Wednesday, December 21, 2011

ಗೃಹಪ್ರವೇಶ ಸೂಪರ್ರೋ ಸೂಪರ್ !




ಇಮ್ಯಾನುವೆಲ್( ಬೈಬಲ್ ಆಧಾರಿತ ಶಬ್ದ) ದೇವರು ಜತೆಗಿದ್ದಾನೆ ಎನ್ನುವ ಅರ್ಥ ನೀಡುವ ದಾರಂದಕುಕ್ಕುವಿನ ನನ್ನ ಮನೆಯ ಗೃಹಪ್ರವೇಶ ಬೊಂಬಾಟಾಗಿ ಡಿ.೧೮ರ ಭಾನುವಾರ ನಡೆದಿದೆ. ಗೃಹಪ್ರವೇಶ ದಿನ ಬಂದವರೆಲ್ಲರೂ ಗೋಡೆಯನ್ನು ನೋಡಿ ನಕ್ಕು ಹೋಗಿದ್ದಾರೆ. ಯಾಕೆ ಅಂತೀರಾ..? ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ತಮ್ಮ ಬ್ಯುಸಿ ಶೆಡ್ಯುಲ್‌ಗಳ ನಡುವೆ ದಾರಂದಕುಕ್ಕುವಿಗೆ ಬಂದು ಒಂದು ಗೋಡೆಗೆ ಮ್ಯೂರಲ್ ಆರ್ಟ್ ಮಾಡಿ ಹೋಗಿದ್ದಾರೆ.
ಈ ರೀತಿಯ ಮ್ಯೂರಲ್ ಆರ್ಟ್ ಇರುವ ಮನೆ ದ.ಕ. ಜಿಲ್ಲೆಯಲ್ಲಿ ಬಿಡಿ. ಇಡೀ ರಾಜ್ಯದಲ್ಲಿ ಸಿಗುವುದು ತೀರಾ ಅಪರೂಪ ಎನ್ನುವುದು ನನ್ನ ನಂಬಿಕೆಯಲ್ಲ ಪ್ರಕಾಶ್ ಶೆಟ್ಟರ ಮಾತು ಕೂಡ ಹೌದು. ಏನೇ ಇರಲಿ ನನ್ನ ಸಹೋದರ ಸೈನ್ಯದಿಂದ ಮನೆಗೆ ರಜೆಯಲ್ಲಿ ಓಡಿ ಬರೋದು, ತಂದೆ ಪುಟ್ಟ ಅಂಗಡಿಯಲ್ಲಿ ವ್ಯಾಪಾರ ಮಾಡಲು ಚೀಟಿ ರೆಡಿ ಮಾಡೋದು, ತಾಯಿ ಅಡುಗೆ ಮನೆಯಲ್ಲಿ ನಿರತರಾಗಿರುವುದು, ಪತ್ರಕರ್ತ ಅನ್ನಿಸಿಕೊಂಡ ನಾನು ಸೋಪಾದ ಮೇಲೆ ಕೂತು ಬರೆಯುವ ಕೆಲಸ ಈ ಮ್ಯೂರಲ್ ಆರ್ಟ್‌ನಲ್ಲಿ ನಡೆದಿದೆ. ಇಂತಹ ಮಜಬೂತಾದ ಸೀನ್ ನೋಡಬೇಕಾದರೆ ಒಂದ್ ಸಾರಿ ನನ್ನ ಮನೆಗೆ ಬಂದು ನೋಡಿ ಅನ್ನೋದು ನನ್ನ ಸಿಂಪಲ್ ರಿಕ್ವೇಸ್ಟ್ ಮಾರಾಯ್ರೆ...

Sunday, December 11, 2011

ಗೆಳೆಯರೇ ಮನೆಗೆ ಬನ್ನಿ...


ಪ್ರೀತಿಯ ಗೆಳೆಯರೇ....
ಪುತ್ತೂರಿನ ದಾರಂದಕುಕ್ಕು ಎಂಬಲ್ಲಿ ಪುಟ್ಟದಾದ ‘ಇಮ್ಯಾನುವೆಲ್’ ಎನ್ನುವ ಮನೆಯೊಂದನ್ನು ಕಟ್ಟಿದ್ದೇವೆ. ಡಿ.೧೮ರಂದು ಈ ಮನೆಯ ಗೃಹಪ್ರವೇಶ ನಡೆಯಲಿದೆ. ಅಂದು ಮಧ್ಯಾಹ್ನ ೧೨ ಗಂಟೆಗೆ ಗೃಹಪ್ರವೇಶ, ಚಿಕ್ಕದಾದ ಕಾರ‍್ಯಕ್ರಮ ಹಾಗೂ ನಂತರ ನಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ನೇಹಿತರಾದ ನೀವು ಪ್ರೀತಿಯಿಂದ ಮನೆಗೆ ಬನ್ನಿ. ನಮ್ಮ ಸಂತೋಷದ ಕ್ಷಣಗಳಲ್ಲಿ ಒಂದು ಭಾಗವಾಗಿ ಎನ್ನುವುದು ನನ್ನ ವಿನಂತಿ.
ನಿಮ್ಮವ
ಸ್ಟೀವನ್ ರೇಗೊ, ದಾರಂದಕುಕ್ಕು

ದಾರಿ ಯಾವುದಯ್ಯಾ:
ಮಂಗಳೂರಿನಿಂದ ಬರುವ ಗೆಳೆಯರು ಪುತ್ತೂರು ಬಸ್‌ನಲ್ಲಿ ಬಂದು ಬೊಳ್ವಾರ್‌ನಲ್ಲಿ ಇಳಿದು ನಂತರ ಉಪ್ಪಿನಂಗಡಿ ಕಡೆ ಹೋಗುವ ಬಸ್ ಹಿಡಿದರೆ ಕೆಮ್ಮಾಯಿ ನಂತರ ಹಾಗೂ ಸೇಡಿಯಾಪು ಮೊದಲು ಸಿಗುವ ಊರು ದಾರಂದಕುಕ್ಕು.
ಮತ್ತೊಂದು ರಸ್ತೆ: ಮಂಗಳೂರಿನಿಂದ ಉಪ್ಪಿನಂಗಡಿಯ ಮೂಲಕ ಬರುವವರು ಪುತ್ತೂರು ಬಸ್ ಹಿಡಿದರೆ ಸೇಡಿಯಾಪುವಿನ ನಂತರದ ಸ್ಟೇಜ್‌ನಲ್ಲಿ ದಾರಂದಕುಕ್ಕು ಕಾಣ ಸಿಗುತ್ತದೆ. ಸ್ವಂತ ವೆಹಿಕಲ್ ಇದ್ದವರು ಮಾಣಿಯಿಂದ ಪೆರ್ನೆಯ ಮೂಲಕ ಸೇಡಿಯಾಪು ಆಗಿ ದಾರಂದಕುಕ್ಕು ಮನೆಗೆ ಬರಬಹುದು.
ದಾರಿಯೇ ಕಾಣದಾದರೆ: ಮೇಲಿನ ರಸ್ತೆಯಲ್ಲಿ ಬರುವಾಗಯಾವುದೇ ಗೊಂದಲಗಳು ಬಂದರೆ ದಯವಿಟ್ಟು ಈ ಸಂಖ್ಯೆಗೆ ಕರೆ ಮಾಡಿ: ೯೯೬೪೦೨೫೯೨೪
ಪ್ರೀತಿಯನ್ನು ಇಟ್ಟುಕೊಂಡು ಬನ್ನಿ

Thursday, December 8, 2011

ಮಾದಕ ಲೋಕದಲ್ಲಿ ಮಕ್ಕಳ ಸೇನೆ !


ಎಳೆವೆಯಲ್ಲೇ ಮಾದಕ ಲೋಕದೊಳಗೆ ಹೊಕ್ಕು, ಅಲ್ಲೇ ಸ್ವಚ್ಛಂದತೆಯನ್ನು ಬಯಸುವ ಮಕ್ಕಳಿಗೆ ಸರಿ ದಾರಿ ತೋರುವ, ಅರಿವು ಮೂಡಿಸುವ ಕೆಲಸ ಕಾರ್ಯ ಜರೂರಾಗಬೇಕಲ್ಲವೇ?.

ಎಥನಾಲ್, ಕೋಡಿನ್, ಬೆನ್‌ಡ್ರಿಲ್ ಹೀಗೆ ನಾನಾ ಬ್ರಾಂಡ್‌ಗಳ ಹೆಸರು ೧೦ ವರ್ಷದ ಕೋಲ್ಕೊತಾ ಮೂಲದ ಬಾಬುಲ್‌ನಿಗೆ ಗೊತ್ತು. ಹಾಗೆಯೇ ಅವನ ಜತೆಯಲ್ಲಿ ಗುಜರಿ ಹೆಕ್ಕಿ ದಿನನಿತ್ಯ ಇಂತಹ ಬ್ರಾಂಡ್ ಐಟಂಗಳ ಹಿಂದೆ ಬೀಳುವ ಪಿಂಕಿ, ಟಾಕಿ, ಮೋನಿ, ಬಲ್ಲು ಎಲ್ಲರಿಗೂ ಗೊತ್ತು. ಎಲ್ಲರೂ ೧೦ ರಿಂದ ೧೫ರ ಆಸುಪಾಸಿನ ಎಳೆಯರು. ಗುಜರಿ ಹೆಕ್ಕಿ ಬಂದ ಆದಾಯದಲ್ಲಿ ಹೆತ್ತವರಿಗೆ ಸ್ವಲ್ಪ ಕೊಟ್ಟು ಉಳಿದ ಹಣವನ್ನು ತಿಂಡಿ-ತಿನಿಸುಗಳಿಗೆ ಸುರಿಯುತ್ತಾರೆ ಎನ್ನುವ ಭ್ರಮೆ ಇಟ್ಟುಕೊಂಡರೆ ಅದು ಸಂಪೂರ್ಣ ತಪ್ಪು. ಎಲ್ಲರೂ ತಂದು ಹಾಕುವುದು ಇದೇ ಐಟಂಗಳ ಮೇಲಂತೆ !
ಎಳೆಯ ವಯಸ್ಸಿನಲ್ಲಿ ಇಂತಹ ಬ್ರಾಂಡ್ ನೇಮ್‌ಗಳು ಯಾಕೆ ಬೇಕಾಗುತ್ತದೆ..? ಎನ್ನುವ ಪ್ರಶ್ನೆ ಎದುರಾದರೇ ಇದಕ್ಕೆ ಉತ್ತರ ಇಲ್ಲಿದೆ. ಪುಟ್ಟ ಪುಟ್ಟ ತೇವ ಕಣ್ಣುಗಳಲ್ಲಿ ಭರ್ತಿಯಾಗಿ ಕನಸು ಕಾಣುವ ಎಳೆಯ ಗೆಳೆಯರು ಈ ಐಟಂಗಳಲ್ಲಿ ಒಂದನ್ನಾದರೂ ತೆಗೆಯದೇ ಹೋದರೆ ರಾತ್ರಿ ನಿದ್ದೆ ಮಾಡೋದಿಲ್ಲ. ರಾತ್ರಿಯೆಲ್ಲ ಚಾಪೆ ತುಂಬಾ ಒದ್ದಾಡುತ್ತಾರೆ. ಅಂತೂ ಇಂತೂ ನಿದ್ರೆ ಬಂದರೂ ಕನವರಿಕೆಯಲ್ಲೂ ಚಡಪಡಿಸುತ್ತಾರೆ ಎನ್ನುವುದು ಬಾಬುಲ್, ಪಿಂಕಿಯ ತಂದೆ ಮೋಹನ್ ದಾಸ್‌ರ ಮಾತು. ವೃತ್ತಿಯಲ್ಲಿ ಡೋಲು ವಾದ್ಯ ತಯಾರಿಸಿಕೊಂಡು ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣ ಹತ್ತಿರದ ಬೀದಿಯಲ್ಲಿ ಕಾಣಸಿಗುತ್ತಾರೆ. ಹೆಚ್ಚು ಹೊತ್ತು ಬೀದಿಯಲ್ಲಿ ಕಂಡರೂ ಹಂಪನಕಟ್ಟೆಯ ಹತ್ತಿರ ಇರುವ ಬಾರ್‌ಗಳಲ್ಲಿ ಇವರಿಗೆ ಅಕೌಂಟ್ ಇದೆ.
ಎಳೆಯರ ಕಾರುಬಾರು:
ಬಾಬುಲ್, ಪಿಂಕಿ, ಟಾಕಿ, ಮೋನಿ, ಬಲ್ಲು ಎಲ್ಲರೂ ಗೆಳೆಯರು. ಬೆಳಗ್ಗೆ ೮ ಗಂಟೆಗೆ ಗುಜರಿ ಹೆಕ್ಕಲು ಹೊರಡುವ ಮೂಲಕ ಇವರ ದಿನಚರಿ ಆರಂಭವಾಗುತ್ತದೆ. ಮನಪಾದ ಕಸದ ತೊಟ್ಟಿಯಿಂದ ಹಿಡಿದು ಬೀದಿ ಬದಿಯಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ಲಕೋಟೆ, ಕಬ್ಬಿಣ ವಸ್ತುಗಳನ್ನು ಹೆಕ್ಕಿಕೊಂಡು ಸಂಜೆ ನಾಲ್ಕರ ಹೊತ್ತಿಗೆ ಬಂದರಿನಲ್ಲಿರುವ ಗುಜರಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.
ವಾರದಲ್ಲಿ ಮೂರು ದಿನ ಇವರು ಗುಜರಿ ಹೆಕ್ಕಲು ಹೋದರೆ ಉಳಿದ ನಾಲ್ಕು ದಿನ ಇವರು ಡೋಲು, ಕೊಳಲು, ಬಲೂನ್‌ಗಳನ್ನು ಮಾರಾಟ ಮಾಡುವ ದಂಧೆಗೆ ಇಳಿಯುತ್ತಾರೆ. ಸಂಜೆ ಹೊತ್ತಿಗೆ ತಮ್ಮ ಹೆತ್ತವರಿಗೆ ಸ್ವಲ್ಪ ಹಣ ಕೊಟ್ಟರೆ ಸಾಕು. ಉಳಿದ ಹಣವನ್ನು ಈ ಮಾರಕ ಮಾದಕ ವ್ಯಸನಗಳಿಗೆ ತಂದು ಸುರಿಯುತ್ತಾರೆ. ಮಂಗಳೂರಿನ ನೆಹರೂ ಮೈದಾನದ ಅಕ್ಕಪಕ್ಕದಲ್ಲಿರುವ ಮರದಡಿಯಲ್ಲಿ, ಇನ್ನೂ ಕೆಲವು ಸಮಯ ಕಾರ್ಪೊರೇಶನ್ ಪಾರ್ಕ್‌ನ ಹಾಸು ಬೆಂಚು, ಪಿವಿಎಸ್ ಹತ್ತಿರದ ಪಾಳುಬಿದ್ದ ಕಟ್ಟಡದಲ್ಲಿ ಇವರ ಮಾದಕ ವ್ಯಸ್ಯನ ಪ್ರತಿನಿತ್ಯ ನಡೆಯುತ್ತಿರುತ್ತದೆ.
ಇಂತಹ ಮಕ್ಕಳು ಅಲೆಮಾರಿ ಸಮುದಾಯಕ್ಕೆ ಸೇರಿರುವ ಕಾರಣ ಒಂದೇ ಕಡೆ ನೆಲೆ ನಿಲ್ಲುವ ಪ್ರಶ್ನೆಯೇ ಇರುವುದಿಲ್ಲ. ಅವರನ್ನು ಹುಡುಕಾಡಿಕೊಂಡು ಸರಿ ದಾರಿಗೆ ತರುವ ಕೆಲಸವನ್ನು ಸ್ವಲ್ಪ ಮಟ್ಟಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಬಹುದು. ಆದರೆ ಅವರಿಗೆ ಈ ಮಕ್ಕಳ ಕುರಿತು ಸ್ವಷ್ಟವಾದ ಮಾಹಿತಿ ಇರುವುದಿಲ್ಲ ಎನ್ನುತ್ತಾರೆ ಮಂಗಳೂರಿನ ಸಾಮಾಜಿಕ ಕಾರ‍್ಯಕರ್ತ ನರೇಶ್.
ಹೆತ್ತವರಿಗೂ ಮಕ್ಕಳ ಚಟುವಟಿಕೆ ಮೇಲೆ ತೀವ್ರ ನಿಗಾ ಇಡಲು ಸಮಯವಿಲ್ಲ. ಜತೆಗೆ ಬೇಕಾಗೂ ಇಲ್ಲ. ಇಂತಹ ವ್ಯವಸ್ಥೆಯಲ್ಲಿ ಮಕ್ಕಳು ತಮಗೆ ಅರಿವಿಲ್ಲದ ಚಟಗಳಿಗೆ ಬಿದ್ದು ತಮ್ಮ ಭವಿಷ್ಯವನ್ನು ಕತ್ತಲೆಗೆ ದೂಡುವ ಸಾಧ್ಯತೆಗಳೇ ಹೆಚ್ಚು. ಮಕ್ಕಳು ಈ ವಿಚಾರಗಳನ್ನು ನೇರವಾಗಿ ಯಾರಲ್ಲೂ ಚರ್ಚಿಸಲು ಹೋಗುವುದಿಲ್ಲ. ತಮ್ಮ ಪಾಲಿಗೆ ತಾವೇ ಇಂತಹ ತಪ್ಪು ದಾರಿಯನ್ನು ಹಾದುಕೊಂಡು ಹೋಗುವಾಗ ಎಚ್ಚರಿಸುವ ಹೊಣೆಗಾರಿಕೆ ಹೆತ್ತವರಿಗೆ ಇದ್ದೇ ಇದೆ ಎನ್ನುತ್ತಾರೆ ಮಂಗಳೂರಿನ ಮಕ್ಕಳ ವೈದ್ಯ ಡಾ. ಸತೀಶ್ ಕುಮಾರ್.
ಮಾದಕ ಮೋಹಕ:
ಎಥನಾಲ್ ಸ್ಪಿರಿಟ್, ಕೋಡಿನ್, ಬೆನ್‌ಡ್ರೀಲ್, ಪ್ರಿಂಟ್ ಸಲ್ಯೂಷನ್, ನೈಟ್ರೋಪೆಟ್, ಒಪಿಯೋಡೋಸ್, ಡೇಝೀಪಾಮ್, ಅಲ್‌ಪ್ರೋಜೋಲಮ್ ಎಲ್ಲವೂ ವೈದ್ಯರ ಶಿಪಾರಸು ಇಲ್ಲದೆ ಔಷಧ ಅಂಗಡಿಯಲ್ಲಿ ಲಭ್ಯವಾಗುವ ಔಷಧಗಳು. ೨ ರೂಪಾಯಿಯಿಂದ ಹಿಡಿದು ೪೦ ರೂ.ವರೆಗೆ ಮಾರುಕಟ್ಟೆಯಲ್ಲಿ ಸುಲಭದಲ್ಲಿ ಸಿಗುತ್ತದೆ. ಮಾದಕತೆಯನ್ನು ಜಾಗೃತ ಮಾಡಲು ಇವು ಬಲು ಪರಿಣಾಮಕಾರಿ ಔಷಧಗಳು.
ಎಥನಾಲ್ ಸ್ಪಿರಿಟ್ ಉಗುರು ಸ್ವಚ್ಪ ಮಾಡಲು ಬಳಸುವ ವಸ್ತು. ಔಷಧದ ಮಾರುಕಟ್ಟೆಯಲ್ಲಿ ೧೦೦ ಎಂಎಲ್‌ನಿಂದ ಹಿಡಿದು ೪೦೦ ಎಂಎಲ್‌ವರೆಗೆ ಬಾಟಲ್‌ನಲ್ಲಿ ಸಿಗುತ್ತದೆ. ಇದನ್ನು ಹೆಚ್ಚಾಗಿ ಆಘ್ರಾಣಿಸುವ ಮೂಲಕ ಮಾದಕತೆಯನ್ನು ಮಕ್ಕಳು ಬೆಳೆಸುತ್ತಾರೆ. ಕೆಲವೊಂದು ಸಲ ಕಿಕ್ ಕಡಿಮೆಯಾಗುತ್ತದೆ ಎಂದಾದರೆ ಅದನ್ನು ಕುಡಿಯುವ ದುಸ್ಸಾಹಸಕ್ಕೂ ಕೈ ಹಾಕುತ್ತಾರೆ.
ಕೋಡಿನ್, ಬೆನ್‌ಡ್ರೀಲ್ ಎಲ್ಲವೂ ಕಾಫ್ ಸಿರಪ್‌ಗಳ ಸಾಲಿನಲ್ಲಿ ಸೇರುವ ಔಷಧದ ಹೆಸರುಗಳು. ಇದರಲ್ಲೂ ಮಾದಕತೆ ಅಡಕವಾಗಿರುತ್ತದೆ. ೫೦-೧೦೦ ಎಂಎಲ್ ಮಾದರಿಯಲ್ಲಿ ದೊರೆಯುವ ಈ ಔಷಧ ೩೦ ರೂ.ನಿಂದ ೫೦ ರೂ. ರೇಜ್‌ನಲ್ಲಿ ಮೆಡಿಕಲ್‌ನಲ್ಲಿ ಲಭ್ಯವಾಗುತ್ತದೆ. ಈ ಔಷಧಗಳನ್ನು ಮಿತಿಮೀರಿ ಸೇವಿಸಿದರೆ ಮಕ್ಕಳಲ್ಲಿ ನರಕ್ಕೆ ಸಂಬಂಸಿದ ಕಾಯಿಲೆಗಳು, ನಿದ್ರಾಹೀನತೆ, ಕರುಳು ಸಂಬಂತ ಕಾಯಿಲೆಗಳು, ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಗಳು ದಟ್ಟವಾಗಿರುತ್ತದೆ.
ಪ್ರಿಂಟ್ ಸಲ್ಯೂಷನ್, ನೈಟ್ರೋಪೆಟ್, ಒಪಿಯೋಡೋಸ್, ಡೇಝೀಪಾಮ್, ಅಲ್‌ಪ್ರೋಜೋಲಮ್ ಔಷಧಗಳನ್ನು ನೋವು ನಿವಾರಕ, ಒತ್ತಡ ನಿವಾರಣೆ, ಫಿಟ್ಸ್ ಸಂಬಂದಿತ ಕಾಯಿಲೆಗಳಿಗೆ ವೈದ್ಯರು ನೀಡುವ ಔಷಧಗಳು. ಆದರೆ ಇದನ್ನು ಕಾಯಿಲೆ ಇಲ್ಲದ ಮಕ್ಕಳು ಸೇವಿಸಲು ಆರಂಭ ಮಾಡಿದರೆ ಅವರ ದೇಹದ ಕಾರ‍್ಯಾಚರಣೆಯಲ್ಲಿ ತೊಡಕು ಕಾಣಿಸಿಕೊಳ್ಳುತ್ತದೆ. ಕೆಲವೊಂದು ಸಲ ಬೇಗನೆ ಪ್ರಾಯಪ್ರಬುದ್ಧತೆಯಾಗು ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯ ನಿರಂಜನ್.
ವಲಸೆ ಸಮುದಾಯದ ಈ ಮಕ್ಕಳಂತೆ ಎಷ್ಟೋ ಮಂದಿ ಮಕ್ಕಳು ಯಾರಿಗೂ ಗೊತ್ತಿಲ್ಲದೆ ಇಂತಹ ವ್ಯಸನಗಳಿಗೆ ಗುರಿಯಾಗಿರುವ ಸಾಧ್ಯತೆಗಳಂತೂ ನಗರದಲ್ಲಿ ಇದ್ದೇ ಇದೆ. ಸಮಾಜದ ಒಳಿತು-ಕೆಡುಕಿನ ಕಲ್ಪನೆಯೂ ಇಲ್ಲದೆ ಬೆಳೆವ ಈ ಎಳೆಯರಿಗೆ ತಮ್ಮ ತಪ್ಪು ದಾರಿಯನ್ನು ಸರಿಪಡಿಸಿಕೊಳ್ಳುವ ಅವಕಾಶವೊಂದನ್ನು ಕಲ್ಪಿಸಲು ನೆರವಾಗುವುದು ಎಲ್ಲರ ಕರ್ತವ್ಯ. ಇಂತಹ ಮಕ್ಕಳ ಹೆತ್ತವರು, ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಜಾಗೃತವಾಗುವ ಅಗತ್ಯವಂತೂ ಇದೆ.

ನನ್ನ ಪತ್ರಿಕೆ ನನ್ನ ಬರಹ-42



(vk daily nk puravani published dis article on 9.12.2011)

Thursday, December 1, 2011

ಬಿ-ಟೌನ್‌ನಲ್ಲಿ ಚಿಂಗಾರಿ ! ಸನ್ನಿ ಸಮೂಹ


ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ಟರ ಕ್ಯಾಂಪ್‌ನಲ್ಲಿ ಹೊಸ ಹುಡುಗಿಯೊಬ್ಬಳು ಮೈ‘ದಾನ’ ಮಾಡಲು ಸಿದ್ಧವಾಗಿ ನಿಂತಿದ್ದಾಳೆ. ಪ್ರಸಿದ್ಧ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಬಿ- ಟೌನ್‌ನಲ್ಲಿ ಮಿಂಚು ಹರಿಸಲು ಬರುತ್ತಿದ್ದಾಳೆ. ಓವರ್ ಟೂ ಸನ್ನಿ....

ಸನ್ನಿ ಲಿಯೋನ್. ಈ ಹೆಸರನ್ನು ಕಾಮನ್ ಮದಿರೆಗೆ ಹೋಲಿಸಿ ನೋಡಿದರೆ ನಶೆ ಇಳಿಯುವುದು ಖಾತ್ರಿ. ಪಡ್ಡೆಗಳ ಪಾಲಿಗಂತೂ ಸನ್ನಿ ಥೇಟ್ ಟಕೀಲಾದಂತಹ ಹಾಟ್ ಡ್ರಿಂಕ್. ಟೋಟಲಿ ಸನ್ನಿ ಲಿಯೋನ್ ಸೀನಿಯರ್ ಸಿಟಿಜನ್‌ನಿಂದ ಹಿಡಿದು ಪಡ್ಡೆ ಹುಡುಗರವರೆಗೂ ಮೈಯಲ್ಲಿ ಬೆಂಕಿ ಹತ್ತಿಸಿ ಬಿಡುವ ಚಿಂಗಾರಿ ಹುಡುಗಿ ! ಇಷ್ಟೆಲ್ಲ ಮಾತುಗಳ ನಡುವೆನೂ ಸನ್ನಿಯ ಇಮೇಜ್ ಕಣ್ಣ ಮುಂದೆ ಬಂದು ನಿಲ್ಲೋದಿಲ್ಲ. ಶಾರ್ಟ್ ಕಟ್ ಅನ್ಸರ್‌ನಲ್ಲಿ ಹೇಳಿ ಬಿಡೋದಾದರೆ ಸನ್ನಿ ನೀಲಿ ಚಿತ್ರಗಳ ರಾಣಿ.
ಸನ್ನಿ ಲಿಯೋನ್‌ಳ ನೀಲಿ ಚಿತ್ರಗಳು ಈಗಲೂ ಟಾಪ್ ರೇಟಿಂಗ್ ಪಟ್ಟಿಯಲ್ಲಿ ಬಂದು ನಿಲ್ಲುತ್ತದೆ. ಸನ್ನಿಯ ದೇಹ ದಂಡನೆಯ ಚಿತ್ರಗಳು ಪಡ್ಡೆ ಹೈಕಳ ಮೊಬೈಲ್‌ನಲ್ಲಿ ಈಗಲೂ ಜೋಪಾನವಾಗಿ ಕೂತು ಬಿಟ್ಟಿವೆ. ಸನ್ನಿ ಎಂದರೆ ಟೋಟಲಿ ಬೆಂಕಿ. ತಾನು ಉರಿದು ಉಳಿದರವಲ್ಲೂ ಬಿಸಿ ಹುಟ್ಟಿಸಿಬಿಡುವ ಸೌಂದರ್ಯವಂತೆ. ಇಂತಹ ಸನ್ನಿ ಲಿಯೋನ್ ಖಾಸಗಿ ಚಾನೆಲ್‌ನ ರಿಯಾಲಿಟಿ ಶೋವಿನಲ್ಲಿ ಸ್ಪರ್ದಿಸುತ್ತಿದ್ದಾಳೆ ಎಂದು ಗೊತ್ತಾದಾಗ ರಿಯಾಲಿಟಿ ಶೋವಿನ ಟಿಆರ್‌ಪಿ ರೇಟ್ ಏಕ್‌ದಂ ಏರಿಕೆ ಕಂಡಿತ್ತು.
ನಡುರಾತ್ರಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋವಿನಲ್ಲಿ ಬರೀ ಸನ್ನಿಯ ಮಜಬೂತ್ ದೃಶ್ಯಗಳೇ ಹೆಚ್ಚಾಗಿದೆ ಎಂದುಕೊಂಡು ಸೀನಿಯರ್ ಸಿಟಿಜನ್ ರಾತ್ರಿ ಟಿವಿ ನೋಡುವ ಚಾಳಿ ಬೆಳೆಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ಹೊರ ಬಂದಿತ್ತು. ಇಂತಹ ಸನ್ನಿ ಲಿಯೋನ್ ಸಿನ್ಮಾಕ್ಕೆ ಬಂದು ನಿಂತರೆ ಹೇಗೆ ಮಾರಾಯ್ರೆ ಎಂದುಕೊಳ್ಳುವಷ್ಟರಲ್ಲಿಯೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಸನ್ನಿಗೆ ಕಾಳು ಹಾಕಿದ್ದಾರೆ. ತಮ್ಮ ಮುಂದಿನ ಚಿತ್ರ ‘ಜಿಸ್ಮ್-೨’ಗಾಗಿ ಸನ್ನಿಯನ್ನು ಕರೆ ತರುವ ಮಾತುಗಳು ಭರ್ಜರಿಯಾಗಿ ನಡೆಯುತ್ತಿದೆ.
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಬಾಲಿವುಡ್ ಸಿನ್ಮಾ ನಗರಿಗೆ ಹೊಸ ಹುಡುಗಿಯರನ್ನು ಕರೆ ತರುವುದರಲ್ಲಿ ಮುಂಚೂಣಿಯಲ್ಲಿರುವ ನಿರ್ದೇಶಕ. ಈ ಹಿಂದೆ ಮರ್ಡರ್‌ಗಾಗಿ ಮಲ್ಲಿಕಾ ಶೆರವಾತ್ ಎನ್ನುವ ಐಟಂ ಬಾಲೆಯನ್ನು ಕರೆ ತಂದಿದ್ದರು. ಅದೇ ಮರ್ಡರ್-೨ ಚಿತ್ರಕ್ಕಾಗಿ ಶ್ರೀಲಂಕಾದ ಹುಡುಗಿ ಜಾಕ್ವೆಲಿನ್ ಪೆರ್ನಾಂಡೀಸ್‌ರನ್ನು ಕರೆ ತಂದಿದ್ದರು. ಅದೇ ‘ಜಿಸ್ಮ್ ’ಚಿತ್ರಕ್ಕೆ ಬಿಪಾಶಾ ಬಸು ಅವರನ್ನು ಕರೆ ತಂದಿದ್ದ ಮಹೇಶ್ ಭಟ್ ‘ಜಿಸ್ಮ್-೨’ಗೆ ಸನ್ನಿ ಲಿಯೋನ್‌ರನ್ನು ಕರೆ ತರುವ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ಮಹೇಶ್ ಭಟ್ ಹೊಸ ಪೀಳಿಗೆಯ ಹುಡುಗಿಯರ ಹುಡುಕಾಡ ಇನ್ನೂ ಕೂಡ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳನ್ನು ಜೀವಂತ ಇರಿಸಿಕೊಂಡಿದ್ದಾರೆ.
ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಹಂಬಲ ಇಟ್ಟುಕೊಂಡಿರುವ ಸನ್ನಿ ಲಿಯೋನ್‌ರನ್ನು ಕರೆ ತರುವ ಪ್ರಯತ್ನ ಈ ಮೊದಲು ಮಹೇಶ್ ಭಟ್ ಮಾಡಿದ್ದರು. ೨೦೦೫ರಲ್ಲಿ ಬಾಲಿವುಡ್‌ನಲ್ಲಿ ಬಂದ ‘ಕಲಿಯುಗ್’ ಚಿತ್ರಕ್ಕಾಗಿ ಸನ್ನಿ ಲಿಯೋನ್ ಜತೆ ಮಾತುಕತೆ ನಡೆದಿತ್ತು. ಆದರೆ ಡೇಟ್ಸ್‌ಗಳ ಕೊರತೆಯಿಂದ ಸನ್ನಿ ಲಿಯೋನ್ ಈ ಚಿತ್ರವನ್ನು ತಿರಸ್ಕರಿಸಿದ್ದರು. ಆದರೆ ೬ ವರ್ಷಗಳ ನಂತರ ಇದೇ ಮಹೇಶ್ ಭಟ್ ಸನ್ನಿ ಲಿಯೋನ್‌ರನ್ನು ಕರೆ ತರುವ ಪ್ರಯತ್ನದಲ್ಲಿ ಜಯಕಂಡಿದ್ದಾರೆ.
ಸನ್ನಿಯನ್ನು ಬರೀ ದೇಹಸಿರಿಗಾಗಿ ‘ಜಿಸ್ಮ್-೨’ಗಾಗಿ ಆಯ್ಕೆ ಮಾಡುತ್ತಿಲ್ಲ. ಸನ್ನಿಯ ಐಕ್ಯೂ ಬಹಳ ಚೆನ್ನಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಇಂತಹ ನಾಯಕಿಯರು ಇಂದಿನ ಬಾಲಿವುಡ್ ಸಿನ್ಮಾಗಳಿಗೆ ಅವಶ್ಯಕವಾಗಿ ಬೇಕಾಗಿದೆ ಎನ್ನೋದು ನಿರ್ದೇಶಕ ಮಹೇಶ್ ಭಟ್ಟರ ಮಾತು. ಅಂದಹಾಗೆ ‘ಜಿಸ್ಮ್-೨’ನಲ್ಲಿ ನಾಯಕನಾಗಿ ಮಹೇಶ್ ಭಟ್ಟರ ಪುತ್ರ ರಾಹುಲ್ ಭಟ್ ಅಭಿನಯಿಸುವ ಸುದ್ದಿಯಿತ್ತು. ಆದರೆ ನಿರ್ದೇಶಕರು ಹೇಳುವಂತೆ ಈ ಬಾರಿ ರಾಹುಲ್‌ನನ್ನು ಚಿತ್ರರಂಗಕ್ಕೆ ಇಳಿಸುತ್ತಿಲ್ಲ. ಹೊಸ ನಾಯಕನ ಹುಡುಕಾಟ ಆರಂಭ ಮಾಡಿದ್ದಾರಂತೆ. ಟೋಟಲಿ ‘ಜಿಸ್ಮ್-೨’ ಸಿನ್ಮಾ ನಿರ್ಮಾಣವಾಗುವ ಮೊದಲೇ ಸನ್ನಿ ಲಿಯೋನ್ ಬೆಂಕಿ ಹತ್ತಿಸಿದ್ದು ನಿಜ. ‘ಜಿಸ್ಮ್-೨’ಬಂದ ನಂತರವೇ ಈ ಬೆಂಕಿ ನಂದೀತು ಅಂತಾ ಕಾಣಿಸುತ್ತೆ ಅಲ್ವಾ..?