Thursday, November 13, 2025

ದಕದ 63 ಶಾಲೆಗಳಲ್ಲಿ ಹತ್ತೇ ವಿದ್ಯಾರ್ಥಿಗಳು !

* ಸ್ಟೀವನ್ ರೇಗೊ ಮಂಗಳೂರು oಠಿಛಿqZ್ಞ.್ಟಛಿಜಟಃಠಿಜಿಞಛಿoಟ್ಛಜ್ಞಿbಜಿZ.್ಚಟಞ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 63 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 10 ಸೇರಿದಂತೆ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಈಗಾಗಲೇ ಸರಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ನ ಮೂಲಕ ಶಾಲೆಗಳ ಬಲವ`Àðನೆಗೆ ಕೆಲಸ ಮಾಡುತ್ತಿದೆ. ಇನ್ನೊಂದೆಡೆ ಸರಕಾರಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಹೊಡೆತ ಬೀಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 1559 ಸರಕಾರಿ ಶಿಕ್ಷಣ ಸಂಸ್ಥೆಗಳಿದ್ದುö, ಇದರಲ್ಲಿ 225 ಕಿರಿಯ ಪ್ರಾಥಮಿಕ ಶಾಲೆಗಳು, 658 ಹಿರಿಯ ಪ್ರಾಥಮಿಕ ಶಾಲೆಗಳು, 171 ಪ್ರೌಢಶಾಲೆಗಳು ಸೇರಿದಂತೆ 55 ಸರಕಾರಿ ಪದವಿಪೂರ್ವ ಕಾಲೇಜುಗಳು ಕರ‍್ಯನಿರ್ವಹಣೆ ಮಾಡುತ್ತಿದೆ. ಇದರ ಜತೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿದೆ. ಆದರೆ ದಾಖಲಾತಿಯ ವಿಚಾರದಲ್ಲಿ 63 ಶಾಲೆಗಳಲ್ಲಿ ಮಾತ್ರ ದಾಖಲಾತಿ ವಿಶೇಷ ರೀತಿಯಲ್ಲಿ ಕಡಿಮೆಯಾಗಿದ್ದುö, ಈ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸು`Áರಣೆ ಕಾಣದೇ ಹೋದರೆ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುವ ಸಾ`À್ಯತೆಗಳೇ ಜಾಸ್ತಿಯಿದೆ. ಆದರೆ ಪ್ರೌಢಶಾಲಾ ಮಟ್ಟದಲ್ಲಿ ಈ ರೀತಿಯ ದಾಖಲಾತಿ ಕುಸಿತದ ಪ್ರಮಾಣ ಅಷ್ಟೊಂದು ದೊಡ್ಡ ಮಟ್ಟಿನಲ್ಲಿ ಕಾಣಿಸಿಕೊಂಡಿಲ್ಲö. ಸುಳ್ಯ `Áಗದಲ್ಲಿ 20ರೊಳಗೆ ವಿದ್ಯಾರ್ಥಿಗಳು ಇರುವ ಪ್ರೌಢಶಾಲೆಯೊಂದು ಬಿಟ್ಟರೆ ಉಳಿದಂತೆ 100 ವಿದ್ಯಾರ್ಥಿಗಳು ಇರುವ ಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿದೆ.
ಸುಳ್ಯö, ಬಂಟ್ವಾಳದಲ್ಲಿಯೇ ಕುಸಿತ ಹೆಚ್ಚುö: ದ.ಕ.ಜಿಲ್ಲೆಯ 63 ಶಾಲೆಗಳಲ್ಲಿ ದಾಖಲಾತಿ ಕುಸಿತದಲ್ಲಿ ಸುಳ್ಯದಲ್ಲಿ 19 ಶಾಲೆಗಳು ಹಾಗೂ ಬಂಟ್ವಾಳದಲ್ಲಿ 15 ಶಾಲೆಗಳು ಸೇರಿದೆ. ಈ ಎರಡು ತಾಲೂಕುಗಳಲ್ಲಿ 11ರಿಂದ 20 ವಿದ್ಯಾರ್ಥಿಗಳು ಇರುವ ಶಾಲೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಮುಖ್ಯವಾಗಿ ಬಂಟ್ವಾಳದಲ್ಲಿ 28 ಶಾಲೆಗಳು ಹಾಗೂ ಸುಳ್ಯದಲ್ಲಿ 31 ಶಾಲೆಗಳು ಸೇರಿಕೊಂಡಿದೆ. ಆದರೆ ಬಂಟ್ವಾಳದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ದಾಟಿದ ಶಾಲೆಗಳು ಕೂಡ ಇದೆ ಎನ್ನುವುದು ಸಮಾ`Áನಪಡುವ ವಿಚಾರ. ಮುಖ್ಯವಾಗಿ 11ರಿಂದ 20 ವಿದ್ಯಾರ್ಥಿಗಳು ಇರುವ ಶಾಲೆಗಳು ಸರಿಸುಮಾರು 116 ಆಗಿದೆ. ಈ ಕುರಿತು ಶಿಕ್ಷಣ ಇಲಾಖೆಯ ಅಕಾರಿಗಳು ಹೇಳುವಂತೆ ಈಗಾಗಲೇ ಸರಕಾರ ಬಹಳಷ್ಟು ಕರ‍್ಯಕ್ರಮಗಳನ್ನು ಮಾಡುವ ಮೂಲಕ ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತಿದೆ. ವಿಶೇಷವಾಗಿ ಜಿಲ್ಲೆಯಲ್ಲಿ 9 ಕೆಪಿಎಸ್ ಶಾಲೆಗಳಿದ್ದುö, ಮುಂದಿನ ವರ್ಷ 18 ಶಾಲೆಗಳು ಈ ಕೆಪಿಎಸ್ ಹಂತಕ್ಕೆ ಮೇಲ್ದರ್ಜೆಗೆ ಏರಲಿದೆ. ಈ ಮೂಲಕ ಕೆಪಿಎಸ್ ಶಾಲೆಗಳ ಮೂಲಕ ಮತ್ತಷ್ಟು ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ಆಕರ್ಷಣೆ ಮಾಡುವ ಕೆಲಸ ಸಾಗುತ್ತಿದೆ ಎನ್ನುವುದು ಅವರ ಮಾತು. ಸಮಸ್ಯೆಗೆ ಪರಿಹಾರ ಏನೂ: ``ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚು ಸಮಸ್ಯೆಯಿದೆ. ಬಹಳಷ್ಟು ಕಡೆಯಲ್ಲಿ ಖಾಸಗಿ ಶಾಲೆಗಳ ಪೈಪೋಟಿಯಿಂದ ಕೂಡ ಶಾಲೆಗಳು ಸೊರಗುತ್ತಿದೆ. ವಿದ್ಯಾರ್ಥಿಗಳ ಕೊರತೆ ಇದ್ದಾಗ ಶಿಕ್ಷಕರನ್ನು ಕೂಡ ನೇಮಕ ಮಾಡುವುದಿಲ್ಲ ಇದರಿಂದ ಗುಣಮಟ್ಟ ಶಿಕ್ಷಣ ನೀಡುವ ಕರ‍್ಯದಲ್ಲಿ ಸಮಸ್ಯೆಯಾಗುತ್ತದೆ" ಸಾಮಾಜಿಕ ಕರ‍್ಯ ಕರ್ತ ಸಾಗರ್ ಚಂದ್ರ ಮಂಗಳೂರು. ........

No comments:

Post a Comment