Sunday, November 30, 2025

ಸಿಬಿಎಸ್‌ಇ ಶಾಲೆಗಳಲ್ಲಿ `ಶುಗರ್' ಕಂಟ್ರೋಲ್

* ದಕದ 62 ಶಾಲೆಗಳಲ್ಲಿಯೂ ವಿಶೇಷ ಕರ‍್ಯಕ್ರಮ * ರಾಜ್ಯ ಪಠ್ಯಕ್ರಮದ ಶಾಲೆಗಳಿಗೂ ಅನ್ವಯಕ್ಕೆ ಅಗ್ರಹ * ಸ್ಟೀವನ್ ರೇಗೊ ಮಂಗಳೂರು ಈ ಶೈಕ್ಷಣಿಕ ವರ್ಷದಲ್ಲಿ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ದೇಶಾದ್ಯಂತದ ಎಲ್ಲ ತನ್ನ ಅಧೀನದಲ್ಲಿರುವ ಶಾಲೆಗಳಿಗೆ ಸಕ್ಕರೆ ಮಂಡಳಿ(ಶುಗರ್ ಬೋರ್ಡ್)ಗಳನ್ನು ಸ್ಥಾಪಿಸಲು ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 62 ಸಿಬಿಎಸ್‌ಇ ಶಾಲೆಗಳಲ್ಲಿರುವ 10 ಸಾವಿರದಷ್ಟು ವಿದ್ಯಾರ್ಥಿಗಳು ತಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡುವ ಉಪಕ್ರಮಗಳಿಗೆ ಮುಂದಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಸಕ್ಕರೆ ಸೇವನೆಯ ಬಗ್ಗೆ ಜÁಗೃತಿ ಮೂಡಿಸುವುದು, ಶಾಲಾ ಕ್ಯಾಂಟೀನ್‌ಗಳಿAದ ತಂಪು ಪಾನೀಯಗಳು ಮತ್ತು ಸಿಹಿತಿಂಡಿಗಳನ್ನು ತೆಗೆದುಹಾಕುವುದು ಮತ್ತು ಪ್ಯಾಕ್ ಮಾಡಿದ ಆಹಾರಗಳಲ್ಲಿ ಅಡಗಿರುವ ಸಕ್ಕರೆಗಳ ಬಗ್ಗೆ ಜÁಗೃತಿ ಮೂಡಿಸಲು ಕರ‍್ಯಕ್ರಮಗಳನ್ನು ನಡೆಸುವ ನಾನಾ ಹಂತದ ಕರ‍್ಯಕ್ರಮಗಳು ಶಾಲೆಯಲ್ಲಿ ಮಾಡುವುದು ಅನಿವಾರ್ಯವಾಗಿದೆ. ಬೊಜ್ಜುö, ಮಧುಮೇಹ, ದಂತಕ್ಷಯ ಹೆಚ್ಚಳ: ವಿದ್ಯಾರ್ಥಿಗಳು ಹೆಚ್ಚಾಗಿ ಜಂಕ್‌ಫುಡ್ ಸೇರಿದಂತೆ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿರುವ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದುö, ಇದಕ್ಕೆ ಪೂರಕವಾಗಿ ಅವರು ಕ್ರೀಡಾ ಚಟುವಟಿಕೆಯ ಬದಲು ಇತರ ಮೊಬೈಲ್, ಟಿವಿ ವೀಕ್ಷಣೆಯಲ್ಲಿ ಜಾಸ್ತಿ ಹೊತ್ತು ಕಳೆಯುವುದರಿಂದ ಅವರಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರ ಜತೆಗೆ ವಿದ್ಯಾರ್ಥಿಗಳಲ್ಲಿ ಮಧುಮೇಹ ಪ್ರಮಾಣ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚುತ್ತಿರುವುದನ್ನು ಗಮನಿಸಿ ಕೇಂದ್ರದ ಸಿಬಿಎಸ್‌ಇ ಇಂತಹ ದಿಟ್ಟ ನಿರ್ಧಾರಕ್ಕೆ ಇಳಿದು ಬಿಟ್ಟಿದೆ. ಸಕ್ಕರೆ ಮಂಡಳಿಯನ್ನು ಪ್ರತಿ ಶಾಲೆಯಲ್ಲಿ ಆರಂಭಿಸುವ ಮೂಲಕ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುವ ಮಹತ್ತರ ಕರ‍್ಯ ಸಾಗುತ್ತಿದೆ. ಸಿಬಿಎಸ್‌ಇ ಶಾಲೆಗಳಲ್ಲಿ ಸಕ್ಕರೆ ಮಂಡಳಿ ಎಂಬುದು ಅಧಿಕ ಸಕ್ಕರೆ ಸೇವನೆಯ ಅಪಾಯಗಳ ಬಗ್ಗೆ ಜÁಗೃತಿ ಮೂಡಿಸಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ಆದೇಶಿಸಿದ ಆರೋಗ್ಯ ಉಪಕ್ರಮವಾಗಿದೆ. ಈ ಮಂಡಳಿಗಳು ತಂಪು ಪಾನೀಯಗಳು ಮತ್ತು ತಿಂಡಿಗಳಲ್ಲಿ ಸಕ್ಕರೆ ಅಂಶವನ್ನು ಪ್ರದರ್ಶಿಸುವ ಹಾಗೂ ಆರೋಗ್ಯಕರ ಆಹಾರ ಆಯ್ಕೆಗಳನ್ನು ಉತ್ತೇಜಿಸುವ ಮೂಲಕ ಮತ್ತು ಮಧುಮೇಹ, ಬೊಜ್ಜು ಮತ್ತು ದಂತಕ್ಷಯದAತಹ ಹೆಚ್ಚಿನ ಸಕ್ಕರೆ ಸೇವನೆಗೆ ಸಂಬAಧಿಸಿದ ಆರೋಗ್ಯ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ನೀಡುತ್ತಿದೆ.
ಸಿಹಿತಿಂಡಿಗಳಿಗೆ ಕಿಕ್ ಔಟ್: ಕೊಡಿಯಾಲ್‌ಬೈಲ್‌ನ ಸಂತ ಅಲೋಶಿಯಸ್ ಗೊನ್ಜಾಗಾ ಶಾಲೆಯ ಪ್ರಿನ್ಸಿಪಾಲ್ ಫಾ. ರೋಹನ್ ಡಿ'ಅಲ್ಮೇಡಾ ಅವರು ಹೇಳುವಂತೆ ವಿದ್ಯಾರ್ಥಿಗಳು ಹೆಚ್ಚುವರಿ ಸಕ್ಕರೆ ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಮಧುಮೇಹ ಆರೈಕೆಯಲ್ಲಿ ಪರಿಣತಿ ಹೊಂದಿರುವ ವೈದ್ಯರನ್ನು ಆಹ್ವಾನಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಕ್ಕಳ ತೂಕದ ಪರಿಶೀಲನೆ ಮತ್ತು ಅವರಿಗೆ ಆರೋಗ್ಯ ಕ್ರಮಗಳನ್ನು ಸೂಚಿಸುವ ಕೆಲಸ ಮಾಡಲಾಗುತ್ತಿದ್ದುö, ಶಾಲಾ ಕ್ಯಾಂಟೀನ್‌ನಿAದ ಸಕ್ಕರೆಯ ತಿಂಡಿ, ಚಾಕಲೇಟ್ ಟೆಟ್ರಾ ಪ್ಯಾಕ್‌ನ ತಂಪು ಪಾನೀಯಗಳನ್ನು ತೆಗೆದುಹಾಕಲಾಗಿದೆ. ಮಧ್ಯಾಹ್ನದ ಊಟದಲ್ಲೂ ಹೆಚ್ಚುವರಿ ಸಕ್ಕರೆ ಬಳಕೆಯನ್ನು ಪರಿಶೀಲಿಸುವ ಗುಣಮಟ್ಟದ ಅಧಿಕಾರಿಯನ್ನು ಸಹ ನೇಮಿಸಿದೆ ಎನ್ನುತ್ತಾರೆ ಅವರು. ರಾಜ್ಯ ಪಠ್ಯಕ್ರಮದ ಶಾಲೆಗಳಿಗೂ ಅನ್ವಯಿಸಿ: ``ಈಗಾಗಲೇ ಕೇಂದ್ರ ಸರಕಾರದ ಸಿಬಿಎಸ್‌ಇಯಿಂದ ತಮ್ಮ ಅಧೀನದಲ್ಲಿರುವ ದೇಶದ ಎಲ್ಲ ಶಾಲೆಗಳಲ್ಲಿಯೂ ಇಂತಹ ಬೋರ್ಡ್ಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಯನ್ನು ವಹಿಸಲು ಕ್ರಮಕ್ಕೆ ಮುಂದಾಗಿದೆ. ಆದರೆ ಇತ್ತಕಡೆಯಲ್ಲಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕೂಡ ಇಂತಹ ದಿಟ್ಟ ಕ್ರಮವನ್ನು ಎಲ್ಲ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲೂ ಆರಂಭ ಮಾಡಬೇಕು" ಎನ್ನುತ್ತಾರೆ ಸಾಮಾಜಿಕ ಕರ‍್ಯಕರ್ತರಾದ ತ್ರಿಶಾನ್ ಡಿಸೋಜ. ``ವಿದ್ಯಾರ್ಥಿಗಳಿಗೆ ಬರೀ ಕಾರ್ಬೊ ಹ್ರೆÊಡೇಟ್ ಆಧಾರಿತ ತಿಂಡಿ ತಿನಸುಗಳು, ತಂಪು ಪಾನೀಯಗಳಿಂದ ದೇಹದಲ್ಲಿ ಬೊಜ್ಜಿನ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ವಿಶೇಷವಾಗಿ ಮಕ್ಕಳಲ್ಲಿ ಮೊಬೈಲ್ ಬಳಕೆಯಿಂದ ನಾನಾ ಸಮಸ್ಯೆಗಳು ಕಾಡುವ ಜತೆಗೆ ದಂತಕ್ಷಯಗಳಿಗೂ ಕಾರಣವಾಗುತ್ತಿದೆ. ಇಂತಹ ಸಮಯದಲ್ಲಿ ಶಾಲೆಗಳಲ್ಲಿ ಒಳ್ಳೆಯ ಆರೋಗ್ಯ ಜೀವನ ಶೈಲಿಯ ಕುರಿತು ಮಾಹಿತಿ ನೀಡುವ ಕರ‍್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎನ್ನುತ್ತಾರೆ ಖ್ಯಾತ ಮನೋವೈದ್ಯರಾದ ಡಾ.ಕಿರಣ್‌ಕುಮಾರ್ ಪಿ.ಕೆ. ........... ದಕ್ಷಿಣ ಕನ್ನಡದ ಶಾಲೆಗಳ ಚಿತ್ರಣ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಂಖ್ಯೆö: 1071 ಸಿಬಿಎಸ್‌ಇ ಶಾಲೆಗಳ ಸಂಖ್ಯೆ : 62

No comments:

Post a Comment