನ್ನೋದು ಅನ್ಲಕ್ಕಿಯ ವಿಷ್ಯಾ.
ಅಂದಹಾಗೆ ಈ ಹುಡುಗ ಬೇರೆ ಯಾರು ಅಲ್ಲ. ಬಾಲಿವುಡ್ ನಟ ಕಮ್ ನಿರ್ಮಾಪಕ, ನಿರ್ದೇಶಕ ಎನ್ನುವ ಹಣೆಪಟ್ಟಿಕಟ್ಟಿಕೊಂಡು ಸಿನ್ಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಪಂಕಜ್ ಕಪೂರ್ ಅವರ ಸನ್ ಶಾಹೀದ್ ಕಪೂರ್. ಬಾಲಿವುಡ್ನಲ್ಲಿ ಆರಂಭದ ಇನ್ನಿಂಗ್ಸ್ ಆಡಲು ಬಂದ ಶಾಹೀದ್ಗೆ ಬಹಳ ಬೇಡಿಕೆ ಇತ್ತು. ಮೊದಲ ಚಿತ್ರವೇ ಶಾಹೀದ್ನನ್ನು ಒಬ್ಬ ‘ಲವರ್ಬಾಯ್’ ಆಗಿ ಫೋಕಸ್ ಮಾಡಿಬಿಟ್ಟಿತ್ತು.
ಬಾಲಿವುಡ್ನ ಸೈಜ್ಝೀರೋ ಹುಡುಗಿ ಕರೀನಾಳ ಜತೆ ಸುತ್ತಾಡುವುದಕ್ಕಾಗಿ ತಾನು ಪಕ್ಕಾ ವೆಜ್ ಹುಡುಗ ಅಂತಾ ಹೇಳಿ ಖುದ್ದು ಮನೆಯಲ್ಲಿ ಬಡಿಸಿಟ್ಟ ನಾನ್ವೆಜ್ ಐಟಂಗಳನ್ನು ಪಕ್ಕಕ್ಕೆ ಇಟ್ಟು ಕರೀನಾಳ ಮನೆಯಲ್ಲಿ ವೆಜ್ ಊಟಕ್ಕೆ ಬಿದಿದ್ದ. ಕೊನೆಗೂ ಕರೀನಾ ಶಾಹೀದ್ನನ್ನು ವೆಜ್ ಹುಡುಗನಾಗಿಯೇ ಬಿಟ್ಟುಹೋದಳು. ಇದು ಶಾಹೀದ್ನ ಮೊದಲ ಅನ್ಲಕ್ಕಿ ಸೀಸನ್ ಆರಂಭದ ಗಂಟೆ.
ಆದರೆ ಕರೀನಾಳನ್ನು ಕಳೆದುಕೊಂಡ ಶಾಹೀದ್ ಬಾಲಿವುಡ್ನಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ಕಂಗೋಳಿಸಿದ್ದು ಬಿಟ್ಟರೆ ಉಳಿದ ಚಿತ್ರಗಳು ತೋಪಾಗಿ ಬಿದ್ದು ಹೋಯಿತು. ಕರೀನಾ ವರ್ಸಸ್ ಶಾಹೀದ್ ಬ್ರೇಕ್ ಸೀಸನ್ನಲ್ಲಿ ಬಂದು ಹೋದ ‘ಜಬ್ ವೀ ಮೆಟ್’ ಚಿತ್ರವೊಂದನ್ನು ಬಿಟ್ಟರೆ ಶಾಹೀದ್ ಬಾಲಿವುಡ್ ಕಡಿದುಕಟ್ಟಿ ಹಾಕಿದ ಯಾವುದೇ ಚಿತ್ರಗಳಿಲ್ಲ ಎನ್ನೋದು ಅವರ ಆಪ್ತ ವಲಯದ ಮಾತೇ ಇದೆ.
ಅದೃಷ್ಟ ಇಲ್ಲವೇ ಇಲ್ಲ:
ಶಾಹೀದ್ ಕಪೂರ್ ೨೦೧೨ರಲ್ಲಿ ಟೋಟಲ್ ಫ್ರಿಯಾಗಿದ್ದಾರೆ ಎನ್ನೋದು ಅವರ ಪಿಎ ಹೇಳುವ ಮಾತು. ೨೦೧೧ರಲ್ಲಿ ಶಾಹೀದ್ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿ ‘ಹೌಸ್ಫುಲ್-೨’, ‘ವನ್ಸ್ ಆಫನ್ ಟೈಮ್ ಇನ್ ಮುಂಬಯಿ-೨’, ‘ತೇರಿ ಮೇರಿ ಕಹಾನಿ’ ಈ ಚಿತ್ರಗಳ ಚಿತ್ರೀಕರಣ ಭಾಗಶಃ ಪೂರ್ತಿಯಾಗಿದೆ. ಉಳಿದಂತೆ ಥಿಯೇಟರ್ಗೆ ಬಂದು ಬೀಳುವ ದಿನಗಳು ಬಾಕಿ ಉಳಿದಿದೆ. ಆ ಬಳಿಕ ಶಾಹೀದ್ನ ನಿರುದ್ಯೋಗಿ ಪರ್ವ ಆರಂಭವಾಗುತ್ತದೆ. ಇದು ಅನ್ಲಕ್ಕಿ ಸೀಸನ್ನ ಎರಡನೇ ಗಂಟೆ.
ಈ ವಿಚಾರವನ್ನು ಖುದ್ದು ಶಾಹೀದ್ ಒಪ್ಪಿಕೊಂಡು ಟ್ವಿಟ್ಟರ್ನಲ್ಲಿ ಹೇಳಿಕೊಂಡ ಮಾತು ಇಲ್ಲಿದೆ. ‘ಚಿತ್ರದ ನಿರ್ಮಾಪಕ ಬಂದು ಚಿತ್ರಕ್ಕೆ ನೀನು ಆಯ್ಕೆಯಾಗಿದ್ದಿ ಎಂದು ಪ್ರಕಟಿಸುವ ವರೆಗೂ ನನ್ನ ಕೈಯಲ್ಲಿ ಯಾವುದೇ ಚಿತ್ರಗಳಿರುವುದಿಲ್ಲ. ಅದಕ್ಕಾಗಿ ನನಗೆ ನಿರುದ್ಯೋಗಿ ಎನ್ನುವ ಟೈಟಲ್ ಸರಿಯಾಗಿದೆ. ಆದರೆ ೨೦೧೩ವಂತೂ ನನ್ನ ಕೈಯಲ್ಲಿ ಉಳಿದು ಹೋಗಲಿದೆ ಎನ್ನುವ ಆತ್ಮವಿಶ್ವಾಸ ಮಾತ್ರ ನನ್ನ ಬಳಿಯಲ್ಲಿದೆ’ ಎಂದಿದ್ದಾರೆ.
ಮದುವೆಯಿಂದ ಲಕ್ ಬರುತ್ತೆ:
೨೦೧೨ರಲ್ಲಿ ನನ್ನ ಬಳಿ ಹೇಳಿಕೊಳ್ಳುವಂತಹ ಯಾವುದೇ ಚಿತ್ರಗಳು ಕೈಯಲ್ಲಿ ಇಲ್ಲ. ಇರುವ ಮೂರು ಚಿತ್ರಗಳ ಮೇಲೆ ನನ್ನ ವೃತ್ತಿ ಬದುಕು ನಿಂತಿದೆ. ಅದಕ್ಕಾಗಿ ಈ ವರ್ಷವೇ ಮದುವೆಯಾಗಬೇಕೆಂದುಕೊಂಡಿದ್ದೇನೆ. ಈ ಮೂಲಕವಾದರೂ ಅದೃಷ್ಟ ನನ್ನ ಬಳಿಯಲ್ಲಿ ಇರುತ್ತದೆ ಎನ್ನೋದು ಶಾಹೀದ್ ಕಪೂರ್ನ ನಂಬಿಕೆ.
ಮದುವೆಯ ನಂತರ ಬಾಲಿವುಡ್ನಲ್ಲಿ ನೆಲೆ ನಿಂತವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಬಾಲಿವುಡ್ ನಟ ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಜೇಯ್ ದೇವಗನ್, ಹೃತಿಕ್ ರೋಷನ್ ಬಹಳಷ್ಟು ಜನರು ತಮ್ಮ ಮದುವೆಯ ನಂತರ ಬಾಲಿವುಡ್ನಲ್ಲಿ ಕ್ಲಿಕ್ ಆಗಿದ್ದಾರೆ. ಅವರ ರೂಲ್ಗಳನ್ನೇ ಫಾಲೋ ಮಾಡೋಣ ಅಂತಾ ಯೋಚನೆ ಮಾಡುತ್ತಿದ್ದೇನೆ ಎನ್ನೋದು ಶಾಹೀದ್ ಕಪೂರ್ನ ಓಪನ್ ಮಾತು.
‘ಬರೀ ಮದುವೆಯಿಂದ ಲಕ್ ಬರುತ್ತೆ ಎನ್ನುವ ನನ್ನ ವಾದದಲ್ಲೂ ಬೇರೆ ವಿಚಾರಗಳು ಅಡಗಿದೆ. ಸಿಂಗಲ್ ಇದ್ದಾಗ ನಿಮ್ಮ ಬಗ್ಗೆ ಪ್ರೀತಿ ತೋರಿಸುವ ಕೈಗಳು ಇರೋದಿಲ್ಲ. ನಿಮ್ಮ ಸುಖ ದುಃಖಗಳಲ್ಲಿ ಎಂಟ್ರಿಯಾಗುವ ಬಂಧುಗಳು ಸಿಗೋದಿಲ್ಲ. ಅದಕ್ಕಾಗಿ ಫೈನಲ್ ಮದುವೆಯಲ್ಲಿ ಎಲ್ಲವೂ ಸಿಗುತ್ತದೆ’ ಎನ್ನೋದು ಶಾಹೀದ್ ಕಪೂರ್ರ ವಾದ.
‘ಮದುವೆಯಾಗುತ್ತಿದ್ದೇನೆ ಎಂದಾಗ ಹುಡುಗಿ ಎಲ್ಲಿ ಎಂದು ಕೇಳುವವರು ಜಾಸ್ತಿ. ಈ ಕುರಿತು ಯಾವುದೇ ಯೋಚನೆ ಮಾಡಿಲ್ಲ. ನನಗೆ ಯಾವುದಾದರೂ ಒಳ್ಳೆಯ ಹುಡುಗಿ ಇದ್ದಾರೆ ಹೇಳಿ ಬಿಡಿ. ನಾನು ಮದುವೆಯಾಗಲು ಸಿದ್ಧ’ ಎಂದು ಶಾಹೀದ್ ಹುಡುಗಿಯರಿಗೆ ಆಫರ್ ರೇಟ್ ಕೊಟ್ಟು ಬಿಟ್ಟಿದ್ದಾರೆ. ಮದುವೆಯ ಮೂಲಕವಾದರೂ ಶಾಹೀದ್ ಕಪೂರ್ನ ಲಕ್ ಚೇಂಜ್ ಕಾಣುತ್ತೆ ಎಂದು ನಂಬಿಕೆ ಇಟ್ಟುಕೊಂಡಿರುವುದು ಮಾತ್ರ ಟೋಟಲಿ ಗ್ರೇಟ್ ಕಣ್ರಿ...
(vk lvk puravani published dis aritcle on 7.02.2012)
No comments:
Post a Comment