Wednesday, September 28, 2011

ಸ್ಟೀವನ್ ರೇಗೊಗೆ ಕಡಂದಲೆ ಪ್ರಶಸ್ತಿ


ಯುಗಪುರುಷ ಹಾಗೂ ವಿಜಯಾ ಕಲಾವಿದರು ನೀಡುವ ಕೆ.ಜೆ.ಶೆಟ್ಟಿ ಕಡಂದಲೆ ಪ್ರಶಸ್ತಿಗೆ ವಿಜಯ ಕರ್ನಾಟಕದ ಮಂಗಳೂರು ಆವೃತ್ತಿಯ ಉಪಸಂಪಾದಕ ಸ್ಟೀವನ್ ರೇಗೊ ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕದಲ್ಲಿ ೨೦ಜುಲೈ೨೦೧೦ರಂದು ಪ್ರಕಟವಾಗಿದ್ದ ಸ್ಟೀವನ್ ರೇಗೊ ಅವರ ‘ಮಲ್ಲಿಗೆಯ ಕಟು ವಾಸನೆ, ಟ್ರ್ಯಾಜಿಡಿ ಊರು ಶಂಕರಪುರ ’ ವರದಿಯು ತೀರ್ಪುಗಾರರ ಗಮನ ಸೆಳೆದಿದೆ. ಅತಿಯಾದ ಕೀಟನಾಶಗಳ ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಅವರ ಲೇಖನವು ಗ್ರಾಮೀಣ ವರದಿಗಾರಿಕೆ ಹಾಗೂ ನಗರಾಭಿವೃದ್ಧಿ ಸೇತುವಾಗಿತ್ತು. ಪತ್ರಕರ್ತ ದಿವಂಗತ ಕೆ.ಜೆ.ಶೆಟ್ಟಿ ಕಡಂದಲೆ ಸ್ಮರಣಾರ್ಥ ನೀಡುವ ಪ್ರಶಸ್ತಿಯು ೧೫ ಸಾವಿರ ರೂ. ನಗದು, ಫಲಕ ಹಾಗೂ ಸನ್ಮಾನ ಪತ್ರ ಒಳಗೊಂಡಿದೆ. ಅ.೨ರಂದು ಸಂಜೆ ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.

Friday, September 23, 2011

ಜ್ಯೋತಿಷ್ಯದಲ್ಲೂ ಸೀ- ರಿಯಲ್ಲೂ !



ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಸಿದ ಕಥಾ ವಸ್ತುವನ್ನು ಇಟ್ಟುಕೊಂಡು ತುಳುವಿನಲ್ಲಿ ಧಾರಾವಾಹಿಯೊಂದು ನಿರ್ಮಾಣವಾಗುತ್ತಿದೆ. ರಾಷ್ಟ್ರಮಟ್ಟದ ಕಿರುಚಿತ್ರ ನಿರ್ದೇಶಕ ಎ.ವಿ.ಜಯರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದ ಮಾಹಿತಿ ಮುಂದೆ ಓದಿ ಬಿಡಿ.
ಕರಾವಳಿ ಕರ್ನಾಟಕ ಭಾಗದಲ್ಲಿ ಧಾರಾವಾಹಿಗೂ ಒಂದು ಸುಂದರ ಬದುಕಿದೆ ಎಂದು ತೋರಿಸಿಕೊಟ್ಟ ಮೊದಲ ಧಾರಾವಾಹಿ ‘ಪಿರ್ಕಿಬಿತ್ತಿಲ್’ ಎನ್ನುವುದು ಬಹಳ ಮಂದಿಗೆ ಗೊತ್ತು. ‘ಪಿರ್ಕಿಬಿತ್ತಿಲ್’ ಉಂದೆಟ್ ಒಂಜೆಕ್ಲಾ ಸಮ ಇಜ್ಜಿ ಎಂಬ ಟ್ಯಾಗ್ ಲೈನ್ ಹೊತ್ತುಕೊಂಡು ಬಂದ ತುಳು ಧಾರಾವಾಹಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೊಸ ಸಂಚಲನವನ್ನೇ ಮೂಡಿಸಿತ್ತು.
‘ಪಿರ್ಕಿ ಬಿತ್ತಿಲ್’ ಧಾರಾವಾಹಿ ಖಾಸಗಿ ವಾಹಿನಿಯಲ್ಲಿ ೮೮ಕ್ಕೂ ಅಕ ಸಂಚಿಕೆಗಳ ಮೂಲಕ ಜನಮನ ಗೆದ್ದಿತ್ತು. ನಮ್ಮ ಸುತ್ತಮುತ್ತಲೂ ಪ್ರತಿನಿತ್ಯ ನಡೆಯುವ ವಿದ್ಯಮಾನಗಳನ್ನೇ ವಿಡಂಬನಾತ್ಮಕ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ಯಶಸ್ವಿಯಾಗಿತ್ತು. ತುಳು ಧಾರವಾಹಿಗಳು ೧೦ ಸಂಚಿಕೆ ಕಳೆಯುವಷ್ಟರಲ್ಲೇ ಮರೆಯಾಗುತ್ತಿದ್ದ ಆ ಕಾಲದಲ್ಲಿ ‘ಪಿರ್ಕಿಬಿತ್ತಿಲ್’ ಹೊಸ ದಾಖಲೆಯನ್ನು ಸೃಷ್ಟಿ ಮಾಡಿತ್ತು.
ಈಗ ಇದೇ ತಂಡ ಹೊಸ ಪ್ರಯತ್ನಕ್ಕೆ ಕೈಹಾಕುತ್ತಿದೆ. ಜ್ಯೋತಿಶಾಸ್ತ್ರಕ್ಕೆ ಸಂಬಂಸಿದ ಕಥಾ ವಸ್ತುವೊಂದನ್ನು ಧಾರಾವಾಹಿಯಾಗಿಸಿ ಉಪಗ್ರಹವಾಹಿನಿಯೊಂದರಲ್ಲಿ ಪ್ರಸಾರ ಮಾಡುವ ಪ್ರಯತ್ನದಲ್ಲಿದೆ. ಆ ನಿಟ್ಟಿನಲ್ಲಿ ಇದೀಗ ನಟನಟಿಯರ ಆಯ್ಕೆ ಪ್ರಕಿಯೆ ನಡೆಯುತ್ತಿದೆ. ಹೊಸಮುಖಗಳಿಗೆ ಮೆಣೆ ಹಾಕುವ ಮೂಲಕ ಪ್ರತಿಭಾನ್ವೇಷಣೆ ಮಾಡಬೇಕು ಎನ್ನೋದು ‘ಪಿರ್ಕಿಬಿತ್ತಿಲ್’ ನಿರ್ದೇಶಕ ಎ.ವಿ.ಜಯರಾಜ್ ಅವರ ಮಾತು.
ಸಾವಿನ ನೆರಳಲ್ಲಿ ಬದುಕು:
ಜ್ಯೋತಿಷ್ಯ ಶಾಸ್ತ್ರದಲ್ಲಿ ವಸುಪಂಚಕ ಎನ್ನುವ ಒಂದು ನಕ್ಷತ್ರದ ಕತೆಯನ್ನು ಮೂಲವಾಗಿ ಇಟ್ಟುಕೊಂಡು ಇಡೀ ಸೀರಿಯಲ್ಲೂ ಬಿಚ್ಚಿಕೊಳ್ಳಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗುವ ಕೊನೆಯ ನಾಲ್ಕುವರೆ ನಕ್ಷತ್ರಗಳಲ್ಲಿ (ಧನಿಷ್ಟಾದ ಉತ್ತರಾರ್ಧ, ಶತಭಿಷಾ, ಪೂರ್ವಾಭಾದ್ರಾ, ಉತ್ತರಾಭಾದ್ರ, ರೇವತಿ) ಯಾರಾದರೂ ಮರಣಿಸಿದರೆ ‘ಧನಿಷ್ಟಾ ಪಂಚಕ’ಯೋಗ ಅಥವಾ ‘ವಸುಪಂಚಕ’ ಯೋಗ ಬಂದಿದೆ ಎಂದರ್ಥ. ಇದರ ಫಲ ವಂಶಾರಿಷ್ಟ. ಆತನ ಅಥವಾ ಆಕೆಯ ವಂಶದ ಐದು ಜನಕ್ಕೆ ಸದ್ಯೋ ಭವಿಷ್ಯದಲ್ಲಿ ಮರಣ ಸಂಭವ ಇದೆ ಎನ್ನುವುದು ಈ ನಕ್ಷತ್ರದ ಮಹಿಮೆ.
ವಸುಪಂಚಕ ತುಳು ಸಾಮಾಜಿಕ ಧಾರಾವಾಹಿ. ಭಯಾನಕ, ಭೀಭತ್ಸ, ಕರುಣಾರಸಗಳ ಸಮ್ಮಿಲನದೊಂದಿಗೆ ಕ್ಷಣಕ್ಷಣಕ್ಕೂ ರೋಮಾಂಚನ, ಕುತೂಹಲಕಾರಿಯಾಗಿ ಮೂಡಿ ಬರಲಿದೆ ಎನ್ನೋದು ನಿರ್ದೇಶಕ ಎ.ವಿ. ಜಯರಾಜ್ ಅವರ ಮಾತು. ಸುರತ್ಕಲ್ನ ಜಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಚಿತ್ರೀಕರಣಗೊಳ್ಳಲಿರುವ ಈ ಧಾರಾವಾಹಿಯ ಛಾಯಾಗ್ರಹಣವನ್ನು ಮಹಾಬಲೇಶ್ವರ ಹೊಳ್ಳ, ಸಂಕಲನ ಸುಬ್ರಹ್ಮಣ್ಯ ಹೊಳ್ಳ ಮಾಡುತ್ತಿದ್ದಾರೆ.
ಧಾರಾವಾಹಿಯ ಚಿತ್ರಕಥೆ-ಸಂಭಾಷಣೆ ಮಹೇಶ್ ಮೂರ್ತಿ ಸುರತ್ಕಲ್ ಬರೆಯಲಿದ್ದಾರೆ. ರಾಷ್ಟ್ರೀಯ ಪುರಸ್ಕಾರ ವಿಜೇತ ಕಿರುಚಿತ್ರ ನಿರ್ದೇಶಕ ಎ.ವಿ. ಜಯರಾಜ್ ಕತೆ- ನಿರ್ದೇಶನದ ಕುರ್ಚಿಯಲ್ಲಿ ಕೂರಲಿದ್ದಾರೆ. ಈ ಮೂಲಕ ತುಳು ಧಾರಾವಾಹಿ ಲೋಕದಲ್ಲಿ ಮತ್ತೊಂದು ಮಿಂಚು ಕಾಣಿಸಿಕೊಳ್ಳೋದು ಗ್ಯಾರಂಟಿ ಎನ್ನಬಹುದು ಅಲ್ವಾ..?

Thursday, September 22, 2011

ರಾಗಿಣಿ ತೆಗೆದ ತುಪ್ಪ !


ಸ್ಯಾಂಡಲ್ವುಡ್ ಹಾಟ್ ಹುಡುಗಿ ರಾಗಿಣಿ ದ್ವಿವೇದಿ ಈಗ ಹಾಲಿನಿಂದ ತುಪ್ಪ ಮಾಡೋದನ್ನು ಹೇಳಿಕೊಡಲಿದ್ದಾರೆ. ಸೆ.೧೬ರಂದು ತೆರೆಗೆ ಬಂದು ಬೀಳುವ ‘ಕಳ್ಳ ಮಳ್ಳ ಸುಳ್ಳ’ ಚಿತ್ರದಲ್ಲಿ ರಾಗಿಣಿ ‘ತುಪ್ಪ ಬೇಕಾ ತುಪ್ಪ ’ ಎಂಬ ಹಾಡಿನ ಮೂಲಕ ಪಡ್ಡೆ ಹೈಕಳನ್ನು ಉತ್ತುಂಗಕ್ಕೆ ಏರಿಸುವ ಯೋಜನೆ ರೂಪಿಸಿದ್ದಾರೆ. ಈಗಾಗಲೇ ಹಾಡು ಮ್ಯೂಸಿಕ್ ಚಾನೆಲ್ಗಳಲ್ಲಿ ಹವಾ ಎಬ್ಬಿಸಿದೆ ಮುಂದೆ ನೀವೇ ನೋಡಿ ಬಿಡಿ.

ಸ್ಯಾಂಡಲ್ವುಡ್ ಹಾಟ್ ಆಂಡ್ ಬೋಲ್ಡ್ ಹುಡುಗಿ ರಾಗಿಣಿ ದ್ವಿವೇದಿ ಈಗ ಹಾಲಿನ ಬ್ರಾಂಡ್ ಅಂಬಾಸೀಡರ್ನಿಂದ ತುಪ್ಪದ ಅಂಬಾಸೀಡರ್ ಆಗಿ ಶಿಫ್ಟ್ ಆಗಿದ್ದಾರೆ ಎನ್ನುವ ಮಾತು ಗಾಂನಗರದ ಗಲ್ಲಿಯಲ್ಲಿ ಓಡುತ್ತಿದೆ. ಉದಯ ಪ್ರಕಾಶ್ ನಿರ್ದೇಶನದ ‘ಕಳ್ಳ ಮಳ್ಳ ಸುಳ್ಳ’ ಚಿತ್ರದ ‘ತುಪ್ಪ ಬೇಕಾ ತುಪ್ಪ’ದ ಹಾಡಿನಲ್ಲಿ ರಾಗಿಣಿ ಹಾಲಿನಿಂದ ತುಪ್ಪ ತೆಗೆದು ಪ್ರೇಕ್ಷಕರಿಗೆ ಕೊಟ್ಟಿದ್ದಾರೆ.
ಈಗಾಗಲೇ ಚಿತ್ರದ ಹಾಡು ಮ್ಯೂಸಿಕ್ ಚಾನೆಲ್ಗಳಲ್ಲಿ ಹರಿದು ಬರುತ್ತಿದೆ. ಗಾಯಕಿ ಜಯಶ್ರೀಯ ಕಂಠದಿಂದ ಹೊರ ಬಂದ ಈ ಹಾಡು ರಾಗಿಣಿ ತನ್ನ ಸುಂದರ ಮೈಮಾಟವನ್ನು ಎಗ್ಗಿಲ್ಲದೆ ಪ್ರದರ್ಶಿಸಿ, ಇಲ್ಲಿನ ಪಡ್ಡೆಗಳ ನಿದ್ದೆ ಗೆಡಿಸಲು ಬರುತ್ತಿದ್ದಾರೆ ಎನ್ನುವ ಸೂಚನೆ ಬಂದಿದೆ. ಕನ್ನಡದ ಮಟ್ಟಿಗೆ ಸಾಕಷ್ಟು ಹಾಟ್ ಹುಡುಗಿ ಎಂದೇ ಬಿಂಬಿತ ರಾಗಿಣಿ, ಸಖತ್ ಕಲರ್ಫುಲ್ ಆಗಿ ಮಿಂಚಿದ್ದಾರೆ ಎನ್ನುವ ಸುದ್ದಿ ಇದೆ.
ಇತ್ತೀಚೆಗೆ ಬಾಲಿವುಡ್ಗೆ ಬಂದು ಅಪ್ಪಳಿಸಿದ ಕಾಮೆಡಿ ಬೇಸ್ಡ್ ಚಿತ್ರ ‘ಡಬ್ಬಲ್ ಧಮಾಲ್’ನ ಮಲ್ಲಿಕಾ ಶೆರವಾತ್ರ ಸೆಕ್ಸಿ ಐಟಂ ಹಾಡು ‘ಜಿಲೇಬಿ ಬಾಯಿ’ ದಾಟಿಯಲ್ಲಿರುವ ಈ ಹಾಡು ಸಧ್ಯಕ್ಕಂತೂ ಕನ್ನಡ ಸಂಗೀತದ ಮಾರುಕಟ್ಟೆಯಲ್ಲಿ ಹೊಸ ಕಳೆ ತಂದಿದೆ.
‘ತುಪ್ಪ ಬೇಕಾ ತುಪ್ಪ. ನಾಟಿ ತುಪ್ಪ ಗಾಟಿ ತುಪ್ಪ. ಬಿಸಿ ಬಿಸಿ ತುಪ್ಪ. ಉಗುಳಂಗಿಲ್ಲ. ನುಂಗಂಗಿಲ್ಲ. ಬಾರಿ ಬಾರಿ ಶಾನೇ ತುಪ್ಪ’ ಎಂಬ ಹಾಡಿಗೆ ಸೆಕ್ಸಿ ಡ್ರೆಸ್ ಹಾಕಿ, ಮಾದಕತೆ ಹೆಚ್ಚಿಸುವಂತೆ ಸ್ಟೆಪ್ ಹಾಕಿದ್ದಾರೆ ರಾಗಿಣಿ. ಅಂದಹಾಗೆ ಇದೊಂದು ಐಟಂ ಸಾಂಗ್ನಂತೆ ಕಾಣಿಸಿಕೊಳ್ಳೋದಿಲ್ಲ. ಏನಿದ್ದರೂ ಕ್ಲಬ್ನಲ್ಲಿ ಚಿತ್ರೀಕರಣ ಮಾಡುವುದರಿಂದ ಇದನ್ನು ಕ್ಲಬ್ ಡ್ಯಾನ್ಸ್ನ ಮರ್ಯಾದೆ ಕೊಡಬಹುದು ಎನ್ನುವುದು ಗಾಂದಿನಗರದ ಮಾತು.
ಜಯಶ್ರೀ ಹಾಡಿರೋದರಿಂದ ಇಲ್ಲಿ ಕ್ಲಾಸಿಕಲ್ ಬೀಟ್ ಜತೆಯಲ್ಲಿ ದೇಸಿಯ ಸೊಗಡಿನ ಟಚ್ ಇದೆ. ಹಾಡಿನ ಉದ್ದಗಲಕ್ಕೂ ಮೊಡರ್ನ್ ಬೀಟ್ಗಳು ಅಲ್ಲಲ್ಲಿ ನುಸುಳಿಕೊಂಡಿರೋದರಿಂದ ಸಂಗೀತ ನಿರ್ದೇಶಕ ಪೌಲ್ ಅಲೆಕ್ಸ್ ಕನ್ನಡದಲ್ಲಿ ಈವರೆಗೆ ಬಂದಿರುವ ಹಾಡುಗಳಿಗಿಂತ ಕೊಂಚ ಭಿನ್ನವಾಗಿ ಈ ಹಾಡನ್ನು ಕೊಟ್ಟಿದ್ದಾರೆ ಎಂದು ಗಾಂನಗರದ ಮಂದಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಅದೇನ್ ವಿಚಾರ ಇದ್ದರೂ ಇರಲಿ ಬಿಡಿ. ಇತ್ತೀಚೆಗಂತೂ ಸ್ಯಾಂಡಲ್ವುಡ್ನಲ್ಲಿ ಇಂತಹ ನಾಯಕಿಯರು ಐಟಂ, ಕ್ಲಬ್ ಡ್ಯಾನ್ಸ್ನಲ್ಲಿ ಕುಣಿಯೋದು ಹೆಚ್ಚಾಗುತ್ತಿದೆ. ತೀರಾ ಇತ್ತೀಚೆಗೆ ಬಿಡುಗಡೆಯಾಗಿ ಓಡುತ್ತಿರುವ ಪ್ರೀತಂ ಗುಬ್ಬಿ ನಿರ್ದೇಶನದ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ಚಿತ್ರದಲ್ಲಿ ರಮ್ಯಾ ‘ಪದ್ಮಾವತಿ’ ಎನ್ನುವ ಹಾಡಿಗೆ ಸ್ಟೆಪ್ಟ್ ಹಾಕಿರೋದು ಇಲ್ಲಿ ಗಮನಿಸಬೇಕಾದ ಪಾಯಿಂಟ್.
ಇಂತಹ ಟ್ರೇಡ್ ಬರೀ ಬಾಲಿವುಡ್, ಕಾಲಿವುಡ್ನಲ್ಲಿ ಮಾತ್ರ ಓಡುತ್ತಿತ್ತು. ಈಗ ಸ್ಯಾಂಡಲ್ವುಡ್ನಲ್ಲೂ ಪ್ರೇಕ್ಷಕ ವರ್ಗವನ್ನು ತನ್ನ ಕಡೆ ಸೆಳೆಯುವ ತಂತ್ರಗಾರಿಕೆಯಾಗಿ ನಾಯಕಿಯರನ್ನು ಐಟಂ ಹಾಡಿನಲ್ಲಿ ಕುಣಿಸಲಾಗುತ್ತಿದೆ ಎನ್ನುವ ಮಾತಿದೆ. ಇಂತಹ ಹಾಡುಗಳಿಂದ ಚಿತ್ರ ಹಿಟ್ ಅಗುತ್ತೋ ಮುಗ್ಗರಿಸಿಕೊಂಡು ಬೀಳೂತ್ತೋ ಅದೆಲ್ಲ ಸೆಕೆಂಡರಿ ವಿಷ್ಯಾ ಆದರೆ ನಾಯಕಿರ ಡ್ಯಾನ್ಸ್ ನೋಡಿಕೊಂಡು ಖುಷಿ ಪಡುವ ಅಭಿಮಾನಿ ವರ್ಗವಂತೂ ಕ್ರಿಯೇಟ್ ಆಗಿರೋದು ದಿಟವಂತೆ.
ಅಂದಹಾಗೆ ರಾಗಿಣಿಯ ತುಪ್ಪದ ವಿಚಾರಕ್ಕೆ ಬರೋಣ. ರಾಗಿಣಿ ಕುಣಿಯುತ್ತಾ ಮಾರಾಟ ಮಾಡುವ ತುಪ್ಪದ ಹಾಡನ್ನು ಈಗ ಸಧ್ಯಕ್ಕೆ ಮ್ಯೂಸಿಕ್ ಚಾನೆಲ್ನಲ್ಲಿ ಕಾಣಬಹುದು. ಉಳಿದಂತೆ ರಾಗಿಣಿಯ ತುಪ್ಪದ ದರ್ಶನ ಪಡೆಯಬೇಕಾದರೆ ಸೆ.೧೬ರ ವರೆಗೆ ಕಾಯಬೇಕು. ಉಳಿದಂತೆ ತುಪ್ಪವನ್ನು ತಿಂದು ತೇಗೋದು ಪ್ರೇಕ್ಷಕರಿಗೆ ಬಿಟ್ಟ ವಿಚಾರ ಅಲ್ವಾ..?

Tuesday, September 20, 2011

ನಿವೇದಿತಾ ನಿವೇದನೆ


ಯಾಕೋ ಸಿನ್ಮಾ ಎನ್ನುವ ಜಗತ್ತಿನಲ್ಲಿ ಲುಕ್, ಆಕ್ಟಿಂಗ್ ಜತೆಯಲ್ಲಿ ‘ಲಕ್’ ಕೂಡಾ ಬೇಕಂತೆ ಎನ್ನುವ ಮಾತಿದೆಯಲ್ಲ. ಈ ‘ಲಕ್’ನ ವಿಚಾರದಲ್ಲಿ ನಿವೇದಿತಾಗೆ ಕೊಂಚ ಪೆಟ್ಟು ಬಿದ್ದಿತ್ತು. ಆದರೂ ಈಗ ನಿಮ್ಮಿ ಮೇಡಂ ‘ಗಾಂಸ್ಮೈಲ್ಸ್’, ‘ಪರಿ’ ಮೂಲಕ ಸಿನ್ಮಾ ಲ್ಯಾಂಡ್ನಲ್ಲಿ ತನ್ನ ಇಮೇಜ್ ಮತ್ತೇ ರೀ- ಕ್ರಿಯೇಟ್ ಮಾಡಲು ಹೊರಟಿದ್ದಾರೆ.

ತುಟಿ ಅಂಚಿನಲ್ಲಿ ಮಿಂಚಿ ಮರೆಯಾಗುವ ನಗು. ದುಂಡುಮುಖದ ತುಂಬಾ ಎದ್ದು ಕಾಣುವ ಸೌಮ್ಯತೆ. ಯಾರನ್ನೋ ಹುಡುಕಾಟದಲ್ಲಿರುವ ಅಗಲವಾದ ನಯನಗಳು ಎಲ್ಲವೂ ಜತೆಯಾಗಿ ಸೇರಿಕೊಂಡರೆ ಅವಳೇ ನಿವೇದಿತಾ. ಕನ್ನಡದ ಪಾಲಿಗಂತೂ ಥೇಟ್ ಕೃಷ್ಣ ಸುಂದರಿ. ಯಾಕೋ ಸಿನ್ಮಾ ಎನ್ನುವ ಜಗತ್ತಿನಲ್ಲಿ ಲುಕ್, ಆಕ್ಟಿಂಗ್ ಜತೆಯಲ್ಲಿ ‘ಲಕ್’ ಕೂಡಾ ಬೇಕಂತೆ ಎನ್ನುವ ಮಾತಿದೆಯಲ್ಲ. ಈ ‘ಲಕ್’ನ ವಿಚಾರದಲ್ಲಿ ನಿವೇದಿತಾಗೆ ಕೊಂಚ ಪೆಟ್ಟು ಬಿದ್ದಿತ್ತು.
ಹೆಸರು ಬದಲಾಯಿಸಿ ಬಿಟ್ಟ್ರೆ ಎಲ್ಲವೂ ಸರಿಯಾಗುತ್ತೆ ಅಂತಾ ಹೇಳಿಕೊಂಡು ಸ್ಮಿತಾ ಎನ್ನುವ ಎರಡಕ್ಷರದ ನಾಮ್ಪ್ಲೇಟ್ ಚೇಂಜ್ ಮಾಡಿಕೊಂಡು ನಿವೇದಿತಾ ಅಂತಾ ಬದಲಾಗಿ ಹೋದರು. ಹೆಸರು ಬದಲಾದರೂ ಲಕ್ ನಿಮ್ಮಿಯ ಕೈಯಲ್ಲಿ ಇರಲೇ ಇಲ್ಲ ಅಂತಾ ಖುದ್ದು ನಿಮ್ಮಿನೇ ಬಾಯಿ ಬಿಟ್ಟು ಹೇಳಿ ಬಿಡುತ್ತಾರೆ. ‘ಎಲ್ಲರೂ ಈಗ ಕರೆಯೋದು ಸ್ಮಿತಾ ಅಂತಾಳೆ...ನಿವೇದಿತಾ ಎನ್ನಲು ಬಹಳಷ್ಟು ಮಂದಿಗೆ ಕಷ್ಟವಾಗಿ ಬಿಡುತ್ತದೆ. ಮತ್ತೆ ಹೆಸರು ಚೇಂಜ್ ಮಾಡಲು ಮನಸ್ಸು ಒಪ್ಪುವುದಿಲ್ಲ . ಅದಕ್ಕಾಗಿಯೇ ನಿವೇದಿತಾ ಎನ್ನುವ ಹೆಸರಿನ ಜತೆಯಲ್ಲಿ ಖುಷಿಯಾಗಿದ್ದೇನೆ ಎನ್ನುತ್ತಾಳೆ ನಿಮ್ಮಿ. ಈಗಲೂ ನಿವೇದಿತಾರಿಗೆ ಅವಕಾಶಗಳು ಕಾಲ ಬುಡದಲ್ಲಿ ಬಂದು ಬೀಳುತ್ತಿದೆಯಂತೆ. ಕನ್ನಡ, ತಮಿಳಿನಲ್ಲಿ ಆಫರ್ಗಳು ಜಾಸ್ತಿಯಾಗುತ್ತಿದೆ.
ಆದರೆ ಸಿನ್ಮಾಗಳ ಆಯ್ಕೆ ವಿಚಾರದಲ್ಲಂತೂ ನಿಮ್ಮಿ ಮೇಡಂ ಕೊಂಚ ಚ್ಯುಸಿಯಾಗುತ್ತಿದ್ದಾರೆ. ಆಯ್ಕೆ ಮಾಡಿಕೊಳ್ಳುವ ಸಿನ್ಮಾದಲ್ಲಿ ತನ್ನ ನಟನೆಗೆ ಹೆಚ್ಚು ಮಹತ್ವ ಕೊಡುವ ಪಾತ್ರ ಬೇಕು ಅನ್ನೋದು ನಿಮ್ಮಿಯ ಆಕ್ಟಿಂಗ್ ಕಂಡೀಷನ್. ಸಿನ್ಮಾ ಲ್ಯಾಂಡ್ನ ಆರಂಭದಲ್ಲಿ ಬೇಕಾಬಿಟ್ಟಿ ಸಿನ್ಮಾಗಳನ್ನು ಒಪ್ಪಿಕೊಂಡ ನಂತರ ನಿಮ್ಮಿ ಮೇಡಂ ಈ ಎಲ್ಲ ವಿಚಾರಗಳ ಮೇಲೆ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಈ ರೀತಿ ಕಂಡೀಷನ್ ಹಾಕುತ್ತಿದ್ದಾರಂತೆ. ಅಂದಹಾಗೆ ನಿವೇದಿತಾ ಬಳಿಯಲ್ಲಿ ಟ್ಯಾಲೆಂಟ್ಗೇನೂ ಕಡಿಮೆಯಿಲ್ಲ. ಗ್ಲಾಮರ್ ಜತೆಯಲ್ಲಿ ಆಕ್ಟಿಂಗ್ ಪಾಠಗಳನ್ನು ಕಂಠ ಪಾಟ ಮಾಡಿಕೊಂಡು ಬಂದಿರುವ ನಿವೇದಿತಾ ಈಗ ಸುದ್ದಿಯ ಅಂಗಣದಲ್ಲಿ ಸದ್ದು ಮಾಡುತ್ತಿದ್ದಾರೆ. ಬಹಳಷ್ಟು ದಿನಗಳ ನಂತರ ಅತ್ತ ಆರ್ಟ್ ಮೂವೀನೂ ಅಲ್ಲ , ಇತ್ತ ಕಮರ್ಷಿಯಲ್ ಅಲ್ಲದ ಸಿನ್ಮಾಯೊಂದರಲ್ಲಿ ಭರ್ಜರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಕಮ್ ನಿರ್ಮಾಪಕ ಮಂಗಳೂರಿನ ರಾಘವೇಂದ್ರ ವಿ. ಕಾಮತ್ ‘ಗಾಂಸ್ಮೈಲ್ಸ್’ ಎನ್ನುವ ಚಿತ್ರ ಕೆಲವೇ ದಿನಗಳಲ್ಲಿ ಚಿತ್ರ ಮಂದಿರಗಳಿಗೆ ದಾಳಿ ಇಡುವ ಸೂಚನೆ ಬಂದಿದೆ. ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ಸಾಲಿನಲ್ಲಿದ್ದ ೧೬೨ ಚಿತ್ರಗಳ ಪೈಕಿ ‘ಗಾಂಸ್ಮೈಲ್ಸ್’ ಕೂಡ ಒಂದು. ಅಂತಿಮ ಆಯ್ಕೆ ಸ್ಪರ್ಧೆಯಲ್ಲಿದ್ದ ೭ ಚಿತ್ರಗಳಲ್ಲೂ ಇದೂ ಒಂದಾಗಿತ್ತು. ಹೀಗೆ ನಾನಾ ಕಾರಣಗಳಿಂದ ಚಿತ್ರ ಸುದ್ದಿಯಲ್ಲಿರುವ ಜತೆಯಲ್ಲಿ ಕೃಷ್ಣ ಸುಂದರಿ ನಿವೇದಿತಾಗೂ ಈ ಚಿತ್ರದಲ್ಲಿ ಲೀಡ್ ರೋಲ್ ಇದೆ. ಜತೆಗೆ ಸುರ್ ಅತ್ತಾವರ್ ನಿರ್ದೇಶನದ ‘ಪರಿ’ಯಲ್ಲೂ ಒಂದು ಭಿನ್ನವಾದ ಪಾತ್ರವಿದೆ. ಈ ಎಲ್ಲ ಚಿತ್ರಗಳು ನಿವೇದಿತಾರ ಇಮೇಜ್ನ್ನು ಮತ್ತೇ ರೀ-ಕ್ರಿಯೇಟ್ ಮಾಡಲಿದೆಯಂತೆ.
ನಿವೇದಿತಾ ಹೇಳುವಂತೆ ತಾನು ಒಪ್ಪಿಕೊಳ್ಳುವ ಸಿನ್ಮಾದ ಪಾತ್ರಗಳು ಬಿಚ್ಚುವಿಕೆಗೆ ಜಾಸ್ತಿ ಮಹತ್ವ ಕೊಟ್ಟರೆ ತಾನು ಅದಕ್ಕೂ ರೆಡಿಯಾಗಿದ್ದೇನೆ. ಆದರೆ ಪಾತ್ರಗಳು ಬಿಚ್ಚುವಿಕೆಯನ್ನು ಬೇಡಬೇಕು. ಚಿತ್ರವನ್ನು ಮಾರಾಟ ಮಾಡಲು ನಾಯಕಿಯರು ಬಿಚ್ಚುವುದು ಸರಿಯಲ್ಲ. ಪಾತ್ರಕ್ಕೆ ತಕ್ಕಂತೆ ಬಿಚ್ಚಾಟದಲ್ಲಿ ಕೆಲವೊಂದು ಸಲ ರಾಜಿ ಮಾಡಿಕೊಳ್ಳಬೇಕು ಎನ್ನೋದು ಅವರ ಮಾತು.
ನಿವೇದಿತಾರಿಗೆ ಸಿನ್ಮಾಗಳು ಇಲ್ಲದೇ ಇದ್ದಾಗ ಬುಕ್ಸ್ ಓದುವ ಒಳ್ಳೆಯ ಅಭ್ಯಾಸವಿದೆ. ಆದರೆ ಅದಷ್ಟೂ ಇಂಗ್ಲಿಷ್ ಬುಕ್ಗಳಿಗೆ ಒಗ್ಗಿಕೊಂಡಿರುವ ನಿಮ್ಮಿ ಕಾದಂಬರಿ ಎಂದರೆ ಮಾರು ದೂರ ಓಡುತ್ತಾರೆ. ಬಹಳಷ್ಟು ಸಿನ್ಮಾಗಳ ಕತೆ ಕೇಳಿಕೊಂಡು ಬಂದಿರುವ ನಿಮ್ಮಿಗೆ ಕಾದಂಬರಿಗಳೆಂದರೆ ತುಂಬಾನೇ ಬೋರು ಅಂತೆ. ಈಗ ಸಧ್ಯಕ್ಕೆ ‘ಡಯಟ್ ಆಂಡ್ ಎಕ್ಸಾರ್ಸೈಜ್’ ಎನ್ನುವ ಆಂಗ್ಲ ಪುಸ್ತಕ ಓದುವುದರಲ್ಲಿ ತಲ್ಲೀನರಾಗಿದ್ದಾರೆ. ಅಂತೂ ಇಂತೂ ಇನ್ನೂ ಕೊಂಚ ಟೈಮ್ ಸಿಕ್ಕರೆ ಪ್ಯಾಮಿಲಿ ಜತೆಯಲ್ಲಿ ಲಾಂಗ್ ಟೂರ್ ಮಾಡುತ್ತಾರೆ. ಅದರಲ್ಲೂ ನಿಮ್ಮಿ ಮೇಡಂಗೆ ಡ್ರೈವ್ ಮಾಡೋದು ಎಂದರೆ ಬಹಳ ಖುಷಿ. ಲಾಂಗ್ ರೂಟ್ ಕಡೆ ಮುಖ ಮಾಡೋಣ ಎಂದರೆ ಬಾಯ್ಫ್ರೆಂಡ್ಗಳ ಕೊರತೆಯನ್ನು ನಿಮ್ಮಿ ಮೇಡಂ ಎದುರಿಸುತ್ತಿದ್ದಾರೆ.
ಯೋಗ, ಜಿಮ್, ಏರೋಬಿಕ್ಸ್ ಅಂತಾ ಹೇಳಿಕೊಂಡು ಫಿಗರ್ ಮೈನ್ಟೈನ್ ಮಾಡುತ್ತಿರುವ ನಿಮ್ಮಿಗೆ ಪರಿಸರದ ಮೇಲೆ ವಿಶೇಷ ಕಾಳಜಿ. ಎಂಜಿನಿಯರಿಂಗ್ ಮಾಡಿ ಇನಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಿಮ್ಮಿ ಗ್ಲೋಬಲ್ ವಾರ್ಮಿಂಗ್ ಕುರಿತು ಬಹಳಷ್ಟು ತಿಳಿದುಕೊಂಡಿದ್ದರು. ಆದರೆ ಸಿನ್ಮಾ ಫೀಲ್ಡ್ಗೆ ಬಂದ ನಂತರ ಎಲ್ಲಕ್ಕೂ ಟೈಮ್ ಜೋಡಿಸಲು ನಿಮ್ಮಿ ವಿಫಲರಾದರಂತೆ !
‘ನನಗೇನೂ ದೊಡ್ಡ ಪ್ರಮಾಣದಲ್ಲಿ ಸಮಾಜ ಸೇವೆ ಮಾಡಲು ಗೊತ್ತಿಲ್ಲ. ಆದರೂ ಪರಿಸರದ ಕುರಿತು ಜಾಗೃತಿ ಹುಟ್ಟು ಹಾಕುವ ಕೆಲಸ ಮಾಡಬೇಕು. ಅದಕ್ಕಾಗಿ ಪುಟ್ಟ ಎನ್ಜಿಒ ಕಟ್ಟಬೇಕು ಎನ್ನೋದು ನನ್ನ ಮತ್ತೊಂದು ಕನಸ್ಸು ’ಎಂದು ಹೇಳುತ್ತಾ ನಿಮ್ಮಿ ಮೇಡಂ ಸಿನ್ಮಾದಿಂದ ಹಸಿರು ಜಾಗೃತಿ ಕಡೆ ಮುಖ ಮಾಡಿದರು. ಟೋಟಲಿ ನಿಮ್ಮಿ ಸಿನ್ಮಾದಲ್ಲಿ ಲಕಲಕನೇ ಹೊಳೆಯಲಿ ಎನ್ನುವುದೇ ಅವರ ಅಭಿಮಾನಿಗಳ ಹಾರೈಕೆ.

‘ರಾಸ್ಕಲ್ಸ್’ ಕಮಾಲು ಕಂಗನಾ ಇನ್ ಬಿಕಿನಿ


ಬಾಲಿವುಡ್ ನಿರ್ದೇಶಕ ಡೇವಿಡ್ ಧವನ್ ಕಾಮೆಡಿ ಟ್ರೈನ್ ಮತ್ತೆ ಹೊರಟು ನಿಂತಿದೆ. ಇಬ್ಬರು ‘ರಾಸ್ಕಲ್ಸ್’ಗಳನ್ನು ಕೂರಿಸಿಕೊಂಡು ಥಿಯೇಟರ್ ಮುಂದೆ ಬಂದು ನಿಂತಿದ್ದಾರೆ. ಆದರೆ ಟೂ-ಫೀಸ್ ಹಾಕಲು ಹಿಂದೇಟು ಹಾಕುತ್ತಿದ್ದ ಕಂಗನಾ ಚಿತ್ರದಲ್ಲಿ ತನ್ನ ಬಿಳಿ ದೇಹಸಿರಿಯ ದರ್ಶನ ಭಾಗ್ಯವನ್ನು ಮುಕ್ತವಾಗಿ ಪ್ರೇಕ್ಷಕರಿಗೆ ನೀಡಿದ್ದಾಳೆಯಂತೆ!

‘ರಾಸ್ಕಲ್ಸ್’ ಅತೀ ಶೀಘ್ರದಲ್ಲೇ ದೇಶ ವಿದೇಶ ಚಿತ್ರಮಂದಿರಗಳಿಗೆ ಬಂದು ಧಾಂಗುಡಿ ಇಡಲಿದ್ದಾರೆ. ಇದಕ್ಕೂ ಮುನ್ನ, ಕೊಂಚ ತಮ್ಮ ಬದುಕು ಬವಣೆಗಳನ್ನು ಬಿಚ್ಚಿಡಲು ‘ರಾಸ್ಕಲ್ಸ್’, ತಂಡ ಮುಂಬಯಿಯಲ್ಲಿ ಮಾಧ್ಯಮದ ಮುಂದೆ ಕೂತಿತ್ತು. ಚಿತ್ರದ ನಾಯಕರಾದ ಸಂಜಯ್ದತ್ ಮತ್ತು ಅಜಯ್ ದೇವಗನ್ ಸೇರಿದಂತೆ ಚಿತ್ರತಂಡದ ಇನ್ನಿತರರೆಲ್ಲ ಅಲ್ಲಿದ್ದರು. ನಾಯಕಿ ಕಂಗನಾ ರಣಾವತ್ ಹಾಗೂ ನಿರ್ದೇಶಕ ಡೇವಿಡ್ ಧವನ್ ಮಾತ್ರ ಇನ್ನೂ ಬಂದಿರಲಿಲ್ಲ.
ಆಗ ಮಾಧ್ಯಮಗಳ ಪ್ರಶ್ನೆಗೆ ಎದುರು ನಿಂತ ಅಜಯ್ ದೇವಗನ್, ‘ಮತ್ತೊಮ್ಮೆ ನಿರ್ದೇಶಕ ಡೇವಿಡ್ ಧವನ್ ನಮ್ಮಿಂದ ಮಿಸ್ ಆಗಿದ್ದಾರೆ. ಇದು ಹೊಸತೇನಲ್ಲ. ಅವರದು ಯಾವಾಗಲೂ ಲೇಟ್. ಇಲ್ಲೂ ಅಷ್ಟೇ, ಅವರಿನ್ನೂ ಬರುವುದು ಎರಡು ತಾಸು ತಡವಾಗಲಿದೆ. ಸುಮ್ಮನೇ ಕೇಳುತ್ತಿದ್ದೇನೆ, ಧವನ್ ಈಗ ಎಲ್ಲಿದ್ದಾರೆ ಎಂಬುದು ಯಾರಿಗಾದರೂ ಗೊತ್ತಾ? .... ಅವರೀಗ ನಾಯಕಿಯ ಬಿಕಿನಿ ಖರೀದಿಯಲ್ಲಿ ಬಿಜಿಯಾಗಿದ್ದಾರೆ!’ ಈ ಹಾಸ್ಯ ಪ್ರಸಂಗಕ್ಕೆ ಮಾಧ್ಯಮ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕರು. ಮುಂದೆ ನಿಂತು ಅವರನ್ನು ನೋಡುತ್ತಿದ್ದ ಅಭಿಮಾನಿಗಳೆಲ್ಲರೂ ಹಲ್ಲು ಕಿರಿದರು.
ಅಂದಹಾಗೆ ಅಜಯ್ ದೇವಗನ್ ಹೇಳಿದ ಮಾತು ಎಷ್ಟು ನಿಜನೋ, ಸುಳ್ಳೋ ಗೊತ್ತಿಲ್ಲ ಮಾರಾಯ್ರೆ. ಆದರೆ ಪ್ರೇಕ್ಷಕ ಮಾತ್ರ ಸದ್ಯದಲ್ಲೇ ‘ರಾಸ್ಕಲ್ಸ್’ ಪೈಕಿ ಒಬ್ಬರಾದ ಕಂಗನಾ ಕರಾಮತ್ತು ಕಂಡು ಕಣ್ಮುಚ್ಚಿಕೊಳ್ಳುವ ಅಥವಾ ಕಣ್ ಮುಚ್ಚದೇ ನೋಡುವ ಕಾಲವಂತೂ ದೂರವಿಲ್ಲ. ಯಾಕೆಂದರೆ, ಕಂಗನಾ ರಣಾವತ್ ಇಲ್ಲಿ ಅಂತಿಂಥ ಮೋಡಿ ಮಾಡಿಲ್ಲ. ಬಿಳಿ ಬಿಕಿನಿ ತೊಟ್ಟು ಪಡ್ಡೆಗಳ ಕಣ್ಣು ಕುಕ್ಕಿದ್ದಾರೆ.
ಕಂಗನಾ ರಣಾವತ್ ನಿಜಕ್ಕೂ ಬಿಕಿನಿ ತೊಟ್ಟು ಎಂದಿಗೂ ಸಿನ್ಮಾಗಳಲ್ಲಿ ನಟಿಸಿರಲಿಲ್ಲ. ಇದುವರೆಗೂ ಎಲ್ಲ ಸಿನ್ಮಾಗಳಲ್ಲಿ ಕಂಗನಾ ತುಂಬಾನೇ ನೀಟಾಗಿ ಡ್ರೆಸ್ ಮಾಡುತ್ತಿದ್ದಳು. ಕೆಲವೊಂದು ಪಾತ್ರಗಳಿಗಾಗಿ ಕೊಂಚ ಮೊಡರ್ನ್ ಟಚ್ ಕೊಟ್ಟು ಡ್ರೆಸ್ ಮಾಡಿದ್ದರೂ ಕಂಗನಾ ಈ ಪಾಟಿ ಇಳಿದು ಹೋಗಿರಲಿಲ್ಲ. ಅಂದಹಾಗೆ ಕಂಗನಾ ರಣಾವತ್ ‘ರಾಸ್ಕಲ್ಸ್’ ನಲ್ಲಿ ಬಿಕಿನಿ ತೊಟ್ಟುಕೊಂಡಿದ್ದು ಯಾಕೆ ಅಂತಾ ಬಹಳಷ್ಟು ಮಂದಿ ಪ್ರಶ್ನೆ ಕೇಳುತ್ತಿದ್ದರು. ಆದರೆ ಉತ್ತರ ನೀಡಲು ಮಾತ್ರ ಕಂಗನಾ ಮಾತ್ರ ಕಾಣಿಸುತ್ತಿಲ್ಲ.
ಚಿತ್ರದ ನಾಯಕರಾದ ಸಂಜು ಹಾಗೂ ಅಜಯ್ಯಲ್ಲಿ ಈ ಪ್ರಶ್ನೆ ಕೇಳಿದರೆ ಅವರು ಹೇಳುವುದಿಷ್ಟು: ಚಿತ್ರದಲ್ಲಿ ಪ್ರಮುಖ ದೃಶ್ಯವೊಂದಕ್ಕೆ ಕಂಗನಾ ಬಿಕಿನಿ ಹಾಕಿಕೊಳ್ಳಲೇ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ, ನಿರ್ದೇಶಕ ಧವನ್ ಅವರ ಕೋರಿಕೆಯನ್ನು ಕಂಗನಾ ಮಜಬೂತ್ತಾಗಿಯೇ ಈಡೇರಿಸುವ ಮನಸು ಮಾಡಿದರಂತೆ. ಹಾಗಾದರೆ ಈಗ ಉಳಿದು ಹೋಗಿರುವ ಪ್ರಶ್ನೆ ಒಂದೇ ಡೇವಿಡ್ ಧವನ್ ನಿಜಕ್ಕೂ ಬಿಕಿನಿ ಖರೀದಿಯಲ್ಲಿ ಬ್ಯುಸಿಯಾಗಿದ್ದಾರಾ..? ಎನ್ನೋದು.
ಅಂದಹಾಗೆ ಧವನ್ ಎಲ್ಲಿ ಹೋಗಿದ್ದಾರೆ ಎಂಬ ವಿಚಾರಕ್ಕೆ ಸದ್ಯಕ್ಕೆ ಬ್ರೇಕ್ ಕೊಟ್ಟುಬಿಡಿ. ಅ.೭ರಂದು ಥಿಯೇಟರ್ಗೆ ಬರುವ ‘ರಾಸ್ಕಲ್ಸ್’ ಚಿತ್ರದಲ್ಲಿ ಮಾತ್ರ ಕಂಗನಾ ಬಿಕಿನಿ ಸೀನ್ಸ್ ಮಾತ್ರ ಇರೋದು ಮಾತ್ರ ಗ್ಯಾರಂಟಿಯಂತೆ. ಈಗಾಗಲೇ ಸೆನ್ಸಾರ್ ಬೋರ್ಡ್ಗೂ ಲಗ್ಗೆ ಇಟ್ಟಿದ್ದ ‘ರಾಸ್ಕಲ್ಸ್’ ಅಲ್ಲೂ ಕಂಗನಾ ನೋಡಿ ಯಾವುದೇ ತಕರಾರು ಇಲ್ಲದೇ ಒಳ್ಳೆಯ ಸರ್ಟಿಫಿಕೇಟ್ ಕೊಟ್ಟುಬಿಟ್ಟಿದ್ದಾರೆ. ಇಡೀ ಚಿತ್ರ ಹಾಸ್ಯದ ಲೇಪವನ್ನು ಹಚ್ಚಿಕೊಂಡು ಬರುವ ಜತೆಯಲ್ಲಿ ಗ್ಲಾಮರ್, ಎಕ್ಸ್ಫೋಸಿಂಗ್ಗೂ ತಕ್ಕ ಮಟ್ಟಿನ ಮಾನ್ಯತೆ ನೀಡಲಾಗಿದೆ ಎನ್ನೋದು ಡೈರೆಕ್ಟರ್ ಡೆಸ್ಕ್ನಿಂದ ಬಂದ ಮಾಹಿತಿ. ರೆಡಿಯಾಗಿ ನಿಲ್ಲಿ ‘ರಾಸ್ಕಲ್ಸ್’ ನೀವು ಕೂಡ ಆಗಬಹುದು ಎನ್ನೋದು ಚಿತ್ರದ ಟ್ಯಾಗ್ಲೈನ್ಅಂತೆ!

ಭಟ್ಟರ ಮನೆಯಲ್ಲಿ ಬಿಪಾಷ


ಭಟ್ಟರ ಕ್ಯಾಂಪ್ನಿಂದ ಹೊರಬಂದ ನಾಯಕಿಯನ್ನು ಮತ್ತೆ ಹತ್ತಿರಕ್ಕೆ ಸೇರಿಸಿಕೊಳ್ಳುವ ಪ್ರಮೇಯ ಬಹಳಷ್ಟು ಕಡಿಮೆ. ಆದರೆ ಈ ವಿಚಾರದಲ್ಲಿ ಬಿಪಾಶಾ ಬಸು ಲಕ್ಕಿ ಹುಡುಗಿ ಎನ್ನಬಹುದು. ಆದರೆ ಇದೇ ಚಾನ್ಸು ಮರ್ಡರ್ ಹುಡುಗಿ ಮಲ್ಲಿಕಾ ಶೆರವಾತ್ಗೆ ಸಿಗಲೇ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕು ಮಾರಾಯ್ರೆ.

ಬಾಲಿವುಡ್ನ ಕೃಷ್ಣ ಸುಂದರಿ ಬಿಪಾಶಾ ಬಸು ಮತ್ತೆ ತನ್ನ ಮೂಲ ಮನೆಯ ಕಡೆ ಮುಖ ಮಾಡಿದ್ದಾರೆ ಎನ್ನುವ ಸುದ್ದಿ ಬಣ್ಣದ ನಗರಿಯಿಂದ ಹೊರಬಿದ್ದಿದೆ. ಅರೇ..ಬಿಪಾಶಾ ಬಸುವಿನ ಮೂಲ ಮನೆಯಂದರೆ ಅದು ಮಹೇಶ್ ಭಟ್ರ ಗರಡಿ ಮಾರಾಯ್ರೆ. ಬಿಪಾಶಾ ಬಸು ಫುಲ್ ಟೈಮ್ ನಾಯಕಿಯಾಗಿ ಮಿಂಚಲು ಈ ಭಟ್ಟರೇ ಕಾರಣ ಅಂತಾ ಸಿನ್ಮಾ ಇಂಡಸ್ಟ್ರಿಯಲ್ಲಿರುವ ಎಲ್ಲರಿಗೂ ಗೊತ್ತು.
ಆದರೆ ಭಟ್ಟರ ಕ್ಯಾಂಪ್ನಿಂದ ಹೊರಬಂದ ನಾಯಕಿಯನ್ನು ಮತ್ತೆ ಹತ್ತಿರಕ್ಕೆ ಸೇರಿಸಿಕೊಳ್ಳುವ ಪ್ರಮೇಯ ಬಹಳಷ್ಟು ಕಡಿಮೆ. ಆದರೆ ಈ ವಿಚಾರದಲ್ಲಿ ಬಿಪಾಶಾ ಬಸು ಲಕ್ಕಿ ಹುಡುಗಿ ಎನ್ನಬಹುದು. ಆದರೆ ಇದೇ ಚಾನ್ಸು ಮರ್ಡರ್ ಹುಡುಗಿ ಮಲ್ಲಿಕಾ ಶೆರವಾತ್ಗೆ ಸಿಗಲೇ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕು ಮಾರಾಯ್ರೆ. ಅಂದಹಾಗೆ ಒಂದು ಸಿನಿಮಾದ ಮುಂದುವರಿದ ಭಾಗ ಮಾಡುವುದರಲ್ಲಿ ಬಾಲಿವುಡ್ ಮಂದಿ ನಿಸ್ಸೀಮರು.
ಸಿನಿಮಾ ತೆರೆಕಂಡು ತಕ್ಕಮಟ್ಟಿಗೆ ಕ್ಲಿಕ್ ಆಗುತ್ತಿದ್ದಂತೆ ಆದರ ಸೀಕ್ವೆಲ್ಗೆ ಸ್ಕ್ರಿಪ್ಟ್ ರೆಡಿಯಾಗಿರುತ್ತದೆ. ಈಗ ಇದೇ ರೀತಿ ಸೀಕ್ವೆಲ್ ಒಂದರ ಮೂಲಕ ಒಂದಷ್ಟು ಮಂದಿ ಒಟ್ಟಾಗುತ್ತಿದ್ದಾರೆ. ಅದು ‘ರಾಝ್-೩’ ಮೂಲಕ. ೨೦೦೨ರಲ್ಲಿ ತೆರೆಕಂಡ ‘ರಾಝ್’ ಚಿತ್ರ ಅಲ್ಲಿ ಸಿಕ್ಕಾಪಟ್ಟೆ ಕ್ಲಿಕ್ ಆಗಿತ್ತು. ಹಸಿಬಿಸಿಯಾಗಿ ಬಿಪಾಶಾ ಬಸು, ಡಿನೋ ಮೊರಿಯಾ ನಟಿಸಿದ ಈ ಚಿತ್ರವನ್ನು ಮುಖೇಶ್ ಭಟ್ ನಿರ್ಮಿಸಿ, ವಿಕ್ರಂ ಭಟ್ ನಿರ್ದೇಶಿಸಿದ್ದರು.
ಆ ನಂತರ ನಿರ್ಮಾಪಕ ಮುಖೇಶ್ ಭಟ್ ಇದರ ಮುಂದುವರಿದ ಭಾಗವಾಗಿ ‘ರಾಝ್-೨’ ಮಾಡಿದರು. ಆದರೆ ಅಲ್ಲಿ ನಿರ್ದೇಶಕ ವಿಕ್ರಂ ಭಟ್ ಆಗಲಿ, ನಾಯಕಿ ಬಿಪಾಶಾ ಬಸು ಆಗಲಿ ಇರಲಿಲ್ಲ. ಅವರ ಜಾಗದಲ್ಲಿ ಮೋಹಿತ್ ಸೂರಿ, ಇಮ್ರಾನ್ ಹಶ್ಮಿ ಹಾಗೂ ಕಂಗನಾ ರಾಣವತ್ ಇದ್ದರು. ಆದರೆ ಈಗ ಮತ್ತೆ ಹಳೆ ಜೋಡಿ ಒಂದಾಗುತ್ತಿದೆ. ಮಹೇಶ್ ಭಟ್ ‘ರಾಝ್-೩’ ಮಾಡಲು ನಿರ್ಧರಿಸಿದ್ದಾರೆ.
ಈ ಸಿನಿಮಾವನ್ನು ವಿಕ್ರಂ ಭಟ್ ನಿರ್ದೇಶಿಸಲಿದ್ದು, ಬಿಪಾಶಾ ಕೂಡ ನಟಿಸಲು ಒಪ್ಪಿಕೊಂಡಿದ್ದಾಳೆ.
ಈ ಬಾರಿ ಬಿಪಾಶಾ ಜತೆ ತುಟಿಯಂಚಿಕೊಳ್ಳಲಿರುವ ನಾಯಕ ಇಮ್ರಾನ್ ಹಶ್ಮಿ. ಬಿಪಾಶಾ ಮತ್ತೆ ‘ರಾಝ್’ ಟೀಂನಲ್ಲಿ ನಟಿಸಲು ಒಪ್ಪಿಕೊಂಡಿರುವುದು ಮುಖೇಶ್ ಭಟ್ ಅವರಿಗೆ ತುಂಬಾ ಖುಷಿ ತಂದಿದೆ. ‘ರಾಝ್ ಚಿತ್ರಕ್ಕೆ ಒಂದು ಹೆಸರು ತಂದುಕೊಡುವಲ್ಲಿ ಬಿಪಾಶಾಳ ಪಾತ್ರ ಮಹತ್ವದ್ದಾಗಿತ್ತು. ಈಗ ಈ ಸಿನಿಮಾದಲ್ಲಿ ಬಿಪಾಶಾಗೆ ಒಳ್ಳೆಯ ಪಾತ್ರವಿದೆ. ಮತ್ತೊಮ್ಮೆ ಆಕೆಯ ಜತೆ ಕೆಲಸ ಮಾಡಲು ಖುಷಿಯಾಗುತ್ತಿದೆ’ ಎಂದಿದ್ದಾರೆ ಮುಖೇಶ್ ಭಟ್.
‘ರಾಝ್ -೩’ಯಲ್ಲಿ ನಟಿಸುತ್ತಿರುವುದನ್ನು ಬಿಪ್ಸ್ ಕೂಡ ಟ್ವಿಟ್ ಮೂಲಕ ಖಚಿತಪಡಿಸಿದ್ದಾಳೆ. ‘ಮತ್ತೊಮ್ಮೆ ಆ ಟೀಂನೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ರಾಝ್-೩ಲ್ಲಿನ ನನ್ನ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ’ ಎಂದಿದ್ದಾಳೆ. ಟೋಟಲಿ ಬಿಪ್ಸ್ ಮತ್ತೊಂದು ‘ರಾಝ್’ ಮೂಲಕ ಪಡ್ಡೆ ಹೈಕಳನ್ನು ನಿದ್ರೆ ಮಾಡಲು ಬಿಡುತ್ತಾಳಾ..? ಎಂದು ಕಾದು ನೋಡಬೇಕು. ದೊಡ್ಡ ಹಿಟ್ ಚಿತ್ರಗಳಿಲ್ಲದೇ ಒದ್ದಾಡುತ್ತಿರುವ ಬಿಪ್ಸ್ಗೂ ಬಾಲಿವುಡ್ನಲ್ಲಿ ಒಂದು ದೊಡ್ಡ ಬ್ರೇಕ್ ಬೇಕಾಗಿದೆ. ‘ರಾಝ್-೩’ ಬಿಪ್ಸ್ ಬಾಲಿವುಡ್ನಲ್ಲಿ ನೆಲೆ ನಿಲ್ಲಲು ಹೆಲ್ಪ್ ಮಾಡುತ್ತಾ ಎನ್ನೋದು ಪ್ರೇಕ್ಷಕ ಮಹಾಪ್ರಭುವೇ ಹೇಳಬೇಕು.

ಬೆನಗಲ್ ಪಾರ್ಟಿಯಲ್ಲಿ ಬಸು
ನೈಜ ವಸ್ತವನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕ ಶ್ಯಾಮ್ ಬೆನಗಲ್. ಈಗಾಗಲೇ ಹಲವು ವಿಷಯಗಳ ಮೇಲೆ ಸಿನಿಮಾ ಮಾಡಿರುವ ಶ್ಯಾಂ ಬೆನಗಲ್ ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವುದು ನಟಿಯೊಬ್ಬಳ ಕಥೆ. ಹಾಗಂತ ಯಾವುದೇ ಒಬ್ಬ ನಟಿಯ ಬಗ್ಗೆ ಅವರು ಸಿನಿಮಾ
ಮಾಡುತ್ತಿಲ್ಲ. ಬದಲಾಗಿ, ಸ್ಟಾರ್ನಟಿಯೊಬ್ಬಳು ಉದ್ಯಮದಲ್ಲಿ ಎದುರಿಸುವ ಕಷ್ಟಗಳು, ಅವಳು ಅನುಭವಿಸುವ ಶೋಷಣೆಗಳ ಕುರಿತು ಶ್ಯಾಂ ಬೆನಗಲ್ ಸಿನಿಮಾ ಮಾಡಲಿದ್ದಾರೆ. ಅವರ ಈ ಕಲ್ಪನೆಗೆ ಜೀವ ತುಂಬಲಿರುವುದು ಬಾಲಿವುಡ್ ನ ಹಾಟ್ ಬೇಬಿ ಬಿಪಾಶಾ ಬಸು. ಈಗಾಗಲೇ ಕಥೆ ಕೇಳಿ ಇಂಪ್ರೆಸ್
ಆಗಿರುವ ಬಿಪಾಶಾ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳಂತೆ. ಗ್ಲಾಮರಸ್ ಹಾಗೂ ಒಳ್ಳೆಯ ಟ್ಯಾಲೆಂಟ್ ಇರುವ ಬೆಡಗಿ ಬೇಕಾದ್ದರಿಂದ ಬಿಪಾಶಾಳಿಗೆ ಜೈ ಅನ್ನಲಾಯಿತಂತೆ.

ನನ್ನ ಪತ್ರಿಕೆ ನನ್ನ ಬರಹ-24



(vk daily lvk puravani published dis article on 20.09.2011)

Monday, September 5, 2011

ಅಡುಗೆ ಮನೆಯಲ್ಲಿ ಆಶಾಜೀ


ಗಾನಕೋಗಿಲೆ ಆಶಾ ಬೊಂಸ್ಲೆ ಎಲ್ಲರಿಗೂ ಗೊತ್ತು. ಅವರ ಹಾಡುಗಳನ್ನು ಕೇಳದವರು ಈ ಭೂಮಿ ಮ್ಯಾಲೆ ಹುಟ್ಟಿರಲು ಸಾಧ್ಯವಿಲ್ಲ ಅನ್ನೋದು ಗೊತ್ತು. ಅಂದಹಾಗೆ ಸೆ.೮ರಂದು ಅವರು ಹುಟ್ಟಿದ ದಿನ. ಜತೆಯಲ್ಲಿಯೇ ಆಶಾಜೀ ಗಾಯಕಿ ಇಲ್ಲದೇ ಹೋಗಿದ್ದಾರೆ ಏನಾಗುತ್ತಿದ್ದರು ಎನ್ನುವ ಸಿಕ್ರೇಟ್ ಮಾತನ್ನು ರಿವೀಲ್ ಮಾಡುವ ದಿನ ಕೂಡ ಹೌದು.

ಗಾನ ಕೋಗಿಲೆ ಅಶಾಜೀಗೆ ಸೆಪ್ಟೆಂಬರ್ ೮ಕ್ಕೆ ಬರ್ತಿ ೭೮ರ ಹರೆಯ.
ಅರೇ...ಈ ಮಾತನ್ನು ಯಾರು ಕೂಡ ಒಪ್ಪಲು ಸಾಧ್ಯವಿಲ್ಲ. ಎಲ್ಲಾದರೂ ಸುಳ್ಳು ಹೇಳುತ್ತಿರಬಹುದು ಎಂದು ಕುಟುಕಿ ಕೇಳುವ ಅವರ ಸಾವಿರಾರು ಅಭಿಮಾನಿಗಳನ್ನು ಕಾಣಬಹುದು. ಅದೇ ಆಶಾ ಬೊಂಸ್ಲೆ ಅವರು ಬೆಳೆಸಿಕೊಂಡು ಬಂದಿರುವ ಇಮೇಜು. ಈಗಲೂ ಅವರಿಗೆ ಸಂಗೀತ ಎಂದರೆ ಪಂಚಪ್ರಾಣ. ಬಾಲಿವುಡ್ನ ಹತ್ತಾರು ದೈತ್ಯ ಸಂಗೀತ ನಿರ್ದೇಶಕರ ಗರಡಿಯಲ್ಲಿ ಪಳಗಿದ ಆಶಾಜೀ ಬರೀ ಹಾಡಿನ ಮೂಲಕವಷ್ಟೇ ಅಭಿಮಾನಿಗಳಿಗೆ ಹತ್ತಿರವಾಗಲಿಲ್ಲ. ಆಶಾ ತನ್ನ ಹಾಡಿನ ಮೂಲಕ ನಾಯಕಿಯರಿಗೂ ಜೀವದಾನ ಮಾಡಿದ್ದಾರೆ. ಬಾಲಿವುಡ್ನ ನಾಯಕಿಯರಾದ ರೇಖಾ, ಹೆಲೆನ್, ಆಶಾ ಪರೇಕ್, ಜೀನತ್ ಅಮಾನ್ನಂತಹ ಹತ್ತಾರು ನಟಿಮಣಿಗಳಿಗೆ ಹೊಸ ಲುಕ್ ಕೊಡುವಲ್ಲಿ ಆಶಾಜೀಯ ಹಾಡುಗಳಿವೆ ಎನ್ನೋದು ಬಹಳಷ್ಟು ಅಭಿಮಾನಿಗಳಿಗೆ ಗೊತ್ತಿರಲು ಸಾಧ್ಯವಿಲ್ಲ. ಆದರೆ ಎಲ್ಲ ಹೀರೋಯಿನ್ಗಳಿಗೆ ಆಶಾಜೀಯ ತಾಕತ್ತು ಗೊತ್ತುಂಟು.
ಆಶಾಜೀಯ ಸರಿಸುಮಾರು ಆರು ದಶಕಗಳಿಂದ ಬಾಲಿವುಡ್ ಜಗತ್ತಿನಲ್ಲಿ ಮರೆಯಲಾಗದ ಗಾಯಕಿ. ಬರೀ ಬಾಲಿವುಡ್ ಒಂದರಲ್ಲಿಯೇ ೧೦೦೦ಕ್ಕಿಂತ ಹೆಚ್ಚು ಹಾಡುಗಳು ಹಾಡಿರೋದು ಕೂಡ ಹೆಮ್ಮೆಯ ವಿಷ್ಯಾ. ದೇಶ- ವಿದೇಶದ ನಾನಾ ಭಾಷೆಗಳಲ್ಲಿ ಆಶಾಜೀಯ ಹಾಡುಗಳು ಅಭಿಮಾನಿಗಳನ್ನು ಮೆಚ್ಚಿಸಿದೆ. ಪಾಪ್, ರಾಕ್, ಕ್ಲಾಸಿಕಲ್ ಹೀಗೆ ಎಲ್ಲ ಸಂಗೀತದ ವಿಭಾಗದಲ್ಲೂ ಆಶಾಜೀ ಎತ್ತಿದ ಕೈ. ಈಗಲೂ ಹಳೆಯ ರೆಟ್ರೋ ಸಾಂಗ್ಗಳ ಟಾಪ್ ಟೆನ್ ಪಟ್ಟಿಯಲ್ಲಿ ಆಶಾಜೀ ಹಾಡುಗಳ ಸಂಖ್ಯೆನೇ ಬರೋಬರಿ ಆರು. ಜುವೆಲ್ ಥಿಪ್ ಚಿತ್ರದ ‘ರಾತ್ ಅಖೇಲಿ ಹೈ’, ಮೇರಾ ಸಾಯಾ ಚಿತ್ರದ ‘ ಜುಮ್ಕಾ ಗಿರಾ ರೇ’, ದೇವಾನಂದ್ ಸಾಹೇಬರ ‘ಧಮ್ ಮಾರೋ ಧಮ್’ ಹಾಡಿನಿಂದ ಹಿಡಿದು ಇತ್ತೀಚೆಗೆ ಬಂದ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ರಂಗೀಲಾದ ಹಾಡು, ಲಕ್ಕಿ ಚಿತ್ರದ ‘ಲಕ್ಕಿ ಲಿಪ್ಸ್’ ಮೊಹಬ್ಬತೇ ಚಿತ್ರದ ಹಾಡುಗಳು ಅದರಲ್ಲೂ ಕನ್ನಡದಲ್ಲಿ ತೀರಾ ಇತ್ತೀಚೆಗೆ ಬಂದ ದ್ವಾರ್ಕಿ ನಿರ್ದೇಶನದ ‘ಮತ್ತೆ ಮುಂಗಾರು’ ಹಾಡು ಎಲ್ಲವೂ ಆಶಾಜೀ ಕಂಠ ಧಾರೆಯಿಂದ ಹರಿದು ಬಂದಿದೆ. ಈಗಲೂ ಅಪರೂಪಕ್ಕೊಮ್ಮೆ ಆಲ್ಬಂ, ಸ್ಟೇಜ್ ಶೋಗಳ ಮೂಲಕ ಆಶಾ ಬೊಂಸ್ಲೆ ಸುದ್ದಿಯಾಗುತ್ತಾರೆ.
ಆದರೆ ಅಶಾ ತನ್ನ ಸಹೋದರಿ ಕಮ್ ಗಾಯಕಿ ಲತಾ ಮಂಗೇಶ್ಕರ್ಕ್ಕಿಂತ ಯಾವ ರೀತಿಯಲ್ಲಿ ಭಿನ್ನವಾಗಿ ನಿಲ್ಲುತ್ತಾರೆ ಎಂಬ ಪ್ರಶ್ನೆ ಪದೇ ಪದೇ ಅವರ ಅಭಿಮಾನಿಗಳನ್ನು ಕಾಡುವುದಿದೆ. ಈಗಲೂ ಅಶಾಜೀಯ ಹಾಡುಗಳನ್ನು ಕೇಳಿ ‘ಆಶಾ ಎವರ್ಗ್ರೀನ್ ಗಾಯಕಿ’ ಎಂದು ತಮ್ಮ ಆಪ್ತ ವಲಯದಲ್ಲಿ ಮಾತನಾಡುವವರು ಕಾಣಸಿಗುತ್ತಾರೆ. ಆದರೂ ಆಶಾ ಬೊಂಸ್ಲೆ ಸಂಗೀತದ ಹೊರತಾಗಿ ಏನೂ ಮಾಡುತ್ತಾರೆ ಎನ್ನುವ ಕುತೂಹಲ ಬಹಳಷ್ಟು ಮಂದಿ ಅಭಿಮಾನಿಗಳಿಗೆ ಕಾಡುವುದಿದೆ. ಆಶಾಜೀ ಗಾಯಕಿ ಇಲ್ಲದೇ ಹೋಗಿದ್ದಾರೆ ಏನೂ ಮಾಡುತ್ತಿದ್ದರು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಹಾಡುಗಳ ಜತೆಯಲ್ಲಿ ಕುಟುಕುವುದಿದೆ. ಅಂದಹಾಗೆ ಆಶಾಜೀಯ ಪುತ್ರಿ ವರ್ಷಾ ಬೊಂಸ್ಲೆ ತಮ್ಮ ಬ್ಲಾಗ್ನಲ್ಲಿ ಅಮ್ಮನ ಕುರಿತು ವಿಶಿಷ್ಟವಾದ ಬರಹವೊಂದನ್ನು ಬರೆದಿದ್ದರು. ಆಶಾಜೀಯ ಮಗಳು ವರ್ಷಾ ಪತ್ರಕರ್ತೆ. ಮುಂಬಯಿಯ ‘ಸಂಡೇ ಅಬ್ಸರ್ವರ್’ ಪತ್ರಿಕೆಯಲ್ಲಿ ಪ್ರತಿ ವಾರ ಅಂಕಣ ಬರೆಯುತ್ತಾರೆ.
ಅಮ್ಮನ ಸಿಕ್ರೇಟ್ಸ್ ಮಾತನ್ನು ಬರೆದು ಬರೆದು ಈಗ ಅದನ್ನೇ ಬ್ಲಾಗ್ನಲ್ಲಿ ತುಂಬಿಸಿದ್ದಾರೆ. ಆಶಾಜೀ ತಮ್ಮಲ್ಲಿಯೇ ಬಚ್ಚಿಟ್ಟ ಬಹಳಷ್ಟು ರಹಸ್ಯಗಳನ್ನು ಮಗಳು ವರ್ಷಾ ಬೊಂಸ್ಲೆ ಎಲ್ಲರ ಮುಂದೆ ಇಟ್ಟಿದ್ದಾರೆ. ಅಂದಹಾಗೆ ಆಶಾಜೀ ಗಾಯಕಿ ಅಲ್ಲದೇ ಹೋಗಿದ್ದಾರೆ ಅವರು ಹೋಟೆಲ್ ಉದ್ಯಮಿಯಾಗುತ್ತಿದ್ದರು ಎನ್ನುತ್ತಾರೆ ವರ್ಷಾ. ಆಶಾಜೀ ರೆಕಾರ್ಡಿಂಗ್ ಇಲ್ಲದೇ ಇದ್ದಾಗ ಮನೆಯಲ್ಲಿಯೇ ಇರುತ್ತಿದ್ದರು. ಸಂಗೀತದಷ್ಟೇ ಅವರಿಗೆ ಹೊಸ ರುಚಿಗಳನ್ನು ಹುಡುಕಾಡುವುದರಲ್ಲಿ ಆಸಕ್ತಿಯಂತೆ. ಶಾಮಿ ಕಬಾಬ್, ಸ್ಪೆಶಲ್ ಬಿರಿಯಾನಿ, ಹೈದರಾಬಾದ್ ಬಿರಿಯಾನಿ, ನಾಲ್ಕೈದು ಬಗೆಯ ಪಲಾವ್ ಹಾಗೂ ಬಿರಿಯಾನಿಗಳನ್ನು ತಯಾರಿಸಿ ಮಕ್ಕಳಿಗೆ ಕೊಡುವುದು ಎಂದರೆ ಆಶಾಜೀಗೆ ಬಹಳ ಇಷ್ಟವಾದ ವಿಷಯವಂತೆ ! ಅಪರೂಪಕ್ಕೊಮ್ಮೆ ವೆಜ್ನಲ್ಲೂ ಹೊಸ ರುಚಿಗಳನ್ನು ಹುಡುಕಾಡುತ್ತಾರೆ ಆದರೆ ಕೊನೆಗೆ ನಾನ್ವೆಜ್ ಐಟಂಗಳಲ್ಲಿ ಹೊಸ ರುಚಿಗಳನ್ನು ತೋರಿಸಿ ಮನೆ ಮಂದಿ ಎಲ್ಲರನ್ನು ನಗಿಸಿಬಿಡುತ್ತಾರಂತೆ !!
ಅಂದಹಾಗೆ ಆಶಾಜೀ ವೆಜ್ ಐಟಂಗಳನ್ನು ಯಾಕ್ ಮಾಡ್ತಿಲ್ಲ ಗೊತ್ತಾ..? ಆಶಾಜೀಯ ಮಕ್ಕಳು ತರಕಾರಿಗಳನ್ನು ನೋಡಿದ ಕೂಡಲೇ ಓಡಿ ಹೋಗುತ್ತಾರಂತೆ ! ಮಕ್ಕಳಿಗೆ ಏನೂ ಇಷ್ಟವೋ ಅದನ್ನೇ ಮಾಡಿ ಕೊಡುವುದು ತಾಯಿಯಾದ ನನ್ನ ಕರ್ತವ್ಯ ಎನ್ನುತ್ತಾರೆ ಆಶಾ ಬೊಂಸ್ಲೆ. ‘ದಾಲ್- ಚವಾಲ್’ ಐಟಂಗಳನ್ನು ಕೂಡ ಆಶಾಜೀಯ ಮಕ್ಕಳು ಅಷ್ಟೊಂದು ಇಷ್ಟ ಪಡುವುದಿಲ್ಲವಂತೆ !! ಮಕ್ಕಳಿಗಾಗಿ ಹೊಸ ರುಚಿಯನ್ನು ತೋರಿಸುತ್ತಾ ಆಶಾಜೀ ಸಂಗೀತದಷ್ಟೇ ಅಡುಗೆಯಲ್ಲೂ ಪ್ರಾವೀಣ್ಯತೆಯನ್ನು ಸಂಪಾದಿಸಿಕೊಂಡಿದ್ದಾರಂತೆ. ಅಂದಹಾಗೆ ಆಶಾಜೀ ಬರೀ ಅಡುಗೆ ಮಾಡುತ್ತಾ ಮಕ್ಕಳ ಜತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈಗ ಬರೀ ಹೋಟೆಲ್ ಉದ್ಯಮಿಯಾಗುತ್ತಿದ್ದರು ಅಲ್ವಾ..? ಈ ಮೂಲಕ ಭಾರತೀಯ ಸಂಗೀತ ಲೋಕದಲ್ಲೊಂದು ಅಮೂಲ್ಯ ವಜ್ರ ಕಳೆದು ಹೋಗುತ್ತಿತ್ತು. ಅದು ಆಗಲಿಲ್ಲ ಎನ್ನೋದೇ ಗ್ರೇಟ್ ವಿಷ್ಯಾ.

ತಿರುಓಣಂನಲ್ಲಿ ‘ಭಾಮಾ’ಕುಟ್ಟಿ


ಮಲಯಾಳಿಗಳು ವಿಶ್ವದ ಯಾವುದೇ ಮೂಲೆಯಲ್ಲಿ ಇರಲಿ ಅವರಿಗೆ ಓಣಂ ವಿಶೇಷ ಹಬ್ಬ . ಸಿನ್ಮಾಕ್ಕೆ ಬರುವ ಮೊದಲು ಓಣಂಗಾಗಿ ಮನೆಯಲ್ಲಿ ಬಹಳಷ್ಟು ಸಿದ್ಧತೆ ನಡೆಯುತ್ತಿತ್ತು. ಈಗ ಸಿನ್ಮಾದಲ್ಲಿ ಬ್ಯುಸಿ ಇದ್ದರೂ ಕೂಡ ಹಬ್ಬದ ಟೈಮ್ನಲ್ಲಿ ಚಿತ್ರದ ಶೆಡ್ಯುಲ್ಗಳನ್ನು ಚೇಂಜ್ ಮಾಡಿ ಮನೆಯಲ್ಲಿಯೇ ಇದ್ದು ಬಿಡುತ್ತೇನೆ ಎನ್ನುತ್ತಾರೆ ಭಾಮಾ. ಅಂದಹಾಗೆ ತಿರುಓಣಂಗಾಗಿ ಭಾಮಾ ಜತೆಯಲ್ಲಿ ವಿಶೇಷ ಚಾಟ್ ಇಲ್ಲಿದೆ.

ಯಾರನ್ನೋ ಹುಡುಕಾಟದಲ್ಲಿರುವ ಸುಂದರ ನಯನಗಳು, ತುಟಿಯಂಚಿನಲ್ಲಿ ಮಿಂಚಿ ಥಟ್ ಅಂತಾ ಮರೆಯಾಗುವ ನಗು, ವೊದಲ ನೋಟದಲ್ಲೇ ಹೋಮ್ಲಿ ಲುಕ್ಕು ಕೊಡುವ ಮೈಮಾಟ, ಈ ಮೈಮಾಟದ ನಡುವೆಯೇ ಆಗಾಗ ಇಣುಕುವ ಗ್ಲಾಮರ್ ಲುಕ್. ಇವೆಲ್ಲವೂ ಒಟ್ಟಾದಾಗ ಕಾಣುವ ಸುಂದರ ಬೆಡಗಿಯೇ ಭಾಮಾ. ಯಾರು ಈ ಭಾಮಾ? ಎಂದು ನಿಮಗೆ ಗೊತ್ತಾಗದಿದ್ದರೆ ಕನ್ನಡದ ‘ವೊದಲಾ ಸಲ’ ಸಿನಿಮಾವನ್ನು ಒಂದ್ ಸಾರಿ ನೆನಪಿಸಿಕೊಳ್ಳಿ. ಆ ಚಿತ್ರದಲ್ಲಿ ಕ್ಯೂಟ್ ಬೆಡಗಿಯಾಗಿ ಕಾಣಿಸಿಕೊಂಡು ಅದೆಷ್ಟೋ ಮಂದಿ ಕನಸು ಕಾಣುವಂತೆ ಮಾಡಿದ್ದು ಇದೇ ಭಾಮಾ ಮಣಿ. ಈಗ ‘ಒಂದು ಕ್ಷಣದಲಿ’ ಹಾಗೂ ಗಣೇಶ್ ನಾಯಕರಾಗಿರುವ ‘ಶೈಲೂ’ ಸೇರಿದಂತೆ ಮಲಯಾಳಂನ ಎರಡು ಸಿನಿಮಾ. ತಮಿಳು, ತೆಲುಗಿನ ಒಂದೊಂದು ಸಿನ್ಮಾಗಳಲ್ಲಿ ಲೀಡ್ ರೋಲ್ನಲ್ಲಿ ಭಾಮಾ ಮಣಿ ಕಾಣಿಸಿಕೊಳ್ಳಲಿದ್ದಾರೆ. ಕೇರಳದ ಕೋಯಿಕೋಡ್ನ ಸುಂದರ ತಾಣದಲ್ಲಿ ಚಿತ್ರೀಕರಣವಾಗುತ್ತಿರುವ ಮಲಯಾಳಂನ ‘ಸೆವೆನ್ಸ್’ನ ಸೆಟ್ನಲ್ಲಿ ಭಾಮಾ ಲವಲವಿಕೆಯ ಕರೆಗೆ ಸಿಕ್ಕಿ ಬಿದ್ದರು. ಸೆವೆನ್ಸ್ನ ಬ್ಯುಸಿ ಶೆಡ್ಯುಲ್ ನಡುವೆನೂ ಭಾಮಾ ತನ್ನ ಚಿತ್ರ ಬದುಕು ಹಾಗೂ ಕೇರಳದ ದೊಡ್ಡ ಹಬ್ಬ ಓಣಂ ಕುರಿತು ಮುಕ್ತವಾಗಿ ಮಾತಿಗೆ ಇಳಿದು ಹೋದರು.
ಭಾಮಾ ಅಂತಾ ಕರೆದರೆ ಬರೀ ಸಿನ್ಮಾ ಇಂಡಸ್ಟ್ರಿಗೆ ಮಾತ್ರ ಗೊತ್ತಾಗುತ್ತದೆ. ಆದರೆ ಭಾಮಾರನ್ನು ಬಹಳಷ್ಟು ಜನ ಕರೆಯುವ ಹೆಸರು ರೇಖಿತಾ. ಸಿನಿಮಾಕ್ಕೆ ಬಂದ ನಂತರ ಭಾಮಾ ಎಂಬ ಹೆಸರು ಬಂದಿದೆ. ಭಾಮಾ ಮಲಯಾಳಂನಲ್ಲಿ ಬಹುಬೇಡಿಕೆಯ ಸಾಲಿನಲ್ಲಿರುವ ನಟಿ. ವೊದಲ ಚಿತ್ರ ‘ನೈವೇದ್ಯಂ’ನಿಂದ ಹಿಡಿದು ವೊನ್ನೆ ವೊನ್ನೆ ತೆರೆಕಂಡ ‘ಕಾಲೇಜ್ ಡೇಸ್’ ಚಿತ್ರಗಳವರೆಗೂ ಭಾಮಾ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಹೌದು, ಭಾಮಾ ಸಿನಿಮಾರಂಗ ಪ್ರವೇಶಿಸಿದ್ದು ಹೇಗೆ? ಎಂಬ ಪ್ರಶ್ನೆಗೆ ಭಾಮಾಮಣಿ ಒಂದು ಕಥೆ ಹೇಳುತ್ತಾಳೆ. ‘ನಾನು ಟಿವಿಯಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದೆ. ಆ ಕಾರ್ಯಕ್ರಮ ಕೂಡ ತುಂಬಾ ಜನಪ್ರಿಯವಾಗಿತ್ತು. ಅದೊಂದು ದಿನ ಕಾರ್ಯಕ್ರಮ ನೋಡಿದ ನಿರ್ದೇಶಕ ಲೋಹಿತ್ದಾಸ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಅಲ್ಲಿಂದ ನನ್ನ ಫಿಲ್ಮಿಜರ್ನಿ ಆರಂಭವಾಯಿತು’ ಎನ್ನುತ್ತಾಳೆ ಈ ಮಲಯಾಲಿ ಬೆಡಗಿ. ಅಂದಹಾಗೆ, ಭಾಮಾಗೆ ಆ ಲೋಹಿತ್ದಾಸ್ ಅವರೇ ಗಾಡ್ಫಾದರ್.
ಈಗಾಗಲೇ ಭಾಮಾ ನಾಲ್ಕು ಭಾಷೆಗಳಲ್ಲಿ ನಟಿಸಿದಂತಾಗಿದೆ. ಇನ್ನೊಂದು ಭಾಷೆಯಲ್ಲಿ ನಟಿಸಿದರೆ ಭಾಮಾ ಪಂಚಭಾಷಾ ನಟಿ. ತಮಿಳು, ತೆಲುಗಿನಲ್ಲೂ ಭಾಮಾಗೆ ಒಳ್ಳೆಯ ಬೇಡಿಕೆ ಇದೆಯಂತೆ. ಹಾಗಂತ ತನ್ನ ವೊದಲ ಆದ್ಯತೆ ಮಲಯಾಳಂ ಹಾಗೂ ಕನ್ನಡಕ್ಕೆ ಎನ್ನುವುದು ಈಕೆಯ ಮಾತು. ಶ್ರೀದೇವಿ, ಜಯಪ್ರದಾ ಹಾಗೂ ಕಮಲಹಾಸನ್ ಎಂದರೆ ಭಾಮಾಗೆ ಸಖತ್ ಇಷ್ಟವಂತೆ. ಇವರ ಸಿನಿಮಾಗಳನ್ನು ನೋಡಿ, ತನ್ನ ನಟನೆಯಲ್ಲಿ ಏನೆಲ್ಲಾ ಸುಧಾರಿಸಬಹುದೋ ಅದನ್ನು ಮಾಡುತ್ತಾಳಂತೆ.
‘ಸಿನಿಮಾ ಅನ್ನೋದು ನನ್ನ ಉಸಿರು. ಈ ಫೀಲ್ಡ್ನಲ್ಲಿ ತುಂಬಾ ವರ್ಷ ಇರಬೇಕೆಂಬ ಆಸೆಯೊಂದಿಗೆ ಪ್ರತಿ ಸಿನಿಮಾವನ್ನು ಒಪ್ಪಿಕೊಳ್ಳುತ್ತೇನೆ. ಹೀಗಿರುವಾಗ ನನಗೆ ಇಷ್ಟವಾಗದ ಸಿನಿಮಾವನ್ನು ಯಾಕೆ ಒಪ್ಪಿಕೊಳ್ಳಬೇಕು. ಒಂದು ಸಿನಿಮಾದಲ್ಲಿ ನನ್ನ ಪಾತ್ರ ಕೆಟ್ಟದಾಗಿದ್ದರೂ ಅದು ತನ್ನ ಕೆರಿಯರ್ಗೆ ಪೆಟ್ಟು ಕೊಡುತ್ತದೆ. ಅದಕ್ಕಾಗಿ ನಾನು ಆಯ್ಕೆ ವಿಷಯದಲ್ಲಿ ತುಂಬಾ ಚೂಸಿ. ನನಗೆ ನಾನು ಎಷ್ಟು ಸಿನಿಮಾ ಮಾಡಿದ್ದೇನೆ ಅನ್ನೋದು ಮುಖ್ಯವಲ್ಲ. ಮಾಡಿದ ಸಿನಿಮಾಗಳು ಎಂಥವು ಅನ್ನೋದು ಮುಖ್ಯ. ನನಗೆ ಪ್ರೊಫೆಶನಲ್ ನಟಿಯಾಗಿರಲು ಇಷ್ಟ’ ಎಂಬ ಪ್ರಬುದ್ಧ ಉತ್ತರ ಭಾಮಾರಿಂದ ಹೊರ ಬರುತ್ತದೆ.
ಅದು ತವರುಮನೆ:
ಇದು ಪಕ್ಕದ್ಮನೆ ಕನ್ನಡದಲ್ಲಿ ವೊದಲ ಅವಕಾಶ ಸಿಕ್ಕಾಗ ಭಾಮಾ ಸಿಕ್ಕಾಪಟ್ಟೆ ಥ್ರಿಲ್ ಆದರಂತೆ. ಏಕೆಂದರೆ ಮಲಯಾಳಂನಿಂದ ಅದೆಷ್ಟೋ ನಟಿಯರು ಕನ್ನಡಕ್ಕೆ ಬಂದು ಮಿಂಚಿದ್ದಾರೆ, ಒಳ್ಳೊಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ತನಗೂ ಕನ್ನಡದಿಂದ ಅವಕಾಶ ಬಂದಾಗ ಭಾಮಾಗೆ ಖುಷಿಯೋ ಖುಷಿಯಂತೆ. ಇದೇ ಕಾರಣದಿಂದ ಕಥೆ ಕೇಳಿದಾಕ್ಷಣ ಭಾಮಾ ನಟಿಸಲು ಒಪ್ಪಿಕೊಂಡರಂತೆ. ‘ಮಲಯಾಳಂ ನನಗೆ ತವರು ಮನೆಯಾದರೆ, ಕನ್ನಡ ಪಕ್ಕದ್ಮನೆ ಇದ್ದಂತೆ. ನಮಗೆ ಪಕ್ಕದ್ಮನೆಯಲ್ಲಿ ತುಂಬಾ ಪ್ರೀತಿ, ಸಲುಗೆ ಇರುತ್ತದೆ. ಅಲ್ಲಿ ಯಾವುದೇ ಭಯವಿರುವುದಿಲ್ಲ. ಅದೇ ರೀತಿ ಕನ್ನಡ ಚಿತ್ರರಂಗ ಕೂಡ ನನಗೆ ತುಂಬಾ ಇಷ್ಟವಾದ ಚಿತ್ರರಂಗ. ಇಲ್ಲಿ ನನಗೆ ಎಲ್ಲವೂ ಕಂಫರ್ಟ್. ಅದೇ ಕಾರಣದಿಂದ ನನಗೆ ಕನ್ನಡವೆಂದರೆ ತುಂಬಾ ಪ್ರೀತಿ. ಮುಂದಿನ ದಿನಗಳಲ್ಲಿ ಕನ್ನಡ ಕಲಿತು ಮಾತನಾಡುತ್ತೇನೆ ನೋಡ್ತಾ ಇರಿ’ ಎಂದು ನಕ್ಕು ಬಿಡುತ್ತಾರೆ ಭಾಮಾ.
ಸಿನಿಮಾ ಎಂದ ಮೇಲೆ ಅಲ್ಲಿ ಗ್ಲಾಮರ್ ಬೇಕೇ ಬೇಕು. ಜತೆ ಜತೆಗೆ ಎಕ್ಸ್ಪೋಸ್ ಕೂಡ. ಕೆಲವು ನಟಿಮಣಿಯರು ಬಣ್ಣದ ಲೋಕದ ಈ ಎರಡಕ್ಕೂ ಸಿದ್ಧರಾಗಿಯೇ ಎಂಟ್ರಿಕೊಟ್ಟಿರುತ್ತಾರೆ. ಇನ್ನು ಕೆಲವರು ಬರೀ ಗ್ಲಾಮರ್ಷ್ಟೇ ಓಕೆ ಅನ್ನುತ್ತಾರೆ. ಭಾಮಾ ಇದರಲ್ಲಿ ಎರಡನೇ ಕೆಟಗರಿಗೆ ಸೇರಿದವಳು. ಈಗಾಗಲೇ ಹೋಮ್ಲಿ ಲುಕ್ಕು ಎಂಬ ಹೆಸರು ಪಡೆದಿರುವ ಭಾಮಾ ಎಕ್ಸ್ಪೋಸ್ ಮಾಡುವುದಿಲ್ಲವಂತೆ. ಅಂತಹ ಚಿತ್ರಗಳು ನನಗೆ ಬೇಕಾಗಿಲ್ಲ ಅನ್ನುತ್ತಾಳೆ. ಹಾಗಂತ ಅಸಹ್ಯವೆನಿಸಿದ ಗ್ಲಾಮರ್ಗೆ ಆಕೆಯ ಅಭ್ಯಂತರವಿಲ್ಲ. ‘ಎಕ್ಸ್ಪೋಸ್ ಮಾಡಲು ನನಗೆ ಇಷ್ಟವಿಲ್ಲ. ಅಸಹ್ಯವೆನಿಸುವಂತೆ ಎಕ್ಸ್ಪೋಸ್ ಮಾಡಿದರೆ ಒಂದಷ್ಟು ಮಂದಿ ಮಾಸ್ ಪ್ರೇಕ್ಷಕರಿಗಷ್ಟೇ ಖುಷಿ ಸಿಗಬಹುದು. ಆದರೆ ಫ್ಯಾಮಿಲಿ ಪ್ರೇಕ್ಷಕರಿಗೆ ಅದು ಇಷ್ಟವಾಗುವುದಿಲ್ಲ. ಹೀಗಿರುವಾಗ ನನಗೆ ಎಕ್ಸ್ಪೋಸ್ ಮಾಡಿ ಹೆಸರು ಮಾಡುವ ಅಗತ್ಯವಿಲ್ಲ. ಆದರೆ ಸಿನಿಮಾಕ್ಕೆ ಬೇಕಾದ ಹಾಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ನಾನು ರೆಡಿ’ ಎನ್ನುವುದು ಭಾಮಾ ಮಾತು.
ಅಂದಹಾಗೆ ಓಣಂ ಕುರಿತು ಮಾತಿಗೆ ಇಳಿದಾಗ ಭಾಮಾ ಹೇಳುವುದಿಷ್ಟು: ನಾವು ಮಲಯಾಳಿಗಳು ವಿಶ್ವದ ಯಾವುದೇ ಮೂಲೆಯಲ್ಲಿ ಇರಲಿ ನಮಗೆ ಓಣಂ ವಿಶೇಷ ಹಬ್ಬ . ಸಿನ್ಮಾಕ್ಕೆ ಬರುವ ಮೊದಲು ಓಣಂಗಾಗಿ ಮನೆಯಲ್ಲಿ ಬಹಳಷ್ಟು ಸಿದ್ಧತೆ ನಡೆಯುತ್ತಿತ್ತು. ಈಗ ಸಿನ್ಮಾದಲ್ಲಿ ಬ್ಯುಸಿ ಇದ್ದರೂ ಕೂಡ ಹಬ್ಬದ ಟೈಮ್ನಲ್ಲಿ ಚಿತ್ರದ ಶೆಡ್ಯುಲ್ಗಳನ್ನು ಚೇಂಜ್ ಮಾಡಿ ಮನೆಯಲ್ಲಿಯೇ ಇರುತ್ತೇನೆ. ಕುಟುಂಬಿಕರು ಸೇರಿದಂತೆ ಸ್ನೇಹಿತರ ಜತೆ ಸೇರಿ ಹಬ್ಬ ಜೋರಾಗಿ ಆಚರಿಸುತ್ತೇವೆ. ಒಟ್ಟಾಗಿ ಸೇರುವುದರಿಂದ ಓಣಂ ನನಗೆ ವಿಶಿಷ್ಟ ಹಬ್ಬ ಎನ್ನುವುದು ಭಾಮಾರ ಓಣಂ ಹಬ್ಬದ ಮಾತು.