Thursday, January 26, 2012

ಗಾಯಕ ಅದ್ನಾನ್ ಈಗ ಲೇಖಕ


ಅದ್ನಾನ್ ಗಾಯನಕ್ಕೆ ಕೊಂಚ ಬ್ರೇಕ್ ಕೊಟ್ಟು ಯಾವ ರೀತಿ ‘ವೈಟ್ ಲೂಸ್’ ಮಾಡಬಹುದು ಎನ್ನುವ ಕುರಿತು ತನ್ನ ಆಪ್ತರಿಗೆ ಸಲಹೆ ಕೊಡುತ್ತಿದ್ದಾರೆ. ಅದರಲ್ಲೂ ತಾನು ಯಾವ ರೀತಿ ವೈಟ್ ಲೂಸ್ ಮಾಡಿದ್ದೇನೆ ಎನ್ನುವ ರಹಸ್ಯವನ್ನು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಸಿಕ್ರೇಟ್‌ವೊಂದನ್ನು ಬಿಚ್ಚಿಡಲು ಅದ್ನಾನ್ ರೆಡಿಯಾಗಿದ್ದಾರೆ.

ಬಾಲಿವುಡ್ ಇರಲಿ ಯಾವುದೇ ವುಡ್‌ಗಳಿರಲಿ ಅದ್ನಾನ್ ಸಾಮಿ ಸಂಗೀತ ಪ್ರೇಮಿಗಳನ್ನು ಎಂದಿಗೂ ಕೈಬಿಟ್ಟಿಲ್ಲ. ತನ್ನ ಆಲ್ಬಂಗಳಲ್ಲಿ ವಿರಹ ತುಂಬಿದ ಗೀತೆಗಳನ್ನು ಸುರಿಸಿ ಭಗ್ನ ಪ್ರೇಮಿಗಳಿಗೆ ಧೈರ್ಯ ತುಂಬಿದ್ದು ಇದೇ ಅದ್ನಾನ್ ಸಾಮಿ. ಲಿಫ್ಟ್ ಮಾಡಲು ಸಾಧ್ಯವಿಲ್ಲದೇ ಒದ್ದಾಡುವ ಟನ್‌ಗಟ್ಟಲೆ ತೂಗುವ ದೇಹ. ಮುದ್ದೆಯನ್ನು ಬೀಟ್ ಮಾಡಿ ಬಿಡುವ ಮುದ್ದು ಮುದ್ದಾದ ಮೊಗ. ಹುಡುಗಿಯರು ಫೀದಾ ಆಗುವ ನಗು. ಭಗ್ನ ಪ್ರೇಮಿಗಳನ್ನು ತಣ್ಣನೆ ಮಾಡಿಬಿಡುವಂತಹ ವಾಯ್ಸ್ ಇದು ಬಾಲಿವುಡ್ ಸಿಂಗರ್ ಅದ್ನಾನ್ ಸಾಮಿಯ ಈ ಹಿಂದಿನ ಜಸ್ಟ್ ಇಂಟರ್‌ಡಕ್ಷನ್.
ಆದರೆ ಅದ್ನಾನ್ ಗಾಯನಕ್ಕೆ ಕೊಂಚ ಬ್ರೇಕ್ ಕೊಟ್ಟು ಯಾವ ರೀತಿ ‘ವೈಟ್ ಲೂಸ್’ ಮಾಡಬಹುದು ಎನ್ನುವ ಕುರಿತು ತನ್ನ ಆಪ್ತರಿಗೆ ಸಲಹೆ ಕೊಡುತ್ತಿದ್ದಾರೆ. ಅದರಲ್ಲೂ ತಾನು ಯಾವ ರೀತಿ ವೈಟ್ ಲೂಸ್ ಮಾಡಿದ್ದೇನೆ ಎನ್ನುವ ರಹಸ್ಯವನ್ನು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಸಿಕ್ರೇಟ್‌ವೊಂದನ್ನು ಬಿಚ್ಚಿಡಲು ಅದ್ನಾನ್ ರೆಡಿಯಾಗಿದ್ದಾರೆ.
ಅದ್ನಾನ್ ನಿಜಕ್ಕೂ ಭಾರತದವನೇನಲ್ಲ. ಆದರೆ ಭಾರತದ ಸಂಗೀತ ಪ್ರೇಮಿಗಳು ಆತನಿಗೆ ಪ್ರೀತಿಯನ್ನು ತುಂಬಿ ತುಂಬಿಕೊಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಹುಟ್ಟಿದ ಭಾರತದಲ್ಲಿ ವಾಸಿಸುತ್ತಿದ್ದ ತಂದೆ ಮತ್ತು ಭಾರತೀಯ ಮುಸ್ಲಿಂ ತಾಯಿಗೆ ಲಂಡನ್‌ನಲ್ಲಿ ಹುಟ್ಟಿದ ಮಗ ಅದ್ನಾನ್ ಸಾಮಿ. ಯಾವಾಗಲೂ ಕೀಬೋರ್ಡ್ ಜತೆಯಲ್ಲಿ ಪ್ರೀತಿ ಇರುವ ಕಾರಣ ಬದುಕಿನಲ್ಲಿ ಗಾಯಕನಾಗಿ ಬಿಟ್ಟ ಎನ್ನುವುದು ಅದ್ನಾನ್‌ನ ಆಪ್ತ ಗೆಳೆಯರ ಮಾತು.
ಲೂಸ್ ವೈಟ್ ಕತೆ:
ಅದ್ನಾನ್ ಸಾಮಿ ತನ್ನ ದೇಹದ ತೂಕ ಇಳಿಸಲು ಮಾಡಿದ ಪ್ರಯತ್ನಗಳನ್ನು ಒಂದು ಕಡೆ ಜೋಪಾನವಾಗಿ ಜೋಡಿಸಿಕೊಂಡು ಪುಸ್ತಕಕ್ಕೆ ಇಳಿಸುತ್ತಿದ್ದಾರೆ. ಆರಂಭದಲ್ಲಿ ೨೩೦ ಕೆ.ಜಿ. ತೂಕ ಇದ್ದ ಅದ್ನಾನ್ ದೇಹದ ತೂಕ ಈಗ ತೂಕದ ಮುಳ್ಳು ನಿಂತಿರೋದು ಬರೀ ೮೫ ಕೆ.ಜಿಯಲ್ಲಿಯಂತೆ ! ಅದ್ನಾನ್ ಹೇಳುವಂತೆ ಯಾವಾಗಲೂ ದೇಹದ ತೂಕ ಇಳಿಸುವ ವಿಚಾರಗಳನ್ನು ಬೇರೆ ಯಾರಲ್ಲೂ ಹಂಚಿಕೊಳ್ಳಬಾರದು ಅಂದುಕೊಂಡಿದ್ದೆ. ಆದರೆ ನನ್ನಂತೆಯೇ ಬಹಳಷ್ಟು ಜನ ದೇಹದ ತೂಕದಿಂದ ಜರ್ಜರಿತವಾಗಿದ್ದಾರೆ. ಅವರಿಗೆ ನಾನು ಮಾಡಿದ ಉಪಾಯಗಳನ್ನು ಹೇಳಿಕೊಂಡರೆ ಕೊಂಚ ರಿಲ್ಯಾಕ್ಸ್ ಆಗಬಹುದು ಎಂದುಕೊಂಡಿದ್ದೇನೆ ಎನ್ನುತ್ತಾರೆ.
ಆರಂಭದಲ್ಲಿ ನನಗೆ ವೈದ್ಯರು ಭಾರ ಇಳಿಸಲು ಹೇಳುತ್ತಿದ್ದರು. ಭಾರ ಇಳಿಸದೇ ಹೋದರೆ ಆರು ತಿಂಗಳಲ್ಲಿ ಹೃದಯಕ್ಕೆ ಸಂಬಂತ ಕಾಯಿಲೆಗಳು ಮುತ್ತಿಕೊಳ್ಳುತ್ತದೆ ಎಂದು ಹೆದರಿಕೆ ಹುಟ್ಟಿಸಿದ್ದರು. ನನ್ನ ಮುಂದೆ ಬೇರೆ ಯಾವುದೇ ದಾರಿಗಳಿರಲಿಲ್ಲ. ನಾನು ದೇಹದ ತೂಕ ಇಳಿಸಲೇ ಬೇಕಿತ್ತು ಎನ್ನುವುದು ಅದ್ನಾನ್ ಮಾತು.
ದೇಹದ ತೂಕ ಇಳಿಸುವ ವಿಚಾರಗಳನ್ನು ಎರಡು ರೀತಿಯಲ್ಲಿ ನಾನು ಅಧ್ಯಯನ ಮಾಡಿದೆ. ಮೊದಲು ತೂಕ ಯಾವ ಕಾರಣಕ್ಕೆ ಹೆಚ್ಚಾಗುತ್ತಿದೆ. ನಂತರ ತೂಕ ಇಳಿಸಲು ಏನು ಮಾಡಬೇಕು ಎನ್ನುವ ಎರಡು ಪ್ರಶ್ನೆಗಳ ಉತ್ತರದಲ್ಲಿ ದೇಹದ ತೂಕದ ಲೆಕ್ಕಚಾರವಿದೆ ಎನ್ನುವುದು ಅದ್ನಾನ್ ಮಾತು. ನನ್ನ ದೇಹದ ತೂಕದಿಂದಾಗಿ ನಾನು ಏರ್‌ಕ್ರಾಫ್ಟ್‌ಗಳಲ್ಲಿ ಸರಿಯಾಗಿ ಕೂರುವಂತಿರಲಿಲ್ಲ.
ಒಂದೇ ಉಸಿರಿನಲ್ಲಿ ಹೆಚ್ಚು ಮಾತನಾಡುವಂತಿರಲಿಲ್ಲ. ಇಂತಹ ನಾನಾ ಸಮಸ್ಯೆಗಳನ್ನು ನಾನು ಬದುಕಿನಲ್ಲಿ ಕಂಡಿದ್ದೆ. ಈ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎನ್ನುವುದಕ್ಕಾಗಿ ಭಾರ ಇಳಿಸುವ ನಿರ್ಧಾರಕ್ಕೆ ಬಂದೆ. ನಾನು ಬರೆಯಲು ಹೊರಟಿರುವ ಕೃತಿಯಲ್ಲಿ ಈ ಎಲ್ಲ ವಿಚಾರಗಳಿಗೆ ಮದ್ದು ಇದೆ. ಕೃತಿಯನ್ನು ಎರಡು ಭಾಗವಾಗಿ ವಿಂಗಡಿಸಿಕೊಂಡಿದ್ದೇನೆ. ಒಂದು ಭಾಗದಲ್ಲಿ ಭಾರ ಇಳಿಸಲು ಇರುವ ಆಹಾರ ಪಥ್ಯಗಳು ಹಾಗೂ ಮತ್ತೊಂದು ಭಾಗದಲ್ಲಿ ಯಾವ ರೀತಿ ತೂಕ ಇಳಿಸಬಹುದು ಎನ್ನುವ ವಿಚಾರಗಳಿಗೆ ಗಮನ ಕೊಡಲಾಗಿದೆ.
ಮೊದಲ ಭಾಗದಲ್ಲಿ ನಾನು ಭಾರ ಇಳಿಸಲು ಮಾಡಿದ ಎಲ್ಲ ಕಸರತ್ತುಗಳು ಇರಲಿವೆ. ಮತ್ತೊಂದು ಭಾಗದಲ್ಲಿ ಕುಕ್ ಬುಕ್ ರೀತಿಯಲ್ಲಿದೆ. ನಾನೊಬ್ಬ ತಿಂಡಿಪೋತ ಜತೆಯಲ್ಲಿ ಒಳ್ಳೆಯ ಕುಕ್ ಕೂಡ ಆಗಿದ್ದೇನೆ. ಅದಕ್ಕಾಗಿ ಹೊಸ ರೀತಿಯ ಅಡುಗೆ ರೆಸಿಪಿಗಳನ್ನು ಕೂಡ ಈ ಕೃತಿಯಲ್ಲಿ ನೀಡಲಿದ್ದೇನೆ. ಅಂದಹಾಗೆ ಈ ಕೃತಿ ಆರು ತಿಂಗಳೊಳಗಾಗಿ ದೇಶದ ಎಲ್ಲ ಪುಸ್ತಕ ಅಂಗಡಿಗಳಲ್ಲಿ ಸಿಗಲಿದೆ. ಅಲ್ಲಿವರೆಗೂ ಅದ್ನಾನ್ ಸಾಮಿಯ ಕೃತಿಗಾಗಿ ಕಾದು ಕೂರುವ ಕಾಯಕ ಮುಂದುವರಿಸಬೇಕು.
(vk daily lvk puravani published dis article on 27.1.2012)

ಧೋನಿಯಲ್ಲಿ ‘ರೈ’ಸ್ ಬಾತ್


ಕ್ರಿಕೆಟರ್ ಧೋನಿ ಕುರಿತು ಹರಿದಾಡುವ ಎಲ್ಲ ವಿಚಾರಗಳಿಗೂ ಬ್ರೇಕ್ ಕೊಟ್ಟು ಬಿಡಿ. ಧೋನಿ ಈಗ ಹಿರಿ ತೆರೆಯ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಕನ್ನಡದ ನಟ ಕಮ್ ನಿರ್ದೇಶಕ ಪ್ರಕಾಶ್ ರೈ ಧೋನಿಯನ್ನು ಬಗಲಿಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಮಾಡಲು ಬಂದಿದ್ದಾರೆ.

ನೂರು ಶೇಕಡಾದಷ್ಟು ಟೋಟಲ್ ನಿರೀಕ್ಷೆ. ಜತೆಗೆ ಧೋನಿ ಹೇಗೆ ಬರುತ್ತಾನಪ್ಪ ..ಎನ್ನುವ ಪುಟ್ಟ ಕುತೂಹಲ. ಹೊಸ ವರ್ಷದ ಆರಂಭದಲ್ಲಿಯೇ ಧೋನಿ ಸಾರಥ್ಯದ ಟೀಂ ಇಂಡಿಯಾ ಮುಗ್ಗರಿಸಿಕೊಂಡು ಬೀಳುತ್ತಿರುವುದು ಧೋನಿ ಫ್ಯಾನ್‌ಗಳಿಗಂತೂ ಕೆಟ್ಟ ವಿಚಾರ ಇರಬಹುದು. ಧೋನಿ ಫೀಲ್ಡ್‌ನಲ್ಲಿ ಎರ್ರಾಬಿರ್ರಿ ಎಡವಟ್ಟು ಮಾಡಿಕೊಂಡು ಸುದ್ದಿ ಅಂಕಣದಲ್ಲಿ ಬಂದು ಬೀಳುತ್ತಿರುವುದು ದಿನ ನಿತ್ಯದ ಕಾಮನ್ ಪಿನೋಮಿನಾ ಅಲ್ವಾ..? ಆದರೆ ಈ ಎಲ್ಲ ಬ್ಯಾಡ್ ನ್ಯೂಸ್‌ಗಳ ನಡುವೆ ಧೋನಿ ಮತ್ತೊಂದು ಏರಿಯಾದಲ್ಲಿ ವರ್ಕ್‌ಔಟ್ ಆಗುತ್ತಿದ್ದಾರೆ. ೧೧ ಮಂದಿಯ ಇರುವ ಟೀಂ ಇಂಡಿಯಾವನ್ನು ಬಿಟ್ಟು ಧೋನಿ ಬೇರೊಂದು ಫೀಲ್ಡ್‌ನಲ್ಲಿ ಚಮಕ್ ತೋರಿಸಲಿದ್ದಾರೆ.
ಹೌದು. ಫೆಬ್ರವರಿ ಫಸ್ಟ್ ವೀಕ್‌ನಲ್ಲಿ ಧೋನಿ ಏಕ್‌ದಂ ಸಿನ್ಮಾ ಥಿಯೇಟರ್‌ಗೆ ನುಗ್ಗಿಕೊಂಡು ಬರಲಿದ್ದಾರೆ. ಬ್ಯಾಟ್‌ನ ಜಾಗದಲ್ಲಿ ಈ ಬಾರಿ ಧೋನಿ ಬರಿಗೈ ದಾಸನಾಗಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ‘ಧೋನಿ’ ಪ್ರಕಾಶ್ ರೈ ಅವರ ನಿರ್ದೇಶನದ ಹೊಸ ಚಿತ್ರ. ಧೋನಿ ಎನ್ನುವ ಟೈಟಲ್ ಕಾರ್ಡ್‌ನಿಂದಾಗಿ ಚಿತ್ರದ ಕಥೆ ಎಲ್ಲವೂ ಓಪನ್ ಸಿಕ್ರೇಟ್ ಆಗಿ ಹೋಗಿದೆ. ಚಿತ್ರದಲ್ಲಿರುವ ಕೆಲವೊಂದು ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕ ಟೋಟಲಿ ಬೋಲ್ಡ್ ಆಗಿ ಬಿಡುವ ಸನ್ನಿವೇಶಗಳು ಕ್ರಿಯೇಟ್ ಮಾಡಲಾಗಿದೆ ಎನ್ನೋದು ಚಿತ್ರದ ಫಸ್ಟ್ ಶೋ ನೋಡಿಕೊಂಡು ಹೊರಬಂದ ಚಿತ್ರ ವಿಮರ್ಶಕರ ಮಾತು.
ಅಂದಹಾಗೆ ಕನ್ನಡದ ಅಪ್ಪಟ ಪ್ರತಿಭಾವಂತ ನಟ ಕಮ್ ನಿರ್ಮಾಪಕ, ನಿರ್ದೇಶಕ ಪ್ರಕಾಶ್ ರಾಜ್( ರೈ) ಅವರ ಚಿತ್ರಗಳು ಎಂದರೆ ನಿರೀಕ್ಷೆಯ ಮೂಟೆಯೊಂದನ್ನು ಪ್ರೇಕ್ಷಕನ ತಲೆ ಮೇಲೆ ಏರಿಸಿ ಬಿಡುತ್ತಾರೆ. ಅದರಲ್ಲೂ ತಮಿಳಿನಲ್ಲಿ ಬಂದ ‘ಅಬಿಯುಂನಾನ್’ ಚಿತ್ರದ ಆವತರಣಿಕೆ ಕನ್ನಡದ ‘ನಾನು ನನ್ನ ಕನಸ್ಸು’ ಚಿತ್ರದ ನಂತರ ರೈ ಸಾಹೇಬ್ರ ಚಿತ್ರಗಳು ಪ್ರೇಕ್ಷಕನಿಗೆ ಮನರಂಜನೆ ಜತೆಯಲ್ಲಿ ಸಂದೇಶಗಳು ಕೊಟ್ಟು ಹೋಗುತ್ತದೆ ಎಂಬ ಅರಿವು ಪ್ರೇಕ್ಷಕನಿಗೆ ಖಾಯಂ ಆಗಿದೆ. ‘ಧೋನಿ’ಯಲ್ಲೂ ಇದೇ ರೀತಿಯ ಅಂಶಗಳಿರುವುದು ಗ್ಯಾರಂಟಿಯಾಗಿದೆ.
ಧೋನಿಯಲ್ಲಿ ಏನಿದೆ:
‘ಧೋನಿ’ ಪ್ರಕಾಶ್ ರೈ ತಮಿಳಿನಲ್ಲಿ ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರ. ಈಗಾಗಲೇ ಬೇರೆ ಭಾಷೆಯಲ್ಲಿ ರೈ ಸಾಹೇಬ್ರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡು ಗೆದ್ದು ಬಿಟ್ಟಿದ್ದಾರೆ. ಧೋನಿ ಚಿತ್ರ ತಮಿಳಿನ ಜತೆ ತೆಲುಗುನಲ್ಲೂ ಮೂಡಿಬರಲಿದೆ. ಚಿತ್ರದಲ್ಲಿ ಎಮೋಶನ್ ಹಾಗೂ ಸೆಂಟಿಮೆಂಟ್ ದೃಶ್ಯಗಳಿಗಂತೂ ಬರವಿಲ್ಲ. ಧೋನಿ ಚಿತ್ರವನ್ನು ಮಾಡಲು ಪ್ರಕಾಶ್ ರೈಗೆ ಮೂಲ ಪ್ರೇರಣೆ ತಮ್ಮ ಮಕ್ಕಳಾದ ಮೇಘನಾ, ಪೂಜಾ, ಸಿಂಧುವಂತೆ. ಅವರು ಬೋರ್ಡ್ ಎಕ್ಸಾಮ್‌ಗಾಗಿ ಪಡುತ್ತಿದ್ದ ಪಾಡುಗಳನ್ನು ಖುದ್ದು ‘ರೈ’ ಪಕ್ಕದಲ್ಲಿಯೇ ಕೂತು ನೋಡಿದ್ದರಂತೆ ! ಹೆಚ್ಚು ಮಾರ್ಕ್‌ಗಳನ್ನು ಪಡೆಯಲು ಒದ್ದಾಡುವ ಮಕ್ಕಳು, ಅವರು ತಮ್ಮ ಮಾನಸಿಕವಾಗಿ ಮಾಡಿಕೊಳ್ಳುವ ರಾಜಿತನ ಎಲ್ಲವೂ ಈ ಚಿತ್ರದಲ್ಲಿ ಕಾಣಿಸಿಕೊಡುವ ಪ್ರಯತ್ನ ನಡೆದಿದೆ ಎನ್ನುವುದು ಖುದ್ದು ರೈ ಅವರ ಮಾತು.
ಹೆತ್ತವರು ತಮ್ಮ ಮಕ್ಕಳ ಕನಸ್ಸು ಹಾಗೂ ನಿರ್ದಿಷ್ಟ ಗುರಿಯ ಕುರಿತು ಒಂಚೂರು ಅಲೋಚನೆಗೆ ಇಳಿಯದೇ ಅವರ ತಲೆ ತುಂಬಾ ತಮ್ಮ ವಿಚಾರಗಳನ್ನು ತುಂಬಿಸಿಬಿಟ್ಟು ಗೊಂದಲ ಸೃಷ್ಟಿಮಾಡುತ್ತಾರೆ. ಇಂತಹ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕುರಿತು ನನಗೆ ಯಾವುದೇ ವಿರೋಧವಿಲ್ಲ. ಆದರೆ ಮಕ್ಕಳಿಗಂತೂ ಒಳ್ಳೆಯ ವಾತಾವರಣ ಸಿಗಲೇ ಬೇಕು. ಇದೇ ಧೋನಿ ಚಿತ್ರದ ಹೈಲೇಟ್ ಎನ್ನುವುದು ಪ್ರಕಾಶ್ ರಾಜ್‌ರ ಓಪನ್ ಸಿಕ್ರೇಟ್ ಮಾತು.
ಚಿತ್ರದಲ್ಲಿ ಖ್ಯಾತ ಚಿತ್ರನಿರ್ದೇಶಕ ಪುರಿ ಜಗನ್ನಾಥ್ ಅವರ ಪುತ್ರ ಆಕಾಶ್, ರಂಗಭೂಮಿ ಕಲಾವಿದೆ ರಾಥಿಕಾ ಆಪ್ಟೆ, ವಿಜಯ್, ಬಾಲಿವುಡ್ ನಟಿ ಮುಗ್ದಾ ಗೋಡ್ಸೆ, ನಾಜಾರ್, ಬ್ರಹ್ಮಾನಂದ ಜತೆಯಲ್ಲಿ ಅತಿಥಿ ಪಾತ್ರದಲ್ಲಿ ನಟ ಪ್ರಭುದೇವ್ ಕಾಡ ಕಾಣಿಸಿಕೊಂಡಿದ್ದಾರೆ. ಕೆ.ವಿ ಗುಣಾ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಸಂಗೀತ ಮಾಂತ್ರಿಕ ಇಳೆಯರಾಜಾ ಅವರ ಸಂಗೀತ ಚಿತ್ರಕ್ಕಿದೆ.
ಚಿತ್ರದ ಕತೆಯಲ್ಲಿ ಪ್ರಕಾಶ್ ರಾಜ್ ಸರಕಾರಿ ನೌಕರಿಯಲ್ಲಿ ಇದ್ದುಕೊಂಡು ಮಧ್ಯಮ ವರ್ಗದ ಕನಸ್ಸುಗಳನ್ನು ಹೊತ್ತುಕೊಂಡಿರುವ ವ್ಯಕ್ತಿ. ತಮ್ಮ ಮಗನನ್ನು ಒಬ್ಬ ಸಕ್ಸಸ್‌ಫುಲ್ ವ್ಯಕ್ತಿಯಾನ್ನಾಗಿ ಮಾಡುವ ಛಲದಲ್ಲಿ ಪ್ರಕಾಶ್ ರಾಜ್ ಹಾಗೂ ಪುತ್ರ ನಡುವಿನ ಕೋಲ್ಡ್ ವಾರ್ ಇತರ ಹೈಲೇಟ್. ಪ್ರಕಾಶ್ ರಾಜ್ ಶಿಕ್ಷಣದಿಂದ ಗುರಿ ಮುಟ್ಟಲು ಸಾಧ್ಯವಿದೆ ಎಂಬ ವಾದದಲ್ಲಿ ಗಟ್ಟಿಯಾಗಿದ್ದರೆ ಇತ್ತ ಕಡೆ ಪುತ್ರ ಧೋನಿಯಂತೆ ಕ್ರಿಕೆಟರ್ ಆಗಬೇಕು ಎಂದುಕೊಂಡು ನಡೆಯುವ ಹುಡುಗ. ಅಂದಹಾಗೆ ಚಿತ್ರದ ಕುರಿತು ಇನ್ನಷ್ಟೂ ಮಾಹಿತಿಗಳನ್ನು ಧೋನಿ ಚಿತ್ರ ನೋಡಿಯೇ ಪಡೆಯಬೇಕು. ಟೋಟಲಿ ಧೋನಿ ಮೂಲಕ ಪ್ರಕಾಶ್ ‘ರೈ’ಸ್ ತಾರಾ ಎಂದು ಕಾದು ನೋಡಬೇಕು.
(vk lvk puravni published dis article on 27.1.2012)

ತರಗಲೆ ಹುಡುಗನ ಸಕ್ಸಸ್ ಸ್ಟೋರಿ ಬಾಲಿವುಡ್‌ಗೆ ಧನುಷ್ ಲಗ್ಗೆ


ಜೋರಾಗಿ ಗಾಳಿ ಬಂದರೆ ತರಗಲೆಯಂತೆ ಹಾರಿಬಿಡುವವ ಹೀರೋ ನಾ..? ಎನ್ನುವ ಡೌಟ್ ಅವನನ್ನು ನೋಡಿದ ಎಲ್ಲರಿಗೂ ಇತ್ತು. ಖುದ್ದು ಈ ಹುಡುಗನಿಗೂ ಅನ್ನಿಸಿದ್ದು ಇದೆ. ಆದರೆ ಆತನ ಅಣ್ಣ ಸೆಲ್ವ ಬಿಡಬೇಕಾಲ್ಲ ...ತೊಟ್ಟಿಯಲ್ಲಿ ಬಿದ್ದ ಕಸವನ್ನು ರಸ ಮಾಡುವವ ತನ್ನ ಸ್ವಂತ ತಮ್ಮನನ್ನು ಹೀರೋ ಮಾಡಲ್ವಾ..? ಇದು ಕಾಲಿ ಸ್ಟಾರ್ ಧನುಷ್ ಕತೆ ಮಾರಾಯ್ರೆ.

ಜೋರಾಗಿ ಗಾಳಿ ಬಂದರೆ ತರಗಲೆಯಂತೆ ಹಾರಿಬಿಡುವವ ಹೀರೋ ನಾ..? ಎನ್ನುವ ಡೌಟ್ ಅವನನ್ನು ನೋಡಿದ ಎಲ್ಲರಿಗೂ ಇತ್ತು. ಖುದ್ದು ಈ ಹುಡುಗನಿಗೂ ಅನ್ನಿಸಿದ್ದು ಇದೆ. ಬಹಳಷ್ಟು ಸಲ ತಂದೆ- ಅಣ್ಣನಲ್ಲಿ ಈ ವಿಚಾರವನ್ನು ಹೇಳಿಕೊಂಡು ನಟನೆಯಿಂದ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಿಇಟ್ಟುಕೊಂಡಿದ್ದ. ಆದರೆ ಕೊನೆಗೂ ಆತನ ಅಣ್ಣ ಸೆಲ್ವರಾಘವನ್ ಇದ್ದನಲ್ಲ ಮಹಾನ್ ಪ್ರತಿಭಾವಂತ. ಇಡೀ ಕಾಲಿವುಡ್ ಇಂಡಸ್ಟ್ರಿಯಲ್ಲಿಯೇ ಬೇಡ ಎಂದ ಕಲಾವಿದರನ್ನೇ ಹೆಕ್ಕಿಕೊಂಡು ಸಿನ್ಮಾ ಮಾಡಿ ಬ್ಲಾಕ್ ಬ್ಲಾಸ್ಟರ್ ಸಿನ್ಮಾವಾಗಿ ಪರಿವರ್ತನೆ ಮಾಡುವ ತಾಕತ್ತು ಅವನಲ್ಲಿ ಹುದುಗಿತ್ತು.
ಇಂತಹ ಪ್ರತಿಭಾವಂತನ ತಮ್ಮ ಎಂದಾಗ ಒಂಚೂರು ಧೈರ್ಯ ಸೆಲ್ವರಾಘವನ್‌ನಿಗೂ ಮೊದಲೇ ಇತ್ತು. ಸಿನ್ಮಾ ರಂಗನೇ ಬೇಡ ಎಂದು ಕೂತಿದ್ದ ಹುಡುಗ ಬೇರೆ ಯಾರು ಅಲ್ಲ ಮಾರಾಯ್ರೆ. ಈಗೀನ್ ‘ಕೊಲೆವರಿ ಡಿ’ ಫೇಮ್ ಧನುಷ್. ತಮಿಳಿನ ಖ್ಯಾತ ನಿರ್ದೇಶಕ ಸೆಲ್ವರಾಘವನ್ ಅವರ ಸಹೋದರ ಧನುಷ್ ಮೊದಲು ನಾಯಕನಾಗಿ ನಟಿಸಿದ್ದ ಖುದ್ದು ಅಣ್ಣನ ಚಿತ್ರ ‘ಕಾದಲ್ ಕೊಂಡೈನ್’ನಲ್ಲಿ. ಈ ಚಿತ್ರ ಹಲವು ಕಾರಣಗಳಿಂದ ಕಾಲಿವುಡ್‌ನಲ್ಲಿ ಭರ್ಜರಿ ಟಾಕ್ ಆಯಿತು. ಸೆಲ್ವರಾಘವನ್‌ರ ಮಾಜಿ ಪತ್ನಿ ಸೋನಿಯಾ ಅಗರ್‌ವಾಲ್ ಈ ಚಿತ್ರದ ನಾಯಕಿಯಾಗಿದ್ದರು. ಚಿತ್ರ ವಿಚಿತ್ರ ಕತೆಯಿಂದ ಕಾಲಿವುಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಜತೆಯಲ್ಲಿ ಅವಾರ್ಡ್‌ಗಳನ್ನು ದೋಚಿತು. ಇದೇ ಧನುಷ್ ಈ ಚಿತ್ರದ ಮೂಲಕ ಒಂದೇ ರಾತ್ರಿಯಲ್ಲಿ ಕಾಲಿವುಡ್‌ನ ಹೊಸ ನಾಯಕನ ಪಟ್ಟಕ್ಕೆ ಅರ್ಹ ವ್ಯಕ್ತಿ ಎನ್ನುವ ಮಾತು ಬಂತು.
ನಂತರ ನಡೆದದ್ದು ಮಾತ್ರ ಊಹಿಸಲು ಅಸಾಧ್ಯ. ಧನುಷ್ ಒಪ್ಪಿಕೊಂಡ ಚಿತ್ರಗಳೆಲ್ಲವೂ ಕಾಲಿವುಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಜತೆಯಲ್ಲಿ ಹೆಸರನ್ನು ತಂದುಕೊಟ್ಟಿತ್ತು. ‘ತಿರುಡಾ-ತಿರುಡಿ’, ‘ಪೊಲ್ಲಧವನ್’, ‘ಅಡುಕಲಂ’, ‘ಮಾಯಕ್ಕಂ ಎನ್ನಾ’ ಈಗ ಮೂನ್ ಚಿತ್ರನೂ ‘ಕೊಲೆವರಿ ಡಿ’ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿಕೊಂಡು ಪ್ರಚಾರ ಪಡೆದುಕೊಂಡು ಹಿಂದಿಗೂ ಡಬ್ ಆಗುವ ಸೂಚನೆನೂ ಕೊಟ್ಟಿದೆ.
ಐಶ್ ಕೈ ಹಿಡಿದ ರಾಜಾ:
ವೆಂಕಟೇಶ್ ಪ್ರಭು ಕಸ್ತೂರಿ ರಾಜಾ ಎನ್ನುವುದು ಧನುಷ್‌ರ ಮೂಲ ಹೆಸರು. ಧನುಷ್ ಕಸ್ತೂರಿ ರಾಜಾ ಎನ್ನುವ ಹೆಸರಿನಲ್ಲಿ ಸಾಮಾಜಿಕ ತಾಣವಾದ ಫೇಸ್‌ಬುಕ್‌ನಲ್ಲಿ ಅಕೌಂಟ್ ಹೊಂದಿದ್ದಾರೆ. ಆರಂಭದ ಚಿತ್ರದಲ್ಲಿ ಸೆಲ್ವರಾಘವನ್ ಅವರ ಸೂಚನೆ ಮೇರೆಗೆ ಬಹಳ ಉದ್ದ ಇದ್ದ ಹೆಸರನ್ನು ಕಟ್ ಮಾಡಿ ಧನುಷ್ ಎಂದು ಇಡಲಾಯಿತು. ಕಸ್ತೂರಿ ರಾಜಾ ಎನ್ನುವುದು ಅವರ ತಂದೆಯ ಹೆಸರು. ಕಾಲಿವುಡ್ ಚಿತ್ರನಗರಿಯಲ್ಲಿ ಕಸ್ತೂರಿ ರಾಜಾ ದೊಡ್ಡ ಚಿತ್ರ ನಿರ್ದೇಶಕರಾಗಿದ್ದವರು.
ಧನುಷ್ ನಿಜಕ್ಕೂ ಸ್ಟಾರ್ ಬದಲಾಗಿ ಹೋಗಿದ್ದು, ಐಶ್‌ರನ್ನು ಮದುವೆಯಾದ ನಂತರ ಎನ್ನುವುದು ಕಾಲಿವುಡ್ ಪಂಡಿತರ ಮಾತು. ಐಶ್ ಬೇರೆ ಯಾರು ಅಲ್ಲ. ಕಾಲಿವುಡ್‌ನ ಸೂಪರ್‌ಸ್ಟಾರ್ ರಜನೀಕಾಂತ್ ಅವರ ಮಗಳು ಐಶ್ವರ್ಯಾ ರಜನೀಕಾಂತ್. ೨೦೦೪ರಲ್ಲಿ ಧನುಷ್ ಹಾಗೂ ಐಶ್ ಇಬ್ಬರು ಮದುವೆಯಾದರು ಈಗ ಯಾತ್ರಾ ಹಾಗೂ ಲಿಂಗ ಎನ್ನುವ ಪುಟ್ಟ ಎರಡು ಮಕ್ಕಳು ಧನುಷ್‌ನನ್ನು ತಂದೆ ಎನ್ನುತ್ತಿದೆ. ಐಶ್ ಖುದ್ದು ನಿರ್ಮಾಣ ಮಾಡುತ್ತಿರುವ ‘ಮೂನ್’ ಚಿತ್ರದಲ್ಲಿ ಧನುಷ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂನ್ ಚಿತ್ರದ ಕೊಲೆವರಿ ಹಾಡು ಈಗಾಗಲೇ ಸಖತ್ ಕಿಕ್ ಕೊಟ್ಟಿದೆ.
ಕಾಲಿನಿಂದ ಬಾಲಿ:
ಧನುಷ್ ‘ಮೂನ್’ಚಿತ್ರದ ಮೂಲಕ ಬಾಲಿವುಡ್‌ಗೂ ಕಾಲಿಡಲಿದ್ದಾರೆ ಎನ್ನುವ ಸೂಚನೆ ಬಹಳ ಹಿಂದೆನೇ ಮಾತಾಗಿತ್ತು. ಆದರೆ ‘ಮೂನ್’ ಚಿತ್ರ ನಿಜಕ್ಕೂ ತಮಿಳಿನಲ್ಲಿ ಬಂದು ಹಿಂದಿಗೆ ಡಬ್ ಆಗುತ್ತಿರುವುದರಿಂದ ಈ ಚಿತ್ರ ಧನುಷ್‌ನ ಮೊದಲ ಬಾಲಿವುಡ್ ಚಿತ್ರವಲ್ಲ ಎನ್ನುವುದು ಬಹುತೇಕ ಅಭಿಪ್ರಾಯ. ಅದಕ್ಕಾಗಿ ಧನುಷ್ ಬಾಲಿವುಡ್ ಚಿತ್ರ‘ ರಾನ್‌ಜಾ’ದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಬಾಲಿವುಡ್ ನಿರ್ದೇಶಕ ಆನಂದ್ ಎಲ್. ರಾಯ್ ನಿರ್ದೇಶನ ಮಾಡುತ್ತಿದ್ದಾರೆ.
ಆನಂದ್ ಎಲ್. ರಾಯ್ ಈ ಮೊದಲು ‘ತನು ವೆಡ್ಸ್ ಮನು’ ಚಿತ್ರವನ್ನು ಮಾಡಿ ಬಾಲಿವುಡ್‌ನಲ್ಲಿ ತಮ್ಮ ಹೆಸರನ್ನು ಚಾಲ್ತಿಗೆ ತಂದಿದ್ದರು. ಈಗಾಗಲೇ ಬನರಾಸ್, ಚೆನ್ನೈ ಹಾಗೂ ಮುಂಬಯಿ, ಹೈದರಾಬಾದ್ ಸುತ್ತಮುತ್ತ ಚಿತ್ರ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಧನುಷ್‌ಗೆ ಸರಿಯಾಗಿ ಹಿಂದಿ ಗೊತ್ತಿಲ್ಲದ ಕಾರಣ ಹಿಂದಿ ಗೈಡ್ ಒಬ್ಬರನ್ನು ಇಟ್ಟುಕೊಂಡು ಚಿತ್ರೀಕರಣಕ್ಕೆ ತಯಾರಿ ಮಾಡಲಾಗುತ್ತಿದೆ.
ಧನುಷ್ ಈ ಚಿತ್ರಕ್ಕೆ ಖುದ್ದು ಡಬ್ ಮಾಡುತ್ತಾರೆ ಎಂದು ಒಪ್ಪಿಕೊಂಡ ಕಾರಣ ಹಿಂದಿ ಭಾಷೆಯನ್ನು ಸೀರಿಯಸ್ ಆಗಿ ಧನುಷ್ ಸ್ಟಡಿ ಮಾಡುತ್ತಿದ್ದಾರೆ. ಧನುಷ್ ಹೇಳುವಂತೆ ‘ ಹಿಂದಿ ಕಲಿಯಲು ನನಗೇನೂ ಕಷ್ಟವಿಲ್ಲ. ಆದರೆ ಇಲ್ಲಿ ಬರೀ ಭಾಷೆ ಮಾತ್ರವಲ್ಲ ಒಂದು ಸಂಸ್ಕೃತಿಯ ಅಧ್ಯಯನ ಮುಖ್ಯವಾಗಿದೆ. ಅದಕ್ಕಾಗಿ ಎರಡನ್ನು ಜತೆಯಾಗಿ ಕಲಿಯಬೇಕು ಎಂದುಕೊಂಡಿದ್ದೇನೆ’ ಎಂದು ಟ್ವಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ಆನಂದ್ ಹೇಳುವಂತೆ ‘ ತನು ವೆಡ್ಸ್ ಮನು ಮುಗಿದ ನಂತರ ಆರು ತಿಂಗಳ ಕಾಲ ನನ್ನ ಹೊಸ ಕತೆಗೆ ನಾಯಕನ ಹುಡುಕಾಟ ನಡೆಸಿದೆ. ತಮಿಳಿನಲ್ಲಿ ಬಂದ ‘ಆಡುಕಲಂ’ ಚಿತ್ರವನ್ನು ನೋಡಿದ ನಂತರ ಧನುಷ್ ಈ ಚಿತ್ರಕ್ಕೆ ಸರಿಯಾದ ಪಾತ್ರಧಾರಿ ಎಂದುಕೊಂಡೆ. ತಕ್ಷಣವೇ ಧನುಷ್ ಬಳಿ ಚಿತ್ರದ ಕತೆ ಕುರಿತು ಮಾತುಕತೆ ನಡೆಸಿದೆ. ಕತೆ ಧನುಷ್‌ಗೆ ತುಂಬಾ ಇಷ್ಟವಾಯಿತು. ಇನ್ನೇನೂ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮಾಡಲು ನಿರ್ಧಾರವಾಗಿದೆ’ ಎಂದಿದ್ದಾರೆ.
ಪ್ರೇಮ ಕತೆಯನ್ನು ಹೊಂದಿರುವ ಈ ಚಿತ್ರ ‘ತನು ವೆಡ್ಸ್ ಮನು’ನಂತೆ ಕಂಡರೂ ಪಾತ್ರವರ್ಗದಲ್ಲಿ ಬಹಳಷ್ಟು ವಿಭಿನ್ನತೆಯನ್ನು ತರಲು ಯೋಚನೆ ಮಾಡಲಾಗಿದೆ. ಚಿತ್ರದ ಆರಂಭ ಬನರಾಸಿನಿಂದ ಸ್ಟಾರ್ಟ್ ಆಗುತ್ತದೆ. ಈಗಾಗಲೇ ಬನರಾಸಿನಲ್ಲಿ ಚಿತ್ರೀಕರಣಕ್ಕೆ ಮುಹೂರ್ತ ಇಡಲಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರುವ ಕುರಿತು ಮಾತುಕತೆ ನಡೆದಿದೆ. ಈ ಮೂಲಕ ಕಾಲಿವುಡ್‌ನ ಯಂಗ್ ಸ್ಟಾರ್ ಧನುಷ್ ಬಾಲಿವುಡ್‌ನಲ್ಲೂ ಮಿಂಚುಹರಿಸಲಿದ್ದಾರೆ ಎನ್ನುವ ಮಾತನ್ನು ಒಪ್ಪಬೇಕಾದರೆ ಚಿತ್ರ ಬಿಡುಗಡೆಯವರೆಗೂ ಕಾದು ನಿಲ್ಲಬೇಕು ಅಲ್ವಾ..?
( vk lvk daily published dis article on 27.1.2012)

Monday, January 23, 2012

ನನ್ನ ಪತ್ರಿಕೆ ನನ್ನ ಬರಹ-47



(vk lvk puravani published dis article on 24.01.2012)

ನನ್ನ ಪತ್ರಿಕೆ ನನ್ನ ಬರಹ-46


(vk lvk puravani published dis article on 21.1.2012)

ಮಲ್ಲಿಯ ‘ಮುತ್ತಿ’ನ ಮಾತು



ಹುಡುಗರು ಹುಡುಗಿಯರಿಗೆ ಮುತ್ತು ಕೊಡುವ ವಿಚಾರದಲ್ಲಿ ಬಹಳಷ್ಟು ಎಡವಿ ಬೀಳುತ್ತಿದ್ದಾರೆ. ಇಂತಹ ಎಡವಟ್ಟು ಕಾರ‍್ಯಗಳಿಂದ ಹುಡುಗಿಯರು ಹುಡುಗರನ್ನು ಒಂದೇ ಸಲಕ್ಕೆ ರಿಜೆಕ್ಟ್ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಹುಡುಗರಿಗೆ ಈ ಮುತ್ತು ಹೊಸ ಇಮೇಜ್ ಬಿಲ್ಡ್ ಮಾಡುವುದರಲ್ಲಿ ಯಾವುದೇ ಡೌಟ್ ಇಲ್ಲ ಎನ್ನೋದು ಅನುಭವಸ್ಥ ಮಲ್ಲಿಕಾಳ ವಾದ.

ಮಲ್ಲಿಕಾ ಹೆಸರಿನ ಜತೆಯಲ್ಲಿಯೇ ಹಾಟ್‌ನೆಸ್ ಇದೆ. ಕೂಲ್ ಏರಿಯಾದಲ್ಲೂ ಗರ್‌ಮೀ ಉದ್ಭವವಾಗಿ ಬಿಡುತ್ತದೆ. ಚೂರುಪಾರು ಬಿಚ್ಚಾಟದಲ್ಲಿಯೇ ಬಿಟ್ಟಿ ಪ್ರಚಾರ ಪಡೆದುಕೊಂಡು ಬರುತ್ತಿದ್ದ ಮಲ್ಲಿಕಾ ಇತ್ತೀಚೆಗಂತೂ ಫೀಲ್ಡ್‌ನಿಂದ ಔಟ್ ಆಗಿದ್ದಾಳೆ ಎನ್ನುವ ಮಾತುಗಳು ಮುಂಬಯಿಯ ಗಲ್ಲಿಯಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ ಬಾಲಿವುಡ್‌ನಲ್ಲಿ ಬಂದ ಬಹಳಷ್ಟು ಚಿತ್ರಗಳಲ್ಲಿ ಮಲ್ಲಿಕಾಳನ್ನು ಹಾಟ್ ಆಗಿ ತೋರಿಸಿ ಮಕಾಡೆ ಮಲಗಿದವರ ಸಂಖ್ಯೆನೇ ಜಾಸ್ತಿ ಇದೆ ಎನ್ನೋದು ರಿಪೋರ್ಟ್ ಕಾರ್ಡ್ ಕೂಡ ಹೊರ ಬಂದಿದೆ.
ಈಗ ಮಲ್ಲಿಕಾ ಫೀಲ್ಡ್‌ನಲ್ಲಿ ಉಳಿಯಲು ಇನ್ನಿಲ್ಲದ ಕಸರತ್ತಿನಲ್ಲಿ ನಿರತವಾಗಿರುವ ಜತೆಯಲ್ಲಿ ಹುಡುಗರಿಗೆ ಹಾಗೂ ಹುಡುಗಿಯರಿಗೆ ಮುತ್ತು ಕೊಡುವ ವಿಚಾರಕ್ಕೆ ಸಂಬಂಸಿ ವಿಶೇಷ ಪಾಠಗಳನ್ನು ಹೇಳಲು ಮುಂದೆ ಬಂದಿದ್ದಾರೆ. ಅದರಲ್ಲೂ ಮಲ್ಲಿಕಾ ಹುಡುಗರಿಗೆ ಈ ವಿಚಾರವನ್ನು ಜಾಸ್ತಿಯಾಗಿ ತಿಳಿಸಲು ತುಂಬಾನೇ ಇಂಟರೆಸ್ಟ್ ತೋರಿಸುತ್ತಿದ್ದಾರೆ. ಯಾಕೆ ಹುಡುಗಿಯರನ್ನು ಬಿಟ್ಟು ಹುಡುಗರಿಗೆ ಕಡೆ ಮಲ್ಲಿಕಾ ಮುಖ ಮಾಡಿದ್ದಾಳೆ ಅಂತೀರಾ..? ಇದಕ್ಕೆ ಮಲ್ಲಿಕಾಳ ಅನ್ಸರ್ ಇಲ್ಲಿದೆ.
ಹುಡುಗರು ಹುಡುಗಿಯರಿಗೆ ಮುತ್ತು ಕೊಡುವ ವಿಚಾರದಲ್ಲಿ ಬಹಳಷ್ಟು ಎಡವಿ ಬೀಳುತ್ತಿದ್ದಾರೆ. ಇಂತಹ ಎಡವಟ್ಟು ಕಾರ‍್ಯಗಳಿಂದ ಹುಡುಗಿಯರು ಹುಡುಗರನ್ನು ಒಂದೇ ಸಲಕ್ಕೆ ರಿಜೆಕ್ಟ್ ಮಾಡುವ ಸಾಧ್ಯತೆ ಇದೆ. ಮೊದಲ ಮುತ್ತು ಯಾವತ್ತೂ ದಂತ ಭಗ್ನವಾಗಕೂಡದು. ಅದರಲ್ಲೂ ಹುಡುಗರಿಗೆ ಈ ಮುತ್ತು ಹೊಸ ಇಮೇಜ್ ಬಿಲ್ಡ್ ಮಾಡುವುದರಲ್ಲಿ ಯಾವುದೇ ಡೌಟ್ ಇಲ್ಲ ಎನ್ನೋದು ಅನುಭವಸ್ಥ ಮಲ್ಲಿಕಾಳ ವಾದ.
ಮುತ್ತು ತುಂಬಾನೇ ಗಮ್ಮತ್ತು:
ಮುತ್ತಿನ ವಿಚಾರದಲ್ಲಿ ಹುಡುಗರು ತುಂಬಾನೇ ಫಾಸ್ಟ್. ಆದರೆ ಹುಡುಗಿಯರು ಆಗಲ್ಲ ತುಂಬಾನೇ ನಿಧಾನ. ಅವಳಿಗೆ ಮುತ್ತಿನ ಕುರಿತು ಸರಿಯಾದ ಕಲ್ಪನೆ ಬೆಳೆದುಕೊಂಡಿರುವುದಿಲ್ಲ. ಹುಡುಗನೇ ಮುಂದೆ ಹೋಗಿ ಮುತ್ತು ಕೊಡುವಾಗ ಸರಿಯಾದ ರೂಲ್ಸ್‌ಗಳನ್ನು ಫಾಲೋ ಮಾಡಿಕೊಂಡು ಮುಂದುವರಿಯಬೇಕು. ಅಂದಹಾಗೆ ಈ ಎಲ್ಲ ವಿಚಾರಗಳನ್ನು ನಾನು ನನ್ನ ಮೊದಲ ವಿದ್ಯಾರ್ಥಿ ಬಾಲಿವುಡ್ ನಟ ವಿವೇಕ್ ಒಬೆರಾಯ್‌ಗೆ ತಿಳಿಸಿದ್ದೇನೆ. ಅವನಿಗೆ ಮುತ್ತಿನ ವಿಚಾರದಲ್ಲಿ ತುಂಬಾನೇ ಡೌಟ್‌ಗಳು ಉಳಿದುಕೊಂಡಿದ್ದವು.. ಅವನೆಲ್ಲ ಸಂದೇಹಗಳಿಗೆ ಪರಿಹಾರ ಕೊಟ್ಟಿದ್ದೇನೆ ಎನ್ನುತ್ತಾಳೆ ಮುತ್ತುಗಳ ತಜ್ಞೆ ಮಲ್ಲಿಕಾ ಶೆರವಾತ್.
ಅಂದಹಾಗೆ ಈ ಮುತ್ತಿನ ಕುರಿತು ಪಾಠ ಮಾಡಲು ಇರುವ ಬಹಳ ದೊಡ್ಡ ಕಾರಣವೆಂದರೆ ವಿವೇಕ್ ಒಬೆರಾಯ್ ಹಾಗೂ ಮಲ್ಲಿಕಾ ಶೆರವಾತ್ ನಟಿಸಿರುವ ಚಿತ್ರ ‘ಕಿಸ್ಮತ್, ಲವ್, ಪೈಸಾ, ದಿಲ್ಲಿ( ಕೆಎಲ್‌ಪಿಡಿ)ಯಲ್ಲಿ ವಿವೇಕ್ ಹಾಗೂ ಮಲ್ಲಿಕಾ ಶೆರವಾತ್‌ರ ದಾಖಲೆ ಸರದಿಯಲ್ಲಿ ಮುತ್ತುಗಳ ವಿಲೇವಾರಿಯ ದೃಶ್ಯ ಇದೆ ಎನ್ನೋದು ಚಿತ್ರ ತಂಡದ ಮಾತು. ಈ ಮುತ್ತುಗಳ ವಿಲೇವಾರಿಯ ದೃಶ್ಯದಲ್ಲಿ ವಿವೇಕ್ ಬಹಳಷ್ಟು ಎಡವಟ್ಟು ಮಾಡಿಕೊಂಡಿದ್ದರು. ಆದರೆ ಸೀರಿಯಲ್ ಕಿಸ್ಸರ್ ಎಂದೇ ಬಿಂಬಿತ ಮಲ್ಲಿಕಾ ಈ ಎಲ್ಲ ಮುತ್ತುಗಳು ಭರ್ಜರಿ ಸ್ವೀಕರಿಸಿ ವಿವೇಕ್‌ಗೆ ಸರಿಯಾಗಿ ಪಾಠ ಹೇಳಿಕೊಟ್ಟು ನಾಲಗೆ ಚಪ್ಪರಿಸಿಕೊಂಡರಂತೆ ! ವಿವೇಕ್ ಒಬೆರಾಯ್ ತನ್ನ ಪತ್ನಿ ಪ್ರಿಯಾಂಕಾ ಒಬೆರಾಯ್‌ಗೆ ಬಿಟ್ಟರೆ ತೆರೆಯ ಮೇಲೆ ಮುತ್ತಿನ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ತೀರಾ ಅಪರೂಪ.
ಹೊಸದಿಲ್ಲಿಯ ಬುದ್ದ ಗಾರ್ಡನ್ಸ್‌ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಅಲ್ಲಿ ಬಹಳಷ್ಟು ಪ್ರೇಮಿಗಳು ಮುತ್ತಿನ ವಿಲೇವಾರಿಯಲ್ಲಿ ತೊಡಗಿಕೊಂಡಿದ್ದರು. ಈ ಸನ್ನಿವೇಶವೇ ಮಲ್ಲಿಕಾಳಿಗೆ ಪ್ರೇರಣೆಯಾಗಿ ಸೀನ್ ಓಕೆ ನಂತರನೂ ವಿವೇಕ್‌ಗೆ ಎರ್ರಾಬಿರ್ರಿಯಾಗಿ ಮುತ್ತಿನ ಮಳೆ ಸುರಿಸಿದ್ದಾಳೆ. ಚಿತ್ರದಲ್ಲಿ ವಿವೇಕ್ ಒಬೆರಾಯ್ ದಿಲ್ಲಿಯ ಹುಡುಗನ ಪಾತ್ರ ಮಾಡಿದರೆ, ಮಲ್ಲಿಕಾ ಹರಿಯಾಣಿ ಹುಡುಗಿಯ ಪಾತ್ರ ಮಾಡಿದ್ದಾರೆ. ಇಬ್ಬರೂ ಪ್ರೇಮಕ್ಕೆ ಬಿದ್ದು ಸಿಕ್ಕ ಸಿಕ್ಕ ಬೀದಿಬದಿಯಲ್ಲಿ ಮುತ್ತಿನ ದೃಶ್ಯಗಳು ಚಿತ್ರದ ತುಂಬಾ ಕಾಣಸಿಗಲಿದೆ. ಟೋಟಲಿ ಹುಡುಗರಿಗಂತೂ ಮುತ್ತಿನ ಪಾಠವೊಂದನ್ನು ಮಲ್ಲಕಿಆ ಬಿಟ್ಟಿಯಾಗಿ ಮಾಡಿ ಹೋಗಿದ್ದಾಳೆ.

Tuesday, January 17, 2012

ಕುಡ್ಲ ಸಿಟಿಯಲ್ಲಿ ಫ್ಯೂಶನ್ ಗುರು ಹರಿಹರ



ಹರಿಹರನ್ ಹಾಡುಗಳು ಜಾಸ್ತಿ ಸೌಂಡ್ ಮಾಡಲ್ಲ. ಪ್ರೀತಿಸುವ ಹೃದಯಕ್ಕೆ ಸಾಂತ್ವನ ನೀಡುತ್ತದೆ. ಏಕಾಂಗಿ ಬದುಕಿಗೆ ಊರುಗೋಳಾಗಿ ನೆರವು ನೀಡುತ್ತದೆ. ಅದರಲ್ಲೂ ನಿಜವಾಗಿಯೂ ಸಂಗೀತ ಬಯಸುವ ಕಿವಿಗೆ ಇಂಪು ತಂದುಕೊಡುತ್ತದೆ. ಇಂತಹ ಹರಿಹರನ್ ಲವಲವಿಕೆಯ ಜತೆಯಲ್ಲಿ ಚಿಟ್‌ಚಾಟ್ ಮಾಡಿದ್ದಾರೆ.


ಹರಿಹರನ್ ಹಾಡುಗಳು ಜಾಸ್ತಿ ಸೌಂಡ್ ಮಾಡಲ್ಲ. ಪ್ರೀತಿಸುವ ಹೃದಯಕ್ಕೆ ಸಾಂತ್ವನ ನೀಡುತ್ತದೆ. ಏಕಾಂಗಿ ಬದುಕಿಗೆ ಊರುಗೋಳಾಗಿ ನೆರವು ನೀಡುತ್ತದೆ. ಅದರಲ್ಲೂ ನಿಜವಾಗಿಯೂ ಸಂಗೀತ ಬಯಸುವ ಕಿವಿಗೆ ಇಂಪು ತಂದುಕೊಡುತ್ತದೆ. ಭಾರತೀಯ ಸಂಗೀತ ಜತೆಯಲ್ಲಿ ವೆಸ್ಟರ್ನ್ ಮ್ಯೂಸಿಕ್‌ನ್ನು ಲಿಂಕ್ ಕೊಟ್ಟು ಫ್ಯೂಶನ್ ಗಾಯಕ ಎಂದೇ ಕರೆಯಲ್ಪಡುವ ಹರಿಹರನ್ ಘಜಲ್ ಗೀತೆಗಳಿಗೂ ಜೀವ ತುಂಬಬಲ್ಲ ಸಮರ್ಥರು.
ಮಲಯಾಳಂ, ತಮಿಳು, ಕನ್ನಡ, ಹಿಂದಿ, ತೆಲುಗು, ಭೋಜ್‌ಪುರಿ, ಮರಾಠಿಯಲ್ಲಿ ಸಾವಿರಕ್ಕೂ ಅಕ ಹಾಡುಗಳನ್ನು ಹಾಡಿದ ಹರಿಹರನ್ ರೋಜಾ, ಬಾಂಬೆ ಸಿನ್ಮಾಗಳ ಹಾಡಿನ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಕಂಠಕ್ಕೂ ಬೆಲೆ ತಂದುಕೊಂಡಿದ್ದಾರೆ. ಎ.ಆರ್. ರೆಹಮಾನ್ ಎನ್ನುವ ಸಂಗೀತ ನಿರ್ದೇಶಕನ ಗಾಯಕರ ಪಟ್ಟಿಯಲ್ಲಿ ಹರಿಹರನ್ ಯಾವಾಗಲೂ ಮೊದಲ ಸ್ಥಾನದಲ್ಲಿರುವ ಗಾಯಕ ಎನ್ನುವ ಖ್ಯಾತಿಯೂ ಅವರ ಬೆನ್ನಿಗಿದೆ. ಬಾರ್ಡರ್ ಚಿತ್ರದ ‘ಮೇರೇ ದುಶ್ಮಾನ್ ಮೇರೇ ಭಾಯಿ’ ಎನ್ನುವ ಹಾಡಿಗೆ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೩೦ಕ್ಕೂ ಅಕ ಘಜಲ್ ಆಲ್ಬಂಗಳನ್ನು ಹೊರ ತಂದಿರುವ ಹರಿಹರನ್ ಯಾವಾಗಲೂ ಘಜಲ್ ಗಾಯನಾಗಲು ಇಷ್ಟ ಪಡುತ್ತಾರಂತೆ. ೧೯೯೪ರಲ್ಲಿ ಆಶಾ ಬೊಂಸ್ಲೆ ಅವರ ಜತೆಯಲ್ಲಿ ಹಾಡಿದ ‘ಅಬಾಸರ್ ಈ- ಘಜಲ್’ ಎನ್ನುವ ಆಲ್ಬಂ ಈಗಲೂ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. ೨೦೦೮ರಲ್ಲಿ ಬಂದ ‘ಲಾಫ್ಸ್’ ಘಜಲ್ ಆಲ್ಬಂ ನಂತರ ಹರಿಹರನ್ ಘಜಲ್ ಗಾಯನದಿಂದ ಹೊರಬಂದು ಫ್ಯೂಶನ್ ಕಡೆ ಜಾಸ್ತಿ ಒಲವು ತೋರಿಸಿದರು.
೧೯೯೬ರಲ್ಲಿ ಲೆಸ್ಲಿ ಲೂಯಿಸ್ ಜತೆ ಸೇರಿಕೊಂಡು ‘ಕಲೋನಿಯಲ್ ಕಸೀನ್ಸ್’ ಎನ್ನುವ ಆಲ್ಬಂ ಮೂಲಕ ದೇಶದಲ್ಲಿ ಮೊತ್ತ ಮೊದಲ ಬಾರಿಗೆ ‘ಫ್ಯೂಶನ್’ ಆಲ್ಬಂಗೆ ಅಡಿಪಾಯ ಹಾಕಿಕೊಟ್ಟ ಹರಿಹರನ್ ನಂತರದ ದಿನಗಳಲ್ಲಿ ‘ಕಲೋನಿಯಲ್ ಕಸೀನ್ಸ್’ ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡು ದೇಶ- ವಿದೇಶದ ಅಭಿಮಾನಿಗಳ ಕಿವಿಯನ್ನು ತಣಿಸುತ್ತಿದ್ದಾರೆ. ತಮಿಳಿನ ಒಂದೆರಡು ಸಿನ್ಮಾಗಳಿಗೆ ಬ್ಯಾಕ್‌ಗ್ರೌಂಡ್ ಸ್ಕೋರ್ ಕೊಟ್ಟು ತಮಿಳು ಸಂಗೀತ ಲೋಕದಲ್ಲೂ ಹೊಸ ‘ವೇ’ ಸೃಷ್ಟಿ ಮಾಡಲು ಹೊರಟಿರುವ ಹರಿಹರನ್ ರಾಷ್ಟ್ರೀಯ ಯುವಜನೋತ್ಸವ ಕಾರ‍್ಯಕ್ರಮಕ್ಕಾಗಿ ಮಂಗಳೂರಿಗೆ ಬಂದಿದ್ದಾಗ ಎಲ್‌ವಿಕೆಯ ಜತೆ ಕೊಂಚ ಟೈಮ್ ಚಿಟ್‌ಚಾಟ್ ಮಾಡಿದರು.
* ಘಜಲ್, ಫ್ಯೂಶನ್ ಎರಡರಲ್ಲಿ ಯಾವುದು ಇಷ್ಟ ?
- ಘಜಲ್ ಹಾಡುಗಳು ನೆಮ್ಮದಿ ಕೊಟ್ಟರೆ.. ಫ್ಯೂಶನ್ ಹಾಡುಗಳು ಖ್ಯಾತಿ ಕೊಟ್ಟಿದೆ. ಒಂದನ್ನು ಬಿಟ್ಟು ಮತ್ತೊಂದು ಇರದು. ಮನುಷ್ಯನಿಗೆ ಕಣ್ಣುಗಳಿದ್ದಾಗೆ ಅಂತೇನೆ...
* ಎ.ಆರ್. ರೆಹಮಾನ್ ಎಂದರೆ ನಿಮ್ಮ ಪಾಲಿಗೆ ಏನು?
- ಜಸ್ಟ್ ವನ್ ವರ್ಡ್‌ನಲ್ಲಿ ಹೇಳುವುದಾದರೆ ಈ ವಾಸ್ ಎ ಗ್ರೇಟ್ ಮ್ಯೂಶಿಯನ್. ನನ್ನ ಹಾಗೂ ರೆಹಮಾನ್‌ರ ಕೆಲಸಗಳು ಸಂಗೀತ ಲೋಕದಲ್ಲಿ ವರ್ಕ್ ಆಗಿದೆ. ಅದಕ್ಕಿಂತಲೂ ಮುಖ್ಯವಾಗಿ ರೆಹಮಾನ್ ಜತೆಯಲ್ಲಿ ಕೆಲಸ ಮಾಡಲು ನಾನು ಜಾಸ್ತಿ ಬಯಸುತ್ತೇನೆ. ವರ್ಕ್ ವಿದ್ ಕಂಪಾರ್ಟ್ ಎರಡು ಅಂಶಗಳು ರೆಹಮಾನ್ ಟೀಮ್‌ನಲ್ಲಿದೆ.
* ಉರ್ದು ನಂತರ ಹೊಸ ಭಾಷೆ ಕಲಿಯುತ್ತಿದ್ದೀರಾ..?
- ಘಜಲ್ ಹಾಡುಗಳನ್ನು ಹಾಡುವಾಗ ನನಗೆ ಉರ್ದು ಭಾಷೆ ಅಗತ್ಯವಾಗಿತ್ತು. ಬಹಳಷ್ಟು ಘಜಲ್‌ಗಳನ್ನು ನಾನು ಉರ್ದುವಿನಿಂದ ನನ್ನ ಆಲ್ಬಂಗಳಿಗೆ ಇಳಿಸಿದ್ದೇನೆ. ಅದಕ್ಕಾಗಿ ಈ ಭಾಷೆ ಕಲಿಯಬೇಕಾಯಿತು. ಈಗ ಹೊಸ ಭಾಷೆ ಕಲಿಯುವುದರಲ್ಲಿ ಆಸಕ್ತಿ ಇಲ್ಲ.
* ಕಲೋನಿಯಲ್ ಕಸೀನ್ಸ್ ಮ್ಯೂಸಿಕ್ ಬ್ಯಾಂಡ್ ಕಟ್ಟಿದ್ದು ಯಾಕೆ?
- ಭಾರತೀಯ ಸಂಗೀತವನ್ನು ಹೊಸ ಪೀಳಿಗೆಯವರು ನೇರವಾಗಿ ಸ್ವೀಕರಿಸುವ ಧೈರ್ಯ ತೋರಲಿಲ್ಲ. ಈ ಸಂದರ್ಭದಲ್ಲಿ ಲೆಸ್ಲಿ ಲೂಯಿಸ್ ನನಗೊಂದು ಉಪಾಯ ಹೇಳಿದರು. ಪಾಶ್ಚಿಮಾತ್ಯ ಸಂಗೀತವನ್ನು ಭಾರತೀಯ ಸಂಗೀತದ ಜತೆ ಲಿಂಕ್ ಕೊಟ್ಟು ಹಾಡುವ ಈ ಮೂಲಕ ಹೊಸ ಪರಂಪರೆಯೊಂದು ಸೃಷ್ಟಿಯಾಗುತ್ತದೆ ಎಂದರು ನಾನು ಒಪ್ಪಿದೆ. ಅದಕ್ಕಾಗಿ ಫ್ಯೂಶನ್ ಆಲ್ಬಂವೊಂದನ್ನು ಮಾರುಕಟ್ಟೆಯಲ್ಲಿ ಬಿಟ್ಟು ತಮಾಷೆ ನೋಡಿದೇವು.. ಯುವಜನತೆ ಫ್ಯೂಶನ್ ಸಂಗೀತವನ್ನು ಬಹಳವಾಗಿ ಇಷ್ಟಪಟ್ಟಿತು. ಮುಂದೆ ಟೀಮ್ ಬೆಳೆಯುತ್ತಾ ಹೋಯಿತು.
* ಹೊಸ ಆಲ್ಬಂ, ಘಜಲ್ ಆಲ್ಬಂ ತರುವ ಪ್ಲ್ಯಾನ್ ಇದೆಯಾ?
- ಹೊಸ ಆಲ್ಬಂ ಮಾಡಬೇಕು ಅಂದುಕೊಂಡಿದ್ದೇನೆ. ಈ ಆಲ್ಬಂ ‘ಕಲೋನಿಯಲ್ ಕಸೀನ್ಸ್’ ಮೂಲಕ ಹೊರ ತರುವ ಕುರಿತು ಯೋಜನೆ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಹೊಸ ಆಲ್ಬಂ ಮಾರುಕಟ್ಟೆಗೆ ಬಿಡುತ್ತೇನೆ. ಹೆಸರು ಇನ್ನೂ ಇಟ್ಟಿಲ್ಲ. ಆರು ಹಾಡುಗಳು ಕಂಪ್ಲೀಟ್ ಆಗಿದೆ.
* ಸಂಗೀತದ ಹೊರತು ಹರಿಹರನ್ ಏನೂ ಮಾಡುತ್ತಿದ್ದರು?
- ಈ ಪ್ರಶ್ನೆ ನನ್ನನ್ನು ಬಾಲ್ಯದಿಂದಲೂ ಕಾಡುತ್ತಾ ಬಂದಿದೆ. ಹೆತ್ತವರು ಸಂಗೀತವನ್ನು ಒಪ್ಪಿ ಅಪ್ಪಿಕೊಂಡಿದ್ದರು. ನಾನು ಕೂಡ ಇದೇ ಸಂಗೀತವನ್ನು ಅಪ್ಪಿಕೊಂಡೇ.. ಬದುಕಿನಲ್ಲಿ ನನಗೆ ಬೇರೆಯೇನೂ ಬೇಕಾಗಿರಲಿಲ್ಲ. ಸಂಗೀತಗಾರನ ಹೊರತು ನಾನು ಏನೂ ಆಗಲೂ ಬಯಸುತ್ತಿರಲಿಲ್ಲ, ಬಯಸುತ್ತಿಲ್ಲ.
.....
ಚಿತ್ರ: ಸುಧಾಕರ್ ಎರ್ಮಾಳ್
( vk lvk puravani published dis article on 18.01.2012)

ನಾನ್‌ವೆಜ್ ಹುಡುಗಿಯ ವೆಜ್ ಕತೆ


ಬಾಲ್ಯದಲ್ಲಿ ನಾನ್‌ವೆಜ್ ಐಟಂಗಳನ್ನು ಜಾಸ್ತಿಯಾಗಿ ತಿಂದರೆ ದೇಹದ ಭಾರ ಹೆಚ್ಚುತ್ತದೆ ಎಂದು ಹೆಚ್ಚು ಭಾರವಾಗಿದ್ದ ಹುಡುಗಿ ನಮಿತಾಳನ್ನು ನೋಡಿ ಅವರ ಗೆಳತಿಯರು ಹೇಳಿಕೊಂಡು ತಮಾಷೆ ಮಾಡುತ್ತಿದ್ದರಂತೆ... ಬನ್ನಿ ನಮಿತಾಳ ವೆಜ್ ಕತೆ ಇಲ್ಲಿದೆ...

ಪಕ್ಕಾ ನಾಜ್‌ವೇಜ್ ಸ್ಟೇಟಸ್‌ನಿಂದ ಬಂದ ಹುಡುಗಿ ಎಂದುಕೊಂಡು ಅವಳ ಕುರಿತು ಗಂಟೆಗಟ್ಟಲೆ ಮಾತನಾಡಿಕೊಂಡರೇ ಅದೆಲ್ಲ ಟೋಟಲಿ ವೇಸ್ಟ್. ನಮಿತಾ ಎನ್ನುವ ಗ್ಲಾಮರ್ ಗೊಂಬೆಗೆ ಹಿಡಿಸುವುದೆಲ್ಲ ವೆಜಿಟೇರಿಯನ್. ವೆಜ್‌ನಲ್ಲೂ ಈ ಪಾಟಿ ದೇಹ ಬೆಳೆಸಲು ಸಾಧ್ಯನಾ ಎಂದರೆ ಅದು ಕೂಡ ನಮಿತಾಳಿಂದ ಸಾಧ್ಯ ಎನ್ನುವ ಮಾತು ಬಂದು ಬಿಡುತ್ತದೆ.
ಬೇಸಿಕಲಿ ನಮಿತಾ ಗುಜರಾತ್ ಹುಡುಗಿ. ಮನೆಯಲ್ಲಿ ಎಲ್ಲರೂ ನಾನ್‌ವೆಜ್ ಐಟಂಗಳನ್ನು ಮುಕ್ಕಿಕೊಂಡು ತಿನ್ನುತ್ತಾರೆ. ಆದರೆ ನಮಿತಾ ಮಾತ್ರ ನಾನ್ ವೆಜ್ ಮುಟ್ಟುತ್ತಿಲ್ಲವಂತೆ. ಅವಳಿಗೆ ಮಾತ್ರ ತರಕಾರಿ ಸೊಪ್ಪು, ಪಲ್ಯಗಳೆಂದರೆ ಮಾತ್ರ ಮಾಡಿದ ಊಟ ಹೊಟ್ಟೆ ಸೇರೋದು ಎನ್ನುವುದು ವರ ತಂದೆ ಟೈಕ್ಸ್‌ಟೈಲ್ ಉದ್ಯಮಿ ಮುಕೇಶ್ ಅವರ ಮಾತು.
ಬಾಲ್ಯದಿಂದಲೇ ನಮಿತಾಳಿಗೆ ನಾನ್‌ವೆಜ್ ಎಂದರೆ ಅಷ್ಟಕಷ್ಟೇ ಆದರೂ ನಾವು ಕೆಲವೊಮ್ಮೆ ತಿನ್ನಿಸುವ ಪ್ರಯತ್ನ ಮಾಡಿದ್ದೇವು. ಆದರೆ ನಮಿತಾ ವೆಜ್ ಐಟಂಗಳಿಗೆ ಅಂಟಿಕೊಂಡಿದ್ದಾಗ ಟೋಟಲಿ ನಾವು ನಾನ್‌ವೆಜ್ ತಿನ್ನಿಸುವ ಪ್ರಯತ್ನ ಬಿಟ್ಟುಕೊಂಡು ವೆಜ್‌ಟೇರಿಯನ್ ಐಟಂಗಳಿಗೆ ಶಿಫ್ಟ್ ಮಾಡಿದ್ದೇವು ಎನ್ನುತ್ತಾರೆ ನಮಿತಾಳ ತಾಯಿ.
ವೆಜ್ ಯಾಕಿಷ್ಟಾ :
ನಮಿತಾ ಟೋಟಲಿ ವೆಜ್‌ಗೆ ಬಲಿಯಾಗಲು ಬಹುಮುಖ್ಯ ಕಾರಣ ದಢೂತಿತನವಂತೆ. ಬಾಲ್ಯದಲ್ಲಿ ನಾನ್‌ವೆಜ್ ಐಟಂಗಳನ್ನು ಜಾಸ್ತಿಯಾಗಿ ತಿಂದರೆ ದೇಹದ ಭಾರ ಹೆಚ್ಚುತ್ತದೆ ಎಂದು ಹೆಚ್ಚು ಭಾರವಾಗಿದ್ದ ಹುಡುಗಿ ನಮಿತಾಳನ್ನು ನೋಡಿ ಅವರ ಗೆಳತಿಯರು ಹೇಳಿಕೊಂಡು ತಮಾಷೆ ಮಾಡುತ್ತಿದ್ದರಂತೆ. ಅದೇ ತಮಾಷೆ ಮಾತುಗಳನ್ನು ಸೀರಿಯಸ್ ಆಗಿ ತೆಗೆದುಕೊಂಡು ಬಂದ ನಮಿತಾ ಮುಂದೆ ವೆಜ್‌ಟೇರಿಯನ್ ಫುಡ್‌ಗಳಿಗೆ ಬಾಯಿ ಬಿಡುವಂತೆ ಮಾಡಿತು ಎನ್ನುವುದು ನಮಿತಾರ ಸೀಕ್ರೇಟ್ ಮಾತು.
ಅದರಲ್ಲೂ ನಮಿತಾಳಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಪ್ರಾಣಿದಯಾ ಸಂಘದ ಜತೆಯಲ್ಲಿ ನಮಿತಾ ಇಲ್ಲದೇ ಹೋದರೂ ಪ್ರಾಣಿಗಳನ್ನು ಪ್ರೀತಿಯಿಂದ ಕಾಣುವ ಹೃದಯವಂತಿಕೆ ಅವರಲ್ಲಿ ಇದೆ ಎನ್ನೋದು ಅವರ ಆಪ್ತ ಗೆಳೆಯರ ಮಾತು. ಇದೇ ಒಂದು ಕಾರಣ ನಾನ್‌ವೆಜ್‌ಟೇರಿಯನ್‌ನಿಂದ ನಮಿತಾಳನ್ನು ಸಾಕಷ್ಟು ದೂರ ಮಾಡಿದೆ ಎಂಬ ಮಾತು ನಮಿತಾಳ ಖಾಸಾ ಗೆಳೆಯರು ಹೇಳಿಕೊಳ್ಳುತ್ತಾರೆ.
ವೆಜ್‌ನಲ್ಲೂ ಫಿಗರ್ :
ನಮಿತಾಳನ್ನು ಇಷ್ಟಪಟ್ಟು ೨೫೦೦ ಅಭಿಮಾನಿಗಳ ಸಂಘಗಳು ದೇಶದ ನಾನಾ ಭಾಗಗಳಲ್ಲಿ ತಲೆ ಎತ್ತಿಕೊಂಡು ಕೆಲಸ ಮಾಡುತ್ತಿದೆ. ಇವರೆಲ್ಲರಿಗೂ ಒಂದೇ ಡೌಟ್ ನಮಿತಾ ದೇಹ ಇಷ್ಟೊಂದು ಊದಿಕೊಳ್ಳಲು ವೆಜ್ ಕಾರಣನಾ..? ಎನ್ನೋದು. ಅದಕ್ಕೆ ನಮಿತಾ ಹೇಳುವುದಿಷ್ಟೇ: ನನಗೆ ವೆಜ್ ಇಷ್ಟ. ಆದರೆ ಇದು ನನ್ನ ದೇಹದ ಬೆಳವಣಿಗೆಯಲ್ಲಿ ಈ ಪಾಟಿ ಕೆಲಸ ಮಾಡುತ್ತದೆ ಅನ್ನೋದು ನನಗೆ ಗೊತ್ತಿಲ್ಲ. ಆದರೂ ಸ್ಲಿಮ್ ಆಗಲು ಡಯಾಟ್ ಕಡೆ ಮುಖ ಮಾಡುತ್ತಿದ್ದೇನೆ. ಕೆಲವರಿಗೆ ನನ್ನ ಫಿಗರ್ ಇದೇ ಇರಬೇಕು ಎನ್ನುವುದು ಇದೆ ಎನ್ನುವುದು ನಮಿತಾಳ ಮಾತು.
ಸಿಕ್ರೇಟ್ ಮಾತು:
ನಮಿತಾ ತುಂಬಾನೇ ಆಧ್ಯಾತ್ಮಿಕ ವ್ಯಕ್ತಿ. ದೇವರ ಕುರಿತು ಅಪಾರ ನಂಬಿಕೆ ಇಟ್ಟುಕೊಂಡಿರುವ ಭಕ್ತೆ. ದಿನಾಲೂ ಹನುಮಾನ್ ಚಾಲೀಸಾ ಪಠಣ ಮಾಡದೇ ಇತರ ಕಾರ‍್ಯಗಳನ್ನು ಮಾಡುವುದಿಲ್ಲ. ಮಲಯಾಳಂ, ಹಿಂದಿ, ತೆಲುಗು, ತಮಿಳು, ಕನ್ನಡ ಭಾಷೆಗಳಲ್ಲಿ ನಟಿಸಿರುವ ನಮಿತಾ ತನ್ನ ಚಿತ್ರಗಳಿಗೆ ಖುದ್ದು ಡಬ್ ಮಾಡುವುದಿಲ್ಲವಂತೆ. ಬದುಕಿನಲ್ಲಿರುವ ಬಹುದೊಡ್ಡ ಕನಸ್ಸು ಎಂದರೆ ತನ್ನ ಚಿತ್ರಗಳಿಗೆ ತಾನೇ ಚಿತ್ರಗಳಿಗೆ ತಾನೇ ಡಬ್ ಮಾಡಬೇಕು ಎಂದಿರುವುದು. ಅದರಲ್ಲೂ ಯಾರಾದರೂ ನಮಿತಾಳನ್ನು ಸೆಕ್ಸ್ ಸಿಂಬಲ್ ಎಂದು ಕರೆದರೆ ಅವಳಿಗೆ ಎಲ್ಲಿಲ್ಲದ ಖುಷಿ.
(vk lvk puravani published dis article on 18.1.2012)

Monday, January 2, 2012

ವೈಸಿಐಎಂ ಬನ್ನೂರುನಿಂದ ರೇಗೊಗೆ ಸನ್ಮಾನಿಸಲಾಯಿತು






ಸಂತ.ಅಂತೋನಿಯವರ ದೇವಾಲಯ ಬನ್ನೂರು ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಾಲನ(ಐ.ವೈಸಿ.ಎಂ)ಬನ್ನೂರು ಘಟಕದ ವತಿಯಿಂದ ನ್ಯೂ ಇಯರ್ ಈವ್ ಕಾರ‍್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ವಿಶೇಷ ಸೇವೆಗಾಗಿ ಮಂಗಳೂರು ವಿಜಯ ಕರ್ನಾಟಕ ಪತ್ರಿಕೆಯ ಉಪಸಂಪಾದಕ ಸ್ಟೀವನ್ ರೇಗೊ, ದಾರಂದಕುಕ್ಕು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬನ್ನೂರು ಚರ್ಚ್‌ನ ಧರ್ಮಗುರು ಫಾ. ನಿಕೋಲಸ್ ಡಿಸೋಜ, ಫಾ. ಫ್ರಾನ್ಸಿಸ್ ಅಸ್ಸೀಸಿ ಡಿ ಆಲ್ಮೇಡಾ, ಟೋನಿ ಲೋಬೊ, ಐ.ವೈ.ಸಿ.ಎಂನ ಬನ್ನೂರು ಘಟಕ ಅಧ್ಯಕ್ಷ ವಿಶ್ವಾಸ್ ಲೋಬೊ, ಉಪಾಧ್ಯಕ್ಷ ಜೈಸನ್ ಪ್ರವೀಣ್ ಡಿಸೋಜ, ದೀಕ್ಷಿತ್ ಗೊನ್ಸಾಲ್ವೀಸ್, ವೆಸ್ಲೀ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.