Saturday, November 30, 2013

ನೇತ್ರಾವತಿ ಹೋರಾಟಕ್ಕೆ ವಿನೂತನ ಜಾಗೃತಿಯಾಟ

* ಸ್ಟೀವನ್ ರೇಗೊ, ದಾರಂದಕುಕ್ಕು ನೇತ್ರಾವತಿ ಇದು ಕರಾವಳಿಯ ಜೀವನದಿ. ಈ ನದಿಯನ್ನು ನಂಬಿಕೊಂಡು ಅದೆಷ್ಟೋ ಮಂದಿ ಬದುಕು ಕಟ್ಟುತ್ತಿದ್ದಾರೆ ಎನ್ನುವುದು ನೇತ್ರಾವತಿ ನೀರು ಕುಡಿದ ಮಂದಿಗಂತೂ ಗೊತ್ತೇ ಇದೆ. ಎತ್ತಿನಹೊಳೆ ಸೇರಿದಂತೆ ನದಿ ತಿರುಗಿಸುವ ಯೋಜನೆಗಳ ಮೂಲಕ ಇಂತಹ ನೇತ್ರಾವತಿಯನ್ನು ಕಟ್ಟಿ ಹಾಕುವಂತಹ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ನೇತ್ರಾವತಿ ನದಿಯ ಹರಿವು ಜತೆಗೆ ಅದರ ಉಳಿವು ಎಷ್ಟು ಅಗತ್ಯ ಎನ್ನುವ ಕುರಿತು ಜಿಲ್ಲೆಯ ನಾನಾ ವ್ಯಂಗ್ಯ ಚಿತ್ರಕಾರರಿಂದ ನೇತ್ರಾವತಿ ಉಳಿಸಿ ವ್ಯಂಗ್ಯಚಿತ್ರ ಪ್ರದರ್ಶನದ ಮೂಲಕ ಶ್ರೀಸಾಮಾನ್ಯನಿಗೆ ಜಾಗೃತಿ ಬೀಜ ಬಿತ್ತುವ ವಿನೂತನ ಜಾಗೃತಿಯಾಟ ಮಂಗಳೂರಿನ ಆರ್ಕಿಡ್ ಗ್ಯಾಲರಿಯಲ್ಲಿ ಡಿ.೨ ರಿಂದ ೪ರ ವರೆಗೆ ನಡೆಯಲಿದೆ. ಕರಾವಳಿ ಯುವ ಸಿಂಚನ, ವನ್ಯ ಚಾರಣ ಬಳಗ ಹಾಗೂ ಆರ್ಕಿಡ್ ಗ್ಯಾಲರಿ ಜತೆ ಸೇರಿಕೊಂಡು ಅಪರೂಪದ ನದಿ ಉಳಿಸುವ ಜಾಗೃತಿಯಾಟಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಈ ಹಿಂದೆ ಕದ್ರಿ ಪಾರ್ಕ್ ಸೇರಿದಂತೆ ಪಣಂಬೂರು ಬೀಚ್ ನಲ್ಲಿ ಅಂಚೆ ಕಾರ್ಡ್‌ಗಳಲ್ಲಿ ನೇತ್ರಾವದಿ ನದಿ ತಿರುವಿನ ವಿರುದ್ಧ ವಿನೂತನ ಸಹಿ ಚಳವಳಿಯ ಮೂಲಕ ಜಾಗೃತಿ ಅಭಿಯಾನ ಮಾಡಿತ್ತು. ಇವುಗಳ ಜತೆಗೆ ಉಜಿರೆ, ಚಾರ್ಮಾಡಿ, ಕಕ್ಕಿಂಜೆ, ಬೆಳ್ತಂಗಡಿ, ಮಡಂತ್ಯಾರ್‌ಗಳಲ್ಲಿ ನಡೆಸಿದ ಜನಜಾಗೃತಿ, ಮಂಗಳೂರಿನಲ್ಲಿ ನಡೆಸಿದ ಜಾಥಾ, ಜಿಲ್ಲೆಯ ನಾನಾ ಶಾಲಾ- ಕಾಲೇಜುಗಳಲ್ಲಿ ನಡೆಸಿದ ನದಿ ತಿರುವಿನ ಕುರಿತಾದ ಉಪನ್ಯಾಸ ಕಾರ‍್ಯಕ್ರಮದ ಮೂಲಕ ಜಿಲ್ಲೆಯ ಜೀವನದಿ ನೇತ್ರಾವತಿಯ ಉಳಿವಿಗಾಗಿ ಮಾಡಿದ ಸಾಹಸಗಳು ಅಪಾರ ಜಾಗೃತಿಗೆ ಪ್ರೇರಣೆಯಾಗಿತ್ತು. ಎಚ್ಚರಿಕೆಯ ಕರೆಗಂಟೆ: ನೇತ್ರಾವತಿ ನದಿ ತಿರುವು ಯೋಜನೆ ಅಥವಾ ಎತ್ತಿನ ಹೊಳೆ ಯೋಜನೆಯಿಂದ ನೇತ್ರಾವತಿ ನದಿಗೆ ಯಾವ ರೀತಿಯಲ್ಲಿ ಪೆಟ್ಟು ಬೀಳಲಿದೆ. ಜಿಲ್ಲೆಯ ರಾಜಕೀಯ ಪಟುಗಳು ಯಾವ ರೀತಿಯಲ್ಲಿ ನೇತ್ರಾವತಿ ನದಿಯನ್ನು ಬಣ್ಣಿಸುತ್ತಿದ್ದಾರೆ. ಶ್ರೀಸಾಮಾನ್ಯ ನದಿಯನ್ನು ನೋಡುವ ರೀತಿ, ನದಿ ತಿರುಗಿಸುವ ಕೆಲಸದಿಂದ ಜಿಲ್ಲೆಯ ಜನರಿಗೆ ಬೀಳುವ ಪೆಟ್ಟು ಇತ್ಯಾದಿಗಳನ್ನು ವ್ಯಂಗ್ಯ ಚಿತ್ರಗಳಲ್ಲಿ ಜೋಡಿಸಲಾಗಿದೆ. ಈ ವ್ಯಂಗ್ಯ ಚಿತ್ರಗಳಲ್ಲಿ ಹಾಸ್ಯದ ಜತೆಗೆಯಲ್ಲಿಯೇ ವಿಡಂಬನೆ ಇದ್ದರೂ ಗಂಭೀರವಾದ ಯೋಚನೆಗಳಿವೆ, ಎಚ್ಚರಿಕೆಯಿದೆ, ಜಾಗೃತಿ ಹಾಗೂ ಪ್ರಜ್ಞೆ ಮೂಡಿಸುವಂತಹ ಚಿಂತನೆಗಳಿಂದ ತುಂಬಿ ಹೋಗಿದೆ. ಶ್ರೀಸಾಮಾನ್ಯನಿಗೆ ಅರ್ಥವಾಗದ ವಿಚಾರಗಳನ್ನು ಇಂದಿನ ವ್ಯವಸ್ಥೆ ಯಾವ ರೀತಿಯಲ್ಲಿ ತೂಗು ಹಾಕುತ್ತಿದೆ ಎನ್ನುವ ವಿಚಾರಗಳಿಗೆ ವ್ಯಂಗ್ಯದ ಮೂಲಕ ಉತ್ತರ ನೀಡಲಾಗಿದೆ. ನದಿ ಉಳಿಸಲು ಕಾರ್ಟೂನ್ ಟಚ್ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದರಾದ ಜಾನ್ ಚಂದ್ರನ್, ಯತಿ ಸಿದ್ಧಕಟ್ಟೆ, ಜೀವನ್, ಹರಿಣಿ, ಅಮೃತ್ ವಿಟ್ಲ, ಸತೀಶ್ ಆಚಾರ್ಯ, ದಿನೇಶ್ ಕುಕ್ಕುಜಡ್ಕ ಮೊದಲಾದವರು ಸೇರಿಕೊಂಡು ನೇತ್ರಾವತಿ ನದಿ ಉಳಿವು, ಎತ್ತಿನ ಹೊಳೆ ಹಾಗೂ ನದಿ ತಿರುಗಿಸುವ ಯತ್ನ ದ ವಿರುದ್ಧ ಜಾಗೃತಿ ಹುಟ್ಟು ಹಾಕುವ ವಿನೂತನ ಮಾದರಿ ಕಾರ್ಟೂನ್‌ಗಳನ್ನು ತಮ್ಮ ಬತ್ತಲಿಕೆಯಿಂದ ಹರಿಯಬಿಟ್ಟಿದ್ದಾರೆ. ಡಿ. ೨ರಂದು ಈ ವ್ಯಂಗ್ಯ ಚಿತ್ರ ಪ್ರದರ್ಶನದ ಜತೆಯಲ್ಲಿ ಉಪನ್ಯಾಸ ಕಾರ‍್ಯಕ್ರಮಗಳು ನಡೆಯಲಿದೆ. ನೇತ್ರಾವತಿ ನದಿ ತಿರುವು ಹೋರಾಟ ಸಮಿತಿಯ ಡಾ. ನಿರಂಜನ್ ರೈ ವಿಶೇಷ ಉಪನ್ಯಾಸ ನೀಡಲಿದ್ದಾರೆ. ..... (mangalore vijyakarnakta daily supliment namma karvali my article published on dec 1, 2013)

Friday, November 29, 2013

ಹಣವೆಂಬ ಮಾಯ ಜಿಂಕೆಯ ಬೆನ್ನೇರಿದವರು....

ಸೌದಿಯಲ್ಲಿ ನಿಜಕ್ಕೂ ಭಾರ ತೀಯರಿಗೆ ಅದರಲ್ಲೂ ನೆರೆಯ ರಾಜ್ಯವಾದ ಕೇರಳ ಹಾಗೂ ಕರಾವಳಿಯ ಮಂದಿಗೆ ತೊಂದರೆಯಾಗಿದೆಯಾ..? ಇಲ್ಲಿಂದ ಹಣ ಗಳಿಸಲು ಹೋದವರು ಅಲ್ಲಿ ಹೇಗೆ ಬದುಕುತ್ತಿದ್ದಾರೆ... ನಿತಾಕತ್ ಕಾನೂನಿನಿಂದ ಏನೆಲ್ಲ ಆಗಿದೆ ಎನ್ನುವ ವರದಿ ಇಲ್ಲಿದೆ... " ಸ್ಟೀವನ್ ರೇಗೊ, ದಾರಂದಕುಕ್ಕು.
ಗಲ್ಫ್ ಎನ್ನುವ ಒಂದು ಪದವನ್ನು ನೆಚ್ಚಿಕೊಂಡಿರುವ ಅದೆಷ್ಟೋ ಕುಟುಂಬಗಳು ನಮ್ಮ ಕರಾವಳಿ ಮತ್ತು ನೆರೆಯ ಕೇರಳ ರಾಜ್ಯದಲ್ಲಿವೆ. ಕನಸಿನ ಗುಚ್ಛವನ್ನು ತೆಗೆದುಕೊಂಡು "ಮಾನ ಹತ್ತಿದವರು ಅದೆಷ್ಟೋ ಜನ . ಮನೆಯ ಸಾಲ ,ತಂಗಿಯ ಮದುವೆ, ತಮ್ಮನ "ದ್ಯಾಬ್ಯಾಸ "ಗೆ ಹಲವು ಸಮಸ್ಯೆ ಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಹೊರಟ ಲಕ್ಷಾಂತರ ಜನ ನಮ್ಮ ಕಣ್ಣ ಮುಂದೆ ಇದ್ದಾರೆ . ಕೆಲವರಿಗೆ ಗಲ್ಫ್ ಸ್ವರ್ಗವಾದರೆ ಇನ್ನು ಕೆಲವರಿಗೆ ನರಕ ದ ದಾರಿಯನ್ನು ತೋರಿಸಿದೆ . ಪ್ರಸ್ತುತ ಸೌದಿ ಅರೇಬಿಯದಲ್ಲಿ ಬಂದಿರುವ ನಿತಾಕಾತ್ ( ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಸ್ವದೇಶೀಕರಣ ) ಕಾನೂನಿನ ಬಗ್ಗೆ ಕರಾವಳಿಯ ಜನರಿಗೆ ಬಹಳಷ್ಟು ಗೊಂದಲಗಳಿವೆ. ಗಲ್ಫ್ ಕನಸು ಹೊತ್ತು ಹೊರಡುವ ಅನೇಕರ ಮನಸ್ಸಿಗೆ ನಿತಾಕಾತ್ ಕಾನೂನು ಕಣ್ಣ ಮುಂದೆ ಬರುವುದು ಸುಳ್ಳಲ್ಲ . ಆದರೆ ಈ ನಿತಾಕತ್ ಕಾನೂನು ಏನು ಅನ್ನೋದನ್ನ ಸರಿಯಾಗಿ ಅರ್ಥುಸಿಕೊಂಡರೆ ಸೌದಿ ಸರಕಾರ ಮಾಡಿರುವ ಈ ಕಾನೂನು ಸರಿ ಎಂದೆನಿಸುತ್ತದೆ . ಸೌದಿಯಲ್ಲಿ ಅದೆಷ್ಟೋ ಜನ ಹಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದು ಸೌದಿ ಸರಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಅದರಲ್ಲೂ ಇತಿಯೋಪಿಯಾ, ನೈಜಿರಿಯಾದ ಜನ ಅಕ್ರಮವಾಗಿ ಸೌದಿ ಯಲ್ಲಿ ನೆಲೆಸಿದ್ದರು . ಹೊಸ ಕಾನೂನಿನ ಪ್ರಕಾರ ಅಕ್ರಮವಾಗಿ ನೆಲೆಸಿರುವ ಕಾ"ಕರು ತಮ್ಮ ಕೆಲಸವನ್ನ ಹಾಗೂ ಸೌದಿಯಲ್ಲಿ ತನ್ನ ಇರು"ಕೆಯನ್ನು ಸಕ್ರಮ ಗೊಳಿಸುವಂತೆ ಸೌದಿ ಸರಕಾರ ಸೂಚಿಸಿತ್ತು. ಅದಕ್ಕಾಗಿ ಬಹಳಷ್ಟು ಕಾಲಾವಕಾಶಗಳನ್ನು ನೀಡಿತ್ತು ಅನೇಕ ಮಂದಿ ಅದರ ಸದುಪಯೋಗ ಪಡೆದುಕೊಂಡು ತಮ್ಮ ಕೆಲಸವನ್ನು ಹಾಗೂ ಸೌದಿಯಲ್ಲಿ ನೆಲೆಸಲು ಕಾನೂನು ಪ್ರಕಾರ ಏನೆಲ್ಲಾ ಬೇಕು ಅದನ್ನೆಲ್ಲ ಸರಿ ಪಡಿಸಿಕೊಂಡಿದ್ದರು . ಸೌದಿ ಸರಕಾರ ಸುಮಾರು ೯ ತಿಂಗಳು ಕಾಲಾವಕಾಶ ನೀಡಿತ್ತು. ಆ ಅವಧಿ ನವೆಂಬರ್ ೪ಕ್ಕೆ ಕೊನೆಗೊಂಡಿದ್ದು, ಅದರ ನಂತರ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಬಂಧಿಸಿ ಶಿಕ್ಷೆ ನೀಡಲು ಸೌದಿ ಸರಕಾರ ಮುಂದಾಗಿದೆ . ಭಾರತೀಯರ ಬಗ್ಗೆ ಮೃದು ಧೋರಣೆ: ಭಾರತೀಯರ ಬಗ್ಗೆ ಮೃದು ಧೋರಣೆ - ಸೌದಿ ಸರಕಾರದ ಟಾರ್ಗೆಟ್ ನೇರವಾಗಿ ಇತಿಯೋಪಿಯಾ ,ನೈಜೀರಿಯಾ, ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಿಯರ ಮೇಲೆ . ಇತಿಯೋಪಿಯಾ ಜನರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ . ಜೊತೆಗೆ ಅಕ್ರಮವಾಗಿ ಇಕಾಮ ಇಲ್ಲದೆ (Sಚಿuಜi ಖe*iಜeಟಿಛಿe Iಆ) ನೆಲೆಸಿರುವ ಯಾವುದೇ ರಾಷ್ಟ್ರದ ಜನರನ್ನ ಹುಡುಕಿ ದೇಶದಿಂದ ಹೊರದಬ್ಬುವ ಕೆಲಸವನ್ನ ಸೌದಿ ಪೊಲೀಸರು ಮಾಡುತ್ತಿದ್ದಾರೆ . ಸೌದಿ ಸರಕಾರ ವೃತ್ತಿಪರ(ಠಿಡಿoಜಿe**ioಟಿಚಿಟ ಛಿhಚಿಟಿg ) ಬದಲಾವಣೆ ಗೆ ಇನ್ನು ಅವಕಾಶ ನೀಡಿದೆ .ಮೊದಲೆಲ್ಲ ಹೇಗಿತ್ತು ಅಂದ್ರೆ ಆತನ ವೃತ್ತಿಪರ(ಠಿಡಿoಜಿe**ioಟಿಚಿಟ )ಒಂದಾದರೆ ಆತ ಕೆಲಸ ಮಾಡುತ್ತಿರುವುದು ಬೇರೆ ಯಾವುದೋ ಅದಕ್ಕೆ ಸೌದಿ ಸರಕಾರದ ಹೊಸ ಕಾನೂನು ಅಂತ್ಯ ಹಾಡಿದೆ. ಇಕಾಮ ದಲ್ಲಿ (Sಚಿuಜi ಖe*iಜeಟಿಛಿe Iಆ) ಯಾವ ವೃತ್ತಿಪರ(ಠಿಡಿoಜಿe**ioಟಿಚಿಟ )ಇದೆಯೋ ಆತ ಅದೇ ಕೆಲಸವನ್ನು ಮಾಡಬೇಕು . ಸೌದಿ ನಿತಾಕತ್ ಕಾನೂನು ಸೌದಿ ಅರೇಬಿಯಾಕ್ಕೆ ಒಂದು ಗೌರವವನ್ನು ತಂದುಕೊಟ್ಟಿದೆ. ಸೌದಿಯಲ್ಲಿ ಇನ್ನೂ ಒಂದು ವರ್ಷದೊಳಗಡೆ ಕಾನೂನು ಬದ್ಧವಾಗಿ ನೆಲೆಸಿರುವ ಕಾ"ಕರನ್ನು ನೋಡಬಹುದು . ನಿತಾಕತ್ ಕಾನೂನು ವರ್ಸಸ್ ಕರಾವಳಿ ಮಂದಿ: ನಿತಾಕತ್ ಕಾನೂನಿನಿಂದಾಗಿ ಸೌದಿಯಲ್ಲಿ ದುಡಿಯುವ ಅನೇಕ ಕರಾವಳಿ ಕುಟುಂಬಗಳಿಗೆ ಹೇಳಿಕೊಳ್ಳುವಂತ ದೊಡ್ಡ ಸಮಸ್ಯೆಗಳು ಉದ್ಭವವಾಗಿಲ್ಲ. ಕಾರಣ ಇಷ್ಟೇ ಕರಾವಳಿಗರು ತಮ್ಮ ಅಕ್ರಮ ವಲಸೆಯನ್ನು ಈಗಾಗಲೇ ಸೌದಿ ಸರಕಾರ ನೀಡಿರುವ ಡೆಡ್‌ಲೈನ್ ಒಳಗಡೆ ಸಕ್ರಮ ಮಾಡಿಕೊಂಡಿದ್ದಾರೆ. ಭಾರತೀಯ ಕುರಿತು ಸೌದಿ ಸರಕಾರಕ್ಕೊಂದು ಮೃದು ಧೋರಣೆ ಈಗಾಗಲೇ ಜಾಗೃತವಾಗಿದೆ. ಈ ಕಾರಣದಿಂದಾಗಿ ಕೇರಳ ಹಾಗೂ ಕರಾವಳಿಂದ ಬಂದವರನ್ನು "ಶೇಷವಾಗಿ ತಪಾಸಣೆ ಮಾಡುವುದನ್ನು ಸೌದಿ ಸರಕಾರ ಕಡಿಮೆ ಮಾಡುತ್ತಿದೆ. ಸೌದಿಯ ರಾಜಧಾನಿ ರಿಯಾದ್‌ನಲ್ಲಂತೂ "ಶೇಷವಾಗಿ ಭಾರತೀಯರು ಅದರಲ್ಲೂ ಕೇರಳಿಗರಿಂದ ಹಾಗೂ ಕರಾವಳಿಗರಿಂದ ತುಂಬಿ ಹೋಗಿದೆ. ಇಲ್ಲಿನ ಪ್ರತಿಯೊಂದು ದುಕೂನುಗಳಲ್ಲಿ ಕಣ್ಣಿಟ್ಟುಕೊಂಡು ನೋಡಿದರೂ ಅಲ್ಲಿ ಭಾರತೀಯನೊಬ್ಬ ಕಾಣ ಸಿಗುತ್ತಾನೆ. ತನ್ನ ಪಾಡಿಗೆ ದುಡಿದು ಊರಿನಲ್ಲಿರುವ ತನ್ನ ಕುಟುಂಬವನ್ನು ನೆಮ್ಮದಿಯ ಬದುಕು ಕೊಡುವತ್ತಾ ಗಮನ ಇಟ್ಟುಕೊಂಡಿರುವ ಇವರು ಪ್ರಾಮಾಣಿಕತೆಯ ಬದುಕು ಕಚ್ಚಿಕೊಂಡವರು. ಆದರೆ ನೈಜೀರಿಯಾ ಸೇರಿದಂತೆ "ಶ್ವದ ಗರೀಬೀ ರಾಷ್ಟ್ರಗಳಲ್ಲಿರುವ ಮಂದಿ ದರೋಡೆ, ಸುಲಿಗೆ "ಗೆ ನಾನಾ ಅಕ್ರಮಗಳಲ್ಲಿ ತೊಡಗಿರುವುದರಿಂದ ಸೌದಿ ರಾಷ್ಟ್ರಕ್ಕೆ ಇವರನ್ನು "ಡಿದಿಟ್ಟುಕೊಳ್ಳುವುದು ಒಂದು ದೊಡ್ಡ ತಲೆ ನೋವಾಗಿತ್ತು. ಇದೇ ಕಾರಣದಿಂದ ನಿತಾಕತ್ ಕಾನೂನು ತರುವ ಮೂಲಕ ಅವರನ್ನು ದೇಶದಿಂದ ಹೊರ ಹಾಕುವ ಕೆಲಸ ನಡೆಯುತ್ತಿದೆ ಎನ್ನೋದು ಸೌದಿಯಲ್ಲಿ ದುಡಿಯುತ್ತಿರುವ ಪುತ್ತೂರು ಮೂಲದ ಪ್ರಶಾಂತ್ "ನೇಜಸ್ ಅವರ ಮಾತು. ಕಟ್ಟ ಕಡೆಯ ಪ್ರಯತ್ನ: ನವೆಂಬರ್ ೪ ನಿತಾಕತ್ ಕಾನೂನು ಮೂಲಕ ಅಂತಿಮ ಗಡುವಾಗಿದ್ದರೂ ಕೂಡ ಜನವರಿಯಲ್ಲಿ ಸೌದಿ ಸರಕಾರ "ಶೇಷ ಪರೀಕ್ಷೆಯೊಂದನ್ನು ಕೇವಲ ಶಿಕ್ಷಕರಿಗೆ "ಸಲಿಟ್ಟಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮತ್ತೆ ಸೌದಿಯಲ್ಲಿ ಉಳಿಯುವ ಅವಕಾಶ ಲಭ್ಯವಾಗುತ್ತದೆ. ಈಗಾಗಲೇ ಸೌದಿಯ ಬಹಳಷ್ಟು ಕಡೆಗಳಲ್ಲಿ ನಡೆಯುವ ಶಿಕ್ಷಣದಲ್ಲಿ ಭಾರತೀಯರು ಅದರಲ್ಲೂ ಕೇರಳ, ಕರಾವಳಿಯ ಶಿಕ್ಷಕಿಯರು ದುಡಿಯುತ್ತಿದ್ದಾರೆ. ಆದರೆ ಅವರು ತಮ್ಮ ಪತಿಯಂದಿರ "ಸಾದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಕಾರಣದಿಂದ ಅವರನ್ನು ಸೌದಿ ಸರಕಾರದ ಅಧೀನದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಂದ ಕಿತ್ತು ಹಾಕಲಾಗಿದ್ದು, ಜನವರಿಯಲ್ಲಿ ಪರೀಕ್ಷೆ ಬರೆಯುವ ಮೂಲಕ ಮತ್ತೆ ಸೌದಿಯಲ್ಲಿ ಉಳಿಯುವಂತೆ ಅವಕಾಶವನ್ನು ತೆರೆದಿದೆ ಎನ್ನುತ್ತಾರೆ ಸೌದಿಯಲ್ಲಿ ದುಡಿಯುತ್ತಿರುವ ಮಂಗಳೂರು ಮೂಲದ ಗೀತಾ ಶೆಟ್ಟಿ. ನಿತಾಕತ್ ಕಾನೂನು "ರುದ್ಧವಾಗಿ ಬದುಕು ಕಟ್ಟುತ್ತಿರುವ ಅಕ್ರಮ ವಲಸಿಗರಿಗೆ ೧೦ ವರ್ಷಗಳ ಕಾಲ ಸೌದಿ ದೇಶಕ್ಕೆ ಮರು ಪ್ರವೇಶ"ಲ್ಲ. ಜತೆಗೆ ೨ ವರ್ಷಗಳ ಕಾಲ ಸೆರೆಮನೆ ಶಿಕ್ಷೆಯನ್ನು "ಧಿಸಲಾಗುತ್ತದೆ. ಬರೀ ನಿತಾಕತ್ ಕಾನೂನು ಮಾತ್ರ ಸೌದಿಯಲ್ಲಿ ಕಟ್ಟು ನಿಟ್ಟಾಗಿ ಇಲ್ಲಿನ ಉಳಿದ ಎಲ್ಲ ಕಾನೂನುಗಳು ತೀರಾ ಕಟ್ಟುನಿಟ್ಟಿನಿಂದ ಕೂಡಿರುತ್ತದೆ ಎನ್ನುತ್ತಾರೆ ರಿಯಾದ್ ಸೆಂಟ್ರಲ್ ಪೊಲೀಸ್ ಅಧಿಕಾರಿ ಶರೀಫ್ ಖಾಲಿದ್ ಮೂಸಾ ಅವರು. ಕೋಟ್ಸ್........ *"ಸೌದಿ ಅರೇಬಿಯಾದ ಸರಕಾರ ಅಲ್ಲಿನ ನಿರುದ್ಯೋಗಿ ಯುವಜನತೆಯ ಪರವಾಗಿ ನಿಂತು ಯೋಚನೆ ಮಾಡಿರೋದು ಒಳ್ಳೆಯ ಬೆಳವಣಿಗೆ. ಆದರೆ ಬಿಲಿಯನ್ ಸಂಖ್ಯೆಯಲ್ಲಿ ಸೌದಿಯಲ್ಲಿ ದುಡಿಯುತ್ತಿರುವ ಭಾರತೀಯರಿಗಂತೂ ಸಂಕಷ್ಟವೇ ಸರಿ. -ಪ್ರಶಾಂತ್ ಮೂಲತ ಃ ಪುತ್ತೂರಿನ ಸೇಡಿಯಾಪು"ನವರು. ಈಗ ಸೌದಿಯ ಜಿದ್ದಾದಲ್ಲಿ ಕೆಲಸ ಮಾಡುತ್ತಿದ್ದಾರೆ. ............. *ಸೌದಿ ಅರೇಬಿಯಾದಲ್ಲಿರುವ ಕಂಪನಿಗಳಲ್ಲಿ ಶೇ.೩೦ರಷ್ಟು ಸೌದಿ ಉದ್ಯೋಗಿಗಳನ್ನು ದುಡಿಸಿಕೊಳ್ಳಬೇಕು ಎನ್ನುವ ನಿಯಮ ಇಟ್ಟುಕೊಂಡಿದೆ. ಈ ಕಾನೂನು ಈ "ಂದೆ ಕೂಡ ಚಾಲ್ತಿಯಲ್ಲಿತ್ತು. ಆದರೆ ಅದರ ಬಳಕೆ ನಡೆದಿರೋದು ಈಗ ಮಾತ್ರ. ಶೇ.೩೦ಕ್ಕಿಂತ ಕಡಿಮೆ ಸೌದಿ ಕೆಲಸಗಾರರನ್ನು ಹೊಂದಿರುವ ಕಂಪನಿಯ ಪರವಾನಿಗಿ ಹಾಗೂ ಮನೆಯ ಪರವಾನಗಿ( ಇಕ್ಮಾ) ರದ್ದು ಮಾಡುವ ಸಾಧ್ಯತೆ ಇದೆ. ಆದರೆ ನನ್ನ ಕಂಪನಿಯಲ್ಲಿ ಈಗಾಗಲೇ ೧೦೦೦ಕ್ಕಿಂತ ಅಧಿಕ ಸೌದಿ ಮ"ಳೆಯರು ಹಾಗೂ ೪೦೦೦ಕ್ಕಿಂತ ಅಧಿಕ ಸೌದಿ ಪುರುಷರು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕಂಪನಿಯ ಜತೆಗೆ ನಾವು ಕೂಡ ಸುರಕ್ಷಿತವಾಗಿದ್ದೇವೆ. -ರ"ಶ್ ಜೈನ್ ಮೂಲತ ಃ ಪುತ್ತೂರು ಕೋಡಿಂಬಾಡಿಯವರು. ಈಗ ಸೌದಿಯಲ್ಲಿ ಮಾಲ್ ಮ್ಯಾನೇಜರ್ ಆಗಿ ದುಡಿಯುತ್ತಿದ್ದಾರೆ. .............. * ಸೌದಿಯಲ್ಲಿ ಬಹಳಷ್ಟು ಮಂದಿ ಕರಾವಳಿ ಸೇರಿದಂತೆ ಕೇರಳಿಗರ ಸಂಖ್ಯೆ ಜಾಸ್ತಿ ಇದೆ. ಕೇರಳದಲ್ಲಿ ಸೌದಿಂದ ಬಂದವರೇ ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಸೌದಿಯ ಹಣ ಇಲ್ಲದೇ ಕೇರಳವೇ ಸುಮ್ಮನೆ ಎನ್ನುವ ಸ್ಥಿತಿ ಇದೆ. ಇಂತಹ ಸಮಯದಲ್ಲಿ ಸೌದಿಯ ಈ ಕಾನೂನು ಭಾರತದ ಅದರಲ್ಲೂ ಕೇರಳವನ್ನು ಅಲುಗಾಡಿಸಿ ಬಿಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಸೌದಿಯ ಯುವಜನತೆ ಶಿಕ್ಷಿತರಾಗಿದ್ದರೂ ಕೂಡ ನಿರುದ್ಯೋಗಿಗಳಾಗಿದ್ದಾರೆ. ಈ ಕಾನೂನು ಸೌದಿಯ ಪ್ರಕಾರ ಸರಿಯಾಗಿದೆ. - ನಿತಿನ್ ರೈ ಕುಕ್ಕುವಳ್ಳಿ ಪುತ್ತೂರು ಕುಕ್ಕುವಳ್ಳಿ ನಿವಾಸಿ. ಪ್ರಸ್ತುತ ಸೌದಿಯಲ್ಲಿ ದುಡಿಯುತ್ತಿದ್ದಾರೆ. .............. ಸೌದಿಯಲ್ಲಿ ಕರ್ನಾಟಕದವರು ಸುರಕ್ಷಿತ ಸೌದಿ ಅರೇಬಿಯಾದಲ್ಲಿರುವ ಹೊಸ ಉದ್ಯೋಗ ನೀತಿಂದ ಕರ್ನಾಟಕದ ಜನ ದಿಗಿಲು ಬೀಳಬೇಕಾದ ಅಗತ್ಯ"ಲ್ಲ. ಯಾಕೆಂದರೆ ಇತರ ವಲಸಿಗರಿಗೆ ಹೋಲಿಸಿದರೆ ಕರ್ನಾಟಕ ನೌಕರರು ಹೆಚ್ಚು ಪರಿಶ್ರ"ಗಳು, ಪ್ರಾಮಾಣಿಕರು ಮತ್ತು ಪರಿಣಿತರು. ಅಕ್ರಮ ವಲಸಿಗರ ಪಟ್ಟಿಯಲ್ಲಿ ಅಥವಾ ಸೌದಿ ಜೈಲುಗಳಲ್ಲಿ ಇದುವರೆಗೆ ರಾಜ್ಯದ ಯಾವುದೇ ಕಾ"ಕರ ಹೆಸರು ಕಂಡು ಬಂದಿಲ್ಲ. ಸೌದಿಯ ಹೊಸ ಕಾನೂನಿನಿಂದ ಅಕ್ರಮ ಪ್ರವೇಶಿಸುವವರಿಗೆ ಮಾತ್ರ ತೊಂದರೆ. ಕಾನೂನುಬದ್ಧವಾದ ಅಧಿಕೃತ ದಾಖಲೆ ಪತ್ರಗಳೊಂದಿಗೆ ಹೋಗುವವರಿಗೆ ಏನೂ ತೊಂದರೆಲ್ಲ. ಯಾವುದೇ "ಸಾ ದೊರೆತರೂ ಅದರ ಪ್ರತಿಯನ್ನು ರಾಯಭಾರಿ ಕಚೇರಿಗೆ ಮುಂಚಿತವಾಗಿ ಕಳು"ಸಿ ಸತ್ಯಾಸತ್ಯತೆ ಪರಿಶೀಲಿಸಿಕೊಂಡರೆ ಯಾರಿಗೂ ಅಪಾಯ"ರುವುದಿಲ್ಲ. ಜಿಲ್ಲಾಡಳಿತೆಗಳು ಪಾಸ್‌ಪೋರ್ಟ್ ಮೇಲೆ ನಿಗಾ ಇರಿಸುವಂತೆ "ಸಾ ಏಜೆಂಟರನ್ನು ಕಾನೂನಿನ "ಡಿತಕ್ಕೆ ತರಬೇಕು. ಸೌದಿಯಲ್ಲಿ ಅಕ್ರಮ ವಲಸಿಗರ ಪ್ರಮಾಣ ಶೇ.೫ರ‍್ಟದೆ ಎಂದು ಗುರುತಿಸಲಾಗಿದೆ. ಇದುವರೆಗೆ ಪತ್ತೆಯಾದ ಶೇ.ಒಂದರಷ್ಟು ಮಾತ್ರ. ಇದರಲ್ಲಿ ಕರ್ನಾಟಕದವರಾರೂ ಇಲ್ಲ. ಸೆರೆ ಸಿಕ್ಕುವ ವಲಸಿಗರ ರಾಜ್ಯದ ಬಗ್ಗೆ ತಿಳಕೊಂಡು ರಾಯಭಾರ ಕಚೇರಿ ಆಯಾಯ ರಾಜ್ಯಕ್ಕೆ ಮಾ"ತಿ ಕಳು"ಸುತ್ತಿದೆ. ........................ ( vijyanext 29.11.2013 my lead article)

Tuesday, November 26, 2013

ಬರಲಿದೆ ತ್ರಿ ಭಾಷಾ ಕೊಂಕಣಿ ಶಬ್ದಕೋಶ

ಸ್ಟೀವನ್ ರೇಗೊ, ದಾರಂದಕುಕ್ಕು ಕೊಂಕಣಿ ಭಾಷಾ ಲೋಕದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ. ಇಂಗ್ಲೀಷ್-ಕನ್ನಡ-ಕೊಂಕಣಿ ಭಾಷಾ ಸಂವಹನ ಸಂಪರ್ಕದಲ್ಲಿ ದೂರಗಾಮಿ ಕ್ರಾಂತಿಯ ನಿರೀಕ್ಷೆ. ಮೂರು ಭಾಷೆಗಳ ಶಬ್ದಕೋಶ ತಯಾರಿಸುವ ಹೆಜ್ಜೆ. ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಆಧುನಿಕ ಸ್ವರೂಪದ ಅರ್ಥಕೋಶಗಳು ಬೆಳೆಯುವಲ್ಲಿ ಕ್ರೈಸ್ತ ಮಿಷನರಿಗಳು ತಮ್ಮದೇ ಉದ್ದೇಶಕ್ಕಾಗಿ ಪ್ರಥಮ ಹೆಜ್ಜೆ ಇಟ್ಟಿದ್ದು, ಇಂದು ಆ ಭಾಷೆಗಳ ಅಭಿವೃದ್ಧಿಯಾಗುವಲ್ಲಿ ಅಂತಹ ಅರ್ಥಕೋಶಗಳು ಪ್ರಮುಖ ಪಾತ್ರ ವಹಿಸಿವೆ. ಕರಾವಳಿ ಕರ್ನಾಟಕದಲ್ಲಿ ತುಳು, ಕನ್ನಡ, ಕೊಂಕಣಿ, ಕುಂದಗನ್ನಡ ಹಾಗೂ ಬ್ಯಾರಿ ಭಾಷೆಗಳು ಪ್ರಚಲಿತದಲ್ಲಿವೆ. ಈ ಪೈಕಿ ಕನ್ನಡ ಹಾಗೂ ಕೊಂಕಣಿ ಸಂವಿಧಾನದ ೮ನೇ ಪರಿಚ್ಛೇದದಲ್ಲಿರುವ ರಾಷ್ಟ್ರೀಯ ಭಾಷೆಗಳಾಗಿವೆ. ಇವೆರಡೂ ಭಾಷೆಗಳಲ್ಲಿ ಹಲವಾರು ಅರ್ಥಕೋಶಗಳು ಬೆಳೆದು ಬಂದಿವೆ. ಅದಾಗ್ಯೂ ದೊಡ್ಡ ಮಟ್ಟಿನಲ್ಲಿ ಕನ್ನಡ-ಕೊಂಕಣಿ ಕೊಡುಕೊಳು ನಡೆದು ಬಂದಿಲ್ಲ. ಇದಕ್ಕೆ ಕೊಂಕಣಿ ಹಾಗೂ ಕನ್ನಡ ಭಾಷೆಗಳೆರಡನ್ನು ಏಕ ಕಾಲದಲ್ಲಿ ತಿಳಿಯಲು ಪೂರಕವಾಗುವ ಅರ್ಥಕೋಶ ಇನ್ನೂ ಬಾರದಿರುವುದು ಒಂದು ಕಾರಣವಾಗಿರಬಹುದು ಎನ್ನುವುದು ಶಬ್ದಕೋಶದ ತಯಾರಿಯಲ್ಲಿರುವ ಪ್ರೊ. ಸ್ಟೀವನ್ ಕ್ವಾಡ್ರಸ್ ಅವರ ಮಾತು. ಭರದ ಸಿದ್ಧತೆ: ಮಂಗಳೂರಿನ ಪಥದರ್ಶಿನಿ ಸೇವಾ ಟ್ರಸ್ಟ್ ಒಂದು ನೋಂದಾಯಿತ ಸಾರ್ವಜನಿಕ ಸೇವಾ ಸಂಘಟನೆಯಾಗಿದ್ದು , ಭಾರತ ಸರಕಾರದಿಂದ ಮಾನ್ಯತೆ ಹೊಂದಿದೆ. ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನದ ವ್ಯವಸ್ಥೆ ಮಾಡುವುದು ಇದರ ಮೂಲ ಉದ್ದೇಶವಾಗಿದ್ದು ಈಗಾಗಲೇ ‘ಮಾರ್ಗ’ ಹಾಗೂ ‘ಯಶಸ್ಸ್’ ಎಂಬ ಎರಡು ವೃತ್ತಿ ಮಾರ್ಗದರ್ಶನ ಪುಸ್ತಕಗಳನ್ನು ಈ ಟ್ರಸ್ಟ್‌ನ ವತಿಯಿಂದ ಹೊರಡಿಸಲಾಗುತ್ತಿದೆ. ಇದರ ಅಡಿಯಲ್ಲಿ ಈ ಕೊಂಕಣಿ ತ್ರಿ ಭಾಷಾ ಶಬ್ದಕೋಶವೊಂದು ಸಿದ್ಧವಾಗುತ್ತಿದೆ. ನಾಡಿನ ಖ್ಯಾತ ಭಾಷಾ ವಿದ್ವಾಂಸರಗಳಲ್ಲಿ ಒಬ್ಬರಾದ ಫಾ.ಬೇಸಿಲ್ ವಾಸ್ ಹಾಗೂ ಪ್ರಾಧ್ಯಾಪಕ ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಅವರು ಕಳೆದ ಹಲವು ವರ್ಷಗಳಿಂದ ಸಿದ್ದಪಡಿಸುತ್ತಿದ್ದ ಈ ಇಂಗ್ಲೀಷ್-ಕನ್ನಡ-ಕೊಂಕಣಿ ಅರ್ಥಕೋಶ ಈಗ ಅಂತಿಮ ಹಂತ ತಲುಪಿದ್ದು ಫೆಬ್ರವರಿ ೨೦೧೪ರ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ೫೦ ಸಾವಿರ ಪದಗಳು ಕೊಂಕಣಿ ಭಾಷಾ ಲೋಕದಲ್ಲಿ ವಿಶಿಷ್ಟ ಪ್ರಯತ್ನವಾದ ಈ ತ್ರಿಭಾಷಾ ಕೊಂಕಣಿ ಶಬ್ದಕೋಶದಲ್ಲಿ ಸುಮಾರು ೫೦,೦೦೦ ಇಂಗ್ಲೀಷ್ ಶಬ್ದಗಳಿಗೆ ಕನ್ನಡ ಹಾಗೂ ಕೊಂಕಣಿಯಲ್ಲಿ ಅರ್ಥ ಸಾಮ್ಯ ಪದಗಳು ಸಿಗಲಿವೆ. ಸುಮಾರು ೧೫೦೦ ಪುಟಗಳಲ್ಲಿ ಈ ಪುಸ್ತಕ ಬರಲಿದೆ. ಮುಖ್ಯವಾಗಿ ಇಂಗ್ಲೀಷ್- ಕೊಂಕಣಿ- ಕನ್ನಡ ಮೂರು ಭಾಷೆಗಳಲ್ಲಿ ಇರುವ ಕಾರಣ ಮೂರು ಭಾಷೆಗಳ ಶಬ್ದ ಭಂಡಾರಕ್ಕೆ ದೊಡ್ಡ ಕೊಡುಗೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ. ತ್ರಿ ಭಾಷೆಯಲ್ಲಿ ಇಂತಹ ಒಂದು ದೊಡ್ಡ ಪ್ರಯತ್ನ ಮಾಡಬೇಕು ಅಂದುಕೊಂಡಿದ್ದೆ. ಈಗ ಇದು ನನಸ್ಸಾಗುತ್ತಿದೆ. ಶಬ್ದಕೋಶದ ಬಹುತೇಕ ಕೆಲಸಗಳು ಕೊನೆಗೊಂಡಿದೆ. ಮುಖಪುಟ ಹಾಗೂ ಇನ್ನೂ ಕೆಲವು ಪುಟಗಳು ಬಾಕಿ ಉಳಿದಿದೆ. ಇದೊಂದು ಭಾಷಾ ಲೋಕಕ್ಕೆ ಅಪೂರ್ವ ಕೊಡುಗೆಯಾಗಲಿದೆ. -ಪ್ರೊ.ಸ್ಟೀವನ್ ಕ್ವಾಡ್ರಸ್, ಪೆರ್ಮುದೆ

Sunday, November 24, 2013

ಕೂದಲು ಇಲ್ಲದ ಮಂದಿಗೆ ಟ್ಯಾಟೋ ಹೇರ್

ಸ್ಟೀವನ್ ರೇಗೊ, ದಾರಂದಕುಕ್ಕು
ತಲೆ ಮೇಲೆ ಕೂದಲೇ ಇಲ್ಲದೇ ಬೋಳು ತಲೆಯ ಸಮಸ್ಯೆಯಿಂದ ಬಳಲುವವರ ದುಗುಡ ಆ ದೇವರಿಗೆ ಪ್ರೀತಿ. ಬೋಳು ತಲೆಯಿಂದ ಮುಕ್ತಿ ಪಡೆಯಬೇಕಾ..? ಎನ್ನುವ ಹತ್ತಾರು ಜಾಹೀರಾತುಗಳು ದಿನನಿತ್ಯ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಆದರೆ ಮಂಗಳೂರಿನ ಯುವಕರ ಟ್ಯಾಟೋ ತಂಡವೊಂದು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ತಲೆ ಮೇಲೆ ಕೂದಲು ಬೆಳೆಸುವ ಕೆಲಸದಲ್ಲಿ ತಲ್ಲೀನವಾಗಿದೆ. ಇದು ಯಾವುದೇ ಔಷಧಿ ಅಥವಾ ಇತರ ತಂತ್ರಗಾರಿಕೆಯ ಬದಲಾಗಿ ಬರೀ ಟ್ಯಾಟೋ ಸಾಧನಗಳನ್ನು ಆಯ್ಕೆ ಮಾಡಿಕೊಂಡು ಬೋಳು ತಲೆಯಲ್ಲಿ ಕೂದಲು ಬೆಳೆಸಲಾಗುತ್ತದೆ. ಹೇರ್ ಟ್ಯಾಟೂ ಟ್ರೀಟ್‌ಮೆಂಟ್: ಟ್ಯಾಟೂ ಲೋಕದಲ್ಲಿ ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಪ್ರಯತ್ನ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಕಾರಣ ಅತೀ ಸೂಕ್ಷ್ಮಾತೀತ ಕೆಲಸ ಹಾಗೂ ಹೆಚ್ಚು ಸಮಯ, ತಾಳ್ಮೆಯ ಅಗತ್ಯತೆ ಬೇಕಾಗುತ್ತದೆ. ತಲೆಯ ಭಾಗವಾಗಿರುವುದರಿಂದ ಇಲ್ಲಿ ಕುಶಲ ಟ್ಯಾಟೂ ಕಲಾವಿದರಿಗೆ ಮಾತ್ರ ಅವಕಾಶ ನೀಡಬೇಕಾಗುತ್ತದೆ. ದೇಹದ ಕೈ, ಕಾಲು ಅಥವಾ ಇತರ ಭಾಗಗಳಲ್ಲಿ ಟ್ಯಾಟೂ ರಚನೆಗೆ ಹೆಚ್ಚಿನ ಕಾಳಜಿಯ ಅಗತ್ಯತೆ ಇರೋದಿಲ್ಲ. ಉಳಿದ ಭಾಗಕ್ಕಿಂತ ತಲೆಯ ಭಾಗದಲ್ಲಿ ಸೂಕ್ಷ್ಮ( ತೆಳು)ವಾದ ಚರ್ಮ ಇರುವುದರಿಂದ ಅಲ್ಲಿ ಹೆಚ್ಚು ಬಲ ಪ್ರಯೋಗಕ್ಕೆ ಅವಕಾಶವೇ ಇಲ್ಲ. ಎಲ್ಲಕ್ಕೂ ಮುಖ್ಯವಾಗಿ ಲಕ್ಷಾಂತರ ಚುಕ್ಕಿಗಳನ್ನು ಕೂದಲಿನಂತೆ ಬೆಳೆಸುವುದರಿಂದ ಹೆಚ್ಚು ಸಮಯ ಹಾಗೂ ಎರಡರಿಂದ ಮೂರು ಮಂದಿಯ ಟ್ಯಾಟೂ ಕೆಲಸಗಾರರ ಅಗತ್ಯತೆ ಇರುತ್ತದೆ ಎನ್ನುವುದು ಮಂಗಳೂರಿನ ಟ್ರೈಬಲ್ ಟ್ಯಾಟೂವಿನ ಮುಖ್ಯಸ್ಥ ನಾಗೇಶ್ ಪುತ್ತೂರು ಅವರ ಮಾತು. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ತೀರಾ ಇತ್ತೀಚೆಗೆ ಹೇರ್ ಟ್ಯಾಟೂ ರಚನೆ ಮಾಡಿದ್ದೇವೆ. ಇಡೀ ಒಂದು ದಿನ ಬೇಕಾಗಿತ್ತು. ಮೂರು ಮಂದಿಯ ತಂಡ ರಚನೆ ಮಾಡಿದ್ದೇವು. ಅದರಲ್ಲೂ ಮುಖ್ಯವಾಗಿ ತಲೆಯ ಭಾಗವಾಗಿರುವುದರಿಂದ ಸೂಕ್ಷ್ಮ ಕೆಲಸ ಇತ್ತು. ಟ್ಯಾಟೂ ಸೂಜಿಗಳಿಂದ ಬಹಳ ಜೋಪಾನವಾಗಿ ಅಂತರಗಳನ್ನು ಇಟ್ಟುಕೊಂಡು ಚುಕ್ಕಿ ರಚನೆ ಮಾಡಿದೇವು. ಮೂರು ದಿನಗಳ ನಂತರ ಹೇರ್ ಟ್ಯಾಟೂ ಮಾಡಿಸಿಕೊಂಡವರು ನಮ್ಮ ಮುಂದೆ ಬಂದು ನಿಂತಾಗ ನಮಗೆ ಆಶ್ಚರ್ಯ ಎದುರಾಗಿತ್ತು ಎನ್ನುತ್ತಾರೆ ಟ್ಯಾಟೂ ರಚನೆಗಾರ ಮೋನಿಶ್ ಶೆಟ್ಟಿ. ಹೊಸ ಟ್ಯಾಟೂಗೆ ಹೊಸ ತಂತ್ರಜ್ಞಾನ ಪ್ಲಸ್: ಈಗಾಗಲೇ ಹುಡುಗಿಯರ ಕಣ್ಣಿನ ಹುಬ್ಬುಗಳನ್ನು ಟ್ಯಾಟೂ ಮೂಲಕ ಮಾಡಿದ್ದೇವೆ. ಅದು ಯಶಸ್ವಿ ಕೂಡ ಆಗಿತ್ತು. ಈ ಬಳಿಕ ಟ್ಯಾಟೂಗಳಲ್ಲಿ ೩ ಡಿ ಎಫೆಕ್ಟ್ ಗಳನ್ನು ಕೊಡಲು ಶುರು ಮಾಡಿದೇವು ಎಲ್ಲವೂ ಸಕ್ಸಸ್. ಈಗ ತಲೆಯಲ್ಲಿ ಕೂದಲು ಬೆಳೆಸುವ ಕೆಲಸದಲ್ಲಿ ಗೆದ್ದು ಬಂದಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ಟ್ಯಾಟೂ ರಚನೆಗಾರ ಪ್ರದೀಪ್. ಕಳೆದ ಐದಾರು ವರ್ಷಗಳಿಂದ ಟ್ರೈಬಲ್ ಟ್ಯಾಟೂ ಮೂಲಕ ಮಂಗಳೂರಿನಲ್ಲಿ ಈ ಯುವಕರು ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಅದರಲ್ಲೂ ಮುಖ್ಯವಾಗಿ ಆನಿಮೇಷನ್ ವರ್ಲ್ಡ್ ಹಾಗೂ ೩ ಡಿಗಳಲ್ಲಿ ಹೆಚ್ಚು ಪಳಗಿರುವ ಈ ಯುವಕರು ತಮ್ಮ ಟ್ಯಾಟೂಗಳಲ್ಲಿ ವಿಭ್ನಿನತೆ ಮೂಡಿಸುವಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಟೋಟಲಿ ಟ್ಯಾಟೂ ರಚನೆಯ ಯುವಕರ ತಂಡವೊಂದು ಕೂದಲು ಬೆಳೆಸುವ ಕೆಲಸ ಮೂಲಕ ಬಹಳಷ್ಟು ಮಂದಿಗೆ ನೆರವಾಗುತ್ತಿದ್ದಾರೆ ಎನ್ನುವ ಮಾತು ಮಾತ್ರ ಖುಷಿ ಕೊಡುತ್ತದೆ. ( vk main front page article published on 24.11.2013)