Tuesday, February 21, 2012

ಕಾಲಿವುಡ್‌ನಲ್ಲಿ ‘ಬಿ ’ಟೌನ್ ಬೇಬ್ಸ್ !


‘ಬಿ’ ಟೌನ್‌ನಲ್ಲಿ ಚಿಂಗಾರಿ ಹೊತ್ತಿಸಿದ ಬೇಬ್ಸ್‌ಗಳು ಇನ್ನೂ ಮುಂದೆ ‘ಬಿ ’ಟೌನ್‌ನ ಪಾವ್ ಬಾಜಿ ಬಿಟ್ಟು ತಿರುನಲ್‌ವೇಲ್ ಹಲ್ವಾ ತಿನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಕುಣಿದು ಕುಪ್ಪಳಿಸಿದ ನಾಯಕಿಯರು ಇನ್ನೂ ಕಾಲಿವುಡ್‌ನಲ್ಲಿ ಮಸಾಲೆ ಹರಿಯುವ ಸಾಧ್ಯತೆಗಳು ದಟ್ಟವಾಗಿದೆ.

ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಈಗ ಮುಂಚಿನಂತೆ ಇಲ್ಲ. ಬಾಲಿವುಡ್‌ನ ನೆತ್ತಿ ಮೇಲೆ ನಿಂತು ಕರಡಿಯಂತೆ ಕುಣಿಯಲು ಎಲ್ಲ ರೀತಿಯಿಂದಲೂ ಕಾಲಿವುಡ್ ಸಜ್ಜಾಗಿದೆ. ಒಂದು ಲೆಕ್ಕಚಾರದ ಪ್ರಕಾರ ಬಾಲಿವುಡ್ ಸಿನ್ಮಾ ನಗರಿಗೆ ಮೀಸೆ ತಿರುವಿಕೊಂಡು ಸವಾಲು ಹಾಕಿಬಿಡುವ ಛಾತಿ ಇರೋದು ಬರೀ ಕಾಲಿವುಡ್‌ಗೆ ಮಾತ್ರ ಎನ್ನುವ ವಿಷ್ಯಾವೇನೂ ಗುಪ್ತವಾಗಿ ಉಳಿದಿಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ತಮಿಳಿನ ಮೋಸ್ಟ್ ಸಕ್ಸಸ್ ರೇಟೆಡ್ ಸಿನ್ಮಾಗಳನ್ನು ತಂದು ಬಾಲಿವುಡ್‌ನಲ್ಲಿ ರಿಮೇಕ್ ಮಾಡುತ್ತಿರುವ ಪರಂಪರೆ ಹುಟ್ಟಿದೆ. ಇದರ ಅರ್ಥ ತಮಿಳಿನ ಚಿತ್ರಗಳು ಎಲ್ಲ ರೀತಿಯಿಂದಲೂ ಬಾಲಿವುಡ್ ಮಂದಿಯನ್ನು ಮೀರಿಸುವಂತಿದೆ ಎಂದಾಯಿತು.
ಈಗ ಮಾತಿನ ಅಂಗಣದೊಳಗೆ ಬನ್ನಿ. ‘ಬಿ’ ಟೌನ್‌ನಲ್ಲಿ ಚಿಂಗಾರಿ ಹೊತ್ತಿಸಿದ ಬೇಬ್ಸ್‌ಗಳು ಇನ್ನೂ ಮುಂದೆ ‘ಬಿ ’ಟೌನ್‌ನ ಪಾವ್ ಬಾಜಿ ಬಿಟ್ಟು ತಿರುನಲ್‌ವೇಲ್ ಹಲ್ವಾ ತಿನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಕುಣಿದು ಕುಪ್ಪಳಿಸಿದ ನಾಯಕಿಯರು ಇನ್ನೂ ಕಾಲಿವುಡ್‌ನಲ್ಲಿ ಮಸಾಲೆ ಹರಿಯುವ ಸಾಧ್ಯತೆಗಳು ದಟ್ಟವಾಗಿದೆ ಎನ್ನುವ ಮಾತು ಕಾಲಿವುಡ್ ಸಿನ್ಮಾ ಗಲ್ಲಿಯ ಮೂಲೆಯಿಂದ ರವಾನೆಯಾಗಿದೆ.
ಬಾಲಿವುಡ್ ನಟಿ ಪಿಂಕಿ ಆಲಿಯಾಸ್ ಪ್ರಿಯಾಂಕಾ ಚೋಪ್ರಾ(ಪಿಸಿ)ಯನ್ನು ಕಾಲಿವುಡ್ ನಿರ್ದೇಶಕ ಎ.ಆರ್. ಮುರುಗದಾಸ್ ತನ್ನ ಮುಂದಿನ ಚಿತ್ರ ‘ತೂಫಾಕಿ’ಗಾಗಿ ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಗಲ್ಲಿಗೆ ಬಂದಿದೆ. ಈ ಚಿತ್ರದಲ್ಲಿ ಇಳಯದಳಪತಿ ವಿಜಯ್ ನಟಿಸುತ್ತಿರುವುದರಿಂದ ಚಿತ್ರದ ಕುರಿತು ನಿರೀಕ್ಷೆಗಳು ಈಗಾಗಲೇ ಕಾಲಿವುಡ್‌ನಲ್ಲಿ ಬೆಳೆದುಬಿಟ್ಟಿದೆ. ಈಗಾಗಲೇ ಮುರುಗದಾಸ್‌ರನ್ನು ಸೆಟ್‌ನಲ್ಲಿ ಪಿಂಕಿ ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ಕೂಡ ಮುಗಿಸಿದ್ದಾರೆ ಎನ್ನುವ ಸುದ್ದಿಗಳು ಗರಿಬಿಚ್ಚಿಕೊಂಡಿದೆ. ಒಂದು ಮೂಲದ ಪ್ರಕಾರ ಮುರುಗದಾಸ್ ಪಿಂಕಿಯನ್ನು ಬಿಟ್ಟು ಕಾಜಲ್ ಅಗರ್‌ವಾಲ್‌ರನ್ನು ಆಯ್ಕೆ ಮಾಡುವ ಸೂಚನೆ ಕೂಡ ಬಂದಿದೆ. ಆದರೆ ಫೈನಲ್ ನಾಯಕಿ ಯಾರು ಎನ್ನುವ ವಿಚಾರಕ್ಕೆ ಉತ್ತರವಂತೂ ಸಿಕ್ಕಿಲ್ಲ.
ಇದರ ಜತೆಯಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್( ಸನಿ)ಕೂಡ ಕಾಲಿವುಡ್‌ನಲ್ಲಿ ಎಂಟ್ರಿಯಾಗುವ ಸೂಚನೆ ಬಂದಿದೆ. ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದ ‘ತೂಫಾಕಿ’ ಚಿತ್ರದ ಸೆಕೆಂಡ್ ಹೀರೋಯಿನ್ ಪಟ್ಟಕ್ಕೆ ಸೋನಮ್‌ಗೆ ಆಫರ್ ನೀಡಲಾಗಿದೆ. ಅದರ ಜತೆಯಲ್ಲಿ ಕಮಲ್ ಹಾಸನ್ ನಟಿಸುವ ‘ವಿಶ್ವರೂಪಂ’, ಖ್ಯಾತ ನಿರ್ದೇಶಕ ಮಣಿರತ್ನಂರ ‘ಕಾದಲ್’, ಕಾಲಿವುಡ್ ನಿರ್ದೇಶಕ ವೆಂಕಟ್ ಪ್ರಭು ಅವರ ನಿರ್ದೇಶನದ ಚಿತ್ರವೊಂದರಲ್ಲಿ ಸೋನಮ್ ನಟಿಸುವುದು ಖಾತರಿಯಾಗಿದೆ. ವಿಶೇಷ ಏನಪ್ಪಾ ಅಂದರೆ ತನಗೆ ತಮಿಳು ಚಿತ್ರದಲ್ಲಿ ಪಾತ್ರಕೊಡಿ ಎಂದು ಎಲ್ಲಿಯೂ ಕೂಡ ಸೋನಮ್ ಕೇಳಿಕೊಂಡಿಲ್ಲ ಎನ್ನುವ ಮಾತನ್ನು ಸ್ವತಃ ಕಾಲಿವುಡ್ ನಿರ್ದೇಶಕರೇ ಹೇಳುತ್ತಿದ್ದಾರೆ.
ಸೋನಿ ಕುಡಿಯ ಬಾಲಿವುಡ್‌ನಲ್ಲಿ ಮಾಡಿದ ಪಾತ್ರಗಳು ಕಾಲಿವುಡ್ ನಿರ್ದೇಶಕರ ಮನಸ್ಸು ಕಚ್ಚಿ ಹಿಡಿದಿದೆ ಎನ್ನುವ ಕಾರಣಕ್ಕೆ ಸೋನಮ್‌ಗೆ ಪಾತ್ರ ನೀಡಲಾಗುತ್ತಿದೆ ಎನ್ನುವುದು ಕಾಲಿವುಡ್ ನಿರ್ದೇಶಕ ಮಾತು. ಆದರೆ ಮಣಿರತ್ನಂ ಚಿತ್ರದಿಂದ ಸೋನಮ್ ಕಪೂರ್ ಬದಲಾಗಿ ದೂಕೂಡು ಫೇಮ್ ಸಮಂತಾ ಹೆಸರು ಕೇಳಿ ಬರುತ್ತಿದೆ. ಆದರೆ ಈ ನಾಯಕಿ ಪಟ್ಟ ಇಬ್ಬರಲ್ಲಿ ಯಾರಿಗೆ ಎನ್ನೋದು ಇನ್ನೂ ಇತ್ಯರ್ಥವಾಗಿಲ್ಲ. ಟೋಟಲಿ ಬಾಲಿವುಡ್‌ನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಬಣ್ಣದ ಚಿಟ್ಟೆಗಳು ಕಾಲಿವುಡ್ ಆಗಸದಲ್ಲಿ ಮನಸೋ ಬಿಚ್ಚಿ ಹಾರಾಡುತ್ತಾ ಎನ್ನುವ ಪ್ರಶ್ನೆ ಮಾತ್ರ ಚಿತ್ರಗಳು ತೆರೆಗೆ ಬಂದ ನಂತರವೇ ತಿಳಿಯಬೇಕು. ನಾಯಕಿಯರಿಗೆ ಬಾಲಿವುಡ್‌ನಲ್ಲಿರುವ ಭಾಷೆ, ನಟನೆಯ ಚಮಕ್ ಕಾಲಿವುಡ್‌ನಲ್ಲಿ ವರ್ಕ್ ಔಟ್ ಆಗುತ್ತಾ ಎನ್ನೋದು ಡಾಲರ್ ಪ್ರಶ್ನೆ.

ಬಾಲಿಯ ‘ಕತ್ರಿ’ಗೆ ದೊಡ್ಡ ಚಿತ್ರ
ಬಾಲಿವುಡ್‌ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ರಜನಿಕಾಂತ್‌ರ ‘ಕೋಚಡಿಯಾನ್’ನಲ್ಲಿ ಹಾಗೂ ಕಮಲ್‌ಹಾಸನ್ ನಟಿಸುತ್ತಿರುವ ‘ವಿಶ್ವರೂಪಂ’ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಕಾಲಿವುಡ್ ಇತಿಹಾಸದಲ್ಲಿಯೇ ಈ ಎರಡು ಚಿತ್ರಗಳು ಈಗಾಗಲೇ ಭಾರೀ ಪ್ರಚಾರವನ್ನು ಪಡೆದುಕೊಂಡಿದೆ. ಜತೆಗೆ ಅತೀ ಹೆಚ್ಚು ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿರುವ ಚಿತ್ರ ಎನ್ನುವ ಹೆಗ್ಗಳಿಕೆ ಕೂಡ ಬಗಲಿಗಿದೆ. ಅದರಲ್ಲೂ ‘ವಿಶ್ವರೂಪಂ’ನ ವಿದ್ಯಾಬಾಲನ್, ಸೋನಮ್ ಹಾಗೂ ಕತ್ರಿನಾರ ಜಾಗಕ್ಕೆ ಪೂಜಾ ಕುಮಾರ್ ಅವರ ಹೆಸರು ಕೇಳಿ ಬರಲು ಆರಂಭವಾಗಿದೆ. ಕಾರಣ ಈ ಮೂರು ನಾಯಕಿಯರಲ್ಲಿ ಡೇಟ್ಸ್ ಕೊರತೆ ಕಾಣಿಸಿಕೊಂಡಿದೆ. ಆದರೂ ಕತ್ರಿನಾ ಈ ಎರಡು ಚಿತ್ರಗಳಿಗೆ ಓಕೆ ಎಂದಿದ್ದಾರೆ ಎನ್ನುವ ಮಾತು ಕೂಡ ಕಾಲಿವುಡ್‌ನಲ್ಲಿ ಓಡುತ್ತಿದೆ.
(vk lvk published dis article on 24.02.2012)

ಕಡಲತಡಿಯಲ್ಲಿ ‘ತಬು’ ಹವಾ !


‘ಡೇವಿಡ್’ ಚಿತ್ರದಲ್ಲಿ ನಾನೊಂದು ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರ ಕಾಮೆಡಿ ಬೇಸ್ಡ್ ಇರುವುದರಿಂದ ಕತೆಗೆ ತಕ್ಕಂತೆ ಸಾಲ್ಸಾ ನೃತ್ಯದ ಅಗತ್ಯ ಇತ್ತು. ಇದಕ್ಕಾಗಿ ನಾನು ಸಾಲ್ಸಾವನ್ನು ಸಿರೀಯಸ್ ಆಗಿ ಸ್ಟಡಿ ಮಾಡುತ್ತಿದ್ದೇನೆ. ಜತೆಗೆ ಡೇವಿಡ್‌ನ ಒಂದು ಹಾಡಿಗೆ ಧ್ವನಿಗೂಡಿಸಿದ್ದೇನೆ. ಟೋಟಲಿ ಒಳ್ಳೆಯ ಎಕ್ಸ್‌ಪಿರೀಯನ್ಸ್ ಎಂದರು ಬಾಲಿವುಡ್ ನಟಿ ತಬು.

ಕಳೆದ ಒಂದು ವರ್ಷದಿಂದ ಮುಂಬಯಿಯ ಮಾರುಕಟ್ಟೆಯಲ್ಲಿ ತಬು ಎನ್ನುವ ನಾಯಕಿಯ ಹೆಸರು ಓಡುತ್ತಿಲ್ಲ. ನಲವತ್ತು ದಾಟಿದರೂ ಇನ್ನೂ ಕೂಡ ಹದಿನೆಂಟರ ಅಸುಪಾಸು ನನ್ನ ವಯಸ್ಸು ಎಂದು ಕಿವಿ ಮೇಲೆ ಹೂ ಇಡುವ ತಬುವಿಗೆ ಬಾಲಿವುಡ್ ಇಂಡಸ್ಟ್ರಿ ಟೋಟಲಿ ಗೇಟ್ ಪಾಸ್ ಕೊಟ್ಟಿದ್ದೆ ಎನ್ನೋದು ಮುಂಬಯಿ ಪಂಡಿತರ ಮಾತು. ಈ ಒಂದು ವಿಚಾರಕ್ಕಾಗಿ ಮುಂಬಯಿಯಲ್ಲಿದ್ದ ತಮ್ಮ ನಿವಾಸವನ್ನು ಹೈದರಾಬಾದ್‌ಗೆ ಶಿಫ್ಟ್ ಮಾಡಿದ್ದಾರೆ ಎನ್ನುವ ಗುಸುಗುಸು ಮಾತು ಹರಡಿದೆ.
೨೦೧೧ರಲ್ಲಿ ತೆರೆಕಂಡ ‘ಊರ್ಮಿ’ ಚಿತ್ರವೊಂದನ್ನು ಬಿಟ್ಟರೆ ತಬು ಫಿಲ್ಮೋಗ್ರಾಫಿ ೨೦೧೧ರಲ್ಲಿ ಟೋಟಲಿ ಝೀರೋ ಎನ್ನುವುದು ಅವರ ಕೆರಿಯರ್ ಪಾಯಿಂಟ್ ಆಫ್ ವೀವ್‌ನಿಂದ ತಿಳಿದುಬರುತ್ತಿದೆ. ಹೈದರಾಬಾದ್‌ನಲ್ಲಿ ನೆಲೆನಿಂತ ತಬುವನ್ನು ಟಾಲಿವುಡ್ ಸಿನ್ಮಾ ಇಂಡಸ್ಟ್ರಿ ಸಿರೀಯಸ್ ಆಗಿ ತೆಗೆದುಕೊಂಡಿಲ್ಲ . ಅದಕ್ಕಾಗಿ ಪಕ್ಕದ ರಾಜ್ಯದಿಂದ ತಬುವಿಗೆ ಆಫರ್‌ವೊಂದು ಬಂದು ಮುಟ್ಟಿದೆ. ನಿರ್ದೇಶಕ ಬಿಜೋಯಿ ನಂಬಿಯಾರ್ ಅವರ ನಿರ್ದೇಶನದ ತಮಿಳು ಕಮ್ ತೆಲುಗು ಚಿತ್ರ ‘ಡೇವಿಡ್’ನ ಚಿತ್ರೀಕರಣ ಕಡಲತಡಿಯಲ್ಲಿ ಆರಂಭವಾಗಿದೆ.
ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಂ ಡೇವಿಡ್ ಎನ್ನುವ ಡಾನ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಡಾನ್‌ಗೆ ನಾಯಕಿಯಾಗಿ ತಬು ಕಾಣಿಸಿಕೊಳ್ಳುತ್ತಿದ್ದಾರೆ. ಕಡಲತಡಿಯಲ್ಲಿ ಚಿತ್ರೀಕರಣದ ವಿರಾಮದ ವೇಳೆ ಆರಾಮವಾಗಿ ಮಾತಿಗೆ ಕೂತ ತಬು ಚಿತ್ರಕ್ಕಾಗಿ ಏನೇನೂ ಮಾಡುತ್ತಿದ್ದಾರೆ ಎನ್ನುವ ಸಿಕ್ರೇಟ್ಸ್‌ಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದರು. ಚೀನಿ ಕಮ್(೨೦೦೭)ಸಿನ್ಮಾದ ನಂತರ ಬಾಲಿವುಡ್‌ನಲ್ಲಿ ನಿರೀಕ್ಷಿತ ಪಾತ್ರ ಹಾಗೂ ಚಿತ್ರಗಳು ಸಿಕ್ಕಿಲ್ಲ. ಆದರೂ ಕೆಲವೊಂದು ಚಿತ್ರಗಳಲ್ಲಿ ನನಗೆ ಖುಷಿ ಕೊಡುವ ಪಾತ್ರಗಳು ಇವೆ ಎಂದುಕೊಂಡು ನಟಿಸಿದೆ. ಆದರೆ ಇಂತಹ ಚಿತ್ರಗಳಿಂದ ನನ್ನ ಮಾರುಕಟ್ಟೆ ಏಕ್‌ದಂ ಆಗಿ ಕುಸಿಯಿತು. ಅದಕ್ಕಾಗಿ ಮುಂಬಯಿ ಬಿಟ್ಟು ಹೈದರಾಬಾದ್ ಗಾಡಿ ಹಿಡಿದೆ ಎಂದು ಹೇಳಿ ತಬು ನಸು ನಕ್ಕರು.
ಬಾಲಿವುಡ್ ಸಹವಾಸ ಬೇಡ ಎಂದುಕೊಂಡು ಸೌತ್ ಸಿನ್ಮಾ ಕಡೆಗೆ ಮುಖ ಮಾಡೋಣ ಅಂದುಕೊಳ್ಳುತ್ತಿದ್ದೆ.. ಇದೇ ಸಮಯಕ್ಕೆ ಗೆಳೆಯ ಬಿಜೋಯಿ ‘ಡೇವಿಡ್’ ಚಿತ್ರಕ್ಕೆ ಆಫರ್ ಕೊಟ್ಟ . ನಾನು ಓಕೆ ಅಂದೆ. ಬಹಳ ದಿನಗಳ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾದು ಕೂತಿದ್ದೆ. ಜತೆಗೆ ಒಳ್ಳೆಯ ಕೋ- ಆಕ್ಟರ್. ಚಿತ್ರದ ಕತೆ ಕೂಡ ಎಲ್ಲಕ್ಕಿಂತ ಭಿನ್ನವಾಗಿದೆ ಎನ್ನೋದು ನನ್ನ ಅಭಿಪ್ರಾಯ ಎನ್ನೋದು ತಬು ಎನ್ನುವ ಸುಂದರಿಯ ಮಾತು. ‘ಡೇವಿಡ್’ ಚಿತ್ರದಲ್ಲಿ ನಾನೊಂದು ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರ ಕಾಮೆಡಿ ಬೇಸ್ಡ್ ಇರುವುದರಿಂದ ಕತೆಗೆ ತಕ್ಕಂತೆ ಸಾಲ್ಸಾ ನೃತ್ಯದ ಅಗತ್ಯ ಇತ್ತು. ಇದಕ್ಕಾಗಿ ನಾನು ಸಾಲ್ಸಾವನ್ನು ಸಿರೀಯಸ್ ಆಗಿ ಸ್ಟಡಿ ಮಾಡುತ್ತಿದ್ದೇನೆ. ಜತೆಗೆ ಡೇವಿಡ್‌ನ ಒಂದು ಹಾಡಿಗೆ ಧ್ವನಿಗೂಡಿಸಿದ್ದೇನೆ. ಟೋಟಲಿ ಒಳ್ಳೆಯ ಎಕ್ಸ್‌ಪಿರೀಯನ್ಸ್ ಎಂದರು ತಬು.
ಕಡಲತಡಿಯ ಕುರಿತು ಮಾತನಾಡಿ ಎಂದಾಗ ತಬು ಹೇಳಿದಿಷ್ಟು: ಕರಾವಳಿಗೆ ಬಹಳಷ್ಟು ಸಲ ಬಂದಿದ್ದೇನೆ. ಸಂಗೀತ ನಿರ್ದೇಶಕ ಸಂದೀಪ್ ಚೌಟರ ಒಂದು ಪ್ರಾಜೆಕ್ಟ್‌ಗಾಗಿ ಇಲ್ಲಿಯೇ ತುಂಬಾ ದಿನಗಳವರೆಗೆ ತಂಗಿದ್ದೇನೆ. ಅದು ಬಹಳ ವರ್ಷಗಳ ಹಿಂದೆ. ಈಗ ಕರಾವಳಿ ತುಂಬಾ ಬದಲಾಗಿದೆ. ಹಸಿರು, ಕಾಡು- ನೀರು ಎಲ್ಲವನ್ನು ತುಂಬಾ ಹತ್ತಿರದಿಂದ ನೋಡಬೇಕಾದರೆ ಇಲ್ಲಿಗೆ ಒಂದ್ ಸಲವಾದರೂ ಬರಬೇಕು ಎನ್ನೋದು ನನ್ನ ಸಲಹೆ ಎಂದು ಹೇಳಿ ಮೇಕಪ್‌ಮ್ಯಾನ್ ಕಡೆ ಮುಖ ತಿರುಗಿಸಿಕೊಂಡು ಬಣ್ಣ ಹಚ್ಚಲು ರೆಡಿಯಾದರು ತಬು. ಬಿಜೋಯಿ ಮತ್ತೊಂದು ದೃಶ್ಯದ ಕುರಿತು ತಬುವಿಗೆ ವಿವರಣೆ ನೀಡುತ್ತಿದ್ದರು. ತಬುವನ್ನು ಕಣ್ಣಾರೆ ನೋಡಲು ಬಂದ ಜನ ಅಟೋಗ್ರಾಫ್‌ಗಾಗಿ ಮೂಗಿ ಬೀಳುತ್ತಿದ್ದರು. ತಬು ಮತ್ತೆ ಬಣ್ಣದ ಲೋಕದ ಕಡೆ ಗಮನ ಕೊಡಲು ಆರಂಭ ಮಾಡಿದ್ದಾರೆ ಎನ್ನುವ ಸೂಚನೆ ಈ ಮೂಲಕ ಹೊರಬಂತು.

ಕರಾವಳಿಯ ಫುಡ್ ಟೋಟಲಿ ಭಿನ್ನ !
ತಬುವಿಗೆ ನಾನ್‌ವೆಜ್ ಐಟಂಗಳೆಂದರೆ ಪಂಚಪ್ರಾಣ. ಹೈದರಾಬಾದ್‌ನಲ್ಲಿ ಸಿಗುತ್ತಿದ್ದ ‘ಹೈದರಾಬಾದ್ ಬಿರಿಯಾನಿ’ ತಬು ಅವರ ಮೆನು ಕಾರ್ಡ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕರಾವಳಿಗೆ ಬಂದರೆ ಹೆಚ್ಚಾಗಿ ತಿನ್ನುವ ಐಟಂಗಳೆಂದರೆ ಸೀ ಫುಡ್, ಕೋರಿ ರೊಟ್ಟಿ, ಕೋರಿ ಪುಲಿ ಮುಂಚಿಯಂತೆ ! ಈ ಮೊದಲು ಕರಾವಳಿಗೆ ಬಂದಾಗ ಸಂದೀಪ್ ಚೌಟ ಈ ಐಟಂಗಳನ್ನು ಟೇಸ್ಟ್ ಮಾಡಲು ಸಲಹೆ ನೀಡಿದ್ದರು. ಈ ಐಟಂಗಳನ್ನು ತಯಾರಿಸುವ ವಿಧಾನಗಳನ್ನು ತುಳುನಾಡಿನಿಂದ ಕಲಿತುಕೊಂಡು ಮುಂಬಯಿಯಲ್ಲೂ ಒಂದೆರಡು ಬಾರಿ ಟ್ರೈ ಮಾಡಿಕೊಂಡಿದ್ದರಂತೆ. ಆದರೆ ಕರಾವಳಿಯ ಟೇಸ್ಟ್‌ನಂತೆ ಫುಡ್ ತಯಾರಿಸಲು ಆಗಿಲ್ಲ ಎಂದು ಮುಗುಳುನಗುತ್ತಾರೆ ತಬು.

ಡ್ರೀಮ್ ರೋಲ್ ಸಿಕ್ಕಿಲ್ಲ !

ತಬು ಚಿತ್ರದ ಚಿತ್ರೀಕರಣ ಇಲ್ಲದ ಸಮಯದಲ್ಲಿ ಆಂಗ್ಲ ಭಾಷೆಯ ಕಾದಂಬರಿಗಳನ್ನು ಜಾಸ್ತಿಯಾಗಿ ಓದುತ್ತಾರೆ. ಕೆಲವೊಂದು ನೈಟ್ ಪಾರ್ಟಿ ಹಾಗೂ ಕಾರ್ಪೊರೇಟ್ ವಲಯದ ಪಾರ್ಟಿಗಳಲ್ಲಿ ಭಾಗವಹಿಸುವುದು ತಬುನ ಖಯಾಲಿಗಳಲ್ಲಿ ಒಂದಾಗಿದೆ. ಚಿತ್ರರಂಗದಲ್ಲಿ ಎಲ್ಲ ಪಾತ್ರಗಳನ್ನು ಮಾಡಿಕೊಂಡು ಬಂದಿರುವ ತಬುವಿಗೆ ಭಿನ್ನ ಪಾತ್ರಗಳ ಮೇಲೆಯೇ ಆಸಕ್ತಿ ಜಾಸ್ತಿ. ತನ್ನ ಡ್ರೀಮ್ ರೋಲ್ ಇನ್ನೂ ಕೂಡ ಸಿಕ್ಕಿಲ್ಲ ಎನ್ನುವ ಕೊರಗು ಕಾಡುತ್ತಿದೆ. ಅದಕ್ಕಾಗಿ ಸಿನ್ಮಾಗಳ ಆಯ್ಕೆಯ ವಿಚಾರದಲ್ಲಿಯೂ ಬಹಳ ಚ್ಯುಸಿಯಾಗುತ್ತೇನೆ ಎಂದು ಬೋಲ್ಡ್ ಆಗಿ ತಬು ಹೇಳಿ ಬಿಡುತ್ತಾರೆ.
(vk lvk published dis article on 20.02.2012)

ಬರ್ಮಾದ ರಾಣಿಜೇನು ಹೆಲೆನ್



ಬರ್ಮಾದಿಂದ ರಫ್ತಾದ ಬಿಳಿ ತೊಗಲಿನ ಹುಡುಗಿ ಹೆಲೆನ್ ಇಲ್ಲ ಎಂದಾದರೆ ಅಂದಿನ ಕಾಲದಲ್ಲಿ ಬಾಲಿವುಡ್ ಸಿನ್ಮಾಗಳೇ ಮಂಕಾಗಿ ಕಾಣುತ್ತಿತ್ತು. ಹೆಲೆನ್‌ರ ಐಟಂ ಸಾಂಗ್ ನೋಡಲು ಥಿಯೇಟರ್‌ಗೆ ಬರುತ್ತಿದ್ದ ಪ್ರೇಕ್ಷಕ ವರ್ಗ ಅವಳ ಡ್ಯಾನ್ಸ್ ಮುಗಿಯುತ್ತಿದ್ದಂತೆ ಅಲ್ಲಿಂದ ಹೊರ ಬೀಳುತ್ತಿದ್ದ ದೃಶ್ಯಗಳೇ ಜಾಸ್ತಿಯಾಗಿರುತ್ತಿತ್ತು. ಇಂತಹ ಹೆಲೆನ್ ಈಗ ವಾಪಾಸು ಬಾಲಿವುಡ್‌ಗೆ ಬರುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ.


ಹೆಲೆನ್ ಎನ್ನುವ ಹೆಸರು ನಾಲಗೆ ಮೇಲೆ ಬಂದು ಬಿಟ್ಟರೆ ಸಾಕು. ಸೀನಿಯರ್ ಸಿಟಿಜನ್ ಬೆಂಚಿನಲ್ಲಿ ಕುಳಿತುಕೊಂಡು ಹಿರಿ ಜೀವಗಳು ನಾಲಗೆ ಹೊರಚಾಚಲು ಆರಂಭ ಮಾಡುತ್ತಾರೆ. ನಶೆಯ ಅದೇವತೆ ಹೆಲೆನ್ ಮೇಡಂರ ಐಟಂ ಸಾಂಗ್ ಎಂದರೆ ನೀರು ಸೇರಿಸದೇ ಬರೀ ವೋಡ್ಕಾ ತೆಗೆದುಕೊಂಡು ಕಕ್ಕಾಬಿಕ್ಕಿಯಾಗುವ ಸ್ಥಿತಿ ಇಂದಿಗೂ ಇದೆ.
ಬರ್ಮಾದಿಂದ ರಫ್ತಾದ ಬಿಳಿ ತೊಗಲಿನ ಹುಡುಗಿ ಹೆಲೆನ್ ಇಲ್ಲ ಎಂದಾದರೆ ಅಂದಿನ ಕಾಲದಲ್ಲಿ ಬಾಲಿವುಡ್ ಸಿನ್ಮಾಗಳೇ ಮಂಕಾಗಿ ಕಾಣುತ್ತಿತ್ತು. ಹೆಲೆನ್‌ರ ಐಟಂ ಸಾಂಗ್ ನೋಡಲು ಥಿಯೇಟರ್‌ಗೆ ಬರುತ್ತಿದ್ದ ಪ್ರೇಕ್ಷಕ ವರ್ಗ ಅವಳ ಡ್ಯಾನ್ಸ್ ಮುಗಿಯುತ್ತಿದ್ದಂತೆ ಅಲ್ಲಿಂದ ಹೊರ ಬೀಳುತ್ತಿದ್ದ ದೃಶ್ಯಗಳೇ ಜಾಸ್ತಿಯಾಗಿರುತ್ತಿತ್ತು. ಇಂತಹ ಹೆಲೆನ್ ಈಗ ವಾಪಾಸು ಬಾಲಿವುಡ್‌ಗೆ ಬರುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ.
ಪಿಯಾ ತೂ ಅಬ್ ತೋ ಅಜಾ.... ಎಂದು ಸಿಕ್ಕಾಪಟ್ಟೆ ಕುಣಿದು ಪ್ರೇಕ್ಷಕ ವರ್ಗದಲ್ಲಿ ಮಿಂಚು ಹರಿಸಿದ ಹೆಲೆನ್ ಈಗ ಏಜ್ ಬಾರ್ ಗಡಿರೇಖೆ ದಾಟಿದರೂ ಕೂಡ ನಟ ಮಾಧವನ್ ಹಾಗೂ ಬಿಪಾಷ ಬಸು ನಟಿಸುವ ನಿರ್ದೇಶಕ ಅಶ್ವಿನ್ ಚೌಧುರಿ ಅವರ ‘ಜೋಡಿ ಬ್ರೇಕರ್’ ಚಿತ್ರದಲ್ಲಿ ಬಣ್ಣ ಬಳಿದು ಕುಣಿದಿದ್ದಾರೆ ಎನ್ನುವ ಮಾತು ಚಿತ್ರತಂಡದಿಂದ ಹೊರಬಂದಿದೆ. ಚಿತ್ರದಲ್ಲಿ ಮಿಲಾನ್ ಸೋಮನ್ ಅವರ ಅಜ್ಜಿ ಪಾತ್ರದಲ್ಲಿ ಹೆಲೆನ್ ಬಂದು ಹೋಗುವ ಸನ್ನಿವೇಶವನ್ನು ನಿರ್ದೇಶಕ ಅಶ್ವಿನ್ ಸೃಷ್ಟಿಸಿದ್ದಾರೆ.
ಅಜ್ಜಿ ಬರೀ ಮೊಮ್ಮಗನ ಕಷ್ಟ ಸುಖದಲ್ಲಿ ಭಾಗಿಯಾಗುವ ಜತೆಯಲ್ಲಿ ಮೊಮ್ಮಗನ ಜತೆ ಸ್ಟೆಪ್ಸ್ ಹಾಕುವ ಕೆಲಸವನ್ನು ಕೂಡ ಮಾಡುತ್ತಾರೆ ಎನ್ನುವ ಸತ್ಯಾಂಶವನ್ನು ಹೆಲೆನ್ ಚಿತ್ರದಲ್ಲಿ ಬಿಚ್ಚಿಟ್ಟಿದ್ದಾರೆ ಎನ್ನುವುದು ನಿರ್ದೇಶಕ ಅಶ್ವಿನ್ ಅವರ ಮಾತು. ‘ಮೊಹಬ್ಬತೇ’ ಚಿತ್ರದ ನಂತರ ಹೆಲೆನ್ ಬಾಲಿವುಡ್ ಸಿನ್ಮಾ ನಗರಿ ಬಿಟ್ಟು ಹೋಗಿದ್ದರು. ಆದರೆ ಈ ಬಾರಿ ಅಶ್ವಿನ್‌ರ ಒತ್ತಾಯದ ಮೇರೆಗೆ ನಟಿಸಬೇಕಾಗಿ ಬಂತು ಎಂದು ಹೆಲೆನ್ ಹೇಳಿಕೊಳ್ಳುತ್ತಾರೆ.
ಅಂದಹಾಗೆ ಈ ಚಿತ್ರದಲ್ಲಿ ಹೆಲೆನ್ ಡ್ಯಾನ್ಸ್ ಟೀಚರ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೆಲೆನ್ ಹೇಳುವಂತೆ ‘ ಈಗಂತೂ ಡ್ಯಾನ್ಸ್‌ಬಿಟ್ಟು ಬಹಳ ವರ್ಷಗಳೇ ಆಯಿತು. ‘ಮೊಹಬ್ಬತೇ’ ಸಿನ್ಮಾದಲ್ಲಿ ಕುಣಿದದ್ದು ಬಿಟ್ಟರೆ ಮತ್ತೆ ಕುಣಿಯುವ ಕೆಲಸಕ್ಕೆ ಇಳಿದಿರಲಿಲ್ಲ. ಆದರೆ ಚಿತ್ರದಲ್ಲಿ ಮಾಧುವನ್, ಬಿಪಾಷ, ಮಿಲನ್ ಎಲ್ಲರೂ ಸೇರಿ ನನಗೆ ಕುಣಿಯಲು ಕಳಿಸಿದರು. ಈ ಮೂಲಕ ಮತ್ತೆ ನಾನು ಕುಣಿಯಲು ರೆಡಿಯಾದೆ ಎಂದು ಹೇಳಿಕೊಂಡಿದ್ದಾರೆ.
ಯೋಗವನ್ನು ಸಿರೀಯಸ್ ಆಗಿ ಮಾಡುತ್ತಿರುವುದರಿಂದ ಏಜ್ ಬಾರ್‌ನಲ್ಲೂ ಯಂಗ್‌ಜೋಶ್ ಬಂದು ಬಿಡುತ್ತದೆ ಎನ್ನೋದು ಹೆಲೆನ್‌ರ ಮಾತು. ಕೆಲವೊಮ್ಮೆ ಟೈಂ ಸಿಕ್ಕಾಗ ದೂರಕ್ಕೆ ವಾಕ್ ಹೋಗುವುದು. ದೂರ ದೂರದ ಗೆಳೆಯರ ಜತೆಯಲ್ಲಿ ಮಾತಿಗೆ ಇಳಿಯುವುದು. ಆಂಗ್ಲ ಭಾಷೆಯ ಪುಸ್ತಕಗಳನ್ನು ಓದುವುದು ಹೆಲೆನ್‌ನ ಫ್ರಿ ಟೈಂ ಖಯಾಲಿಗಳು.


ಬೆಂಕಿಯಲ್ಲಿ ಬೆಂದ ಹುಡುಗಿ
ಹೆಲೆನ್ ಮೂಲತಃ ಬರ್ಮಾ ದೇಶದವರು. ತಂದೆ ಆಂಗ್ಲೋ- ಇಂಡಿಯನ್ ತಾಯಿ ಬರ್ಮಾ ಮೂಲದವರು. ಎರಡನೇ ಮಹಾಯುದ್ಧದ ಸಮಯದಲ್ಲಿ ತಂದೆ ತೀರಿಕೊಂಡಿದ್ದರು. ನಂತರ ಹೆಲೆನ್‌ರ ಕುಟುಂಬ ಮುಂಬಯಿ ಕಡೆ ಪ್ರಯಾಣ ಬೆಳೆಸಿತು. ತಾಯಿ ಮುಂಬಯಿಯಲ್ಲಿ ದಾದಿಯಾಗಿ ಕೆಲಸದಲ್ಲಿದ್ದರು. ತಾಯಿಯ ಸಂಬಳ ಮನೆಯ ಖರ್ಚಿಗೆ ಸಾಲುತ್ತಿರಲಿಲ್ಲ. ಶಾಲೆಯಲ್ಲಿ ಬಹಳ ಚೂಟಿಯಾಗಿದ್ದ ಹೆಲೆನ್ ಪುಟ್ಟ ಹರೆಯದಲ್ಲಿ ಶಾಲೆ ಬಿಟ್ಟು ಕುಟುಂಬ ನಿರ್ವಹಣೆಗೆ ನಿಂತುಬಿಟ್ಟರು. ಸಿಕ್ಕ ಸಿಕ್ಕಲ್ಲಿ ಕೆಲಸ ಮಾಡುತ್ತಾ ಸಂಜೆ ಹೊತ್ತು ನೃತ್ಯ ಶಾಲೆಯಲ್ಲಿ ಕುಣಿಯುತ್ತಿದ್ದ ಹೆಲೆನ್ ನಂತರ ಐಟಂ ಹುಡುಗಿಯರ ಜಾಗದಲ್ಲಿ ಬಂದು ನಿಂತರು.

ಹೆಲೆನ್ ಸಲ್ಲುಮಿಯರ ಮಲತಾಯಿ !
ಬಾಲಿವುಡ್ ನಿರ್ದೇಶಕ ಪಿಎನ್ ಅರೋರಾ ಅವರ ಹೆಲೆನ್ ಮೊದಲು ಜತೆಯಾಗಿ ಬದುಕು ಕಟ್ಟುತ್ತಿದ್ದರು. ಆದರೆ ನಂತರ ನಟ ಸಲ್ಮಾನ್ ಖಾನ್ ಅವರ ತಂದೆ ಖ್ಯಾತ ಸಿನಿಮಾ ಬರಹಗಾರ ಸಲೀಮ್ ಖಾನ್ ಜತೆ ಹೆಲೆನ್ ವಿವಾಹ ಬಂಧನದಲ್ಲಿ ಜತೆಗೂಡಿದರು. ಸಲೀಮ್‌ರಿಗೆ ಇದು ಎರಡನೇ ವಿವಾಹವಾಗಿತ್ತು. ಸಲೀಮ್ ಖಾನ್ ಹಾಗೂ ಹೆಲೆನ್ ದಂಪತಿ ಅರ್ಪಿತಾ ಎನ್ನುವ ಹುಡುಗಿಯನ್ನು ದತ್ತು ತೆಗೆದುಕೊಂಡರು. ಸಲೀಮ್ ಖಾನ್‌ರ ಒತ್ತಾಯದ ಮೇರೆಗೆ ವಿವಾಹವಾದ ನಂತರನೂ ಹೆಲೆನ್ ಬಣ್ಣದ ಲೋಕದಲ್ಲಿ ಮಿಂಚಿದ್ದರು. ಇದರ ಜತೆಗೆ ಸಲ್ಮಾನ್ ಖಾನ್‌ರ ಐದಾರು ಚಿತ್ರಗಳಲ್ಲಿ ಮಲತಾಯಿ ಹೆಲೆನ್ ನಟಿಸಿದ್ದಾರೆ.
(vk lvk puravani published dis article on 24.02.2012)

ಕೋಸ್ಟಲ್‌ವುಡ್‌ನಲ್ಲಿ ‘ಅಸಲಿ’ ಕ್ರಾಂತಿ

ಒಂದು ಕಾಲದಲ್ಲಿ ‘ತುಳು ಸಿನಿಮಾ ನಾ...’ಎಂದುಕೊಂಡು ಮೂಗು ಮುರಿಯುವವರ ಸಂಖ್ಯೆನೇ ಜಾಸ್ತಿ ಇತ್ತು. ಬರೀ ಅವಾರ್ಡ್, ಸಬ್ಸಿಡಿ, ಹೆಸರಿಗಾಗಿ ಲಕ್ಷಾಂತರ ರೂ. ಹಣ ಸುರಿದು ಚಿತ್ರ ಮಾಡಿಕೊಳ್ಳುತ್ತಿದ್ದ ನಿರ್ದೇಶಕ, ನಿರ್ಮಾಪಕರು ಈಗ ಕಮರ್ಷಿಯಲ್ ದೃಷ್ಟಿಯಿಂದಲೂ ತುಳು ಚಿತ್ರಗಳನ್ನು ನಿರ್ಮಾಣ, ನಿರ್ದೇಶನ ಮಾಡುವಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಟೋಟಲಿ ಕೋಸ್ಟಲ್‌ವುಡ್‌ನಲ್ಲಿ ಸಂಭ್ರಮದ ಲಹರಿಯೊಂದು ಮೂಡುತ್ತಿದೆ.

ಅಬ್ಬಾ ..ನಲವತ್ತು. ಇದು ವ್ಯಕ್ತಿಯೊಬ್ಬನ ಬರೋಬರಿ ಅರ್ಧ ಆಯಸ್ಸು. ಇಂತಹ ಅರ್ಧ ಆಯಸ್ಸಿಗೆ ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿ ಬಂದು ಕೂತು ಬಿಟ್ಟಿದೆ. ಪುಟ್ಟ ಮಗುವಿನಂತೆ ಓಡಾಡಿಕೊಂಡು ಕಣ್ಣು ಮಿಟಿಕಿಸುತ್ತಿದ್ದ ಕರಾವಳಿಯ ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿ ಈಗ ಓಟಕ್ಕೆ ನಿಂತು ಬಿಟ್ಟಿದೆ. ವರ್ಷಕ್ಕೆ ಅರ್ಧನೋ ಒಂದೋ ಚಿತ್ರ ಬರುತ್ತಿದ್ದ ಕೋಸ್ಟಲ್‌ವುಡ್‌ನಲ್ಲಿ ಈಗ ವರ್ಷಕ್ಕೆ ಒಂದೆರಡು ಸಿನ್ಮಾ ಮಾಡುವ ತಾಕತ್ತು ಬಂದು ಬಿಟ್ಟಿದೆ. ಹೊಸ ವರ್ಷದಲ್ಲಂತೂ ಬರೋಬರಿ ೮ ಚಿತ್ರಗಳ ಟೈಟಲ್‌ಗಳು ನೋಂದಣಿಯಾಗಿದೆ ಎನ್ನುವ ಸುದ್ದಿನೂ ಕೋಸ್ಟಲ್‌ವುಡ್‌ನಿಂದ ಬಂದು ತಲುಪಿದೆ.
ಒಂದು ಕಾಲದಲ್ಲಿ ‘ತುಳು ಸಿನಿಮಾ ನಾ...’ಎಂದುಕೊಂಡು ಮೂಗು ಮುರಿಯುವವರ ಸಂಖ್ಯೆನೇ ಜಾಸ್ತಿ ಇತ್ತು. ಬರೀ ಅವಾರ್ಡ್, ಸಬ್ಸಿಡಿ, ಹೆಸರಿಗಾಗಿ ಲಕ್ಷಾಂತರ ರೂ. ಹಣ ಸುರಿದು ಚಿತ್ರ ಮಾಡಿಕೊಳ್ಳುತ್ತಿದ್ದ ನಿರ್ದೇಶಕ, ನಿರ್ಮಾಪಕರು ಈಗ ಕಮರ್ಷಿಯಲ್ ದೃಷ್ಟಿಯಿಂದಲೂ ತುಳು ಚಿತ್ರಗಳನ್ನು ನಿರ್ಮಾಣ, ನಿರ್ದೇಶನ ಮಾಡುವಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ತಮಿಳು, ಹಿಂದಿ, ತೆಲುಗು, ಕನ್ನಡ, ಇಂಗ್ಲಿಷ್ ಚಿತ್ರಗಳ ನಡುವೆ ಇತ್ತೀಚೆಗೆ ತುಳು ಚಿತ್ರಗಳನ್ನು ನೋಡುವವರ ಸಂಖ್ಯೆನೂ ಬೆಳೆದುಕೊಂಡು ಬರುತ್ತಿದೆ. ಈ ಮೂಲಕ ಕೋಸ್ಟಲ್‌ವುಡ್ ಸಿನ್ಮಾಗಳ ಮಾರುಕಟ್ಟೆ ನಿಧಾನವಾಗಿ ಗರಿಕೆದರಿಕೊಳ್ಳುತ್ತಿದೆ.
ಅದರಲ್ಲೂ ಈ ವರ್ಷ ಕೋಸ್ಟಲ್‌ವುಡ್ ಸಿನ್ಮಾ ನಗರಿಯಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಓಡುತ್ತಿರುವ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ನಿರ್ಮಾಣದ ‘ಒರಿಯರ್ದೊರಿ ಅಸಲ್’ ಚಿತ್ರದ ನಂತರ ಕೋಸ್ಟಲ್‌ವುಡ್‌ನಲ್ಲಿ ತುಳು ಚಿತ್ರ ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚುತ್ತಾ ಬಂದಿದೆ. ‘ಅಸಲ್’ ಸಿನಿಮಾ ಈಗಾಗಲೇ ೨೦೦ ದಿನಗಳನ್ನು ಪೂರೈಸುವತ್ತಾ ಕಾಲು ನೆಟ್ಟಿದೆ. ಇಡೀ ವರ್ಷ ಕರಾವಳಿ ತುಂಬಾ ‘ಅಸಲ್’ ಓಡುವ ಎಲ್ಲ ಸಾಧ್ಯತಗಳು ಕಾಣಲಾರಂಭಿಸಿದೆ.
ಸುಮಾರು ೪೦ ವರ್ಷಗಳ ತುಳು ಚಿತ್ರರಂಗದ ಇತಿಹಾಸದಲ್ಲಿ ಎರಡು ಸಿನಿಮಾ ಮಂದಿರಗಳಲ್ಲಿ ಶತ ದಿನಗಳನ್ನು ಪೂರೈಸಿರುವ ಅಸಲ್. ಕರಾವಳಿ ಮಾತ್ರವಲ್ಲದೇ ತೀರ್ಥಹಳ್ಳಿ, ಕೊಪ್ಪ, ಬೆಂಗಳೂರು ಮುಂತಾದೆಡೆಗಳಲ್ಲೂ ಪ್ರದರ್ಶನ ಕಾಣುತ್ತಿದೆ. ಮುಂಬಯಿಯಲ್ಲಿ ಎಟ್ ಎ ಟೈಮ್ ೮ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಓಡುತ್ತಿದೆ. ದೇಶದ ಗಡಿ ದಾಟಿ ಕೊಲ್ಲಿಯಲ್ಲೂ ಪ್ರದರ್ಶನ ಮಾಡಿಸುವ ಕೆಲಸ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್‌ರಿಂದ ನಡೆಯುತ್ತಿದೆ. ಕೋಸ್ಟಲ್‌ವುಡ್‌ನ ಹಿಂದಿನ ಸಿನ್ಮಾಗಳ ರೆಕಾರ್ಡ್‌ಗಳನ್ನು ಮುರಿದಿರುವ ‘ಒರಿಯರ್ದೊರಿ ಅಸಲ್’ನ ಭರ್ಜರಿ ಯಶಸ್ಸಿನ ಕಾರಣದಿಂದಾಗಿ ಇನ್ನಷ್ಟು ತುಳು ಸಿನಿಮಾಗಳು ಕೋಸ್ಟಲ್‌ವುಡ್ ಸಿನ್ಮಾ ನಗರಿಗೆ ಎಂಟ್ರಿಯಾಗುವ ಸಾಧ್ಯತೆಗಳು ಕಾಣಲಾರಂಭಿಸಿದೆ.
ತುಳು ನಾಟಕಗಳ ಗೈರತ್ತು:
ಕಲಾಸಂಗಮದ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರು ತನ್ನ ಹಿಂದಿನ ಸೂಪರ್‌ಹಿಟ್ ನಾಟಕವೊಂದನ್ನೇ ಸಿನಿಮಾ ಮಾಡಿ ಭರ್ಜರಿ ಪ್ರಚಾರ, ಪ್ರತಿಷ್ಠೆ ಮತ್ತು ಹಣ ಗಳಿಸಿರುವುದು ಇನ್ನಷ್ಟು ನಾಟಕಗಳಿಗೆ ಸಿನಿಮಾ ಆಗುವ ಯೋಗ ಒಂದಿದೆ. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ತನ್ನ ‘ಮದಿಮೆ’(ಮದುವೆ) ನಾಟಕವನ್ನು ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದಾರೆ.
ಮತ್ತೊಂದೆಡೆ ತೆಲಿಕೆದ ಬೊಳ್ಳಿ ಬಿರುದಾಂಕಿತ ದೇವದಾಸ್ ಕಾಪಿಕಾಡ್ ಅವರು ಕೂಡ ತನ್ನ ೮೦ರ ದಶಕದ ಸೂಪರ್ ಹಿಟ್ ನಾಟಕ ‘ಗಂಟೇತಾಂಡ್’(ಗಂಟೆಯೆಷ್ಟಾಯಿತು..?) ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಅವರು ‘ಬಲೇ ಚಾ ಪರ‍್ಕ’ (ಬನ್ನಿ ಚಾ ಕುಡಿಯೋಣ) ನಾಟಕವು ‘ಸತ್ಯ ಓಲುಂಡು’(ಸತ್ಯ ಎಲ್ಲಿದೆ..?) ಹೆಸರಿನಲ್ಲಿ ಸಿನಿಮಾ ಆಗಿದೆ. ‘ಗಂಟೇತಾಂಡ್’ ನಾಟಕ ಈಗ ಒಂದಷ್ಟು ಬದಲಾವಣೆಯೊಂದಿಗೆ ‘ತೆಲಿಕೆದ ಬೊಳ್ಳಿ’ ಹೆಸರಿನಲ್ಲಿ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತ, ಈ ಚಿತ್ರವನ್ನು ‘ಪಂಚಮವೇದ’ ಖ್ಯಾತಿಯ ಪಿ.ಎಚ್.ವಿಶ್ವನಾಥ್ ನಿರ್ದೇಶಿಸುತ್ತಿದ್ದಾರೆ.
ರಾಮ್ ಶೆಟ್ಟರು ಬಂದರು:
ಬಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ರಾಮ್ ಶೆಟ್ಟಿ ೩೦ ವರ್ಷಗಳ ನಂತರ ತುಳು ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಿಂದಿಯಲ್ಲಿ ಖತರ್‌ನಾಕ್, ಮರಾಠಿಯಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿದ್ದ ಇವರು ತುಳುವಿನಲ್ಲಿ ‘ಬದ್ಕೆರೆ ಬುಡ್ಲೆ ’ ಹಾಗೂ ‘ದಾರೆದ ಸೀರೆ’ ಸಿನಿಮಾ ನಿರ್ಮಿಸಿದ್ದರು. ಇದೀಗ ಅವರು ‘ಬಂಗಾರ‍್ದ ಕುರಲ್’ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ರಾಮ್ ಶೆಟ್ಟಿಯ ಪುತ್ರ ಆನಂದ್ ರಾಮ್‌ಶೆಟ್ಟಿ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಭೋಜ್‌ಪುರಿ ನಾಯಕಿ ಪಾಕೀ ಹೆಗ್ಡೆ ಚಿತ್ರದ ನಾಯಕಿ. ಚಿತ್ರಕ್ಕೆ ವಿ.ಮನೋಹರ್ ಸಂಗೀತವಿದೆ. ಮಚ್ಚೇಂದ್ರನಾಥ್ ಪಾಂಡೇಶ್ವರ್ ಸಾಹಿತ್ಯ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದ ಏಳು ಹಾಡುಗಳ ಧ್ವನಿ ಮುದ್ರಣ ಕಾರ್ಯ ಪೂರ್ಣಗೊಂಡಿದ್ದು, ಡಿ. ೧೪ರಂದು ಚಿತ್ರದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಮುಂಬಯಿಯ ರಾಜು ಕೆ.ಜಿ. ಚಿತ್ರಕ್ಕೆ ಛಾಯಾಗ್ರಾಹಣ ಮಾಡಲಿದ್ದು, ರಾಮ್ ಶೆಟ್ಟಿಯವರ ಸಹೋದರ ಹರೀಶ್ ಶೆಟ್ಟಿ ಸಾಹಸ ನಿರ್ದೇಶನ ಮಾಡಲಿದ್ದಾರೆ. ಹೆಬ್ರಿ , ಕಾರ್ಕಳ , ಮಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರಲಾಗುವುದೆಂದು ನಿರ್ದೇಶಕ ರಾಮ್‌ಶೆಟ್ಟಿ ಅವರ ಅಭಿಪ್ರಾಯ.
ಹೊಸ ಟೈಟಲ್ಲೂ ಹೊಸ ಸಿನಿಮಾ:
ಈ ವರ್ಷ ಹೊಸ ಟೈಟಲ್‌ಗಳು ತುಳುವಿನಲ್ಲಿ ನೋಂದಣಿಯಾಗಿದೆ. ಡಾ.ರಿಚಾರ್ಡ್ ಕ್ಯಾಸ್ತಲಿನೋ ‘ಲವ್ ಇನ್ ಸಿಂಗಾಪುರ’ ಸಿನಿಮಾ ಮಾಡಲಿದ್ದಾರೆ. ಮಲೇಶ್ಯಾ, ಸಿಂಗಾಪೂರ್ ಮುಂತಾದೆಡೆ ಹಾಡಿನ ಚಿತ್ರೀಕರಣ ಈಗಾಗಲೇ ಮುಗಿದಿದೆ. ಮುಂಬಯಿಯ ರಂಜಿತ್ ಶೆಟ್ಟಿ ‘ಅಮೈಟ್ ಅಸಲ್ ಈಮೈಟ್ ಕುಸಲ್’ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ‘ಪರ್ಬ’, ‘ಕಂಬುಲ’ ಟೈಟಲ್ ಕೂಡ ತುಳುವಿನಲ್ಲಿ ಈಗಾಗಲೇ ನೋಂದಣಿಯಾಗಿದೆ.
ಕೃಷ್ಣ ಎಂಬವರು ‘ದಿಬ್ಬಣ’ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಗಂಗಾಧರ ಶೆಟ್ಟಿ ‘ಒರಿಯನ್ ತೂಂಡ ಒರಿಯಗಾಪುಜಿ’ ಸಿನಿಮಾದ ಕೆಲಸದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಸ್ಥಗಿತಗೊಂಡಿರುವ ‘ಬೀರೆ ದೇವು ಪೂಂಜ’ ಚಿತ್ರಕ್ಕೆ ಮರುಜೀವ ಕೊಡಲು ಧನ್‌ರಾಜ್ ಒದ್ದಾಟ ನಡೆಸುತ್ತಿದ್ದಾರೆ. ಎನ್. ಆರ್.ಕೆ. ವಿಶ್ವನಾಥ್ ‘ಜಾತ್ರೆ’ ಎಂಬ ಟೈಟಲ್‌ವನ್ನು ನೋಂದಣಿ ಮಾಡಿದ್ದಾರೆ. ಇವೆಲ್ಲವನ್ನು ಗಮನಿಸುವಾಗ ಮುಂದಿನ ಒಂದು ವರ್ಷದಲ್ಲಿ ಹಲವು ತುಳು ಸಿನಿಮಾಗಳು ತೆರೆ ಕಾಣಲಿವೆ ಎಂಬ ನಿರೀಕ್ಷೆ ಹುಟ್ಟು ಹಾಕಿದೆ.
ತುಳು ಎಂದರೆ ಕೇವಲ ಸಂಸ್ಕೃತಿ ಆಧಾರಿತವಾಗಿ ಇರುವ ಅಗತ್ಯವಿಲ್ಲ. ಅಲ್ಲಿ ಮನೋರಂಜನೆ, ಹಾಸ್ಯ, ಗುಣಮಟ್ಟ ಮುಂತಾದವುಗಳಿಗೆ ಪ್ರೇಕ್ಷಕರು ಮಣೆ ಹಾಕುತ್ತಾರೆ ಎಂಬುದಕ್ಕೆ ವಿಜಯ ಕುಮಾರ್ ಕೊಡಿಯಾಲ್ ಬೈಲ್‌ರ ‘ಒರಿಯರ್ದೊರಿ ಅಸಲ್’ನ ಯಶಸ್ಸು ಸಾಕ್ಷಿಯಾಗುತ್ತದೆ. ಕೇವಲ ಪ್ರಶಸ್ತಿ ಉದ್ದೇಶಕ್ಕೆ ಮಾತ್ರವೇ ಪ್ರಾದೇಶಿಕ ಚಿತ್ರ ಮಾಡಬೇಕಾಗಿಲ್ಲ.
ಉತ್ತಮ ಗುಣಮಟ್ಟ ಕಾಪಿಟ್ಟುಕೊಂಡರೆ ತುಳು ಚಿತ್ರದಿಂದ ಉತ್ತಮ ಆದಾಯಗಳಿಸಲೂ ಸಾಧ್ಯ ಎಂಬ ಸತ್ಯ ಈಗ ಓಪನ್ ಸಿಕ್ರೇಟ್ ಆಗಿದೆ. ತುಳು ಚಿತ್ರರಂಗಕ್ಕೆ ಉತ್ತಮ ಅಡಿಪಾಯ ಈವರೆಗೂ ಸಿಕ್ಕಿರಲಿಲ್ಲ. ಸಂಕುಚಿತ ಚಿಂತನೆಗಳಿಂದ ಈ ಹಿಂದೆ ಸಿನಿಮಾ ಮಾಡಲಾಗಿತ್ತು. ಭವಿಷ್ಯದ ತುಳು ಚಿತ್ರ ನಿರ್ಮಾಪಕ, ನಿರ್ದೇಶಕರೆಲ್ಲರೂ ಗುಣಮಟ್ಟ ಕಾಪಾಡಿಕೊಂಡು ಪ್ರೇಕ್ಷಕರ ಹೃದಯ ಗೆಲ್ಲುವುದನ್ನು ಕಲಿತುಕೊಳ್ಳುವ ಅಗತ್ಯವಂತೂ ತಕ್ಷಣಕ್ಕೆ ಇದ್ದೇ ಇದೆ.
(vk lvk puravani published dis aritcle on 17.02.2012)

Wednesday, February 15, 2012

ಕಾಲಿವುಡ್‌ಗೆ ‘ವರ’ಲಕ್ಷ್ಮೀ


ವರಲಕ್ಷ್ಮೀಯ ಹಿಂದಿರುವ ಬ್ಯಾಕ್‌ಗ್ರೌಂಡ್ ತುಂಬಾನೇ ರೋಚಕ. ವರಲಕ್ಷ್ಮೀ ಕಾಲಿವುಡ್‌ನ ಸ್ಟಾರ್ ನಟ ಶರತ್ ಕುಮಾರ್ ಅವರ ಪ್ರೀತಿಯ ಮಗಳು. ಇದೇ ಒಂದು ಹೆಸರು ವರಲಕ್ಷ್ಮೀಯನ್ನು ಜನಪ್ರಿಯತೆಯ ಮಗ್ಗಲಲ್ಲಿ ಮಲಗಿಸಲು ಸಾಕು ಅಲ್ವಾ..? ಆದರೆ ಅದೆಲ್ಲ ಬೇಡ ಎನ್ನೋದು ವರಳ ಮಾತು..

೨೪ ಕ್ಯಾರೆಟ್ ಮುಗ್ದ ನಗು. ತಂದೆಯಂತೆ ಅಗಲವಾದ ಕಣ್ಣುಗಳು. ತಾಯಿಯಂತೆ ಮಾತು. ಟೋಟಲಿ ಸಿಂಪಲ್ ಆಂಡ್ ಸ್ಟೀಟ್ ಎನ್ನುವ ಟ್ಯಾಗ್‌ಲೈನ್ ಅಂಟಿಸಿಕೊಂಡು ಬರುತ್ತಿರುವ ಹುಡುಗಿ ವರಲಕ್ಷ್ಮೀ. ಹೆಸರಿನಲ್ಲಿಯೇ ‘ವರ’ ಇರುವುದರಿಂದ ಕಾಲಿವುಡ್‌ನಲ್ಲಿ ಈ ವರ್ಷ ಸಖತ್ ಎಂಟರ್‌ಟೈನ್‌ಮೆಂಟ್ ಸಿಗುವುದು ಖಾತರಿಯಾಗಿದೆ. ಅದರಲ್ಲೂ ವರಲಕ್ಷ್ಮೀಯ ಹಿಂದಿರುವ ಬ್ಯಾಕ್‌ಗ್ರೌಂಡ್ ತುಂಬಾನೇ ರೋಚಕ. ವರಲಕ್ಷ್ಮೀ ಕಾಲಿವುಡ್‌ನ ಸ್ಟಾರ್ ನಟ ಶರತ್ ಕುಮಾರ್ ಅವರ ಪ್ರೀತಿಯ ಮಗಳು. ಇದೇ ಒಂದು ಹೆಸರು ವರಲಕ್ಷ್ಮೀಯನ್ನು ಜನಪ್ರಿಯತೆಯ ಮಗ್ಗಲಲ್ಲಿ ಮಲಗಿಸಲು ಸಾಕು.
ಆದರೆ ವರಲಕ್ಷ್ಮೀ ಟೋಟಲಿ ಭಿನ್ನ ಹುಡುಗಿ. ತಂದೆಯ ಹೆಸರನ್ನು ತನ್ನ ಹೆಸರಿನ ಜತೆಯಲ್ಲಿ ಲಿಂಕ್ ಮಾಡದೇ ಆಕ್ಟಿಂಗ್ ಮೇಲೆ ಫೋಕಸ್ ಆಗುವ ಬೆಡಗಿ ಎನ್ನುವುದು ಕಾಲಿವುಡ್ ಪಂಡಿತರ ಮಾತು. ಶರತ್ ಕುಮಾರ್ ಅವರ ಮೊದಲ ಪತ್ನಿ ಛಾಯಾ ಅವರ ಮಗಳು ವರಲಕ್ಷ್ಮೀ. ಶರತ್ ಕುಮಾರ್ ಅವರ ನಾಲ್ಕು ಜನ ಮಕ್ಕಳಲ್ಲಿ ವರ ತುಂಬಾನೇ ಚೂಟಿ ಹಾಗೂ ಓದಿನಲ್ಲೂ ಬಹಳ ಮುಂದಿದ್ದ ಹುಡುಗಿ. ಸಿನ್ಮಾದ ಬಗ್ಗೆ ಅಂತಹ ದೊಡ್ಡ ಕನಸ್ಸುಗಳನ್ನು ಇಟ್ಟುಕೊಂಡು ಕಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಯಾದ ಹುಡುಗಿಯಲ್ಲ. ವರ ನಿಜಕ್ಕೂ ಮುಂದೆ ಓದಬೇಕು ಅಂದುಕೊಂಡಿದ್ದಳು. ಆದರೆ ತಂದೆಯ ಬಣ್ಣದ ಟಚ್ ವರನಿಗೂ ಆಕರ್ಷಣೆ ಮಾಡಿತು ಎನ್ನುವುದು ಅವರ ಆಪ್ತರ ಮಾತು.
ಪ್ರೇಮಿಗಳ ದಿನಕ್ಕೆ ಚಿತ್ರ:
ಕಾಲಿವುಡ್‌ನಲ್ಲಿ ಫೆಬ್ರವರಿ ೧೪ರ ಪ್ರೇಮಿಗಳ ದಿನದಂದು ನಿರ್ದೇಶಕ ವಿಘ್ನೇಶ್ ಶಿವನ್ ಅವರ ‘ಪೋಡಾ ಪೋಡಿ’ ಚಿತ್ರದಲ್ಲಿ ಶಿಲಬರಸನ್ ಆಲಿಯಾಸ್ ಶಿಂಬುವಿಗೆ ಲೀಡ್ ನಾಯಕಿಯಾಗಿ ವರ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಕುರಿತು ಭರ್ಜರಿ ಪ್ರಚಾರ ಕಾರ‍್ಯ ನಡೆಯುತ್ತಿದೆ. ಅದರಲ್ಲೂ ಕಳೆದ ವರ್ಷ ಶಿಂಬು ನಟಿಸಿದ ಬಹಳಷ್ಟು ಚಿತ್ರಗಳು ಕಾಲಿವುಡ್‌ನಲ್ಲಿ ಒಳ್ಳೆಯ ರೇಟಿಂಗ್ ಪಡೆದುಕೊಂಡಿತ್ತು. ಹೊಸ ವರ್ಷದ ಆರಂಭದಲ್ಲಿ ‘ಪೋಡಾ ಪೋಡಿ’ ಕಾಮಿಡಿ ವಿದ್ ರೋಮ್ಯಾನ್ಸ್ ಬರಿತ ಚಿತ್ರವಾಗಿದ್ದರಿಂದ ಮತ್ತಷ್ಟೂ ಕ್ರೇಜ್ ಹುಟ್ಟಿಸಿ ಓಡಾಡುವ ಲಕ್ಷಣಗಳನ್ನು ಬಿಟ್ಟು ಕೊಟ್ಟಿದೆ.
‘ಪೋಡಾಪೋಡಿ’ ಚಿತ್ರದಲ್ಲಿ ವರಲಕ್ಷ್ಮೀ ಬ್ಯಾಲೆ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ವಿದೇಶ ಕೆಲವು ಬ್ಯಾಲೆ ಕ್ಲಾಸ್‌ಗಳಿಗೂ ಸುತ್ತು ಹೊಡೆದು ಬ್ಯಾಲೆ ನೃತ್ಯವನ್ನು ಕಲಿತು ಬಂದಿದ್ದಾರೆ. ಶಿಂಬು ಚಿತ್ರದಲ್ಲಿ ಸಾಲ್ಸಾ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟೈಟಲ್‌ನ್ನು ಮೂರು ಬಾರಿ ಬದಲಾಯಿಸಿಕೊಂಡು ಕೊನೆಗೆ ‘ಪೋಡಾಪೋಡಿ’ಯಲ್ಲಿ ತೃಪ್ತಿ ಕಾಣುವಂತಾಗಿದೆ.
ಶಿಂಬುವಿನ ಡೇಟ್ಸ್ ಕ್ಲ್ಯಾಶ್‌ಗಳಿಂದ ಚಿತ್ರದ ಆರಂಭವೇ ಸರಿಯಾಗಿ ನಡೆದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಚಿತ್ರದ ಚಿತ್ರೀಕರಣ ವೇಗ ಪಡೆದುಕೊಂಡಿತ್ತು. ಅದರಲ್ಲೂ ಚಿತ್ರದ ಬಹುಭಾಗ ಚಿತ್ರೀಕರಣ ಕೆನಡಾದ ಸುಂದರ ತಾಣಗಳಲ್ಲಿ ನಡೆದಿತ್ತು. ಅಲ್ಲಿನ ಹವಾಮಾನ ಚಿತ್ರೀಕರಣಕ್ಕೆ ಬಹಳಷ್ಟು ತಡೆ ಮಾಡಿತ್ತು. ಜತೆಯಲ್ಲಿ ವರಲಕ್ಷ್ಮೀಯನ್ನು ಸಿನ್ಮಾಕ್ಕೆ ಇಳಿಸುವ ಕುರಿತು ನಟ ಶರತ್ ಕುಮಾರ್ ಕೂಡ ಹಿಂದೇಟು ಹಾಕಿದ್ದರು. ಹೀಗಾಗಿ ಮೂರು ವರ್ಷಗಳ ಬಳಿಕ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಎನ್ನೋದು ನಿರ್ದೇಶಕರ ಮಾತು.
ವರಲಕ್ಷ್ಮೀಗೆ ಡಬ್ಬಲ್ ಚಾನ್ಸ್:
ವರಲಕ್ಷ್ಮೀ ಅಭಿನಯದ ‘ಪೋಡಾಪೋಡಿ’ ಚಿತ್ರ ಇನ್ನೂ ಥಿಯೇಟರ್‌ಗೆ ಬಂದು ಬಿದ್ದಿಲ್ಲ. ಆದರೆ ಅದಕ್ಕಿಂತಲೂ ಮೊದಲು ಎರಡು ಚಿತ್ರಗಳ ನಾಯಕಿ ಸ್ಥಾನಕ್ಕೆ ವರ ಬುಕ್ ಆಗಿದ್ದಾಳೆ. ಚಿತ್ರವೊಂದು ಬಿಡುಗಡೆಗೂ ಮುನ್ನ ಮತ್ತರೆಡು ಚಿತ್ರಗಳಿಗೆ ಸೆಲೆಕ್ಟ್ ಆಗೋದು ಕಾಲಿವುಡ್‌ನಲ್ಲಿ ತೀರಾ ಅಪರೂಪದ ಪ್ರಸಂಗ ಎನ್ನೋದು ಬಲ್ಲವರ ಮಾತು.
ಅಂದಹಾಗೆ ವರಲಕ್ಷ್ಮೀ ಸೆಲೆಕ್ಟ್ ಆಗಿರೋದು ಖ್ಯಾತ ತೆಲುಗು ನಟ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ನಟಿಸುತ್ತಿರುವ ‘ಗೌರವಂ’ ಚಿತ್ರಕ್ಕೆ, ಈ ಚಿತ್ರವನ್ನು ಖುದ್ದು ನಾಗಾರ್ಜುನ ತಮ್ಮ ಹೋಮ್ ಬ್ಯಾನರ್ ಅನ್ನಪೂರ್ಣ ಸ್ಟುಡಿಯೋ ಮೂಲಕ ತರಲಿದ್ದಾರೆ. ಖ್ಯಾತ ನಿರ್ದೇಶಕ ರಾಧಾ ಮೋಹನ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಫೋಟೋ ಶೂಟ್‌ಗಳು ನಡೆದಿದೆ. ಇನ್ನೂಳಿದಂತೆ ಬರುವ ತಿಂಗಳಿನಿಂದ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ನಂತರ ವರ ಮತ್ತೊಂದು ತಮಿಳು ಸಿನ್ಮಾಕ್ಕೆ ಬುಕ್ ಆಗಿದ್ದಾಳೆ. ಚಿತ್ರದ ಡಿಟೇಲ್‌ಗಳು ಇನ್ನೂ ಹೊರಬಿದ್ದಿಲ್ಲ. ಟೋಟಲಿ ವರ ಲಕ್ಷ್ಮೀಯ ಸಿನ್ಮಾ ಬಿಡುಗಡೆಯ ಮೊದಲೇ ಲಕ್ ಕುದುರಿದೆ. ಇದು ಖಾಯಂ ಆಗಿ ಉಳಿದು ಹೋಗುತ್ತಾ ಎನ್ನುವ ಡೌಟ್ ಪೋಡಾಪೋಡಿಯ ಬಿಡುಗಡೆಯ ನಂತರವೇ ತಿಳಿದೀತು ಅಲ್ವಾ...?
(vk lvk puravani published dis article on 14.02.2012)

ಸೀಲ್ ಮುರಿದು ಹೋಯಿತು !


ಹಾಲಿವುಡ್ ದುನಿಯಾದಲ್ಲಿ ನಾಲ್ಕೈದು ದಿನಗಳಿಗೆ ನಟ-ನಟಿಯರ ಅದಲು-ಬದಲು, ಬ್ರೇಕ್ ಆಫ್, ಲಿಂಕ್ ಆಫ್‌ಗಳ ಸುದ್ದಿಯಲ್ಲಿದ್ದವರಿಗೂ ಹೊಟ್ಟೆಕಿಚ್ಚು ತರುವಂತೆ ನಡೆದುಕೊಂಡವರು ಈಗ ಬೇರೆಯಾಗಲು ನಿರ್ಧಾರ ಮಾಡಿದ್ದಾರೆ. ಈ ವಿಷ್ಯಾ ಕೇಳಿದ ಕೂಡಲೇ ಅವರನ್ನು ಮಾದರಿಯಾಗಿ ಇಟ್ಟುಕೊಂಡವರ ಹೃದಯ ನೊಂದು ಬಿಡುತ್ತದೆ. ಮನಸ್ಸು ಭಾರವಾಗಿ ಬಿಡುತ್ತದೆ.

ಒಂದಲ್ಲ ಎರಡಲ್ಲ ಬರೋಬರಿ ಏಳು ವರ್ಷ. ತುಂಬಾನೇ ಸುಂದರವಾಗಿ ಬದುಕು ಕಟ್ಟಿಕೊಂಡವರು. ನನಗೆ ನೀನು ನಿನಗೆ ನಾನು ಜತೆಗೆ ಮೂವರು ಮಕ್ಕಳು ಎನ್ನುವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರು. ಹಾಲಿವುಡ್ ದುನಿಯಾದಲ್ಲಿ ನಾಲ್ಕೈದು ದಿನಗಳಿಗೆ ನಟ-ನಟಿಯರು ಅದಲು-ಬದಲು, ಬ್ರೇಕ್ ಆಫ್, ಲಿಂಕ್ ಆಫ್‌ಗಳ ಸುದ್ದಿಯಲ್ಲಿದ್ದವರಿಗೂ ಹೊಟ್ಟೆಕಿಚ್ಚು ತರುವಂತೆ ನಡೆದುಕೊಂಡವರು ಈಗ ಬೇರೆಯಾಗಲು ನಿರ್ಧಾರ ಮಾಡಿದ್ದಾರೆ. ಈ ವಿಷ್ಯಾ ಕೇಳಿದ ಕೂಡಲೇ ಅವರನ್ನು ಮಾದರಿಯಾಗಿ ಇಟ್ಟುಕೊಂಡವರ ಹೃದಯ ನೊಂದು ಬಿಡುತ್ತದೆ. ಮನಸ್ಸು ಭಾರವಾಗಿ ಬಿಡುತ್ತದೆ.
ಇದು ಅಮೆರಿಕದ ಸೂಪರ್ ಮೊಡೆಲ್ ಹೈಡಿ ಕ್ಲುಮ್ ಹಾಗೂ ಅಮೆರಿಕದ ಸೋಲೋ ಗಾಯಕ ಎಂದೇ ಖ್ಯಾತಿ ಉತ್ತುಂಗದಲ್ಲಿರುವ ಸೀಲ್ ದಂಪತಿಗಳ ಬ್ರೇಕ್ ಆಫ್ ಕತೆ. ಇಬ್ಬರು ಸೆಲೆಬ್ರಿಟಿಯ ಕಾಲಂಗಳಲ್ಲಿ ಮಿಂಚುತ್ತಿದ್ದವರು ಯಾಕೋ ಗೊತ್ತಿಲ್ಲ.... ನೀನು ಬೇರೆ ಇದ್ದುಬಿಡು ನಾನು ಬೇರೆಯಾಗಿ ಬದುಕುತ್ತೇನೆ ಎನ್ನುವ ಏಕಾಂಗಿತನದ ಮಾತುಗಳನ್ನು ಜತೆಯಲ್ಲಿಯೇ ಕೋರಸ್ ಹಾಡುತ್ತಿದ್ದಾರೆ. ಆದರೆ ಈ ಇಬ್ಬರು ಬೇರೆಯಾಗುವ ನಿರ್ಧಾರದಿಂದ ಬಡಪಾಯಿ ಮೂರು ಮಕ್ಕಳಿಗೆ ಹೆತ್ತವರು ಇದ್ದರೂ ಇಲ್ಲದಂತೆ ಬದುಕುವ ಸ್ಥಿತಿ.
‘ನಾವಿಬ್ಬರೂ ಏಳು ವರ್ಷಗಳ ಕಾಲ ಜತೆಯಾಗಿ ಬದುಕು ಕಟ್ಟಿದ್ದೇವೆ. ಪ್ರೀತಿ, ಪ್ರಾಮಾಣಿಕತೆ ಎಲ್ಲವೂ ನಮ್ಮ ವೈವಾಹಿಕ ಸಂಬಂಧದಲ್ಲಿ ಜತೆಯಲ್ಲಿತ್ತು. ಆದರೆ ವೈವಾಹಿಕ ಬದುಕು ಸಾಕು ಎನ್ನಿಸುತ್ತಿದೆ. ಯಾವುದೇ ರಸ ಇಲ್ಲದ ಸಂಸಾರದೊಂದಿಗೆ ನಾವಿಬ್ಬರೂ ಬದುಕುವುದು ಇನ್ನೂ ಸುಲಭವಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ಮುಟ್ಟಿದ್ದೇವೆ. ಅದಕ್ಕಾಗಿ ನಾವಿಬ್ಬರೂ ಬೇರೆ ಬೇರೆಯಾಗಿ ಇರಲು ನಿರ್ಧಾರ ಮಾಡಿದ್ದೇವೆ. ನಮ್ಮ ಏಳು ವರ್ಷಗಳ ಸಂಬಂಧದ ಕುರಿತು ನನಗೆ ಅಪಾರ ಗೌರವವಿದೆ. ಇನ್ನೂ ಮುಂದೆನೂ ಇಬ್ಬರ ನಡುವೆ ಅದೇ ರೀತಿಯ ಗೌರವ, ಪ್ರೀತಿಯ ಭಾವನೆ ಇದ್ದೇ ಇದೆ. ಆದರೆ ಜತೆಯಾಗಿ ಮಾತ್ರ ಬದುಕುವುದು ಸಾಧ್ಯವಿಲ್ಲ ಎಂದು ಸೂಪರ್ ಮೊಡೆಲ್ ಹೈಡಿ ಕ್ಲುಮ್ ಮಾಧ್ಯಮಗಳಲ್ಲಿ ಬಾಯಿ ಬಿಟ್ಟಿದ್ದಾರೆ.
ಅಂದಹಾಗೆ ವಿಕ್ಟೋರಿಯಾ ಸಿಕ್ರೇಟ್ ಫೇಮ್ ಹೈಡಿಗೆ ಈ ಮೊದಲೇ ಮದುವೆಯಾಗಿತ್ತು. ಮೊದಲ ಮದುವೆಯಲ್ಲಿ ಒಂದು ಹೆಣ್ಣು ಮಗು ಕೂಡ ಇದೆ. ನಂತರ ಹೈಡಿ ಸೋಲ್ ಸಿಂಗರ್ ಸೀಲ್ ಜತೆಯಲ್ಲಿ ೨೦೦೫ರಲ್ಲಿ ಮೆಕ್ಸಿಕೋದಲ್ಲಿ ಮದುವೆಯಾಯಿತು. ಕೆಲವು ತಿಂಗಳ ನಂತರ ಇಬ್ಬರೂ ಭಾರತಕ್ಕೆ ಪ್ರವಾಸ ಬಂದಿದ್ದಾಗ ಇಲ್ಲಿಯೇ ಶಾಸ್ತ್ರ ಬದ್ಧವಾಗಿ ಮದುವೆ ಕೂಡ ಆಗಿದ್ದರು. ಆದರೆ ಹಾಲಿವುಡ್‌ನಲ್ಲಿ ದಂಪತಿಗಳು ಬೇರೆಯಾಗುವುದು ತೀರಾ ಕಾಮನ್. ಆದರೆ ಮದುವೆಯ ಲಾಂಗ್ ಜರ್ನಿಯಲ್ಲಿದ್ದ ದಂಪತಿಗಳಿಬ್ಬರು ಬೇರೆಯಾಗುತ್ತಿರುವುದು ಮಾತ್ರ ತುಂಬಾ ಬೇಸರದ ವಿಷ್ಯಾ .
ಹೈಡಿಯ ರಂಗೀನ್ ಬದುಕು:
ಸೂಪರ್ ಮೊಡೆಲ್ ಹೈಡಿ ನಿಜಕ್ಕೂ ರಂಗೀನ್ ದುನಿಯಾ ಕಂಡ ಹುಡುಗಿ. ಹೈಡಿಯ ಮೊದಲ ಮದುವೆ ಸ್ಟೈಲಿಷ್ಟ್ ರಿಚಿ ಪಿಪಿನೋ ಜತೆಯಲ್ಲಿ ನಡೆದಿತ್ತು. ಅದು ಬಹಳ ಕಾಲ ಬಾಳ್ವಿಕೆ ಬಂದಿರಲಿಲ್ಲ. ಇದೇ ಹೊತ್ತಲ್ಲಿ ಫಾರ್ಮೂಲಾ ವನ್ ಟೀಮ್‌ವೊಂದನ್ನು ಇಟ್ಟುಕೊಂಡು ಉದ್ಯಮಿಯಾಗಿದ್ದ ಫ್ಲೆವಿಯೋ ಜತೆಯಲ್ಲೂ ಲಿಂಕ್ ಆಫ್ ಕಾಣಿಸಿಕೊಂಡು ಹೈಡಿ ಗರ್ಭಿಣೆಯಾಗಿದ್ದಳು. ಇದೇ ಹೊತ್ತಲ್ಲಿ ಅಮೆರಿಕದ ಸೋಲ್ ಸಿಂಗರ್ ಸೀಲ್ ಕೂಡ ಹೈಡಿಯ ಮೋಹಕ್ಕೆ ಸಿಕ್ಕಿಕೊಂಡು ಏಳು ವರ್ಷಗಳ ಕಾಲ ಸಂಸಾರದ ರಥವನ್ನು ಓಡಿಸಿದ. ಈಗ ಹೈಡಿ ಬೇರೆಯೊಬ್ಬನ ತೆಕ್ಕೆಯನ್ನು ಬಯಸುತ್ತಿದ್ದಾಳೆ ಎನ್ನೋದು ಅಮೆರಿಕದ ಪಾಪರಾಜಿಗಳ ಮಾಹಿತಿ.
ಆದರೆ ಕಲೆ, ಫ್ಯಾಶನ್, ಸಮಾಜ ಸೇವೆಯಂತಹ ನಾನಾ ಚಟುವಟಿಕೆಗಳಲ್ಲಿ ಬ್ಯುಸಿ ಇರುವ ಹೈಡಿ ನಿಜಕ್ಕೂ ಸೀಲ್‌ನನ್ನು ಅರ್ಧದಲ್ಲಿಯೇ ಬಿಟ್ಟು ಹೋಗುತ್ತಿರುವುದು ಯಾಕೆ ಎನ್ನುವ ರಹಸ್ಯವಾದ ವಿಚಾರವನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೆ ಹೈಡಿ ಹೇಳುತ್ತಿರುವುದು ಒಂದೇ ವಿಷ್ಯಾ ಮಾರಾಯ್ರೆ. ನನಗೆ ಈಗ ಸಾಂಗಾತಿ ಜೀವನ ಸಾಕಾಗಿ ಹೋಗಿದೆ. ಬದುಕಿನಲ್ಲಿ ಹೊಸತನದ ಹುಡುಕಾಟ ಮಾಡುತ್ತಿದ್ದೇನೆ. ಅಂದಹಾಗೆ ಇದು ಹೊಸ ಸಾಂಗಾತಿಯ ಹುಡುಕಾಟ ಸೂಚನೆ ಅಲ್ಲ ತಾನೇ..? ಎನ್ನುವ ಕುತೂಹಲ ಅವರ ಮಾಜಿ ಪತಿ ಸೀಲ್‌ಗೆ ಬರದೇ ಹೋದರೂ, ಅವರ ಅಭಿಮಾನಿಗಳ ಮೂಗಿಗಂತೂ ಬಡಿದಿರುವುದು ದಿಟ ಅಲ್ವಾ..?

ಪಾಕ್ ಹುಡುಗಿಯ ‘ಎದೆ’ಗಾರಿಕೆ


ಪಾಕ್‌ನ ಮೊಡರ್ನ್ ಮಹಿಳೆಯರು ತಮ್ಮ ದೇಹಸಿರಿಯನ್ನು ನಾಲ್ಕು ಗೋಡೆಗಳ ಮಧ್ಯೆ ಬಿಚ್ಚುವ ಬದಲು ತೆರೆದ ಮೈದಾನದಲ್ಲಿ ಬಿಚ್ಚುವ ಎದೆಗಾರಿಕೆ ತೋರಿಸುತ್ತಿದ್ದಾರೆ. ವೀಣಾ ಮಲ್ಲಿಕ್ ನಂತರ ಈಗ ಇರಾನಿಯನ್ ನಟಿ ಗೋಲ್ಶ್‌ಪ್ತ್ ಫರ‍್ಹಾನಿ ‘ಮೈ’ದಾನ ಮಾಡಿದ್ದಾಳೆ. ಈ ಮೂಲಕ ಬೆತ್ತಲೆ ಚಿತ್ರವನ್ನು ಹುಡುಕಾಡುವ ನೂರಾರು ಕೈಗೆಗಳಿಗೆ ಗಟ್ಟಿ ವಸ್ತೊಂದು ಸಿಕ್ಕಿದೆ.

ಪಾಕಿಸ್ತಾನ ಎನ್ನುವ ಹೆಸರಿನ ಹಿಂದೆ ಕಟ್ಟರ್ ಸಂಪ್ರದಾಯವಾದಿ ಎನ್ನುವ ಬಿಲ್ಲೆ ಕುತ್ತಿಗೆಯಲ್ಲಿ ಸಯನೈಡ್ ಕುಪ್ಪಿಯಂತೆ ಜೋತು ಬಿದ್ದಿದೆ. ಅಲ್ಲಿನ ಆಚಾರ- ವಿಚಾರ, ಸಂಪ್ರದಾಯ, ಸಂಸ್ಕೃತಿ ಎಲ್ಲವೂ ಮುಸುಕುಧಾರಿಯಂತೆ ಹೊಳಪು ನೀಡುತ್ತದೆ. ಅದರಲ್ಲೂ ಪಾಕಿಸ್ತಾನದ ಮಹಿಳೆಯರು ಎಂದ ಕೂಡಲೇ ಸ್ಕಾರ್ಪ್‌ಧಾರಿಣಿಯಾಗಿರುವುದೇ ಹೆಚ್ಚು.
ಆದರೆ ಕಳೆದ ಒಂದರೆಡು ವರ್ಷಗಳಿಂದ ಪಾಕಿಸ್ತಾನದ ಮಣ್ಣು, ನೀರು, ಹೆಣ್ಣು ಮೂರು ಬದಲಾವಣೆಗೆ ಗುರಿಯಾಗಿದೆ. ಎಲ್ಲವೂ ಸಂಪ್ರದಾಯಗಳಿಗೆ ವಿರುದ್ಧವಾಗಿ ಗ್ಲೋಬಲ್ ಟಚ್ ರಾಷ್ಟ್ರಗಳ ವಸ್ತುಗಳಂತೆ ಚಮಕ್ ತೋರಿಸುತ್ತಿದೆ. ಅದರಲ್ಲೂ ಪಾಕ್‌ನ ಮೊಡರ್ನ್ ಮಹಿಳೆಯರು ತಮ್ಮ ದೇಹಸಿರಿಯನ್ನು ನಾಲ್ಕು ಗೋಡೆಗಳ ಮಧ್ಯೆ ಬಿಚ್ಚುವ ಬದಲು ತೆರೆದ ಮೈದಾನದಲ್ಲಿ ಬಿಚ್ಚುವ ಎದೆಗಾರಿಕೆ ತೋರಿಸುತ್ತಿದ್ದಾರೆ.
ತೀರಾ ಇತ್ತೀಚೆಗೆ ಪಾಕಿಸ್ತಾನದ ನಟಿ ಕಮ್ ಬಾಲಿವುಡ್ ಬೆಡಗಿ ವೀಣಾ ಮಲ್ಲಿಕ್ ಖ್ಯಾತ ಮಾಸಿಕವೊಂದರ ಮುಖಪುಟದಲ್ಲಿಯೇ ಮೈ ಚಳಿ ಬಿಟ್ಟು ಬೆತ್ತಲಾಗಿ ಪಡ್ಡೆ ಹೈಕಳ ಗೋಡೆಯಲ್ಲಿ ರಾರಾಜಿಸಿಕೊಂಡಿರುವ ವಿಚಾರದ ಬೆನ್ನಲ್ಲೆ ಈಗ ಮತ್ತೊಂದು ಹುಡುಗಿ ತಾನು ಕೂಡ ಬಿಚ್ಚುವಾಟಕ್ಕೆ ರೆಡಿ ಎಂದುಕೊಂಡು ದೇಹಸಿರಿಯನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಕರಿ ಹಾಕಿದ್ದಾಳೆ.
ಪಾಕ್‌ನಂತೆ ಮತ್ತೊಂದು ಕಟ್ಟರ್ ಮುಸ್ಲಿಂ ರಾಷ್ಟ್ರ ಪರ್ಶಿಯಾ ಮೂಲದ ಇರಾನಿಯನ್ ನಟಿ ಗೋಲ್ಶ್‌ಪ್ತ್ ಫರ‍್ಹಾನಿ ಫ್ರೆಂಚ್ ಮಾಸಿಕವೊಂದಕ್ಕೆ ತನ್ನ ತೆರೆದ ಎದೆಗಾರಿಕೆ ತೋರಿಸಿ ಸಂಪ್ರದಾಯವಾದಿಗಳ ಇರಿಸುಮುರಿಸುವಿಗೆ ಕಾರಣವಾಗಿ ತನ್ನ ಮೂಲ ರಾಷ್ಟ್ರಕ್ಕೆ ಮತ್ತೊಂದು ಕಾಲಿಡಬಾರದು ಎನ್ನುವ ಫತ್ವಾಕ್ಕೆ ಗುರಿಯಾಗಿದ್ದಾಳೆ.
ಫ್ರೆಂಚ್ ಭಾಷೆಯ ಅತ್ಯಂತ ಜನಪ್ರಿಯ ಮಾಸಿಕ ಎಂದು ಹಣೆಪಟ್ಟಿಕಟ್ಟಿಕೊಂಡು ಬೀಗುತ್ತಿರುವ ‘ಮೇಡಂ ಲೀ ಫಿಗ್‌ರ್ರೋ’ ಮ್ಯಾಗಜೀನ್‌ಗೆ ೨೯ರ ಹರೆಯದ ಫರ‍್ಹಾನಿ ಮುಖಪುಟದ ಸುಂದರಿಯಾಗಿದ್ದರು. ಅದರಲ್ಲೂ ಫರ‍್ಹಾನಿ ಮುಖಪುಟದಲ್ಲಿ ಮಾಡಿದ ಬಿಚ್ಚಾಟಕ್ಕೆ ಸಂಪ್ರದಾಯವಾದಿಗಳು ಇನ್ನೂ ಮುಂದೆ ಫ್ರಾನ್ಸ್‌ನಲ್ಲಿಯೇ ಇದ್ದು ಬಿಡಮ್ಮಾ . ನಮ್ಮ ದೇಶಕ್ಕಂತೂ ಬರಬೇಡ. ಇಲ್ಲಿ ಇದ್ದ ಮಹಿಳೆಯರು ನಿನ್ನಂತೇ ಬಿಚ್ಚಾಟ ಮಾಡಲು ರೆಡಿಯಾದರೆ... ನಮಗೇನೂ ಕಿಮ್ಮತ್ತಿಲ್ಲ ಎಂದು ಒಕ್ಕಾಣೆ ಇರುವ ಜಾಹೀರಾತನ್ನು ಖ್ಯಾತ ಟೆಲಿಗ್ರಾಫ್ ಪತ್ರಿಕೆಯಲ್ಲಿ ಸಂಪ್ರದಾಯವಾದಿಗಳು ಹಾಕಿದ್ದಾರೆ.
ಈ ಜಾಹೀರಾತು ನೋಡಿ ಕೆಂಡಮಂಡಲವಾದ ನಟಿ ಗೋಲ್ಶ್‌ಪ್ತ್ ಫರ‍್ಹಾನಿ ಗರಂ ಆಗಿ ಪ್ರತಿಕ್ರಿಯೆ ನೀಡಿ ‘ ಇಂತಹ ಫತ್ವಾ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ಬಿಚ್ಚಾಟ ಮಾಡುವುದು ಆಧುನಿಕ ಸಮಾಜದಲ್ಲಿ ಎಲ್ಲಿಯೂ ತಪ್ಪು ಎಂದು ತೋರಿಸಿಲ್ಲ. ಸಂಪ್ರದಾಯವಾದಿಗಳು ಬದಲಾಗಬೇಕು. ಇಂತಹ ಸನ್ನಿವೇಶಗಳನ್ನು ಉದಾರತೆಯಿಂದ ತೆಗೆದುಕೊಳ್ಳಬೇಕು’ ಎಂದಿದ್ದಾಳೆ.
ಅಷ್ಟಕ್ಕೂ ಮ್ಯಾಗಜೀನ್‌ನಲ್ಲಿ ಹಾಕಿಕೊಂಡಿರುವ ಮುಖಪುಟದ ಚಿತ್ರದಲ್ಲಿ ನಟಿ ಗೋಲ್ಶ್‌ಪ್ತ್ ಫರ‍್ಹಾನಿ ಕಪ್ಪು- ಬಿಳುಪು ಬ್ಯಾಕ್‌ಗ್ರೌಂಡ್‌ನಲ್ಲಿ ಫ್ರೆಂಚ್ ಭಾಷೆಯಲ್ಲಿ ‘ಕ್ರೋಪ್ಸ್ ಇಟ್ ಏಮ್ಸ್ ’ ಎಂದರೆ ಮನಸ್ಸು ಹಾಗೂ ದೇಹ ಮುಕ್ತವಾಗಿರಲಿ ಎನ್ನುವ ಸಂದೇಶಕ್ಕೆ ರೂಪದರ್ಶಿಯಾಗಿ ಕಂಗೋಳಿಸಿದ್ದಾರೆ. ಇದರಲ್ಲಿ ಅಂತಹ ದೊಡ್ಡ ತಪ್ಪು ಇಲ್ಲ ಎನ್ನೋದು ಗೋಲ್ಶ್‌ಪ್ತ್ ಫರ‍್ಹಾನಿ ಅವರನ್ನು ಓಲೈಸಿಕೊಂಡಿರುವವರ ಮಾತು.
ಅಂದಹಾಗೆ ಈ ಬಿಚ್ಚಾಟದ ನಡುವೆ ಹಾಲಿವುಡ್‌ನಲ್ಲಿ ಗೋಲ್ಶ್‌ಪ್ತ್ ಫರ‍್ಹಾನಿ ನಟಿಸಿರುವ ಬಿಡುಗಡೆಗೆ ಸಿದ್ಧವಾಗಿ ನಿಂತಿರುವ ‘ಬೋಡಿ ಆಫ್ ಲೇಸ್’ ಚಿತ್ರದ ಪ್ರಚಾರಕ್ಕಾಗಿ ಈ ರೀತಿಯ ಕಳಪೆ ಗಿಮಿಕ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ‘ಬೋಡಿ ಆಫ್ ಲೇಸ್’ ಚಿತ್ರದಲ್ಲಿ ಅಮೆರಿಕದ ಸಿಕ್ರೇಟ್ ಏಜೆಂಟ್ ಗಾಯಗೊಂಡು ಮುಸ್ಲಿಂ ರಾಷ್ಟ್ರಕ್ಕೆ ಬಂದಾಗ ಅವನ ಶುಶ್ರೂಷೆ ಮಾಡಿ ಪುನಃ ಅಮೇರಿಕಕ್ಕೆ ಕಳುಹಿಸಲು ನೆರವಾಗುವ ದಾದಿಯ ಪಾತ್ರದಲ್ಲಿ ಗೋಲ್ಶ್‌ಪ್ತ್ ಫರ‍್ಹಾನಿ ನಟಿಸಿದ್ದಾರೆ.
ಟೋಟಲಿ ಗೋಲ್ಶ್‌ಪ್ತ್ ಫರ‍್ಹಾನಿ ಬರೀ ಮ್ಯಾಗಜೀನ್ ಲೇವೆಲ್ ಬಿಟ್ಟು ಫೇಸ್‌ಬುಕ್‌ನಲ್ಲೂ ತನ್ನ ಬೆತ್ತಲಾದ ಚಿತ್ರವನ್ನು ಹಾಕಿಕೊಂಡು ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ನಟಿ ಗೋಲ್ಶ್‌ಪ್ತ್ ಫರ‍್ಹಾನಿ ಬೆತ್ತಲಾಗಿರುವ ಹಿಂದೆ ಚಿತ್ರದ ಪ್ರಚಾರದ ಗುಟ್ಟು ಅಡಗಿದೆಯಾ..? ಮ್ಯಾಗಜೀನ್‌ವೊಂದು ತನ್ನ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮಾಡಿರುವ ತಂತ್ರನಾ ಎನ್ನುವ ಹತ್ತಾರು ಪ್ರಶ್ನೆಗಳಿಗೆ ಉತ್ತರವಂತೂ ಸಿಕ್ಕಿಲ್ಲ. ಆದರೆ ಬೆತ್ತಲೆ ಚಿತ್ರವನ್ನು ಹುಡುಕಾಡುವ ನೂರಾರು ಕೈಗೆಗಳಿಗೆ ಗಟ್ಟಿ ವಸ್ತೊಂದು ಸಿಕ್ಕಿರುವುದರಲ್ಲಿ ಯಾವುದೇ ಡೌಟ್ ಇಲ್ಲ ಅಲ್ವಾ..?

ನನ್ನ ಪತ್ರಿಕೆ ನನ್ನ ಬರಹ-50


(vk lvk puravani published dis aricle on 03.02.2012)

ನನ್ನ ಪತ್ರಿಕೆ ನನ್ನ ಬರಹ-49


(vk daily main page published dis article on yuvagarnaje 15.02.2012)

Monday, February 13, 2012

ಅನ್‌ಲಕ್ಕಿ ಹುಡುಗನ ಹುಡುಕಾಟ


ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ ಎನ್ನೋದು ಅನ್‌ಲಕ್ಕಿಯ ವಿಷ್ಯಾ.

ಯಾಕೋ ಗೊತ್ತಿಲ್ಲ ಮಾರಾಯ್ರೆ. ಈ ಪಾಟಿನೂ ಅದೃಷ್ಟ ಕೈ ಕೊಡುತ್ತೆ ಎನ್ನೋದು ಖುದ್ದು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಗೊಂದಲ ಮೂಡಬಹುದು. ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ ಎನ್ನೋದು ಅನ್‌ಲಕ್ಕಿಯ ವಿಷ್ಯಾ.
ಅಂದಹಾಗೆ ಈ ಹುಡುಗ ಬೇರೆ ಯಾರು ಅಲ್ಲ. ಬಾಲಿವುಡ್ ನಟ ಕಮ್ ನಿರ್ಮಾಪಕ, ನಿರ್ದೇಶಕ ಎನ್ನುವ ಹಣೆಪಟ್ಟಿಕಟ್ಟಿಕೊಂಡು ಸಿನ್ಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಪಂಕಜ್ ಕಪೂರ್ ಅವರ ಸನ್ ಶಾಹೀದ್ ಕಪೂರ್. ಬಾಲಿವುಡ್‌ನಲ್ಲಿ ಆರಂಭದ ಇನ್ನಿಂಗ್ಸ್ ಆಡಲು ಬಂದ ಶಾಹೀದ್‌ಗೆ ಬಹಳ ಬೇಡಿಕೆ ಇತ್ತು. ಮೊದಲ ಚಿತ್ರವೇ ಶಾಹೀದ್‌ನನ್ನು ಒಬ್ಬ ‘ಲವರ್‌ಬಾಯ್’ ಆಗಿ ಫೋಕಸ್ ಮಾಡಿಬಿಟ್ಟಿತ್ತು.
ಬಾಲಿವುಡ್‌ನ ಸೈಜ್‌ಝೀರೋ ಹುಡುಗಿ ಕರೀನಾಳ ಜತೆ ಸುತ್ತಾಡುವುದಕ್ಕಾಗಿ ತಾನು ಪಕ್ಕಾ ವೆಜ್ ಹುಡುಗ ಅಂತಾ ಹೇಳಿ ಖುದ್ದು ಮನೆಯಲ್ಲಿ ಬಡಿಸಿಟ್ಟ ನಾನ್‌ವೆಜ್ ಐಟಂಗಳನ್ನು ಪಕ್ಕಕ್ಕೆ ಇಟ್ಟು ಕರೀನಾಳ ಮನೆಯಲ್ಲಿ ವೆಜ್ ಊಟಕ್ಕೆ ಬಿದಿದ್ದ. ಕೊನೆಗೂ ಕರೀನಾ ಶಾಹೀದ್‌ನನ್ನು ವೆಜ್ ಹುಡುಗನಾಗಿಯೇ ಬಿಟ್ಟುಹೋದಳು. ಇದು ಶಾಹೀದ್‌ನ ಮೊದಲ ಅನ್‌ಲಕ್ಕಿ ಸೀಸನ್ ಆರಂಭದ ಗಂಟೆ.
ಆದರೆ ಕರೀನಾಳನ್ನು ಕಳೆದುಕೊಂಡ ಶಾಹೀದ್ ಬಾಲಿವುಡ್‌ನಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ಕಂಗೋಳಿಸಿದ್ದು ಬಿಟ್ಟರೆ ಉಳಿದ ಚಿತ್ರಗಳು ತೋಪಾಗಿ ಬಿದ್ದು ಹೋಯಿತು. ಕರೀನಾ ವರ್ಸಸ್ ಶಾಹೀದ್ ಬ್ರೇಕ್ ಸೀಸನ್‌ನಲ್ಲಿ ಬಂದು ಹೋದ ‘ಜಬ್ ವೀ ಮೆಟ್’ ಚಿತ್ರವೊಂದನ್ನು ಬಿಟ್ಟರೆ ಶಾಹೀದ್ ಬಾಲಿವುಡ್ ಕಡಿದುಕಟ್ಟಿ ಹಾಕಿದ ಯಾವುದೇ ಚಿತ್ರಗಳಿಲ್ಲ ಎನ್ನೋದು ಅವರ ಆಪ್ತ ವಲಯದ ಮಾತೇ ಇದೆ.
ಅದೃಷ್ಟ ಇಲ್ಲವೇ ಇಲ್ಲ:
ಶಾಹೀದ್ ಕಪೂರ್ ೨೦೧೨ರಲ್ಲಿ ಟೋಟಲ್ ಫ್ರಿಯಾಗಿದ್ದಾರೆ ಎನ್ನೋದು ಅವರ ಪಿಎ ಹೇಳುವ ಮಾತು. ೨೦೧೧ರಲ್ಲಿ ಶಾಹೀದ್ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿ ‘ಹೌಸ್‌ಫುಲ್-೨’, ‘ವನ್ಸ್ ಆಫನ್ ಟೈಮ್ ಇನ್ ಮುಂಬಯಿ-೨’, ‘ತೇರಿ ಮೇರಿ ಕಹಾನಿ’ ಈ ಚಿತ್ರಗಳ ಚಿತ್ರೀಕರಣ ಭಾಗಶಃ ಪೂರ್ತಿಯಾಗಿದೆ. ಉಳಿದಂತೆ ಥಿಯೇಟರ್‌ಗೆ ಬಂದು ಬೀಳುವ ದಿನಗಳು ಬಾಕಿ ಉಳಿದಿದೆ. ಆ ಬಳಿಕ ಶಾಹೀದ್‌ನ ನಿರುದ್ಯೋಗಿ ಪರ್ವ ಆರಂಭವಾಗುತ್ತದೆ. ಇದು ಅನ್‌ಲಕ್ಕಿ ಸೀಸನ್‌ನ ಎರಡನೇ ಗಂಟೆ.
ಈ ವಿಚಾರವನ್ನು ಖುದ್ದು ಶಾಹೀದ್ ಒಪ್ಪಿಕೊಂಡು ಟ್ವಿಟ್ಟರ್‌ನಲ್ಲಿ ಹೇಳಿಕೊಂಡ ಮಾತು ಇಲ್ಲಿದೆ. ‘ಚಿತ್ರದ ನಿರ್ಮಾಪಕ ಬಂದು ಚಿತ್ರಕ್ಕೆ ನೀನು ಆಯ್ಕೆಯಾಗಿದ್ದಿ ಎಂದು ಪ್ರಕಟಿಸುವ ವರೆಗೂ ನನ್ನ ಕೈಯಲ್ಲಿ ಯಾವುದೇ ಚಿತ್ರಗಳಿರುವುದಿಲ್ಲ. ಅದಕ್ಕಾಗಿ ನನಗೆ ನಿರುದ್ಯೋಗಿ ಎನ್ನುವ ಟೈಟಲ್ ಸರಿಯಾಗಿದೆ. ಆದರೆ ೨೦೧೩ವಂತೂ ನನ್ನ ಕೈಯಲ್ಲಿ ಉಳಿದು ಹೋಗಲಿದೆ ಎನ್ನುವ ಆತ್ಮವಿಶ್ವಾಸ ಮಾತ್ರ ನನ್ನ ಬಳಿಯಲ್ಲಿದೆ’ ಎಂದಿದ್ದಾರೆ.
ಮದುವೆಯಿಂದ ಲಕ್ ಬರುತ್ತೆ:
೨೦೧೨ರಲ್ಲಿ ನನ್ನ ಬಳಿ ಹೇಳಿಕೊಳ್ಳುವಂತಹ ಯಾವುದೇ ಚಿತ್ರಗಳು ಕೈಯಲ್ಲಿ ಇಲ್ಲ. ಇರುವ ಮೂರು ಚಿತ್ರಗಳ ಮೇಲೆ ನನ್ನ ವೃತ್ತಿ ಬದುಕು ನಿಂತಿದೆ. ಅದಕ್ಕಾಗಿ ಈ ವರ್ಷವೇ ಮದುವೆಯಾಗಬೇಕೆಂದುಕೊಂಡಿದ್ದೇನೆ. ಈ ಮೂಲಕವಾದರೂ ಅದೃಷ್ಟ ನನ್ನ ಬಳಿಯಲ್ಲಿ ಇರುತ್ತದೆ ಎನ್ನೋದು ಶಾಹೀದ್ ಕಪೂರ್‌ನ ನಂಬಿಕೆ.
ಮದುವೆಯ ನಂತರ ಬಾಲಿವುಡ್‌ನಲ್ಲಿ ನೆಲೆ ನಿಂತವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಬಾಲಿವುಡ್ ನಟ ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಜೇಯ್ ದೇವಗನ್, ಹೃತಿಕ್ ರೋಷನ್ ಬಹಳಷ್ಟು ಜನರು ತಮ್ಮ ಮದುವೆಯ ನಂತರ ಬಾಲಿವುಡ್‌ನಲ್ಲಿ ಕ್ಲಿಕ್ ಆಗಿದ್ದಾರೆ. ಅವರ ರೂಲ್‌ಗಳನ್ನೇ ಫಾಲೋ ಮಾಡೋಣ ಅಂತಾ ಯೋಚನೆ ಮಾಡುತ್ತಿದ್ದೇನೆ ಎನ್ನೋದು ಶಾಹೀದ್ ಕಪೂರ್‌ನ ಓಪನ್ ಮಾತು.
‘ಬರೀ ಮದುವೆಯಿಂದ ಲಕ್ ಬರುತ್ತೆ ಎನ್ನುವ ನನ್ನ ವಾದದಲ್ಲೂ ಬೇರೆ ವಿಚಾರಗಳು ಅಡಗಿದೆ. ಸಿಂಗಲ್ ಇದ್ದಾಗ ನಿಮ್ಮ ಬಗ್ಗೆ ಪ್ರೀತಿ ತೋರಿಸುವ ಕೈಗಳು ಇರೋದಿಲ್ಲ. ನಿಮ್ಮ ಸುಖ ದುಃಖಗಳಲ್ಲಿ ಎಂಟ್ರಿಯಾಗುವ ಬಂಧುಗಳು ಸಿಗೋದಿಲ್ಲ. ಅದಕ್ಕಾಗಿ ಫೈನಲ್ ಮದುವೆಯಲ್ಲಿ ಎಲ್ಲವೂ ಸಿಗುತ್ತದೆ’ ಎನ್ನೋದು ಶಾಹೀದ್ ಕಪೂರ್‌ರ ವಾದ.
‘ಮದುವೆಯಾಗುತ್ತಿದ್ದೇನೆ ಎಂದಾಗ ಹುಡುಗಿ ಎಲ್ಲಿ ಎಂದು ಕೇಳುವವರು ಜಾಸ್ತಿ. ಈ ಕುರಿತು ಯಾವುದೇ ಯೋಚನೆ ಮಾಡಿಲ್ಲ. ನನಗೆ ಯಾವುದಾದರೂ ಒಳ್ಳೆಯ ಹುಡುಗಿ ಇದ್ದಾರೆ ಹೇಳಿ ಬಿಡಿ. ನಾನು ಮದುವೆಯಾಗಲು ಸಿದ್ಧ’ ಎಂದು ಶಾಹೀದ್ ಹುಡುಗಿಯರಿಗೆ ಆಫರ್ ರೇಟ್ ಕೊಟ್ಟು ಬಿಟ್ಟಿದ್ದಾರೆ. ಮದುವೆಯ ಮೂಲಕವಾದರೂ ಶಾಹೀದ್ ಕಪೂರ್‌ನ ಲಕ್ ಚೇಂಜ್ ಕಾಣುತ್ತೆ ಎಂದು ನಂಬಿಕೆ ಇಟ್ಟುಕೊಂಡಿರುವುದು ಮಾತ್ರ ಟೋಟಲಿ ಗ್ರೇಟ್ ಕಣ್ರಿ...
(vk lvk puravani published dis aritcle on 7.02.2012)

ಶಿಂಬು ಕೈಯಲ್ಲಿ ಲವ್ ಆಂಥೆಮ್


ಇದು ಬರೀಯ ಪ್ರೀತಿಯ ಹಾಡಲ್ಲ. ಇದೊಂದು ವಿಶ್ವ ಶಾಂತಿಯನ್ನು ಬಯಸುವ ಹಾಡು. ಪ್ರೀತಿಸುವ ಹೃದಯಕ್ಕೂ ಈ ಹಾಡಿನಲ್ಲಿ ಮದ್ದು ಇದೆ. ಕಾಲಿವುಡ್ ಸ್ಟಾರ್ ಶಿಂಬು ಈಗಾಗಲೇ ಈ ಹಾಡನ್ನು ಸಾಮಾಜಿಕ ತಾಣಗಳೆಂದು ಫೇಮಸ್ ಆದ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹಾಕಿದ್ದಾರೆ. ಒಂದ್ ಸಾರಿ ಕ್ಲಿಕ್ ಮಾಡಿ ನೋಡಿ...

‘ಕೊಲೆವೆರಿ ಡಿ’ ಹಾಡು ಈಗಲೂ ಸೂಪರ್ ರೋಮಿಂಗ್‌ನಲ್ಲಿದೆ. ಈ ಹಾಡನ್ನು ಕೇಳುವ ಕಿವಿಗಳು ಇನ್ನೂ ತಣಿದಿಲ್ಲ. ಡ್ಯಾನ್ಸ್ ಮಾಡಲು ಅಣಿಯಾಗುವ ಕಾಲುಗಳು ಇನ್ನೂ ನೆಲದ ಮೇಲೆ ನಿಲ್ಲಲು ರೆಡಿ ಇಲ್ಲ. ಆದರೆ ಈಗ ಇಂತಹ ಹಾಡನ್ನು ಸೈಡ್‌ಗೆ ಬಿಟ್ಟು ಮತ್ತೊಂದು ಹಾಡು ರೂಪುಗೊಂಡಿದೆ. ಅದರಲ್ಲೂ ಈ ಹಾಡು ಕಾಲಿವುಡ್‌ನಲ್ಲಿ ತಯಾರಾಗಿರೋದು ಮತ್ತೊಂದು ವಿಷ್ಯಾ. ಆದರೆ ಈ ಹಾಡು ಯುವಜನತೆಯನ್ನು ಮತ್ತೇರಿಸುವುದಿಲ್ಲ. ಬದಲಾಗಿ ಇಡೀ ವಿಶ್ವಕ್ಕೆ ಪ್ರೀತಿಯ ಸಂದೇಶ ಸಾರಲು ಅಣಿಯಾಗಿದೆ.
ಅಂದಹಾಗೆ ಪ್ರೀತಿಸುವ ಹೃದಯಕ್ಕೂ ಈ ಹಾಡಿನಲ್ಲಿ ಮದ್ದು ಇದೆ. ಟೋಟಲಿ ಹಾಡು ಬರೀ ಕಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಇಡೀ ವಿಶ್ವದಲ್ಲಿ ಈ ಹಾಡನ್ನು ಓಡಿಸುವ ಯೋಜನೆಯೊಂದು ಕಾಲಿವುಡ್ ಜಗುಲಿಯಲ್ಲಿ ಸಿದ್ಧವಾಗಿರೋದು ಖುಷಿಯ ವಿಷ್ಯಾ. ಕಾಲಿವುಡ್‌ನ ಯಂಗ್ ಸೂಪರ್ ಸ್ಟಾರ್ ಶಿಂಬು ಆಲಿಯಾಸ್ ಟಿ. ಆರ್. ಶಿಲಬರಸನ್ ಈ ಹಾಡಿನ ಹಿಂದಿರುವ ಮ್ಯಾಜಿಕ್ ದಂಡ. ಶಿಂಬು ಈಗಾಗಲೇ ಈ ಹಾಡನ್ನು ಸಾಮಾಜಿಕ ತಾಣಗಳೆಂದು ಫೇಮಸ್ ಆದ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹಾಕಿದ್ದಾರೆ. ಪ್ರೀತಿಯನ್ನು ಹಂಬಲಿಸುವ ಮನಸ್ಸುಗಳು ಈಗಾಗಲೇ ಸಾಕಷ್ಟು ಕ್ಲಿಕ್ ಮಾಡಿಕೊಂಡು ಹೋಗಿದ್ದಾರೆ ಎನ್ನುವುದು ರೆಕಾರ್ಡ್ ಬುಕ್ ಹೇಳುತ್ತಿದೆ.
ಶಿಂಬು ತನ್ನ ಫೇಸ್ ಬುಕ್‌ನಲ್ಲಿ ಹೇಳಿಕೊಂಡಿರುವಂತೆ : ಪ್ರೀತಿಯ ಮಾಧ್ಯಮ ಬಂಧುಗಳಲ್ಲಿ ಕೆಲವೊಂದು ವಿಚಾರವನ್ನು ಹೇಳ ಬಯಸುತ್ತೇನೆ. ಖ್ಯಾತ ಪಾಪ್ ಗಾಯಕಿ ಶಕೀರಾ ‘ಪೋಡಾ- ಪೋಡಿ’ ಎಂದು ಹಾಡು ಹೇಳಿಕೊಂಡು ಕುಣಿದಾಡೋದಿಲ್ಲ. ಅದಕ್ಕಾಗಿ ನಾವೊಂದು ಲವ್ ಆಂಥೆಮ್ ಸಿದ್ಧಪಡಿಸಿದ್ದೇವೆ. ಇದು ಬರೀಯ ಪ್ರೀತಿಯ ಹಾಡಲ್ಲ. ಇದೊಂದು ವಿಶ್ವ ಶಾಂತಿಯನ್ನು ಬಯಸುವ ಹಾಡು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನೋದು ನನ್ನ ಅಭಿಪ್ರಾಯ. ಯುವಜನತೆ ಈ ಹಾಡಿಗೆ ಧ್ವನಿಗೂಡಿಸುತ್ತಾರೆ ಎನ್ನುವುದು ನನ್ನ ನಂಬಿಕೆ. ನಾವು ಭಾರತೀಯರು/ ತಮಿಳರೆಂದು ಹೆಮ್ಮೆಪಡಿ. ಎಲ್ಲರೂ ಬಯಸೋದು ಪ್ಯಾರ್, ಪ್ರೇಮ್, ಕಾದಲ್ ಹಾಗೂ ಎಲ್ಲರ ಸಹಕಾರಕ್ಕೂ ನನ್ನ ಧನ್ಯವಾದಗಳು. ನೀವು ಇಲ್ಲದೇ ನಾನಿಲ್ಲ....
ಹಾಡಿನಲ್ಲಿ ಏನಿದೆ ಅಂತೀರಾ..?
ವಿಶ್ವ ಶಾಂತಿ, ಪ್ರೇಮಕ್ಕಾಗಿ ತುಡಿಯುವ ಮನಸ್ಸುಗಳು ಈಗ ಬಹಳ ವಿರಳವಾಗುತ್ತಿದೆ. ಅದರಲ್ಲೂ ಒಬ್ಬರು ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವ ಸ್ಥಿತಿ ಇಲ್ಲದೇ ಹೋಗಿದೆ. ಇಂತಹ ಸಮಯದಲ್ಲಿ ವಿಶ್ವವೇ ಶಾಂತಿ, ಪ್ರೇಮವನ್ನು ಬಯಸುವ ಗೀತೆ ಬೇಕಾಗಿದೆ ಎನ್ನೋದು ನನ್ನ ಬಹಳ ದಿನಗಳ ಕನಸ್ಸು ಎಂದು ಶಿಂಬು ತನ್ನ ಫೇಸ್‌ಬುಕ್‌ನಲ್ಲಿ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.
ಕಾಲಿವುಡ್‌ನ ಹಾಡಿನಿಂದ ವಿಶ್ವ ಪ್ರೇಮ ಸಾಧ್ಯನಾ..ಎನ್ನುವ ಪ್ರಶ್ನೆಗೆ ಶಿಂಬು ಕೊಡುವ ಉತ್ತರ ಇಲ್ಲಿದೆ: ಈ ಹಾಡಿನಿಂದ ವಿಶ್ವ ಶಾಂತಿ, ಪ್ರೇಮ ನಿರ್ಮಾಣವಾಗುತ್ತದೆ ಎನ್ನುವ ಪ್ರಶ್ನೆಗೆ ನನ್ನ ಬಳಿ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ ಇಂತಹ ಪ್ರಯೋಗಗಳು ಮುಂದೆ ಕೂಡ ನಡೆಯಲಿ ಎನ್ನುವ ಸದಾಶಯ ನನ್ನದು. ಹೊಸ ಯೋಚನೆ, ಚಿಂತನೆಗಳು ಯುವಜನರಲ್ಲಿ ಇನ್ನಷ್ಟೂ ಮೂಡಿ ಬರಲಿ ಎನ್ನುವ ಕಾರಣಕ್ಕೆ ಈ ಹಾಡನ್ನು ಸಿದ್ಧಪಡಿಸಿದ್ದೇನೆ ಎನ್ನುವುದು ಶಿಂಬು ಮಾತು.
ಈ ಹಾಡಿನ ಸಂಪೂರ್ಣ ಹೊಣೆಗಾರಿಕೆಯನ್ನು ಎಲಾನ್ ಮೋರಿಸನ್ ವಹಿಸಿಕೊಂಡಿದ್ದಾರೆ. ಈಗಾಗಲೇ ಎಲಾನ್ ಹೊಸ ಹಾಡುಗಾರರನ್ನು ಹುಡುಕಾಡಿಕೊಂಡು ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹಾಡಿಗೆ ದೃಶ್ಯಗಳನ್ನು ಪೋಣಿಸುವ ಕೆಲಸ ಲಾಸ್ ಏಂಜೇಲಿಸ್ ಸ್ಟುಡಿಯೋದಲ್ಲಿ ನಡೆದಿತ್ತು. ಟೋಟಲಿ ಈ ಹಾಡು ಲೋಕಲ್ ಲೆವಲ್‌ನಲ್ಲಿ ಸಿದ್ಧಪಡಿಸಿಕೊಂಡಿದ್ದರೂ ಕೂಡಾ ಇಂಟರ್‌ನ್ಯಾಷನಲ್ ಲೆವಲ್‌ನಲ್ಲಂತೂ ಹೆಸರು ಮಾಡುತ್ತೆ ಎನ್ನುವ ಧೈರ‍್ಯ ಶಿಂಬು ಮನಸ್ಸಿನಲ್ಲಿ ಬಂದು ಕೂತಿದೆ. ಟೋಟಲಿ ಈ ವರ್ಷವಂತೂ ಈ ಹಾಡಿನ ಗುಂಗು ಕಿವಿಯಲ್ಲಿ ಕೇಳಿಸುವುದಂತೂ ಖಾಯಂ ಆಗಿದೆ ಬಿಡಿ.
(vk lvk puravani publised dis article 0n 10.2.2012)

ಕಾಲಿವುಡ್‌ನಲ್ಲಿ ಕುಡ್ಲದ ಪೊಣ್ಣು ಕೊಲೈಕಾರನ್ ಹುಡುಗಿ



ಕಾಲಿವುಡ್‌ನಲ್ಲಿ ಕೊಲೈಕಾರನ್ ಸಿನ್ಮಾ ಸೂಪರ್ ಆಗಿ ಥಿಯೇಟರ್‌ನಲ್ಲಿ ಓಡಲು ಆರಂಭ ಮಾಡಿದೆ. ಈ ಚಿತ್ರದ ನಾಯಕ ಮೈನಾ ಖ್ಯಾತಿಯ ವಿದಾರ್ಥ್ ನಾಯಕ. ಕುಡ್ಲದ ಪೊಣ್ಣು(ಹೆಣ್ಣು) ಸಂಚಿತಾ ಶೆಟ್ಟಿ ನಾಯಕಿ. ಕನ್ನಡದಲ್ಲಿ ಅವಕಾಶ ವಂಚಿತೆ ಸಂಚಿತಾ ಕಾಲಿವುಡ್‌ನಲ್ಲಿ ಅದೃಷ್ಟ ಬಾಚಿದ್ದು ಮಜಬೂತ್ ಕತೆ.

ಗ್ಲ್ಯಾಮ್ ಲುಕ್ ಯಾವ ಕಡೆನೂ ನೋಡಿದರೂ ಮಿಂಚು ಹರಿಸುವ ಬ್ಯೂಟಿ. ಜಾಸ್ತಿ ಬಾಡಿ ವೈಟ್ ಇಲ್ಲದ ಈ ಹುಡುಗಿ ಕಾಲಿವುಡ್‌ನಲ್ಲಿ ಓಡಲು ರೆಡಿಯಾದ ಚಿಗರೆ. ಕನ್ನಡದ ನೀರು ಕುಡಿದು ಬೆಳೆದ ಹುಡುಗಿ ಈಗ ಕಾಲಿವುಡ್ ಸಿನ್ಮಾ ರಂಗದಲ್ಲಿ ಮೃಷ್ಟಾನ್ನ ಭೋಜನ ಸವಿಯುವ ಚಾನ್ಸ್ ಸಿಕ್ಕಿದೆ. ಆದರೆ ಕನ್ನಡದಲ್ಲಿ ಸಿಗಬೇಕಾದ ಮಣೆ ಈಗ ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಕೊಟ್ಟಿದೆ ಎನ್ನೋದು ಗಮನಿಸಬೇಕಾದ ವಿಷ್ಯಾ ಅಲ್ವಾ.. ಮಾರಾಯ್ರೆ..?
ಕನ್ನಡದ ಬಹುತೇಕ ಯುವ ನಟಿಯರು ಇದೀಗ ಪರಭಾಷೆ ಚಿತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ! ಅದಕ್ಕೆ ಕಾರಣ, ‘ಕನ್ನಡದಲ್ಲಿ ಸಿಗದ ಅವಕಾಶ’ ಎಂಬುದು ಅಲ್ಲಿಗೆ ಹೊರಟವರ ಮಾತು. ಈಗಾಗಲೇ ಕನ್ನಡದ ಬೆರಳೆಣಿಕೆಯಷ್ಟು ನಟಿಮಣಿಗಳು ತಮಿಳು, ತೆಲುಗು ಚಿತ್ರರಂಗದತ್ತ ಮುಖಮಾಡಿರುವುದುಂಟು. ಅಷ್ಟೇ ಅಲ್ಲ, ಅಲ್ಲಿತಕ್ಕಮಟ್ಟಿಗೆ ಒಂದಷ್ಟು ಸುದ್ದಿಯಾಗಿರುವುದೂ ದಿಟ.
ಈಗ ಕುಡ್ಲದ ಪೊಣ್ಣು( ಹೆಣ್ಣು) ಕನ್ನಡತಿ ಸಂಚಿತಾ ಶೆಟ್ಟಿ ಮೆಲ್ಲನೆ ಸುದ್ದಿಯಾಗುತ್ತಿರುವ ಬೆಡಗಿ. ಕನ್ನಡದಲ್ಲೇ ಒಳ್ಳೆಯ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂಬ ಮಹಾದಾಸೆಯಲ್ಲಿದ್ದ ಸಂಚಿತಾ ಶೆಟ್ಟಿಗೆ ಇಲ್ಲಿ, ಅಷ್ಟೇನೂ ಅದೃಷ್ಟ ಹುಡುಕಿ ಬರಲಿಲ್ಲ. ಹಾಗೊಮ್ಮೆ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದೇ ತಡ, ಅವಕಾಶಗಳು ಒಂದರ ಮೇಲೊಂದರಂತೆ ಹರಿದು ಬರುತ್ತಿವೆ ಎನ್ನೋದು ಅವರ ಮಾತು.
ಇಷ್ಟಕ್ಕೂ ಯಾರೂ ಈ ಸಂಚಿತಾ ಶೆಟ್ಟಿ ಎಂಬ ಪ್ರಶ್ನೆ ಮೂಡೋದು ಸಹಜ. ಸಂಚಿತಾ ಶೆಟ್ಟಿ ಅಪ್ಪಟ ಕನ್ನಡತಿ. ಈ ಹಿಂದೆ ಬಿಡುಗಡೆಯಾದ ‘ಉಡ’ ಮತ್ತು ‘ಭಯ ಡಾಟ್ ಕಾಮ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಬಿಡುಗಡೆಯಾಗದ ‘ಗಗನ ಚುಕ್ಕಿ’ ಎಂಬ ಚಿತ್ರದಲ್ಲೂ ಸಂಚಿತಾ ಶೆಟ್ಟಿ ನಾಯಕಿ. ಸಂಚಿತಾ ಶೆಟ್ಟಿ ಕಾಲಿವುಡ್‌ನ ‘ಕೊಲೈಕಾರನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಯಶಸ್ವಿ‘ಮೈನಾ’ ಚಿತ್ರದ ನಾಯಕ ವಿದಾರ್ಥ್ ನಾಯಕ. ಇನ್ನು ತಮಿಳ್ ಸೆಲ್ವನ್ ನಿರ್ದೇಶಕರು.
ಈ ಚಿತ್ರ ಸಂಕ್ರಾಂತಿ ದಿನದಂದು ತೆರೆಕಂಡು ತಮಿಳುನಾಡಿನಾದ್ಯಂತ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಈ ಮೂಲಕ ಸಂಚಿತಾ ಶೆಟ್ಟಿಗೆ ತಮಿಳು ಚಿತ್ರರಂಗದಲ್ಲಿ ಇನ್ನಿಲ್ಲದ ಹೊಗಳಿಕೆಗಳ ಮಹಾಪೂರವೇ ಹರಿದುಬಂದಿದೆ. ಅಷ್ಟೇ ಅಲ್ಲ, ಇದೀಗ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿವೆಯಂತೆ.
‘ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಕ್ಕೂ ಈಗ ಸಾರ್ಥಕವಾಗಿದೆ’ ಎಂದು ಖುಷಿಯಿಂದಲೇ ಹೇಳಿಕೊಳ್ಳುವ ಸಂಚಿತಾ ಶೆಟ್ಟಿ, ನನಗೆ, ಕನ್ನಡದಲ್ಲೇ ಕಲಾವಿದೆಯಾಗಿ ಗುರುತಿಸಿಕೊಳ್ಳುವ ಹಂಬಲವಿದೆ. ಆದರೆ, ಇಲ್ಲಿ ನನಗೆ ಸರಿಯಾದ ಅವಕಾಶಗಳೇ ಸಿಗಲಿಲ್ಲ. ಸಿಕ್ಕರೂ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂತು. ಕಥೆಯೂ ಚೆನ್ನಾಗಿತ್ತು. ಅಲ್ಲಿಯೂ ಅದೃಷ್ಟ ಪರೀಕ್ಷೆಗಿಳಿಯೋಣ ಅಂದುಕೊಂಡು ಎಂಟ್ರಿಕೊಟ್ಟೆ. ಅದೃಷ್ಟ ನನ್ನ ಪಾಲಿಗಿತ್ತು. ಈಗ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ನನಗೂ ಹಲವು ನಿರ್ದೇಶಕರಿಂದ ಕರೆ ಬರುತ್ತಿದೆ. ಸದ್ಯಕ್ಕೆ, ಮತ್ತೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದೇನೆ. ಕಥೆ ಮತ್ತು ಪಾತ್ರ ಚೆನ್ನಾಗಿದೆ. ಫೆಬ್ರವರಿಯಲ್ಲಿ ಶುರುವಾಗಲಿದೆ ಎಂದಷ್ಟೇ ಹೇಳುತ್ತಾರೆ ಸಂಚಿತಾ ಶೆಟ್ಟಿ.
ನಾನು ತಮಿಳು ಚಿತ್ರಗಳಲ್ಲಿ ನಟಿಸಿದ್ದರೂ, ಅಲ್ಲಿ ಎಷ್ಟೆ ಬ್ಯುಜಿಯಾದರೂ, ನನ್ನ ಮಾತೃಭಾಷೆ ಮರೆಯೋದಿಲ್ಲ. ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶಸಿಕ್ಕರೆ ಖಂಡಿತ ಬಿಡುವುದಿಲ್ಲ. ನಾನು ಮೊದಲು ನಟಿ ಆಗಿ ಗುರುತಿಸಿಕೊಂಡಿದ್ದು ಕನ್ನಡ ಚಿತ್ರದ ಮೂಲಕ. ನನಗೇ ಕನ್ನಡವೇ ಕಂಫರ್ಟ್. ತಮಿಳು ಗೊತ್ತಿರದ ಭಾಷೆ. ಕೊಂಚ ಕಷ್ಟವಾಗುತ್ತಿದೆ. ಆದರೂ, ನೆಲೆ ಕಂಡುಕೊಳ್ಳುವ ಉದ್ದೇಶದಿಂದ ತಮಿಳು ಭಾಷೆ ಕಲಿತುಕೊಂಡಿದ್ದೇನೆ. ಅದೇನೆ ಇದ್ದರೂ ಕನ್ನಡವೇ ನನಗೆ ಅಚ್ಚುಮೆಚ್ಚು ಎನ್ನುತ್ತಲೇ ಇಲ್ಲಿನ ಅವಕಾಶವನ್ನು ಎದುರು ನೋಡುತ್ತಾರೆ ಸಂಚಿತಾ. ಟೋಟಲಿ ಕನ್ನಡದ ಹುಡುಗಿ ಸಂಚಿತಾ ಪಕ್ಕದ ಕಾಲಿವುಡ್‌ನಲ್ಲಿ ಮಿಂಚುತ್ತಿರುವುದು ಮಾತ್ರ ಗ್ರೇಟ್ ವಿಷ್ಯಾ ಅಲ್ವಾ..?
.....
ಮಣಿರತ್ನಂ ಎಂದರೆ ಇಷ್ಟ
ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಎಂದರೆ ಸಂಚಿತಾಳಿಗೆ ತುಂಬಾನೇ ಇಷ್ಟ. ಯಾವುದೇ ಚಿತ್ರದ ಶೂಟಿಂಗ್ ಇಲ್ಲದ ಸಮಯದಲ್ಲಿ ಮನೆಯಲ್ಲಿ ಕೂತಿ ಮಣಿ ನಿರ್ದೇಶನದ ಚಿತ್ರಗಳನ್ನು ನೋಡುವುದು ಎಂದರೆ ಸಂಚಿತಾಳಿಗೆ ಬರೀ ಖುಷಿ. ಅದರಲ್ಲೂ ಬಾಂಬೆ, ರೋಜಾ, ದಳಪತಿ ಚಿತ್ರಗಳನ್ನು ಹತ್ತು ಹತ್ತು ಬಾರಿ ನೋಡಿಕೊಂಡು ಆ ಚಿತ್ರಗಳ ಪಾತ್ರಗಳಂತೆ ನಟಿಸುವುದಿದೆ. ಸಿನ್ಮಾ ಬದುಕಿನಲ್ಲಿ ಮಣಿರತ್ನಂರ ಒಂದು ಚಿತ್ರದಲ್ಲಾದರೂ ಬಣ್ಣ ಹಾಕಬೇಕು ಎನ್ನುವ ಉದ್ದೇಶ ಇಟ್ಟುಕೊಮಡಿರುವ ಸಂಚಿತಾಳಿಗೆ ಇತ್ತೀಚೆಗಿನ ಚಿತ್ರ ನಿರ್ದೇಶಕರಾದ ಮುರುಗದಾಸ್, ಗೌತಮ್ ಮೆನನ್ ಚಿತ್ರಗಳಲ್ಲೂ ಪಾತ್ರ ಮಾಡಬೇಕು ಎನ್ನುವ ಕನಸ್ಸಿದೆ.
....

ಜಲಪಾತದ ಕೆಳಗೆ ನಿಲ್ಲಬೇಕು
ಸಂಚಿತಾ ಶೆಟ್ಟಿ ತುಂಬಾನೇ ಫ್ರಿ ಟೈಮ್ ಇದ್ದಾಗ ಸಂಗೀತ ಕೇಳುತ್ತಾರೆ. ಚಾಟಿಂಗ್, ವಿಡಿಯೋ ಗೇಮ್ಸ್ ಅಂತ ಹೇಳಿಕೊಂಡು ಬ್ಯುಸಿಯಾಗಿರಲು ಬಯಸುತ್ತಾರೆ. ಇನ್ನೂ ಟೈಮ್ ಉಳಿದರೆ ಡ್ಯಾನ್ಸ್ ಮಾಡಲು ರೆಡಿಯಾಗುತ್ತಾರೆ. ಥ್ರಿಲ್ಲರ್ ಕಾದಂಬರಿಗಳನ್ನು ಓದುವುದು ಎಂದರೆ ಸಂಚಿತಾಳಿಗೆ ಬರೀ ಖುಷಿ. ಚಿತ್ರರಂಗದಲ್ಲಿ ನಟ ಸೂರ್ಯ ಹಾಗೂ ನಟಿ ರೇವತಿ ಎಂದರೆ ಅಪಾರ ಇಷ್ಟ. ಶಾಲಾ ಪ್ರವಾಸದ ಟೈಮ್‌ನಲ್ಲಿ ಜಲಪಾತದ ಕೆಳಗೆ ನಿಂತು ಸ್ನಾನ ಮಾಡುತ್ತಿದ್ದರಂತೆ. ಆದರೆ ಈಗ ಅಂತಹ ಚಾನ್ಸ್ ಸಿಗುತ್ತಿಲ್ಲ ಎನ್ನುವುದು ಅವರ ಕೊರಗು.
(vk lvk puravani published dis article on 8.02.2012)

ಬಾಲಿವುಡ್‌ನಲ್ಲಿ ಓಡುವ ಇಲಿ


ಟಾಲಿವುಡ್ ಸ್ಟಾರ್ ಇಲಿಯಾನಾ ಈಗ ಬಾಲಿವುಡ್‌ನಲ್ಲಿ ಒಂದೆರಡು ಚಿತ್ರಗಳಿಗೆ ಬುಕ್ ಆಗಿಲ್ಲ ಬರೋಬರಿ ಐದು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಬಾಲಿವುಡ್ ನಾಯಕಿಯರ ರೇಟಿಂಗ್ ಪಟ್ಟಿಯಲ್ಲಿ ಇಲಿ ಕೂಡ ಓಡುವ ಸಾಧ್ಯತೆ ದಟ್ಟವಾಗಿದೆ.

ಅದೃಷ್ಟ ಅಂದರೆ ಇದೇ ಕಣ್ರಿ. ಟಾಲಿವುಡ್‌ನಲ್ಲಿ ಓಡುತ್ತಿದ್ದ ಇಲಿಯನ್ನು ತಂದು ಕಾಲಿವುಡ್‌ಗೆ ಬಿಡಲಾಯಿತು. ಅಲ್ಲಿಂದ ಈಗ ಬಾಲಿವುಡ್‌ನಲ್ಲಿ ಓಡುತ್ತಿದೆ ಎಂದು ಟಾಲಿವುಡ್ ಪಡಸಾಲೆಯಲ್ಲಿ ಕೂತು ಮಸಾಲೆ ಹರಿಯುವ ಮಂದಿ ಮಾತಿಗೆ ಇಳಿಯುತ್ತಾರೆ. ಅಂದಹಾಗೆ ಟಾಲಿವುಡ್ ಸ್ಟಾರ್ ಇಲಿಯಾನಾ ಈಗ ಬಾಲಿವುಡ್‌ನಲ್ಲಿ ಒಂದು ಎರಡು ಚಿತ್ರಗಳಿಗೆ ಬುಕ್ ಆಗಿಲ್ಲ ಬರೋಬರಿ ಐದು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಬಾಲಿವುಡ್ ನಾಯಕಿಯರ ರೇಟಿಂಗ್ ಪಟ್ಟಿಯಲ್ಲಿ ಇಲಿ ಕೂಡ ಓಡುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತು ದಿಟವಾಗುವ ದಿನಗಳು ದೂರವಿಲ್ಲ.
ಅಂದಹಾಗೆ ಟಾಲಿವುಡ್ ನಟಿ ಇಲಿಯಾನಾ ಡಿ ಕ್ರೂಸ್ ಬಾಲಿವುಡ್‌ನಲ್ಲಿ ಹೇಗೆ ಚಾನ್ಸ್ ಪಡೆದುಕೊಂಡರು ಅಂತಾ ಕೇಳ್ತೀರಾ..? ಎಲ್ಲವೂ ‘ನನ್ಬನ್’ ಚಿತ್ರದ ಮ್ಯಾಜಿಕ್ ವರ್ಕ್. ಹಿಂದಿಯಲ್ಲಿ ಮೂಡಿ ಬಂದ ತ್ರಿ ಇಡಿಯಟ್ಸ್ ಚಿತ್ರವನ್ನು ಕಾಲಿವುಡ್‌ನ ಖ್ಯಾತ ಚಿತ್ರ ನಿರ್ದೇಶಕ ಶಂಕರ್ ಎತ್ತಿಕೊಂಡು ‘ನನ್ಬನ್’ ಎನ್ನುವ ಚಿತ್ರ ಮಾಡಿ ಗಲ್ಲಾಪೆಟ್ಟಿಗೆಯನ್ನು ದೋಚಿದ ಕತೆಯಲ್ಲಿಯೇ ಇಲಿಯಾನಾ ಕತೆ ಕೂಡ ಅಡಗಿ ಕೂತಿದೆ. ಹಿಂದಿಯಲ್ಲಿ ಕರೀನಾ ಮಾಡಿದ ಪಾತ್ರವನ್ನು ಇಲ್ಲಿ ಇಲಿಯಾನಾ ಮಾಡಿ ಪ್ರೇಕ್ಷಕ ವರ್ಗದ ಮನ ಗೆದ್ದಿದ್ದಾರೆ. ಇದೇ ಒಂದು ಪ್ರೇಕ್ಷಕರ ಪ್ರೀತಿಯ ಕಾರ್ಡ್ ಹಿಂದಿಯ ನಿರ್ದೇಶಕರ ಕಣ್ಣಿಗೆ ಬಿದ್ದು ಬಿಟ್ಟಿದೆ.
ಈಗಾಗಲೇ ಅನುರಾಗ್ ಬಸು ನಿರ್ದೇಶನದ ರಣಬೀರ್ ಕಪೂರ್ ಅಭಿನಯದ ಮೋಸ್ಟ್ ವೈಟೇಟ್ ಚಿತ್ರ ‘ಬರ್ಫಿ’ಯಲ್ಲಿ ಪ್ರಿಯಾಂಕಾಳಿಗೆ ಸಮಾನವಾದ ಪಾತ್ರವನ್ನು ಇಲಿಯಾನಾಗೂ ಕೊಡಲಾಗಿದೆ. ಮಿಲಾನ್ ತೂತ್ರಿಯಾ ನಿರ್ದೇಶನದ ‘ವನ್ಸ್ ಆಫನ್ ಎ ಟೈಮ್ ಇನ್ ಮುಂಬಯಿ-೨’ಯಲ್ಲಿ ಇಲಿಯಾನಾ ಖ್ಯಾತ ನಟಿ ಮಂದಾಕಿನಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಆಶೀಶ್ ಆರ್. ಮೋಹನ್ ನಿರ್ದೇಶನದ ಕಿಲಾಡಿ೭೮೬ ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ಲೀಡ್ ನಾಯಕಿಯಾಗಿ ಇಲಿ ಬಣ್ಣ ಹಚ್ಚಿಕೊಳ್ಳಲಿದ್ದಾರೆ.
ಇದರ ಜತೆಯಲ್ಲಿ ಇಮ್ರಾನ್ ಖಾನ್ ಹಾಗೂ ರಣಬೀರ್ ಕಪೂರ್‌ರ ಒಂದೊಂದು ಚಿತ್ರಗಳಿಗೆ ಈಗಾಗಲೇ ಇಲಿ ಬುಕ್ ಆಗಿದ್ದಾಳೆ. ಆದರೆ ಈ ಎರಡು ಚಿತ್ರಗಳಿಗೆ ಇನ್ನೂ ಕೂಡ ಚಿತ್ರೀಕರಣದ ಡೇಟ್ಸ್‌ಗಳು ಸ್ಪರ್ಧೆ ಕೊಡುತ್ತಿರುವುದರಿಂದ ೨೦೧೩ರಲ್ಲಿ ಚಿತ್ರದ ಚಿತ್ರೀಕರಣ ನಡೆಯುವ ಸಾಧ್ಯತೆಗಳು ಇವೆ ಎನ್ನೋದು ಇಲಿಯ ಆಪ್ತರ ಮಾತು. ಅದರಲ್ಲೂ ಇಲಿ ಟಾಲಿವುಡ್, ಕಾಲಿವುಡ್‌ಗಳಲ್ಲಿ ಒಪ್ಪಿಕೊಂಡ ಒಂದೆರಡು ಚಿತ್ರಗಳು ಬಾಕಿ ಉಳಿದಿದೆ. ಟೋಟಲಿ ಇಲಿ ಎಲ್ಲಕಡೆಗೂ ಸಲ್ಲುವ ನಟಿಮಣಿಯಾಗಿದ್ದಾರೆ ಎಂಬ ಮಾತು ಎಲ್ಲ ಕಡೆಯಿಂದಲೂ ಕಿವಿಗೆ ಬಡಿಯುವ ದಿನಗಳು ದೂರವಂತೂ ಉಳಿದಿಲ್ಲ.
ಈಗಾಗಲೇ ಕಾಲಿವುಡ್‌ನಲ್ಲಿ ನಟಿಸಿದ ‘ನನ್ಬನ್’ ಚಿತ್ರದ ಸಕ್ಸಸ್ ರೇಟ್ ದುಪ್ಪಟ್ಟು ವೇಗದಲ್ಲಿ ಹೋಗುತ್ತಿರುವುದರಿಂದ ಕಾಲಿವುಡ್‌ನಲ್ಲೂ ಇಲಿಗೆ ಬೇಡಿಕೆ ಹೆಚ್ಚಾಗಿದೆ. ವಿಕ್ರಂ, ಜೀವಾ, ಸೂರ್ಯರ ಚಿತ್ರಗಳಿಗೆ ಇಲಿಯೇ ಬೇಕು ಎಂದು ನಿರ್ದೇಶಕರು ತುದಿ ಕಾಲಿನಲ್ಲಿ ನಿಂತು ಬಿಟ್ಟಿದ್ದಾರೆ ಎನ್ನುವ ಮಾಹಿತಿ ಕಾಲಿವುಡ್ ಗಲ್ಲಿಯಿಂದ ಹೊರ ಬರುತ್ತಿದೆ. ಈ ಮೂಲಕ ಬಾಲಿವುಡ್‌ಗೆ ಸಮಾನವಾಗಿ ಪೈಪೋಟಿ ನೀಡಬಲ್ಲ ಕಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಇಲಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುವ ಜತೆಯಲ್ಲಿ ಬಾಲಿವುಡ್‌ನಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ನಿಂತು ಬಿಟ್ಟಿದ್ದಾಳೆ.
ಅನುರಾಗ್ ಬಸು ನಿರ್ದೇಶನದ ‘ಬರ್ಫಿ’ ಚಿತ್ರ ಒಂದೆರಡು ತಿಂಗಳಲ್ಲಿ ಥಿಯೇಟರ್‌ಗೆ ಬಂದು ಬೀಳಲಿದೆ. ಚಿತ್ರದಲ್ಲಿ ರಣ್‌ಬೀರ್ ಹಾಗೂ ಪ್ರಿಯಾಂಕಾ ಮಾನಸಿಕ ರೋಗಿಯ ಪಾತ್ರದಲ್ಲಿ ಕಾಣಿಸಿಕೊಂಡರೆ ಇಡೀ ಚಿತ್ರವನ್ನು ಓಡಿಸುವ ಕೀಲಿ ಕೈ ಇಲಿಯ ಪಾಲಿಗೆ ಬಂದಿದೆ. ಬಾಲಿವುಡ್‌ನಲ್ಲಿ ಇಲಿ ಅಭಿನಯಿಸುತ್ತಿರುವ ಮೊದಲ ಚಿತ್ರ ಇದಾಗಿದ್ದರಿಂದ ಇಲಿಯ ಅಭಿನಯ ಹಾಗೂ ಹಾಟ್‌ನೆಸ್‌ನ್ನು ಪ್ರೇಕ್ಷಕ ಮಹಾಪ್ರಭು ಯಾವ ರೀತಿಯಲ್ಲಿ ಸ್ವೀಕರಿಸುತ್ತಾನೆ ಎನ್ನುವ ಪ್ರಶ್ನೆ ಕೂಡ ಮಜಬೂತಾಗಿ ಎದುರುಗೊಳ್ಳಲಿದೆ. ಬರ್ಫಿಯಲ್ಲಿ ಇಲಿಯ ಅಭಿನಯ ವರ್ಕ್ ಆಯಿತು ಎಂದಾದರೆ ಎರಡು ವರ್ಷಕ್ಕಂತೂ ಇಲಿ ಸ್ಟಾರ್ ಪಟ್ಟದಿಂದ ಇಳಿಸಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಮಾತು ಕೂಡ ಜತೆಯಲ್ಲಿ ಹರಡಿ ಕೂತಿದೆ.
(vk lvk puravani published dis article on 10.2.2012)