Friday, April 25, 2014
ಒಂದು ಹಾಡು ಚಂದ್ರಲೇಖಾರ ಬದುಕು ಬದಲಾಯಿಸಿತು
*ಸ್ಟೀವನ್ ರೇಗೊ, ದಾರಂದಕುಕ್ಕು
ಚಂದ್ರಲೇಖಾ ಎನ್ನುವ ಅಮ್ಮನ ಪರಿಚಯ ಕೇರಳದಲ್ಲಿ ಮಲಯಾಳಂ ಮಾತನಾಡುವ ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕು.ಈ ಹಿಂದೆ ಚಂದ್ರಲೇಖಾರ ಪರಿಚಯ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಈ ಬಳಿಕ ಒಂದು ಹಾಡು ಚಂದ್ರಲೇಖಾ ಬದುಕಿನಲ್ಲಿ ಹೊಸ ಆಯಾಮವನ್ನೇ ತೆರೆದುಬಿಟ್ಟಿತು. ದಿನ ಬೆಳಗಾಗುವುದರೊಳಗೆ ಚಂದ್ರಲೇಖಾ ಹಾಡಿದ ಒಂದು ಹಾಡು ಇಡೀ ವಿಶ್ವವೇ ಕೇಳಿಕೊಂಡು ‘ಶಹಬ್ಬಾಸ್’ಎಂದು ಬೆನ್ನು ತಟ್ಟುವವರೆಗೂ ಹೋಗಿತ್ತು.
ಅಂದಹಾಗೆ ಚಂದ್ರಲೇಖಾ ಮಹಾನ್ ಗಾಯಕಿ ಏನೂ ಅಲ್ಲ. ತನ್ನ ಬದುಕಿನ ಉದ್ದಕ್ಕೆ ಅತೀ ಹೆಚ್ಚು ಇಷ್ಟಪಟ್ಟು ಕೇಳುತ್ತಿದ್ದ ಖ್ಯಾತ ಗಾಯಕಿ ಚಿತ್ರಾರ ಹಾಡುಗಳಿಂದಲೇ ಸ್ಫೂರ್ತಿ ಪಡೆದುಕೊಂಡು ಹಾಡಲು ಹೊರಟರು. ಈಗ ಚಂದ್ರಲೇಖಾ ಎಲ್ಲರಿಗೂ ಗೊತ್ತು ಅದರಲ್ಲೂ ಕೇರಳದ ಮಲಯಾಳಿಗಳು ಅವರ ಹಾಡುಗಳನ್ನು ಗುನುಗುನಿಸುತ್ತಾ ಇರುತ್ತಾರೆ.
ಚಂದ್ರಲೇಖಾರ ಹಿಟ್ ಹಾಡು:
ಚಂದ್ರಲೇಖಾ ತನ್ನ ಮಗುವನ್ನು ಮಲಗಿಸಲು ಹಾಡಿದ ಹಾಡೊಂದು ಮೊಬೈಲ್ ಫೋನ್ ಮೂಲಕ ಸಾಮಾಜಿಕ ತಾಣಗಳಲ್ಲಿ ಒಂದಾದ ಯೂ ಟ್ಯೂಬ್ನಲ್ಲಿ ಹಾಕಿದ್ದರು. ನಾಲ್ಕು ನಿಮಿಷದ ಈ ಹಾಡಿನಿಂದ ದಿನಬೆಳಗಾಗುವುದರೊಳಗೆ ಮಲಯಾಳಂ ಎನ್ನುವ ಪುಟ್ಟ ರಾಜ್ಯದಲ್ಲಿ ಚಂದ್ರಲೇಖಾ ಹೆಸರು ದಿಢೀರ್ ಖ್ಯಾತಿಗೆ ಬಂತು. ಅಲ್ಲಿಂದ ಎರಡು ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ಕೇಳಿದ್ದಾರೆ. ಮಾತ್ರವಲ್ಲ ಡೌನ್ಲೋಡ್ ಮಾಡಿಕೊಂಡು ಕೇಳಿಸಿಕೊಳ್ಳುತ್ತಿದ್ದಾರೆ. ಫೇಸ್ಬುಕ್ನಲ್ಲಿ ನಾಲ್ಕೈದು ದಿನಗಳಲ್ಲಿ ಹಾಕಿರುವ ಈ ಹಾಡಿಗೆ ಈಗಾಗಲೇ ೩ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಪಿ. ಚಂದ್ರಲೇಖಾ ಮೂಲತಃ ಕೇರಳ ರಾಜ್ಯದ ಪತ್ತಾನಾಮಿಟ್ಟಾ ಜಿಲ್ಲೆಯ ವಾದಾಸಿರಿಖಾರಾ ಊರಿನವರು. ಅಂದಹಾಗೆ ಚಂದ್ರಲೇಖಾ ಎಂದಿಗೂ ಸಾರ್ವಜನಿಕವಾಗಿ ಹಾಡಿಲ್ಲ. ಆದರೆ ಈಗ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಚಂದ್ರಲೇಖಾ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಈ ಬಳಿಕ ಅವರನ್ನು ಸಂಪರ್ಕಿಸಿ ಹಾಡಲು ಕೇಳಿದರೂ ಆದರೆ ಚಂದ್ರಲೇಖಾ ಮಾತ್ರ ಒಪ್ಪಿಕೊಳ್ಳಲಿಲ್ಲ.
ಚಂದ್ರಲೇಖಾ ಅವರಲ್ಲಿ ಈ ಹಾಡಿನ ಕುರಿತು ಕೇಳಿದಾಗ ಹೇಳುವ ಮಾತು ಹೀಗಿದೆ: ನಮ್ಮ ಕುಟುಂಬದ ಸದಸ್ಯ ದರ್ಶನ್ ತನ್ನ ಮೊಬೈಲ್ ಫೋನ್ನಲ್ಲಿ ನಾನು ಹಾಡುವ ಹಾಡನ್ನು ರೆಕಾರ್ಡ್ ಮಾಡಿಕೊಂಡು ಯೂ ಟ್ಯೂಬ್ನಲ್ಲಿ ಆಪ್ಲೋಡ್ ಮಾಡಿದ ಆದರೆ ನನಗೆ ಇದ್ಯಾವುದರ ಪರಿಚಯವೇ ಇಲ್ಲ. ಕಂಪ್ಯೂಟರ್ ಅಂತೂ ನಮ್ಮ ಊರಿಗೆ ಬಂದಿರಲಿಲ್ಲ. ದೂರದ ಊರಿನಿಂದ ನೆಂಟರೊಬ್ಬರು ಕರೆ ಮಾಡಿ ಯೂ ಟ್ಯೂಬ್ ಕತೆಯನ್ನು ಬಿಚ್ಚಿಟ್ಟರು. ಬಹಳ ಖುಷಿಯಾಯಿತು. ಇದರ ಜತೆಗೆ ನನ್ನ ಮೊಬೈಲ್ ಸಂಖ್ಯೆಯನ್ನು ಕೂಡ ನಮೂದಿಸಿ ಬಿಟ್ಟಿದ್ದ ಇದರ ಪರಿಣಾಮ ದೇಶ- ವಿದೇಶದಿಂದ ಸಾವಿರಾರು ಕರೆಗಳು ಬಂದಿದ್ದವು.ಎಲ್ಲರೂ ಕೇಳುವ ಹಾಡು ಒಂದೇ ‘ರಾಜಹಂಸಮೇ....’ ಎನ್ನುತ್ತಾರೆ ಅವರು. ಚಂದ್ರಲೇಖಾ ಅವರು ತೀರಾ ಬಡತನ ಕುಟುಂಬದಲ್ಲಿ ಒಂದು ಪುಟ್ಟ ಗಂಡು ಮಗುವಿನ ಜತೆ ಬದುಕು ಕಟ್ಟುತ್ತಿದ್ದಾರೆ. ಪತಿ ರಘುನಾಥನ್ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಚಂದ್ರಲೇಖಾರಿಗೆ ಬಂದ ಆಫರ್:
‘ರಾಜಹಂಸಮೇ....’ ಹಾಡು ಯಾವ ರೀತಿಯಲ್ಲಿ ಕ್ಲಿಕ್ ಆಗಿದೆ ಎಂದರೆ ಈಗಾಗಲೇ ಚಂದ್ರಲೇಖಾ ಅವರನ್ನು ಹುಡುಕಿಕೊಂಡು ಮಲಯಾಳಂ ಸಿನಿ ಜಗತ್ತಿನ ಐದು ಸಂಗೀತ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಚಂದ್ರಲೇಖಾ ಹಾಡಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಆದರೆ ಚಂದ್ರಲೇಖಾ ಈಗ ಸಿನಿಮಾ ಹಾಡುವೊಂದನ್ನು ಹಾಡಿದ್ದಾರೆ. ಚಿತ್ರದ ಹೆಸರು ‘ಲವ್ ಸ್ಟೋರಿ’ ಚಂದ್ರಲೇಖಾ ಹಾಡುವ ಹಾಡು ‘ಕನ್ಕಳೀರು ಕವಿತಾಯೇಸುಥಾವನ್...’ಈಗಾಗಲೇ ಚಿತ್ರದ ಸಿಡಿ ಮಾರುಕಟ್ಟೆಗೆ ಬಂದಿದೆ. ತೀರಾ ಇತ್ತೀಚೆಗೆ ಕೇರಳದ ಖ್ಯಾತ ಖಾಸಗಿ ವಾಹಿನಿಯೊಂದು ಚಂದ್ರಲೇಖಾರ ಕುರಿತು ಮಾಡಿದ ಕಾರ್ಯಕ್ರಮವೊಂದರಲ್ಲಿ ಖ್ಯಾತ ಗಾಯಕಿ ಚಿತ್ರಾ ಚಂದ್ರಲೇಖಾರ ಹಾಡನ್ನು ಹೊಗಳಿದಾಗ ಚಂದ್ರಲೇಖಾ ರಲ್ಲಿ ದುಃಖ ಉಲ್ಬಣಿಸಿಕೊಂಡು ಬಂದಿತ್ತು.ಇದು ಕೇರಳದ ಮನೆಯ ಹುಡುಗಿಯ ಮಾತು. ಇಂತಹ ಹತ್ತಾರು ಅಮ್ಮಂದಿರು ನಮ್ಮ ನಡುವೆ ಇದ್ದಾರೆ ಅವರಿಗೊಂದು ಅವಕಾಶ ಸಿಗಲೇಬೇಕು ಅಲ್ವಾ..?
Monday, April 14, 2014
ಭಿಕ್ಷೆ ಬೇಡುವ ಹುಡುಗಿ ಈಗ ಬಿ-ಟೌನ್ ಸಿಂಗರ್
* ಸ್ಟೀವನ್ ರೇಗೊ, ದಾರಂದಕುಕ್ಕು
ದುರ್ಗಾ ಇದು ಮುಂಬಯಿಯ ರೈಲು ನಿಲ್ದಾಣದಲ್ಲಿ ಓಡುವ ರೈಲುಗಳಲ್ಲಿ ನಿಂತು ಹಾಡುಗಳನ್ನು ಹಾಡಿ ಪುಡಿಗಾಸು ಪಡೆಯುತ್ತಿದ್ದ ಹುಡುಗಿಯ ಹೆಸರು. ಕಳೆದ ಮೂರು ನಾಲ್ಕು ವರ್ಷಗಳಿಂದಲೂ ದುರ್ಗಾ ಇದೇ ವೃತ್ತಿಯನ್ನು ಮಾಡಿಕೊಂಡು ಬಂದವಳು. ಆದರೆ ಇಂತಹ ದುರ್ಗಾ ಎನ್ನುವ ಬಾಲೆ ಬಾಲಿವುಡ್ ಅಂಗಳದಲ್ಲಿ ಸಿಂಗರ್ ಆಗಿ ಬೆಳೆಯುತ್ತಾಳೆ ಎನ್ನುವುದು ಖುದ್ದು ಅವಳಿಗೂ ಗೊತ್ತಿರಲು ಸಾಧ್ಯವಿಲ್ಲ.
ಅಂದಹಾಗೆ ದುರ್ಗಾ ಈಗ ಬಾಲಿವುಡ್ ಅಂಗಳದಲ್ಲಿ ವಿಶಿಷ್ಟ ಹಾಡುಗಳಿಂದ ಗುರುತಿಸಿಕೊಂಡವಳು. ರೈಲುಗಳ ಬೋಗಿಯಲ್ಲಿ ಬಾಲಿವುಡ್ ಹಾಡುಗಳನ್ನು ಹಾಡಿ ಕೈ ಮುಂದೆ ಮಾಡುತ್ತಾ ಭಿಕ್ಷೆ ಬೇಡುತ್ತಿದ್ದ ಹುಡುಗಿ ಲಕ್ ಬದಲಾಯಿಸಿದ್ದರ ಹಿಂದೆ ಪುಟ್ಟದಾದ ಕತೆ ಇದೆ. ಯಾರು ಕೂಡ ಬದುಕಿನಲ್ಲಿ ಏನೂ ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ದುರ್ಗಾ ದೀ ಬೆಸ್ಟ್ ಸ್ಯಾಂಪಲ್ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಾಲಿವುಡ್ ನಿರ್ದೇಶಕ ಆನಂದ್ ಸುರಪುರ್ ಒಂದು ದಿನ ಮುಂಬಯಿಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ದುರ್ಗಾ ಬಾಲಿವುಡ್ನ ಹಿಟ್ ಹಾಡುಗಳನ್ನು ಹಾಡುತ್ತಾ ಬರುತ್ತಿದ್ದಳು. ಈ ಸಮಯದಲ್ಲಿ ಆನಂದ್ ತನ್ನ ಹೊಸ ಹಾಡಿನ ಆಲ್ಬಂಗಾಗಿ ಹೊಸ ಗಾಯಕಿಯನ್ನು ಹುಡುಕಾಟ ಮಾಡುತ್ತಿದ್ದರಂತೆ ಇದೇ ಸಮಯದಲ್ಲಿ ದುರ್ಗಾ ಕಣ್ಣಿಗೆ ಬಿದ್ದು ಬಿಟ್ಟರು. ಅಲ್ಲಿಂದ ಆನಂದ್ ಸುರಪುರ್ ತನ್ನ ಆಲ್ಬಂನ ಒಂದು ಹಾಡಿಗೆ ಹಾಡಿಸಿದರಷ್ಟೇ ತಕ್ಷಣ ದುರ್ಗಾ ಕ್ಲಿಕ್ ಆಗಿ ಹೋದರು.
ಆನಂದ್ ಸುರಪುರ್ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ಹರಿಯಬಿಟ್ಟರು. ಆಲ್ಬಂ ಬಿಡುಗಡೆಯಾಗುವ ಮುಂಚೆನೇ ಹಿಟ್ ಆಯಿತು. ಇದೇ ಸಮಯದಲ್ಲಿ ಬಾಲಿವುಡ್ನಲ್ಲಿ ಬಿಗ್ ಹಿಟ್ ಅನ್ನಿಸಿಕೊಂಡ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರದ ಸಂಗೀತ ನಿರ್ದೇಶಕಿ ಸ್ನೇಹಾ ಕನ್ವಾಲಕರ್ ದುರ್ಗಾಳಿಗೆ ಮತ್ತೊಂದು ಚಾನ್ಸ್ ಕೊಟ್ಟರು. ಇದು ‘ಗ್ಯಾಂಗ್ಸ್ ಆಫ್ ವಾಸೇಪುರ್’ ನ ‘ಚೀ ಚಾ ಲೆದರ್..’ಹಿಟ್ ಹಾಡು ದುರ್ಗಾಳಿಂದ ಹಾಡಿಸಿದರು. ಈ ಹಾಡು ೧೨ರ ಹರೆಯದ ದುರ್ಗಾ ಹಾಡಿರೋದು ಎನ್ನುವ ವಿಚಾರ ಬಹಳಷ್ಟು ಮಂದಿಗೆ ಗೊತ್ತಿರಲು ಸಾಧ್ಯವಿಲ್ಲ. ಕಾರಣ ಈ ಹಾಡಿನಲ್ಲಿ ಒಂದು ಪ್ರಬುದ್ಧತೆಯ ಕಂಠವಿದೆ ಎನ್ನುವುದು ಬಹಳಷ್ಟು ಬಾಲಿವುಡ್ ಸಂಗೀತ ನಿರ್ದೇಶಕರು ಹೇಳಿಕೊಂಡಿದ್ದರು. ಇಲ್ಲಿಂದ ದುರ್ಗಾ ಬಾಲಿವುಡ್ ಅಂಗಳದಲ್ಲಿ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾಳೆ.
ಅಂದಹಾಗೆ ದುರ್ಗಾ ಮೂಲತಃ ಆಂಧ್ರಪ್ರದೇಶದ ಹುಡುಗಿ. ಹೊಟ್ಟೆಪಾಡಿಗಾಗಿ ಹೆತ್ತವರ ಜತೆಯಲ್ಲಿ ಮುಂಬಯಿಯ ಕೊಳಗೇರಿ ಪ್ರದೇಶ್ಕೆ ಬಂದು ನಿಂತಳು. ಇಂತಹ ಕೊಳಗೇರಿ ಪ್ರದೇಶದ ಮುಖ್ಯ ವೃತ್ತಿ ಭಿಕ್ಷೆ ಬೇಡುತ್ತಾ ಹಣ ಸಂಪಾದನೆ ಮಾಡುವುದು. ಇದೇ ವೃತ್ತಿಯಲ್ಲಿ ದುರ್ಗಾ ಕೂಡ ಮುಂದುವರಿದಳು.
ಆದರೆ ದುರ್ಗಾಳ ಅದೃಷ್ಟ ಮಾತ್ರ ನೆಟ್ಟಗೆ ಇತ್ತು. ಕೊಳಗೇರಿ ಪ್ರದೇಶದಲ್ಲಿ ಹೊಟ್ಟೆಪಾಡಿಗಾಗಿ ಹಾಡುಗಳನ್ನು ಹಾಡುತ್ತಾ ಬದುಕು ಕಟ್ಟುವ ಬದಲು ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಳ್ಳುವ ಚಾನ್ಸ್ ಸಿಕ್ಕಿತು. ಈಗ ದುರ್ಗಾಳಿಗೆ ತೆಲುಗು ಚಿತ್ರಗಳಿಗೆ ಹಾಡಬೇಕೆಂಬ ಹೆಬ್ಬಯಕೆ ಇದೆ. ಬಾಲಿವುಡ್ ಅಂಗಳದಿಂದ ಬಹಳಷ್ಟು ಆಫರ್ಗಳು ಬರುತ್ತಿದೆ. ಇಲ್ಲೂ ನೆಲೆ ನಿಂತು ಟಾಲಿವುಡ್ನಲ್ಲೂ ಗುರುತಿಸಿಕೊಳ್ಳಬೇಕು ಎನ್ನುತ್ತಾರೆ ದುರ್ಗಾ. ಇಂತಹ ಪ್ರತಿಭೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದುಬರಬೇಕು ಎನ್ನೋದು ಬಹಳಷ್ಟು ಮಂದಿಯ ಮಾತು.
ಪಾರ್ಟ್ ೨ ನಲ್ಲೂ ಓಡುತ್ತೆ ಟ್ರೈನ್:
ಬಾಲಿವುಡ್ನಲ್ಲಿ ಹಿಟ್ ಆದ ಗ್ಯಾಂಗ್ಸ್ ಆಫ್ ವಾಸೇಪುರ್ನ ಮುಂದುವರಿದ ಭಾಗ ಪಾರ್ಟ್ ೨ನಲ್ಲೂ ದುರ್ಗಾ ಒಂದು ಹಾಡನ್ನು ಹಾಡಲಿದ್ದಾರೆ.ಅನುರಾಗ್ ಕಶ್ಯಪ್ ಅವರ ಬತ್ತಳಿಕೆಯಲ್ಲಿ ಹೊರಡಲಿರುವ ಈ ಸಿನ್ಮಾದಲ್ಲಿ ದುರ್ಗಾ ಲೀಡ್ ಹಾಡೊಂದಕ್ಕೆ ಬುಕ್ ಆಗಿದ್ದಾಳೆ. ಚಿತ್ರ ಈ ವರ್ಷ ಬಿಡುಗಡೆ ಕಾಣಲಿದೆ. ಈ ಹಿಂದೆ ಇದ್ದ ಸಂಗೀತ ನಿರ್ದೇಶಕಿ ಸ್ನೇಹಾ ಈ ಸಿನ್ಮಾದಲ್ಲೂ ಮುಂದುವರಿಯಲಿದ್ದಾರೆ. ಈ ಬಾರಿ ದುರ್ಗಾ ಹಿಂದಿ ಭಾಷೆಯ ಜತೆಗೆ ಇಂಗ್ಲೀಷ್ ಭಾಷೆಯನ್ನು ಮಿಕ್ಸಿಂಗ್ ರೀತಿಯಲ್ಲಿ ಬಳಸಿಕೊಂಡು ಮನಸ್ಸು ಗೆಲ್ಲುವ ಕಾಯಕಕ್ಕೆ ಸಾಥ್ ಕೊಡಲಿದ್ದಾರೆ ಎನ್ನೋದು ಕಶ್ಯಪ್ ಮಾತು.
.
ಕಾಲಿವುಡ್ನಲ್ಲಿ ಮತ್ತೆ ಹುಂಜ ಚಿತ್ರ!
* ಸ್ಟೀವನ್ ರೇಗೊ, ದಾರಂದಕುಕ್ಕು
ಕಾಲಿವುಡ್ ಸಿನಿಮಾಗಳೇ ಹಾಗೇ ಇಲ್ಲಿನ ಕತೆಗಳೇ ಚಿತ್ರಕ್ಕೆ ಜೀವಾಳ. ಕಾಲಿವುಡ್ ಸಿನಿಮಾ ನಿರ್ದೇಶಕರು ಒಳ್ಳೆಯ ಕತೆ ಇದ್ದಾರೆ ಮಾತ್ರ ಸಿನ್ಮಾ ಮಾಡೋದು ಎನ್ನೋದು ಸಿನಿಮಾ ಮಂದಿಯವರು ಹೇಳುವ ಮಾತು. ಇದೇ ಒಂದು ಕಾರಣದಿಂದ ಇಲ್ಲಿನ ಸಿನಿಮಾಗಳನ್ನು ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಯವರು ರಿಮೇಕ್ ಮಾಡಿಕೊಂಡು ಸಿನಿಮಾ ಗೆಲ್ಲಿಸುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.
ಈಗ ಕಾಲಿವುಡ್ನಲ್ಲಿ ಮತ್ತೆ ಹುಂಜದ ಮೇಲೊಂದು ಸಿನಿಮಾ ಮೂಡಿಬರುತ್ತಿದೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರ ಶಿಷ್ಯ ಎ.ಎಲ್. ವಿಜಯ್ ಅವರ ಹೊಸ ಚಿತ್ರ ‘ಶೈವಂ’
ನಲ್ಲಿ ಹುಂಜ ಹಾಗೂ ಬಾಲಕಿಯೇ ಲೀಡ್ ನಟರು. ಹೌದು. ವಿಜಯ್ ಈಗಾಗಲೇ ತಮಿಳಿನಲ್ಲಿ ದೈವ ತಿರುಮಗಳ್ ಚಿತ್ರ ಮಾಡಿದವರು. ಈ ಚಿತ್ರದಲ್ಲಿ ವಿಕ್ರಂ ಅವರನ್ನು ಬುದ್ದಿಮಾಂದ್ಯತಂದೆಯಂತೆ ಚಿತ್ರಿಸಿಕೊಂಡು ಮಗಳನ್ನು ಹುಡುಕುವ ಪಾತ್ರದಲ್ಲಿ ಪ್ರೇಕ್ಷಕರಿಗೆ ಕಣ್ಣೀರು ಕೊಟ್ಟವರು. ಈ ಚಿತ್ರದಲ್ಲಿ ನಟಿಸಿದ ಸಾರಾ ಅರ್ಜುನ್. ಶೈವಂ ಚಿತ್ರದಲ್ಲಿ ನಾಯಕಿ.
ಈ ಪುಟಾಣಿಯ ಜತೆಗೆ ಹುಂಜವೊಂದು ನಟಿಸುತ್ತಿದೆ.
ಶೈವಂನಲ್ಲಿ ಹುಂಜಕ್ಕೆ ಪಾಪಾ ಎನ್ನುವ ಹೆಸರಿದೆ. ಸಾರಾ ಪ್ರೀತಿಸುವ ಪಾಪಾ ಕಳೆದು ಹೋಗುತ್ತದೆ. ಹಳ್ಳಿಗಾಡಿನಲ್ಲಿ ಪಾಪಾ ಕ್ಷಿಡುಕಾಟ, ಅವರಿಬ್ಬರ ನಡುವಿನ ಪ್ರೀತಿಯ ಕತೆಯೇ ಶೈವಂನ ಪ್ಲಸ್ ಪಾಯಿಂಟ್ಗಳಲ್ಲಿ ಒಂದು. ಇಡೀ ಚಿತ್ರದಲ್ಲಿ ಸಾರಾ ಹಾಗೂ ಹುಂಜದ ನಟನೇ ಗಮನ ಸೆಳೆದುಬಿಡುತ್ತದೆ. ಇದರ ಜತೆಗೆ ಹಿರಿಯ ನಟ ನಾಜೀರ್ ಕೂಡ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಾರೆ.
ಮುಂಬಯಿಯಲ್ಲಿ ಬೆಳೆದ ಹುಡುಗಿ ಸಾರಾ ಅರ್ಜುನ್ ಈಗಾಗಲೇ ೪೦೪ ಹಾಗೂ ಏಕ್ ತಿ ಡಯಾನ್ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ನಲ್ಲಿ ಸಣ್ಣಪುಟ್ಟ ರೋಲ್ಗಳಲ್ಲಿ ಮಿಂಚುತ್ತಿರುವ ಅರ್ಜುನ್ ಅವರ ಪುತ್ರಿ ಸಾರಾ ಅವರನ್ನು ವಿಜಯ್ ಜಾಹೀರಾತು ಶೂಟಿಂಗ್ವೊಂದರಲ್ಲಿ ಕಂಡಿದ್ದರು. ಈ ಬಳಿಕ ಸಾರಾ ಅವರನ್ನು ಮುಖ್ಯವಾಗಿಟ್ಟುಕೊಂಡು ದೈವ ತಿರುಮಗಳ್ ಚಿತ್ರ ಮಾಡಿ ಬಾಕ್ಸಾಫೀಸ್ನಲ್ಲಿ ಹೊಸ ತಿರುವಿಗೆ ಕಾರಣವಾಗಿದ್ದರು.
ಈಗ ಶೈವಂ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆ ಕಾಣುತ್ತಿದೆ. ಅದಕ್ಕೂ ಮೊದಲಾಗಿ ಚಿತ್ರದ ಟ್ರೈಲರ್ ಸಾಮಾಜಿಕ ತಾಣಗಳಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಅಂದಹಾಗೆ ೨೦೧೧ರಲ್ಲಿ ಕಾಲಿವುಡ್ನಲ್ಲಿ ಬಂದ ‘ಆಡುಕಲಂ’ ಚಿತ್ರದಲ್ಲಿ ಕೋಳಿ ಅಂಕದ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಈ ಚಿತ್ರವನ್ನು ತೆರೆಗೆ ತಂದಿದ್ದರು.
ಕಾಲಿವುಡ್ ಸ್ಟಾರ್ ನಟ ಧನುಷ್, ನಟ ಕಿಶೋರ್ ಹಾಗೂ ತಪಸಿ ನಟಿಸಿದ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಕೂಡ ಬಂದಿತ್ತು. ಕರಾವಳಿಯಲ್ಲಿ ನಡೆಯುತ್ತಿರುವ ಕೋಳಿ ಅಂಕ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಇದೇ ಮಾದರಿಯ ಕೋಳಿ ಅಂಕ ತಮಿಳುನಾಡಿನ ಮಧುರೈಯಲ್ಲೂ ಫೇಮಸ್. ನಿರ್ದೇಶಕ ವೆಟ್ರಿಮಾರನ್ ಮಧುರೈ ಅಸುಪಾಸಿನಲ್ಲಿ ನಡೆಯುತ್ತಿದ್ದ ಈ ಕೋಳಿ ಅಂಕದ ಕತೆಯನ್ನೇ ತನ್ನ ಚಿತ್ರಕ್ಕೆ ಜೀವಾಳ ಮಾಡಿಕೊಂಡು ಭಾರತೀಯ ಸಿನಿಮಾರಂಗದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದರು. ಈ ಬಳಿಕ ವೆಟ್ರಿಮಾರನ್ ಆನೆ ಮೇಲೊಂದು ಸಿನಿಮಾ ಮಾಡಿದ್ದರು. ಆದರೆ ‘ಆಡುಕಲಂ’ನಂತೆ ಬಾಕ್ಸಾಫೀಸ್ನಲ್ಲಿ ಗಳಿಕೆ ಮಾಡುವಲ್ಲಿ ವಿಫಲವಾಯಿತು. ಟೋಟಲಿ ಶೈವಂನಲ್ಲಿ ಹುಂಜವೊಂದರ ಕತೆ ಸಿನಿಮಾಗಳಲ್ಲಿ ಯಾವ ರೀತಿ ವರ್ಕ್ ಔಟ್ ಆಗುತ್ತೆ ಎನ್ನುವ ಕುತೂಹಲ ಸಿನಿಮಾ ಬಿಡುಗಡೆ ಕಂಡ ನಂತರವೇ ತಿಳಿಯಬೇಕು. ಅಲ್ಲಿವರೆಗೂ ಪ್ರೇಕ್ಷಕ ಕಾದು ಕೂರಬೇಕು.
Friday, April 11, 2014
ಭರವಸೆಯನ್ನು ಹುಟ್ಟುಹಾಕುವ ಹಬ್ಬವೇ ‘ಈಸ್ವರ್’
* ಸ್ಟೀವನ್ ರೇಗೊ, ದಾರಂದಕುಕ್ಕು
ಕ್ರೈಸ್ತ ಸಮುದಾಯಗಳ ಹಬ್ಬದ ಕ್ಯಾಲೆಂಡರ್ಗಳಲ್ಲಿ ಕ್ರಿಸ್ಮಸ್ ಹಾಗೂ ಈಸ್ಟರ್ ಹಬ್ಬಕ್ಕೆ ತನ್ನದೇ ಆದ ಮಹತ್ವ ಇದೆ. ಒಂದು ಕ್ರಿಸ್ತ ಜನನದ ಕುರಿತಾಗಿ ಸಂಭ್ರಮವನ್ನು ಹಂಚುತ್ತಾ ಸಾಗಿದರೆ ಮತ್ತೊಂದು ಹೊಸ ಭರವಸೆಯನ್ನು ಮನುಕುಲದಲ್ಲಿ ಹುಟ್ಟು ಹಾಕುವ ಹಬ್ಬವಾಗಿ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಎರಡು ಹಬ್ಬಗಳಿಗೂ ಸಹಜವಾಗಿಯೇ ಧರ್ಮ, ಜಾತಿ ಮೀರಿದ ಮನ್ನಣೆ ಜನಪ್ರಿಯತೆ ಜತೆಯಾಗಿ ಸಾಗುತ್ತದೆ. ಒಂದು ಹಬ್ಬ ಸಂಭ್ರಮದ ನೆರಳಿನಲ್ಲಿ ಕುಣಿದಾಡಿದರೆ ಮತ್ತೊಂದು ಮನು ಕುಲದಲ್ಲಿ ನಂಬಿಕೆ, ವಿಶ್ವಾಸ, ಭರವಸೆಯ ಪಾಠವನ್ನು ಭೋದಿಸುತ್ತದೆ. ಇದೇ ಕಾರಣದಿಂದ ಕ್ರೈಸ್ತ ರ ಪವಿತ್ರವಾರ ಎಲ್ಲ ರೀತಿಯಿಂದಲೂ ಭಿನ್ನತೆ ಪಾಠವನ್ನು ಬೋಧನೆಯಲ್ಲಿ ತೊಡಗಿದಂತೆ ಭಾಸವಾಗುವುದಿದೆ.
ಪವಿತ್ರ ವಾರದ ಭಾನುವಾರದಂದು ಬರುವ ‘ಈಸ್ಟರ್’ ಕ್ರೈಸ್ತರಿಗೆ ನಿಜಕ್ಕೂ ಮಹತ್ವದ ಹಬ್ಬ. ಶನಿವಾರ ರಾತ್ರಿಯಿಂದಲೇ ಚರ್ಚ್ಗಳಲ್ಲಿ ನಡೆಯುವ ಪ್ರಾರ್ಥನೆ ಹಾಗೂ ವಿಧಿವಿಧಾನಗಳನ್ನು ಒಳಗೊಂಡ ‘ಪಾಸ್ಕಾ’ ಜಾಗರಣೆಯಲ್ಲಿ ಭಾಗವಹಿಸುವುದರೊಂದಿಗೆ ಕ್ರೈಸ್ತರು ಭಾನುವಾರ ಈಸ್ಟರ್ ಹಬ್ಬವನ್ನು ಸಂತಸ, ಸಂಭ್ರಮದಿಂದಲೇ ಎದುರುಗೊಳ್ಳುತ್ತಾರೆ. ಇದರ ಜತೆಯಲ್ಲಿ ಫೆಬ್ರವರಿ ತಿಂಗಳ ಎರಡನೇ ವಾರದಿಂದ ಆರಂಭವಾದ ೪೦ ದಿನಗಳ ತಪಸ್ಸು ಕಾಲದ ತ್ಯಾಗ, ದೇಹ ದಂಡನೆಯ ವ್ರತ ಈಸ್ಟರ್ ಹಬ್ಬದ ಮೂಲಕ ಮುಕ್ತಾಯಗೊಳ್ಳುತ್ತದೆ. ಯೇಸು ಕ್ರಿಸ್ತ ನಮಗಾಗಿ ಮತ್ತೆ ಬಂದಿದ್ದಾನೆ ಎನ್ನುವ ನಂಬಿಕೆಯ ಮೂಲಕ ಕ್ರೈಸ್ತ ಬಂಧುಗಳು ಹಬ್ಬವನ್ನು ಸಡಗರದಿಂದ ಆಚರಣೆಯಲ್ಲಿ ತೊಡಗುತ್ತಾರೆ.
ಯೇಸುಕ್ರಿಸ್ತರ ದೈವತ್ವದ ಸಂಕೇತ:
ಕರಾವಳಿ ಮಾತ್ರವಲ್ಲದೇ ವಿಶ್ವದ ನಾನಾ ದೇಶಗಳಲ್ಲಿ ಈ ಹಬ್ಬದ ಆಚರಣೆಯಲ್ಲಿ ವೈವಿಧ್ಯತೆ ಇರಬಹುದು. ಆದರೆ ಇದನ್ನು ಪಾಸ್ಕಾ ಹಬ್ಬ ಅಥವಾ ಪುನರುತ್ಥಾನದ ಹಬ್ಬ ಎಂದೂ ಕರೆಯಲಾಗುತ್ತದೆ. ಕ್ರೈಸ್ತ ರ ಪವಿತ್ರ ಗ್ರಂಥವಾದ ಬೈಬಲ್ ನಲ್ಲಿ ಹೇಳಿರುವಂತೆ
ದುಷ್ಟ ಜನರ ಒಳಸಂಚಿನಿಂದ ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರವಾದ ಮರಣವನ್ನು ಹೊಂದಿದ ಯೇಸು ಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ತೋರ್ಪಡಿಸಿದರು ಎಂಬುದರ ಸಂಭ್ರಮದ ಆಚರಣೆಯೇ ಈಸ್ಟರ್ನಲ್ಲಿ ಕಾಣ ಸಿಗುತ್ತದೆ.
ಯೇಸುವಿನ ಸಾವಿನಿಂದ ಭಯಪಟ್ಟು, ಅಧಿಕಾರಸ್ಥರ ದರ್ಪದಡಿ ಎಲ್ಲಾ ಭರವಸೆಯನ್ನು ಕಳೆದುಕೊಂಡ ಶಿಷ್ಯರು ಹಾಗೂ ಹಿಂಬಾಲಕರಲ್ಲಿ ಸ್ವಾಮಿಯ ಈ ಪುನರುತ್ಥಾನ ಹೊಸ ಚೈತನ್ಯ, ಅಭಯವನ್ನು ನೀಡಿತು. ಅಲ್ಲದೆ ಕ್ರಿಸ್ತನ ಪ್ರೀತಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವ ಸ್ಪೂರ್ತಿ ತುಂಬಿತ್ತು ಎನ್ನುವ ಸಂದೇಶ ಈ ಹಬ್ಬದ ಮೂಲಕ ಹೊರ ಜಗತ್ತಿಗೆ ರವಾನೆಯಾಗುತ್ತದೆ. ಬೈಬಲ್ ನ ಒಂದು ಅಧ್ಯಾಯದಲ್ಲಿ ತಿಳಿಸಿರುವಂತೆ ದಾಸ್ಯತ್ವದಿಂದ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹೊಸ ಬದುಕಿನೆಡೆಗೆ ಕರೆದೊಯ್ದ ಸಂಗತಿಯ ನೆನಪಿನ ಅಚರಣೆಯೂ ಈ ಹಬ್ಬಕ್ಕೆ ತಳಕು ಹಾಕಿಕೊಂಡಿದೆ. ಹೀಗಾಗಿ ಈಸ್ಟರ್ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸೃಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತವೂ ಹೌದು ಎಂದು ವ್ಯಾಖ್ಯಾನಿಸುವಂತಿದೆ.
ಈಸ್ವರ್ ಗೇ ನಿರ್ದಿಷ್ಟ ದಿನವಿಲ್ಲ:
ಕ್ರೈಸ್ತ ಸಮುದಾಯದಲ್ಲಿ ಕ್ರಿಸ್ಮಸ್ ಹಬ್ಬ ಎಂದಾಕ್ಷಣ ಡಿ.೨೫ ಎಂದು ಗೋಡೆಗೆ ತೂಗು ಹಾಕಿದ ಕ್ಯಾಲೆಂಡರ್ ನೆನಪು ಮಾಡುವಂತೆ ಈಸ್ವರ್ ಹಬ್ಬವನ್ನು ಕ್ಯಾಲೆಂಡರ್ ಮುಂಚಿತವಾಗಿ ತಿಳಿಸುವ ಕೆಲಸ ಮಾಡುವುದಿಲ್ಲ. ಪ್ರತಿ ವರ್ಷನೂ ಈಸ್ವರ್ ದಿನಾಂಕಗಳಲ್ಲಿ ಬದಲಾವಣೆ ಇದ್ದೇ ಇರುತ್ತದೆ. ೪೦ ದಿನಗಳ ಉಪವಾಸದ ದಿನಗಳು ಆರಂಭದ ದಿನದಿಂದ ಲೆಕ್ಕಚಾರದ ಮೂಲಕವೇ ಈಸ್ವರ್ ಹಬ್ಬವನ್ನು ಆಚರಿಸಲಾಗುತ್ತದೆ. ಅದಕ್ಕೂ ಮುಖ್ಯವಾಗಿ ಕ್ರೈಸ್ತರ ಪವಿತ್ರ ವಾರ ಎಂದು ಪರಿಗಣಿಸಲಾಗುವ ವಾರದಲ್ಲಿ ಗುರುವಾರ( ಮೋಂಡಿ ಥರ್ಸಡೇ) ಯೇಸು ಕ್ರಿಸ್ತ ಶಿಲುಬೆಗೆ ಏರುವ ಮುನ್ನ ತನ್ನ ಹದಿನಾಲ್ಕು ಮಂದಿ ಶಿಷ್ಯರ ಪಾದ ತೊಳೆಯವ ದಿನದ ಅಂಗವಾಗಿ ಕ್ರೈಸ್ತ ಚರ್ಚ್ ನಲ್ಲಿರುವ ಧರ್ಮಗುರುಗಳು ಚರ್ಚ್ನ ಅಧೀನದಲ್ಲಿರುವ ಸಂಘ ಸಂಸ್ಥೆಗಳ ಮುಖ್ಯಸ್ಥರ ಪಾದ ತೊಳೆಯವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಅದರಲ್ಲೂ ಮುಖ್ಯವಾಗಿ ಶುಭ ಶುಕ್ರವಾರದಂದು ಯೇಸು ಕ್ರಿಸ್ತ ಶಿಲುಬೆಯಲ್ಲಿ ಪ್ರಾಣ ಬಿಡುವ ದಿನದ ಅಂಗವಾಗಿ ವಿಶೇಷ ಪೂಜಾ ವಿಧಿಗಳನ್ನು ಚರ್ಚ್ಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈ ಬಳಿಕ ಶನಿವಾರ ಯೇಸು ಮತ್ತೇ ಮನು ಕುಲದ ಉದ್ಧಾರಕ್ಕಾಗಿ ಪುನರುತ್ಥಾನವಾಗುವ ದಿನವಾಗಿ ಆಚರಿಸಲಾಗುತ್ತದೆ. ಆದರೆ ಸಾಮಾನ್ಯವಾಗಿ ಮಾರ್ಚ್ ತಿಂಗಳ ೨೦ರ ತರುವಾಯ ಬರುವ ಪೌರ್ಣಿಮೆಯ ನಂತರದ ಭಾನುವಾರ ಆಚರಿಸಲಾಗುತ್ತದೆ. ಈ ಹಬ್ಬದ ನಂತರದ ೫೦ ದಿನಗಳ ಅವಧಿಯನ್ನು ಪಾಸ್ಕ ಕಾಲವೆಂದು ಕರೆಯಲಾಗುತ್ತದೆ.
ಈಸ್ವರ್ ಹೊಸ ಬೆಳಕಿನ ಹಬ್ಬ:
ಈಸ್ಟರ್ ಎಂದರೆ ಅದು ಹೊಸ ಭರವಸೆಯ ಹಬ್ಬ. ಯೇಸು ಮತ್ತೆ ಹುಟ್ಟಿ ಬರುತ್ತಾನೆ ಎನ್ನುವ ನಂಬಿಕೆಯ ಮೂಲಕ ಬದುಕಿನಲ್ಲಿ ಹೊಸ ಬೆಳಕು ಮೂಡುವ ಹಬ್ಬ ಎಂದೇ ಕ್ರೈಸ್ತ ಸಮುದಾಯದ ಬಂಧುಗಳು ಪರಿಗಣಿಸುತ್ತಾರೆ. ನಲವತ್ತು ದಿನಗಳ ‘ತಪಸ್ಸು ಕಾಲ’ದ ಬಳಿಕ ಈಸ್ಟರ್ ಸಂಭ್ರಮಕ್ಕೆ ಜನ ಚರ್ಚ್ಗಳಲ್ಲಿ ಸೇರುತ್ತಾರೆ ಶನಿವಾರ ರಾತ್ರಿ ದಿವ್ಯ ಬಲಿಪೂಜೆಗೆ ಮುಂಚಿತವಾಗಿ ಚರ್ಚ್ನ ಅಂಗಳದಲ್ಲಿ ಹಾಕಿದ ಹೊಸ ಬೆಂಕಿಯ ಸುತ್ತ ಜಮಾಯಿಸುತ್ತಾರೆ. ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸುತ್ತಾ ಆ ಬೆಂಕಿಯಿಂದ ತಮ್ಮ ಕೈಯಲ್ಲಿರುವ ದೊಡ್ಡ ಮೇಣದಬತ್ತಿಯನ್ನು ಬೆಳಗಿಸುತ್ತಾರೆ. ಅಲ್ಲಿರುವ ಭಕ್ತಾದಿಗಳು ಅದರಿಂದ ಮೇಣದಬತ್ತಿಯನ್ನು ಹೊತ್ತಿಸಿ ಚರ್ಚ್ನ ಒಳಗೆ ಪ್ರವೇಶಿಸುತ್ತಾರೆ. ಅಲ್ಲಿಯವರೆಗೆ ಚರ್ಚ್ನ ಒಳಗೆ ಗಾಢಾಂಧಕಾರ ನೆಲೆಸಿರುತ್ತದೆ. ಹೊಸ ಬೆಳಕಿನೊಂದಿಗೆ ಜನ ಒಳಪ್ರವೇಶಿಸಿದ ಬಳಿಕವೇ ಚರ್ಚ್ನ ದೀಪಗಳನ್ನು ಉರಿಸಲಾಗುತ್ತದೆ. ಬಳಿಕ ಸಂಭ್ರಮದ ಈಸ್ಟರ್ ಬಲಿಪೂಜೆ ನಡೆಯುತ್ತದೆ. ಜನ ಹೊಸ ಭರವಸೆಯೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾ ಬೆಳಕಿನ ಹಬ್ಬಕ್ಕೆ ಸ್ವಾಗತ ಕೋರುತ್ತಾರೆ.
ಮನುಕುಲದ ರಕ್ಷಣೆಯ ಶುಭ ಶುಕ್ರವಾರ
* ಸ್ಟೀವನ್ ರೇಗೊ, ದಾರಂದಕುಕ್ಕು
ಶುಭ ಶುಕ್ರವಾರ ಕ್ರೈಸ್ತರಿಗೆ ಪವಿತ್ರ ದಿನ. ಕ್ರಿಸ್ಮಸ್ ಹೇಗೆ ಯೇಸುಕ್ರಿಸ್ತನ ಜನನವನ್ನು ಸೂಚಿಸುತ್ತದೆಯೋ ಹಾಗೆ ಶುಭ ಶುಕ್ರವಾರ ಯೇಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಯೇಸುಕ್ರಿಸ್ತ ಈ ಪವಿತ್ರ ಶುಭ ಶುಕ್ರವಾರದಂದು ಪ್ರಾಣತ್ಯಾಗ ಮಾಡಿ ಮಾನವತೆಯ ಅಂತಃಕರಣವನ್ನೇ ಕಲಕಿ ಪ್ರೇಮದ ನೆಲೆಯನ್ನು ಉದ್ಭವಗೊಳಿಸಿದವರು. ಈ ಅರ್ಥದಲ್ಲಿ ಶುಭ ಶುಕ್ರವಾರ ಕ್ರೈಸ್ತ ಬಂಧುಗಳಿಗೆ ಧ್ಯಾನ ದಿನ.
ವಿಶ್ವಾದಾದ್ಯಂತ ಎಲ್ಲ ಕ್ರೈಸ್ತರು ಯೇಸುಕ್ರಿಸ್ತನ ಶಿಲುಬೆಯ ಮರಣದಲ್ಲಿ ಅಡಗಿರುವ ಅಪೂರ್ವವಾದ ತ್ಯಾಗ, ಬಲಿದಾನಗಳನ್ನು ಭಕ್ತಿಯಿಂದ ಸ್ಮರಣೆ ಮಾಡುತ್ತಾ ದೇವರನ್ನು ಕೊಂಡಾಡುವುದೇ ಈ ಆಚರಣೆಯ ಮಹತ್ವ. ಕೆಲವು ದಿನಗಳ ಹಿಂದೆ ವಿಭೂತಿ ಬುಧವಾರವನ್ನು ಆಚರಿಸಿ, ಕ್ರಿಸ್ತನ ನಿಜ ಅನುಯಾಯಿಗಳಾಗಲು ಕರೆ ನೀಡಿರುವ ಕ್ರೈಸ್ತ ಧರ್ಮಸಭೆ ಈ ತಪಸ್ಸು ಕಾಲದಲ್ಲಿ ಕ್ರೈಸ್ತ ಸಮುದಾಯದೊಡಗೂಡಿ ಕ್ರಿಸ್ತರ ಪಾಡು ಮರಣವನ್ನು ಧ್ಯಾನಿಸುತ್ತದೆ. ಬೂದಿ ಬುಧವಾರದಿಂದ ಶುಭ ಶುಕ್ರವಾದವರೆಗೆ ನಲ್ವತ್ತು ದಿನಗಳು ಉಪವಾಸ ಮಾಡುವುದು, ಧ್ಯಾನದಲ್ಲಿ ತೊಡಗುವುದು, ಧ್ಯಾನ, ಧರ್ಮ ಮತ್ತು ತ್ಯಾಗದಿಂದ ಕೂಡಿದ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದು ಇತ್ಯಾದಿಗಳು ಕ್ರೈಸ್ತರಲ್ಲಿ ಬಂದಿರುವ ಧಾರ್ಮಿಕ ಸಂಪ್ರದಾಯ.
ಕೇವಲ ೩೦ ಬೆಳ್ಳಿನಾಣ್ಯಗಳ ಆಸೆಯಿಂದ ಯೇಸುವಿನ ಶಿಷ್ಯರಲ್ಲೊಬ್ಬನಾದ ಯೂದನು ತನ್ನ ಗುರುವನ್ನು ಹಿಡಿದು ಕೊಟ್ಟು ನಂತರ ತನ್ನ ಗುರುದ್ರೋಹಕ್ಕಾಗಿ ಪಶ್ಚಾತ್ತಾಪ ಪಟ್ಟು ಆತ್ಮಹತ್ಯೆ ಮಾಡಿಕೊಂಡ ಎಂದು ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ. ಯೇಸು ಬಂಧಿತರಾದ ರಾತ್ರಿಯನ್ನು ಕ್ರೈಸ್ತರು ಬಹು ಗಂಭೀರವಾಗಿ ಆಚರಿಸುತ್ತಾರೆ. ಇದನ್ನು ‘ಪಾಸ್ಕಾ ಹಬ್ಬದ ರಾತ್ರಿ’ ಎಂದು ಕರೆಯುತ್ತಾರೆ. ಇತಿಹಾಸದಲ್ಲಿ ಇಸ್ರೇಲರು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಾಗ ದೇವರು ಅವರ ಪ್ರಾಣವನ್ನುಳಿಸಿ ದಾಸತ್ವದಿಂದ ಅವರನ್ನು ಬಿಡಿಸಿದ್ದನ್ನು ನೆನಪಿಸಿಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದೇ ಈ ರಾತ್ರಿಯ ಆಚರಣೆಯ ಉದ್ದೇಶ.
ಶುಭ ಶುಕ್ರವಾರಕ್ಕೆ ಬೈಬಲ್ ವ್ಯಾಖ್ಯೆ:
ಆ ಕಾಲದಲ್ಲಿ ಮರಣದಂಡನೆಯ ಶಿಕ್ಷೆಯನ್ನು ಶಿಲುಬೆಗೆ ಹಾಕಿ ಸಾಯಿಸುವುದರ ಮೂಲಕ ವಿಧಿಸಲಾಗುತ್ತಿತ್ತು. ಯೇಸುವಿನ ಪ್ರಗತಿಯನ್ನು ಕಾಣಲಾರದೆ ಯೆಹೂದ್ಯ ಯಾಜಕರು, ಶಾಸ್ತ್ರಿಗಳು ಅವರ ಮೇಲೆ ಉರಿದು ಬಿದ್ದು ಅವರನ್ನು ಯಾವ ರೀತಿಯಲ್ಲಾದರೂ ನಿರ್ಮೂಲ ಮಾಡಬೇಕೆಂದು ಪ್ರಯತ್ನಪಟ್ಟರು. ಕ್ರಿಸ್ತರು ಈ ಪ್ರಗತಿಯೇ ಅವರ ಅಧಿಕಾರತ್ವಕ್ಕೆ ಮುಳ್ಳಾಗಬಹುದೆಂಬ ಅನುಮಾನ ಅವರಲ್ಲಿ ಮೊಳೆಯಿತು. ಆದುದರಿಂದ ಸುಳ್ಳು ಆರೋಪಗಳನ್ನು ಯೇಸುವಿನ ತಲೆಯ ಮೇಲೆ ಹೇರಿದ ಬಳಿಕ ಪಿಲಾತನನ್ನು ಹುರಿದುಂಬಿಸಿ, ಶಿಲುಬೆಗೇರಿಸು, ಶಿಲುಬೆಗೇರಿಸು ಎಂಬ ಅಟ್ಟಹಾಸದೊಡನೆ ಮೆರೆದು ಕಡೆಗೂ ಕ್ರಿಸ್ತರ ಹೆಗಲ ಮೇಲೆ ಭಾರವಾದ ಶಿಲುಬೆಯನ್ನು ಹೊರಿಸಿದರು.
ಹೀಗೆ ಅಂಬರದಡಿಯ ಗಿರಿಕಂದರಗಳ ನಡುವೆ ಎದ್ದು ನಿಂತಿರುವ ಗೊಲ್ಗೋಥಾ ಬೆಟ್ಟವನ್ನು ಹತ್ತಿಸಿ ಯೇಸುವನ್ನು ಶಿಲುಬೆ ಮೇಲೆ ತೂಗಾಡಿಸಲು ತಾವು ಸಹ ಹೊರಟರು. ‘ಗೊಲ್ಗೋಥಾ’ದ ಗುರಿ ಮುಟ್ಟಿದ ಕ್ರಿಸ್ತರನ್ನು ಅರೆಬೆತ್ತಲೆಯಾಗಿಸಿ, ಶಿಲುಬೆ ಮರದ ಮೇಲೆ ಮಲಗಿಸಿ ಕೈಗೂ, ಕಾಲಿಗೂ ಮೊಳೆಯನ್ನು ಜಡಿದರು. ಯೇಸುವಿಗೆ ಶಿಕ್ಷೆ ವಿಧಿಸಿದ ನಂತರ ಹುರಿಮಾಡಲ್ಪಟ್ಟ ಕೊರಡೆಗಳಿಂದ (ಕೊರಡೆ ಎಂದರೆ ಚೂಪಾದ ಎಲುಬಿನ ತುಂಡುಗಳನ್ನು ತುದಿಗೆ ಸಿಕ್ಕಿಸಿದ ಚರ್ಮದ ಚಾವಟಿಗಳು ಹೊಡೆದರೆ ರಕ್ತ ಮಾಂಸ ಒಂದೇ ಏಟಿಗೆ ಹೊರಬರುತ್ತಿತ್ತು) ಬಲವಾಗಿ ಹೊಡೆದು, ನೋಯಿಸಿ ಮುಖದ ಮೇಲೆ ಗುದ್ದಿ ಅವಮಾನಿಸಿ ಅಂತಿಮವಾಗಿ ಮುಳ್ಳಿನಿಂದ ಹೆಣೆದ ಕಿರೀಟವೊಂದನ್ನು ತಲೆಯ ಮೇಲೆ ಒತ್ತಿ ಹಿಡಿದು ಕ್ರೂರವಾಗಿ ಹಿಂಸಿಸಲಾಯಿತು. ಹೀಗೆ ಅಂಗಾಲಿನಿಂದ ನಡು ನೆತ್ತಿಯವರೆಗೂ ಗಾಯಗಳು ಮತ್ತು ರಕ್ತ ಸ್ರಾವ ಎಂದು ಬೈಬಲ್ನಲ್ಲಿ ಯೇಸುವಿನ ಕಷ್ಟದ ಬಗ್ಗೆ ಉಲ್ಲೇಖಗಳಿವೆ.
ಶುಭ ಶುಕ್ರವಾರ ಆಚರಣೆಗಳು:
ಅಂದು ದೇವಾಲಯಗಳಲ್ಲಿ ಕ್ರಿಸ್ತನ ಸಾವಿನ ಸಂಬಂಧಿಸಿದ ಭೋದನೆ, ಪ್ರಸಂಗಗಳು ನಡೆಯುತ್ತವೆ. ವಿಶೇಷ ಕೀರ್ತನೆ ಗೀತೆಗಳನ್ನು ರಚಿಸಿ ಹಾಡುವುದು ಉಂಟು. ಪೂಜ್ಯ ಯೇಸುವಿನ ಹಾಡುಗಳು ಎಂಬ ಮಹಾರೂಪಕವನ್ನು ಅಭಿನಯಿಸುವುದರ ಮೂಲಕ ಶೋಕವನ್ನು ವ್ಯಕ್ತಪಡಿಸುವುದುಂಟು. ಯೇಸು ತನ್ನ ಶಿಷ್ಯರ ಪಾಪಗಳನ್ನು ತೊಳೆದು ಇತರರ ಸೇವೆಯ ಮಹತ್ವವನ್ನು ತೋರಿಸಿದಂತೆ ಹನ್ನೆರಡು ಶಿಷ್ಯರ ಪಾದ ತೊಳೆಯುವಿಕೆ ಎಂಬ ಕಾರ್ಯ ಪ್ರತಿ ಚರ್ಚ್ನಲ್ಲಿ ನಡೆಯುತ್ತದೆ.
ಶುಭಶುಕ್ರವಾರ ಉಪವಾಸ ಮಾಡುವುದು, ಕಪ್ಪು ಬಟ್ಟೆಗಳನ್ನು ಧರಿಸುವುದು, ಮೌನವೃತ ಮತ್ತು ಧ್ಯಾನದಲ್ಲಿ ನಿರಂತರಾಗಿರುವುದು, ಆ ದಿನ ದೇವಾಲಯಗಳಲ್ಲಿ ಯಾವುದೇ ಅಲಂಕಾರ ಇರುವುದಿಲ್ಲ.
ಗರ್ಭಗುಡಿಯ ಒಳಾಂಗಣವನ್ನು ಬಟ್ಟೆಯಿಂದ ಹೊದಿಸಿ, ಚರ್ಚುಗಳ ಗಂಟೆಗಳನ್ನು ಬಾರಿಸದೆ ಎಲ್ಲರೂ ಶೋಕವನ್ನು ಆಚರಿಸುತ್ತಾರೆ. ಆ ದಿನ ಮಧ್ಯಾಹ್ನ ೧೨ರಿಂದ ೩ ಗಂಟೆಯವರೆಗೂ ಕ್ರಿಸ್ತನು ಸಾಯುವ ಮುನ್ನ ಶಿಲುಬೆಯ ಮೇಲೆ ನುಡಿದರೆನ್ನಲಾದ ಏಳೂ ವಾಕ್ಯಗಳನ್ನು ವಿಸ್ತಾರವಾಗಿ ವ್ಯಾಖ್ಯಾನಿಸಿ ಧರ್ಮೋಪದೇಶ ಮಾಡಲಾಗುತ್ತದೆ.
ಇದು ರೋಮನ್ ಕಥೋಲಿಕರು, ಪ್ರಾಟೆಸ್ಟೆಂಟರು ಮತ್ತು ಎಲ್ಲ ಪಂಗಡಗಳಲ್ಲಿಯೂ ಕಂಡು ಬರುವ ಒಂದು ಮುಖ್ಯವಾದ ಸಾರ್ವತ್ರಿಕ ಆಚರಣೆ. ದೈವ ಪ್ರೀತಿ, ಮಾನವ ಪ್ರೇಮ, ಮಾನವೀಯತೆಗಳಿಂದ ಕೂಡಿದ ಸೇವಾ ಮನೋಭಾವ ಮುಂತಾದವುಗಳನ್ನು ಪ್ರತಿಪಾದಿಸಿದ ಕ್ರಿಸ್ತನ ಬೋಧನೆ, ಸಾಧನೆ, ವಿಶ್ವ ಕಲ್ಯಾಣದಲ್ಲಿ ಅಸ್ಥೆ ಇರುವ ವಿಶ್ವ ಸಮಾಜದಲ್ಲಿ ನಂಬಿಕೆ ಇರಿಸಿಕೊಂಡಿರುವ ಎಲ್ಲ ಮತಧರ್ಮೀಯರ ಗಮನ ಸೆಳೆದಿದೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಕ್ರಿಕೆಟ್ ವಿಷಯಕ್ಕೆ ಬಂದರೆ ಆತ ವಿಶ್ವದ ಅತೀ ವೇಗದ ಬೌಲರ್. ವೇದಿಕೆಯ ಮೇಲೆ ನಿಂತು ಗಿಟಾರ್ ವಿದ್ ಮೈಕ್ ಕೈಯಲ್ಲಿ ಹಿಡಿದು ನಿಂತರೆ ಆತ ಪಕ್ಕಾ ಒಬ್ಬ ರಾಕ್ ತಾರೆ. ರ್ಯಾಂಪ್ ಲೋಕಕ್ಕೆ ಬಂತು ನಿಂತರೆ ಈ ವಾಸ್ ಎ ಪ್ಯಾಶನ್ ಡಿಸೈನರ್. ಸೋ ಯಾರಾತಾ ಎಂದು ಕೇಳಿದ್ರೆ... ಆಸೀಸ್ ತಂಡದ ವೇಗದ ಬೌಲರ್ ಬ್ರೆಟ್ ಲೀ.
ಅಂದಹಾಗೆ ಆಸ್ಟ್ರೇಲಿಯದ ಮಾಜಿ ಸ್ಪೀಡ್ಸ್ಟರ್ ಬ್ರೆಟ್ ಲೀ ಎರಡನೇ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ತೀರಾ ಇತ್ತೀಚೆಗೆ ಹೊರಬಂದಿತ್ತು. ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದ ಗೆಳತಿ ಲಾನಾ ಆಂಡರ್ಸನ್ ಅವರನ್ನು ಲೀ ಖಾಸಗಿ ಸಮಾರಂಭವೊಂದರಲ್ಲಿ ಸರಳವಾಗಿ ವರಿಸಿದ್ದಾರೆ . ನ್ಯೂ ಸೌತ್ ವೇಲ್ಸ್ನ ಸೀಫೋರ್ತ್ನಲ್ಲಿರುವ ಬ್ರೆಟ್ ಲೀ ಅವರ ನೂತನ ಮನೆಯಲ್ಲಿ ಕಳೆದ ವಾರಾಂತ್ಯ ತೀರಾ ಖಾಸಗಿಯಾಗಿ ಈ ಮದುವೆ ನಡೆದಿದೆ.
೩೭ರ ಹರೆಯದ ಬ್ರೆಟ್ ಲೀ ಅವರ ಮೊದಲ ಮದುವೆ ೨೦೦೬ರಲ್ಲಿ ಎಲಿಜಬೆತ್ ಕೆಂಪ್ ಜತೆ ನಡೆದಿತ್ತು. ಬಳಿಕ ೨೦೦೮ರಲ್ಲಿ ವಿಚ್ಛೇದನವೂ ಆಗಿ ಹೋಯಿತು. ಈ ದಂಪತಿಗೆ ಪ್ರಸ್ಟನ್ ಎಂಬ ಹೆಸರಿನ ಮಗನೂ ಇದ್ದಾನೆ. ಲಾನಾ ಕಳೆದೊಂದು ವರ್ಷದಿಂದ ರೊಮ್ಯಾನ್ಸ್ ನಡೆಸುತ್ತ ಇದ್ದರು. ಕಳೆದ ಆಗಸ್ಟ್ನಲ್ಲಿ ಇದು ಮೊದಲ ಸಲ ಬಹಿರಂಗವಾಗಿತ್ತು. ಐಪಿಎಲ್ ಪಂದ್ಯಾವಳಿಯಲ್ಲಿ ಆಡುತ್ತಲೇ ಬಂದಿರುವ ಬ್ರೆಟ್ ಲೀ ಕಳೆದ ವರ್ಷ ಕೆಕೆಆರ್ ತಂಡದಲ್ಲಿದ್ದರು. ಆದರೆ ಮೊನ್ನೆಯ ಹರಾಜಿನಲ್ಲಿ ಅವರು ಯಾವ ಫ್ರಾಂಚೈಸಿಗಳಿಗೂ ಬೇಡವಾದರು. ಹೀಗಾಗಿ ಮದುವೆಯಾಗಲು ನಿರ್ಧರಿಸಿರಬೇಕು ಎನ್ನುವುದು ಅವರ ಆಪ್ತ ಗೆಳೆಯರ ಮಾತು. ಅಂದಹಾಗೆ ಲಾನಾ ಲೀಯನ್ನು ವರಿಸಲು ಇರುವ ಕಾರಣ ಏನೂ ಗೊತ್ತಾ..? ಬ್ರೆಟ್ ಲೀ ಒಬ್ಬ ಫ್ಯಾಶನ್ ಡಿಸೈನರ್ ಎನ್ನುವ ಕಾರಣಕ್ಕೆ ಎನ್ನುವುದು ಲಾನಾ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾಳೆ. ಲಾನಾ ಬೇಸಿಕಲಿ ಮೊಡೆಲ್ ಜತೆಗೆ ಲೀ ಜತೆಗೆ ಬಹಳಷ್ಟು ಫ್ಯಾಶನ್ ವರ್ಕ್ಗೆ ರ್ಯಾಂಪ್ವಾಕ್ ಕೂಡ ಮಾಡಿದ್ದಾಳೆ.
ಬ್ರೆಟ್ ಲೀ ಎನ್ನುವ ಫ್ಯಾಶನ್ ಡಿಸೈನರ್:
ಕ್ರಿಕೆಟ್ ಜಗತ್ತಿನ ಎನ್ಸೈಕ್ಲೋಪಿಡಿಯಾದಲ್ಲಿ ಬ್ರೆಟ್ಲೀ ಹೆಸರು ಕಂಗೊಳಿಸುತ್ತಿರೋದು ಕ್ರಿಕೆಟ್ ಪ್ರಿಯರಿಗೆ ಗೊತ್ತೇ ಇರೋ ವಿಚಾರ. ಆದರೆ ಬ್ರೆಟ್ ಲೀ ಕ್ರಿಕೆಟ್ ಹೊರತು ಏನೂ ಮಾಡುತ್ತಾರೆ ಎನ್ನುವ ಕೌತುಕದ ಪ್ರಶ್ನೆ ಸದಾ ಕಾಲ ಅವರ ಅಭಿಮಾನಿಗಳಿಗೆ ಕಾಡುತ್ತಾ ಇರುತ್ತದೆ. ಅದರಲ್ಲೂ ಬ್ರೆಟ್ ಲೀ ದೇಶದ ಮಹಾನ್ ಹಿನ್ನೆಲೆ ಗಾಯಕಿ ಆಶಾಜೀ ಜತೆಯಲ್ಲಿ ಹಾಡುವ ಆಲ್ಬಂಗಳಿರಲಿ...ಕೊಲ್ಕತ್ತಾದ ಚಾರಿಟಿ ಶೋಗಳಲ್ಲಿ ನಿಂತು ಕುಣಿಯುವ ದೃಶ್ಯಗಳಿರಲಿ ಎಲ್ಲವೂ ಎಲ್ಲರಿಗೂ ಗೊತ್ತಿರುವಂತದ್ದೇ ಮಾರಾಯ್ರೆ.
ಆದರೆ ಬ್ರೆಟ್ ಲೀ ಒಳಗೊಬ್ಬ ಫ್ಯಾಶನ್ ಡಿಸೈನರ್ ಇದ್ದಾನೆ ಎನ್ನುವ ವಿಚಾರ ಎಷ್ಟು ಮಂದಿಗೆ ತಾನೇ ಗೊತ್ತು. ೨೦೦೧ ಮೇ ೧ರಂದು ಬ್ರೆಟ್ ಲೀ ತನ್ನ ವಿನ್ಯಾಸದ ‘ಬ್ರೆಟ್ ಲೀ ಕಲೆಕ್ಷನ್’ ಎನ್ನುವ ಲೆಬೆಲ್ ಇರುವ ವರೈಟಿ ಬಟ್ಟೆಗಳನ್ನು ಮಾರುಕಟ್ಟೆಗೆ ಇಳಿಯಬಿಟ್ಟಿದ್ದರು. ಈ ಬಟ್ಟೆಗಳು ಸ್ಟೈಲಿಶ್, ಮೊಡರ್ನ್ ಹಾಗೂ ಕಂಪಾರ್ಟ್ಟೇಬಲ್ ಝೋನ್ಗಳಲ್ಲಿ ಇರುವಂತೆ ಬ್ರೆಟ್ ಲೀ ನಿಗಾ ವಹಿಸಿಕೊಳ್ಳುತ್ತಾರೆ. ಅದರ ಜತೆಯಲ್ಲಿ ಈ ಬಟ್ಟೆಗಳಲ್ಲಿ ಬ್ರೆಟ್ ಲೀಯ ಸಹಿ ಕೂಡ ಒಳಗೊಂಡಿದೆ.
ಅಂದಹಾಗೆ ಆಸೀಸ್ ತಂಡಕ್ಕೆ ಸೇರುವ ಮುಂಚೆನೇ ಬ್ರೆಟ್ ಲೀ ಒಬ್ಬ ಫ್ಯಾಶನ್ ಡಿಸೈನರ್. ಸಿಡ್ನಿಯ ಬರ್ಕ್ಲೇ ಮೆನ್ಸ್ ವೇರ್ ಎನ್ನುವ ಕಂಪನಿಯಲ್ಲಿ ಬ್ರೆಟ್ ಲೀ ದುಡಿಯುತ್ತಿದ್ದರು. ಅಲ್ಲಿಯ ಜ್ಞಾನ ಅವರ ಫ್ಯಾಶನ್ ಫೀಲ್ಡ್ನಲ್ಲಿ ವರ್ಕ್ ಔಟ್ ಆಯಿತು. ಆದರೆ ಅವರು ಕ್ರಿಕೆಟ್ನಲ್ಲಿ ಬೆಳೆಸಿಕೊಂಡಿದ್ದ ಆಸಕ್ತಿ ವಿಶ್ವದ ವೇಗದ ಬೌಲರ್ನ್ನಾಗಿ ಮಾಡಿತು. ಬ್ರೆಟ್ ಲೀ ವಿನ್ಯಾಸದ ಬಟ್ಟೆಗಳು ಬರೀ ಆಸೀಸ್ನ ಮಾರುಕಟ್ಟೆಯಲ್ಲಿ ಮಾತ್ರ ಆರಂಭದಲ್ಲಿ ಸಿಗುತ್ತಿತ್ತು. ಆದರೆ ಈಗ ವಿಶ್ವದ ಬಹುತೇಕ ಭಾಗಗಳಲ್ಲಿ ‘ಬ್ರೆಟ್ ಲೀ ಕಲೆಕ್ಷನ್’ ಎನ್ನುವ ರಿಟೈಲ್ ಶಾಪ್ಗಳಿವೆ. ಇದರ ಉಸ್ತುವಾರಿಯನ್ನು ಬ್ರೆಟ್ ಲೀ ಸಹೋದರ ಶೇನ್ ಲೀ ನೋಡಿಕೊಳ್ಳುತ್ತಿದ್ದಾರೆ.
ಬ್ರೆಟ್ ಲೀ ಕಲೆಕ್ಷನ್ನಲ್ಲಿ ಬಣ್ಣಗಳದ್ದು ವಿಶೇಷ ಪಾತ್ರವಿದೆ. ಅದಷ್ಟೂ ತಾಜಾ ಬಣ್ಣಗಳಂದರೆ ಲೀಗೆ ಎಲ್ಲಿಲ್ಲದ ಪ್ರೀತಿ. ಕಡು ಆಕಾಶ ನೀಲಿ, ಶುದ್ದ ಬಿಳಿ, ನೇರಳೆ, ಲೈಟ್ ಆರೆಂಜ್, ಕಪ್ಪು, ಹಸಿರು ಹೀಗೆ ಬಣ್ಣಗಳ ಆಯ್ಕೆಯಲ್ಲಿ ಬ್ರೆಟ್ ಲೀ ಬಹಳ ಹುಷಾರು. ಈ ಬಣ್ಣಗಳಿಗೆ ತಕ್ಕಂತೆ ಇಟಲಿಯನ್ ಕೋಟನ್, ನೈಲಾನ್, ಸಾಪ್ಟ್ ಕೋಟನ್ಗಳ ಜತೆಯಲ್ಲಿ ಇತರ ಬಟ್ಟೆಗಳನ್ನು ಬಳಸಿಕೊಂಡು ಡಿಸೈನಿಂಗ್ ಬಟ್ಟೆಗಳನ್ನು ತಯಾರಿಸುತ್ತಾರೆ. ಟೋಟಲಿ ಬ್ರೆಟ್ ಲೀ ಕ್ರಿಕೆಟ್ನಲ್ಲಿ ಇರಲಿ, ಫ್ಯಾಶನ್ ವರ್ಲ್ಡ್ನಲ್ಲಿ ಇರಲಿ ಎಲ್ಲಿ ಹೋದರೂ ಸುದ್ದಿ ಮಾಡುತ್ತಾರೆ ಎನ್ನೋದು ನಿಜ.
ಕನ್ನಡಕ್ಕೆ ಬಂದ್ಳೂ ಡಿಯೋಲ್ ಕುಡಿ
*ಸ್ಟೀವನ್ ರೇಗೊ, ದಾರಂದಕುಕ್ಕು
ದಕ್ಷಿಣ ಭಾರತದ ಸಿನಿಮಾ ರಂಗನೇ ಹಾಗೇ ಇಲ್ಲಿ ಯಾರು ಬಂದರೂ ಕೂಡ ಪ್ರೀತಿಯಿಂದ ಸ್ವೀಕಾರ ಮಾಡುವ ಸಿನಿ ಪ್ರಿಯರಿದ್ದಾರೆ. ಉತ್ತರ ಭಾರತ ಹಾಗೂ ಬಾಲಿವುಡ್ ಅಂಗಳದಿಂದ ಬಂದವರಿಗಂತೂ ಮೊದಲ ಮಣೆ ಸಿಕ್ಕೇ ಸಿಗುತ್ತದೆ. ಅದರಲ್ಲೂ ಸ್ಯಾಂಡಲ್ವುಡ್ ಸಿನಿಮಾವಂತೂ ಒಂದು ಹೆಜ್ಜೆ ಮುಂದೆನೇ ನಿಂತಿದೆ.
ಇಲ್ಲಿ ಉತ್ತರ ಭಾರತದಿಂದ ಬಂದವರಂತೂ ನೆಲೆ ನಿಂತು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಗ್ಗಿಕೊಂಡವರು ಜಾಸ್ತಿ.ಉತ್ತರ ಭಾರತದಿಂದ ಬಂದ ಪೂಜಾ ಗಾಂಧಿ ನಿರ್ದೇಶಕ ಯೋಗರಾಜ್ ಭಟ್ಟರ ‘ಮುಂಗಾರು ಮಳೆ’ ಸಿನಿಮಾದ ಮೂಲಕ ಬಂದವರು ಈಗಲೂ ಸ್ಯಾಂಡಲ್ವುಡ್ ಸಿನಿಮಾಗಳಲ್ಲಿಯೇ ಬದುಕು ಕಾಣುತ್ತಿದ್ದಾರೆ. ಇಂತಹ ಹತ್ತಾರು ಉದಾಹರಣೆಗಳು ಕನ್ನಡ ಸಿನಿಮಾ ಲೋಕದಲ್ಲಿ ಬೇಕಾದಷ್ಟು ಕಾಣಸಿಗುತ್ತದೆ. ಈಗ ಇಂತಹವರ ಸಾಲಿನಲ್ಲಿ ನಟಿ ಈಶಾ ಡಿಯೋಲ್ ಸೇರಿಕೊಂಡಿದ್ದಾರೆ.
ಹೌದು. ಬಾಲಿವುಡ್ ಬೆಡಗಿ ಈಶಾ ಡಿಯೋಲ್ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಶನ್ ನಿರ್ದೇಶನ ಮಾಡಿದ ‘ಕೇರಾಫ್ ಫುಟ್ಪಾತ್’ ಚಿತ್ರದ ಇನ್ನೊಂದು ಸಿಕ್ವೇಲ್ ಸೆಟ್ಟೇರುತ್ತಿದೆ. ಅಂದಹಾಗೆ ‘ಕೇರಾಫ್ ಫುಟ್ ಪಾತ್-೨’ನಲ್ಲಿ ಈಶಾ ಡಿಯೋಲ್ ನಟಿಸುವುದು ಬಹುತೇಕ ಖಚಿತಗೊಂಡಿದೆ.
ಈಶಾ ಕುರಿತು ಚಿತ್ರದ ನಿರ್ದೇಶಕ ಕಿಶನ್ ಹೇಳುವ ಮಾತು ಹೀಗಿದೆ: ಕೇರಾಫ್ ಫುಟ್ಪಾತ್-೨ ಚಿತ್ರದಲ್ಲಿ ಬಾಲಿವುಡ್ ಕನಸ್ಸಿನ ಕನ್ಯೆ ಹೇಮಾ ಮಾಲಿನಿ ನಟಿಸುವುದು ಗ್ಯಾರಂಟಿಯಾಗಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಹೇಮಾ ಮಾಲಿನಿ ಬ್ಯುಸಿಯಾಗಿರುವ ಕಾರಣ ಹೇಮಾ ಮಾಲಿನಿ ಬದಲಾಗಿ ಅವರ ಪುತ್ರಿ ಈಶಾ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹೇಮಾ ಮಾಲಿನಿ ಹಾಗೂ ನಟ ಧರ್ಮೆಂದ್ರ ಈಶಾ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಏಪ್ರಿಲ್ ೧೫ರ ನಂತರ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸುವ ಯೋಜನೆ ಇದೆ. ಕೇರಾಫ್ ಫುಟ್ಪಾತ್ನಲ್ಲಿ ಈಶಾ ಡಿಯೋಲ್ ವಕೀಲೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಕಿಶನ್ ಮಾತು.
ಕಿಶನ್ ನಿರ್ದೇಶನದ ಕೇರಾಫ್ ಫುಟ್ಪಾತ್ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಬಾಲಿವುಡ್ ನಟ ಜಾಕಿಶ್ರಾಫ್ ಕಾಣಿಸಿಕೊಂಡಿದ್ದರು. ‘ಕೇರಾಪ್ ಫುಟ್ಪಾತ್-೨’ರಲ್ಲಿ ಬಾಲಿವುಡ್ನ ಇನ್ನಷ್ಟೂ ನಟ- ನಟಿಯರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಾಲಿವುಡ್ ಅಂಗಳದಲ್ಲಿ ಈಶಾ ಡಿಯೋಲ್ ಹೇಳಿಕೊಳ್ಳುವಂತಹ ಬಿಗ್ ಹಿಟ್ ಚಿತ್ರಗಳನ್ನು ನೀಡಿಲ್ಲ. ಆದರೆ ಈಶಾ ನಟನೆಯಂತೂ ಬಾಲಿವುಡ್ನಲ್ಲಿ ಹೊಗಳಿಕೆಗೆ ಪಾತ್ರವಾಗಿರೋದು ನಿಜ. ಬಾಲಿವುಡ್ ಚಿತ್ರರಂಗದಲ್ಲಿ ಸಿಗದ ಅದೃಷ್ಟ ಸ್ಯಾಂಡಲ್ವುಡ್ ಇಲ್ಲದೇ ಹೋದರೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಿಗುವುದರಲ್ಲಿ ಸಂದೇಹ ಇಲ್ಲ.
ಕಿಶನ್ ಕೇರಾಫ್ನಲ್ಲಿ ಏನಿದೆ:
ಮಾಸ್ಟರ್ ಕಿಶನ್ ನಿರ್ದೇಶಿಸಿದ ‘ಕೇರಾಫ್ ಫುಟ್ಪಾತ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಮಕ್ಕಳ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಹೇಳಿದ್ದ ಆ ಚಿತ್ರ ಅನೇಕ ಪ್ರಶಸ್ತಿಗಳನ್ನು ಕೂಡಾ ಬಾಚಿಕೊಂಡಿತು. ಈಗ ‘ಕೇರಾಫ್ ಫುಟ್ಪಾತ್’ ಆ ಚಿತ್ರದ ಮುಂದುವರಿದ ಭಾಗ. ಹಾಗಂತ ಕತೆಯ ವಿಷಯದಲ್ಲಿ ಅಲ್ಲ. ಏಕೆಂದರೆ, ಅಲ್ಲಿ ಶಿಕ್ಷಣದ ಬಗ್ಗೆ ಹೇಳಿದ್ದರೆ ಇಲ್ಲಿ ಮಕ್ಕಳ ಕ್ರೈಂ ಬಗ್ಗೆ ಹೇಳಲು ಹೊರಟಿದ್ದಾರೆ.
ಕಿಶನ್ ಇಲ್ಲಿ ಬಾಲಾಪರಾಧಿಗಳ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಲ್ಲಿ ಕ್ರೈಂ ಮಾಡುವ ಮಕ್ಕಳು ಮುಂದೇನಾಗುತ್ತಾರೆ, ಅವರ ಮನಸ್ಥಿತಿ ಹೇಗಿರುತ್ತದೆ. ಮೂರು ವರ್ಷ ಶಿಕ್ಷೆಯಾದ ಬಳಿಕ ಅವರು ಹೇಗಾಗುತ್ತಾರೆ ... ಹೀಗೆ ಹಲವು ಅಂಶಗಳ ಕುರಿತು ‘ಕೇರಾಫ್ ಫುಟ್ಪಾತ್’ನಲ್ಲಿ ಹೇಳಲಿದ್ದಾರಂತೆ ಕಿಶನ್.
ಅಂದಹಾಗೆ, ಕಿಶನ್ಗೆ ಈ ಕಥೆಗೆ ಪ್ರೇರಣೆ ವಿದೇಶಿ ಪತ್ರಕರ್ತೆ. ತಮ್ಮ ‘ಕೇರಾಫ್ ಫುಟ್ಪಾತ್’ ಸಿನಿಮಾದ ಪ್ರದರ್ಶನಕ್ಕಾಗಿ ಈಜಿಪ್ಟ್ಗೆ ಹೋಗಿದ್ದಾಗ ಅಲ್ಲಿನ ಪತ್ರಕರ್ತೆಯೊಬ್ಬರು, ‘ಈಗ ೧೩ನೇ ವರ್ಷಕ್ಕೆ ಮಕ್ಕಳ ಕೈಯಲ್ಲಿ ಗನ್ ಇರುತ್ತೆ. ೧೪ ರಿಂದ ೧೭ ವರ್ಷದವರೆಗಿನ ಮಕ್ಕಳು ಕ್ರೈಂನಲ್ಲಿ ತೊಡಗುತ್ತಿದ್ದಾರೆ. ಈ ವಿಷಯದ ಬಗ್ಗೆ ನೀವ್ಯಾಕೆ ಸಿನಿಮಾ ಮಾಡಬಾರದು’ ಎಂದು ಕೇಳಿದರಂತೆ. ಆಗ ಕೇಳಿದ ಅವರ ಪ್ರಶ್ನೆಗೆ ಉತ್ತರವಾಗಿ ಕಿಶನ್ ಈಗ ಬಾಲಪರಾಧದ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಇಲ್ಲಿ ೧೪ ರಿಂದ ೧೭ ವರ್ಷದ ಮಕ್ಕಳ ಮನಸ್ಥಿತಿ, ಅವರು ಮಾಡುವ ಕ್ರೈಂ ಮತ್ತು ಅವರು ಮುಂದೆ ಯಾವ ರೀತಿ ಬೆಳೆಯುತ್ತಾರೆ ... ಇಂತಹ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಕಿಶನ್.
ಕಿಶನ್ ಪ್ರಕಾರ ಇದೊಂದು ವರ್ಲ್ಡ್ ಸಿನಿಮಾ. ‘ಹರೆಯದಲ್ಲಿ ಮಾಡುವ ಕ್ರೈಂ ಮುಂದೆ ಅವರ ಇಡೀ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತೆ. ಸಮಾಜ ಕೂಡಾ ಅವರನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ನಾನು ಅನೇಕ ಕೇಸ್ ಸ್ಡಡೀಸ್ ಮೂಲಕ ಹಾಗೂ ಸಂದರ್ಶನಗಳ ಮೂಲಕ ಕಥೆಗೆ ಬೇಕಾದ ಅಂಶಗಳನ್ನು ಪಡೆದುಕೊಂಡಿದ್ದೇನೆ’ ಎಂಬುದು ಕಿಶನ್ ಮಾತು. ಅಂದಹಾಗೆ ಇದು ಹಿಂದಿ ಹಾಗೂ ಕನ್ನಡದಲ್ಲಿ ತಯಾರಾಗುತ್ತಿದೆ. ಇನ್ನು ನೈಜ ಲೊಕೇಶನ್ಗಳಲ್ಲೇ ಚಿತ್ರೀಕರಣ ಮಾಡಲಿದ್ದು, ಸರ್ಕಾರದಿಂದ ಅನುಮತಿ ಕೂಡಾ ಸಿಕ್ಕಿದೆಯಂತೆ. ಚಿತ್ರದಲ್ಲಿ ಕೆಲವು ಸಚಿವರು ಕೂಡಾ ನಟಿಸುವ ಸಾಧ್ಯತೆ ಇದೆಯಂತೆ.
ನಿರ್ದೇಶನದ ಜತೆಗೆ ಕಿಶನ್ ಪ್ರಮುಖ ಪಾತ್ರ ಕೂಡಾ ಮಾಡುತ್ತಿದ್ದಾರೆ. ಜತೆಗೆ ರಾಮ್ಚರಣ್ ಎಂಬವರು ಕೂಡಾ ನಟಿಸುತ್ತಿದ್ದು, ಅವೀಕಾ ಗೋರ್ ಚಿತ್ರದ ನಾಯಕಿ. ಇನ್ನು ‘ಸಲಾಂ ಬಾಂಬೆ’ಯಲ್ಲಿ ಬಾಲನಟನಾಗಿ ನಟಿಸಿದ ಶಫೀಕ್ ಸೈಯ್ಯದ್ ಇಲ್ಲಿ ಪಾನ್ವಾಲ ಪಾತ್ರ ಮಾಡುತ್ತಿದ್ದಾರೆ. ದೇವರಾಜ್ ಪಾಂಡೆ ‘ಕೇರಾಪ್ ಫುಟ್ಪಾತ್-೨’ನ ನಿರ್ಮಾಪಕರು. ಟೋಟಲಿ ಸಿನಿಮಾವಂತೂ ಕುತೂಹಲ ಕೆರಳಿಸಿದೆ.
‘ಪಾನಿ’ ಹಿಡಿಯಲು ಹೊರಟ ಶೇಖರ್ಕಪೂರ್
* ಸ್ಟೀವನ್ ರೇಗೊ,ದಾರಂದಕುಕ್ಕು
ಭಾರತೀಯ ಮೂಲದ ಹಾಲಿವುಡ್ ಫೇಮ ನಿರ್ದೇಶಕ ಶೇಖರ್ ಕಪೂರ್ ಪಾನಿ ಮೇಲೊಂದು ಸಿನ್ಮಾವೊಂದನ್ನು ತೆರೆಗೆ ತರುತ್ತಿದ್ದಾರೆ ಎನ್ನುವ ಮಾತು ಬಹಳ ಹಿಂದೆಯೇ ಚಾಲ್ತಿಯಲ್ಲಿತ್ತು. ಕಳೆದ ಎರಡು ವರ್ಷಗಳಿಂದ ಈ ಸಿನಿಮಾವನ್ನು ಹಿರಿತೆರೆಗೆ ತರುತ್ತಾರೆ ಎಂದು ಪ್ರೇಕ್ಷಕ ಮಹಾಪ್ರಭು ಕೂಡ ಕಾದು ಕೂತಿದ್ದ. ಫೈನಲಿ ಈಗ ಶೇಖರ್ ಕಪೂರ್ ‘ಪಾನಿ’ಯನ್ನು ಆಗಸ್ಟ್ ತಿಂಗಳಿನಿಂದ ಶೂಟಿಂಗ್ ಕೆಲಸವನ್ನು ಮುಂದುವರಿಸಲಿದ್ದಾರೆ.
ಪಾನಿ ಚಿತ್ರದ ಕತೆ ಹಾಗೂ ಬಿಗ್ ಬಜೆಟ್ನಿಂದಲೇ ಚಿತ್ರ ಮೊದಲಿನಿಂದಲೂ ಸಿನಿಮಾ ಪಡಸಾಲೆಯಲ್ಲಿ ಜೋರಾಗಿ ಸದ್ದು ಮಾಡುತ್ತಿತ್ತು. ಅಂದಹಾಗೆ ಈ ಪಾನಿಗೂ ರಾಜ್ಯದ ಬಿಜಪುರಕ್ಕೂ ಬಹಳ ಹತ್ತಿರದ ನಂಟಿದೆ. ಪಾನಿಯ ನಿರ್ದೇಶಕ ಶೇಖರ್ ಕಪೂರ್ ಈ ಚಿತ್ರವನ್ನು ಹಾಲಿವುಡ್ ಮಟ್ಟದಲ್ಲಿ ತೋರಿಸಲು ಕತೆ ಆಯ್ಕೆ ಮಾಡಿದ್ದು ನೀರಿನ ಸಮಸ್ಯೆಯಿಂದ ಕೆಂಗೆಟ್ಟು ಹೋಗುತ್ತಿರುವ ನಮ್ಮ ರಾಜ್ಯದ ಬಿಜಪುರವನ್ನು ! ಕನ್ನಡದ ವಾಹಿನಿಯೊಂದು ಬಿಜಪುರದ ನೀರಿನ ಸಮಸ್ಯೆಯನ್ನು ಪದೇ ಪದೇ ತೋರಿಸುತ್ತಿzಗ ಶೇಖರ್ ಕಪೂರ್ ಪಾನಿಯ ಕುರಿತು ಜಗತಿಕ ಮಟ್ಟದಲ್ಲಿ ಜಗೃತಿ ಮೂಡಿಸಲು ಸಿನ್ಮಾ ಮಾಡಿದರೆ ಹೇಗೆ ಎಂದು ತಲೆಯನ್ನು ಕೆರೆದುಕೊಂಡರಂತೆ..! ತಕ್ಷಣ ಹೊಳೆದದ್ದು ‘ಪಾನಿ’ ಚಿತ್ರ ಎಂದು ಖುದ್ದು ಶೇಖರ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದರು.
ಕಳೆದ ೧೨ ವರ್ಷಗಳಿಂದ ಇಂತಹ ಕತೆಗಾಗಿ ಹುಡುಕಾಟ ಮಾಡುತ್ತಿz.. ಎಲ್ಲರೂ ಫ್ಯಾಂಟಸಿ ಚಿತ್ರಗಳನ್ನು ನಿರ್ಮಾಣ ಮಾಡಿ ಹಣ ದೋಚುತ್ತಾರೆ. ಆದರೆ ಎಲ್ಲರೂ ಸಮಸ್ಯೆಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಇಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅಗತ್ಯತೆ ಇದೆ. ಅದೇ ಪಾನಿಯ ಸಮ್ಮರಿ.
ಬದಲಾಗುತ್ತಿರುವ ಸ್ಟಾರ್ಕಾಸ್ಟ್:
‘ಪಾನಿ’ ಚಿತ್ರ ಆರಂಭದಲ್ಲಿ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಹಾಗೂ ಹಾಲಿವುಡ್ ನಟಿ ಕ್ರಿಸ್ಟಿನ್ ಸ್ಟಿವಾರ್ಟ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತಿತ್ತು. ಆದರೆ ಪಾನಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಹೃತಿಕ್ ಜಾಗಕ್ಕೆ ಈಗ ಬಾಲಿವುಡ್ ನವ ನಟ ಸುಶಾಂತ್ ಸಿಂಗ್ ಆಯ್ಕೆಯಾಗಿದ್ದಾರೆ. ಈ ಮೂಲಕ ಹೃತಿಕ್ಗೆ ಈ ಸಿನಿಮಾದಿಂದ ಕೈ ಬಿಡಲಾಗಿದೆ. ಪಾನಿ ಆಂಗ್ಲ ಭಾಷೆಯಲ್ಲಿ ಬಿಡುಗಡೆ ಕಂಡ ನಂತರ ಅದನ್ನು ಭಾರತೀಯ ಭಾಷೆಗಳಿಗೆ ಡಬ್ಬಿಂಗ್ ಮಾಡುವ ಯೋಜನೆ ಕೂಡ ಇದೆ ಎಂದು ನಿರ್ದೇಶಕ ಶೇಖರ್ ಕಪೂರ್ ಹೇಳಿಕೊಂಡಿzರೆ.
ಪಾನಿ ಯಾಕೆ ಡಿಫರೆಂಟ್:
ಪಾನಿಯ ಕುರಿತು ಜಗೃತಿ ಹುಟ್ಟು ಹಾಕುವ ಜತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ ಬರುವುದರಿಂದ ಪಾನಿಗೆ ಇನ್ನಷ್ಟು ಕಿಮ್ಮತ್ತು ಬರಲಿದೆ. ಶೇಖರ ಕಪೂರ್ ಬಹಳ ವರ್ಷಗಳ ನಂತರ ಬಾಲಿವುಡ್ ಹಾಗೂ ಹಾಲಿವುಡ್ ಶೈಲಿಗಳನ್ನು ಮಿಕ್ಸಿಂಗ್ ಮಾಡುತ್ತಿzರೆ. ೩೦ ಮಿಲಿಯ ಖರ್ಚುವೆಚ್ಚದಲ್ಲಿ ಪಾನಿ ಚಿತ್ರ ಸಿದ್ಧವಾಗಲಿದೆ. ಚಿತ್ರದಲ್ಲಿ ಕತೆ ಹಾಗೂ ಹಾಡುಗಳಿಗೆ ಏಕರೂಪದ ಪ್ರಾಮುಖ್ಯತೆ ನೀಡಲಾಗಿದೆ. ಯುರೋಪ್ ದೇಶದ ಬಿಗ್ ಜುವೆಲ್ಲರಿ ಕಂಪನಿ ಈ ಚಿತ್ರಕ್ಕೆ ಹಣ ಹೂಡುವ ಮಾತು ಕೇಳಿಬಂದಿದೆ. ಮತ್ತೊಂದೆಡೆ ಭಾರತದಲ್ಲಿ ಆಡ್ಲ್ಯಾಬ್ನ ಮನಮೋಹನ್ ಶೆಟ್ಟಿ ಕೂಡ ಕೈ ಜೋಡಿಸುವ ಸಾಧ್ಯತೆ ಇದೆ. ಇಂಗ್ಲೀಷ್ ಹಾಗೂ ಹಿಂದಿ ಎರಡರಲ್ಲೂ ಚಿತ್ರ ಕಾಣಿಸಿಕೊಳ್ಳುವುದರಿಂದ ಚಿತ್ರದಲ್ಲಿ ಬಾಲಿವುಡ್ ನಟ- ನಟಿಯರ ಜತೆಗೆ ಹಾಲಿವುಡ್ ಫೇಮ್ನ ನಟ-ನಟಿಯರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಈಗಾಗಲೇ ಎ.ಆರ್. ರೆಹಮಾನ್ ಸಂಗೀತ ಜೋಡಿಸುವ ಕೆಲಸ ಮಾಡಿದ್ದಾರೆ. ಉಳಿದಂತೆ ಚಿತ್ರದ ಬಹುತೇಕ ತಂತ್ರಜ್ಞಾನ ವಿದೇಶದಿಂದಲೇ ಆಮದು ಮಾಡಿಕೊಳ್ಳಲು ಚಿತ್ರತಂಡ ಯೋಜನೆ ರೂಪಿಸಿದೆ. ಟೋಟಲಿ ‘ಪಾನಿ’ಗಾಗಿ ಪ್ರೇಕ್ಷಕ ಮಹಾಪ್ರಭುವಂತೂ ಕಾಯುವ ಪರಿಸ್ಥಿತಿ ಎಲ್ಲಿಯವರೆಗೂ ಮುಂದುವರಿಯಲಿದೆ ಎನ್ನೋದು ಮಾತ್ರ ಚಿತ್ರತಂಡಕ್ಕೆ ಬಿಟ್ಟ ವಿಷ್ಯಾ.
ಪ್ರಣೀತಾಳಿಗೆ ಬಾಲಿವುಡ್ ನೋ ಎಂಟ್ರಿ !
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಅಂಗಳದ ಮ್ಯಾಜಿಕ್ಗಿರಿಯೇ ಅಂತದ್ದು. ಈ ಅಂಗಳದಲ್ಲಿ ಒಂದ್ ಸಾರಿನಾದರೂ ಬಂದು ಕುಣಿಯಬೇಕು ಎನ್ನುವ ನಟ, ನಟಿಯರೇ ಹೆಚ್ಚು. ಭಾರತೀಯ ಸಿನಿಮಾ ರಂಗದಲ್ಲಿ ಕೊನೆಯ ನಿಲ್ದಾಣ ಏನಾದರೂ ಇದ್ದಾರೆ ಅದು ಬಾಲಿವುಡ್ ಅಂಗಳ ಮಾತ್ರ ಎನ್ನುವ ಮಾತು ಚಾಲ್ತಿಯಲ್ಲಿದೆ. ಇಂತಹ ಅಂಗಳದಲ್ಲಿ ಮಿಂಚಬೇಕು ಎಂದುಕೊಂಡು ಗಂಟುಮೂಟೆ ಕಟ್ಟಿದವರು ಈಗ ಮತ್ತೆ ಹಳೆ ಗಂಡನ ಪಾದವೇ ಗತಿ ಎಂದುಕೊಂಡು ವಾಪಾಸು ಮೂಲ ಸಿನಿಮಾ ಲ್ಯಾಂಡ್ ಬಂದು ಬಿಟ್ಟಿದ್ದಾರೆ.
ಹೌದು. ಇದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ನಟಿ ಪ್ರಣೀತಾ ಅವರ ಮಾತು. ಪ್ರಣೀತಾ ಈಗಾಗಲೇ ಕನ್ನಡದಲ್ಲೂ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಮತ್ತೊಂದೆಡೆ ತಮಿಳು ಸಿನಿಮಾದಲ್ಲೂ ತಮ್ಮ ಖದರು ತೋರಿಸಿದ್ದಾರೆ. ತೆಲುಗುವಿನಲ್ಲೂ ನಟನೆಯ ಮೂಲಕ ಮನಸ್ಸು ಗೆದ್ದುಕೊಂಡಿದ್ದಾರೆ. ಬೇಸಿಕಲಿ ಕನ್ನಡದ ಹುಡುಗಿ ಪ್ರಣೀತಾರ ಆರಂಭದ ಚಿತ್ರ ನಟ ದರ್ಶನ್ ನಟಿಸಿದ ‘ಪೊರ್ಕಿ’. ಈ ಬಳಿಕ ಕನ್ನಡದಲ್ಲಿ ಬಂದ ಆಫರ್ಗಳನ್ನು ಬಹಳಷ್ಟು ಚ್ಯೂಸಿಯಾಗಿ ಆಯ್ಕೆಮಾಡಿಕೊಂಡು ಮುಂದುವರೆದ ಪ್ರಣೀತಾ ತಮಿಳು, ತೆಲುಗು ಚಿತ್ರರಂಗದಲ್ಲೂ ಒಳ್ಳೆಯ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಇಂತಹ ನಟಿಮಣಿ ಬಾಲಿವುಡ್ ಅಂಗಳದಿಂದ ಜಾರಿ ಬಿದ್ದಿದ್ದಾರೆ ಎನ್ನೋದು ಸಧ್ಯಕ್ಕೆ ಸಿಕ್ಕಿಕೊಂಡ ಮಾಹಿತಿ.
ಬಾಲಿವುಡ್ ಖ್ಯಾತ ಪ್ರತಿಭಾವಂತ ನಿರ್ದೇಶಕ ನೀರಜ್ ಪಾಂಡೆ ತನ್ನ ಮುಂದಿನ ಚಿತ್ರಕ್ಕೆ ಮುಂಬಯಿಯಲ್ಲಿ ನಟಿಯರ ಆಡಿಷನ್ ಕರೆಸಿಕೊಂಡಿದ್ದರು. ನೀರಜ್ಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಪಾಂಡೆ ಹಾಗೂ ಅಕ್ಷಯ್ ಕುಮಾರ್ ಜೋಡಿಯ ಎರಡನೇ ಚಿತ್ರ ಇದಾಗಲಿದೆ. ಈ ಹಿಂದೆ ‘ಸ್ಪೆಶಲ್ ೨೬’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿ ಪಾಂಡೆ ಬಾಲಿವುಡ್ ಅಂಗಳದಲ್ಲಿ ಮಿಂಚಿದ್ದರು. ರಿಯಾಲಿಟಿ ಕತೆಗಳ ಜತೆಗೆ ಆಡುವ ತಾಕತ್ತು ಇರುವ ನೀರಜ್ ಪಾಂಡೆ ತನ್ನ ಮುಂದಿನ ಚಿತ್ರದ ಕತೆ ಕೂಡ ರಿಯಾಲಿಟಿಗೆ ತಕ್ಕಂತೆ ಇರಲಿದೆ ಎನ್ನುವ ಕಾರಣಕ್ಕೆ ಸೌತ್ ಸಿನಿಮಾ ಇಂಡಸ್ಟ್ರಿಯ ನಟಿಯರನ್ನು ಆಯ್ಕೆ ಮಾಡುವುದಕ್ಕಾಗಿಯೇ ಈ ಆಡಿಷನ್ ಏರ್ಪಡಿಸಿದ್ದರು ಎನ್ನಲಾಗಿದೆ.
ತಪ್ಪಿಹೋಯಿತು ಅವಕಾಶ:
ಮುಂಬಯಿಯಲ್ಲಿ ನಡೆದ ಆಡಿಷನ್ನಲ್ಲಿ ನಟಿ ಪ್ರಣೀತಾ ಕೊಂಚ ತಡವಾಗಿಯೇ ಆಡಿಷನ್ಗೆ ಎಂಟ್ರಿಕೊಟ್ಟಿದ್ದರು. ಆದರೆ ಈ ವಿಚಾರದಲ್ಲಿ ಚಿತ್ರತಂಡ ಮಾಫಿ ಮಾಡಿತ್ತು. ಅದಕ್ಕೂ ಮುಖ್ಯವಾಗಿ ಪ್ರಣೀತಾರಿಗೆ ಹಿಂದಿ ಭಾಷೆಯ ಮೇಲೆ ಹಿಡಿತ ಇಲ್ಲ ಎನ್ನುವ ಕಾರಣಗಳಿಗೆ ಚಿತ್ರದಿಂದ ಕೈಬಿಡಲಾಗಿದೆ ಎನ್ನುವುದು ಚಿತ್ರತಂಡದಿಂದ ಹೊರ ಬಂದ ಮಾಹಿತಿ. ಇದೇ ಚಿತ್ರಕ್ಕೆ ನೀರಜ್ ಪಾಂಡೆಯ ಈ ಹಿಂದಿನ ಸ್ಪೆಶಲ್-೨೬ ಚಿತ್ರದ ನಾಯಕಿ ಕಾಜಲ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಬಾಲಿವುಡ್ಗೆ ಹೋಗುವ ಕನಸ್ಸು ಪ್ರಣೀತಾರಿಂದ ಜಾರಿ ಬಿದ್ದಿದೆ ಎನ್ನೋದು ಈ ಮೂಲಕ ಸ್ವಷ್ಟವಾಗಿದೆ. ಇತ್ತ ಕಡೆ ತೆಲುಗು ಸಿನಿಮಾದಲ್ಲೂ ಪ್ರಣೀತಾದ ದೆಸೆ ಕೂಡ ವಕ್ರವಾಗಿದೆ. ತೆಲುಗಿನ ಜೂನಿಯರ್ ಎನ್ಟಿಆರ್ ನಟಿಸುತ್ತಿರುವ ‘ರಬಾಸಾ’ ಚಿತ್ರದಲ್ಲಿ ಸಮಂತಾ ಲೀಡ್ ನಟಿಯಾಗಿ ಕಾಣಿಸಿಕೊಂಡರೆ ಪ್ರಣೀತಾ ಸೆಕೆಂಡ್ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಮತ್ತೊಂದೆಡೆ ಪವನ್ ಕಲ್ಯಾಣ್ ನಟಿಸಲಿದ್ದ ಗಬ್ಬರ್ ಸಿಂಗ್-೨ ಚಿತ್ರನೂ ಕುಂಟುವ ಚಾನ್ಸ್ ಜಾಸ್ತಿಯೇ ಇದೆ. ಕಾರಣ ಜನಸೇನಾ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಪವನ್ ಕಲ್ಯಾಣ ಇನ್ನೂ ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರಾ ಎನ್ನುವುದು ಪ್ರಶ್ನೆಯಾಗಿ ಕಾಡಲು ಆರಂಭವಾಗಿದೆ. ಇದೇ ಕಾರಣದಿಂದ ಗಬ್ಬರ್ ಸಿಂಗ್-೨ ಮತ್ತಷ್ಟೂ ತಡವಾಗಿ ಬರುವ ಸಾಧ್ಯತೆಯೇ ಜಾಸ್ತಿಯಾಗಿದೆ. ಟೋಟಲಿ ಹಿಂದಿ ಭಾಷೆಯಲ್ಲಿ ಕೊಂಚ ಪಳಗಿದರೇ ಸಾಕಿತ್ತು ಪ್ರಣೀತಾ ಬಾಲಿವುಡ್ ಎಂಟ್ರಿ ಗ್ಯಾರಂಟಿಯಾಗಿ ಉಳಿದುಬಿಡುತ್ತಿತ್ತು ಎನ್ನುವ ಮಾತುಗಳು ಈಗ ಎಲ್ಲೆಡೆ ಹರಿದಾಡುತ್ತಿದೆ.
ಬಾಲಿವುಡ್ನಲ್ಲಿ ಗೋವಾದ ಫೆನ್ನಿ !
* ಸ್ವೀವನ್ ರೇಗೊ, ದಾರಂದಕುಕ್ಕು
ಅಸುಪಾಸು ಆರವತ್ತು.. ಆದರೂ ಸಂಗೀತದ ಹುಚ್ಚು ಒಂಚೂರು ಕಡಿಮೆಯಾಗಿಲ್ಲ. ಮುಖದಲ್ಲಿ ಸಣ್ಣಗೆ ನೆರಿಗೆಯ ಲಕ್ಷಣಗಳು ಕಾಣಿಸಿಕೊಂಡರೂ ಕೂಡಾ ವಾಯ್ಸ್ನಲ್ಲಿ ಕೊಂಚನೂ ವೇರಿಯೇಶನ್ ಬಂದಿಲ್ಲ. ಕೈಗೆ ಮೈಕ್ ವಿದ್ ಗಿಟಾರ್ ಕೊಟ್ಟು ಬಿಟ್ಟ್ರೆ ಸಾಕು ಸ್ಟೇಜ್ನಲ್ಲಿಯೇ ರಾಕ್, ಪಾಪ್, ಇಂಡಿಯನ್ ಫ್ಯೂಶನ್ ಎಲ್ಲವೂ ಬಂದು ಬಿಡುತ್ತದೆ.
ಎಸ್. ಇದು ಮದಿರೆಯ ಕುವರ ಭಾರತೀಯ ಪಾಪ್ ಲೋಕದ ದೊರೆ ರೆಮೋ ಫೆರ್ನಾಂಡೀಸ್ ಇಂಟರ್ಡಕ್ಷನ್ ಮಾರ್ಕ್. ಅಂದಹಾಗೆ ರೆಮೋ ಫೆರ್ನಾಂಡೀಸ್ ಈಗ ಬಾಲಿವುಡ್ ಸಂಗೀತ ಲೋಕಕ್ಕೆ ಮರಳಿ ಸೇರಿದ್ದಾರೆ. ಗೋವಾದ ಖ್ಯಾತ ಬೌನ್ಸಿ ಹಾಡು ‘ಜೋಯೆ ರಾಜನ್ಸ್ ಲವ್ ಯೂ ಸೋನಿಯೋ’ ಹಾಡು ರೆಮೋ ಧ್ವನಿಯಲ್ಲಿ ಬಾಲಿವುಡ್ನಲ್ಲಿ ಮೊಳಗಲಿದೆ. ಈ ಹಿಂದೆ ನಟ ಅಜೇಯ್ ದೇವಗನ್ ಹಾಗೂ ಕಾಜಲ್ ಅಭಿನಯದ ‘ಪ್ಯಾರ್ ತೋ ಹೋನಾ ಯೀತಾ...’ ಟೈಟಲ್ ಟ್ರ್ಯಾಕ್ ಹಾಡಿಕೊಂಡು ಹೊರಟ ರೆಮೋ ಮತ್ತೆ ಬಾಲಿವುಡ್ ಪಾಠ ಶಾಲೆಗೆ ಕಾಲಿಟ್ಟಿಲ್ಲ. ಮದಿರೆ ನಾಡಿನಲ್ಲಿಯೇ ಉಳಿದುಕೊಂಡು ಸ್ಟೇಜ್ ಶೋಗಳನ್ನು ಕೊಡುತ್ತಾ ಕಾಲ ಕಳೆಯುತ್ತಿದ್ದರು.
ಈಗ ರೆಮೋ ಬಾಲಿವುಡ್ನ ಮಾಜಿ ನಟಿ ರತಿ ಅಗ್ನಿಹೋತ್ರಿಯ ಪುತ್ರ ತನುಜ್ ವೀರ್ವಾನಿ ಹಾಗೂ ಮಿಸ್ ಇಂಡಿಯಾ ನೇಹಾ ನಟಿಸುತ್ತಿರುವ ಚಿತ್ರದಲ್ಲಿ ರೆಮೋ ಹಾಡಲಿದ್ದಾರೆ. ಈ ಹಾಡು ಗೋವಾದ ಟಾಪ್ ಟೆನ್ ಬೌನ್ಸಿ ಹಾಡುಗಳಲ್ಲಿ ಒಂದಾಗಿದೆ. ಈ ಚಿತ್ರದ ಬಹುಭಾಗ ಗೋವಾದಲ್ಲಿ ಚಿತ್ರೀಕರಣವಾಗಲಿದೆ. ಚಿತ್ರವನ್ನು ಬಾಲಿವುಡ್ ನಿರ್ದೇಶಕ ಜೋಯಿ ರಾಜನ್ ಹೇಳುವುದಿಷ್ಟು: ಇದೆಲ್ಲವೂ ರತಿ ಅಗ್ನಿಹೋತ್ರಿಯ ಐಡಿಯಾ. ಚಿತ್ರದ ಮುಖ್ಯ ಪಾತ್ರ ಗೋವಾದ ಅಸುಪಾಸಿನಲ್ಲಿರುವುದರಿಂದ ಅದಕ್ಕೆ ತಕ್ಕಂತೆ ಗೋವಾದ ಶೈಲಿಯ ಹಾಡು ಇರಲಿ ಎಂದಿದ್ದರು. ಅದಕ್ಕಾಗಿ ಗೋವಾದ ಹಾಡುಗಾರರ ಹುಡುಕಾಟ ನಡೆಯಿತು. ಆದರೂ ಕೊನೆಗೆ ಮಧುರ್ ಭಂಡಾರ್ಕರ್ ಅವರ ಸಲಹೆ ಮೇರೆಗೆ ರೆಮೋರಿಂದ ಹಾಡಿಸುವ ಕೆಲಸ ನಿರ್ಧಾರವಾಯಿತು ಎನ್ನುತ್ತಾರೆ ಅವರು.
ನಿರ್ದೇಶಕ ಜೋಯಿ ಮುಂದುವರಿಸಿಕೊಂಡು ಹೇಳುವುದು: ಚಿತ್ರಕ್ಕೆ ಈಗಾಗಲೇ ವಿಪಿನ್ ಆಯ್ಕೆಯಾಗಿದ್ದರು. ಆದರೆ ರೆಮೋ ಚಿತ್ರದ ಒಂದು ಹಾಡಿಗೆ ಅತಿಥಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಗೋವಾದ ಕೊಂಕಣಿ ಸಾಹಿತಿ ಸಾಯಿ ಪಲ್ನೋಡಿಕರ್ ಅವರ ಕೊಂಕಣಿ ಹಾಡಿಗೆ ಹಿಂದಿ ಸಾಹಿತ್ಯ ಪೋಣಿಸುವ ಕೆಲಸವನ್ನು ಅಭಿಜಿತ್ ದೇಶ್ಪಾಂಡೆ ಮಾಡಲಿದ್ದಾರೆ. ಈ ತಿಂಗಳ ಕೊನೆಯ ವಾರದಲ್ಲಿ ಚಿತ್ರದ ಹಾಡು ಕೂಡ ರೆಡಿಯಾಗಲಿದೆಯಂತೆ ! ಟೋಟಲಿ ರೆಮೋ ಫೆರ್ನಾಂಡೀಸ್ ಬಾಲಿವುಡ್ಗೆ ರೀ-ಎಂಟ್ರಿ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿರುವುದು ನಿಜ.
ಮಿಡಲ್ ಕ್ಲಾಸ್ ಭಾರತೀಯ ಯುವಜನತೆ ಬೇಗನೆ ಆಕರ್ಷಿತವಾಗುವ ಆಂಗ್ಲ ಭಾಷೆಯಲ್ಲಿ ಹೆಚ್ಚು ಹಾಡುಗಳನ್ನು ಬರೆಯುವ ರೆಮೋ ಬಾಲಿವುಡ್ನಲ್ಲಿ ೧೯೮೭ರಲ್ಲಿ ಬಿಡುಗಡೆಯಾದ ‘ಜ್ವಾಲಾ’ದ ಟೈಟಲ್ ಸಾಂಗ್ನಿಂದ ಸಿನಿಮಾ ಲ್ಯಾಂಡ್ಗೆ ಡೈರೆಕ್ಟ್ ಎಂಟ್ರಿ ಪಡೆದವರು. ನಂತರ ಬಂದ ಬಾಂಬೆ ಸಿನಿಮಾದ ‘ಹಮ್ಮಾ ಹಮ್ಮಾ ’ಹಾಡು. ‘ಕಾಮೋಶಿ’ ಸಂಗೀತ ಸಂಯೋಜನೆಯ ನಂತರ ಬಾಲಿವುಡ್ನಲ್ಲಿ ಹಾಡುವುದನ್ನು, ಬರೆಯುವುದನ್ನು, ಸಂಗೀತ ಸಂಯೋಜನೆ ಮಾಡುವುದನ್ನು ಕಡಿಮೆ ಮಾಡಿದರು.
ತನ್ನ ಆಸಕ್ತಿಯ ಗಿಟಾರ್ ಜತೆಜತೆಗೆ ಸಿತಾರ್ ಹಾಗೂ ಕೊಳಲು ಕೂಡ ಅಧ್ಯಯನ ಮಾಡಿ ನುಡಿಸುವುದರಲ್ಲಿ ರೆಮೋ ಯಾವಾಗಲೂ ತಲ್ಲೀನ. ತನ್ನ ಆಲ್ಬಂಗಳಾದ ‘ಗೋವನ್ ಕ್ರೇಜಿ’ ‘ಓಲ್ಡ್ ಗೋವನ್ ಗೋಲ್ಡ್’ ಮಾದಕ ವ್ಯಸನದ ವಿರೋಧದ ‘ಪ್ಯಾಕ್ ದ್ಯಾಟ್ ಸ್ನ್ಮಾಕ್’ ಅತೀ ಹೆಚ್ಚು ಬೇಡಿಕೆ ಕುದುರಿಸಿದ ಆಲ್ಬಂ ‘ ಬಾಂಬೆ ಸಿಟಿ’ ಸುರಕ್ಷಿತ ಲೈಂಗಿಕತೆಯ ಕುರಿತು ಜಾಗೃತಿ ಹುಟ್ಟು ಹಾಕಿದ ಆಲ್ಬಂ ‘ಎವರಿ ವನ್ ವಾಂಟ್ಸ್ ಟು’, ೨೦೦೦ರಲ್ಲಿ ಹಿಂದಿಯಲ್ಲಿ ಬಿಡುಗಡೆಯಾದ ಪಾಪ್ ಆಲ್ಬಂ ‘ಓ ಮೇರಿ ಮುನ್ನಿ’ ರೆಮೋ ರ ಸೂಪರ್ ಹಿಟ್ ಪಟ್ಟಿಯಲ್ಲಿ ಸೇರಿಕೊಂಡಿದೆ. ಈಗಲೂ ವಿಶ್ವದಾದ್ಯಂತ ಹಲವಾರು ಮ್ಯೂಸಿಕ್ ನೈಟ್ಗಳು, ಸ್ಟೇಜ್ ಪ್ರೋಗ್ರಾಂಗಳಿಂದ ನಿರಂತರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾರೆ.
ರೆಮೋ ಹೇಳಿದ ಗಿಟಾರ್ ಕತೆ:
ರೆಮೋಗೆ ಅದು ಮೂರರ ವಯಸ್ಸು , ತಂದೆ ಬೆನಾರ್ಡೋ ಜತೆಯಲ್ಲಿ ಒಂದ್ ದಿನ ಪಣಜಿಯಲ್ಲಿ ಶಾಫಿಂಗ್ ಹೋಗುತ್ತಿದ್ದಾಗ ಗಿಟಾರ್ ಥಟ್ ಅಂತಾ ಕಣ್ಣಿಗೆ ಬಿದ್ದು ಬಿಟ್ಟಿತು. ನಾನು ತಂದೆಯನ್ನು ಗಿಟಾರ್ ತೆಗೆದುಕೊಡಿ ಎಂದು ಕೇಳಿಕೊಂಡಾಗ ಅವರು ತಕ್ಷಣ ತೆಗೆದುಕೊಡಲಿಲ್ಲ. ಮಗನ ಹಟ ಜಾಸ್ತಿಯಾಯಿತು. ಕೊನೆಗೆ ತಂದೆ ಶರಣಾಗಿ ಗಿಟಾರ್ ತೆಗೆಸಿ ಕೊಟ್ರು. ಆದರೆ ಅದನ್ನು ಯಾವ ರೀತಿ ನುಡಿಸುವುದು ಅಂತಾ ಅರ್ಥ ಆಗುತ್ತಿರಲಿಲ್ಲ. ತಂದೆ ಒಳ್ಳೆಯ ಗಿಟಾರಿಸ್ಟ್ ಆಗಿದ್ದರು. ಅವರನ್ನು ಹೋಗಿ ಕೇಳುವುದು ಎಂದರೆ ಒಂಥಾರ ಮುಜುಗರದ ವಿಚಾರವಾಯಿತು. ಕೊನೆಗೆ ತಾಯಿ ಲೂಯಿಸಾ ಫೆರ್ನಾಂಡೀಸ್ ಮೂಲಕ ತಂದೆಯಿಂದ ಗಿಟಾರ್ ಪಾಠ ಆರಂಭವಾಯಿತು. ಅಂದಿನಿಂದ ದಿನಾಲೂ ಗಿಟಾರ್ ಕುರಿತು ತಂದೆಯಿಂದ ಒಂದೊಂದು ವಿಚಾರಗಳು ಹೊರ ಬರುತ್ತಿದ್ದವು. ಅಲ್ಲಿಂದ ಗಿಟಾರ್ ಕುರಿತು ರೆಮೋರ ಆಸಕ್ತಿಗಳು ನಿಧಾನವಾಗಿ ಯಾರಿಗೂ ತಿಳಿಯದಂತೆ ಮನಸ್ಸಿನೊಳಗೆ ಜಾಗ ಪಡೆದುಕೊಂಡಿತು. ಈಗ ವಿದ್ ಔಟ್ ಗಿಟಾರ್ ರೆಮೋ ನೋ ಮೋರ್ ಎಂದೇ ಹೇಳಿ ಬಿಡಬಹುದು ಎನ್ನುವುದು ಪಾಪ್ ಗಾಯಕ ರೆಮೋ ಫೆರ್ನಾಂಡೀಸ್ನ ಗುಪ್ತ ಮಾತು.
......
ಚಿತ್ರ: ರೆಮೋ ಫರ್ನಾಂಡೀಸ್
......
Tuesday, April 8, 2014
ಬಾಲಿವುಡ್ನಲ್ಲಿ ಹೊಸ ಟೈಗರ್
*ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ನಲ್ಲಿ ಹೊಸ ಹುಡುಗರು ಜೋರಾಗಿ ಸೌಂಡ್ ಮಾಡುತ್ತಿದ್ದಾರೆ. ಇತ್ತೀಚಿಗಿನ ಬೆಳವಣಿಗೆಯಲ್ಲಿ ಅವರ ಚಿತ್ರಗಳೇ ಬಾಲಿವುಡ್ ಬಾಕ್ಸಾಫೀಸ್ನ ಲೆಕ್ಕಚಾರವನ್ನು ಉಲ್ಟಾಪಲ್ಟಾ ಮಾಡುತ್ತಿದೆ. ಇಂತಹ ಟ್ರೆಂಡ್ನಲ್ಲಿಯೇ ಈಗ ಟೈಗರ್ ಶ್ರಾ- ಕಾಲಿಟ್ಟಿದ್ದಾರೆ.
ಬಾಲಿವುಡ್ನ ಹಿರಿಯ ನಟ ಜಾಕೀಶ್ರಾ- ಅವರ ಪುತ್ರನೇ ಈ ಟೈಗರ್ ಶ್ರಾ-. ಬಾಲಿವುಡ್ ಬಿಗ್ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾಗಿರುವ ಸಾಜಿದ್ ನಾಡಿಯವಾಲಾ ಅವರು ನಿರ್ಮಾಣ ಮಾಡುತ್ತಿರುವ ‘ಹೀರೋಪತ್ತಿ’ಯಲ್ಲಿ ಟೈಗರ್ ಶ್ರಾ- ಸಿನಿಮಾ ಲ್ಯಾಂಡ್ಗೆ ಲಾಂಚ್ ಆಗುತ್ತಿದ್ದಾರೆ. ಅಂದಹಾಗೆ ೧೯೮೩ರಲ್ಲಿ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರ ನಿರ್ದೇಶನದಲ್ಲಿ ಹೊರಬಂದ ‘ಹೀರೋ’ ಚಿತ್ರದ ಮೂಲಕ ಜಾಕೀಶ್ರಾ- ನಾಯಕನಾಗಿ ಹೊರಬಂದಿದ್ದರು. ಈಗ ಇಂತಹ ಟೈಟಲ್ ಕಾರ್ಡ್ ಹೊಂದಿರುವ ಹೀರೋ ಪತ್ತಿಯ ಮೂಲಕ ಅವರ ಪುತ್ರ ಟೈಗರ್ ಶ್ರಾ- ಸಿನಿಮಾ ರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ ಎನ್ನೋದು ವಿಶೇಷ.
ಹೀರೋಪತ್ತಿಯಲ್ಲಿ ಹೀರೋ ಕತೆ:
ನಿರ್ದೇಶಕ ಘಾಯ್ ಅವರ ‘ಹೀರೋ’ ಚಿತ್ರದಲ್ಲಿ ಪ್ರೀತಿ, ಪ್ರಣಯಕ್ಕೆ ಜಾಗ ನೀಡಲಾಗಿತ್ತು. ಇದೇ ಕತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ‘ಹೀರೋಪತ್ತಿ’ಯಲ್ಲಿ ಸಾಹಸದ ಜತೆಯಲ್ಲಿ ಪ್ರೀತಿ, ಪ್ರಣಯಕ್ಕೆ ಜಾಗ ಕೊಡಲಾಗಿದೆ ಎನ್ನೋದು ಚಿತ್ರ ತಂಡ ಈಗಾಗಲೇ ಸಾಮಾಜಿಕ ತಾಣಗಳಿಗೆ ಬಿಟ್ಟ ಸಿನಿಮಾದ ಟ್ರೇಲರ್ನಿಂದ ಹೊರಬರುತ್ತಿರುವ ಮಾಹಿತಿ. ಇದರ ಜತೆಯಲ್ಲಿ ಟೈಗರ್ ಶ್ರಾ- ವಿಭಿನ್ನ ಮಾದರಿಯ ಸಾಹಸ ಕೆಲಸಕ್ಕೆ ಇಳಿದು ಹೋಗಿದ್ದಾರೆ. ಬಾಲಿವುಡ್ಗೆ ಈ ಚಿತ್ರದ ಮೂಲಕ ಹೊಸ ಆಕ್ಷನ್ ನಟನೊಬ್ಬ ದಕ್ಕುವಂತಿದೆ ಎನ್ನೋದು ಚಿತ್ರದ ಪ್ರೋಮೊಗಳನ್ನು ನೋಡಿದ ಸಿನಿ ಪ್ರಿಯರ ಮಾತು.
ಅಂದಹಾಗೆ ಸಬೀರ್ ಖಾನ್ ಚಿತ್ರದ ನಿರ್ದೇಶಕನ ಹೊಣೆ ಹೊತ್ತಿದ್ದಾರೆ. ನಾಯಕಿಯಾಗಿ ರೂಪದರ್ಶಿ ಕೀರ್ತಿ ಸಾನೋನ್ ಇದ್ದಾರೆ. ಟೈಗರ್ ಶ್ರಾ- ಈ ಚಿತ್ರಕ್ಕಾಗಿ ವಿಶೇಷ ರೀತಿಯ ಕಸರತ್ತುಗಳನ್ನು ಮಾಡುವ ಮೂಲಕ ಸಿಕ್ಸ್ ಪ್ಯಾಕ್ ಬಾಡಿ ಟೋನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ಚಿತ್ರದಲ್ಲಿ ವಿಶೇಷ ಸ್ಟಂಟ್ಗಳನ್ನು ಜೋಡಿಸಲಾಗಿದೆ ಎನ್ನೋದು ಚಿತ್ರ ತಂಡದ ಮಾತು. ಚಿತ್ರ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಮುಹೂರ್ತ ಕಂಡು ಚಿತ್ರೀಕರಣ ಆರಂಭ ಮಾಡಿತ್ತು.
ಈಗ ಭರ್ತಿ ಒಂದು ವರ್ಷದ ನಂತರ ಥಿಯೇಟರ್ಗೆ ಬರುವ ಭಾಗ್ಯವನ್ನು ಪಡೆದುಕೊಂಡಿದೆ. ಈ ಹಿಂದೆ ಚಿತ್ರ ಪ್ರೇಮಿಗಳ ದಿನದಂದು ಚಿತ್ರಮಂದಿರಕ್ಕೆ ಬರುತ್ತದೆ ಎನ್ನುವ ಭವಿಷ್ಯವನ್ನು ಚಿತ್ರತಂಡ ಹೇಳಿತ್ತು. ಆದರೆ ಬಾಲಿವುಡ್ನಲ್ಲಿ ಎರಡು- ಮೂರು ತಿಂಗಳುಗಳಿಂದ ತೆರೆಗೆ ಬರುತ್ತಿರುವ ಬಾಲಿವುಡ್ ಚಿತ್ರಗಳಿಂದ ‘ಹೀರೋಪತ್ತಿ’ ನಿಧಾನಗತಿಯನ್ನು ಪಡೆದುಕೊಂಡಿತು ಎನ್ನುವ ಮಾತಿದೆ.
ಟೈಗರ್ ಶ್ರಾ-ಗೆ ಆಮೀರ್ ಖಾನ್ ಬಲ:
ತೀರಾ ಇತ್ತೀಚೆಗೆ ಬಾಲಿವುಡ್ -ರ್ಪೆಕ್ಟ್ ನಟ ಎಂದೇ ಬಿಂಬಿತ ಆಮೀರ್ ಖಾನ್ ಟೈಗರ್ ಶ್ರಾ- ಅವರು ನಟಿಸಿದ ಹೀರೋಪತ್ತಿಯ ಟ್ರೈಲರ್ ಲಾಂಚ್ ಮಾಡುವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುಖ್ಯವಾಗಿ ಆಮೀರ್ ಖಾನ್ ಹಾಗೂ ಜಾಕಿಶ್ರಾ- ಒಳ್ಳೆಯ ಗೆಳೆಯರು. ಇಬ್ಬರು ಎಂದಿಗೂ ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿಲ್ಲ ಆದರೂ ಗೆಳೆಯನ ಪುತ್ರನ ಚಿತ್ರಕ್ಕಾಗಿ ತಾನು ಬಂದಿದ್ದೇನೆ. ಚಿತ್ರದ ಟ್ರೈಲರ್ ನನಗೆ ಬಹಳವಾಗಿ ಹಿಡಿಸಿದೆ. ಅದಕ್ಕೂ ಮುಖ್ಯವಾಗಿ ಟೈಗರ್ಗೆ ಒಳ್ಳೆಯ ಭವಿಷ್ಯವಿದೆ ಎನ್ನುವ ಮೂಲಕ ಆಮೀರ್ ಖಾನ್ ಟೈಗರ್ ಪಾಲಿಗೆ ಗಾಡ್-ದರ್ ಆಗಿ ಮೆರೆದಿದ್ದಾರೆ.
ಹೀರೋಪತ್ತಿಗೆ ತೆಲುಗು ಟಚ್?:
ಬಾಲಿವುಡ್ನಲ್ಲಿ ‘ಹೀರೋಪತ್ತಿ’ಯ ಟ್ರೈಲರ್ ಬಿಡುಗಡೆ ಕಾಣುತ್ತಿದ್ದಂತೆ ಟಾಲಿವುಡ್ನಲ್ಲೂ ಟಾಕ್ ಆರಂಭವಾಗಿದೆ. ಇದಕ್ಕೆ ಬಹಳ ಮುಖ್ಯವಾದ ಕಾರಣ ಏನಪ್ಪಾ ಅಂದರೆ ತೆಲುಗಿನಲ್ಲಿ ಬಂದ ‘ಪರುಗು’ ಚಿತ್ರದಿಂದ ಪ್ರೇರಣೆಗೊಂಡಿದೆ ಎನ್ನುವ ಗುಸುಗುಸು ಹರಡಿಕೂತಿದೆ. ೨೦೦೮ರಲ್ಲಿ ಅಲ್ಲು ಅರ್ಜುನ್ ಹಾಗೂ ಶೀಲಾ ನಟಿಸಿದ ಚಿತ್ರ ‘ಪರುಗು’ಚಿತ್ರದ ಕೆಲವೊಂದು ದೃಶ್ಯಗಳನ್ನು ಹೀರೋಪತ್ತಿಯಲ್ಲಿ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಆದರೆ ಚಿತ್ರತಂಡ ಈ ವಿಚಾರವನ್ನು ಒಪ್ಪಲು ಮಾತ್ರ ರೆಡಿಯಾಗಿ ನಿಂತಿಲ್ಲ ಎನ್ನುವ ಮಾತುಗಳು ಕೂಡ ಕೇಳಿಸಿಕೊಂಡಿದೆ. ಅಂದಹಾಗೆ ‘ಪರುಗು’ ಹಿಂದಿ ಚಿತ್ರದ ಆವತರಣಿಕೆಯ್ನು ಬಾಲಿವುಡ್ ನಿರ್ದೇಶಕರೊಬ್ಬರು ತೆಗೆದುಕೊಂಡು ಹೋಗಿದ್ದರು. ಆದರೆ ಚಿತ್ರವನ್ನಂತೂ ಮಾಡಿಲ್ಲ ಎನ್ನುವ ಮಾತನ್ನು ಟಾಲಿವುಡ್ ಜಗತ್ತು ಮಾತನಾಡಿಕೊಳ್ಳುತ್ತಿದೆ. ಟೋಟಲಿ ಬಾಲಿವುಡ್ ಅಂಗಳದಲ್ಲೊಬ್ಬ ಆಕ್ಷನ್ ಹೀರೋವಂತೂ ದಕ್ಕಿಂತಾಗಿದೆ. ಚಿತ್ರ ಮೇ ತಿಂಗಳ ಮಧ್ಯಭಾಗದಲ್ಲಿ ಬಿಡುಗಡೆ ಕಾಣುತ್ತಿದೆ. ಈ ಬಳಿಕವಷ್ಟೇ ಚಿತ್ರದ ಕುರಿತು ಮತ್ತಷ್ಟೂ ಮಾತು-ಕತೆಗಳು ಹುಟ್ಟಬಹುದು.
Monday, April 7, 2014
ಬಾಲಿವುಡ್ನಲ್ಲಿ ‘ಘಾಯ್’ ಹವಾ
* ಸ್ಟೀವನ್ ರೇಗೊ, ದಾರಂದಕುಕ್ಕು
ಒಂದಲ್ಲ ಎರಡಲ್ಲ ಬರೋಬರಿ ನಾಲ್ಕು ವರ್ಷಗಳಿಂದ ನಿರ್ದೇಶಕ ಸುಭಾಷ್ ಘಾಯ್ ಅವರ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿಲ್ಲ. ಬಹಳ ನಿರೀಕ್ಷೆಯಿಂದ ಹುಟ್ಟಿಕೊಂಡ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ ಸಿನಿಮಾ ‘ಯುವರಾಜ’ನೇ ಘಾಯ್ ಸಾಹೇಬ್ರು ಬಾಲಿವುಡ್ಗೆ ಕೊಟ್ಟ ಕೊನೆಯ ಸಿನಿಮಾ ಎನ್ನುವುದು ಅವರ ಅಭಿಮಾನಿಗಳಿಗೆ ಸರಿಯಾಗಿ ಗೊತ್ತಿದೆ.
ಆದರೂ ಸುಭಾಷ್ ಘಾಯ್ ಎನ್ನುವ ಮಹಾನ್ ಸಿನಿಮಾ ಮಾಂತ್ರಿಕ ಯಾಕೆ ಸುಮ್ಮನೆ ನಾಲ್ಕು ವರ್ಷ ಕೂತಿದ್ದರು ಎನ್ನುವುದು ಅವರ ಆಪ್ತ ವಲಯಕ್ಕೆ ಮಾತ್ರ ಗೊತ್ತು. ಈ ನಾಲ್ಕು ವರ್ಷಗಳಲ್ಲಿ ಘಾಯ್ ಕೂತು ಮಾಡಿದ ಅದ್ಬುತ ಪ್ರಯತ್ನವೇ ‘ಕಾಂಚಿ ’ ಸಿನಿಮಾ. ಅಂದಹಾಗೆ ಚಿತ್ರದ ಹೆಸರೇ ‘ಕಾಂಚಿ’. ಈ ಹಿಂದೆ ಯುವರಾಜ್ ಚಿತ್ರದ ಮುಂದುವರಿದ ಭಾಗದಂತೆ ಇಲ್ಲೂ ಸಂಗೀತದ ಸುರಿಮಳೆಯೇ ನಡೆಯಲಿದೆ. ಸುಭಾಷ್ ಚಿತ್ರಗಳೆಂದರೆ ಅಲ್ಲಿ ಸಂಗೀತದ ಜತೆಗೆ ಪ್ರೇಮಿಗಳಿಗೂ ಆದ್ಯತೆ ನೀಡುತ್ತಾರೆ. ಕಾಂಚಿಯಲ್ಲೂ ಇದೇ ವರಸೆ ಮುಂದುವರಿದಿದೆ.
ಘಾಯ್ ಸಾಹೇಬ್ರು ಹೇಳುವಂತೆ ‘ನಾಲ್ಕು ವರ್ಷಗಳಿಂದ ನಾನು ಬಾಲಿವುಡ್ ಚಿತ್ರಗಳಿಂದ ದೂರ ಇದ್ದೆ. ಹೊಸ ಕಾಲಕ್ಕೆ ತಕ್ಕಂತೆ ಹೊಸ ಕತೆ, ಹೊಸ ನಾಯಕ/ ನಾಯಕಿಯರನ್ನು ಹುಡುಕಾಟದಲ್ಲಿಯೇ ಇಷ್ಟೂ ಸಮಯವಾಯಿತು. ನನ್ನ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಈ ಚಿತ್ರ ಭಿನ್ನವಾಗಲಿದೆ. ಸಂಗೀತದ ವಿಚಾರದಲ್ಲಂತೂ ಈ ಚಿತ್ರ ಮೈಲುಗಲ್ಲು ಹಾಕುವುದರಲ್ಲಿ ಯಾವುದೇ ಸಂದೇಹ ಇಲ್ಲ . ನನ್ನ ಆರಂಭದ ಚಿತ್ರ ಕಾಳೀಚರಣ್ ತೆಗೆದಾಗಲೂ ಇದೇ ರೀತಿಯ ಹುಮ್ಮಸ್ಸು ಇತ್ತು. ಈಗಲೂ ಕಾಂಚಿಯಲ್ಲೂ ಅದು ಮುಂದುವರಿದಿದೆ. ಚಿತ್ರದ ಕತೆಯಲ್ಲಿ ನಾಯಕಿ ಸಾಹಸ ಕಾರ್ಯದಲ್ಲಿ ತೊಡಗುತ್ತಾಳೆ. ಇದು ನನ್ನ ಚಿತ್ರಗಳಲ್ಲಿಯೇ ಭಿನ್ನ ಎಂದು ಘಾಯ್ ಹೇಳಿಕೊಂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಿಶಿ ಕಪೂರ್, ಮಿಥುನ್ ಚಕ್ರವರ್ತಿಯ ಜತೆಯಲ್ಲಿ ಹೊಸ ನಾಯಕ ಕಾರ್ತಿಕ್ ತಿವಾರಿ ಹಾಗೂ ಬಂಗಾಳಿ ಹುಡುಗಿ ಮಿಶ್ತಿ ಕಾಣಿಸಿಕೊಳ್ಳಲಿದ್ದಾರೆ.
ಕಾಂಚಿಯಲ್ಲಿ ಹೊಸ ಮುಖ:
ಬಾಲಿವುಡ್ನಲ್ಲಿ ಸಣ್ಣಗೆ ನಿರೀಕ್ಷೆ ಹುಟ್ಟಿಸಿದ ಚಿತ್ರ ‘ಆಕಾಶವಾಣಿ’ಯಲ್ಲಿ ನಟಿಸಿದ ಕಾರ್ತಿಕ್ ತಿವಾರಿಗೆ ‘ಕಾಂಚಿ’ ಎರಡನೇ ಚಿತ್ರ. ಸುಭಾಷ್ ಘಾಯ್ ಕಳೆದ ಒಂಬತ್ತು ತಿಂಗಳಿಂದ ‘ಕಾಂಚಿ’ಯ ನಾಯಕನಿಗೆ ಹುಟುಕಾಟ ಆರಂಭಿಸಿದ್ದರು. ಕಾರ್ತಿಕ್ ಸುಭಾಷ್ ಘಾಯ್ ಅವರ ವಿಸ್ಟಿಲಿಂಗ್ ವುಡ್ಸ್ನಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾಗ ಘಾಯ್ ಕಣ್ಣಿಗೆ ಬಿದ್ದರು. ಅಲ್ಲಿಂದ ಕಾಂಚಿಯ ನಾಯಕನಿಗಾಗಿ ಹುಡುಕಾಟ ನಿಂತಿತು.
ಬಂಗಾಳಿ ಹುಡುಗಿ ಮಿಶ್ತಿ ಸುಭಾಷ್ಘಾಯ್ ‘ಕಾಂಚಿ’ ಚಿತ್ರದ ಲೀಡ್ ನಾಯಕಿ. ಈ ಹಿಂದೆ ಸುಭಾಷ್ ಘಾಯ್ ಮೀನಾಕ್ಷಿ, ಮಾಧುರಿ ಹಾಗೂ ಮಹಿಮಾರ ನಂತರ ಈಗ ಇದೇ ‘ಎಂ’ ಎನ್ನುವ ಪದಕೋಶದ ಬಂಗಾಳಿ ಹುಡುಗಿ ಮಿಶ್ತಿ ನಾಯಕಿ ಸ್ಥಾನಕ್ಕೆ ಬುಕ್ ಆಗಿದ್ದಾಳೆ. ಬಂಗಾಳಿ ಭಾಷೆಯಲ್ಲಿ ‘ಮಿಶ್ತಿ’ ಎಂದರೆ ಸಿಹಿ ತಿಂಡಿ ಎಂದಾರ್ಥವಂತೆ ! ಅಂದಹಾಗೆ ಕರ್ಜ್ ಚಿತ್ರದ ನಂತರ ರಿಶಿ ಕಪೂರ್ ಮೊದಲ ಬಾರಿಗೆ ಘಾಯ್ ಜತೆ ಸೇರಿದ್ದಾರೆ. ಇವರ ಜತೆಯಲ್ಲಿ ಮಿಥುನ್ ಚಕ್ರವರ್ತಿ ಕೂಡ ಇದ್ದಾರೆ. ಅಂದಹಾಗೆ ಚಿತ್ರದಲ್ಲಿ ಇಬ್ಬರು ವಿಲನ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನೋದು ಗಮನಿಸಿಕೊಳ್ಳಬೇಕಾದ ವಿಷ್ಯಾ.
ಚಿತ್ರಕ್ಕೆ ಸಂಗೀತವನ್ನು ಇಸ್ಮಾಯಿಲ್ ದರ್ಬಾರ್ ಹಾಗೂ ಸಲೀಂ ಸುಲೈಮಾನ್ ನೀಡಿದ್ದಾರೆ. ಉತ್ತರಖಂಡಾದ ಸಾಮಾನ್ಯ ಹುಡುಗಿಯೊಬ್ಬಳ ಕತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸೈನ್ಯದಲ್ಲಿರುವ ಹುಡುಗಿಯ ತಂದೆ ವಿರೋಧಿ ಸೈನಿಕರ ಗುಂಡೇಟಿಗೆ ಬಲಿಯಾಗುವ ನಂತರದಲ್ಲಿ ಹುಡುಗಿ ಬದುಕಿನಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳೇ ಚಿತ್ರದ ಜೀವಾಳ. ಬರೋಬರಿ ೩೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಭಾಷ್ ಘಾಯ್ ನಿರ್ದೇಶನದ ಚಿತ್ರ ‘ಕಾಂಚಿ’ ನಿಜಕ್ಕೂ ಬಿಡುಗಡೆಯ ಮೊದಲೇ ಹೊಸ ಹವಾ ಸೃಷ್ಟಿ ಮಾಡಿದೆ. ಏಪ್ರಿಲ್ ತಿಂಗಳಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನೋದು ಮಾತು.
ಬಾಲಿವುಡ್ ನಲ್ಲಿ ಮತ್ತೆ ಹೀರೋ ‘ನಿಖಿಲ್’
* ಸ್ಟೀವನ್ ರೇಗೊ, ದಾರಂದಕುಕ್ಕು
ಒಂದಲ್ಲ ಎರಡಲ್ಲ ಬರೋಬರಿ ಐದು ಚಿತ್ರಗಳು ಬಾಲಿವುಡ್ ಪಡಸಾಲೆಗೆ ಇಳಿದು ವಾರ ಮುಗಿಯುವುದರೊಳಗೆ ಡಬ್ಬಾ ಪೆಟ್ಟಿಗೆ ಸೇರಿ ಹೋಯಿತು. ಆದರೂ ಸಿನ್ಮಾ ನನ್ನ ಖಯಾಲಿ ಮಾಡಿಯೇ ಸಿದ್ಧ. ಸತತ ಸೋಲು ಗೆಲುವಿನ ಹಾದಿಗೆ ಮುನ್ನುಡಿ ಎಂದುಕೊಂಡು ಈಗಲೂ ಬಾಲಿವುಡ್ ಬಿಡದ ಹುಡುಗ ನಿರ್ದೇಶಕ ನಿಖಿಲ್ ಅಡ್ವಾನಿ.
ಈಗ ನಿರ್ದೇಶಕ ಸುಭಾಷ್ ಘಾಯ್ ಅವರ ೧೯೮೩ರ ಬಿಗ್ ಹಿಟ್‘ ಹೀರೋ’ವನ್ನು ಮತ್ತೆ ಹಿರಿತೆರೆಗೆ ತರುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಹಣ ಹಾಕುವವರು ಕೂಡ ಬಾಲಿವುಡ್ ನಟ ಸಲ್ಮಾನ್ ಖಾನ್ ಎನ್ನೋದು ವಿಶೇಷ. ಕಾರಣ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಕಮರ್ಷಿಯಲ್ ಚಿತ್ರವೊಂದಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಹಿಂದೆ ಮಕ್ಕಳ ಚಿತ್ರ ‘ಚಿಲ್ಲರ್ ಪಾರ್ಟಿ’ ಹಾಗೂ ಕತ್ರಿನಾ ಕೈಫ್ ಸಹೋದರಿ ಇಸಾಬೆಲ್ಲ ಕೈಫ್ಗಾಗಿ ಇಂಗ್ಲೀಷ್ನಲ್ಲಿ ನಿರ್ಮಾಣ ಮಾಡುತ್ತಿರುವ ಡಾ.ಕ್ಯಾಬಿ ನಂತರ ಈಗ ‘ ಹೀರೋ’ವಿನಲ್ಲಿ ಸಲ್ಮಾನ್ ಖಾನ್ ನಿರ್ಮಾಪಕರಾಗಿ ಕೂರಲಿದ್ದಾರೆ.
ಅಂದಹಾಗೆ ಈ ಹಿಂದಿನ ಘಾಯ್ ಅವರ ‘ಹೀರೋ’ ಚಿತ್ರದಲ್ಲಿ ಜಾಕೀ ಶ್ರಾಫ್ ಪಾತ್ರವನ್ನು ನಿಖಿಲ್ ಚಿತ್ರದಲ್ಲಿ ಸೂರಜ್ ಪಾಂಚೋಲಿ ಮಾಡುತ್ತಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಮಾಡುತ್ತಿದ್ದಾರೆ. ಬಾಲಿವುಡ್ ನಟರಾದ ಗೋವಿಂದ, ವಿನೋದ್ ಖನ್ನಾಹಾಗೂ ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್ ಕೂಡ ಬಣ್ಣ ಹಾಕುವ ಯೋಜನೆ ಇದೆ. ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಟೋಟಲಿ ‘ಹೀರೋ’ ಮತ್ತೆ ಪ್ರೇಕ್ಷಕರ ಮುಂದೆ ಕಮಾಲ್ ಮಾಡಿದರೆ ಬಾಲಿವುಡ್ ಅಂಗಳದಲ್ಲಿ ನಿಖಿಲ್ ಅಡ್ವಾನಿ ಭವಿಷ್ಯ ಶೈನ್ ಆಗುವುದು ಗ್ಯಾರಂಟಿಯಾಗುತ್ತದೆ.
ಬಾಲಿವುಡ್ನಲ್ಲಿ ಸೋಲುವ ಹುಡುಗ:
ನಿಖಿಲ್ ಅಡ್ವಾನಿ ಎಂಬ ಹುಡುಗನ ಕತೆ ಮಾತ್ರ ಎಲ್ಲೂ ಕೇಳಿಸಲು ಸಿಗೋಲ್ಲ. ನಿಖಿಲ್ ಅಡ್ವಾನಿ ನಿಜಕ್ಕೂ ಲಕ್ಕಿಬಾಯ್. ಬಾಲಿವುಡ್ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ನ ಅಡಿಯಲ್ಲಿ ‘ಕುಚ್ ಕುಚ್ ಹೋತಾ ಹೈ’, ‘ಕಬೀ ಕುಷಿ ಕಬೀ ಗಮ್’ನಂತಹ ಚಿತ್ರಗಳಿಗೆ ಸಹ ನಿರ್ದೇಶಕನ ಸ್ಥಾನದಲ್ಲಿ ಕೂತು ಕೆಲಸ ಮಾಡುವ ಅವಕಾಶ ನಿಖಿಲ್ಗೆ ಒಳಿದಿತ್ತು.
ಆದರೆ ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಬಂದ ‘ಕಲ್ ಹೋ ನಾ ಹೋ’ ತನ್ನ ನಿರ್ದೇಶನದ ಚಿತ್ರ ಬಾಲಿವುಡ್ನಲ್ಲಿ ಯಾರ್ರಾ ಬಿರ್ರಿ ಹಿಟ್ ಅನ್ನಿಸಿಕೊಂಡಿದ್ದೆ ತಡ ನಿಖಿಲ್ ಒಂದೇ ಬಾರಿ ಸ್ಟಾರ್ ನಿರ್ದೇಶಕನ ಪಟ್ಟಕ್ಕೆ ಸೂಟೇಬಲ್ ವ್ಯಕ್ತಿ ಅನ್ನಿಸಿಕೊಂಡರು.
ಆದರೆ ಯಾಕೋ ಗೊತ್ತಿಲ್ಲ . ನಿಖಿಲ್ ನಂತರ ನಿರ್ದೇಶನ ಮಾಡಿದ ‘ಸಲಾಂ-ಇ- ಈಷ್ಕ್’ ದೊಡ್ಡ ಸ್ಟಾರ್ ನಟರ ದಂಡೇ ಇತ್ತು. ಬರೋಬರಿ ಎರಡು ವಾರಗಳ ಓಟ ಆರಂಭ ಮಾಡುತ್ತಿದ್ದಾಗಲೇ ಥಿಯೇಟರ್ಗೆ ಪ್ರೇಕ್ಷಕ ಮಾತ್ರ ಬರಲಿಲ್ಲ ಎಂದುಕೊಂಡು ಚಿತ್ರ ಅಲ್ಲಿಂದ ಥಿಯೇಟರ್ ಮಾಲೀಕರು ಸಿನ್ಮಾವನ್ನು ಎತ್ತಿಬಿಟ್ಟ್ರು. ೨೦೦೯ರಲ್ಲಿ ಮತ್ತೊಂದು ಪ್ರಯತ್ನ ಮಾಡಿಬಿಡೋಣ ಎಂದುಕೊಂಡು ಅಕ್ಷಯ್ ಕುಮಾರ್ ಹಾಗೂ ದೀಪಿಕಾ ಪಡುಕೋಣೆ ಇರುವ ‘ಚಾಂದಿನಿ ಚೌಕ್ ಟು ಚೈನಾ’ ಚಿತ್ರ ನಿರ್ದೇಶನ ಮಾಡಿಬಿಟ್ಟ್ರು ನಿಖಿಲ್ ಅಲ್ಲೂ ಗೆಲುವು ಕೈ ಕೊಟ್ಟಿತ್ತು.
ಎರಡು ವರ್ಷಗಳ ನಂತರ ಮತ್ತೊಂದು ಚಿತ್ರ ‘ಪಾಟಿಯಾಲ ಹೌಸ್’ ಬಂತು. ಅಕ್ಷಯ್ ಕುಮಾರ್ ಈ ಕಾಲದಲ್ಲಿ ಓಡುವ ಕುದುರೆ ಎಂದೇ ಪರಿಗಣಿಸಲಾಗಿತ್ತು. ಅಂತಹ ನಟನ ಜತೆಯಲ್ಲಿ ಅನುಷ್ಕಾ ಶರ್ಮ ನಟಿಸಿದರೂ ಚಿತ್ರ ಆರಂಭದಲ್ಲಿಯೇ ಮುಗ್ಗರಿಸಿ ಬಿತ್ತು. ಅಲ್ಲೂ ಯಶಸ್ಸು ಎಂಬ ಮಂತ್ರ ನಿಖಿಲ್ ಅಡ್ವಾನಿಗೆ ಪಠಿಸಲು ಸಿಗಲೇ ಇಲ್ಲ. ನಿಖಿಲ್ ಅಡ್ವಾನಿ ಬಾಲಿವುಡ್ ಮಂದಿಗೆ ಮಾತ್ರ ಐರಾನ್ಲೆಗ್ಯಾಗಿ ಉಳಿದು ಹೋದರು.
ತೀರಾ ಇತ್ತೀಚೆಗೆ ಬಾಲಿವುಡ್ನಲ್ಲಿ ಬಂದ ‘ಡಿ- ಡೇ’ ಚಿತ್ರ ಬಾಲಿವುಡ್ನ ಥೀಮ್ ಪಾಯಿಂಟ್ಗೂ ತೀರಾ ಭಿನ್ನವಾಗಿತ್ತು. ಆದರೆ ಪ್ರೇಕ್ಷಕರನ್ನು ಸೆಳೆಯಲು ಮಾತ್ರ ವಿಫಲವಾಯಿತು. ಸ್ಟಾರ್ ನಟರಾದ ಅರ್ಜುನ್ ರಾಂಪಾಲ್, ರಿಶಿ ಕಪೂರ್, ಇರ್ಫಾನ್ ಖಾನ್, ಹ್ಯೂಮಾ ಖುರೇಶಿ, ಶ್ರುತಿ ಹಾಸನ್ ನಂತವರು ಕೂಡ ಚಿತ್ರವನ್ನು ಗೆಲ್ಲಿಸುವಲ್ಲಿ ವಿಫಲರಾದರು. ತಮ್ಮ ಯಾವುದೇ ಚಿತ್ರ ಕೈ ಕೊಟ್ಟರೆ ನಿಖಿಲ್ ಅಡ್ವಾನಿ ಏನೂ ಮಾಡುತ್ತಾರೆ ಗೊತ್ತಾ? ಮತ್ತೊಂದು ಬಾಲಿವುಡ್ ಚಿತ್ರ ಮಾಡಿ ದಂಗು ಮೂಡಿಸುತ್ತಾರೆಯಂತೆ ! ಇದು ಖುದ್ದು ನಿಖಿಲ್ ತಮ್ಮ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದ ಮಾತು. ಅದೇ ಕಣ್ರಿ ಸೋಲುವ ಹುಡುಗ ಮತ್ತೆ ಮತ್ತೆ ಕನಸ್ಸುಗಳ ಮೂಲಕ ಗೆಲ್ಲಲು ಹೊರಟಿರೋದು ಗಮನಿಸಬೇಕಾದ ವಿಷ್ಯಾ.
ಬಣ್ಣದ ಬದುಕಿಗೆ ಮರಳಿದ ಅರವಿಂದ್ ಸ್ವಾಮಿ
* ಸ್ಟೀವನ್ ರೇಗೊ, ದಾರಂದಕುಕ್ಕು
ಅರವಿಂದ ಸ್ವಾಮಿ ಎಂದಾಕ್ಷಣ ಬಾಲಿವುಡ್ ನಿರ್ದೇಶಕ ಮಣಿರತ್ನಂ ಚಿತ್ರಗಳು ಕಣ್ಣಮುಂದೆ ಬಂದು ನಿಲ್ಲುತ್ತದೆ. ಮಣಿ ಗರಡಿಯಲ್ಲಿ ಬಂದ ‘ಬಾಂಬೇ’ ಹಾಗೂ ‘ರೋಜಾ’ ಚಿತ್ರದಲ್ಲಿ ಪಕ್ಕಾ ಲವರ್ ಬಾಯ್ ಆಗಿ ಕಾಣಿಸಿಕೊಂಡ ಅರವಿಂದ್ ಸ್ವಾಮಿ ಕೆಲವು ಚಿತ್ರಗಳಲ್ಲಿ ನಟಿಸಿ ನಂತರ ಬಹಳ ವರ್ಷಗಳ ಕಾಲ ಸಿನಿಮಾಗಳಿಂದ ದೂರಕ್ಕೆ ಉಳಿದುಬಿಟ್ಟಿದ್ದರು. ಒಂದು ಲೆಕ್ಕಚಾರದ ಪ್ರಕಾರ ಸ್ವಾಮಿ ಸಿನಿಮಾ ರಂಗವನ್ನೇ ಬಿಟ್ಟು ಹೋಗಿದ್ದಾರೆ ಎನ್ನುವ ಗುಸುಗುಸು ಕೂಡ ಹರಡಿತ್ತು.
ಸ್ವಾಮಿಯ ವೈವಾಹಿಕ ಬದುಕಿನ ಪಲ್ಲಟಗಳು ಈ ರೀತಿ ಸಿನಿಮಾ ರಂಗದಿಂದ ದೂರಕ್ಕೆ ಉಳಿಯಲು ಕಾರಣವಾಗಿತ್ತು ಎನ್ನುವ ಮಾತು ಕೂಡ ಇತ್ತು. ಆದರೆ ತೀರಾ ಇತ್ತೀಚೆಗೆ ಮಣಿರತ್ನಂ ಬಹು ನಿರೀಕ್ಷೆ ಹುಟ್ಟಿಹಾಕಿದ ಚಿತ್ರ ‘ಕಡಲ್’ನಲ್ಲಿ ನಾಯಕ ನಟನಿಗೆ ಬೆಂಬಲ ನೀಡುವ ಪೋಷಕ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ರಂಗಕ್ಕೆ ಮತ್ತೆ ರೀ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದ ಬಳಿಕ ಅರವಿಂದ್ ಸ್ವಾಮಿ ಮತ್ತೆ ಕಾಣೆಯಾಗಿ ಹೋಗಿದ್ದರು. ಈಗ ಮತ್ತೆ ಅರವಿಂದ್ ಸ್ವಾಮಿ ಬಣ್ಣದ ಲೋಕಕ್ಕೆ ಮರು ಪ್ರವೇಶ ಮಾಡುವ ಕೆಲಸ ಮಾಡುತ್ತಿದ್ದಾರೆ.
ಕಾಲಿವುಡ್ನ ಬಿಗ್ ಬಜೆಟ್ ಚಿತ್ರಗಳ ನಿರ್ದೇಶಕ ಅಜಿತ್ ಗೌತಮ್ ಮೆನನ್ನ ಹೊಸ ಪ್ರಾಜೆಕ್ಟ್ನಲ್ಲಿ ಅರವಿಂದ್ ಸ್ವಾಮಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸುದ್ದಿ. ಇವರ ಜತೆಗೆ ನಟ ಅರುಣ್ ವಿಜಯ್ ಕೂಡ ನಟಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ ಈ ಬಾರಿ ಸ್ವಾಮಿ ನೆಗೆಟೀವ್ ಶೇಡ್ನಲ್ಲಿ ಕಾಣಿಸಿಕೊಳ್ಳುವ ಮಾತಿದೆ.
ಇದಕ್ಕಾಗಿಯೇ ಜಿಮ್ನಲ್ಲಿ ಬೆವರಿಳಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಡಿದೆ.
ಆದರೆ ಅರವಿಂದ್ ಸ್ವಾಮಿ ತಾನು ಖಳನಾಯಕನಾಗಿ ನಟಿಸುವುದಿಲ್ಲ. ಇಂತಹ ಪಾತ್ರ ಮಾಡುವಂತೆ ಯಾವುದೇ ಚಿತ್ರಗಳು ನನ್ನ ಮುಂದೆ ಬಂದಿಲ್ಲ. ಈ ಕುರಿತು ಶೀಘ್ರವೇ ಟ್ವಿಟ್ವರ್ನಲ್ಲಿ ಬಹಿರಂಗ ಪಡಿಸುವುದಾಗಿ ಸ್ವಾಮಿ ಹೇಳಿಕೊಂಡಿದ್ದಾರೆ. ಈಗ ಗೌತಮ್ ಜತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ಸಪ್ಟೆಂಬರ್ ತಿಂಗಳ ಆರಂಭದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದ ಕತೆ, ತಾರಾಗಣಗಳ ಕುರಿತು ಯಾವುದೇ ಮಾಹಿತಿಯನ್ನು ಸಧ್ಯಕ್ಕೆ ನೀಡುವುದಿಲ್ಲ. ಚಿತ್ರದ ತಂಡವೇ ಈ ಕುರಿತು ಹೆಚ್ಚುವರಿ ಮಾಹಿತಿಯನ್ನು ನೀಡುತ್ತದೆ ಎಂದಿದ್ದಾರೆ. ಟೋಟಲಿ ಅರವಿಂದ್ ಸ್ವಾಮಿಯ ಕಮ್ ಬ್ಯಾಕ್ ಸಿನಿಮಾ ಎಂದಾಕ್ಷಣ ಅವರ ಅಭಿಮಾನಿಗಳಿಗಂತೂ ನಿರೀಕ್ಷೆ ಇದ್ದೇ ಇದೆ.
Thursday, April 3, 2014
ಸಿಂಗಂ-೨ನಲ್ಲಿ ಕುಡ್ಲದ ದಯಾ
* ಸ್ಟೀವನ್ ರೇಗೊ, ದಾರಂದಕುಕ್ಕು
ಅದು ಒಂದೇ ಹೊಡೆತ. ಅಪರಾಧಿಗಳು ತಮಗೆ ಗೊತ್ತಿಲ್ಲದ, ಗೊತ್ತಿರುವ ವಿಚಾರ ಒಂದೇ ಬಾರಿಗೆ ಕಕ್ಕುತ್ತಾರೆ.ಇದು ಸಿಐಡಿ ಸೀರಿಯಲ್ನ ಸೀನಿಯರ್ ಇನ್ಸ್ಸ್ಪೆಕ್ಟರ್ ದಯಾನಂದ ಶೆಟ್ಟಿ ಯಾನೆ ದಯಾ ಅವರ ಕುರಿತಾದ ಮಾತು. ಭಾರತೀಯ ಕಿರುತೆರೆಯಲ್ಲಿ ಇತಿಹಾಸ ನಿರ್ಮಿಸಿದ ಟಿವಿ ಸರಣಿ ಇದ್ದರೆ ಅದು ಸಿಐಡಿ ಮಾತ್ರ. ಹಿಂದಿಯ ಸೋನಿ ವಾಹಿನಿಯಲ್ಲಿ ಸಿಐಡಿ ಟಿವಿ ಸರಣಿ ೧೭ ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಸಾಗುತ್ತಿದೆ. ಸಿಐಡಿಯನ್ನು ಬಿ.ಪಿ. ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಟಿವಿ ಸರಣಿ ಗಿನ್ನೆಸ್ ರೆಕಾರ್ಡ್ ಬುಕ್ನಲ್ಲಿ ಜಾಗ ಪಡೆದಿದೆ.
೨೦೦೭ರಲ್ಲಿ ಹಿಂದಿಯ ‘ಜಾನಿ ಗದ್ಧಾರ್’ ಹಾಗೂ ೨೦೦೯ ‘ರನ್ವೇ’ ಚಿತ್ರದಲ್ಲಿ ದಯಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಈಗ ಮತ್ತೊಂದು ಸಲ ಪೊಲೀಸ್ ಅಧಿಕಾರಿಯಾಗಿ ಮಿಂಚುವ ಅವಕಾಶ ಪಡೆದುಕೊಂಡಿದ್ದಾರೆ. ಹಿಂದಿಯಲ್ಲಿ ಬರುತ್ತಿರುವ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ-೨ನಲ್ಲಿ ದಯಾ ಪೊಲೀಸ್ ಅಧಿಕಾರಿ.
ಖಾಸಗಿ ವಾಹಿನಿಯ ರಿಯಾಲಿಟಿ ಶೋ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ‘ಕತ್ರೋಂಕಾ ಕಿಲಾಡಿಯಲ್ಲಿ’ ದಯಾ ಅವರ ಸಾಹಸಿ ಪ್ರವೃತ್ತಿಯನ್ನು ಕಂಡು ನಿರ್ದೇಶಕ ರೋಹಿತ್ ಶೆಟ್ಟಿ ದಂಗಾಗಿ ಹೋಗಿದ್ದರು. ತನ್ನ ಮುಂದಿನ ಚಿತ್ರದಲ್ಲಿ ದಯಾ ಅವರಿಗೆ ಪಾತ್ರವೊಂದು ಕೊಡಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದರು ಎಂದು ಚಿತ್ರದ ಆಪ್ತ ಮೂಲಗಳು ಹೇಳುತ್ತದೆ. ಈ ವರ್ಷದ ಮಧ್ಯಭಾಗದಲ್ಲಿ ಸಿಂಗಂ-೨ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಮೂಲಕ ದಯಾ ದೊಡ್ಡ ತೆರೆಯಲ್ಲಿ ದೊಡ್ಡ ಸುದ್ದಿ ಮಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅದಕ್ಕೂ ಮುಖ್ಯವಾಗಿ ಸಿಂಗಂ-೨ನಲ್ಲಿ ದಯಾ ನಟನೆ ಕ್ಲಿಕ್ ಆದರೆ ಮತ್ತಷ್ಟೂ ಆಫರ್ಗಳು ಅವರನ್ನು ಹುಡುಕಿಕೊಂಡು ಬರುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಕುಡ್ಲದ ಹುಡುಗ ದಯಾನಂದ:
ದಯಾ(ದಯಾನಂದ ಶೆಟ್ಟಿ) ಕಿನ್ನಿಗೋಳಿಯ ಶಿಮಂತ್ತೂರು ಮಜಲುಗುತ್ತು ಮನೆತನದ ಹುಡುಗ. ಶಾಟ್ಪುಟ್, ಡಿಸ್ಕಸ್ನ ರಾಷ್ಟ್ರೀಯ ಪ್ರತಿಭೆ. ಕ್ರೀಡೆಯಲ್ಲಿ ತೊಡಗಿದ್ದಾಗ ಆದ ಅಪಘಾತ ಕ್ರೀಡಾಬದುಕಿನ ಫುಲ್ಸ್ಟಾಪ್ಗೆ ಕಾರಣವಾಯಿತು. ದಯಾ ಹುಟ್ಟಿದ್ದು ಕಿನ್ನಿಗೋಳಿಯಲ್ಲದರೂ ಬೆಳೆದದ್ದು ಮುಂಬಯಿಯಲ್ಲಿ. ಪ್ರಾಥಮಿಕ ಶಿಕ್ಷಣ ಹಾಗೂ ಬಿಕಾಂ ಪದವಿ ಎಲ್ಲವೂ ಮರಾಠಿ ಶಾಲೆಗಳಲ್ಲಿ.
ಸಿಐಡಿಯಲ್ಲಿ ಮಿಂಚಿದ ಒಂದು ಕತೆ:
ಪುತ್ರನ ವಿದ್ಯಾಭ್ಯಾಸ ಬಳಿಕ ತಂದೆ ಚಂದ್ರಶೇಖರ್ ಕಾಂದೀವಿಲಿಯಲ್ಲಿ ‘ಸಂಧ್ಯಾ’ ಹೋಟೆಲ್ ತೆರೆದರು. ಈ ಸಂದರ್ಭ ಚಂದ್ರಶೇಖರ್ ಶೆಟ್ಟಿ ನಿಧನರಾದರು. ಹೋಟೆಲ್ ಗಲ್ಲಾ ಪೆಟ್ಟಿಗೆ ಮೇಲೆ ದಯಾನಂದ ಶೆಟ್ಟಿ ವಿರಾಜಮಾನರಾದರು. ಇದೇ ಸಮಯ ಸೋನಿ ಚಾನೆಲ್ನ ಸಿಐಡಿ ಸೀರಿಯಲ್ಗಾಗಿ ಸಮರ್ಥ ಪೊಲೀಸ್ ಅಧಿಕಾರಿ ಪಾತ್ರಕ್ಕಾಗಿ ಅಡಿಷನ್ ನಡೆಯಿತು. ೧೯೯೮ ಜ.೧ರಂದು ದೇಶ, ವಿದೇಶದ ಲಕ್ಷಾಂತರ ಮಂದಿಯ ಅಡಿಷನ್ ನಡುವೆ ದಯಾ ಎಂಬ ‘ಮಸಲ್ಮ್ಯಾನ್’ ಕೂಡ ಭಾಗವಹಿಸಿದರು. ಜಡ್ಜ್ಗಳು ದಯಾರ ಪರ್ಸನಾಲಿಟಿ, ಡೈಲಾಗ್ ಡೆಲಿವರಿಗೆ ದಂಗಾಗಿದ್ದರು.
‘ಮೊದಲ ಸಲವೇ ಜಡ್ಜ್ಗಳಿಂದ ‘ಯೂ ಆರ್ ಸೆಲೆಕ್ಟ್ ಫಾರ್ ಸಿಐಡಿ ಟೀಮ್’ ಎಂದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ನಾನು ಸಿಐಡಿ ಸೀರಿಯಲ್ನ್ನು ಬಹಳ ಸೀರಿಯಸ್ಸಾಗಿ ನೋಡುತ್ತಿದ್ದೆ. ಆದರೆ ಇದೇ ಸೀರಿಯಲ್ನಲ್ಲಿ ನಟಿಸುವ ಭಾಗ್ಯ ಬರುತ್ತದೆ ಎಂಬ ಕನಸು ಮಾತ್ರ ಎಂದಿಗೂ ಇರಲಿಲ್ಲ.’ಎನ್ನುತ್ತಾರೆ ದಯಾನಂದ ಶೆಟ್ಟಿ. ಅಂದಿನಿಂದ ಸಿಐಡಿಯಲ್ಲಿ ಫುಲ್ಟೈಮ್ ಸೀನಿಯರ್ ಇನ್ಸ್ಪೆಕ್ಟರ್ ಆಗಿ ದಯಾ ಮಿಂಚುತ್ತಿದ್ದಾರೆ.
ಕುಡ್ಲ ಎಂದರೆ ಪಂಚಪ್ರಾಣ
ಕುಡ್ಲ ಎಂದರೆ ದಯಾರಿಗೆ ಪಂಚಪ್ರಾಣ. ಅದಕ್ಕಾಗಿ ಮೂಲ್ಕಿಯಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದಾರೆ. ವರ್ಷದಲ್ಲಿ ಒಂದೆರಡು ವಾರ ಈ ಮನೆಯಲ್ಲಿರುತ್ತಾರೆ. ವರ್ಷಂಪ್ರತಿ ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾಂದೀವಿಲಿಯಲ್ಲಿರುವ ಫ್ಲ್ಯಾಟ್ನಲ್ಲಿ ದಯಾ ಪತ್ನಿ, ಪುಟ್ಟ ಮಗಳು ವೀವಾಳೊಂದಿಗೆ ಇದ್ದಾರೆ. ಪತ್ನಿ ಸ್ಮಿತಾ ಮೂಲತಃ ಮಂಗಳೂರಿನ ಹಂಪನಕಟ್ಟೆಯವರು. ಈಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಯಾರ ತಂಗಿಯರಾದ ಸಂಧ್ಯಾ, ನಯನಾ ಮುಂಬಯಿಯಲ್ಲಿಯೇ ವಿವಾಹವಾಗಿ ನೆಲೆನಿಂತಿದ್ದಾರೆ.
Subscribe to:
Posts (Atom)