ಇವರು ಮರಾಠಿ ಜನಾಂಗದವರು. ಕೂಳೂರಿನಲ್ಲಿ ಹರಿಯುತ್ತಿರುವ ಗುರುಪುರ ನದಿಯೇ ಇವರ ಪಾಲಿಗೆ ಮೂಲ ಬಂಡವಾಳ. ಈ ಹರಿಯುವ ನದಿಯಲ್ಲಿರುವ ಮೀನುಗಳೇ ಇವರಿಗೆ ಆದಾಯ. ತೆಪ್ಪವೇ ಇವರಿಗೆ ಬದುಕುವ ಊರು ಗೋಲು.
* ಸ್ಟೀವನ್ ರೇಗೊ, ದಾರಂದಕುಕ್ಕು
ತೆಪ್ಪ ಇವರ ಪಾಲಿಗೆ ನದಿ ದಾಟುವ ಸಾಧನವಲ್ಲ. ಅದೊಂದು ಬದುಕು ಕೊಡುವ ದೇವರು. ವರ್ಷವಿಡೀ ಈ ತೆಪ್ಪದಲ್ಲಿಯೇ ಕಾಲ ಕಳೆಯುತ್ತಾ ಇರುವ ಇವರಿಗೆ ತೆಪ್ಪ, ನೀರು, ಮೀನು ಈ ಮೂರು ವಿಚಾರಗಳಲ್ಲಿಯೇ ಬದುಕಿನ ಲೆಕ್ಕಚಾರಗಳು ನಡೆಯುತ್ತದೆ. ಇದರಲ್ಲಿ ಒಂದು ಕೂಡ ಕಡಿಮೆಯಾದರು ಬದುಕು ಮೂರಾಬಟ್ಟೆಯಾಗಿ ಹೋಗುತ್ತದೆ. ಇದೇ ಕಾರಣದಿಂದ ಕಳೆದ ೩೦-೪೦ ವರ್ಷಗಳಿಂದ






ತೆಪ್ಪವನ್ನು ಬಿಟ್ಟು ಅವರು ಬದುಕೇ ಕಂಡಿಲ್ಲ. ಅಜ್ಜ, ಮಗ, ಮೊಮ್ಮಗ ಎನ್ನುವ ಸರಣಿಮಾಲಿಕೆಯೊಳಗೆ ಇವರದು ನದಿಯನ್ನು ನಂಬಿಕೊಂಡು ಕಾಲ ಕಳೆಯುವ ಪರಂಪರೆ.
ಅಂದಹಾಗೆ ಇವರು ಮರಾಠಿ ಜನಾಂಗದವರು. ಕೂಳೂರಿನಲ್ಲಿ ಹರಿಯುತ್ತಿರುವ ಗುರುಪುರ ನದಿಯೇ ಇವರ ಪಾಲಿಗೆ ಮೂಲ ಬಂಡವಾಳ. ಈ ಹರಿಯುವ ನದಿಯಲ್ಲಿರುವ ಮೀನುಗಳೇ ಇವರಿಗೆ ಆದಾಯ. ತೆಪ್ಪವೇ ಇವರಿಗೆ ಬದುಕುವ ಊರು ಗೋಲು. ಇವರು ಮೂಲತಃ ಚಿಕ್ಕಮಗಳೂರಿನ ಕಡೂರಿನಿಂದ ಮಂಗಳೂರಿಗೆ ವಲಸೆ ಬಂದವರು. ಅಲ್ಲಿಯ ಸಣ್ಣಪುಟ್ಟ ಕೃಷಿ ಭೂಮಿಯನ್ನು ಬಿಟ್ಟು ಇವರು ಗುರುಪುರದ ನದಿ ನೀರನ್ನು ನೆಚ್ಚಿಕೊಂಡರು. ಇಲ್ಲಿಯ ನೀರು ಇವರ ಕೈ ಬಿಡಲಿಲ್ಲ. ಬದುಕು ರೂಪಿಸಿ ಹಾಕಿತು ಎನ್ನುವುದು ಮರಾಠಿ ಜನಾಂಗದವರ ಅನುಭವದ ಮಾತು.
ಮರಾಠವಾಡದಲ್ಲಿ ಶಿವಾಜಿ ಆಳ್ವಿಕೆಯಲ್ಲಿ ನಮ್ಮ ಪೂರ್ವಿಕರು ಮಹಾರಾಷ್ಟ್ರದಿಂದ ಚಿಕ್ಕಮಗಳೂರು ಕಡೆಗೆ ಬಂದರು. ಮರಾಠವಾಡದ ಕಾರಣ ಮರಾಠಿ ನಮ್ಮ ಜನಾಂಗದ ಮಾತೃಭಾಷೆಯಾಗಿ ಉಳಿದು ಹೋಯಿತು. ೩೦-೪೦ ವರ್ಷಗಳಿಂದ ಮಂಗಳೂರಿನಲ್ಲೇ ಬದುಕುತ್ತಿದ್ದೇವೆ. ಆಗಾಗ ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದೇವು. ಆದರೆ ಕಳೆದ ೨೦ ವರ್ಷಗಳಿಂದ ನಾವು ಇಲ್ಲಿಯೇ ವಾಸವಾಗಿದ್ದೇವೆ ಎನ್ನುತ್ತಾರೆ ಮರಾಠಿ ಜನಾಂಗದ ಪಕೀರಪ್ಪ.
ಭದ್ರಾವತಿಯ ತೆಪ್ಪ, ಕುಡ್ಲದ ಬಲೆ :
ಮರಾಠಿ ಜನಾಂಗದ ಕರಿಸ್ವಾಮಿ ಹೇಳುವ ಮಾತು ಹೀಗೆ : ನಮಗೆ ಬೇಕಾದ ತೆಪ್ಪಗಳು ಇಲ್ಲಿ ಎಲ್ಲೂ ಸಿಗೋಲ್ಲ. ಕುಡ್ಲದಲ್ಲಿ ಬಹಳಷ್ಟು ಕಡೆ ಹುಡುಕಾಡಿದೇವು.. ಆದರೆ ತೆಪ್ಪ ಬದಲು ಬೋಟ್ ಮಾಡಿ ಕೋಡ್ತೀವಿ ಅಂತಾ ಹೇಳುತ್ತಾರೆ. ಇದು ನಮ್ಮ ವೃತ್ತಿಗೆ ಸರಿ ಆಗೋದಿಲ್ಲ. ಇದರಿಂದ ಭದ್ರಾವತಿಯಿಂದ ನಾಲ್ಕೈದು ಸಾವಿರ ರೂ. ಕೊಟ್ಟು ತೆಪ್ಪ ತರುತ್ತೇವೆ. ಮೂರು ಸಾವಿರ ರೂ ಕೊಟ್ಟು ಇಲ್ಲಿಯೇ ಬಲೆ ಸಿದ್ಧ ಪಡಿಸುತ್ತೇವೆ.
ಜನಾಂಗದ ಅಣ್ಣಯ್ಯ ಹೇಳುವಂತೆ: ಈ ಮೀನು ವ್ಯಾಪಾರದಲ್ಲಿ ಕೆಲವೊಂದು ಸಲ ಲಾಭ ಬಂದರೆ ಬಹಳಷ್ಟು ಸಲ ನಷ್ಟವೇ ಬಂದು ಹೋಗುತ್ತದೆ. ನೀರಿನ ಹರಿವಿನ ಅಂದಾಜು ಲೆಕ್ಕಚಾರದಲ್ಲಿ ಮೀನುಗಾರಿಕೆಗೆ ಇಳಿಯಬೇಕು. ಒಂದೊಂದು ಬಾರಿ ಎರಡು- ಮೂರು ಸಾವಿರ ಬಂದರೆ ಇನ್ನು ಕೆಲವು ಸಲ ಐನೂರು ರೂ. ಮೀನುಗಳಲ್ಲಿ ತೃಪ್ತಿ ಕಾಣಬೇಕು. ಎಲ್ಲವೂ ಮಲ್ಲಮ್ಮ ದೇವಿಯನ್ನು ನಂಬಿಕೊಂಡು ಮೀನುಗಾರಿಕೆಗೆ ಇಳಿಯುತ್ತೇವೆ. ಹತ್ತಿರದ ಮಾರುಕಟ್ಟೆಯಲ್ಲಿ ನದಿ ಮೀನುಗಳಿಗೆ ಬಾರಿ ಡಿಮ್ಯಾಂಡ್ ಇರುತ್ತದೆ. ಹೆಚ್ಚಾಗಿ ತೇಡೆ ಮೀನು, ಬೆರಕ್ಕೆ ಮೀನುಗಳೇ ಜಾಸ್ತಿ ಬಂದು ಬೀಳುತ್ತದೆ.
ತೆಪ್ಪದವರಿಗೆ ಸವಲತ್ತುಗಳು ಗಗನ ಕುಸುಮ :
ಮಳೆ, ಬಿಸಿಲು, ಚಳಿ ಈ ಮೂರು ಕಾಲದಲ್ಲೂ ಮೀನುಗಾರಿಕೆಯಂತೂ ನಿಲ್ಲಿಸೋದೇ ಇಲ್ಲ. ಎಷ್ಟೇ ಜೋರಾಗಿ ಮಳೆ ಬಂದರೂ ತೆಪ್ಪ ನದಿಗೆ ಬಿಟ್ಟು ಮೀನು ಹಿಡಿಯುತ್ತೇವೆ. ಎಲ್ಲವೂ ದೇವರ ಮೇಲೆ ಭಾರ. ಬದುಕು ಕೊಡುವವನು ಅವನು... ಬದುಕು ಕಿತ್ತುಕೊಳ್ಳೋವವನು ಅವನು...ಎನ್ನುವ ಮಾತಿನಲ್ಲೇ ನಮಗೆ ನಂಬಿಕೆ ಎನ್ನುತ್ತಾರೆ ಪಕೀರಪ್ಪ.
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಈ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಶಾಲೆಗೆ ಹೋದವರು ಬಹಳ ಕಡಿಮೆ. ಎಲ್ಲರೂ ಎರಡು- ಮೂರು ತರಗತಿಯಲ್ಲೇ ಶಾಲೆ ಬಿಟ್ಟು ಮೀನು ಹಿಡಿಯುವ ಕಸಬಿಗೆ ಅಂಟಿಕೊಂಡರು ಎನ್ನುವುದು ಕರಿಸ್ವಾಮಿಯ ಮಾತು.
ರೇಷನ್ ಕಾರ್ಡ್, ಮತದಾನದ ಹಕ್ಕು ಹೀಗೆ ಸರಕಾರದಿಂದ ಸಿಗುವ ಯಾವುದೇ ಸವಲತ್ತುಗಳು ಇವರನ್ನು ಹರಸಿಕೊಂಡು ಬಂದಿಲ್ಲ. ನಾವು ಇದ್ದೇವೆ ಎನ್ನುವುದಕ್ಕೂ ನಮ್ಮ ಬಳಿಯಲ್ಲಿ ದಾಖಲೆಗಳೇ ಇಲ್ಲ. ಆದ್ರೂ ನಾವು ಬೇಡಿಕೊಂಡು ಎಲ್ಲಿಗೂ ಹೋಗೋದಿಲ್ಲ. ನಮಗೆ ದೇವರು ದುಡಿಯಲು ಶಕ್ತಿ ಕೊಟ್ಟಿದ್ದಾನೆ. ಇದೇ ನಮಗೆ ದೊಡ್ಡ ಕೊಡುಗೆ ಎಂದು ಬಿಡುತ್ತಾರೆ ಪಕೀರಪ್ಪ.
ಟೋಟಲಿ ತೆಪ್ಪದಲ್ಲಿ ಅರಳುವ ಇವರ ಬದುಕು ಒಂದು ರೋಚಕತೆ ನಡುವೆ ನೋಡುಗರನ್ನು ಮೌನಕ್ಕೆ ಶರಣು ಹೊಡೆಯುವಂತೆ ಮಾಡಿ ಬಿಡುತ್ತದೆ. ಎಲ್ಲಕ್ಕೂ ಸರಕಾರವೇ ಮಾಡಬೇಕು ಎನ್ನುವ ಮಾತಿನಲ್ಲೇ ಬದುಕುವ ಸಮಾಜಕ್ಕೆ ಈ ಮೀನುಗಾರರು ಭಿನ್ನತೆಯ ಪಾಠ ಹೇಳಿಕೊಡುತ್ತಾರೆ.
ಸಿನಿಮಾ ಅಂದ್ರೆ ಪಂಚಪ್ರಾಣ:
ಕನ್ನಡ, ಹಿಂದಿ ಸಿನಿಮಾಗಳೆಂದರೆ ನಮ್ಮವರಿಗೆ ಪಂಚಪ್ರಾಣ. ಮನೆಯಲ್ಲಂತೂ ಟಿವಿ ಇಲ್ಲ ಎಲ್ಲವೂ ಎಫ್ಎಂಗಳಿಗೆ ಮೊರೆ ಹೋಗುತ್ತೇವೆ. ದಿನಕ್ಕೆರಡು ಬಾರಿ ನದಿಗೆ ಇಳಿದರೆ ಉಳಿದ ಸಮಯ ಎಲ್ಲವೂ ನಮಗೆ ಫ್ರಿಯಾಗಿ ಹಾಡು ಕೇಳುತ್ತಾ ಬದುಕು ದೂಡುತ್ತೇವೆ. ಪೋಸ್ಟರ್ಗಳನ್ನು ನೋಡುತ್ತಾ ಸಿನಿಮಾಗಳನ್ನು ಆಯ್ಕೆ ಮಾಡುವ ನಾವು ಶಿವರಾಜ್ ಕುಮಾರ್ ನಟಿಸಿದ ಗಡಿಬಿಡಿ ಅಳಿಯದಲ್ಲಿ ನಟಿಸಿದ್ದೇವೆ ಎನ್ನುತ್ತಾರೆ ಪಕೀರಪ್ಪ.
(vk nammkaravali published dis story on 9.06.2013)
................
No comments:
Post a Comment