
ನಿರ್ಮಾಪಕ ಸರಿಯಾಗಿ ಹಣ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿ ಚಿತ್ರದ ಅರ್ಧ ಹಕ್ಕುಗಳನ್ನು ಕೊಂಡು ಮೆರೆದಾಡಿದವರು ಗಾಂಽನಗರದಲ್ಲಿ ಕಾಣಸಿಗಬಹುದು. ಆದರೆ ಒಂಚೂರು ಸಂಭಾವನೆ ಪಡೆಯದೇ ನಟಿಸಿದ ನಾಯಕಿಯೊಬ್ಬಳ ಕತೆ ಕೇಳಿ...
ನಿರ್ಮಾಪಕ ಸರಿಯಾಗಿ ಹಣ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿ ಚಿತ್ರದ ಅರ್ಧ ಹಕ್ಕುಗಳನ್ನು ಕೊಂಡು ಮೆರೆದಾಡಿದವರು ಗಾಂಽನಗರದಲ್ಲಿ ಕಾಣಸಿಗಬಹುದು. ನಿರ್ಮಾಪಕ ಚಿತ್ರೀಕರಣದ ಸೆಟ್ನಲ್ಲಿ ಕಿರಿಕಿರಿ ಮಾಡ್ತಾರೆ... ಎಂದು ಪ್ರೆಸ್ ಮುಂದೆ ನಿಂತು ಕಣ್ಣೀರು ಹಾಕುವ ಸಿಸ್ಟಂಗಳು ಗಾಂಽನಗರದಲ್ಲೆ ಬೇಜಾನ್ ಆಗಿದೆ.
ಆದರೆ ಇದು ನನ್ನ ಚಿತ್ರ, ನಿರ್ಮಾಪಕ ನನ್ನ ಪಾಲಿನ ದೇವರು ಎಂದುಕೊಂಡು ಚಿತ್ರ ಮಾಡುವವರು ಗಾಂಽನಗರದ ಗಲ್ಲಿಯಲ್ಲಿ ಸಿಗುತ್ತಾರಾ ಎನ್ನುವ ಪ್ರಶ್ನೆಗೆ ಇಲ್ಲೊಂದು ಅನ್ಸರ್ ಸಿಕ್ಕಿದೆ.
ಚಿತ್ರ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಕನ್ನಡದಲ್ಲಿ ಹೇಳುವುದಾದರೆ ‘ಬೆಳಕು’ ಈ ರೀತಿ ಉದಾರತೆ ತೋರಿ ನಟಿಸಿದ ನಾಯಕಿ ಗ್ಲಾಮರ್ ಡಾಲ್ ನೀತು.
ಗಾಳಿಪಟ, ಪೂಜಾರಿ ಸೇರಿದಂತೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ ನೀತು ‘ಉಜ್ವಾಡು’ ಚಿತ್ರದಲ್ಲಿ ಯಾಕೇ ಸಂಭಾವನೆ ಪಡೆದುಕೊಂಡಿಲ್ಲ ಎಂದು ಕೇಳಿದ್ರೆ ‘ಅದು ನನ್ನ ಮಾತೃಭಾಷೆಯ ಚಿತ್ರ. ಇಲ್ಲಿ ಸಂಭಾವನೆ ಬೇಕಾಗಿಲ್ಲ. ಭಾಷೆಯ ಮೇಲಿನ ಕಾಳಜಿ ಇರಬೇಕು. ಚಿತ್ರ ನನ್ನದು ಎನ್ನುವ ಭಾವನೆ ಇದ್ದಾರೆ ಸಾಕು ಎನ್ನುತ್ತಾರೆ ನೀತು.
‘ಉಜ್ವಾಡು’ ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ಚಿತ್ರೀಕರಣದ ಸಮಯದಲ್ಲಿ ನಡೆದ ಒಂದು ಸನ್ನಿವೇಶವನ್ನು ಲವಲವಿಕೆಯ ಮುಂದೆ ಹೇಳುತ್ತಿದ್ದರು.
‘ಚಿತ್ರದ ಬಹುತೇಕ ಭಾಗಗಳು ಶೂಟ್ ಆಗಿತ್ತು. ನೀತು ಅವರ ಒಂದು ಕ್ಲೈಮಾಕ್ಸ್ ಸೀನ್ ಬಾಕಿ ಉಳಿದಿತ್ತು. ಅಷ್ಟರಲ್ಲಿ ನನ್ನ ಮೊಬೈಲ್ಗೆ ‘ನೀತು ತಂದೆ ಹೋಗಿಬಿಟ್ಟರು ’ಎನ್ನುವ ಮೆಸೇಜ್ ಬಂದು ಬಿದ್ದಿತ್ತು. ಆದರೆ ನೇರವಾಗಿ ನೀತು ಬಳಿಯಲ್ಲಿ ಹೇಳಲಾಗದ ಪರಿಸ್ಥಿತಿ. ಬೇರೊಬ್ಬರ ಮೂಲಕ ಹೇಳಿ ಮಾಡಿಸಿದೆ. ನೀತು ಅಲ್ಲಿಂದ ಹೊರಟು ನಿಂತರು. ನೀತು ಹತ್ತು ದಿನಗಳ ಮಟ್ಟಿಗೆ ಕೈಗೆ ಸಿಗೋಲ್ಲ ಎಂದು ಚಿತ್ರತಂಡದ ಸದಸ್ಯರು ಹೇಳಿಕೊಳ್ಳುತ್ತಿದ್ದರು. ಆದರೆ ಮರುದಿನ ತಂದೆಯ ಕ್ರಿಯಾವಿದಿಗಳನ್ನು ಮುಗಿಸಿಕೊಂಡು ನೀತು ಶೂಟಿಂಗ್ ಸ್ಪಾಟ್ಗೆ ಹಾಜರಾಗಿದ್ದರು. ಎಲ್ಲರಿಗೂ ಅಚ್ಚರಿಯಾಗಿತ್ತು. ತಂದೆಯ ಮರಣದ ನಂತರ ನೀತು ಯಾವ ರೀತಿಯಲ್ಲಿ ಚಿತ್ರೀಕರಣದಲ್ಲಿ ಸ್ಪಂದಿಸುತ್ತಾರೆ ಎನ್ನುವ ಹೆದರಿಕೆ ಇತ್ತು. ನೀತು ಎಂದಿನ ಲವಲವಿಕೆಯಲ್ಲಿ ಚಿತ್ರೀಕರಣ ಮುಗಿಸಿ ತಾನು ಎಲ್ಲ ನಾಯಕಿ, ನಾಯಕರಂತೆ ಅಲ್ಲ ಎನ್ನುವುದನ್ನು ಸಾಭೀತು ಮಾಡಿ ಬಿಟ್ಟ್ರು ಎಂದು ಚಿನ್ನಾ ನೀತು ಕುರಿತು ಹೇಳುತ್ತಿದ್ದರು.
ತುಂಬಾ ಬೇಸರದ ಟೈಮ್ನಲ್ಲಿ ಈ ರೀತಿಯಲ್ಲಿ ವರ್ತಿಸಲು ನೀತುಗೆ ಹೇಗೆ ಸಾಧ್ಯವಾಯಿತು ಎಂದು ಚಿನ್ನಾ ಕೇಳಿದ್ದರಂತೆ, ಅದಕ್ಕೆ ನೀತು ಹೇಳಿದಿಷ್ಟು ‘ ನೋಡಿ ಸಾರ್... ನಿರ್ಮಾಪಕ ನಮ್ಮನ್ನು ನಂಬಿ ಚಿತ್ರಕ್ಕೆ ಬಹಳಷ್ಟು ಹಣ ಸುರಿಯುತ್ತಾರೆ. ನಮ್ಮಿಂದ ಅಂತಹ ನಿರ್ಮಾಪಕನಿಗೆ ಅನ್ಯಾಯವಾಗಕೂಡದು. ಬದುಕಿನಲ್ಲಿ ಏಳುಬೀಳುಗಳು ಇದ್ದೇ ಇರುತ್ತದೆ. ಎಲ್ಲವನ್ನು ಹೊಂದಿಕೊಂಡು ಮುನ್ನಡೆಯಬೇಕು’ ಎಂದರಂತೆ !
ನಿಜಕ್ಕೂ ಒಬ್ಬ ಚಿತ್ರ ಕಲಾವಿದ ಈ ರೀತಿಯಲ್ಲಿ ವರ್ತಿಸಲು ಆರಂಭಿಸಿದರೆ ಗಾಂಽನಗರದ ಬಹಳಷ್ಟು ನಿರ್ಮಾಪಕರು ಬೀದಿಗೆ ಬೀಳೋದು ತಪ್ಪುತ್ತದೆ ಅಲ್ವಾ...?
ವಿಜಯ ಕರ್ನಾಟಕದ ಲವಲವಿಕೆಯ ಪುರವಣಿಯಲ್ಲಿ ಮೇ ೨೧,2011ರಂದು ಪ್ರಕಟವಾಗಿದೆ.
No comments:
Post a Comment